Tag: Belgaum

  • ಆಕೆಯನ್ನು ಬಿಜೆಪಿಗೆ ಕರೆದಿದ್ರೆ ನನ್ನಿಬ್ಬರು ಮಕ್ಕಳು ಹಾಳಾಗಲಿ -ಹೆಬ್ಬಾಳ್ಕರ್‌ಗೆ ಸಾಹುಕಾರ್ ಟಾಂಗ್

    ಆಕೆಯನ್ನು ಬಿಜೆಪಿಗೆ ಕರೆದಿದ್ರೆ ನನ್ನಿಬ್ಬರು ಮಕ್ಕಳು ಹಾಳಾಗಲಿ -ಹೆಬ್ಬಾಳ್ಕರ್‌ಗೆ ಸಾಹುಕಾರ್ ಟಾಂಗ್

    ಬೆಳಗಾವಿ: ನಾನು ಆಕೆಯನ್ನು ಬಿಜೆಪಿಗೆ ಕರೆದಿದ್ರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ಹೇಳುವ ಮೂಲಕ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಟಾಂಗ್ ನೀಡಿದ್ದಾರೆ.

    ಇಂದು ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ರಮೇಶ್ ಜಾರಕಿಹೊಳಿ ಹೈದರಾಬಾದ್‍ನಲ್ಲಿ ಕರೆದು ಬಿಜೆಪಿ ಸೇರುವಂತೆ ಕೇಳಿಕೊಂಡಿದ್ದರು ಎಂಬ ಹೆಬ್ಬಾಳ್ಕರ್ ಆರೋಪಕ್ಕೆ ಟಾಂಗ್ ನೀಡಿದರು. ನಾನು ಆಕೆಯನ್ನು ಹೈದರಾಬಾದ್‍ಗೆ ಕರೆದಿದ್ದರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ತಿರುಗೇಟು ನೀಡಿದರು.

    ಇದೇ ವೇಳೆ, ನನ್ನ ಬಗ್ಗೆ ಟೀಕೆ ಮಾಡುತ್ತಿರುವ ಎಲ್ಲರಿಗೂ 6 ತಾರೀಕು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಟೀಕೆ ಮಾಡಿದ್ದಾರೆ. ನಮ್ಮ ಬಳಿಯೂ ಬಾಂಬ್ ಇದೆ ಎಂದು ಹೇಳಿದರು. ನಂತರ ನಾನು ಹೆಬ್ಬಾಳ್ಕರ್ ಅವರನ್ನು ಹೈದರಾಬಾದ್ ಸಭೆಗೆ ಕರೆದಿಲ್ಲ. ನಾನು ಆಕೆಯನ್ನು ಕರೆದಿದ್ರೆ ನನ್ನ ಇಬ್ಬರು ಮಕ್ಕಳು ಹಾಳಾಗಲಿ ಎಂದು ಸವಾಲ್ ಹಾಕಿದರು.

    1985 ರಲ್ಲಿ ನಾನು ಒಂದು ಸಾವಿರ ಮತದಿಂದ ಸೋತೆ. 40 ಸಾವಿರ ಮತದಿಂದ ಡಿಕೆಶಿ ಸೋತರು. ಆದರೆ ಈಗ ಡಿಕೆಶಿ ದೊಡ್ಡ ಲೀಡರ್. ಪ್ರಭಾಕರ್ ಕೋರೆ ಮತ್ತು ರಮೇಶ್ ಜಾರಕಿಹೊಳಿ ಒಂದಾದರೆ ಉಳಿಗಾಲ ಇಲ್ಲ ಎಂದು ಟಿಕೆಟ್ ತಪ್ಪಿಸಿದರು. ಆದರೆ ಈಗ ಸಮಯ ಬಂದಿದೆ ಇಬ್ಬರು ಒಂದಾಗಿದ್ದೇವೆ. ನಮ್ಮ ಗೆಲುವಿಗೆ ವೀರಶೈವ ಲಿಂಗಾಯತ ಸಮಾಜ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.

    ನಮ್ಮ ಜನರು ಮತ ಯಾರಿಗೆ ಹಾಕ್ತಿರಾ ಎಂದು ಕೇಳಿದರೆ ಕೈಗೆ ಎನ್ನುತ್ತಾರೆ. ಮಾನಸಿಕವಾಗಿ ಹಿರಿಯರು, ಮಹಿಳೆಯರಲ್ಲಿ ನಾನು ಕಾಂಗ್ರೆಸ್ ಅಂತ ಇದೆ. ನಾನು 30 ವರ್ಷದಿಂದ ಕಾಂಗ್ರೆಸ್ ನಲ್ಲಿ ಇದ್ದು ಇನ್ನೂ ದೂರವಾಗಿಲ್ಲ. ಮತ ಹಾಕುವ ಮೊದಲು ಯುವಕರು ಸರಿಯಾಗಿ ಮಾಹಿತಿ ಕೊಡಬೇಕು. ಮತ ಹಾಕೋ ಮೊದಲು ಫೋಟೋ ನೋಡಬೇಕು. ಲಖನ್ ಸಾಹುಕಾರ್ ಸಹ ನನ್ನ ಹಾಗೇ ಕಾಣಿಸುತ್ತಾನೆ. ಫೋಟೋ ಜತೆಗೆ ಕಮಲ ಹೂ ನೋಡಿ ಮತಹಾಕಲು ಹೇಳಿ. ಮುಸ್ಲಿಂ ಸಮಾಜದ ಜನ ನನ್ನ ನೋಡಿ ಮತ ಹಾಕಿ ಎಂದು ಮತದಾರರಿಗೆ ಹೇಳಿದರು.

  • ಚುನಾವಣಾ ಅಬ್ಬರದ ನಡುವೆಯೂ ಅಪಘಾತಕ್ಕೀಡಾದವರನ್ನು ಉಪಚರಿಸಿದ ಶಶಿಕಲಾ ಜೊಲ್ಲೆ

    ಚುನಾವಣಾ ಅಬ್ಬರದ ನಡುವೆಯೂ ಅಪಘಾತಕ್ಕೀಡಾದವರನ್ನು ಉಪಚರಿಸಿದ ಶಶಿಕಲಾ ಜೊಲ್ಲೆ

    ಚಿಕ್ಕೋಡಿ: ಚುನಾವಣೆಯ ಪ್ರಚಾರದ ಅಬ್ಬರದ ನಡುವೆಯೂ ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡವರನ್ನು ಉಪಚರಿಸುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಮಾನವೀಯತೆ ಮೆರೆದಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ಮೇಲೆ ಲಾರಿ ಹಾಗೂ ಕಾರು ಅಪಘಾತಕ್ಕೀಡಾಗಿತ್ತು. ಈ ಮಾರ್ಗದಲ್ಲಿ ಸಾಗುತ್ತಿದ್ದ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ತಮ್ಮ ವಾಹನ ನಿಲ್ಲಿಸಿ ಕಾರಿನಲ್ಲಿದ್ದ ಗಾಯಗೊಂಡ ಪ್ರಯಾಣಿಕರಿಗೆ ನೀರು ನೀಡಿ ಉಪಚರಿಸಿದ್ದಾರೆ.

    ಅಂಬುಲೆನ್ಸ್ ಬರುವವರೆಗೂ ಸ್ಥಳದಲ್ಲಿಯೇ ಇದ್ದು, ಗಾಯಾಳುಗಳನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಿ ನಂತರ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಶಶಿಕಲಾ ಜೊಲ್ಲೆ ಅವರ ಈ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

  • ಮದ್ವೆ ದಿನವೇ ವರ ನಾಪತ್ತೆ

    ಮದ್ವೆ ದಿನವೇ ವರ ನಾಪತ್ತೆ

    ಬೆಳಗಾವಿ/ಚಿಕ್ಕೋಡಿ: ಮದುವೆ ದಿನವೇ ವರ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

    ಸುನಿಲ್ ಪಾಟೀಲ್ ಮದುವೆ ದಿನವೇ ನಾಪತ್ತೆಯಾದ ವರ. ಇಂದು ಪಟ್ಟಣದ ಸಾಯಿ ಕಾರ್ಯಾಲಯದಲ್ಲಿ ಮಹಾರಾಷ್ಟ್ರದ ಯುವತಿ ಜೊತೆ ಸುನಿಲ್ ಮದುವೆ ನಿಶ್ಚಯವಾಗಿತ್ತು. ಬುಧವಾರ ಸಂಜೆಯವರೆಗೂ ಕುಟುಂಬಸ್ಥರ ಜೊತೆಗಿದ್ದ ಸುನಿಲ್ ಇಂದು ಬೆಳಗ್ಗೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಬೆಳಗ್ಗೆ ಅರಿಶಿನ ಕಾರ್ಯಕ್ಕೆ ಕುಟುಂಬಸ್ಥರು ವರನನ್ನು ಹುಡುಕುತ್ತಿದ್ದಾಗ ಸುನಿಲ್ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಇಂದು ಮಧ್ಯಾಹ್ನ 12.30ಕ್ಕೆ ಮುಹೂರ್ತ ಸಹ ನಿಗದಿಯಾಗಿತ್ತು. ನಾಪತ್ತೆಯಾಗಿರುವ ಸುನಿಲ್ ಕನ್ನಡ ಪರ ಸಂಘಟನೆಯೊಂದರ ತಾಲೂಕು ಅಧ್ಯಕ್ಷನಾಗಿದ್ದಾನೆ. ಇತ್ತ ವರ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ವಧುವಿನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

  • ಸಾಲ ಇಟ್ಟುಕೊಂಡು ರೂಢಿ ಇಲ್ಲ, ನಾಳೆ ಚುಕ್ತಾ ಮಾಡ್ತೀನಿ: ಕುಮಟಳ್ಳಿಗೆ ಹೆಬ್ಬಾಳ್ಕರ್ ಟಾಂಗ್

    ಸಾಲ ಇಟ್ಟುಕೊಂಡು ರೂಢಿ ಇಲ್ಲ, ನಾಳೆ ಚುಕ್ತಾ ಮಾಡ್ತೀನಿ: ಕುಮಟಳ್ಳಿಗೆ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಅನರ್ಹ ಶಾಸಕ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನನ್ನ ಬಗ್ಗೆ ತುಂಬಾನೇ ಮಾತಾಡಿದ್ದಾರಂತೆ. ಅದಕ್ಕೆಲ್ಲಾ ಉತ್ತರ ಕೊಡಬೇಕಿದೆ. ಯಾರ ಸಾಲವನ್ನು ಹೊತ್ತುಕೊಂಡು ಹೋಗುವಳು ನಾನಲ್ಲ. ಸಾಲ ತೀರಿಸುತ್ತೇನೆ ಎಂದು ಕುಮಟಳ್ಳಿಯವರ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಕುಮಟಳ್ಳಿಯವರ ಆರೋಪಗಳಿಗೆ ನಾಳೆ ಊರಿನ ಜನರನ್ನು ಸೇರಿಸಿಯೇ ಉತ್ತರ ಕೊಡಬೇಕು. ಏಕೆಂದರೆ ಮಹೇಶ್ ಕುಮಟಳ್ಳಿ ಅವರು ತುಂಬಾ ಮಾತನಾಡಿದ್ದಾರೆ. ಇದಕ್ಕೆ ಉತ್ತರ ಕೊಡಬೇಕಿದೆ. ನನಗೆ ಯಾರ ಸಾಲ ಇಟ್ಟುಕೊಂಡು ರೂಢಿ ಇಲ್ಲ. ಎಲ್ಲ ಸಾಲ ಚುಕ್ತಾ ಮಾಡುತ್ತೇನೆ. ಸಾಲ ಹೊತ್ತುಕೊಂಡು ಹೋಗುವವಳು ನಾನಲ್ಲ ಎಂದು ಹರಿಹಾಯ್ದಿದ್ದಾರೆ.

    ನೆರೆ ಸಂಭವಿಸಿದ ಸಂದರ್ಭದಲ್ಲಿ ನಿನ್ನ ಹಾಗೆ ನಾನು ಓಡಿ ಹೋಗಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಿದ್ದರೂ ಪರವಾಗಿರಲಿಲ್ಲ. ಜನರ ಕಷ್ಟಗಳೊಂದಿಗೆ ನಿಂತಿದ್ದರೆ ಭಲೇ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ. ಕಷ್ಟಕ್ಕೆ ಸ್ಪಂದಿಸಿದ್ದರೆ, ನಿನ್ನ ಸ್ವಾರ್ಥಕ್ಕಾಗಿ ಬಿಟ್ಟು ಹೋದರೂ ಸಹ ಜನ ಏನೂ ಅನ್ನುತ್ತಿರಲಿಲ್ಲ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸದೆ ಮುಂಬೈ ಹೋಟೆಲ್‍ನಲ್ಲಿ ನೀನು ಕುಳಿತುಕೊಂಡೆ. ದುಡ್ಡು ಬೇಕಾಗಿತ್ತು ಅದಕ್ಕೆ ಹೋದೆ, ಸುಮ್ಮನೆ ಯಾಕೆ ದ್ರೋಹ ಆಗಿತ್ತು ಎಂದು ಹೇಳುವುದು. ಎರಡು ಬಾರಿ ಟಿಕೆಟ್ ನೀಡಲಾಗಿದೆ ಹೀಗಿರುವಾಗ ದ್ರೋಹ ಹೇಗಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಚುನಾವಣೆ ಬಂದಾಗ ಹೇಗೆ ಮನೆ ಮನೆಗೆ ಓಡಾಡಿ ಮತಯಾಚನೆ ಮಾಡುತ್ತೇವೋ ಹಾಗೆಯೇ ಪ್ರವಾಹದ ವೇಳೆ ಎಲ್ಲ ಮನೆಗಳಿಗೆ ತೆರಳಿ ನಾನು, ನನ್ನ ಮಗ, ತಮ್ಮ, ತಾಯಿ, ಅಕ್ಕ ತಂಗಿಯರು ಸೇರಿ ಪ್ರತಿಯೊಬ್ಬರೂ ಓಡಾಡಿ 43 ದಿನ ಟೊಂಕ ಕಟ್ಟಿ ಕೆಲಸ ಮಾಡಿದ್ದೇವೆ. ಹೆಣ್ಣು ಮಕ್ಕಳಿಗೆ ತುತ್ತು ಮಾಡಿ ಊಟ ಮಾಡಿಸಿದ್ದೇವೆ. ನಮ್ಮ ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಸುಮಾರು 50 ಲಕ್ಷ ರೂ.ಗಳ ಆಹಾರ ಸಾಮಗ್ರಿಗಳನ್ನು ನೀಡಿದ್ದೇನೆ. ಬ್ಲಾಂಕೆಟ್, ಚಾಪೆ ಸೇರಿದಂತೆ ವಿವಿಧ ವಸ್ತುಗಳನ್ನು ಕೊಟ್ಟಿದ್ದೇವೆ. ಇಷ್ಟಾದರೂ ನಾವು ಎಲ್ಲೂ ಹೇಳಿಕೊಂಡಿಲ್ಲ. ಕಷ್ಟದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಗೆ ಸ್ಪಂದಿಸಿದ್ದಾರೆ ಎಂದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ವಿವರಿಸಿದರು.

  • ಮುಸ್ಲಿಮರು ವೋಟ್ ಹಾಕಲ್ಲ ಊರು ಬಿಡುತ್ತೇವೆ ಎಂದಿದ್ದಾರೆ: ರಮೇಶ್ ಜಾರಕಿಹೊಳಿ

    ಮುಸ್ಲಿಮರು ವೋಟ್ ಹಾಕಲ್ಲ ಊರು ಬಿಡುತ್ತೇವೆ ಎಂದಿದ್ದಾರೆ: ರಮೇಶ್ ಜಾರಕಿಹೊಳಿ

    ಬೆಳಗಾವಿ: ಮುಸ್ಲಿಂ ಬಾಂಧವರು ನಾವು ಉಪಚುನಾವಣೆಯಲ್ಲಿ ವೋಟ್ ಹಾಕುತ್ತಿಲ್ಲ ಊರು ಬಿಡುತ್ತೇವೆ ಎಂದು ತಿಳಿಸಿರುವುದಾಗಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಡಿಸೆಂಬರ್ 3 ಮತದಾನ ನಡೆಯುವ ದಿನ ಗೋಕಾಕ್ ನ ಮುಸ್ಲಿಂ ಬಾಂಧವರು ಅಜ್ಮೀರಿಗೆ ಧಾರ್ಮಿಕ ಪ್ರವಾಸ ಹೋಗುತ್ತಿದ್ದಾರೆ. ಹೀಗಾಗಿ ಆ ದಿನ ವೋಟು ಹಾಕುತ್ತಿಲ್ಲ ಎಂದು ತಿಳಿಸಿದರು.

    ಬಿಜೆಪಿಗೆ ಮುಸ್ಲಿಂ ಬಾಂಧವರು ಬೆಂಬಲಿಸುತ್ತಿರುವುದು ಹೊಸ ಇತಿಹಾಸ. 28 ಜಮಾತ್ ಮುಸ್ಲಿಂ ಬಾಂಧವರು ಸಭೆ ಮಾಡಿದ್ದಾರೆ. ಆ ಸಭೆಯಲ್ಲಿ ಕೆಲ ಮುಸ್ಲಿಂ ಬಾಂಧವರು ನಮಗೆ ಬಿಜೆಪಿಗೆ ವೋಟ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಎಂದು ಹೇಳಿದರು.

    ಅಥಣಿ, ಕಾಗವಾಡ ಸೇರಿದಂತೆ ಎಲ್ಲಾ ಕಡೆ ನಮಗೆ ಹಿಂದೂ ಮುಸ್ಲಿಂಮರು ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯವರನ್ನು ಕೋಮುವಾದಿಗಳು ಎಂದು ಕರೆಯುತ್ತಾರೆ. ಆದರೆ ಇಲ್ಲಿಂದ ಹೊಸ ಅಧ್ಯಾಯ ಆರಂಭಿಸಿ ವಿರೋಧಿಗಳಿಗೆ ತಿರುಗೇಟು ನೀಡೋಣ ಎಂದು ರಮೇಶ್ ಜಾರಕಿಹೊಳಿ ಜನರಲ್ಲಿ ಮನವಿ ಮಾಡಿಕೊಂಡರು.

  • ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಬೆಳಗಾವಿ: ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ತಮ್ಮ ಅಲ್ಲ. ಆತ ನನ್ನ ವಿರೋಧಿ. ಡಿಸೆಂಬರ್ 5ರವರೆಗೂ ಅವನು ನನ್ನ ತಮ್ಮ ಅಲ್ಲ 5 ರ ನಂತರ ತಮ್ಮ. ಲಖನ್‍ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿರುವುದು ಸತ್ಯವಿದೆ. ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷ್ ಅವರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸತೀಶ್ ಕುತಂತ್ರ ಮಾಡಿದ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಇಬ್ಬರು ಸಹೋದರರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

    ಒಂದೇ ವಿಮಾನದಲ್ಲಿ ಬಂದರೂ ಸಹೋದರರಿಬ್ಬರು ಯಾಕೆ ಮಾತನಾಡಲಿಲ್ಲ ಎಂದು ಕೇಳಿದಾಗ, ಇಬ್ಬರು ವಿಮಾನದಲ್ಲಿ ಬಂದಿರುವುದು ಸಹಜ. ಆದರೆ ಸತೀಶ್ ಜೊತೆಗೆ ನಾನು ಮಾತನಾಡಿಲ್ಲ. ಆತನ ಜೊತೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಹೇಳಿದರು.

  • ವೀರ ಯೋಧನ ಅಂತ್ಯಕ್ರಿಯೆ – ಗ್ರಾಮದಲ್ಲಿ ಜನಸಾಗರ

    ವೀರ ಯೋಧನ ಅಂತ್ಯಕ್ರಿಯೆ – ಗ್ರಾಮದಲ್ಲಿ ಜನಸಾಗರ

    – ದಾರಿಯುದ್ದಕ್ಕೂ ರಂಗೋಲಿ, ಹೂವು

    ಬೆಳಗಾವಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ವೀರ ಯೋಧ ರಾಹುಲ್ ಸುಳಗೇಕರ್‍ಗಾಗಿ ಇಡೀ ಗ್ರಾಮವೆ ಕಂಬನಿ ಮಿಡಿದಿದೆ. ಯೋಧನ ಪಾರ್ಥೀವ ಶರೀರ ಸಾಗುವ ಮಾರ್ಗದುದ್ದಕ್ಕೂ ಹೂ, ರಂಗೋಲಿಯಿಂದ ಅಲಂಕರಿಸಿ ಗೌರವವನ್ನು ಜನ ಸಲ್ಲಿಸಿದ್ದಾರೆ.

    ಗ್ರಾಮಸ್ಥರು ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸುತ್ತಿದ್ದರೆ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ದಾರಿಯುದ್ದಕ್ಕೂ ರಾಹುಲ್ ಸುಳಗೇಕರ್ ‘ಅಮರ್ ರಹೇ ಅಮರ್ ರಹೇ’ ಎಂಬ ಘೋಷಣೆ ಮೊಳಗಿತ್ತು.

    ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ್(22) ಯೋಧ ಜಮ್ಮುವಿನ ಪುಂಚ್ ಪ್ರದೇಶದಲ್ಲಿ ಗುರುವಾರ ರಾತ್ರಿ ಉಗ್ರರ ಜೊತೆಗೆ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ್ದರು. ಇಂದು ಯೋಧನ ಪಾರ್ಥೀವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ಗೌರವ ಸಲ್ಲಿಸಿದರು.

    ನಂತರ ಹಿಂಡಲಗಾ ಗ್ರಾಮದಿಂದ ಯೋಧನ ಸ್ವಗ್ರಾಮ ಉಚಗಾವಿ ವರೆಗೆ ಭವ್ಯ ಮರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಪಾಲ್ಗೊಂಡು ಗೌರವ ಸಲ್ಲಿಸಿದರು. ಯೋಧನ ಪಾರ್ಥಿವ ಶಶೀರ ಸಾಗುವ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ತ್ರೀವರ್ಣ ಧ್ವಜ ಹೋಲುವ ಹೂವಿನ ಅಲಂಕಾರ ಮಾಡಲಾಗಿತ್ತು. ರಜೆ ಇದ್ದರೂ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದು ವೀರ ಯೋಧ ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಕೂಗಿದರು.

    ಯೋಧನ ಅಂತ್ಯಕ್ರಿಯೆ ವೇಳೆಯಲ್ಲಿ ಮರಾಠ ಲಘು ಪದಾತಿದಳ ಸೈನಿಕರು ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ ಸೇರಿ ಅನೇಕರು ಪಾಲ್ಗೊಂಡು ಗೌರವ ಸಲ್ಲಿಸಿದರು.

    ಮೊದಲ ಪ್ರಯತ್ನದಲ್ಲೇ ಸೇನೆ ಸೇರ್ಪಡೆ
    ವೀರಯೋಧ ರಾಹುಲ್ ಸುಳಗೇಕರ್ ಮೊದಲ ಪ್ರಯತ್ನದಲ್ಲಿಯೇ ಸೇನೆ ಸೇರಿದ್ದರು. 2015ರ ಮರಾಠ ಲಘು ಪದಾತಿ ದಳದಲ್ಲಿ ಸೇರಿ ರಾಜಸ್ಥಾನದಲ್ಲಿ ತರಬೇತಿ ಪಡೆದಿದ್ದರು. ಅಲ್ಲಿಂದ ಸ್ವಲ್ಪ ತಿಂಗಳಗಳ ಬಳಿಕ ಜಮ್ಮುವಿನ ಕೃಷ್ಣಾ ಘಾಟಿಯಲ್ಲಿಯೇ ಗಡಿ ಕಾವಲಿಗೆ ನಿಯೋಜನೆಗೊಂಡಿದ್ದರು. ಗುರುವಾರ ರಾತ್ರಿ ಜಮ್ಮುವಿನ ಪೂಂಚ್ ಪ್ರದೇಶದಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದರು.

    ರಾಹುಲ್ ಸುಳಗೇಕರ್ ಅವರ ಇಡೀ ಕುಟುಂಬವೇ ದೇಶ ಸೇವೆಗೆ ನಿಂತಿದೆ. ರಾಹುಲ್ ತಂದೆ ಬೈರು ಸುಳಗೇಕರ್ ಭಾರತೀಯ ಸೇನೆಯಲ್ಲಿ 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ತಮ್ಮ ಇಬ್ಬರು ಮಕ್ಕಳಾದ ರಾಹುಲ್, ಮಯೂರ್ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಓರ್ವ ಮಗ ವೀರ ಮರಣಹೊಂದಿದ್ದು, ಇಡೀ ಕುಟುಂಬಕ್ಕೆ ದೊಡ್ಡ ಆಘಾತವನ್ನು ಉಂಟುಮಾಡಿದೆ.

    ರಾಹುಲ್ ಸುಳಗೇಕರ್ ಈ ಬಾರಿ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ತಾಯಿ 4 ದಿನಗಳ ಹಿಂದೆ ಸಿಹಿ ತಿನಿಸು ತಯಾರಿಸಿ ಮಗನಿಗಾಗಿ ಇಟ್ಟಿದ್ದರು. ಆದರೆ ಈ ತಿಂಡಿ ಆತನ ಕೈ ಸೇರುವ ಮೊದಲೇ ತಾಯಿಗೆ ಮಗನ ಸಾವಿನ ಕಹಿ ಸುದ್ದಿ ಸಿಕ್ಕಿದೆ.

  • ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    – ಗ್ರಾಮ ತೊರೆಯುತ್ತಿರುವ ಜನರು

    ಬೆಳಗಾವಿ: ಒಂದೇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಬಂದಿರುವ ಕಾರಣ ಸೊಳ್ಳೆಗಳ ಕಾಟಕ್ಕೆ ಜನರು ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಬಂದಿದ್ದು, ಜನರು ಗ್ರಾಮವನ್ನು ತೊರೆಯುತ್ತಿದ್ದಾರೆ. ಜನ ಗ್ರಾಮ ಬಿಟ್ಟು ಹೋಗುತ್ತಿದ್ದರು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಈ ಗ್ರಾಮದಲ್ಲಿ ಹೆಚ್ಚು ಬಡಕುಟುಂಬಗಳೇ ವಾಸವಿದ್ದು, ಡೆಂಗ್ಯೂ ರೋಗದಿಂದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲಾಗದೇ ಪರದಾಡುತ್ತಿದ್ದಾರೆ. ಡೆಂಗ್ಯೂ ಎಂದು ಖಚಿತ ವರದಿ ಬಂದರೂ ಅಲ್ಲಗಳೆಯುತ್ತಿರುವ ತಾಲೂಕು ವೈದ್ಯಾಧಿಕಾರಿಗಳು, ಡೆಂಗ್ಯೂ ಅಂಕಿ ಅಂಶಗಳ ದಾಖಲೆಯಲ್ಲಿ ವಿಫಲರಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಅಸಡ್ಡೆ ನೋಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅಧ್ಯಕ್ಷಗಾದಿಗಾಗಿ ಪುರಸಭೆ ಸದಸ್ಯೆ ಕಿಡ್ನಾಪ್

    ಅಧ್ಯಕ್ಷಗಾದಿಗಾಗಿ ಪುರಸಭೆ ಸದಸ್ಯೆ ಕಿಡ್ನಾಪ್

    ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಅಪಹರಣಕ್ಕೊಳಗಾದ ಮಹಿಳೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಶಿವಾನಂದ್ ಗೋಕಾಕ್ ಎಂಬವರು ನಮ್ಮ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಭಾಗವ್ವ ಅವರ ಪುತ್ರ ಅಪ್ಪಾಸಾಬ ಶೇಗುಣಸಿ ಆರೋಪಿಸಿದ್ದಾರೆ. ಭಾಗವ್ವನ ಕುಟುಂಬಸ್ಥರೆಲ್ಲ ಶಿವಾನಂದ್ ಅವರ ಮನೆಮುಂದೆ ಧರಣಿ ಕುಳಿತಿದ್ದಾರೆ.

    ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಮತ್ತು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ್ ಗೋಕಾಕ್ ಇಬ್ಬರೂ ಬಿಜೆಪಿ ಪಕ್ಷ ಸದಸ್ಯರೇ ಆಗಿದ್ದಾರೆ. ಭಾಗವ್ವ ಶೇಗುಣಸಿ ಕಾಂಗ್ರೆಸ್ ಪರ ಮತ ಚಲಾಯಿಸುವ ಒಲವು ತೋರಿದ್ದಾರೆ ಎಂದು ಅನುಮಾನ ಪಟ್ಟು ಶಿವಾನಂದ್ ಗೋಕಾಕ್ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಈಗ ಸದ್ಯ ಶಿವಾನಂದ್ ಗೋಕಾಕ್ ಅವರ ಮನೆ ಮುಂದೆ ನಮ್ಮ ತಾಯಿಯನ್ನ ಮರಳಿ ತನ್ನಿ ಎಂದು ಭಾಗವ್ವನ ಕುಟುಂಬಸ್ಥರ ಧರಣಿ ಮಾಡುತ್ತಿದ್ದಾರೆ.

  • ಆ ನಾಯಿಗಳನ್ನ ಓಡಿಸಬೇಕಲ್ಲಾ, ನೀನು ಆ ನಾಯಿಗಳನ್ನ ಓಡಿಸಬೇಕು – ಮಹಿಳೆಯ ಜೊತೆ ಸತೀಶ್ ಮಾತು

    ಆ ನಾಯಿಗಳನ್ನ ಓಡಿಸಬೇಕಲ್ಲಾ, ನೀನು ಆ ನಾಯಿಗಳನ್ನ ಓಡಿಸಬೇಕು – ಮಹಿಳೆಯ ಜೊತೆ ಸತೀಶ್ ಮಾತು

    ಬೆಳಗಾವಿ: ಆ ನಾಯಿಗಳನ್ನು ನೀವು ಓಡಿಸಬೇಕಲ್ಲಾ, ಕಲ್ಲು ತಗೋಂಡು ಅಂತಹ ನಾಯಿಗಳನ್ನು ಓಡಿಸಿದರೆ ನಾವು ಗಟ್ಟಿಯಾಗುತ್ತೇವೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ದಬ್ಬಾಳಿಕೆ ವಿರುದ್ಧ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ.

    ಗೋಕಾಕ್ ತಾಲೂಕಿನ ಪಾಮಲದಿನ್ನಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬಳಿ ಸ್ಥಳೀಯ ಮಹಿಳೆ ಕಮಲವ್ವಾ ನಿರ್ವಾಣಿ ಅಳಲು ತೊಡಗಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಅಳಲು ತೊಡಿಕೊಳ್ಳಲು ಹೋದರೆ ಬೆಂಬಲಿಗರು ಹುಚ್ಚು ನಾಯಿಗೆ ಕಲ್ಲು ಎಸೆದಂತೆ ನಡೆಯಿರಿ ಎಂದು ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ರಮೇಶ್ ಬೆಂಬಲಿಗರಿಂದಾಗಿ ಗೋಕಾಕ್ ಕ್ಷೇತ್ರದಲ್ಲಿ ಬಡವರಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕಮಲವ್ವಾ ಹೇಳಿದ್ದಕ್ಕೆ, ಇಂತಹ ನಾಯಿಗಳನ್ನು ಕಲ್ಲಿನಲ್ಲಿ ಹೊಡೆದು ಓಡಿಸಬೇಕು ಎಂದು ಹೇಳುವ ಮೂಲಕ ರಮೇಶ್ ಅಳಿಯ ಅಂಬಿರಾವ್ ಮತ್ತು ಬೆಂಬಲಿಗರನ್ನು ಸತೀಶ್ ಜಾರಕಿಹೊಳಿ ನಾಯಿಗೆ ಹೋಲಿಸಿದ್ದಾರೆ.

    ನಾವು ಮನವಿ ಮಾಡಿದರೂ ಅವರು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದಾರೆ ಎಂದು ಕಮಲವ್ವಾ ಆರೋಪಿಸಿದ್ದಾರೆ. ಇದಕ್ಕೆ ಗ್ರಾಮಸ್ಥರೊಬ್ಬರು ಪ್ರತಿಕ್ರಿಯಿಸಿ, ಜೆಸಿಬಿಯಿಂದ ಕೇವಲ ಐದು ತಾಸು ಕೆಲಸ ಮಾಡಿ ಹೋಗಿದ್ದಾರೆ. ಹೀಗಾಗಿ ನಾವೇ ಸೇರಿ ಸೇತುವೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ವೃದ್ಧ ಮಹಿಳೆ ಅವರ ಬಳಿ ಏನೇ ಸಮಸ್ಯೆ ಕೇಳಿದಾಗ ದುಡ್ಡು ಮಾತ್ರ ತಗೊಂಡು ವೋಟ್ ಹಾಕಿಲ್ಲ ಎಂದು ಹೇಳುತ್ತಾರೆ. ನಾವು ಏನೇ ಕೇಳಲು ಹೋದರೂ ಹುಚ್ಚು ನಾಯಿ ಓಡಿಸಿದಂತೆ ಓಡಿಸುತ್ತಾರೆ. ಬಡವರಿಗೆ ಏನೋ ಕಿಮ್ಮತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯ ಪ್ರವೇಶಿಸಿ, ಆ ನಾಯಿಗಳನ್ನು ಓಡಿಸಬೇಕಲ್ಲ, ಅವುಗಳನ್ನು ಓಡಿಸಿದರೆ ನಾವು ಗಟ್ಟಿ ಆಗುತ್ತೇವೆ ಎಂದಾಗ ಕಮಲವ್ವಾ ಪ್ರತಿಕ್ರಿಯಿಸಿ, ನಾವು ಗಟ್ಟಿ ಇದ್ದೇವೆ ನಾಯಿಗಳನ್ನು ಓಡಿಸುತ್ತೇವೆ. ಅದಕ್ಕೆ ನಾವು ಗಟ್ಟಿ ಅದೀವಿ. ನೀವು ಏನೂ ವಿಚಾರ ಮಾಡಬೇಡಿ ಎಂದು ಹೇಳಿದ್ದಾರೆ.

    ಇಪ್ಪತ್ತು ವರ್ಷದಿಂದ ಗ್ರಾಮಕ್ಕೆ ರಸ್ತೆ, ಸೇತುವೆ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಅರ್ಧಂಬರ್ಧ ಕೆಲಸ ಮಾಡಿ ಅದರ ಹೆಸರ ಮೇಲೆ ಸಾಕಷ್ಟು ಹಣ ಪಡೆದುಕೊಂಡಿದ್ದಾರೆ. ಕೆಲಸ ಅರ್ಧ ಆಗಿದ್ದಕ್ಕೆ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಗ್ರಾಮಸ್ಥರೆಲ್ಲರೂ ಸೇರಿ ಹಣ ಹಾಕಿ ರಸ್ತೆ ಮಾಡಿಕೊಂಡಿದ್ದೇವೆ ಮಹಿಳೆ ಆರೋಪಿಸಿದ್ದಾರೆ.

    ಏನಾದರೂ ಕೇಳಿದರೆ ನೀವು ಹಾಗೆ ಮತ ಹಾಕಿಲ್ಲ ದುಡ್ಡು ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಬಡವರಿಗೆ ಮನೆ ಕಟ್ಟಿಕೊಡಲು ಇಪ್ಪತ್ತೈದು ಸಾವಿರ ಲಂಚ ಪಡೆಯುತ್ತಾರೆ. ನಾನು ಆಸ್ಪತ್ರೆಯಲ್ಲಿದ್ದರೂ ನನ್ನ ಬಳಿ ಬಂದು ಶಾಸಕರ ಬೆಂಬಲಿಗರು ಹಣ ಕೇಳಿದ್ದರು. ಆಸ್ಪತ್ರೆಯಲ್ಲೇ ಅವರಿಗೆ ದಬಾಯಿಸಿ ಕಳುಹಿಸಿದ್ದೆ. ನಾನು ಇಂದಿಗೂ ತಾಡಪಲ್ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ನೀನೇ ಲೀಡ್ ತೆಗೆದುಕೊಂಡು ಗಟ್ಟಿಯಾಗಿ ನಿಲ್ಲು. ನಿಮ್ಮ ಜೊತೆಗೆ ನಾನಿರುತ್ತೇನೆ. ನಿಮಗೆ ಏನು ಬೇಕು ನಾನು ಮಾಡಿಕೊಡುತ್ತೇನೆ ಎಂದು ಮಹಿಳೆ ಕಮಲವ್ವಗೆ ಅಭಯ ನೀಡಿದ್ದಾರೆ.

    ಹರಿಯುವ ಹಳ್ಳದ ನೀರಿನಲ್ಲೇ ನಿಂತು ಮಹಿಳೆ ಅಳಲು ತೊಡಿಕೊಂಡಿದ್ದು, ಹಳ್ಳದ ದಂಡೆಯಲ್ಲಿನ ಕಲ್ಲಿನ ಮೇಲೆ ಕುಳಿತು ಸತೀಶ್ ಜಾರಕಿಹೊಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಾರೆ. ಕಮಲವ್ವ ಅಳಲು ತೊಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.