Tag: Benefits

  • ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹು. ತರಕಾರಿ, ಸೊಪ್ಪುಗಳ ಮಹತ್ವವನ್ನೇ ಜನರು ಮರೆತು ಹೋಗುತ್ತಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ. ಮೆಂತೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಬೇಕಾಗುವ ಅಂಶಗಳು ದೊರೆಯಲಿದೆ.

    * ಕೆಮ್ಮು  ಚರ್ಮದ ಸಮಸ್ಯೆಯನ್ನು ಮೆಂತೆ ಸುಪ್ಪು ಸೇವನೆಯಿಂದ ನಿವಾರಣೆ ಮಾಡಿಕೊಳ್ಳ ಬಹುದಾಗಿದೆ.

    * ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.

    * ರಕ್ತ ಹೀನತೆ ಸಮಸ್ಯೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.

    * ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ. ಇದನ್ನೂ ಓದಿ:   ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    * ಮೆಂತ್ಯೆ ಎಲೆಗಳು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತವೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

  • ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    ಟ ಮಾಡಿದ್ದೇವೆ ಎನ್ನುವ ತೃಪ್ತಿ ಹೊಟ್ಟೆ ಮತ್ತು ನಾಲಿಗೆಗೆ ಬರಬೇಕಾದರೆ ಅನ್ನ ಇರಲೇ ಬೇಕು. ಅನ್ನ ತಿನ್ನುವುದರಿಂದ ದಪ್ಪಗಾಗುತ್ತೇವೆ. ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಹೇಳುವುದನ್ನು ಕೇಳಿರಬಹುದು. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವನ್ನು ಕೇಳಿದರೆ ಖಂಡಿತಾ ಆಶ್ಚರ್ಯವಾಗುವುದು ಹೌದು.

    * ಅಕ್ಕಿ ಪ್ರಿಬಯಾಟಿಕ್ (Prebiotic) ಆಗಿದೆ ಎಂದು ನ್ಯೂಟ್ರಿಷನ್ ತಜ್ಞರು ನಂಬುತ್ತಾರೆ. ಅನ್ನ ಸೇವನೆಯಿಂದ ಹೊಟ್ಟೆ ಬೇಗ ತುಂಬುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಕೂಡ ಬಲವಾಗಿರುತ್ತದೆ.

    * ಅನ್ನವನ್ನು ಮೊಸರು, ಕರಿ, ದ್ವಿದಳ ಧಾನ್ಯಗಳು, ತುಪ್ಪ ಮತ್ತು ಮಾಂಸದೊಂದಿಗೆ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿರಿಸುತ್ತದೆ.

    * ಅನ್ನ ಸೇವನೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಯಾರಿಗಾದರೂ ಕೂದಲು ಉದುರುವಿಕೆಯ ದೂರು ಇದ್ದರೆ ಖಂಡಿತವಾಗಿಯೂ ಅನ್ನವನ್ನು ಸೇವಿಸಬೇಕು.

    * ಉತ್ತಮ ಹಾರ್ಮೋನ್ ಸಮತೋಲನದಲ್ಲಿ ಅನ್ನ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ:   ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

    ಅಕ್ಕಿ ತೊಳೆದ ನೀರಿನ ಪ್ರಯೋಜನ

    * ಅಕ್ಕಿಯ ನೀರಿನಲ್ಲಿ ನಾರಿನ ಅಂಶ ಹೆಚ್ಚಳವಾಗಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ, ಇದರಿಂದಾಗಿ ಜೀಣಾರ್ಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

     

    * ಅಕ್ಕಿಯ ನೀರು  ಕೂದಲಿನ ಸೌಂದರ್ಯ ಹೆಚ್ಚಿಸುವ ಉತ್ಕರ್ಷಣ ನಿರೋಧಕವಾಗಿದೆ.  ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    * ದೀರ್ಘಕಾಲದ ಆಯಾಸ ಅಥವಾ ಬಳಲಿಕೆಯಿಂದ ಬಳಲುತ್ತಿರುವವರಿಗೆ, ಬೇಯಿಸಿದ ಅನ್ನದಿಂದ ಪಡೆದ ಒಂದು ಲೋಟ ಅಕ್ಕಿ ನೀರು ನೀಡಿದರೆ ಸಾಕು ಅವರು ಆರಾಮಾಗಿ ಬಿಡುತ್ತಾರೆ.

  • ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕೆಲವು ನಿಯಮಗನ್ನು ಪಾಲಿಸಲೇಬೇಕು. ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರ ತಿಳಿದಿದೆ. ಹೀಗಿರುವಾಗ ಟೊಮೆಟೊವನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಹಲವು ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ.

    ಟೊಮೆಟೊ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ರಂಜಕವನ್ನು ಹೊಂದಿದೆ. ಸಾಧ್ಯವಾದಷ್ಟು ನಿಯಮಿತ ಪ್ರಮಾಣದಲ್ಲಿ ಆಗಾಗ ಟೊಮೆಟೊ ಹಣ್ಣುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬೇಕಾಗುವ ಹಲವು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ.  ಇದನ್ನೂ ಓದಿ: ನೀವು ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ

    * ಹಣ್ಣಾದ ಟೊಮೆಟೊವನ್ನು ಮುಖದ ಸೌಂದರ್ಯ ಹೆಚ್ಚಿಸಲು ಬಳಸಬಹುದು. ಟೊಮೆಟೊದಲ್ಲಿನ ಲೈಕೋಪೀನ್ ಮುಖದ ಕಾಂತಿ ಹೆಚ್ಚಿಸುತ್ತದೆ.

    * ಟೊಮೆಟೊ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕೂದಲಿನ ಆರೋಗ್ಯವನ್ನು ಕಾಪಡುತ್ತದೆ.

    * ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ  ಕ್ಯಾನ್ಸರ್‌ಗಳನ್ನು ಕಡಿಮೆ ಮಾಡುವ ಗುಣ ಇದೆ.

    * ಟೊಮೆಟೊದಲ್ಲಿ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.

    * ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿಕೊಳ್ಳುವುದು ಸೂಕ್ತ. ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

    * ನಿಮ್ಮ ಹೃದಯವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಟೊಮೆಟೊ ಹಣ್ಣುಗಳಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮಾರಕ ಕ್ಯಾನ್ಸರ್ ಸಮಸ್ಯೆಯಿಂದ ನಿಮ್ಮನ್ನು ದೂರ ಇಡುವಂತಹ ಸಾಧ್ಯತೆ ಕೂಡ ಇದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಟೊಮೆಟೊ ಹಣ್ಣುಗಳನ್ನು ಬಳಕೆ ಮಾಡಲು ಹಿಂಜರಿಕೆ ಬೇಡ.

  • ಖರ್ಜೂರದಲ್ಲಿದೆ ಮನೆಮದ್ದಿನ ಗುಣ

    ಖರ್ಜೂರದಲ್ಲಿದೆ ಮನೆಮದ್ದಿನ ಗುಣ

    ಡ್ರೈ ಫ್ರೂಟ್ಸ್ ಎಂದರೆಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಟ್ಸ್‍ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಮರುಭೂಮಿಯ ಬೆಳೆಯಾದರೂ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ.  ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್

    * ಒಣಗಿದ ಖರ್ಜೂರಗಳಲ್ಲಿ ಕಂಡುಬರುವ ರಂಜಕ, ಪೋಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ.

    * ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಉತ್ತಮ. ಪ್ರತಿನಿತ್ಯ ಖರ್ಜೂರ ಸೇವನೆಯನ್ನು ರೂಢಿಯಲ್ಲಿಟ್ಟುಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ರಾಮಲಿಂಗಾ ರೆಡ್ಡಿಯಿಂದ ಸಾವಿರಾರು ಮಂದಿಗೆ ಫುಡ್ ಕಿಟ್ ವಿತರಣೆ

    * ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೊಂದಬಹುದಾಗಿದೆ. ಖರ್ಜೂರಗಳಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ.


    * ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಅಥವಾ ಖರ್ಜೂರದ ಚೂರನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

    * ಖರ್ಜೂರ ತೂಕ ನಷ್ಟಕ್ಕೆ ಸಹಾ ಸಹಾಯ ಮಾಡುತ್ತದೆ. ಕರಗುವ ನಾರಿನಂಶವಿದೆ, ಆದರೆ ಈ ನಾರಿನಂಶ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತವೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

    * ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದಾಗಿದೆ.

    * ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

  • ಏಲಕ್ಕಿ ಸೇವನೆಯಿಂದ ಸಿಗಲಿದೆ ಹಲವು ಪ್ರಯೋಜನ

    ಏಲಕ್ಕಿ ಸೇವನೆಯಿಂದ ಸಿಗಲಿದೆ ಹಲವು ಪ್ರಯೋಜನ

    ಲಕ್ಕಿ ಅಡುಗೆ ಮನೆಯಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಸುವಾಸೆಭರಿತವಾದ ಏಲಕ್ಕಿ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಸಮಯ ಸಿಕ್ಕಾಗ ಏಲಕ್ಕಿ ಪುಡಿಯನ್ನು ಮಾಡಿಟ್ಟುಕೊಂಡು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೆಲವು ಉತ್ತಮ ಅಂಶಗಳನ್ನು ನಾವು ಪಡೆದುಕೊಳ್ಳ ಬಹುದು. ಕೆಲವು ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.

    * ಏಲಕ್ಕಿ ಸೇವೆನೆಯಿಂದ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು

    * ಕಲವರಿಗೆ ಬಾಯಲ್ಲಿ ಹುಣ್ಣು ಆಗುತ್ತದೆ ಅಂತವರು ಏಲಕ್ಕಿ ಪುಡಿಗೆ ಜೇನುತುಪ್ಪ ಸೇರಿಸಿ ಸೇವಿಸಬೇಕು.

    * ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಒಪುಡಿ ಮತ್ತು ಒಂದು ಚಮಚ ಅರಿಶಿಣ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

    * ಆ್ಯಸಿಡಿಟಿ ಇದ್ದವರು ಒಂಡೆರದು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.

    * ನಿಯಮಿತವಾಗಿ ಏಲಕ್ಕಿ ಸೇವಿಸದರೆ ರೋಗ ನೀರೋಧಕ ಶಕ್ತಿ ವೃದ್ಧಿಯಾಗುತ್ತದೆ.

    * ಪಿತ್ತ, ಕಫ, ದಂತ ರೋಗ ಮತ್ತಯ ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಸೇವನೆ ಉತ್ತಮ ಪರಿಹಾರವಾಗಿದೆ.

    * ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ. ಖಿನ್ನತೆಯಿಂದ ಬಳಲುವ ರೋಗಿಗಳಿಗೆ ಬಹಳ ಹಿಂದಿನಿಂದಲೇ ಆಯುರ್ವೇದ ಏಲಕ್ಕಿ ನೀರನ್ನು ಕುಡಿಯುವ ಚಿಕಿತ್ಸೆಯನ್ನು ಒದಗಿಸಿದೆ.

  • ಆಪಲ್ ಸೈಡರ್ ವಿನೆಗರ್ ದೇಹಕ್ಕೆ ಎಷ್ಟು ಆರೋಗ್ಯಕರ ಗೊತ್ತಾ?

    ಆಪಲ್ ಸೈಡರ್ ವಿನೆಗರ್ ದೇಹಕ್ಕೆ ಎಷ್ಟು ಆರೋಗ್ಯಕರ ಗೊತ್ತಾ?

    ಆಪಲ್ ಸೈಡರ್ ವಿನೆಗರ್ ಸಕ್ಕರೆ ಹಾಗೂ ಆಲ್ಕೋಹಾಲ್ ಪರಿವರ್ತಿತ ಪಾನೀಯವಾಗಿದೆ. ಬ್ಯಾಕ್ಟೀರಿಯಾವು ಆಲ್ಕೋಹಾಲ್ ನನ್ನು ಆಮ್ಲವಾಗಿ ಪರಿವರ್ತಿಸಿ ಹುಳಿ ರುಚಿಯನ್ನು ನೀಡುವುದರ ಜೊತೆಗೆ ಸುವಾಸನೆಯನ್ನು ನೀಡುತ್ತದೆ. ವಿವಿಧ ಪಾನೀಯಗಳಲ್ಲಿ ಆಪಲ್ ಸೈಡರ್ ವಿನೆಗರ್ ಕೂಡ ಒಂದಾಗಿದ್ದು ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಸಿಟಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲದ ಅಂಶವಿದೆ. ಜೊತೆಗೆ ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಪೋಷಕಾಂಶ ಇದ್ದು ಆಪಲ್ ಸೈಡರ್‍ನನ್ನು ಔಷಧಿಯಾಗಿ ಕೂಡ ಬಳಸಲಾಗುತ್ತದೆ.

    ಇದು ಆರೋಗ್ಯಕರ ಉತ್ಪನ್ನವೆಂದು ಪರಿಗಣಿಸಿದರೂ ಕೂಡ ನೈಸರ್ಗಿಕ ಉತ್ಪನ್ನಗಳು ಯಾವಾಗಲೂ ಸುರಕ್ಷಿತವಾದವೇ ಆದರೂ ಇದನ್ನು ಸೇವಿಸುವಾಗ ಜಾಗರೂಕತೆಯಿಂದ ಇರಬೇಕು. ಸೇವಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಮತ್ತು ಎಷ್ಟು ಡೋಸೇಜ್ ಪ್ರಮಾಣದಲ್ಲಿ ಸೇವಿಸಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಅಗತ್ಯ.

    ಆಪಲ್ ಸೈಡರ್ ವಿನೆಗರ್ ಆರೋಗ್ಯದ ಪ್ರಯೋಜನಗಳು

    * ಆಪಲ್ ಸೈಡರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಿದರೆ ನಿಮ್ಮ ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
    * ಆಪಲ್ ಸೈಡರ್ ವಿನೆಗರ್ ಹೃದಯದಾರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತ ಸಂಚನವನ್ನು ಸುಗಮಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನನ್ನು ಕಡಿಮೆ ಮಾಡುತ್ತದೆ. ಹೃದೋಗ ಅಪಾಯವನ್ನು ತಡೆಗಟ್ಟುತ್ತದೆ.

    * ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಕರುಳಿಗೆ ಒಳ್ಳೆಯದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
    * ಆಪಲ್ ಸೈಡರ್ ವಿನೆಗರ್ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

    ಆಪಲ್ ಸೈಡರ್ ವಿನೆಗರ್‍ನಿಂದಾಗುವ ಉಪಯೋಗಗಳು
    * ಆಪಲ್ ಸೈಡರ್ ವಿನೆಗರ್ ಉತ್ತಮ ಡೈ ಕ್ಲೀನರ್ ಆಗಿ ಉಪಯೋಗಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಇದನ್ನು ಅಡುಗೆ ಮನೆ,ಕಿಟಕಿ ಫಲಕ, ಸ್ನಾನ ಗೃಹ, ಪಾತ್ರೆಗಳು, ಕನ್ನಡಿ, ಬಾಗಿಲುಗಳಂತಹ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

    * ಆಪಲ್ ಸೈಡರ್ ವಿನೆಗರ್ ನ್ನು ಹಣ್ಣು ತರಕಾರಿಗಳನ್ನು ತೊಳೆಯಲು ಬಳಸಬಹುದಾಗಿದೆ. ಇದು ಹಣ್ಣು, ತರಕಾರಿ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
    * ನಿಮ್ಮ ಹಲ್ಲುಗಳಲ್ಲಿನ ಕಲೆಗಳನ್ನು ನಾಶಪಡಿಸಲು ಮತ್ತು ಹಲ್ಲನ್ನು ನೈಸರ್ಗಿಕವಾಗಿ ಬಿಳುಪುಗೊಳಿಸಲು ಆಪಲ್ ಸೈಡರ್ ವಿನೆಗರ್‍ನನ್ನುಬಳಸಬಹುದು.
    * ಜೊತೆಗೆ ಬಾಯಿಯಲ್ಲಿ ಬರುವ ದುರ್ವಸನೆಯನ್ನು ತೊಡೆದು ಹಾಕಿ ತಾಜಾ ಉಸಿರನ್ನು ನೀಡಲು ಮೌತ್ ಫ್ರೆಶ್ ನರ್ ಆಗಿ ಕೂಡ ಉಪಯೋಗಿಸಬಹುದಾಗಿದೆ.
    * ಆಪಲ್ ಸೈಡರ್ ವಿನೆಗರ್ ನಿಮ್ಮ ಚರ್ಮ ಮತ್ತು ಕೂದಲು ಹೊಳೆಯುವಂತೆ ಮಾಡಲು ಸಹಾಕಾರಿಯಾಗಿದೆ. ಒಂದು ರೀತಿ ಚರ್ಮರೋಗಕ್ಕೆ ಆಪಲ್ ಸೈಡರ್ ವಿನೆಗರ್ ಮದ್ದಾಗಿದೆ.

  • ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ಗೆ ಚಿಕಿತ್ಸೆ – ಸೌಂದರ್ಯ ಸಮಸ್ಯೆ ಕೂಡ ದೂರ

    ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ಗೆ ಚಿಕಿತ್ಸೆ – ಸೌಂದರ್ಯ ಸಮಸ್ಯೆ ಕೂಡ ದೂರ

    ನಿಮಗೆ ಮೈಗ್ರೇನ್ ಬರುತ್ತಾ? ಹೇಗಪ್ಪ ಈ ಮೈಗ್ರೇನ್ ತಲೆನೋವು ಕಡಿಮೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು.

    ದ್ರಾಕ್ಷಿಯಲ್ಲಿ ಕ್ಯಾಲೋರಿ, ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶಗಳು ಇರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಅಲ್ಲದೆ ದ್ರಾಕ್ಷಿ ತಿನ್ನುವುದರಿಂದ ಬ್ಯೂಟಿ ಪ್ರಾಬ್ಲಂ ಕೂಡ ದೂರವಾಗುತ್ತದೆ.

    ದ್ರಾಕ್ಷಿಯಲ್ಲಿ ಏನಿದೆ?
    ಒಂದು ಕಪ್ ದ್ರಾಕ್ಷಿಯಲ್ಲಿ 62 ಕ್ಯಾಲೋರಿ, 1.3 ಗ್ರಾಂ ಫ್ಯಾಟ್ ಹಾಗೂ 15 ಗ್ರಾಂ ಶುಗರ್ ಇರುತ್ತದೆ. ಇದನ್ನು ಸೇವಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ 1.8 ಮಿಲಿಗ್ರಾಂ ಸೋಡಿಯಂ, ಶೇ.3ರಷ್ಟು ಡೈಯಟ್ರಿ ಫೈಬರ್, ಶೇ.5ರಷ್ಟು ಪೋಟ್ಯಾಶಿಯಂ, ಶೇ.5ರಷ್ಟು ಕಾರ್ಬೋಹೈಡ್ರೆಟ್, 0.6ಗ್ರಾಂ ಪ್ರೋಟಿನ್, ಶೇ.1ರಷ್ಟು ವಿಟಮಿನ್ ಎ, ಶೇ.6ರಷ್ಟು ವಿಟಮಿನ್ ಸಿ, ಶೇ.1ರಷ್ಟು ಕ್ಯಾಲಿಶಿಯಂ, ಶೇ.1ರಷ್ಟು ಐರನ್, ಶೇ.1ರಷ್ಟು ಮ್ಯಾಗ್ನೇಶಿಂ ಹಾಗೂ ಶೇ.5ರಷ್ಟು ವಿಟಮಿನ್ ಬಿ-6 ಅಂಶಗಳು ಇರುತ್ತದೆ.

    ಲಾಭ ಏನು?
    ಡಯಾಬಿಟಿಸ್: ದ್ರಾಕ್ಷಿ ಸಿಹಿ ಆಗಿರುವುದರಿಂದ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ತಿನ್ನಲು ಹಿಂದೇಟು ಹಾಕುತ್ತಾರೆ. ಈ ಕಲ್ಪನೆ ತಪ್ಪು. ದ್ರಾಕ್ಷಿ ಸೇವನೆಯಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಡಯಾಬಿಟಿಸ್ ಇರುವವರು ದ್ರಾಕ್ಷಿಯನ್ನು ವೈದ್ಯರ ಸಲಹೆ ಮೇರೆಗೆ ಮಿತ ಪ್ರಮಾಣದಲ್ಲಿ ಸೇವಿಸಬಹುದು.

    ಮೈಗ್ರೇನ್: ನಿಮಗೆ ಮೈಗ್ರೇನ್ ಇದ್ದರೆ ಒಂದು ಗ್ಲಾಸ್ ದ್ರಾಕ್ಷಿ ರಸವನ್ನು ಕುಡಿಯಬೇಕು. ಇದರಿಂದ ಮೈಗ್ರೇನ್ ಕಡಿಮೆಯಾಗುತ್ತದೆ. ದಿನನಿತ್ಯ ದ್ರಾಕ್ಷಿ ರಸದ ಸೇವನೆಯಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಸ್ತನ ಕ್ಯಾನ್ಸರ್: ಸಂಶೋಧನೆ ಪ್ರಕಾರ, ದಿನ 1 ಕಪ್ ದ್ರಾಕ್ಷಿ ಸೇವಿಸುವುದರಿಂದ ಸ್ತನದ ಕ್ಯಾನ್ಸರ್ ಶೇ.50ರಷ್ಟು ಕಡಿಮೆ ಆಗುತ್ತದೆ. ಇದರ ಹೊರತಾಗಿ ಹೃದಯದ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

    ರಕ್ತದ ಕೊರತೆ: ದ್ರಾಕ್ಷಿಯಲ್ಲಿ ಐರನ್ ಅಂಶ ಹೆಚ್ಚು ಇರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದ ಕೊರತೆಯನ್ನು ಕಡಿಮೆ ಮಾಡುತ್ತದೆ. ಎನಿಮಿಯಾ ಇರುವವರು 1 ಗ್ಲಾಸ್ ದ್ರಾಕ್ಷಿ ಜ್ಯೂಸಿಗೆ 2 ಚಮಚ ಜೇನು ತುಪ್ಪ ಬೆರೆಸಿ ದಿನನಿತ್ಯ ಕುಡಿಯಬೇಕು. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುತ್ತದೆ.

    ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್: ದ್ರಾಕ್ಷಿಯಲ್ಲಿ ಗ್ಲೂಕೋಸ್, ಮ್ಯಾಗ್ನೀಶಿಯಂ ಹಾಗೂ ಸೀಟ್ರಿಕ್ ಆ್ಯಸಿಡ್ ಅಂಶಗಳು ಇರುತ್ತದೆ. ಇದರಿಂದ ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್ ಸಮಸ್ಯೆಯಿಂದ ದೂರ ಇರಿಸುತ್ತದೆ.

    ಗ್ಲೋಯಿಂಗ್ ಸ್ಕೀನ್: ನಿಮ್ಮ ಮುಖದಲ್ಲಿ ಸುಕ್ಕು ಇದ್ದರೆ ದ್ರಾಕ್ಷಿಯ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚ್ಛೆಯ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ದ್ರಾಕ್ಷಿ, ಅವಕಾಡೋ ಪಲ್ಪ್, 2 ಚಮಚ ಜೇನು ಹಾಗೂ ರೋಸ್ ವಾಟರ್ ಎಲ್ಲವನ್ನು ಮಿಶ್ರಣ ಮಾಡಿ. ಬಳಿಕ ಅದನ್ನು ಮುಖಕ್ಕೆ ಹಾಕಿ 15 ನಿಮಿಷದ ಬಿಡಬೇಕು. ಬಳಿಕ ನೀರಿನಿಂದ ಮುಖ ತೊಳೆದರೆ ನಿಮ್ಮ ಮುಖದಲ್ಲಿ ಗ್ಲೋ ಕಾಣಿಸುತ್ತದೆ.

    ಸನ್‍ಬರ್ನ್: ಬೇಸಿಗೆಯಲ್ಲಿ ಸನ್‍ಬರ್ನ್ ಸಮಸ್ಯೆ ಹೆಚ್ಚು ಕಾಡುತ್ತಿರುತ್ತದೆ. ದ್ರಾಕ್ಷಿ ಸೇವಿಸುವುದರಿಂದ ಸನ್‍ಬರ್ನ್ ಸಮಸ್ಯೆ ಕಡಿಮೆಯಾಗುತ್ತದೆ. ಡಯಟ್ ವೇಳೆ ದ್ರಾಕ್ಷಿ ಸೇವನೆ ಮತ್ತು ದಿನನಿತ್ಯ ಇದರ ರಸದಿಂದ ಮುಖವನ್ನು ಮಸಾಜ್ ಮಾಡಿದರೆ ಸನ್‍ಬರ್ನ್ ಸಮಸ್ಯೆ ದೂರವಾಗುತ್ತದೆ.

    ತಲೆಕೂದಲು ಬೆಳವಣಿಗೆ: ದ್ರಾಕ್ಷಿ ಎಣ್ಣೆಯನ್ನು ತಲೆಕೂದಲಿಗೆ ಹಾಕಿಕೊಂಡರೆ, ಅದು ಕೂದಲನ್ನು ಬಲಿಷ್ಟವಾಗಿ ಇರಿಸಲು ಸಹಾಯ ಮಾಡುತ್ತದೆ. ಎಣ್ಣೆಯಲ್ಲಿ ಕೆಲವು ಹನಿ ನಿಂಬೆಹಣ್ಣಿನ ರಸ ಹಾಕಿ ಅದನ್ನು ತಲೆಕೂದಲ ಬುಡಕ್ಕೆ ಹಾಕಬೇಕು. ಸ್ವಲ್ಪ ಹೊತ್ತಿನ ಬಳಿಕ ಸ್ವಚ್ಛ ನೀರಿನಿಂದ ತಲೆಕೂದಲನ್ನು ತೊಳೆಯಬೇಕು. ತಲೆಕೂದಲನ್ನು ತೊಳೆಯುವಾಗ ಕಂಡೀಶನರ್ ಬಳಸಲೇ ಬೇಕು. ಇದನ್ನು ಉಪಯೋಗಿಸುವುದರಿಂದ ತಲೆಕೂದಲು ಬಲಿಷ್ಟವಾಗುವುದಲ್ಲೇ ಹೇರ್ ಫಾಲ್ ಹಾಗೂ ಡ್ಯಾಂಡ್ರಫ್ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.