Tag: belaku

  • ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

    ಧಾರವಾಡ: ಅಂಧನಾದರೂ ಮನೆಯಲ್ಲಿ ಪತ್ನಿ ಹಾಗೂ ಮಗುವಿಗೆ ಸಾಕಲು ಸಾಕಷ್ಟು ಪರದಾಟ ನಡೆಸಿದವರು. ಕಣ್ಣಿದ್ರೆ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು ಎಂದು ಚಿಂತೆ ಕಾಡುತ್ತಿದೆ. ಸದ್ಯ ಆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಆ ವ್ಯಕ್ತಿ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

    35 ವರ್ಷದ ಶಿವಪ್ಪ ಆನಿ 11ನೇ ವಯಸ್ಸಿನಲ್ಲಿ ಎಮ್ಮೆ ಮೇಯಿಸಲು ಹೋಗಿ ಬಿರು ಬಿಸಿಲಿನ ಹೊಡೆತಕ್ಕೆ ಕಣ್ಣು ಕಳೆದುಕೊಂಡ ದುರ್ದೈವಿ. ಶಿವಪ್ಪ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗರುಡಹೊನ್ನಳ್ಳಿ ಗ್ರಾಮದ ನಿವಾಸಿ. ಸದ್ಯ ಮಾಡುವ ಕೆಲಸವನ್ನು ಕಳೆದುಕೊಂಡ ಶಿವಪ್ಪ ದಿಕ್ಕು ತೋಚದಂತಾಗಿದೆ. ಆದ್ರೆ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಧಾರವಾಗಿದ್ದಾರೆ.

    ಮನೆಯವರು ಪುಟ್ಟರಾಜು ಗವಾಯಿಗಳ ಸಂಗೀತ ಶಾಲೆಗೆ ಕಳುಹಿಸಿದ್ದರು. ಆದರೆ ಸಂಗೀತದ ವಿದ್ಯೆ ಇವರಿಗೆ ತಲೆಗೆ ಹತ್ತಲಿಲ್ಲ. ಧೃತಿಗೆಡದ ಶಿವಪ್ಪ ಆನಿ ಕುರ್ಚಿಗೆ ವಾಯರ್ ಹೆಣೆಯುವ ಕೆಲಸ ಕಲಿತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕರ ಸೀಟ್ ಹೆಣೆಯುತ್ತ ಜೀವನ ಸಾಗಿಸುತ್ತಿದ್ದರು. 5 ವರ್ಷದ ಹಿಂದೆ ಮನೆಯವರು ಸೇರಿ ವಿವಾಹವನ್ನು ಮಾಡಿದ್ರು ಜೀವನವೂ ಸುಖಕರವಾಗಿತ್ತು.

    ಸಾರಿಗೆ ಸಂಸ್ಥೆಯ ಚಾಲಕರಿಗೆ ವಾಯರ್ ರಹಿತ ಸೀಟು ತಯಾರಾಗಿದ್ದು, ವಾಯರ್ ಹೆಣೆಯುವ ಕಾಯಕಕ್ಕೆ ಕತ್ತರಿ ಬಿದ್ದಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಶಿವಪ್ಪರ ಪತ್ನಿ ಗಂಗವ್ವ ಬಟ್ಟೆ ಹೊಲಿಗೆ ಕೆಲಸ ಕಲಿತ್ತಿದ್ದು ಅನ್ಯರಿಂದ ಹೊಲಿಗೆ ಯಂತ್ರವನ್ನು ಪಡೆದು ಅಷ್ಟಿಷ್ಟು ಮನೆಗೆ ಬರುವ ಬಟ್ಟೆಗಳನ್ನ ಹೊಲೆದು ಜೀವನ ನಡೆಸುತ್ತಿದ್ದಾರೆ.

    ಪತ್ನಿಯ ಪರಿಶ್ರಮವನ್ನು ಕಂಡು ಶಿವಪ್ಪ ಪತ್ನಿಯ ಕೆಲಸಕ್ಕೆ, ಮಗುವಿನ ವಿದ್ಯಾಭ್ಯಾಸ ಹಾಗೂ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಲ್ಲಬೇಕೆಂದು ಸ್ವಾಭಿಮಾನದಿಂದ ಬದುಕುವ ಛಲ ತೊಟ್ಟಿದ್ದಾರೆ. ಸ್ವಂತ ಹೊಲಿಗೆ ಯಂತ್ರ ಇದ್ರೆ ಬಟ್ಟೆ ಹೊಲೆದು ಜೀವನ ನಡೆಸಲು ಅನುಕೂಲವಾಗುತ್ತೆ. ಯಾರಾದ್ರೂ ದಾನಿಗಳು ಟೈಲರಿಂಗ್ ಮಿಷಿನ್ ದಾನ ಮಾಡಿದ್ರೆ ನೆಮ್ಮದಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

    https://www.youtube.com/watch?v=H3jwMMgjcMY

  • ನಶಿಸುತ್ತಿರುವ ಕೆರೆ ರಕ್ಷಿಸಲು ‘ಬೆಳಕು’ ಕಾರ್ಯಕ್ರಮಕ್ಕೆ ಬಂದ ಗ್ರಾಮಸ್ಥರು

    ನಶಿಸುತ್ತಿರುವ ಕೆರೆ ರಕ್ಷಿಸಲು ‘ಬೆಳಕು’ ಕಾರ್ಯಕ್ರಮಕ್ಕೆ ಬಂದ ಗ್ರಾಮಸ್ಥರು

    ಕೋಲಾರ: ಸರ್ಕಾರ ಕೆರೆಗಳ ಅಭಿವದ್ಧಿಗೆಂದು ನೂರಾರು ಕೋಟಿ ವ್ಯಯ ಮಾಡುತ್ತಿದೆ. ಆದರೆ ಕೆಲವು ಕೆರೆಗಳು ಮಾತ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ಒತ್ತುವರಿಯಿಂದ ನಶಿಸಿಸುತ್ತಿವೆ. ಇದಕ್ಕೆ ಸಾಕ್ಷಿ ಕೋಲಾರ ತಾಲೂಕು ಹೋಳೂರು ಗ್ರಾಮದ ಐತಿಹಾಸಿಕ ಕೆರೆ.

    ನೂರಾರು ವರ್ಷಗಳ ಇತಿಹಾಸ ಇರುವ ಈ ವಿಶಾಲವಾದ ಕೆರೆ ಬರೋಬ್ಬರಿ 350 ಎಕರೆ ವಿಸ್ತೀರ್ಣವನ್ನು ಹೊಂದಿದೆ. ರೈತರ ವ್ಯವಸಾಯಕ್ಕೆ, ಜಾನವಾರುಗಳಿಗೆ ಅನುಕೂಲವಾಗಲೆಂದು ಸರ್ಕಾರವು ಬೃಹತ್ತಾದ ಕೆರೆ ನಿರ್ಮಾಣಕ್ಕೆ 80 ವರ್ಷಗಳ ಹಿಂದೆ ಭೂಸ್ವಾಧೀನ ಪಡಿಸಿಕೊಂಡು ವಾರಸುದಾರರಿಗೆ ಪರಿಹಾರ ಮೊತ್ತವನ್ನು ನೀಡಿ ಕೆರೆ ನಿರ್ಮಾಣ ಮಾಡಲಾಗಿದೆ.

    ಗ್ರಾಮದ ದೊಡ್ಡಕೆರೆಯ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರುಪಾಯಿ ಅನುದಾನವನ್ನ ಖರ್ಚು ಮಾಡಿದೆ. ಕಳೆದ 20 ವರ್ಷಗಳಿಂದಲೂ ಹೋಳೂರು ಕೆರೆಯ ಅಂಗಳದಲ್ಲಿ ಗಿಡ-ಮರಗಳನ್ನು ಸಾಮಾಜಿಕ ಅರಣ್ಯ ಇಲಾಖೆ ನೆಟ್ಟು ಪೋಷಣೆ ಮಾಡುತ್ತಿದೆ. ಕೆರೆ ಕಟ್ಟೆಯ ಪುನಶ್ಚೇತನಕ್ಕಾಗಿ ಸಣ್ಣ ನೀರಾವರಿ ಇಲಾಖೆಯು 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ.

    ವಿಪರ್ಯಾಸ ಅಂದರೆ ಈ ಕೆರೆಯು ಸರ್ಕಾರದ್ದು ಅನ್ನೋದಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಾಗಲೀ, ಸಣ್ಣ ನೀರಾವರಿ ಇಲಾಖೆಯಲ್ಲಾಗಲೀ, ಜಿಲ್ಲಾಡಳಿತದ ಬಳಿಯಾಗಲಿ ದಾಖಲೆ ಇಲ್ಲ. ಜಮೀನು ಕೊಟ್ಟ ರೈತರ ಹೆಸರಲ್ಲೆ ಪಹಣಿ ದಾಖಲಾತಿಗಳಿದ್ದು ಈ ಹಳೇ ದಾಖಲಾತಿಗಳಿಂದ ರೈತರು, ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಸ್ಥರು ಕೆರೆ ಜಾಗವನ್ನ ಕಬಳಿಸುತ್ತಿದ್ದಾರೆ.

    ಜಿಲ್ಲಾಡಳಿತ ಪ್ರಭಾವಿಗಳಿಗೆ ಮಣಿದು ಕಂಡು ಕಾಣದಂತೆ ಪರೋಕ್ಷವಾಗಿ ಕೆರೆಯನ್ನು ರಿಯಲ್ ಎಸ್ಟೇಟ್ ಉದ್ಯಮಸ್ಥರ ಪಾಲಾಗಲು ಸಹಕರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಕ್ಷರಶಃ ಬೃಹತ್ತಾದ ಕೆರೆಯು ನಶಿಸಿ ಒಂದು ಸಣ್ಣ ಕೆರೆಯಾಗಿ ಮಳೆ ನೀರು ಹರಿಯದಂತೆ ನೀರು ತುಂಬದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಅನಾನುಕೂಲ ಹೆಚ್ಚಾಗಿದೆ.

    ನೂರಾರು ವರ್ಷಗಳಿದಂಲೂ ಅಸ್ತಿತ್ವದಲ್ಲಿರುವ ಕೆರೆಗೆ ಸೂಕ್ತ ದಾಖಲೆಗಳನ್ನ ಒದಗಿಸಲು ವಿಫಲವಾಗಿರುವ ಕಂದಾಯ ಇಲಾಖೆಯ ಗೊಂದಲ ನಿವಾರಣೆ ಮಾಡಿ, ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=h1WR3OenCLk

  • ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಬೆಂಗಳೂರು: ಮಗಳಿಗೆ ಇರುವ ಆರೋಗ್ಯ ಸಮಸ್ಯೆಯಿಂದಾಗಿ ತಾಯಿ ಕಣ್ಣೀರು ಹಾಕುತ್ತಲೇ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಈ ಕುಟುಂಬವು ನಗರದ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲಗೇಟ್‍ನಲ್ಲಿ ವಾಸವಾಗಿದೆ.

    13 ವರ್ಷದ ಜ್ಯೋತಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಜ್ಯೋತಿಗೆ ತಂದೆ ಇಲ್ಲ, ತಾಯಿ ಸೆಲ್ವಮ್ಮ ಮಾತ್ರ ಇರುವುದು. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ, ಆಟ ಆಡಿ, ಪಾಠ ಕಲಿಯುವ ಆಸೆ. ಆದರೆ ಈಕೆಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿದೆ. ಹೀಗಾಗಿ ಉಸಿರಾಟದ ತೊಂದರೆಯಿದ್ದು ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.

    ಮನೆಯಲ್ಲಿ ಕಡುಬಡತನವಿದ್ದು, ತಾಯಿ ಸೆಲ್ವಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ವಯಸ್ಸಾದ ತಂದೆ ತಾಯಿಯನ್ನು ಸಾಕುತ್ತಿದ್ದಾರೆ. ಜ್ಯೋತಿ ಹೃದಯದಲ್ಲಿ ರಂಧ್ರವಿರುವುದು ಗೊತ್ತಾಗಿನಿಂದ ನಿತ್ಯವೂ ಕಣ್ಣೀರಲ್ಲೆ ಕಾಲ ಕಳೆಯುತ್ತಿದ್ದಾರೆ.

    ಬಾಲಕಿ ಜ್ಯೋತಿಯ ಹೃದಯದಲ್ಲಿ ರಂಧ್ರವಿರುವುದಕ್ಕೆ ಚನ್ನೈ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಮೇಲೂ ಮಗಳು ಉಳಿಯುತ್ತಾಳೆ ಅಂತಾ ಹೇಳಲಿಕ್ಕೆ ಆಗುವುದಿಲ್ಲ. ಅಲ್ಲದೆ ದುಬಾರಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಇದರಿಂದ ಭಯಗೊಂಡ ತಾಯಿ ಸೆಲ್ವಮ್ಮ ಅವರು ಸರಿಯಾದ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮರುಗುತ್ತಿದ್ದಾರೆ.

    “ಅಮ್ಮ ನಾನು ಬದುಕಬೇಕು. ಓದಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು” ಎಂದು ಬಾಲಕಿ ಜ್ಯೋತಿ ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿದೆ. ಆದಾಗಿ ನೊಂದ ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೋಡಿ ನನ್ನ ಮಗಳಿಗೆ ಚಿಕಿತ್ಸೆ ಕೊಡಿಸಿ ಅಂತಾ ಅಳಲು ತೊಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=pkzEJsH8wgU

  • ಅಜ್ಜ-ಅಜ್ಜಿಯ ಆಸರೆಯಲ್ಲಿರುವ ವಿದ್ಯಾಳ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು

    ಅಜ್ಜ-ಅಜ್ಜಿಯ ಆಸರೆಯಲ್ಲಿರುವ ವಿದ್ಯಾಳ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು

    ಹಾವೇರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಜೊತೆಗೆ ಕೈಲಾಗದಿರುವ ವಯಸ್ಸಾದ ದಂಪತಿ. ತಂದೆ ತಾಯಿಯನ್ನು ಕಳೆದುಕೊಂಡ ಈ ಅನಾಥ ಮಕ್ಕಳಿಗೆ ಈಗ ಅಜ್ಜ-ಅಜ್ಜಿಯೇ ಆಸರೆ. ಹೌದು ಇದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕರೂರು ಗ್ರಾಮದ ಕರುಣಾಜನಕ ಕಥೆ.

    ವಿದ್ಯಾ ಮತ್ತು ವಿಜಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ನತದೃಷ್ಠರು. ಆದರೆ ಇವರನ್ನು ಅನಾಥರನ್ನಾಗಿಸದೇ ಈ ಅಜ್ಜಸ-ಅಜ್ಜಿ ಸಾಕಿ ಸಲುಹಿದ್ದಾರೆ. ವಿದ್ಯೆ ಬುದ್ಧಿಯನ್ನೂ ಕಲಿಸಿದ್ದಾರೆ. ವಿದ್ಯಾ ಮತ್ತು ವಿಜಯ್‍ಗೆ ಶಿಕ್ಷಣ ಕೊಡಿಸುವಲ್ಲಿ ಅಜ್ಜ ಕಾಂತಪ್ಪ, ಅಜ್ಜಿ ಗಿರಿಜಮ್ಮನ ಅವಿರತ ಪರಿಶ್ರಮ ಇದೆ. ಇದರ ಪರಿಣಾಮವಾಗಿ ವಿದ್ಯಾ ಎಸ್‍ಎಸ್‍ಎಲ್‍ಸಿಯಲ್ಲಿ 66%, ಪಿಯುಸಿಯಲ್ಲಿ 86% ಹಾಗೂ ಬಿಎ ಪದವಿಯಲ್ಲಿ 80% ಅಂಕ ಪಡೆದಿರುವ ಪ್ರತಿಭಾವಂತೆ.

    ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಅಜ್ಜ-ಅಜ್ಜಿ ಆಸರೆಯಾಗಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ವಿದ್ಯಾ ಹಾಗೂ ವಿಜಯ್ ಗೆ ಶಿಕ್ಷಣ ಕೊಡಿಸಿದ್ದಾರೆ. ಈಗ ಅಜ್ಜ-ಅಜ್ಜಿಗೆ ವಯಸ್ಸಾಗಿದೆ. ವಿಜಯ್ ಹೆಸ್ಕಾಂ ಕಚೇರಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಮನೆಯನ್ನು ನಡೆಸುತ್ತಿದ್ದಾನೆ. ಆದರೆ ವಿದ್ಯಾ ಎಂಎ, ಬಿಎಡ್ ಓದಿ ಶಿಕ್ಷಕಿಯಾಗಬೇಕೆಂಬ ಕನಸು ಕಂಡಿದ್ದಾಳೆ. ಆದ್ರೆ ಬಡ ಪ್ರತಿಭಾವಂತೆಗೆ ಮುಂದೆ ಓದುವ ಆಸೆಗೆ ಬಡತನ ಅಡ್ಡಿಯಾಗಿದೆ.

    ಬಡತನದಲ್ಲಿಯೂ ವಿದ್ಯೆಯ ಮಹತ್ವನ್ನು ಅರಿತಿರುವ ವಿದ್ಯಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತನ್ನ ವಿದ್ಯಾಭ್ಯಾಸ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಯಾರಾದ್ರೂ ದಾನಿಗಳು ಬಡ ಪ್ರತಿಭಾವಂತೆಗೆ ಸಹಾಯ ಮಾಡುತ್ತಾರೆಂಬ ವಿಶ್ವಾಸ ನಮ್ಮದು.

    https://www.youtube.com/watch?v=hKfGWTvhXcE

  • ಶೌಚಾಲಯವಿಲ್ಲದೇ ಕಾಲೇಜು ಸೇರಲು ಹಿಂದೇಟು ಹಾಕ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಸಿಕ್ತು ಮುಕ್ತಿ

    ಶೌಚಾಲಯವಿಲ್ಲದೇ ಕಾಲೇಜು ಸೇರಲು ಹಿಂದೇಟು ಹಾಕ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಸಿಕ್ತು ಮುಕ್ತಿ

    ಯಾದಗಿರಿ: ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶವನ್ನು ಪಡೆಯುದಕ್ಕೆ ಹಿಂದೇಟು ಹಾಕುತ್ತಿದ್ದರು. ಮನೆಯಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರೆ ಶೌಚಾಲವಿಲ್ಲದೆ ಪರಿತಪ್ಪಿಸುವಂತಾಗಿತ್ತು. ಬೆಳಕು ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಕಾಲೇಜಿನ ವ್ಯವಸ್ಥೆ ಬಗ್ಗೆ ಸ್ವವಿಸ್ತಾರವಾಗಿ ವರದಿ ಬಿತ್ತರಿಸಿದ ಬಳಿಕ ಈಗ ಯಾದಗಿರಿ ಜಿಲ್ಲೆಯಲ್ಲಿರುವ ಗ್ರಾಮೀಣ ಭಾಗದ ಶಾಲಾ, ಕಾಲೇಜುಗಳಲ್ಲಿ ಜಿಲ್ಲಾಧಿಕರಿಗಳಿಗೆ ಬೆಳಕು ಚೆಲ್ಲಿದ್ದಾರೆ.

    ಯಾದಗಿರಿ ತಾಲೂಕಿನ ಯರಗೋಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗಿದ್ದರು. ವಿದ್ಯಾರ್ಥಿನಿಯರು ಶಿಕ್ಷಣವೇ ಬೇಡವೆಂದು ಕಾಲೇಜು ಬಿಡಲು ಮುಂದಾಗಿದ್ದರು. ಗ್ರಾಮೀಣ ವಿದ್ಯಾರ್ಥಿನಿಯರು ಶೌಚಾಲಯ ಸಮಸ್ಯೆಯನ್ನು ಬೆಳಕು ಕಾರ್ಯಕ್ರಮದ ಮೂಲಕ ಬಗೆಹರಿಸುವಂತೆ ಆಳಲು ತೋಡಿಕೊಂಡಿದ್ದರು. ಈ ವೇಳೆ ಬೆಳಕು ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಮಂಜುನಾಥ್ ಜೆ ಅವರೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿತ್ತು.

    ಪಬ್ಲಿಕ್ ಟಿವಿ ವರದಿಗೆ ಜಿಲ್ಲಾಧಿಕಾರಿ ಮಂಜುನಾಥ ಅವರು ತಕ್ಷಣವೇ ಸ್ಪಂದಿಸಿ ನಿರ್ಮಿತಿ ಕೇಂದ್ರ ಅನುದಾನ ಮೂಲಕ ಅಗತ್ಯ ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಕಾಲೇಜು ಬಿಡುವ ಯೋಚನೆಯಿಂದ ದೂರ ಉಳಿದು ವಿದ್ಯಾರ್ಥಿಗಳು ಸಂತಸ ಗೊಂಡಿದ್ದಾರೆ.

    ವಿಶೇಷ ಅಂದರೆ ಬೆಳಕು ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಮಂಜುನಾಥ್ ಎಚ್ಚೆತ್ತು ಕಾಲೇಜುಗಳಲ್ಲಿ ಶೌಚಾಲಯ ಇಲ್ಲದ ಅನೇಕ ಶಾಲಾ-ಕಾಲೇಜುಗಳಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ಅಂತರಿಕ್ಸ ಕಾಪ್ರೋಷನ್ ಸಂಸ್ಥೆಗೆ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಯಶಸ್ವಿಯಾಗಿದ್ದಾರೆ.

    ಯಾದಗಿರಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ 187 ಶೌಚಾಲಯ, 206 ವಿದ್ಯಾರ್ಥಿನಿಯರ ಶೌಚಾಲಯ ಹಾಗೂ 76 ಕೋಣೆಗಳು ಹಾಗೂ ಅದರ ಜೊತೆ ಆಸ್ಪತ್ರೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿರೋದು ನಿಜಕ್ಕೂ ಬೆಳಕು ಕಾರ್ಯಕ್ರಮದ ನಿಸ್ವಾರ್ಥ ಸೇವೆಗೆ ತಂದ ಫಲ ಎಂದು ಹೇಳಲು ಹರ್ಷಿಸುತ್ತೇವೆ. ಸ್ವಾರ್ಥ ರಹಿತ ಪ್ರಯತ್ನಕ್ಕೆ ಅಂದು ಕೊಂಡದ್ದಕ್ಕಿಂತ ಹೆಚ್ಚು ಫಲ ಸಿಗುತ್ತೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ. ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರ ಕಾರ್ಯ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ.

    https://www.youtube.com/watch?v=e4iAa8QmMvs

  • ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಹಾಸನ: ಕುಡಿತದ ಚಟಕ್ಕೆ ಬಿದ್ದವರು ಮನ, ಮನೆಯನ್ನು ಮಾರಿಕೊಳ್ಳುವರು ಎಂಬ ಮಾತಿದೆ. ಆ ಮಾತಿಗೆ ಪೂರಕವಂತೆ ಈ ವರದಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಹೌದು ಹಾಸನ ಜಲ್ಲೆ ಶೆಟ್ಟಿ ಹಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವೃದ್ಧೆಯ ಕರುಣಾಜನಕ ಕಥೆ ಇದು.

    ಹಾಸನದ ನಿವಾಸಿಯಾಗಿರುವ ಜಯಲಕ್ಷ್ಮಮ್ಮ ಆಸ್ತಿ ಪಾಸ್ತಿ ಹೊಂದಿದ್ದ ಐಶ್ವರ್ಯವಂತ, ಗಂಡ ಮತ್ತು ಮಗನೊಂದಿಗೆ ಸುಖ ಸಂಸಾರದ ಜೀವನ ನಡೆಸುತ್ತಿದ್ದರು. ಗಂಡ ತೀರಿಹೋದ ನಂತರ ಮಗನಿಗೆ ಆಸರೆಯಾಗಿದ್ದರು. ಮಗನಿಗೆ ಮದುವೆ ಮಾಡಿ ಮಗ ಮತ್ತು ಸೊಸೆ, ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ಮಗ ನವೀನ್ ಬರೋಬ್ಬರಿ 40 ಆಟೋಗಳ ಮಾಲೀಕನಾಗಿದ್ದ. ಆದರೆ ಕುಡಿತದ ಚಟಕ್ಕೆ ಬಿದ್ದು ಆಸ್ತಿ ಮನೆಯನ್ನು ಮಾರಿಬಿಟ್ಟ. ಮಗನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ಬೆಂಗಳೂರಿನಲ್ಲಿ ರೈಲಿಗೆ ತಲೆಕೊಟ್ಟಿದ್ದಾರೆ.

    ಆದರೆ ಮಗ ಎರಡನೇ ಮದ್ವೆಯಾಗಿ ವೃದ್ಧೆ ತಾಯಿಯ ತಾಳಿಯನ್ನು ಕಸಿದುಕೊಂಡು ಕುಡಿತಕ್ಕೆ ಮಾರಿಕೊಂಡು ಬಳಿಕ ಸ್ವತಃ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಗನ ಸಾವನ್ನು ಕಂಡು ವೃದ್ಧೆ ಜಯಲಕ್ಷ್ಮಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕೆಲದಿನಗಳ ಕಾಲ ಕೋಮಾದಲ್ಲಿದ್ದು ಮರಳಿ ಪ್ರಜ್ಞೆ ಪಡೆದುಕೊಂಡಿದ್ದಾರೆ. ಮಗನ ಎರಡನೇ ಪತ್ನಿ ಮನೆಯೂ ಸಹ ತವರು ಸೇರಿದ್ದು, ಸದ್ಯ ಅಜ್ಜಿ ಮೊಮ್ಮಗ ಇಬ್ಬರು ಬೀದಿ ಪಾಲಾಗಿದ್ದಾರೆ.

    ಸದ್ಯ ಸ್ವಂತ ಇರಲು ಮನೆ ಇಲ್ಲ, ತಿನ್ನಲೂ ಊಟ ಇಲ್ಲದ ಪರಿಸ್ಥಿತಿಯಲ್ಲಿರುವ ಅಜ್ಜಿ ಜಯಲಕ್ಷಮ್ಮ ಸ್ಥಳೀಯರ ಸಹಾಯದಿಂದ ಮೊಮ್ಮಗನಿಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. 4ನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್‍ಗೆ ಪರೀಕ್ಷಾ ಶುಲ್ಕ ಕಟ್ಟಿಲ್ಲವೆಂದು ಶಾಲೆಯವರು ಪರೀಕ್ಷೆಗೆ ಕೂರಿಸದೆ ಹೊರ ಹಾಕಿದ್ದರು. ಇದರಿಂದ ಈಗ ದಾರಿ ಕಾಣದೇ ಕಂಗಾಲಾಗಿರುವ ಅಜ್ಜಿ, ಮೊಮ್ಮಗನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿ ತಾನೂ ಕೂಡ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

    ಇಷ್ಟೆಲ್ಲ ಕಷ್ಟಗಳ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಈ ಅಜ್ಜಿ ನನಗೆ ಏನೂ ಬೇಡ ನಾನು ಅನಾಥಾಶ್ರಮದಲ್ಲಿ ಜೀವಿಸುತ್ತೇನೆ. ನನ್ನ ಮೊಮ್ಮಗ ಪ್ರಜ್ವಲ್‍ಗೆ ವಿದ್ಯಾಭ್ಯಾಸ ಕೊಡಿಸಿ ಅವನ ಭವಿಷ್ಯ ಪ್ರಜ್ವಲಿಸುವಂತೆ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

  • ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಯಾದಗಿರಿ: ನಿರ್ದಿಷ್ಟ ಸೂರಿಲ್ಲದೇ ಊರೂರು ಸುತ್ತಾಡುತ್ತ, ಯಾರಾದ್ದೋ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿ, ಚಾಪೆ ಬುಟ್ಟಿಗಳನ್ನು ಹೆಣೆಯುವ ಮೂಲಕ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ಕೆಲವು ಕುಟುಂಬಗಳು ಜೀವನ ನಡೆಸುತ್ತಿವೆ.

    ಹಂಚಿನಾಳ ಗ್ರಾಮದಲ್ಲಿ ಸುಮಾರು 66 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಮೂಲ ವೃತ್ತಿ ಈಚಲು ಮರದ ಗರಿಗಳಿಂದ ಬುಟ್ಟಿ ಚಾಪೆಗಳನ್ನು ಹೆಣೆಯುವುದು. ಹೀಗಾಗಿ ಅಲೆಮಾರಿ ಜೀವನ ನಡೆಸುತ್ತಿರುವ ಅವರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಾರೆ. ಅಲ್ಲಿ ಅಭ್ಯವಿರುವ ಖಾಲಿ ಜಾಗದಲ್ಲಿ ಒಂದಷ್ಟು ದಿನ ಶೇಡ್ ಹಾಕಿಕೊಂಡು ಚಾಪೆ, ಬುಟ್ಟಿ ತಯಾರಿಸುತ್ತಾರೆ.

    ಅಲೆಮಾರಿ ಜನಾಂಗದವರು ಸತತ ಮೂರು ವರ್ಷಗಳಿಂದ ಒಂದು ನಿರ್ದಿಷ್ಟ ಸೂರು ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಯಾದಗಿರಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿನಾಳ ಗ್ರಾಮದಲ್ಲಿ ಸರ್ವೆ ನಂಬರ್ 59ರಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಈಗ ಅಧಿಕಾರಿಗಳು ಕಾಯ್ದಿರಿಸಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

     

    ಹಂಚಿನಾಳ ಗ್ರಾಮದ ಅಲೆಮಾರಿ ಜನಾಂಗದವರು ನಿರ್ದಿಷ್ಟ ಸೂರಿನಲ್ಲಿ ವಾಸ ಮಾಡಲು ಹಪಪಿಸುತ್ತಿದ್ದಾರೆ. ನಿವೇಶನ ನಿರ್ಮಿಸಿ, ಹಕ್ಕು ಪತ್ರ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸರ್ಕರಕ್ಕೆ ಮನವಿ ಮಾಡಿದರು.

    https://youtu.be/nuAI9tfSQSQ

  • ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ದಾವಣಗೆರೆ: ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಚನ್ನಗಿರಿ ತಾಲೂಕಿನ ದೇವನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಓದುವ ಕನಸು ಕಾಣುತ್ತಿದ್ದರೂ ಬಡತನ ಅಡ್ಡಿಯಾಗಿದೆ.

    ದೇವನಹಳ್ಳಿ ಗ್ರಾಮದ ಹನುಮಂತಯ್ಯ ಹಾಗೂ ಮಂಜುಳಾಬಾಯಿಯರ ಪುತ್ರನಾಗಿರುವ ಚೇತನ್ ಬಡತನ ಎನ್ನುವ ಬೆಂಕಿಯಲ್ಲಿ ಅರಳಿದ ಪ್ರತಿಭೆಯಾಗಿದ್ದಾನೆ. ಇಡೀ ಶಾಲೆಗೆ ಓದಿನಲ್ಲಿ ಪ್ರಥಮನಾಗಿರುವ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದಾರೆ. ಅವರು ದುಡಿದರೇ ಮಾತ್ರ ಕುಟುಂಬಕ್ಕೆ ಒಂದು ತುತ್ತು ಅನ್ನ ಇಲ್ಲವಾದರೆ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ. ಆದರೆ ಓದಿ ಓಳ್ಳೆಯ ಕೆಲಸ ಪಡೆದು ತಾಯಿಯನ್ನು ಸುಖವಾಗಿ ನೋಡಿಕೊಳ್ಳುವ ಆಸೆ ಈ ಹುಡುಗನದ್ದು. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಈ ಪ್ರತಿಭಾವಂತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ.

     

    ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್, ತಾಯಿ ಮಂಜುಳಾಬಾಯಿ ಗ್ರಾಮದ ನವೋದಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ತಂದೆಗೆ ಕೆಲವು ವರ್ಷಗಳ ಹಿಂದೆ ಅಪಘಾತವಾಗಿ ಸೊಂಟ ಮುರಿದು ಹೋಗಿದೆ. ಅಂದಿನಿಂದ ತಾಯಿಯೇ ನವೋದಯ ಶಾಲೆಯಲ್ಲಿ ಕೆಲಸ ಮಾಡಿ ಬಂದ 6 ಸಾವಿರ ರೂಪಾಯಿ ಸಂಬಳದಿಂದ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಇದರ ಫಲವಾಗಿ ಮಗ ಚೇತನ್ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 94% ಅಂಕ ಪಡೆದು ಜಿಲ್ಲೆಗೆ 3ನೇ ರ‍್ಯಾಂಕ್ ತಂದು ಕೊಟ್ಟಿದ್ದಾನೆ.

    ಬಡತನದ ನಡೆಯುವೆಯೂ ಚೇತನ್ ಓದಿ ಉತ್ತಮ ಅಂಕ ಪಡೆದಿದ್ದನ್ನು ನೋಡಿ ವ್ಯಕ್ತಿಯೊಬ್ಬರು ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ಶೃಂಗೇರಿ  ಬಿಜಿಎಸ್ ಸೈನ್ಸ್ ಪಿಯು ಕಾಲೇಜಿಗೆ ಪ್ರಥಮ ಪಿಯುಸಿ ಪಿಸಿಎಂಬಿಗೆ ಅಡ್ಮಿಷನ್ ಮಾಡಿಸಿದ್ದರು. ಆದರೆ ಶುಲ್ಕ ಪಾವತಿ ಮಾಡದೇ ಕೈಕೊಟ್ಟಿದ್ದಾರೆ. ಆದಾಗಿ ತಾಯಿ ತನ್ನ ಮಾಂಗಲ್ಯ ಮಾರಿ ಶುಲ್ಕ ಪಾವತಿ ಮಾಡಿ ಓದಿಸಿದ್ದಾರೆ. ಮಗ ಚೇತನ್ ಪ್ರಥಮ ಪಿಯುಸಿ ಪಿಸಿಎಂಬಿಯಲ್ಲಿ ಶೇಕಡಾ 94% ಅಂಕ ಗಳಿಸಿದ್ದಾನೆ. ಆದರೆ ಈಗ ದ್ವಿತೀಯ ಪಿಯುಸಿಗೆ ಪ್ರವೇಶ ಶುಲ್ಕ ಭರಿಸಲಾಗದೇ ತಾಯಿ ಕಷ್ಟಕ್ಕೆ ಸಿಲುಕಿದ್ದಾರೆ.

    ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ಪೋಷಕರನ್ನು ನೋಡಿಕೊಳ್ಳಬೇಕು, ತಂಗಿಯನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಂಡಿರುವ ಚೇತನ್‍ಗೆ ಬಡತನ ಅಡ್ಡಿಯಾಗಿದೆ. ಮಗಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು ಸಹಾಯ ಮಾಡಿ ಎಂದು ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=yFZYGNtdb1o

     

  • ತನ್ನಿಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಸೆ ಹೊಂದಿರುವ ತಾಯಿಗೆ ಬೇಕಿದೆ ಸಹಾಯ

    ತನ್ನಿಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಸೆ ಹೊಂದಿರುವ ತಾಯಿಗೆ ಬೇಕಿದೆ ಸಹಾಯ

    ಹಾಸನ: ಕಳೆದ ಏಳು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿರುವ ಮಹಿಳೆಯೊಬ್ಬರು, ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ದಾರೆ.

    ಮೂಲತಃ ಮಂಗಳೂರಿನ ಪಡುಬಿದ್ರೆಯ ಮುಲ್ಕಿಯ ಪ್ರಭಾವತಿ ಅವರು ಕುಮಾರಜ್ಯೋಗೆ ಎಂಬವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಹಾಸನ ತಾಲೂಕಿನ ಬಸ್ತಿಹಳ್ಳಿ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದರು. ಆದರೆ ಕುಡಿತದ ಚಟ ಹೊಂದಿದ್ದ ಪತಿ ಕುಮಾರಜ್ಯೋಗೆ 7 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ವೇಳೆಗೆ ದಂಪತಿಗೆ ಇಬ್ಬರು ಮಕ್ಕಳಾಗಿತ್ತು. ಪತಿ ಮರಣ ನಂತರ ಇಬ್ಬರು ಚಿಕ್ಕಮಕ್ಕಳೊಂದಿಗೆ ಪ್ರಭಾವತಿ ಅವರು ದಿಕ್ಕುತೋಚದಂತಾಗಿ ಜೀವನ ನಡೆಸಿದ್ದಾರೆ.

     

    ಪತಿ ಆಕಾಲಿಕ ಮರಣದಿಂದ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತ ಇವರು, ಭಿಕ್ಷೆ ಬೇಡಿ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ. ಸದ್ಯ ಸರ್ಕಾರದಿಂದ ನೀಡಿರುವ ಒಂದು ಪುಟ್ಟ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ತನ್ನ ಮಕ್ಕಳು ನನ್ನಂತೆ ಭಿಕ್ಷಾಟನೆಗೆ ಹೋಗಬಾರದು ಎಂಬ ಕನಸು ಹೊಂದಿರುವ ಪ್ರಭಾವತಿ ಅವರು ಗುಜರಿ ಹಾಯುವ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದಾರೆ.

    ಸದ್ಯ ಪ್ರಭಾವತಿ ಅವರ ಮೊದಲ ಮಗ ಮಂಜುನಾಥ್ ಬಸ್ತಿಹಳ್ಳಿಯ ಸಮೀಪದ ಮೊಸಳೆಹೊಸಳ್ಳಿ ಗ್ರಾಮದ ಶಾಲೆಯಲ್ಲಿ 7ನೇ ತರಗತಿ ಹಾಗೂ ಮಗಳು ಕೀರ್ತಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟ ಇರುವ ಸಮಯದಲ್ಲಿ ಪ್ರಭಾವತಿ ಅವರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ತೆರಳಲು ಬಸ್ ಸೌಲಭ್ಯ ಇದ್ದರೂ ಬಸ್ ಪಾಸ್ ಪಡೆಯಲು ಇಲ್ಲದ ಕಾರಣ 5 ಕಿಮೀ ದೂರದ ಶಾಲೆಗೆ ದಿನನಿತ್ಯ ಕಷ್ಟಪಟ್ಟು ಹೋಗುತ್ತಿದ್ದಾರೆ.

    ಬಡತನದ ಕಹಿಯನ್ನ ಜೀವನದ ಆರಂಭದಲ್ಲಿಯೇ ಅರಿತಿರುವ ಮಂಜುನಾಥ್ ಹಾಗೂ ಕೀರ್ತಿ ಶಿಕ್ಷಣದಲ್ಲಿ ಮುಂದಿದ್ದಾರೆ. ಬಾಲಕಿ ಕೀರ್ತಿ ಸಣ್ಣ ವಯಸ್ಸಿನಾವಳದ ಕಾರಣ ಆಕೆಗೆ ಬಡತನದ ಸ್ಥಿತಿಯ ಅರಿವಿಲ್ಲ. ಆದರೆ ಇಬ್ಬರು ಉತ್ತಮ ಶಿಕ್ಷಣ ಪಡೆಯುವ ಕನಸು ಹೊಂದಿದ್ದಾರೆ. 9ನೇ ತರಗತಿ ಇರಬೇಕಿದ್ದ ಮಂಜುನಾಥ್ ಬಡತನದ ಕಾರಣದಿಂದ 7ನೇ ತರಗತಿ ವ್ಯಾಸಂಗ ನಡೆಸುತ್ತಿದ್ದಾನೆ. ದಿನನಿತ್ಯದ ಊಟಕ್ಕೂ ಕಷ್ಟ ಪಡುತ್ತಿರುವ ಈ ಕುಟುಂಬಕ್ಕೆ ದಾನಿಗಳು ಸಹಾಯ ಮಾಡಿ ಎಂದು ನೆರೆಹೊರೆಯವರೂ ಮನವಿ ಮಾಡಿದ್ದಾರೆ. ಪತಿ ಕಳೆದು ಕೊಂಡು ತನ್ನಿಬ್ಬರು ಮಕ್ಕಳಿಗೆ ಭಿಕ್ಷೆ ಬೇಡಿಯಾದ್ರೂ ಶಿಕ್ಷಣ ಕೊಡಿಸಬೇಕು ಎನ್ನುವ ಪ್ರಭಾವತಿ ವರಿಗೆ ಸಹಾಯದ ಅವಶ್ಯಕತೆ ಇದೆ.

    https://youtu.be/SLX5W03K18s

  • ಕಾಲು ಕಳೆದುಕೊಂಡ್ರು ಸ್ವಾಭಿಮಾನ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾದ್ರು!

    ಕಾಲು ಕಳೆದುಕೊಂಡ್ರು ಸ್ವಾಭಿಮಾನ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾದ್ರು!

    ಬೀದರ್: ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ್ರು ಸ್ವಾಭಿಮಾನದ ಜೀವನ ನಡೆಸುತ್ತಿದ್ದ ವಿಕಲಚೇತನನಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾಗಿದ್ದಾರೆ.

    ಬೀದರ್ ತಾಲೂಕಿನ ಅಯಾಸಪೂರ್ ಗ್ರಾಮ ನಿವಾಸಿ ನಾಗಪ್ಪ ಎಂಬವರು 20 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಆದ್ರೆ ಕಾಲು ಕಳೆದುಕೊಂಡರೂ ಕುಗ್ಗದ ನಾಗಪ್ಪ ನಗರದ ನೆಹರು ಕ್ರೀಡಾಂಗಣದ ಸರ್ಕಾರಿ ಮಳಿಗೆಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಹಣದಿಂದ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಾ ಜೀವನ ಸಾಗಿಸುತ್ತಿದ್ದರು.

    ಒಂದು ವರ್ಷದ ಹಿಂದೆ ಸರ್ಕಾರಿ ಅಧಿಕಾರಿಗಳು ಸ್ಟೇಡಿಯಂ ನವೀಕರಣ ಹೆಸರಿನಲ್ಲಿ ಮಳಿಗೆಯನ್ನ ಖಾಲಿ ಮಾಡಿಸಿ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ. ಕಾಲು ಕಳೆದುಕೊಂಡಿದ್ದರೂ ಸ್ವಾಭಿಮಾನದಿಂದ ಕಷ್ಟ ಪಟ್ಟು ದುಡಿಯುತ್ತಿದ್ದ ವಿಕಲಚೇತನ ನಾಗಪ್ಪ ಅಕ್ಷರಶಃ ದಿಕ್ಕು ದೋಚದೇ ಕಂಗಲಾಗಿದ್ದಾರೆ. ಪತ್ನಿ ಕೂಲಿ ಕೆಲಸ ಮಾಡಿಕೊಂಡು ಪ್ರತಿದಿನ ಬಿಡಿಗಾಸು ಸಂಪಾದನೆ ಮಾಡಿ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ. ಆದರೆ ಕೂಲಿ ಕೆಲಸ ಇಲ್ಲದಿದ್ದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತಿಯಲ್ಲಿದ್ದಾರೆ.

    ಯಾರಾದ್ರೂ ದಾನಿಗಳು ಒಂದು ಪುಟ್ಟ ಟೀ ಅಂಗಡಿಯನ್ನು ಹಾಕಿಕೊಟ್ಟರೆ ಜೀವನವನ್ನು ನಡೆಸುತ್ತೇನೆ ಅಂತಾ ನಾಗಪ್ಪ ಹೇಳ್ತಾರೆ.

    https://youtu.be/19–4_B2QHk