Tag: Belaku 100

  • ಬೆಳಕು ಕಾರ್ಯಕ್ರಮದಿಂದ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ: ರಾಕ್‍ಲೈನ್ ವೆಂಕಟೇಶ್

    ಬೆಳಕು ಕಾರ್ಯಕ್ರಮದಿಂದ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ: ರಾಕ್‍ಲೈನ್ ವೆಂಕಟೇಶ್

    ಬೆಂಗಳೂರು: ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಿಂದ ಇಂದು ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.

    ಮೊದಲು ಕಾರ್ಯಕ್ರಮ ಚಿಕ್ಕದಾಗಿ ಮಾಡೋಣ ಎಂದು ರಂಗನಾಥ್ ಕೇಳಿದ್ರು. ಅದು ಇಂದು ದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇಂದು ಬೆಳಕು ಕಾರ್ಯಕ್ರಮದ ಮೂಲಕ ನೂರಾರು ಕುಟುಂಬಗಳಲ್ಲಿ ಬೆಳಕು ಬಂದಿದೆ ಎಂದು ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ರು.

    ಇದೂವರೆಗೂ ಬೆಳಕು ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಮುಂದೆ ಬೆಳಕು ಕಾರ್ಯಕ್ರಮ ಮುಂದುವರೆಯಲಿ. ಬೆಳಕು ಮೂಲಕ ನೂರಾರು ಕುಟುಂಬಗಳಿಗೆ ದೀಪವಾಗಲಿ ರಾಕ್‍ಲೈನ್ ಹಾರೈಸಿದರು.

     

  • ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಬೆಂಗಳೂರು: ನಾನು ಹೋದರೆ ಜಗತ್ತು ಹೇಗಿರುತ್ತೆಂದು ಸೂರ್ಯ ಯೋಚನೆ ಮಾಡ್ತಾಯಿದ್ದನಂತೆ. ಅವಾಗ ಕೊಠಡಿಯಲ್ಲಿದ್ದ ಸಣ್ಣ ಹಣತೆ ನೀನು ಅಸ್ತ ಆಗಬಹುದು. ನಾನು ಈ ಸಣ್ಣ ಕೊಠಡಿಯನ್ನು ಬೆಳಗ್ತಿನಿ. ಆದರೆ ಇಡೀ ಜನಗತ್ತನ್ನ ನಾನು ಬೆಳಗಲಾರೆ. ನನ್ನ ಸುತ್ತಲಿನ ಜನರಿಗೆ ಬೆಳಕನ್ನ ನೀಡಬಲ್ಲೆ ಎಂಬ ಉದಾಹರಣೆಯೊಂದಿಗೆ ಪಬ್ಲಿಕ್ ಟಿವಿ ಯ ಬೆಳಕು ಕಾರ್ಯಕ್ರಮ ಕತ್ತಲೆ ಯ ಜನರಿಗೆ ಬೆಳಕನ್ನು ನೀಡುವ ಕಾರ್ಯಕ್ರಮ ನೀಡುತ್ತಿದೆ ಎಂದು ಸುತ್ತೂರು ಶ್ರೀಗಳು ಹೇಳಿದ್ರು.

    ಕಾರ್ಗಿಲ್ ಯುದ್ಧವಾದ ನಂತರ ಜನರಿಂದ ಧನ ಸಹಾಯ ಕೇಳಲು ಹೊರಟಾಗ ಬೆಳಗ್ಗೆ ಒಂದು ಆಭರಣದ ಅಂಗಡಿಗೆ ಹೋದಾಗ ಅವರು ಇವಾಗ ಅಂಗಡಿ ಓಪನ್ ಮಾಡಿದ್ದೀನಿ.. ಇನ್ನೂ ಬೋನಿಯಾಗಿಲ್ಲ. ಇವಾಗ ಕೊಡಕಾಗಲ್ಲಬ ಎಂದು ಹೇಳಿ ಕಳಿಸದರು. ಮುಂದೆ ಒಬ್ಬ ಗಾಡಿ ಎಳೆಯುವ ಕೂಲಿ ಕಾರ್ಮಿಕ ಮುಂದಾದಗ ಆತ ನಮ್ಮನ್ನ ನೋಡಿ ತನ್ನು ಜೇಬಿನಲ್ಲಿರುವ ಹಿಂದಿನ ದಿನದ ಉಳಿಸಿದ ಹಣವೆನ್ನಲ್ಲಾ ನಮಗೆ ನೀಡಿದ. ವ್ಯಕ್ತಿಗೆ ಕೊಡೋ ಮನಸ್ಸಿರಬೇಕು ಅದು ಎಷ್ಟು ಅನ್ನೋದು ಮಹತ್ವ ಅಲ್ಲ ಎಂದು ಶ್ರೀಗಳು ತಿಳಿಸಿದರು.

    ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಒಂದು ಕೆಲಸವನ್ನು ಮಾಡಲು ಅದಕ್ಕೆ ಒಗ್ಗಿಕೊಳ್ಳಬೇಕು. ವ್ಯವಹಾರಿಕವಾಗಿ ಕೆಲಸ ಮಾಡದೇ ಅದನ್ನು ಮನಸ್ಸಿನಿಂದ ಮಾಡಿದಾಗ ಮಾತ್ರ ಅದು ಯಶ್ವಸಿಯಾಗುತ್ತದೆ.

    ಕೆಲವ್ರಿಗೆ ಕೊಡೊ ಮನಸ್ಸಿರುತ್ತೆ. ಆದರೆ ಅದು ಸರಿಯಾಗಿ ಉಪಯೋಗ ಆಗಲ್ಲ ಅನ್ನೋ ನಂಬಿಕೆಯಿರುತ್ತದೆ. ಆದರೆ ಇದನ್ನೆಲ್ಲಾ ಮೀರಿ ಬೆಳಕು ಕಾರ್ಯಕ್ರಮ ಮುಂದುವರಿಯುತ್ತದೆ.

  • ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತೆ: ಯಶ್

    ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತೆ: ಯಶ್

    ಬೆಂಗಳೂರು: ಈ ರೀತಿಯ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಖುಷಿಯಾಗಿದೆ. ಸಾಮಜಿಕ ಉದ್ದೇಶದಿಂದ ಯಶೋಮಾರ್ಗ ಹುಟ್ಟಿದೆ. ಬೆಳಕು ಕಾರ್ಯಕ್ರಮದಲ್ಲಿನ ಮಕ್ಕಳನ್ನು ನೋಡಿದ್ರೆ ನನ್ನ ಬಾಲ್ಯ ನೆನಪಾಗುತ್ತದೆ. ನನ್ನ ಜೀವನದಲ್ಲಿಯೂ ನನಗೆ ಅಂದರೆ ಬಾಲ್ಯದಲ್ಲಿ ಯಾರಾದ್ರೂ ಸಹಾಯ ಮಾಡ್ತಾರೆ ಅಂತಾ ಆಸೆಯಿತ್ತು. ಆದರೆ ಯಾರು ಬರಲಿಲ್ಲ ಎಂದು ನಟ ಯಶ್ ಬೆಳಕು ಕಾರ್ಯಕ್ರಮದಲ್ಲಿ ತಿಳಿಸಿದರು.

    ಶಿಕ್ಷಣ, ಆರೋಗ್ಯ, ಆಹಾರ ಇವು ಜೀವನದಲ್ಲಿ ಬೇಕಾದ ಮುಖ್ಯ ಅವಶ್ಯಕತೆಗಳು. ಯಾವುದೇ ಒಂದು ಹಳ್ಳಿಗೆ ಹೋದ್ರೆ ಅಲ್ಲಿ ಒಂದು ಪೆಪ್ಸಿ ಮುಂತಾದ ಬ್ರಾಂಡೆಂಡ್ ಪಾನೀಯ ಸಿಗುತ್ತೆ, ಆದರೆ ಮುಖ್ಯವಾದ ಶಾಲೆ, ಆಸ್ಪತ್ರೆಯೇ ಸಿಗಲ್ಲ. ವಿದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತುಂಬಾ ಗೌರವ ಸಿಗುತ್ತೆ, ಆದರೆ ಖಾಸಗಿ ಶಾಲೆಗಳಲ್ಲಿ ಓದಿದ್ರೆ ಅಯ್ಯೋ ಪಾಪಾ ಅಂತಾ ಕರೀತಾರೆ. ಇದು ನಮ್ಮ ದೇಶದಲ್ಲಿ ತದ್ವೀರುದ್ಧವಾಗಿದೆ. ಇದು ನಮ್ಮಲ್ಲಿ ಬದಲಾಗಬೇಕಿದೆ ಎಂದು ಯಶ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಹಲವಾರು ಮಠಗಳು ಇಂದು ಶಿಕ್ಷಣವನ್ನು ನೀಡುತ್ತಿವೆ. ಕೇವಲ ಒಂದು ಮಠ ಮನಸ್ಸು ಮಾಡಿ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡ್ತಾಯಿವೆ. ಅದು ಯಾಕೆ ಸರ್ಕಾರದಿಂದ ಆಗ್ತಾಯಿಲ್ಲ ಎಂಬ ಪ್ರಶ್ನೆ ನನ್ನನ್ನ ಕಾಡುತ್ತದೆ ಎಂದು ಯಶ್ ಹೇಳಿದ್ರು.

    ಬೆಳಕು ಕಾರ್ಯಕ್ರಮದ ಮೂಲಕ ಎಲ್ಲ ದಾರಿಗಳು ಸಿಗುತ್ತಿವೆ. ಬೆಳಕು ಕಾರ್ಯಕ್ರಮದ ಮೂಲಕ ಜಯದೇವ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡೊ ವಿಷಯ ಜನರಿಗೆ ಗೊತ್ತಾಗಿದೆ. ಸಹಾಯ ಬೇಕಾದ ಜನಕ್ಕೆ ಯಾರ ಬಳಿ ಕೇಳ್ಬೇಕು ಎಂಬುವುದು ಗೊತ್ತಿರಲ್ಲ. ಅಂತಹ ಕೆಲಸಕ್ಕೆ ಬೆಳಕು ಒಂದು ವೇದಿಕೆಯಾಗಿದೆ ಎಂದು ಯಶ್ ಮೆಚ್ಚುಗೆ ಸೂಚಿಸಿದರು.