Tag: belagavi

  • ಕಾಲಿನಿಂದಲೇ ಊಟ, ಬರವಣಿಗೆ: ಸ್ವಾವಲಂಬಿ ಯುವಕನಿಗೆ ಸ್ವಂತ ಉದ್ಯೋಗಕ್ಕಾಗಿ ಬೇಕಿದೆ ಸಹಾಯ

    ಕಾಲಿನಿಂದಲೇ ಊಟ, ಬರವಣಿಗೆ: ಸ್ವಾವಲಂಬಿ ಯುವಕನಿಗೆ ಸ್ವಂತ ಉದ್ಯೋಗಕ್ಕಾಗಿ ಬೇಕಿದೆ ಸಹಾಯ

    ಬೆಳಗಾವಿ: ಎಷ್ಟೋ ಜನ ವಿಕಲಚೇತನರು ಜೀವನ ಸಾಗಿಸುವುದಕ್ಕೆ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಲ್ಲ ಎಂದು ಕೊರಗುತ್ತಾರೆ. ಅಂತಹವರಿಗೆ ಮಾದರಿಯಾಗುವಂತಹ ಯುವಕರೊಬ್ಬರಿದ್ದಾರೆ. ಇವರಿಗೆ ಕೈಗಳಿಲ್ಲ. ಬೆಳವಣಿಗೆಯಾಗದ ಕಾಲು, ಕಿತ್ತು ತಿನ್ನುವ ಬಡತನ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಯುವಕ ಯಾರ ಮೇಲೂ ಅವಲಂಬಿತವಾಗದೇ ಜೀವನ ಸಾಗಿಸುತ್ತಿದ್ದಾರೆ.

    ಬೆಳವಣಿಗೆ ಆಗದ ಕಾಲಿನಿಂದಲೇ ಊಟ, ಕಾಲಿನಿಂದಲೇ ಬರೆಯುವುದು, ಬಾಯಿಯಿಂದ ಮೊಬೈಲ್ ಬಳಕೆ ಮಾಡುತ್ತಿರುವವರ ಹೆಸರು ಹನುಮಾನ್ ಬಬನ ಹೊನಕಾಂಡೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಅಜೂರು ಗ್ರಾಮದವರು. ಇವರು ಹುಟ್ಟಿನಿಂದಲೂ ವಿಕಲಾಂಗರಾಗಿದ್ದಾರೆ. ಬೇರೆ ಮಕ್ಕಳು ಶಾಲೆಗೆ ಹೋಗುವುದನ್ನೂ ನೋಡಿ ನಾನು ಹೀಗೆ ಮನೆಯಲ್ಲಿ ಕುಳಿತರೆ ಆಗಲ್ಲ ಎಂದು ಛಲ ತೊಟ್ಟು ಅಂಗವಿಕಲತೆಯನ್ನೇ ಮೆಟ್ಟಿ ನಿಂತಿದ್ದಾರೆ.

    ಅಥಣಿಯ ಕಾಲೇಜಿನಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹನುಮಾನ್ ಅವರು ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಬಿ.ಕಾಂ 5 ಸೆಮಿಸ್ಟರ್‍ಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಕಾಲೇಜಿನ ಎಲ್ಲ ಪರೀಕ್ಷೆಗಳನ್ನು ಇವರು ಬರೆಯುವುದು ಕಾಲಿನಲ್ಲಿಯೇ. ಅಲ್ಲದೆ ತಂದೆ ತಾಯಿಗೆ ಭಾರವಾಗದಂತೆ ಕಾಲುಗಳಿಂದಲೇ ಊಟ ಮಾಡಿ ತನ್ನ ದೈನಂದಿನ ಕಾರ್ಯಗಳನ್ನು ಮುಗಿಸುತ್ತಾರೆ. ಕೈ ಇಲ್ಲದಿದ್ದರೂ ಇವರು ಸಲೀಸಾಗಿ ಕಾಲು ಹಾಗೂ ಬಾಯಿಯಿಂದ ಮೋಬೈಲ್‍ಗಳನ್ನು ಆಪರೇಟ್ ಮಾಡುವುದೇ ವಿಶೇಷ.

    ಇವರದ್ದು ತುಂಬು ಕುಟುಂಬ. ತಂದೆ ತಾಯಿಗೆ 7 ಜನ ಮಕ್ಕಳು. ಅದರಲ್ಲಿ ಇವರೇ ಹಿರಿಯ ಮಗ. ತುಂಡು ಹೊಲದಿಂದ ಬರುವ ಸಂಪಾದನೆಯಿಂದಲೇ ಜೀವನ ಸಾಗುತ್ತಿದೆ. ಮನೆಯಲ್ಲಿನ ಬಡತನವನ್ನು ನೋಡಿರುವ ಹನುಮಾನ್ ಅವರಿಗೆ ಸ್ವಂತ ಉದ್ಯೋಗ ಹೊಂದಬೇಕು, ತಂದೆ ತಾಯಿ ಹಾಗೂ ಕುಟುಂಬವನ್ನು ಸಾಕಬೇಕೆಂಬ ಬಯಕೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸೆ. ಆದರೆ ಹಣ ಇಲ್ಲದ ಕಾರಣ ಉತ್ತಮ ಪುಸ್ತಕಗಳನ್ನು ಕೊಳ್ಳಲು ಆಗುತ್ತಿಲ್ಲ. ಇವರು ಅಂಗವಿಕಲ ಎನ್ನುವ ಭಾವನಯೇ ಮನೆಯಲ್ಲಿ ಇಲ್ಲ ಎಂದು ತಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರ ಪರಿಸ್ಥಿತಿಯನ್ನು ನೋಡಿ ಸಾಕಷ್ಟು ಸಹಾಯ ಮಾಡಿರುವವರೊಬ್ಬರು ಹೆಚ್ಚಿನ ಪ್ರೋತ್ಸಾಹ ದೊರೆತರೆ ಹನುಮಾನ್ ಅಂದಿಕೊಂಡಿದ್ದನ್ನು ಸಾಧಿಸಬಲ್ಲ ಎನ್ನುತ್ತಾರೆ.

    ಒಟ್ಟಿನಲ್ಲಿ ಅಪರೂಪದ ಇಂಥ ಪ್ರತಿಭೆಗಳಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ. ಇಂಥ ಪ್ರತಿಭೆಗಳು ಬಡತನದ ಬೇಗೆಯಲ್ಲಿ ಬಾಡಿ ಹೋಗಲು ಬಿಡದೆ ಪ್ರೋತ್ಸಾಹ ಹಾಗೂ ಸಹಕಾರ ದೊರೆಯಲಿ ಎನ್ನುವುದೇ ನಮ್ಮ ಆಶಯ.

  • ಸೆಕ್ಸ್ ಗೆ ಒಪ್ಪದ್ದಕ್ಕೆ ಅಪ್ರಾಪ್ತೆಗೆ ಬಿಸಿ ಚಮಚದಿಂದ ಬರೆ ಹಾಕಿದ್ದ ಕಾಮುಕ ಅರೆಸ್ಟ್

    ಸೆಕ್ಸ್ ಗೆ ಒಪ್ಪದ್ದಕ್ಕೆ ಅಪ್ರಾಪ್ತೆಗೆ ಬಿಸಿ ಚಮಚದಿಂದ ಬರೆ ಹಾಕಿದ್ದ ಕಾಮುಕ ಅರೆಸ್ಟ್

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಸತತ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

    ಶಿವಕುಮಾರ್ ಬಾಳೇಕುಂದ್ರಿ (22) ಸತತ ಎರಡು ವರ್ಷದಿಂದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಯುವಕ. ಅಪ್ರಾಪ್ತೆಯ ಪಕ್ಕದ ಮನೆಯವನೇ ಅಗಿದ್ದ ಶಿವಕುಮಾರ್ ಬಾಲಕಿ ಜೊತೆ ಆತ್ಮೀಯವಾದ ಒಡನಾಟ, ಸ್ನೇಹ ಬೆಳಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಯ ವಿಡಿಯೋ, ಫೋಟೋ ತೆಗೆದು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ತಾನು ನಡೆಸಿದ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ವಿಡಿಯೋವನ್ನು ಬಾಲಕಿಯ ಶಾಲೆಗೆ ಮತ್ತು ಮನೆಗೆ ಕಳುಹಿಸಿದ್ದಾನೆ.

    7ನೇ ತರಗತಿ ವಿದ್ಯಾರ್ಥಿನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಬಾಲಕಿ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಕಾಮುಕ ಬಿಸಿ ಚಮಚದಿಂದ ಬರೆ ಹಾಕಿತ್ತಿದ್ದ ಎಂದು ತಿಳಿದು ಬಂದಿದೆ.

    ಅಪ್ರಾಪ್ತ ಬಾಲಕಿ ಆರೋಪಿ ಶಿವಕುಮಾರ ಬಾಳೆಕುಂದ್ರಿ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ, ಮಾನಸಿಕ ಕಿರುಕುಳ ನೀಡಿತಿದ್ದನು ಅಂತ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾಳೆ.

    ಪೊಲೀಸರು ಶಿವಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂದಿಸಿದ್ದಾರೆ. ಪೊಲೀಸರು ಶಿವಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಮತ್ತು ಐಪಿಸಿ ಕಲಂ 323, 506,448, 376(2) ಅನ್ವಯ ಪ್ರಕರಣವನ್ನ ದಾಖಲಿಸಿದ್ದಾರೆ. ಇನ್ನು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

     

  • ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಳಗಾವಿ: ಕಾಮುಕನೊಬ್ಬ ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಈ ನೀಚ ಕೃತ್ಯ ಎಸಗಿದಾತನನ್ನು ಹಣಮಂತ ಹಡಪದ ಎಂದು ಗುರುತಿಸಲಾಗಿದೆ. ಈತ ಸವದತ್ತಿ ಪಟ್ಟಣದಲ್ಲಿ ತಡರಾತ್ರಿ ರಸ್ತೆಯ ಬದಿಯಲ್ಲಿ ಮಲಗಿದ್ದ ಯುವತಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಈತನ ನೀಚ ಕೃತ್ಯವನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ಸಂಬಂಧ ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿಯನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ವಡಗೋಲಾ ಗ್ರಾಮದಲ್ಲಿ ನಕಲಿ ದಾಖಲೆ ತಂದು ಉಳುಮೆ ಮಾಡುತ್ತಿರುವ ಜಮೀನು ನಮ್ಮದು ಎಂದುವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ವಡಗೋಲಾ ಗ್ರಾಮದ 7 ಎಕರೆ 10 ಗುಂಟೆ ಜಮೀನನ್ನು ಅಣ್ಣಪ್ಪ ಖೋತ ಎಂಬವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ಏಕಾಏಕಿ ವಿನೋದ್ ರಾವಸಾಬ್ ಹಳಕರ್ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನಾನು ಖರೀದಿ ಮಾಡಿದ್ದು ಎಂದು ಹೇಳಿ ಗೇಣಿ ಹಣ ಕೊಡಿ ಎಂದು ಅವಾಜ್ ಹಾಕಿದ್ದರು.

    ಈ ಸಂದರ್ಭದಲ್ಲಿ ಅಣ್ಣಪ್ಪ ಮತ್ತು ವಿನೋದ್ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿನೋದ್ ಹಾಗು 10 ಜನರು ಸೇರಿ ಸೃಷ್ಟಿ ಮಾಡಿರುವ ದಾಖಲೆಗಳು ನಕಲಿ ಎಂದು ಪತ್ತೆಯಾಗಿದೆ.

    ಮೂಲತಃ ಜಮೀನು ಬಾಳಾ ಹರಿ ಟೊಣ್ಣೆ ಎಂಬುವುರಿಗೆ ಸೇರಿದ್ದಾಗಿದೆ. ಆದರೆ ಹಲವು ವರ್ಷಗಳಿಂದ ಕಾಣೆಯಾದ ಬಾಳಾ ಅವರ ಜಮೀನಿನಲ್ಲಿ ಅಣ್ಣಪ್ಪ ಕೃಷಿ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಿನೋದ್ ಕಬ್ಜಾ ಪಡೆದುಕೊಳ್ಳುವ ಸಂಚು ರೂಪಿಸಿದ್ದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ನ್ಯಾಯಾಂಗ ಬಂಧನದಲ್ಲಿ ಇದ್ದು 6 ಜನ ತಲೆ ಮರೆಸಿಕೊಂಡಿದ್ದಾರೆ.

     

  • ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

    ಬೆಳಗಾವಿ: ಸ್ವಾಮೀಜಿಯೊಬ್ಬರು ಕುಡಿತ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಾರ್ಚ್ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತ ಯುವಕ. ಚಿಕ್ಕ ವಯಸ್ಸಿನಲ್ಲೇ ವಿಪರೀತ ಕುಡಿತಕ್ಕೆ ದಾಸರಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಸಿದ್ದರಾಯ್ ನಾಯಕ್‍ರನ್ನು ಹಣ್ಣಿಗೇರಿ ಗ್ರಾಮದ ಸ್ವಾಮೀಜಿ ಶಿವಪ್ಪ ಭಾವಿ ಎಂಬವರ ಬಳಿ ಚಿಕಿತ್ಸೆ ಪಡೆಯಲು ಕರೆ ತಂದಿದ್ದರು. ಸ್ವಾಮೀಜಿ ನೀಡಿದ್ದ ಔಷಧಿಯನ್ನು ಕುಡಿದ ಸಿದ್ದರಾಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ವಿಷಯವಾಗಿ ದೂರು ದಾಖಲಿಸಿಕೊಳ್ಳದ ನೇಸರ್ಗಿ ಪಟ್ಟಣದ ಪೊಲೀಸರು ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ನೇಸರ್ಗಿ ಠಾಣೆ ಪೊಲೀಸರು ಐಪಿಸಿ 328, 304(ಎ) ಅನ್ವಯ ದೂರು ದಾಖಲಿಸಿಕೊಂಡು ತಡರಾತ್ರಿ ಸ್ವಾಮಿಜೀ ಶಿವಪ್ಪ ಭಾವಿಯನ್ನು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ಪಂಚರು 3.5 ಲಕ್ಷ ರೂಪಾಯಿಗೆ ರಾಜಿ ಪಂಚಾಯತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ್ದರು. ಒಟ್ಟು ಮೊತ್ತದಲ್ಲಿ ಸಿದ್ದರಾಯ್ ಪೋಷಕರಿಗೆ 85 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೃತನ ಕುಟುಂಬಕ್ಕೆ ಹಣ ದೊರಕಿಲ್ಲ. ಉಳಿದ ಹಣ ಯಾರ ಪಾಲಾಗಿದೆ ಎಂಬುದು ತನಿಖೆಯ ಮುಖಾಂತರ ತಿಳಿಯಬೇಕಿದೆ.

    ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಶಿವಪ್ಪ ಭಾವಿ ಗ್ರಾಮದಲ್ಲಿ ಮದ್ಯಪಾನ ಬಿಡಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇನ್ನೂ ಯುವಕ ಸಿದ್ದರಾಯ್ ದೇಹವನ್ನು ಸುಟ್ಟು ಹಾಕಿದ್ದು, ಎಲ್ಲ ರೀತಿಯ ಸುಳಿವು ಮುಚ್ಚಿಹಾಕಲು ಪ್ರಯತ್ನಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

  • ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ಬೆಳಗಾವಿ: ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪಿಎಸ್‍ಐ ಶಿವಶಂಕರ ಅವರ ಗೂಂಡಾಗಿರಿಯ ಪ್ರಕರಣಗಳು ತಡವಾಗಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಚಿಕ್ಕೋಡಿ ತಾಲೂಕಿನ ಗಳತಗಾ ಜಾತ್ರೆಯಲ್ಲಿ ತಮ್ಮ ಜೀಪಿಗೆ ದಾರಿ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸುಮಾರು 5 ರಿಂದ 6 ತಿಂಗಳ ಹಿಂದೆ ಸದಲಗ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಶಂಕರ ಕಾರ್ಯನಿರ್ವಹಿಸುತ್ತಿದ್ದರು. ಗಳತಗಾ ಜಾತ್ರೆಯಲ್ಲಿ ಶಿವಶಂಕರ ಯುವಕನ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ಮಡುತ್ತಿರುವ ವೇಳೆ ಯುವಕ ಚರಂಡಿಯಲ್ಲಿ ಬಿದ್ರೂ, ಬಿಡದ ಶಿವಶಂಕರ ಯುವಕನನ್ನು ಮೇಲಕ್ಕೆ ಎತ್ತಿ ಥಳಿಸಿದ್ದಾರೆ.

    ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ನಿನ್ನೆ (ಭಾನುವಾರ) ಪಬ್ಲಿಕ್ ಟಿವಿ ಇದೇ ಪಿಎಸ್‍ಐ ಶಿವಶಂಕರ ತಮ್ಮ ಸಿಬ್ಬಂದಿಯೊಂದಿಗೆ ಕುಡಚಿಯ ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಬಿತ್ತರಿಸಿತ್ತು. ಇನ್ನು ಶಿವಶಂಕರ ತಾವು ಕಾರ್ಯ ನಿರ್ವಹಿಸಿದ ಪ್ರತಿಯೊಂದು ಊರಿನಲ್ಲಿ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಪಿಎಸ್‍ಐ ಮೇಲೆ ಇದೂವರೆಗೂ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

    ಹೋಳಿ ಹಬ್ಬದ ದಿನದಂದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ತನಿಖಾಧಿಕಾರಿ ನಾಗರಾಜ್ ಅವರಿಗೆ ಆದೇಶ ಪತ್ರ ದೊರಕಿಲ್ಲ. ಪಿಎಸ್‍ಐ ಶಿವಶಂಕರ ಪ್ರಭಾವಿ ವ್ಯಕ್ತಿಯ ಬೆಂಬಲವಿದೆ ಎಂದು ಕೇಳಿ ಬಂದಿದೆ. ಶಿವಶಂಕರ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರ ಕ್ರಮ ಜರುಗಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರ ಸೆಕ್ಸೆನಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    https://www.youtube.com/watch?v=V83ANKNDdaQ

  • ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    – ಕೆಎಲ್‍ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೈನಿಕ

    ಬೆಳಗಾವಿ: ಹಾಸಿಗೆಯಲ್ಲಿ ಹಾಯಾಗಿ ಮಲಗಿದ್ದ ಪತಿಗೆ ಬೆಂಕಿ ಹಚ್ಚಿ ಪತ್ನಿಯೇ ಕೊಲ್ಲಲೆತ್ನಿಸಿದ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ನಗರದ ಲಕ್ಷ್ಮೀ ಟೆಕಡಿಯ ಸೈನಿಕ್ ನಗರದ ನಿವಾಸಿ ಸೈನಿಕ ದೀಪಕ್ ಪವಾರ್ ಅವರನ್ನು ಪತ್ನಿಯೇ ಹತ್ಯೆ ಮಾಡಲು ಯತ್ನಿಸಿದ್ದಾಳೆ. ಘಟನೆಯಲ್ಲಿ ದೀಪಕ್ ಕುಮಾರ್‍ಗೆ ಶೇಕಡಾ 85ರಷ್ಟು ಸುಟ್ಟ ಗಾಯಗಳಾಗಿದ್ದು, ಕೆಎಲ್‍ಇ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.

    ಮಿಲಿಟರಿಯಲ್ಲಿರುವ ದೀಪಕ್ 9 ವರ್ಷದ ಹಿಂದೆ ಸವಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದ್ರೆ ಇತ್ತೀಚಿನ ನಡವಳಿಕೆಗಳ ಕಾರಣ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದರು. ಕಳೆದ ರಾತ್ರಿ ಸುಮಾರು ಒಂದು ಗಂಟೆಗೆ ಮಲಗಿದ್ದ ಹಾಸಿಗೆಗೆ ಬೆಂಕಿ ಬಿದ್ದಿತ್ತು. ನನ್ನ ಪತ್ನಿಯೇ ಈ ಕೃತ್ಯ ಎಸಗಿದ್ದಾಳೆ ಎಂದು ದೀಪಕ್ ಕ್ಯಾಂಪ್ ಠಾಣೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.

  • ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ಬೆಳಗಾವಿ: ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಪಿಎಸ್‍ಐ ಮನಬಂದಂತೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಾಮೂಲಿಯನ್ನು ನೀಡಲಿಲ್ಲ ಎಂಬ ಹಳೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪೊಲೀಸರ ಗೂಂಡಾ ವರ್ತನೆ ತಡವಾಗಿ ಬೆಳಕಿಗೆ ಬಂದಿದೆ. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪಿಎಸ್‍ಐ ಹೆಸರು ಶಿವಶಂಕರ ಮುಕರಿ. ಮಾರ್ಚ್ 13 ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಅಂದು ರಾತ್ರಿ ಕುಡುಚಿಯ ಶಿವಶಕ್ತಿ ಬಾರ್‍ಗೆ ನುಗ್ಗಿದ ಪಿಎಸ್‍ಐ ಶಿವಶಂಕರ ಹಾಗು ಪೇದೆಗಳಾದ ಪೂಜೇರಿ, ಎಚ್.ಡಿ.ಬೋಜನ್ನವರ ಅಧಿಕಾರಿಗಳು ಬಾರ್ ಸಿಬ್ಬಂದಿ ಅಜಿತ್ ಹಳಿಂಗಳೆಯ ಹೊಟ್ಟೆ ಮತ್ತು ಮರ್ಮಾಂಗಕ್ಕೆ ಯದ್ವಾತದ್ವ ಒದ್ದು ಸ್ಟೀಲ್ ರಾಡ್ ನಿಂದ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಗಿದ್ದೇನು?: ಮಾರ್ಚ್ 13 ರಂದು ರೆಸ್ಟೋರೆಂಟ್‍ಗೆ ಬಂದ ಶಿವಶಂಕರ ಹಾಗು ಪೇದೆಗಳು ಮದ್ಯದ ಬಾಟಲಿಗಳು ನೀಡುವಂತೆ ಕೇಳಿದ್ದಾರೆ. ಬಾರ್ ಸಿಬ್ಬಂದಿ ಇಂದು ಮದ್ಯ ಮಾರಾಟಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿದ್ದು, ಕೇವಲ ರೆಸ್ಟೋರೆಂಟ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು ಬಾರ್ ಸಿಬ್ಬಂದಿ ಅಜೀತ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್

    ಪಿಎಸ್‍ಐ ಶಿವಶಂಕರ್ ಅವರಿಗೆ ಪ್ರತಿತಿಂಗಳು ಮಾಮೂಲಿ ನೀಡಬೇಕು. ನಾವು ಪ್ರತಿ ತಿಂಗಳು ಮಾಮೂಲಿ ನೀಡದಕ್ಕೆ ಶಿವಶಂಕರ ನಮ್ಮ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಪ್ರತಿ ಬಾರಿ ಮದ್ಯ ಮತ್ತು ಸೋಡಾವನ್ನು ಪುಕ್ಕಟೆಯಾಗಿ ನೀಡಬೇಕು ಎಂದು ಶಿವಶಕ್ತಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್ ಆರೋಪಿಸಿದ್ದಾರೆ.

    ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್

    ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್ ರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅವರು ಪ್ರಕರಣದ ತನಿಖೆಯನ್ನು ಜಿಲ್ಲಾ ಅಪರಾಧ ತಡೆ ಡಿಎಸ್‍ಪಿ ನಾಗರಾಜ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.

    https://www.youtube.com/watch?v=jTySUe5I_j4

     

  • ನೂತನ ವಧು-ವರರಾದ ಅಜ್ಜ-ಅಜ್ಜಿ – 50 ವರ್ಷ ಪೂರೈಸಿದ 25 ಜೋಡಿಗೆ ಮರು ವಿವಾಹ!

    ನೂತನ ವಧು-ವರರಾದ ಅಜ್ಜ-ಅಜ್ಜಿ – 50 ವರ್ಷ ಪೂರೈಸಿದ 25 ಜೋಡಿಗೆ ಮರು ವಿವಾಹ!

    ಬೆಳಗಾವಿ: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸ್ತ್ರೋಕ್ತವಾಗಿ ಆದ ಮದುವೆ ಸಂಬಂಧಗಳು ಮುರಿದು ಬಿದ್ದು ವಿಚ್ಚೇದನಗಳು ಹೆಚ್ಚಾಗ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಗಡಿನಾಡಿನ ಅಪೂರ್ವ ಜೋಡಿಗಳು ನಮ್ಮ ಮುಂದಿದಿದ್ದಾರೆ. 50 ವರ್ಷ ಸಂಸಾರ ನಡೆಸಿರೋ 25ಕ್ಕೂ ಹೆಚ್ಚಿನ ಜೋಡಿಗಳು ಇಳಿ ವಯಸ್ಸಲ್ಲಿ ಮರು ಮದುವೆಯಾಗಿ ಸಂಭ್ರಮಿಸಿದ್ದಾರೆ.

    ದು ಬೆಳಗಾವಿಯ ಬೈಲಹೊಂಗಲದ ಮದನಬಾವಿ ಗ್ರಾಮದಲ್ಲಿ ನಡೆದ ವಿಶಿಷ್ಟ ವಿವಾಹ ಸಂಭ್ರಮ. ಗ್ರಾಮದ ಶರಣೆ ನೀಲಗಂಗಮ್ಮ ತಾಯಿಯ ಹೆಸ್ರಲ್ಲಿ, 50 ವರ್ಷ ಸಂಸಾರ ಪೂರೈಸಿದ 25ಕ್ಕೂ ಹೆಚ್ಚು ಜೋಡಿಗೆ ಮರು ವಿವಾಹ ಮದುವೆ ಮಾಡಿಸಲಾಯ್ತು. ಈ ವೇಳೆ ಮೇಕಪ್ ಮಾಡಿಕೊಂಡು ಅಜ್ಜಂದಿರು ನವ ವಧು-ವರರರಂತೆ ಕಂಗೊಳಿಸುತ್ತಿದ್ರು. ಮರು ವಿವಾಹಕ್ಕೂ ಮುನ್ನ ಗ್ರಾಮದಲ್ಲಿ ಈ ಆದರ್ಶ ದಂಪತಿಗಳ ಅದ್ಧೂರಿ ಮೆರವಣಿಗೆ ನಡೀತು. ಬಳಿಕ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಮ್ಮುಖದಲ್ಲಿ 70-75 ವರ್ಷದ ಅಜ್ಜ ಅಜ್ಜಿಯಂದಿರು ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ರು.

    ತಮ್ಮ ಹೆತ್ತವರ ಮದುವೆಯನ್ನ ಕಣ್ತುಂಬಿಕೊಂಡ ಮಕ್ಕಳು ಹಾಗೂ ಮೊಮ್ಮಕ್ಕಳು ಖುಷಿಗೆ ಪಾರವೇ ಇರಲಿಲ್ಲ. 50 ವರ್ಷ ದಾಂಪತ್ಯ ನಡೆಸಿದ ಅಜ್ಜ ಅಜ್ಜಿಯಂದಿರೂ ಸಹ ಅಡ್ಡಾಡಿ ಫೋಟೋಗೆ ಪೋಸ್ ಕೊಟ್ರು. ಒಟ್ಟಿನಲ್ಲಿ ಇಲ್ಲಿ ಸಿಹಿ ಇತ್ತು. ನಾಚಿಕೆ ಜೊತೆಗೆ ಪ್ರೀತಿ ಪ್ರೇಮ ಮೇಳೈಸಿತ್ತು. ನಗುನಗುತಾ ಬಾಳೋಣ ಅನ್ನೋ ಸಂದೇಶ ಇತ್ತು. ನೂರು ವರ್ಷ ಈ ಜೋಡಿ ಹೀಗೆ ಬಾಳಲಿ ಅನ್ನೋದು ನಮ್ಮ ಹಾರೈಕೆ.

  • ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ!

    ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ!

    ಬೆಳಗಾವಿ: ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿಹಚ್ಚಿಕೊಂಡು ರೈಲಿಗೆ ಸಿಲುಕಿ ಯುವತಿಯೋರ್ವಳು ಆತ್ಯಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ.

    18 ವರ್ಷದ ಸಂಜನಾ ಚಂದ್ರಕಾಂತ ಅಂಗ್ರೋಳಕರ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಿರಜದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲು ನಂಬರ್ 51419 ಟಿಳಕವಾಡಿ ಮೊದಲ ರೈಲ್ವೆ ಗೇಟ್ ಬಳಿ ಬಂದಾಗ ಈ ಘಟನೆ ನಡೆದಿದೆ.

    ರೈಲು ಗೇಟ್‍ನಿಂದ ಮುಂದೆ ಸಾಗುತ್ತಿದ್ದಂತೆ ಒಂದು ರೈಲ್ವೇ ಟ್ರ್ಯಾಕಿನಲ್ಲಿ ಬೆಂಕಿ ಕಾಣಿಸಿತು. ತಕ್ಷಣ ನಾನು ಮುಂದೆ ಹೋಗಿ ನೋಡಿದಾಗ ಅಲ್ಲಿ ಒಂದು ಶವದ ತಲೆಯ ಮುಂಭಾಗ ಹಾಗೂ ಒಂದು ಕಾಲು ರೈಲಿನ ಚಕ್ರಕ್ಕೆ ಸಿಲುಕಿತ್ತು. ಆ ಶವ ಹೊತ್ತಿ ಉರಿಯುತ್ತಿತ್ತು. ತಕ್ಷಣ ನಾನು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಪ್ರತ್ಯಕ್ಷದರ್ಶಿಯಾದ ಗೇಟ್ ಕೀಪರ್ ಹೇಳಿದ್ದಾರೆ.

    ಮನೆಯಿಂದ ಬರುವಾಗಲೆ ದೃಢ ನಿರ್ಧಾರ ಮಾಡಿದ್ದ ಸಂಜನಾ ಎರಡು ಬಾಟಲಿ ಪೆಟ್ರೋಲ್ ತುಂಬಿಕೊಂಡು ಯಾರಿಗೂ ಕಾಣದ ಹಾಗೆ ರೈಲು ಹಳಿಯ ಪಕ್ಕ ನಿಂತಿಕೊಂಡಿದ್ದಾಳೆ. ಯಾವಾಗ ಪ್ಯಾಸೆಂಜರ್ ರೈಲು ಬರುತ್ತಿರೋದು ಅವಳ ಕಣ್ಣಿಗೆ ಬಿತ್ತೋ ಅದೇ ಸಮಯಕ್ಕೆ ಆಕೆ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹಳಿಯ ಮೇಲೆ ಹಾರಿದ್ದಾಳೆ. ಒಂದು ವೇಳೆ ರೈಲಿಗೆ ಸಿಲುಕಿ ಪ್ರಾಣ ಹೊಗದಿದ್ದರೂ ಕಡೆ ಪಕ್ಷ ಬೆಂಕಿಯಿಂದಾದರೂ ಪ್ರಾಣ ಹೋಗಬೇಕು ಎಂದು ಈ ರೀತಿ ಮಾಡಿರಬಹುದು ಎಂದು ಡಿಸಿಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಟಿಳಕವಾಡಿ ಪೊಲೀಸ್ರು ಹಾಗೂ ಎಸಿಪಿ ಜಯಕುಮಾರ ಸ್ಥಳಕ್ಕೆ ಧಾವಿಸಿದ್ದು, ಪ್ರಥಮ ಮಾಹಿತಿ ಪಡೆದ ಬಳಿಕ ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

    ಆತ್ಮಹತ್ಯೆಗೆ ಕಾರಣ?: ಸಂಜನಾ ಮೊದಲಿನಿಂದಲೂ ಮಾಂಸಾಹಾರ ಪ್ರಿಯಳು. ಟ್ಯೂಬರ್‍ಕ್ಯುಲೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಸಂಜನಾಗೆ ಈ ಮೊದಲು ಒಂದು ಸರ್ಜರಿ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಜನಾ ಮಾಂಸಾಹಾರ ಊಟ ಮಾಡಿದರೆ ತಕ್ಷಣ ವಾಂತಿಯಾಗುತ್ತಿತ್ತು. ಮಾಂಸಾಹಾರ ಸಂಪೂರ್ಣವಾಗಿ ತ್ಯಜಿಸಬೇಕೆಂದು ವೈದ್ಯರು ಸಲಹೆ ಮಾಡಿದ್ದರು. ಇದರಿಂದ ಆಕೆ ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಮರಾಠಾ ಮಂಡಳ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಶನ್ ಡಿಪ್ಲೋಮಾ ಪದವಿ ಪಡೆದು ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ಸಂಜನಾ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದರಿಂದ ಇದೀಗ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    ಸ್ಥಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

    https://www.youtube.com/watch?v=9MmEywe9zfE