Tag: Beggers

  • ಉಡುಪಿ, ಮಣಿಪಾಲದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 14 ಮಕ್ಕಳ ರಕ್ಷಣೆ

    ಉಡುಪಿ, ಮಣಿಪಾಲದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 14 ಮಕ್ಕಳ ರಕ್ಷಣೆ

    ಉಡುಪಿ: ನಗರದಲ್ಲಿ ಭಿಕ್ಷಾಟನೆ ನಿರತ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಮತ್ತು ಕಾರ್ಮಿಕಾ ಘಟಕ ಇಂದು ಜಂಟಿ ಕಾರ್ಯಾಚರಣೆ ಮಾಡಿತು.

    ಮಣಿಪಾಲ, ಉಡುಪಿ ಉದ್ಯಾವರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದೀಚೆ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಜಾಸ್ತಿಯಾಗಿತ್ತು. ಸಣ್ಣ ಮಕ್ಕಳನ್ನು ಹಿಡ್ಕೊಂಡು ಮಹಿಳೆಯರು ಭಿಕ್ಷೆ ಬೇಡುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿತ್ತು. ವಿವಿಧ ಇಲಾಖೆಗಳಿಗೆ ಈ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದವು. ಕಾರ್ಮಿಕ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಭಿಕ್ಷಾಟನೆ ಮೇಲೆ ನಿಗಾ ವಹಿಸಿತ್ತು.

    ಇಂದು ನಡೆದ ಕಾರ್ಯಾಚರಣೆಯಲ್ಲಿ 14 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದವರಲ್ಲಿ 4 ಬಾಲಕಿಯರನ್ನು ಬಾಲಮಂದಿರಕ್ಕೂ, 10 ಬಾಲಕ ಬಾಲಕಿಯರನ್ನು ಶಂಕರಪುರದ ಸ್ಫೂರ್ತಿ ವಿಶ್ವಾಸದ ಮನೆ ಸಂಸ್ಥೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಯ್ತು. ರಾಜಸ್ಥಾನ, ಆಂಧ್ರಪ್ರದೇಶ ಉತ್ತರ ಕರ್ನಾಟಕ ಗದಗ ಹುಬ್ಬಳ್ಳಿಯಿಂದ ಮಗುವಿನ ಜೊತೆ ಬಂದು ಕೆಲಕಾಲ ಉಡುಪಿಯಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಪಾದನೆ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕೆಲಕಾಲ ಉಡುಪಿಯಲ್ಲಿ ಭಿಕ್ಷಾಟನೆ ಮಾಡಿ ಇಲ್ಲಿಂದ ಬೇರೆ ಊರಿಗೆ ವಲಸೆ ಹೋಗಿ ಅಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಪುನರ್ವಸತಿ ಕೇಂದ್ರಕ್ಕೆ ವಹಿಸಲಾಗಿದ್ದು ಅವರ ಶಿಕ್ಷಣ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಮಕ್ಕಳ ರಕ್ಷಣೆ ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಹೆಸರಿಗೆ ಪಾನಿಪುರಿ ಅಂಗಡಿ ಸಂಪಾದನೆ ಮಾತ್ರ ಲಕ್ಷ ಲಕ್ಷ..!

    ಹೆಸರಿಗೆ ಪಾನಿಪುರಿ ಅಂಗಡಿ ಸಂಪಾದನೆ ಮಾತ್ರ ಲಕ್ಷ ಲಕ್ಷ..!

    -ಪಬ್ಲಿಕ್ ಬೇಟೆಯಲ್ಲಿ ತಗ್ಲಾಕ್ಕೊಂಡ್ರು ಸೈಡ್ ಬ್ಯುಸಿನೆಸ್ ಪಾನಿಪುರಿ ಒನರ್ಸ್.!

    ಬೆಂಗಳೂರು: ನೆಪಮಾತ್ರಕ್ಕೆ ಪಾನಿಪುರಿ ಬ್ಯುಸಿನೆಸ್ ಆದ್ರೆ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರೋ ಪಾನಿಪುರಿ ಅಂಗಡಿಯವರ ಅಸಲಿ ಮುಖ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ಮೂಲಕ ಬಯಲಾಗಿದೆ.

    ಪಾನಿಪುರಿ ಅಂಗಡಿ ಇಟ್ಕೊಂಡು ಲಕ್ಷ ಲಕ್ಷ ಎಣಿಸೋದಾ ಅದ್ಯಾಗೆ ಅಂತಾ ಅಚ್ಚರಿ ಆಗುತ್ತೆ. ಆದ್ರೆ ಇದು ನಿಜ, ಕೆ.ಆರ್ ಮಾರ್ಕೆಟ್‍ನ ಪಾನಿಪುರಿ ಮಾರೋರು ಲಕ್ಷಾಧಿಪತಿಗಳು ಅನ್ನೋದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ. ಕೆ.ಆರ್ ಮಾರ್ಕೆಟ್‍ನ ಬಸ್ ಸ್ಟ್ಯಾಂಡ್ ಬಳಿ ಚಕಚಕ ಅಂತಾ ಈರುಳ್ಳಿ ಟೊಮ್ಯೋಟೋ ಕಟ್ ಮಾಡಿಕೊಂಡು ಪಾನಿಪುರಿ ಮಾರುವ ಅಸಾಮಿಗಳು, ತಿಂಗಳಿಗೆ ಏನಿಲ್ಲ ಅಂದರೂ ಭರ್ತಿ ಲಕ್ಷ ಲಕ್ಷ ಸಂಪಾದಿಸ್ತಾರೆ.

    ಈ ಪಾನಿಪುರಿ ಅಂಗಡಿಗಳೆಲ್ಲ ಇವರಿಗೆ ನೆಪದ ಬ್ಯುಸಿನೆಸ್. ಅಸಲಿಗೆ ಇವರೆಲ್ಲ ಬೆಗ್ಗರ್ಸ್ ಮಾಫಿಯಾದ ಡಾನ್‍ಗಳು. ಕೆಲಸಕ್ಕೆ ಅಂತ ಬಡ ಹೆಣ್ಮಕ್ಕಳನ್ನು ದೂರದೂರಿಂದ ಕರ್ಕೊಂಡು ಬಂದು ಭಿಕ್ಷಾಟನೆಗೆ ಬಿಡೋದೇ ಅವರ ಅಸಲಿ ವ್ಯವಹಾರವಾಗಿದೆ.

    ಬೆಗ್ಗರ್ ಮಾಫಿಯಾದ ಸುದ್ದಿಯ ಬೆನ್ನತ್ತಿ ಹೊರಟ ಪಬ್ಲಿಕ್ ಟಿವಿಗೆ ಮಾರ್ಕೆಟ್‍ನ ಜನಜಂಗುಳಿಯ ಮಧ್ಯೆ ಭಿಕ್ಷೆ ಬೇಡುವ ಭಿಕ್ಷುಕರ ಹಿಂದಿನ ಅಸಲಿ ಕೈಗಳ ನಿಜಬಣ್ಣ ಗೊತ್ತಾಗಿದೆ. ಅಲ್ಲಿ ಪಾನಿಪುರಿ ಅಂಗಡಿಯೊಂದನ್ನು ಇಟ್ಕೊಂಡಿರೊ ವ್ಯಕ್ತಿ ಐದಾರು ಜನ ಭಿಕ್ಷುಕರ ಟೀಮ್ ಲೀಡ್ ಮಾಡುತ್ತಾನಂತೆ. ಇವನ ಟೀಮ್‍ನಲ್ಲಿರುವ ಒಬ್ಬ ಮಹಿಳೆಯ ಜೊತೆ ಮಾತನಾಡಿದಾಗ ಈ ಕರ್ಮಕಾಂಡವನ್ನು ಆಕೆ ಬಿಚ್ಚಿಟ್ಟಿದ್ದಾಳೆ.

    ಐದಾರು ಜನ ಕಳಿಸ್ತಾರೆ. ಕೆಲಸ ಕೊಡುಸುತ್ತೇವೆ ಅಂತ ನನನ್ನು ಊರಿಂದ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಬಂದು ನಾನು ಭಿಕ್ಷೆ ಬೇಡುತ್ತಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಭಿಕ್ಷೆ ಬೇಡಿ ಒಟ್ಟಾದ ಹಣವನ್ನು ಪಾನಿಪುರಿ ಅಂಗಡಿ ಅವರಿಗೆ ಕೊಡ್ತೀನಿ ಎಂದು ಈ ದಂಧೆಯಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಹೇಳಿದ್ದಾರೆ.

    ಕೆಲಸದ ಆಮಿಷವೊಡ್ಡಿ ಬಡ ಹೆಣ್ಣುಮಕ್ಕಳನ್ನು ದೂರದೂರಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಮಾರ್ಕೆಟ್‍ನ ಜನಜಂಗುಳಿ ಮಧ್ಯೆ ಭಿಕ್ಷೆ ಬೇಡಿಸಿ ಈ ಪಾನಿಪುರಿ ಅಂಗಡಿ ಅವರು ಹಣ ಮಾಡುತ್ತಿದ್ದಾರೆ. ಸರಿಯಾಗಿ ಈ ಹೆಣ್ಣುಮಕ್ಕಳಿಗೆ ತಿನ್ನೋಕೆ ಅನ್ನ, ಮಲಗೋಕೆ ಜಾಗ ಕೊಡುತ್ತಿಲ್ಲ. ಅಷ್ಟೇ ಅಲ್ಲದೆ ಕಾಯಿಲೆ ಬಂದು ಹುಷಾರಿಲ್ಲ ಅಂತ ಮಲಗಿದ್ರೆ ವಿಷ ಕುಡಿದು ಸತ್ತೋಗಿ ಅಂತ ಹಿಂಸೆ ಕೊಡುತ್ತಾರೆ ಈ ಪಾನಿಪುರಿ ಅಂಗಡಿಯ ದಂಧೆಕೋರರು ಎಂದು ನೊಂದ ಮಹಿಳೆ ತಿಳಿಸಿದ್ದಾರೆ.

    ಕೆಲ ಪಾನಿಪುರಿ ವ್ಯಾಪಾರಿಗಳು ಈ ರೀತಿ ಅಕ್ರಮ ದಂಧೆ ಮಾಡಿಕೊಂಡು ಕಂಡವರ ಮಕ್ಕಳನ್ನು ಗುಂಡಿಗೆ ದೂಡಿ ಲಕ್ಷ ಲಕ್ಷ ಎಣಿಸುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನೊಳಗೆ ನಡೆಯುವ ಈ ದಂಧೆಗೆ ಖಾಕಿ ಬ್ರೇಕ್ ಹಾಕಬೇಕು. ಹಾಗೆಯೇ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

    https://www.youtube.com/watch?v=ACmX0o8J9yk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಭಿಕ್ಷುಕರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಭಿಕ್ಷುಕರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಬೆಂಗಳೂರು: ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಮಲಗಿದ್ದ ಇಬ್ಬರು ಭಿಕ್ಷುಕರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ನಡೆದಿದೆ.

    ಹೊಸಕೋಟೆ ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರಲ್ಲಿ ಓರ್ವರನ್ನು ಹೊಸಕೋಟೆ ಪಟ್ಟಣದ ನಿವಾಸಿ ಮುನಿನಾರಾಯಣಪ್ಪನ ಮಗ ರಮೇಶ(36) ಎನ್ನಲಾಗಿದ್ದು, ಸುಮಾರು 35 ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ನಡೆಸಿದ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

    ರಾತ್ರಿ ಸುಮಾರು 2 ರಿಂದ 3 ಗಂಟೆ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.