Tag: belagavi

  • ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಳಗಾವಿ: ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನಡೆದಿದೆ.

    ಮೂವರು ಯಡೂರು ಕಲ್ಲೋಳ ಬ್ರಿಡ್ಜ್ ಕಮ್ ಬಂದಾರದ ಮೇಲಿಂದ ಕೃಷ್ಣಾ ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದ್ದು, ಮೃತರು ಯಡೂರು ಗ್ರಾಮದ ಅಶೋಕ ಕಾಂಬ್ಳೆ(70) ಪತ್ನಿ ನಿರ್ಮಲಾ ಕಾಂಬ್ಳೆ(60) ಮತ್ತು ಪುತ್ರ ಅರುಣ್ ಕಾಂಬ್ಳೆ(33) ಎಂದು ಗುರುತಿಸಲಾಗಿದೆ.

    ನಾಲ್ಕು ದಿನದ ಹಿಂದೆ ಮನೆಗೆ ಬೀಗ ಹಾಕಿ ಊರು ಬಿಟ್ಟು ಬಂದಿದ್ದ ಕುಟುಂಬಸ್ಥರು ಶವವಾಗಿ ಸಿಕ್ಕಿರುವುದು ಗ್ರಾಮಸ್ಥರಿಗೂ ಆತಂಕ ಮೂಡಿಸಿದೆ. ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಸಾಲ ಹಾಗೂ ಮಗನ ಮದುವೆ ಆಗದೇ ಇರುವ ಕೊರಗು ಈ ಕುಟುಂಬದಲ್ಲಿ ಇತ್ತು ಎನ್ನಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಅಂಕಲಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ ಮೂಕಪ್ರಾಣಿಗಳ ಗೆಳೆತನ!

    ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ ಮೂಕಪ್ರಾಣಿಗಳ ಗೆಳೆತನ!

    ಚಿಕ್ಕೋಡಿ: ಕೋತಿ ಹಾಗೂ ಶ್ವಾನ ಬದ್ಧ ವೈರಿಗಳು. ಆದ್ರೆ ಇಲ್ಲಿ ದಿನನಿತ್ಯ ಕೋತಿ ಹಾಗೂ ಎರಡು ಶ್ವಾನಗಳು ಅನ್ಯೋನ್ಯವಾಗಿ ಬಾಳುತ್ತಿದ್ದು, ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ.

    ಹೌದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂಥ ಅಪರೂಪದ ಘಟನೆ ಸಾಕ್ಷಿಯಾಗಿದೆ. ಕೋತಿಗಳ ಗುಂಪಿನಿಂದ ಮಿಸ್ ಆಗಿ ಅನಾಥವಾಗಿದ್ದ ಮಂಗವನ್ನು ಸ್ಥಳೀಯ ನಿವಾಸಿ ದೊಡ್ಡಮನಿ ಕುಟುಂಬ ಸಾಕಿ ಸಲುಹುತ್ತಿದೆ. ಹೀಗೆ ಸಾಕಿದ್ದ ಕೋತಿಗೆ ಅವರ ಮನೆಯಲ್ಲಿದ್ದ ಶ್ವಾನಗಳ ಜೊತೆಗೆ ಫ್ರೆಂಡ್‍ಶಿಪ್ ಆಗಿ ಅನ್ಯೋನ್ಯವಾಗಿ ಬಾಳುತ್ತಿವೆ. ಕೋತಿಗೆ ಏನಾದ್ರೂ ಆದ್ರೆ ಅದರ ರಕ್ಷಣೆಗೆ ನಾಯಿ ನಿಲ್ಲುತ್ತದೆ.

    ಬಹುತೇಕ ಕಡೆ ಕೋತಿಗಳು ಬಂದ್ರೆ ಶ್ವಾನಗಳು ದಾಳಿ ಮಾಡಿ ಅವುಗಳನ್ನ ಓಡಿಸುತ್ತವೆ. ಆದ್ರೆ ಇಲ್ಲಿ ಕೋತಿಗೆ ಯಾವುದೇ ಬೇರೆ ಕಡೆಯಿಂದ ಬಂದ ಶ್ವಾನ ಆವಾಜ್ ಹಾಕಿದ್ರೆ ಈ ಶ್ವಾನ ಕೋತಿಯ ರಕ್ಷಣೆಗೆ ನಿಲ್ಲುತ್ತದೆ. ಶ್ವಾನ ಹಾಗೂ ಕೋತಿಯ ಅನ್ಯೋನ್ಯತೆಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಧರ್ಮ ಹಾಗೂ ಜಾತಿ ಜಾತಿಗಳ ಹೆಸರಿನಲ್ಲಿ ಹೊಡೆದಾಡುತ್ತಿರುವ ಮನುಷ್ಯ ಜೀವಿಗೆ ಅನ್ಯೋನ್ಯತೆಯ ಪಾಠವನ್ನ ಈ ಮೂಕ ಪ್ರಾಣಿಗಳು ಹೇಳಿಕೊಡುವಂತಿವೆ.

    https://www.youtube.com/watch?v=LXcfjgHior8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವರಲ್ಲಿ ಇಟ್ಟಿರುವ ಬೇಡಿಕೆ ಈಡೇರುವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗಲ್ಲ: ರಮೇಶ್ ಜಾರಕಿಹೊಳಿ

    ದೇವರಲ್ಲಿ ಇಟ್ಟಿರುವ ಬೇಡಿಕೆ ಈಡೇರುವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗಲ್ಲ: ರಮೇಶ್ ಜಾರಕಿಹೊಳಿ

    -ಸಚಿವರು ಸರ್ಕಾರಿ ಕಾರ್ ಬಳಸ್ತಿಲ್ಲ ಯಾಕೆ?

    ಬೆಳಗಾವಿ: ದೇವರಲ್ಲಿ ನನ್ನ ಬೇಡಿಕೆ ಮುಂದಿಟ್ಟಿದ್ದು, ಅದು ಆಗುವವರೆಗೂ ನಾನು ಸಚಿವ ಸಂಪುಟ ಸಭೆಗೆ ಹಾಜರಾಗುವುದಿಲ್ಲ ಎಂದು ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಇದುವರೆಗೂ 5 ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಿದ್ದೇನೆ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ. ಅದು ಆಗುವವರೆಗೂ ಹೋಗಲ್ಲ. ಆದರೆ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ಗ್ರಂಥಾಲಯ ಖಾತೆ ಕೊಟ್ಟರು ನಡೆಸಲು ಸಿದ್ಧ ಎಂದು ಹೇಳಿದರು.

    ಇದೇ ವೇಳೆ ಸರ್ಕಾರಿ ವಾಹನ ಬಳಕೆ ಮಾಡದಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ಕೆಲ ವಿಚಾರದಲ್ಲಿ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ಆ ಕೆಲಸ ಆಗುವವರೆಗೂ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಿದ್ದೇನೆ. ಅಲ್ಲದೇ ಮುಂದಿನ ಸಚಿವ ಸಂಪುಟ ಸಭೆಗೂ ಗೈರು ಹಾಜರಾಗುತ್ತೇನೆ. ಕೆಲ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಹೋಗಲ್ಲ. ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ ನನಗೆ ಮಹತ್ವ ಎಂದರು.

    ಲೋಕಸಭಾ ಚುನಾವಣೆ ಕುರಿತ ಪ್ರಶ್ನೆಗಳಿಗೆ ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧಾರ ಮಾಡುತ್ತದೆ. ನಾನು ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನ ಹೊಂದಿಲ್ಲ. ಆದರೆ ಕೆಲ ಸಮಸ್ಯೆಗಳ ಕುರಿತು ಪಕ್ಷದ ಮುಖಂಡರ ಮುಂದೇ ತಿಳಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲವೂ ಸಾಮಾನ್ಯ. ಆದರೆ ನಾವು ಸಮಸ್ಯೆ ಬಗೆಹರಿಸುವ ಕಡೆ ಗಮನ ನೀಡಬೇಕೆ ಹೊರತು ಅದನ್ನು ದೊಡ್ಡದು ಮಾಡುವ ಹಾಗೇ ಮಾಡಬಾರದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ -ನಗದು, ಚಿನ್ನದ ವಿಗ್ರಹ, ಬೆಳ್ಳಿ ಪತ್ತೆ

    ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ -ನಗದು, ಚಿನ್ನದ ವಿಗ್ರಹ, ಬೆಳ್ಳಿ ಪತ್ತೆ

    ಬೆಳಗಾವಿ: ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ ಆರಂಭ ಮಾಡಿದ್ದು, ಬೆಂಗಳೂರಿನಿಂದ ಈಗ ಬೆಳಗಾವಿಯ ಜಿಲ್ಲೆಯ ಖಾನಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಎಸಿಪ್ ಅಧಿಕಾರಿ ಚಂದ್ರಕಾತ ಪಾಟೀಲ್ ಅವರ ಮನೆ, ಖಾನಾಪುರದಲ್ಲಿರುವ ಕಚೇರಿ ಹಾಗೂ ಬೈಲಹೊಂಗಲದಲ್ಲಿರುವ ಸಹೋದರನ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆಸುತ್ತಿದ್ದಾರೆ. ಎಸಿಬಿ ಎಸ್.ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮಾಡಲಾಗುತ್ತಿದೆ.

    ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸದ ಮೇಲೆ ದಾಳಿ ಮಾಡಿದ ವೇಳೆ 10 ಲಕ್ಷಕ್ಕೂ ಅಧಿಕ ನಗದು, 500 ಗ್ರಾಂ ಅಧಿಕ ಚಿನ್ನ, 3 ಕೆ.ಜಿ ಗೂ ಅಧಿಕ ಬೆಳ್ಳಿ, ಚಿನ್ನದ ವಿಗ್ರಹ ಸಿಕ್ಕಿದೆ. ಇತ್ತ ಬೈಲಹೊಂಗಲದಲ್ಲಿ ಎರಡು ಜೆಸಿಬಿ, ಆಸ್ತಿ ಪತ್ರ ಹಾಗೂ ಬೆಳಗಾವಿ ಹನುಮಾನ್ ನಗರದ ಹಿಂಡಲಗಾ ಜೈಲ್ ಬಳಿ ಸೈಟ್ ಖರೀದಿ ಮಾಡಿರುವ ಪತ್ರ, ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.

    ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸ, ಬೈಲಹೊಂಗಲದಲ್ಲಿರುವ ಸಹೋದರನ ಮನೆಯಲ್ಲೂ ದಾಳಿ ಮುಂದುವರಿದಿದ್ದು, ಹತ್ತು ಜನರ ತಂಡದಿಂದ ಮನೆಯಲ್ಲಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಎಸಿಬಿ ಅಧಿಕಾರಿಗಳು ಮಧ್ಯಾಹ್ನ 2 ಗಂಟೆವರೆಗೂ ಶೋಧಕಾರ್ಯ ಮಾಡಲಾಗುತ್ತದೆ. ನಂತರ ದಾಳಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸೋದಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯೋದನ್ನ ಕೇಳಿದ್ದೀವಿ. ಆದರೆ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಾರಿಗೆ ಸೌಂಡ್ ಸಿಸ್ಟಮ್ ಕೊಡಿಸುವ ಸಲುವಾಗಿ ಟೆಂಡರ್ ಕರೆದಿದ್ದಾರೆ.

    ಬೆಳಗಾವಿಯಲ್ಲಿ ಆಶಾ ಐಹೊಳೆ ಅಂಧದರ್ಬಾರ್ ನಡೆಸುತ್ತಿದ್ದಾರೆ. ಇವರು ಕಾರಿನಲ್ಲಿ ಕುಳಿತರೆ ಸಾಕು ಸೌಂಡ್ ಸಿಸ್ಟಮ್ ಆನ್ ಆಗ್ಲೇಬೇಕಂತೆ. ಒಂದು ವರ್ಷದ ಹಿಂದೆ ಹೊಸ ಕಾರನ್ನು ಸರ್ಕಾರ ಇವರಿಗೆ ನೀಡಿದೆ. ಅದರಲ್ಲಿ ಸೌಂಡ್ ಸಿಸ್ಟಮ್ ಇಲ್ಲದ್ದಕ್ಕೆ ಮೇಡಂ ಅವರು ಆರು ತಿಂಗಳ ಬಳಿಕ ಸುಮಾರು 60 ಸಾವಿರ ರೂ. ಸ್ವಂತ ಹಣ ಖರ್ಚು ಮಾಡಿ ಕಾರಿಗೆ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಆದ್ರೆ ಇದೀಗ ಆ ಹಣವನ್ನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೇಳುತ್ತಿದ್ದಾರೆ.

    ಅಧ್ಯಕ್ಷರು ಸಿಇಒ ಬಳಿ ಬಿಲ್ ಪಾಸ್ ಮಾಡಿಸುವಂತೆ ಕೇಳಿದಾಗ ಬಿಲ್ ಪಾಸ್ ಮಾಡುವ ಬದಲು ಸಿಇಒ ಟೆಂಡರ್ ಕರೆದಿದ್ದಾರೆ. ಅದು ಕೇವಲ 60 ಸಾವಿರ ರೂಪಾಯಿಗೆ ಟೆಂಡರ್ ಕರೆದಿದ್ದಾರೆ. ಸರ್ಕಾರಿ ನಿಯಮಗಳನುಸಾರ ಯಾವುದೇ ಕಾಮಗಾರಿ ಟೆಂಡರ್ ಕರೆಯಬೇಕೆಂದರೆ ಅದು ಒಂದು ಲಕ್ಷ ರೂಪಾಯಿ ದಾಟಿರಬೇಕು. ಆದರೆ ಅಧ್ಯಕ್ಷರ ಕಾರ್ ಮ್ಯೂಸಿಕ್ ಸಿಸ್ಟಮ್ ಸಲುವಾಗಿಯೇ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಈ ಟೆಂಡರ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನಾನು ಕಾರಿಗೆ ಸೌಂಡ್ ಸಿಸ್ಟಮ್ ಮೂರು ತಿಂಗಳ ಹಿಂದೆಯೇ ಹಾಕಿಸಿದ್ದು, ಅದರ ಹಣ ನೀಡಿ ಎಂದು ಕೇಳಿದ್ದೇನೆ ಎಂದು ಜಿ.ಪಂ ಅಧ್ಯಕ್ಷರು ಹೇಳುತ್ತಿದ್ದಾರೆ.

    10 ರಿಂದ 20 ಸಾವಿರ ರೂ.ಗೆ ಬರುವ ಮ್ಯೂಸಿಕ್ ಸಿಸ್ಟಮ್ ಗೆ 60 ಸಾವಿರ ಗಟ್ಟಲೆ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಅಂತಾ ಕೇಳಿದ್ರೆ, ಚೀನಾ ಮಾಡಲ್ ಗಳಿಗೆ ಬಿಲ್ ಕೊಡುವುದಿಲ್ಲ. ಅವು ಗ್ಯಾರಂಟಿ ಕೂಡ ಇರುವುದಿಲ್ಲ. ಹೀಗಾಗಿ ಒಳ್ಳೆಯ ಕ್ವಾಲಿಟಿ ಸಿಸ್ಟಮ್ ಅಳವಡಿಸಿದ್ದೇನೆ. ಆದರೆ ಪೂರ್ತಿ ಹಣವನ್ನ ಒಂದೇ ಬಾರಿ ಕೊಡಿ ಅಂತಾನು ನಾನು ಹೇಳಿಲ್ಲ ಹಂತ ಹಂತವಾಗಿ ಕೊಟ್ಟರೆ ಸಾಕು ಎಂಬುದು ಅಧ್ಯಕ್ಷರ ಮಾತಾಗಿದೆ.

    ಅಧ್ಯಕ್ಷರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಡೆಗೆ ಸದ್ಯ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ಕೇಳಿಬರುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅಧ್ಯಕ್ಷರು ತಮಗೆ ಹೊಂದಿಕೆಯಾಗಿಲ್ಲವೆಂದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಓಡಾಡಲಿ. ಈ ರೀತಿಯಾಗಿ ಸರ್ಕಾರಿ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಅಧ್ಯಕ್ಷರಿಗೆ ಕಂಪರ್ಟ್ ಆಗಿಲ್ಲ ಅನ್ನುವ ಕಾರಣಕ್ಕೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದು ಒಂದು ಕಡೆಯಾದರೆ, ಸರ್ಕಾರಿ ಕಾರುಗಳಲ್ಲಿ ದುಬಾರಿ ಸಿಸ್ಟಮ್ ಕೂಡಿಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಪ್ರಕರಣದ ಕುರಿತು ಅಧಿಕಾರಿಗಳನ್ನ ಸಂಪರ್ಕಿಸಿದರೆ ಇದಕ್ಕೂ ನಮಗೂ ಎನೂ ಸಂಬಂಧ ಇಲ್ಲ ಎನ್ನುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ ಅಂತ ಜನಸಾಮಾನ್ಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿರುಕು ಬಿಟ್ಟಿರೋ ಗೋಡೆ, ಬೀಳೋ ಸ್ಥಿತಿಯಲ್ಲಿ ಮೇಲ್ಛಾವಣಿ- ಚಿಕ್ಕೋಡಿಯ ಸರ್ಕಾರಿ ಶಾಲೆಯ ದುಸ್ಥಿತಿ

    ಬಿರುಕು ಬಿಟ್ಟಿರೋ ಗೋಡೆ, ಬೀಳೋ ಸ್ಥಿತಿಯಲ್ಲಿ ಮೇಲ್ಛಾವಣಿ- ಚಿಕ್ಕೋಡಿಯ ಸರ್ಕಾರಿ ಶಾಲೆಯ ದುಸ್ಥಿತಿ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಣಕಾಪುರದಲ್ಲಿರೋ ಸರ್ಕಾರಿ ಕನ್ನಡ ಮತ್ತು ಮರಾಠಿ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದೆ. ಕಲಿಕೆಗೆ ಯೋಗ್ಯವಲ್ಲ ಅಂತಾ ನೋಟಿಸ್ ಕೊಟ್ಟ ಮೇಲೂ ಅದೇ ಶಾಲೆಯಲ್ಲಿ ಪಾಠ-ಪ್ರವಚನ ನಡೀತಿದೆ. ಮಕ್ಕಳು ಸಾವನ್ನು ಎದುರು ನೋಡುತ್ತಾ ಪಾಠ ಕೇಳುತ್ತಿದ್ದಾರೆ.


    700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿರೋ ಈ ಶಾಲೆ ಶಿಥಿಲಾವಸ್ಥೆ ತಲುಪಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗ ಬೇಕಾದ್ರೂ ಬೀಳಬಹುದು. ಇನ್ನು ಮಳೆ ಗಾಳಿ ಬಂದ್ರಂತೂ ಊರಿನ ಗ್ರಾಮಪಂಚಾಯತ್ ಕಚೇರಿಯ ಕಟ್ಟಡ ಮತ್ತು ದೇವಸ್ಥಾನವೇ ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಶಾಲೆಯಾಗಿದೆ ಅಂತ ಶಿಕ್ಷಕ ಅವಧೂತ ಧನಗರ ತಿಳಿಸಿದ್ದಾರೆ.

    ಸುಮಾರು 70 ವರ್ಷಗಳ ಹಿಂದೆ ಗ್ರಾಮಸ್ಥರೇ ಹಣ ಸೇರಿಸಿ ಈ ಶಾಲೆಯನ್ನು ಕಟ್ಟಿದ್ದಾರೆ. ಹಾಗೆ ಕಟ್ಟಿದ ಕಟ್ಟಡಗಳು ಬೀಳೋ ಸ್ಥಿತಿಗೆ ಬಂದಿದೆ. ಈ ಬಗ್ಗೆ ಬೆಳಗಾವಿ ಡಿಸಿ, ಸಚಿವ ರಮೇಶ್ ಜಾರಕಿಹೊಳಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದ 12 ಜನರು ಸೇರಿ ಶಾಲೆಯ ಅಭಿವೃದ್ಧಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋ ಎಚ್ಚರಿಕೆ ನೀಡಿರುವುದಾಗಿ ಎಸ್‍ಡಿಎಂಸಿ ಸದಸ್ಯ ಜಗದೀಶ ಹೇಳಿದ್ದಾರೆ.

    ಸರ್ಕಾರಿ ಶಾಲೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಕೊಂಚ ಇತ್ತ ಕಡೆ ಗಮನಹರಿಸಿ ಜೀವ ಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳ ರಕ್ಷಣೆಗೆ ನಿಲ್ಲಲಿ ಎಂಬುವುದೇ ಎಲ್ಲರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಾನು ಯಾರನ್ನೂ ಕೆಣಕ್ಕಲ್ಲ, ಆದ್ರೆ ಅವ್ರಾಗಿಯೇ ನನ್ನನ್ನು ಕೆಣಕ್ತಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

    ನಾನು ಯಾರನ್ನೂ ಕೆಣಕ್ಕಲ್ಲ, ಆದ್ರೆ ಅವ್ರಾಗಿಯೇ ನನ್ನನ್ನು ಕೆಣಕ್ತಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

    ದಾವಣಗೆರೆ: ನಾನು ಯಾರನ್ನು ಕೆಣಕಲು ಹೋಗುವುದಿಲ್ಲ, ಆದರೆ ಅವರಾಗಿಯೇ ನನ್ನನ್ನು ಕೆಣಕಲು ಯತ್ನಿಸುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ಡಾ.ಮಹಾಂತ ಸ್ವಾಮಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಜೀವನದುದ್ದಕ್ಕೂ ಸಂಘರ್ಷದ ಹಾದಿಯಲ್ಲೇ ಬೆಳೆದು ಬಂದಿದ್ದೇನೆ. ಮಹಿಳೆಯರು ಭಾವನಾ ಜೀವಿಗಳು. ಆದರೂ ಸಹ ನಾನು ರಾಜಕೀಯ ಕ್ಷೇತ್ರದಲ್ಲಿ ದಿಟ್ಟತನದಿಂದ ನಡೆಯುತ್ತಿದ್ದೇನೆ. ಅಲ್ಲದೇ ಕೆಲವರು ನೀನು ಬಹಳ ಸ್ಪೀಡ್ ಆಗಿ ಹೋಗುತ್ತಿದ್ದಿಯಾ ಅಂತಾ ಬುದ್ದಿವಾದವನ್ನು ಹೇಳುತ್ತಿದ್ದಾರೆ. ನಾನು ಸುಮ್ಮನೇ ಯಾರನ್ನು ಕೆಣಕುವುದಿಲ್ಲ. ಆದರೆ ಅವರಾಗಿಯೇ ನನ್ನನ್ನು ಕೆಣಕುತ್ತಿದ್ದಾರೆ ಎಂದು ಕಿಡಿಕಾರಿದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇತಿಹಾಸದಲ್ಲಿ ಕಾಂಗ್ರೆಸ್ ಒಂದು ಬಾರಿಯೂ ಗೆದ್ದಿರಲಿಲ್ಲ. ಪಂಚಮಸಾಲಿ ಸಮಾಜ ಕಲಿಸಿದ ಆದರ್ಶದಿಂದ ಮರಾಠರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಗೆದ್ದು ತೋರಿಸಿದ್ದೇನೆ. ಈ ಸಮಾಜಕ್ಕೆ ಯಾವತ್ತು ಮೋಸ ಮಾಡುವುದಿಲ್ಲ. ಅಲ್ಲದೇ ಕೂಡಲ ಸಂಗಮ ಪೀಠವು ಈ ಪಂಚಮಸಾಲಿ ಪೀಠ ಒಂದಾಗಬೇಕು. ಇತರ ಸಮಾಜವನ್ನು ಒಗ್ಗೂಡಿ ಜೊತೆಯಲ್ಲಿ ಸಾಗೋಣವೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಲೆಗೆ ಬಿತ್ತು ಅಪರೂಪದ 33 ಕಿಲೋ ತೂಕದ ಮೀನು

    ಬಲೆಗೆ ಬಿತ್ತು ಅಪರೂಪದ 33 ಕಿಲೋ ತೂಕದ ಮೀನು

    ಬೆಳಗಾವಿ: 33 ಕಿಲೋ ತೂಕದ ಅಪರೂಪದ ಖಟಲಾ ಪ್ರಭೇದ ಮೀನು ಘಟಪ್ರಭಾ ನದಿಯ ಹಿಡಕಲ್ ಜಲಾಶಯದಲ್ಲಿ ಮೀನುಗಾರನ ಬಲೆಗೆ ಬಿದ್ದಿದೆ.

    ಘಟಪ್ರಭಾ ನದಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಸಿಕ್ಕಿದ್ದು ವಿಶೇಷವಾಗಿದೆ. ಹುಕ್ಕೇರಿ ಪಟ್ಟಣದ ಶಿವು ಭೋವಿ ಮೀನಿಗಾಗಿ ನದಿಗೆ ಬಲೆ ಹಾಕಿದ್ದರು. ಈ ಬಲೆಯಲ್ಲಿ ಕೇವಲ ಒಂದರಿಂದ ಎರಡು ಕಿಲೋ ತೂಕದ ಮೀನು ಮಾತ್ರ ಸಿಗುತ್ತಿತ್ತು. ಆದರೆ  ಅಪರೂಪವಾಗಿ ಈ ಸಾಮಾನ್ಯ ಬಲೆಯಲ್ಲಿ ಖಟಲಾ ಪ್ರಭೇದದ ಮೀನು ಸಿಕ್ಕಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮೀನುಗಾರ, ನಾನು ಪ್ರತಿದಿನ ಮೀನಿಗಾಗಿ ಬಲೆ ಬೀಸುತ್ತಿದ್ದೆ. ದಿನ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದೆ. ಆದರೆ ನನ್ನ ಜೀವನದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಸಿಕ್ಕಿರುವುದು ಇದೇ ಮೊದಲ ಬಾರಿ ಎಂದು ಮೀನುಗಾರ ಶಿವು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿಕ್ಕೋಡಿ ಭಾಗದಲ್ಲಿ ಒಂದೇ ದಿನ ಮೀನು 9 ಸಾವಿರ ರೂ. ಗಳಿಗೆ ಮಾರಾಟವಾಗುವದರ ಮೂಲಕ ದಾಖಲೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯವರು ನನಗೆ 30 ಕೋಟಿ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂದಿದ್ದರು- ಲಕ್ಷ್ಮಿ ಹೆಬ್ಬಾಳ್ಕರ್

    ಬಿಜೆಪಿಯವರು ನನಗೆ 30 ಕೋಟಿ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂದಿದ್ದರು- ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಬಿಜೆಪಿ ಮುಖಂಡರು ನನಗೆ ಪಕ್ಷಕ್ಕೆ ಬರಲು 30 ಕೋಟಿ ಹಣದ ಆಫರ್ ನೀಡಿದ್ದರು ಅಂತ ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರೇ ನನಗೆ ಫೋನ್ ಮಾಡಿದ್ರು. ಈ ವಿಚಾರವನ್ನು ನಮ್ಮ ಮುಖಂಡರ ಗಮನಕ್ಕೆ ತೆಗೆದುಕೊಂಡು ಬಂದೆ. ಬಿಜೆಪಿಯವರ ಮೆಸೇಜ್ ಗಳನ್ನು ಕೂಡ ನಮ್ಮ ಮುಖಂಡರಿಗೆ ತೋರಿಸಿದೆ. ಆ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆವಾಗ ಅವರ ಬಳಿ ಎಲ್ಲವನ್ನು ಹೇಳಿಕೊಂಡಿದ್ದೆ ಅಂದ್ರು.

    ನನ್ನನ್ನು ಕೂಡ ಅವರು ಸಂಪರ್ಕ ಮಾಡಿದ್ರು ಅಂತ ಹೇಳುತ್ತಿದ್ದೇನೆ. ಹೀಗೆ ಬೇರೆಯವರನ್ನು ಕೂಡ ಸಂಪರ್ಕ ಮಾಡಿರುವುದಾಗಿ ಈಗಾಗಲೇ ಎಲ್ಲರೂ ಹೇಳಿದ್ದಾರೆ. ಹೀಗೆ ಬಿಜೆಪಿಯವರು ನನಗೆ 30 ಕೋಟಿ ಕೊಡುವುದಾಗಿ, ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.

    ಪ್ರಜಾಪ್ರಭುತ್ವದಲ್ಲಿ ಸರ್ಕಾರ ಬಹಳಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ. ಅಪರೇಷನ್ ಕಮಲ ಅಥವಾ ಇನ್ಯಾವುದೋ ಆಪರೇಷನ್ ಆಗಲಿ ಕಾಂಗ್ರೆಸ್ ನವರು ಬಿಜೆಪಿಗೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ರು.

    ಇದೇ ವೇಳೆ ಈ ತರ ಆಫರ್ ಮಾಡದವರು ಯಾರು ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅದನ್ನೆಲ್ಲ ಇಲ್ಲಿ ಹೇಳಲು ಆಗಲ್ಲ. ನಮ್ಮ ಪಕ್ಷದ ವರಿಷ್ಠರಿಗೆ ಹೇಳೋದಾಗಿ ಆಫರ್ ಮಾಡಿದ ಬಿಜೆಪಿಯವರ ಹೆಸರು ಹೇಳಲು ನಿರಾಕರಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತ ಪರಿಹಾರ ಹಣ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ!

    ಅಪಘಾತ ಪರಿಹಾರ ಹಣ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ!

    ಚಿಕ್ಕೋಡಿ: ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪರಿಹಾರದ ಹಣವನ್ನು ನೀಡದ ಕಾರಣ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ವೊಂದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಅಪಘಾತದಿಂದಾಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಹಣವನ್ನು ನೀಡದ ಕಾರಣ, ಹುಕ್ಕೇರಿ ಜೆಎಂಎಫ್‍ಸಿ ನ್ಯಾಯಾಲಯ ಬಸ್ ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಏನಿದು ಪ್ರಕರಣ?
    2003ರಲ್ಲಿ ಸವದತ್ತಿ ತಾಲೂಕಿನ ಹಲ್ಕಿ ಕ್ರಾಸ್ ಬಳಿ, ನಿಂತಿದ್ದ ಕ್ರೂಸರ್ ವಾಹನಕ್ಕೆ ವಾಯುವ್ಯ ಸಾರಿಗೆಯ ಬಸ್ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ವಿಜಯ್ ಉಮಾರಾಣಿ (30) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಸಾರಿಗೆ ಸಂಸ್ಥೆಯ ವಿರುದ್ಧ ಮೃತ ಕುಟುಂಬದ ಸದಸ್ಯರು ದೂರು ನೀಡಿದ್ದರು. ದೂರು ನೀಡಿದ್ದರೂ ಸಹ ಪರಿಹಾರವನ್ನು ಮೃತ ಕುಟುಂಬಕ್ಕೆ ಸಾರಿಗೆ ಸಂಸ್ಥೆ ನೀಡಿರಲಿಲ್ಲ.

    ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ಮೃತ ವಿಜಯ್ ಉಮಾರಾಣಿ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹುಕ್ಕೇರಿಯ ಜೆಎಂಎಫ್‍ಸಿ ನ್ಯಾಯಾಲಯ ಪರಿಹಾರ ಮೊತ್ತ ನೀಡಿದ ವಾಯುವ್ಯ ಸಾರಿಗೆ ಸಂಸ್ಥೆ ವಿರುದ್ಧ ಬಸ್ ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv