Tag: Beloved

  • ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    – ಜೀವನ್ಮರಣ ಹೋರಾಟದಲ್ಲಿ ಯುವತಿ

    ಹೈದರಾಬಾದ್: ಯುವಕನೋರ್ವ ಗೆಳತಿಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದಿದೆ.

    ಶ್ರೀಕಾಂತ್ ಗೆಳತಿ ಪ್ರಿಯಾಂಕ ಮೇಲೆ ಚಾಕುವಿನಿಂದ ದಾಳಿ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿಯಾಂಕ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಡುರಸ್ತೆಯಲ್ಲಿ ದಾಳಿ ನಡೆದಿದ್ದು, ಸ್ಥಳೀಯರು ಇಬ್ಬರನ್ನೂ ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಕತ್ತಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಕೆಜಿಹೆಚ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಶ್ರೀಕಾಂತ್ ಮತ್ತು ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದ್ದು, ಶ್ರೀಕಾಂತ್ ನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

     

  • ಮತ್ತೊಬ್ಬನ ಜೊತೆ ಮಾತಾಡಿದ್ದಕ್ಕೆ ಪ್ರೇಯಸಿಯನ್ನ ಕೊಂದ ಯುವಕ

    ಮತ್ತೊಬ್ಬನ ಜೊತೆ ಮಾತಾಡಿದ್ದಕ್ಕೆ ಪ್ರೇಯಸಿಯನ್ನ ಕೊಂದ ಯುವಕ

    -ರುಂಡ ಕತ್ತರಿಸಿ ಹೊಲದಲ್ಲಿ ದೇಹ ಎಸೆದ
    -ಕೈ, ಕಾಲುಗಳನ್ನ ಎಳೆದಾಡಿ ಬೇರೆ ಬೇರೆ ಮಾಡಿದ ಪ್ರಾಣಿಗಳು

    ಲಕ್ನೋ: ಬೇರೊಬ್ಬನ ಜೊತೆ ಮಾತನಾಡಿದಕ್ಕೆ ಯುವಕನೋರ್ವ ಪ್ರೇಯಸಿನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಹಲ್ದೌರ್ ನಲ್ಲಿ ನಡೆದಿದೆ.

    ಕಾಜಲ್ ಕೊಲೆಯಾದ ಯುವತಿ. ಕಾಜಲ್ ಪರಿಚಿತ ಯುವಕನೊಂದಿಗೆ ಮಾತನಾಡಿರುವ ವಿಷಯ ಪ್ರಿಯಕರ ಸಲೀಂಗೆ ತಿಳಿದಿದೆ. ಅನುಮಾನಗೊಂಡ ಸಲೀಂ ಯುವತಿಯ ಕತ್ತು ಕೊಯ್ದು ಹೊಲದಲ್ಲಿ ಬಿಸಾಡಿದ್ದಾನೆ. ದೇಹದ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸಿದ ಪರಿಣಾಮ ದೇಹ, ರುಂಡ, ಕೈ ಕಾಲುಗಳು ಬೇರೆಯಾಗಿ ಗುರುತು ಸಿಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ಪತ್ತೆಯಾದ ಬಟ್ಟೆ ಆಧಾರದ ಮೇಲೆ ಮೃತದೇಹವನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ಹಲ್ದೌರ್ ಇಲಾಖೆಯ ಹರದಾಸಪುರ ಗ್ರಾಮದ ವ್ಯಾಪ್ತಿಯಲ್ಲಿ ಕಾಜಲ್ ಮೃತದೇಹ ಸಿಕ್ಕಿತ್ತು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಇಡೀ ಗ್ರಾಮದ ಜನರೇ ಸೇರಿದ್ದರು. ಪೊಲೀಸರು ಅನುಮಾನದ ಮೇಲೆ ಕಾಜಲ್ ಪ್ರಿಯಕರ ಸಲೀಂನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ಸಲೀಂ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.

    ನಾನು ಕಾಜಲ್ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಯುವಕನೋರ್ವನ ಜೊತೆ ಕಾಜಲ್ ಮಾತನಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿತ್ತು. ಇದರಿಂದ ಕಾಜಲ್ ಳನ್ನು ಮಗಿಸಬೇಕೆಂದು ನಿರ್ಧರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರೋದಾಗಿ ಸಲೀಂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    ಕಾಜಲ್ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಸಿದ್ದು, ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳೀಯ ಬಜೆಪಿ ಶಾಸಕ ಓಂಕುಮಾರ್, ಯುವತಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ನನಗಾಗಿ ಕಾಯ್ತಿರು ಅಂತ ಹೋದ ಪ್ರೇಮಿ – ನಿಶ್ಚಿತಾರ್ಥ ಆದ ಕೆಲ ಕ್ಷಣಗಳಲ್ಲೇ ಯುವಕ ಸಾವು

    ನನಗಾಗಿ ಕಾಯ್ತಿರು ಅಂತ ಹೋದ ಪ್ರೇಮಿ – ನಿಶ್ಚಿತಾರ್ಥ ಆದ ಕೆಲ ಕ್ಷಣಗಳಲ್ಲೇ ಯುವಕ ಸಾವು

    – ಭಾವಿ ಪತ್ನಿಗೆ ಕಿಸ್ ಕೊಟ್ಟು ಹೋಗಿದ್ದ

    ಬ್ರೆಸಿಲಿಯಾ: ನಿಶ್ಚಿತಾರ್ಥವಾದ ಕೇವಲ ಐದು ನಿಮಿಷಗಳಲ್ಲೇ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಬ್ರೆಜಿಲ್‍ನ ಉದ್ಯಮಿ ಜೊವಾವೊ ಗಿಲ್ಹೆರ್ಮ್ ಟೊರೆಸ್ ಫಡಿನಿ (24) ಮೃತ ಯುವಕ. ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಮೃತ ಫಡಿನಿ ಮತ್ತು ಭಾವಿ ಪತ್ನಿ ಲಾರಿಸ್ಸಾ ಕ್ಯಾಂಪೋಸ್ ಬ್ರೆಜಿಲ್‍ನ ಸೊರೊಕಬಾ ಪ್ರದೇಶದಲ್ಲಿರುವ ಪ್ರಖ್ಯಾತ ಇಟುಪರಾರಂಗ ಜಲಾಶಯದ ಬಳಿ ತಮ್ಮ ಸ್ನೇಹಿತರೊಂದಿಗೆ ನಿಶ್ಚಿತಾರ್ಥವನ್ನು ಆಚರಿಸಿಕೊಂಡಿದ್ದರು. ನಂತರ ಎಲ್ಲರೂ ನಿಶ್ಚಿತಾರ್ಥದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಫೋಟೋ ತೆಗೆದ ಕೆಲವೇ ಕ್ಷಣಗಳಲ್ಲಿ ಫಡಿನಿ ತನ್ನ ಸ್ನೇಹಿತರೊಂದಿಗೆ ಸ್ವಿಮ್ಮಿಂಗ್ ರೇಸ್‍ಗೆಂದು ಡ್ಯಾಮ್‍ಗೆ ಧುಮುಕಿದನು. ಆದರೆ ಸ್ವಿಮ್ ಮಾಡುತ್ತಲೇ ಫಡಿನಿ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಫಡಿನಿ ಉತ್ತಮ ಈಜುಗಾರನಾಗಿದ್ದು, ಆತ ಜಲಾಶಯಕ್ಕೆ ಧುಮುಕುವ ಮೊದಲು ಭಾವಿ ಪತ್ನಿ ಲಾರಿಸ್ಸಾ ಹಣೆಗೆ ಮುತ್ತಿಟ್ಟಿದ್ದನು.

    ಫಡಿನಿ ಕಿಸ್ ಮಾಡಿದ ನಂತರ ತನ್ನ ಶರ್ಟ್ ಬಿಚ್ಚಿ ನಮ್ಮ ಸ್ನೇಹಿತರೊಂದಿಗೆ ನೀರಿಗೆ ಜಿಗಿದನು. ನಾನು ಬೇಗ ಬರುತ್ತೇನೆ ಕಾಯುತ್ತಿರು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಹೋಗಿದ್ದ. ಸ್ನೇಹಿತರು ಈ ತಡದಿಂದ ಮುಂದಿನ ದಡಕ್ಕೆ ಈಜು ಸ್ಪರ್ಧೆಯನ್ನು ಪ್ರಾರಂಭಿಸಿದರು. ಆದರೆ ಫಡಿನಿ ಇದ್ದಕ್ಕಿದ್ದಂತೆ ನೀರಿನ ಕೆಳಗೆ ಕಣ್ಮರೆಯಾದನು ಎಂದು ಲಾರಿಸ್ಸಾ ಹೇಳಿದ್ದಾಳೆ.

    ಕೂಡಲೇ ಸ್ನೇಹಿತರು ಆತನಿಗಾಗಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ನಂತರ ತುರ್ತು ಸೇವೆಗಳು ಸ್ಥಳಕ್ಕೆ ಆಗಮಿಸಿದ್ದು, ಮುಳುಗು ತಜ್ಞರು ದೋಣಿಗಳೊಂದಿಗೆ ಹುಡುಕಾಡಿದರು. ಆದರೂ ಫಡಿನಿ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಬಂದ ಸುಮಾರು ಒಂದೂವರೆ ಗಂಟೆಯ ನಂತರ ಅವನ ದೇಹವನ್ನು ಪತ್ತೆಯಾಗಿದೆ.

    ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ ನಿಶ್ಚಿತಾರ್ಥದಲ್ಲಿಯೇ ಈ ದುರಂತ ಸಂಭವಿಸಿದೆ. ನಾನು ಯೋಚಿಸುವುದು ಮತ್ತು ಕನಸು ಕಾಣುವುದು ಅವನ ಬಗ್ಗೆ ಮಾತ್ರ. ಈಗ ನಾವು ಒಟ್ಟಿಗೆ ಕಳೆದ ಸುಂದರ ಕ್ಷಣಗಳ ನೆನಪು ಮಾತ್ರ ಉಳಿದುಕೊಂಡಿದೆ ಎಂದು ಲಾರಿಸ್ಸಾ ಕಣ್ಣೀರು ಹಾಕಿದ್ದಾಳೆ.