Tag: beauty

  • ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಬೇಸಿಗೆ ಕಾಲ ಶುರುವಾಗಿದ್ದು, ಉರಿಬಿಸಿಲು ಮಾತ್ರ ಎಂದಿನಂತೆ ಈ ಬಾರಿಯೂ ಜೋರಾಗಿಯೇ ಇದೆ. ಅದರಲ್ಲೂ ಸೂರ್ಯನ ಕಿರಣಗಳು ನೇರವಾಗಿ ನಮ್ಮ ದೇಹದ ಮೇಲೆ ಬೀಳುವುದರಿಂದ ಚರ್ಮವು ಹಾನಿಯಾಗುತ್ತದೆ. ಸನ್ ಟ್ಯಾನ್, ಸನ್ ಬರ್ನ್ ನಂತಹ ಸಮಸ್ಯೆಗಳು ಎದುರಾಗುತ್ತದೆ. ಸುಡು ಬಿಸಿಲಿನಲ್ಲಿ ಮೈಯೊಡ್ಡಿಕೊಂಡು ಹೋದರೆ, ಮೈಯೆಲ್ಲಾ ಕಲೆಗಳು ಮೂಡುವುದು. ಅದರಲ್ಲೂ ಕೈ ಮತ್ತು ಮುಖದ ಮೇಲೆ ಇದು ಹೆಚ್ಚಾಗಿರುವುದು.

    ಬೇಸಿಗೆಯ ಕಾಲ ಬಂತೆಂದರೆ ಆರೋಗ್ಯ ಕಾಳಜಿ ಮಾತ್ರವಲ್ಲ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಸುಡುವ ಬಿಸಿಲಿನಿಂದ ಚರ್ಮವು ಬೇಗನೇ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ ಶುಷ್ಕವಾಗುತ್ತದೆ. ಬೇಸಿಗೆಯಲ್ಲಿ ಟ್ಯಾನಿಂಗ್ (Tanning), ಪಿಗ್ಮೆಂಟೇಶನ್ ಮತ್ತು ಸನ್ ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ.

    ಬೇಸಿಗೆಯಲ್ಲಿ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ (Sunscreen) ಅಥವಾ ಲೋಷನ್‌ಗಳು ಅತ್ಯಗತ್ಯ. ಆದರೆ ಅನೇಕ ಮಂದಿ ಸನ್‍ಸ್ಕ್ರೀನ್ ಹಚ್ಚಿ ಕೂಡ ಸಮಸ್ಯೆಗೊಳಗಾಗುತ್ತಾರೆ. ಏಕೆಂದರೆ ಕೆಲ ಲೋಷನ್‌ಗಳು ಕೆಲವರ ಚರ್ಮದ ಪ್ರಕಾರಕ್ಕೆ ಸರಿ ಹೊಂದುವುದಿಲ್ಲ ಅಥವಾ ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್‍ಸ್ಕ್ರೀನ್ ಕ್ರೀಮ್ ಬಳಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

    ಚರ್ಮಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಒಣ ಚರ್ಮ (Dry Skin), ಎಣ್ಣೆಯುಕ್ತ ಚರ್ಮ (Oily Skin), ಸಂಯೋಜಿತ ಚರ್ಮಗಳು (Combination Skin). ಇದರಲ್ಲಿ ಕೆಲವರ ಚರ್ಮ ಒಂದೊಂದು ರೀತಿಯ ವಿಧಗಳಿಗೆ ಹೊಂದಿಕೊಂಡಿರುತ್ತದೆ. ಈ ಮೂರು ವಿಧದ ಚರ್ಮದ ರೀತಿ ಹೊಂದಿರುವವರೆಗೂ ಬೇರೆ ಬೇರೆ ರೀತಿಯಾದಂತಹ ಚರ್ಮದ ಆರೈಕೆಯ ನಿಯಮಗಳಿರುತ್ತದೆ. ಅದರ ಅನುಗುಣವಾಗಿಯೇ ಚರ್ಮಕ್ಕೆ ಸರಿಹೊಂದುವ ಸನ್‍ಸ್ಕ್ರೀನ್ ಅಥವಾ ಲೋಷನ್‌ಗಳನ್ನು ಬಳಸಬೇಕು.

    ಸೂರ್ಯನ ಕಿರಣದಿಂದ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ ಕ್ರೀಮ್ ಅಥವಾ ಲೋಷನ್‌ಗಳನ್ನು ಬಳಸುತ್ತೇವೆ. ಇದು ಚರ್ಮದ ಮೇಲೆ ಉಂಟಾಗುವ ಹಾನಿ ಹಾಗೂ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಸನ್‌ಸ್ಕ್ರೀನ್‌ಗಳನ್ನು ಗಣನೀಯವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಸಲಹೆ ನೀಡಲಾಗುವುದು. ಜೊತೆಗೆ ಚರ್ಮವು ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ.

    ಸನ್‌ಸ್ಕ್ರೀನ್‌ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:
    ಸನ್‌ಸ್ಕ್ರೀನ್‌ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಗಮನಿಸಬೇಕು. ಎಸ್‍ಪಿಎಫ್ (SPF) ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್, ಇದು UVB ವಿಕಿರಣದ ವಿರುದ್ಧ ಸನ್‌ಸ್ಕ್ರೀನ್ ನೀಡುವ ರಕ್ಷಣೆಯ ಮಟ್ಟವನ್ನು ಅಳೆಯುತ್ತದೆ. ಸನ್‌ಸ್ಕ್ರೀನ್‌ಗಳು SPF 15, SPF 30 ಮತ್ತು SPF 50 ನಂತಹ ವಿಧಗಳಿವೆ.

    ಸನ್‌ಸ್ಕ್ರೀನ್‌ಗಳನ್ನು ಆರಿಸುವಾಗ 30+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 30 ಎಸ್‍ಪಿಎಫ್ ಕ್ರೀಮ್ ಗಳು ಶೇಕಡಾ 97 ರಷ್ಟು ಯುವಿಬಿ ಕಿರಣಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇಕಡಾ 100ರಷ್ಟು ಯುವಿಬಿ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಸನ್‌ಸ್ಕ್ರೀನ್‌ನಲ್ಲಿ ಆಕ್ಟಿನೊಕ್ಸೇಟ್ ಮತ್ತು ಆಕ್ಸಿಬೆನ್‍ಝೋನ್ ನಂತಹ ಅಂಶಗಳು ಇವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೆಲವರಿಗೆ ರಾಸಾಯನಿಕ ಉತ್ಪನ್ನಗಳಿಂದ ಅಲರ್ಜಿ ಉಂಟಾಗುವುದು. ಹಾಗಾಗಿ ಸನ್ ಸ್ಕ್ರೀನ್‌ಗಳನ್ನು ಆರಿಸುವಾಗ ಎಚ್ಚರವಹಿಸಬೇಕು.


    ಸನ್‌ಸ್ಕ್ರೀನ್‌ಗಳನ್ನು ಬಳಸುವ ವಿಧಾನ
    ಸನ್‌ಸ್ಕ್ರೀನ್‌ ಹಚ್ಚುವ ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಜೊತೆಗೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಕ್ರೀಮ್ ಅನ್ನು ಮುಖಕ್ಕೆ ಅನ್ವಯಿಸುವ ಮೊದಲು ನಿಮ್ಮ ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವ ಮೊದಲು ಅಂದರೆ 30 ನಿಮಿಷ ಮೊದಲು ಮುಖದ ಭಾಗಗಳಿಗೆ ಹಾಗೂ ಕೈಕಾಲುಗಳಿಗೆ ಕ್ರೀಮ್‌ಗಳನ್ನು ಹಚ್ಚಿಕೊಳ್ಳಬೇಕು. ಹೆಚ್ಚು ಬೆವರುವರಾದರೆ ಅಥವಾ ಮುಖವನ್ನು ಆಗಾಗ ಉಚ್ಚಿಕೊಳ್ಳುವವರಾದರೆ ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಳ್ಳಬೇಕು.

    ಈ ರೀತಿಯಾಗಿ ಬಿಸಿಲಿನಿಂದ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳಬಹುದು. ಸನ್‌ಸ್ಕ್ರೀನ್‌ಗಳನ್ನು ಬರೀ ಬೇಸಿಗೆಗಾಲದ ಹೊರತು ಎಲ್ಲಾ ಕಾಲಗಳಲ್ಲೂ ಬಳಸುವುದರಿಂದ ಚರ್ಮವು ಸುಂದರವಾಗಿರುತ್ತದೆ. ಮತ್ತು ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ.

  • ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ  ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

     

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕತ್ರಿನಾ ಕೈಫ್‌ ಅಷ್ಟು ಸುಂದರವಾಗಿ ಕಾಣೋದೇಕೆ? – ಬ್ಯೂಟಿ ಸೀಕ್ರೆಟ್‌ ಕೇಳಿದ್ರೆ ನೀವೂ ಅದನ್ನೇ ಮಾಡ್ತೀರಾ..

    ಕತ್ರಿನಾ ಕೈಫ್‌ ಅಷ್ಟು ಸುಂದರವಾಗಿ ಕಾಣೋದೇಕೆ? – ಬ್ಯೂಟಿ ಸೀಕ್ರೆಟ್‌ ಕೇಳಿದ್ರೆ ನೀವೂ ಅದನ್ನೇ ಮಾಡ್ತೀರಾ..

    ಸಿನಿ ತಾರೆಯರು (Film Actress) ಅಂದ್ರೆ ಸಾಕು, ಎಂತವರಿಗೂ ಒಮ್ಮೆ ಕಣ್ಣರಳಿಸಿ ನೋಡಬೇಕೆನಿಸುತ್ತೆ. ಹೊಳಪಿನ ಚರ್ಮ, ಮೋಹಕ ನಗು, ಬಳ್ಳಿಯಂತೆ ಬಳುಕುವ ದೇಹ, ರೇಷ್ಮೆಯಂತಹ ಕೂದಲು ಎಂತವರಿಗೂ ಕಣ್ಣುಕುಕ್ಕುವಂತೆ ಮಾಡುತ್ತೆ. ಹಾಗೆ ನೋಡಿದಾಗ ಸಿನಿ ತಾರೆಯರು ನಿಜಕ್ಕೂ ಏಕೆ ಅಷ್ಟೊಂದು ಸುಂದರವಾಗಿ ಕಾಣ್ತಾರೆ? ಅವರ ಬ್ಯೂಟಿ ಸೀಕ್ರೆಟ್‌ ಏನಿರಬಹುದು ಅನ್ನೋದರ ಬಗ್ಗೆ ತಿಳಿದುಕೊಳ್ಳಲೇಬೇಕು ಅನ್ನಿಸುತ್ತೆ.

    ಹೌದು. ನಟ, ನಟಿಯರು ಹುಟ್ಟಿನಿಂದಲೇ ಸೌಂದರ್ಯ ಹೊಂದಿರುವುದಿಲ್ಲ. ಅವರಲ್ಲಿರುವ ಗುರಿ ಮತ್ತು ಉದ್ದೇಶಗಳು ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸುತ್ತವೆ. ಹಾಗಾಗಿಯೇ ಸಿನಿ ತಾರೆಯರು ಉತ್ತಮ ಆಹಾರ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸುತ್ತಾರೆ. ಉದಾಹರಣೆಗೆ ಬೆಳಗ್ಗೆ ಗ್ರೀನ್ ಟೀ ಸೇವನೆ, ನಂತರ ವ್ಯಾಯಾಮ ಅಂತೆಲ್ಲಾ ಸಮಯ ಮೀಸಲಿಡುತ್ತಾರೆ. ಹಾಗೆಯೆ ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್‌ (Katrina Kaif) ತಮ್ಮ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋ ತುಣುಕು ಹಂಚಿಕೊಂಡಿದ್ದು, ಬ್ಯೂಟಿ ಸೀಕ್ರೆಟ್‌ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಕಂಡಂತೆ ಉರ್ಫಿ ಜಾವೇದ್

     

    View this post on Instagram

     

    A post shared by Katrina Kaif (@katrinakaif)

    ನನಗೆ ಉತ್ತಮ ತ್ವಚೆ (Skincare) ಕಾಪಾಡಿಕೊಳ್ಳುವುದು ತುಂಬಾ ಇಷ್ಟ. ಅದಕ್ಕಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತೇನೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಎರಡು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಬ್ಯೂಟಿ ಕಾಳಜಿಯ ದಿನಚರಿ ಆರಂಭಿಸುತ್ತೇನೆ. ನಂತರ ಸೆಲರಿ ಜ್ಯೂಸ್‌ ಕುಡಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Katrina Kaif (@katrinakaif)

    ಬಳಿಕ ಮುಖಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಫೇಸ್‌ ಮಸಾಜ್‌ ಮಾಡಿಕೊಳ್ಳುತ್ತೇನೆ, ಜೊತೆಗೆ ಮುಖವನ್ನ ಐಸಿಂಗ್‌ ಮಾಡಿಕೊಳ್ಳುತ್ತೇನೆ, ಈ ವಿಧಾನವನ್ನು ಹೆಚ್ಚು ಇಷ್ಟಪಡುತ್ತೇನೆ. ನಂತರ ಸಾಧ್ಯವಾದಷ್ಟು ಮಟ್ಟಿಗೆ ಮೇಕಪ್‌ ಅನ್ನು ನೈಸರ್ಗಿಕವಾಗಿಯೇ‌ ಕಾಣುವಂತೆ ಮಾಡಿಕೊಳ್ಳಲು ಬಯಸುತ್ತೇನೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗಿ ಮತ್ತಷ್ಟು ಫ್ರೆಶ್‌ ಲುಕ್‌ ನೀಡುತ್ತದೆ ಅಂತಾ ಬರೆದುಕೊಂಡಿದ್ದಾರೆ.

    ಉಪಾಹಾರ ವಿಧಾನ ಹೇಗೆ?
    ʻಆರೋಗ್ಯಕರ ಆಹಾರವೂ ಜೀವನಶೈಲಿಯ ಭಾಗವಾಗಿರಬೇಕುʼ ಎಂದು ನನ್ನ ತಾಯಿ ನನಗೆ ಹೇಳುತ್ತಿದ್ದರು. ಅದಕ್ಕಾಗಿ ನಾನು ಬೆಳಗ್ಗಿನ ತಿಂಡಿಯನ್ನು ಸರಳವಾಗಿ ತಿನ್ನಲು ಬಯಸುತ್ತೇನೆ. ಉಪಾಹಾರ ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಜೊತೆಗೆ ಮಧ್ಯಾಹ್ನ ಊಟಕ್ಕೆ ಬದಲಾಗಿ, ಇಡ್ಲಿ ಅನ್ನು ಮಧ್ಯಾಹ್ನದ ತಿಂಡಿಯಾಗಿ ತಿನ್ನುತ್ತೇನೆ. ಅಕ್ಕಿ ಮತ್ತು ಉರಾದ್‌ ದಾಲ್ ಹಿಟ್ಟಿನಿಂದ ತಯಾರಿಸಿದ ಇಡ್ಲಿಗೆ ಮೊಸರನ್ನೂ ಸೇರಿಸುತ್ತೇನೆ. ಇದರಿಂದ ಇಡ್ಲಿ ಮತ್ತಷ್ಟು ಸಾಫ್ಟ್‌ ಆಗುತ್ತದೆ. ಇಡ್ಲಿ ಜೊತೆಗೆ ಮೊರಿಂಗಾ ಪಾಲಕ್ ಚಟ್ನಿ, ಟೊಮೆಟೊ ಮತ್ತು ಬೀಟ್ರೂಟ್ ಚಟ್ನಿ ಹಾಗೂ ಸಾದಾ ತೆಂಗಿನಕಾಯಿ ಚಟ್ನಿ ಬಳಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

  • ಸುಮಲತಾಗೆ ‘ಬ್ಯೂಟಿ ಕ್ವೀನ್’ ಕಿರೀಟ ಹಾಕಿದ್ದರು ಜಮುನಾ

    ಸುಮಲತಾಗೆ ‘ಬ್ಯೂಟಿ ಕ್ವೀನ್’ ಕಿರೀಟ ಹಾಕಿದ್ದರು ಜಮುನಾ

    ಭಾರತೀಯ ಸಿನಿಮಾ ರಂಗದ ಹಿರಿಯ ನಟಿ ಜಮುನಾ (Jamuna) ನಿಧನದ ಹಿನ್ನೆಲೆಯಲ್ಲಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ ನಟಿ ಸುಮಲತಾ ಅಂಬರೀಶ್ (Sumalatha Ambarish). 43 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಅವರು ತಮ್ಮ 15ನೇ ವಯಸ್ಸಿನಲ್ಲಿ ‘ಬ್ಯೂಟಿ ಕ್ವೀನ್’ ಕಿರೀಟ ಧರಿಸಿದಾಗ, ಅದನ್ನು ಜಮುನಾ ಅವರೇ ಹಾಕಿದ್ದರು ಮತ್ತು ತಮಗೆ ಉತ್ತಮ ಭವಿಷ್ಯವಿದೆ ಎಂದು ನುಡಿದಿದ್ದರು ಎನ್ನುವುದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಫೇಸ್ ಬುಕ್ ನಲ್ಲಿ ಸಂತಾಪಗಳನ್ನು ಹಂಚಿಕೊಂಡಿರುವ ಸುಮಲತಾ ಅಂಬರೀಶ್, ‘ಬಹುಭಾಷಾ ನಟಿ ಜಮುನಾ ಅವರು ಅಗಲಿದ ಸುದ್ದಿ ಅತೀವ ದುಃಖವನ್ನು ತಂದಿದೆ. ಕನ್ನಡವೂ ಸೇರಿದಂತೆ ಅವರು ಹಲವು ಭಾಷೆಗಳಲ್ಲಿ ನಟಿಸಿದ ಮೇರುತಾರೆ. ನಟಿಯಾಗಿ, ರಾಜಕಾರಣಿಯಾಗಿ ಅವರು ಈ ನೆಲಕ್ಕೆ ಕೊಟ್ಟಿರುವ ಕೊಡುವೆ ಅಪಾರ. ತಾಯಿಗುಣದ ಜಮುನಾ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಸಿನಿಮಾ ಮತ್ತು ಸಮಾಜಮುಖಿ ಕೆಲಸಗಳು ಯಾವತ್ತಿಗೂ ಜೀವಂತ. ಜಮುನಾ ಅವರ ಜೊತೆ ನನಗೆ ತೀರಾ ಆತ್ಮೀಯ ಬಾಂಧವ್ಯವಿತ್ತು. 43 ವರ್ಷಗಳ ಹಿಂದೆ ಆಗ ನನಗೆ 15 ವರ್ಷ. ಅವರು ನನಗೆ ಬ್ಯೂಟಿ ಕ್ವೀನ್ ಕಿರೀಟ ತೊಡಿಸಿ ಹಾರೈಸಿದ್ದರು. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ನನ್ನ ಜೀವನದ ಬಗ್ಗೆ ಭವಿಷ್ಯ ನುಡಿದ ಮೊದಲ ನಟಿ ಅವರಾಗಿದ್ದರು’ ಎಂದು ಬರೆದುಕೊಂಡಿದ್ದಾರೆ.

    ಕನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 86ರ ವಯಸ್ಸಿನ ಹಿರಿಯ ನಟಿ ಹೈದರಾಬಾದ್ ನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳು ಅವರನ್ನು ಹೈರಾಣು ಮಾಡಿದ್ದವು. ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಜಮುನಾ.  ಆನಂತರ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ದಕ್ಷಿಣದ ಅಷ್ಟೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

    ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಜಮುನಾ, ಎನ್.ಟಿ.ಆರ್. ಜಗ್ಗಯ್ಯ ಸೇರಿದಂತೆ ಆ ಕಾಲದ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ದೊಂಗ ರಾಮುಟು, ಗುಂಡಮ್ಮ ಕಥ, ತೆನಾಲಿ ರಾಮಕೃಷ್ಣ ಹೀಗೆ ಇವರ ನಟನೆಯ ಸೂಪರ್ ಹಿಟ್ ಚಿತ್ರಗಳು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.

    ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಜಮುನಾ, 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸಿ ಕಂಡ ಹಿರಿಯ ಜೀವವಿದು. ನಟಿಯ ಅಗಲಿಕೆಗೆ ಚಿತ್ರೋದ್ಯಮ ಕಂಬಿನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

    ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

    ಹಿಳೆಯರು ಸೌಂದರ್ಯ ಪ್ರಿಯರು. ಹೆಚ್ಚಿನವರ ಮುಖದಲ್ಲಿ ಬ್ಲ್ಯಾಕ್‍ಹೆಡ್ಸ್ ಹಾಗೂ ವೈಟ್ ಹೆಡ್ಸ್ ಸಮಸ್ಯೆ ಇರುತ್ತದೆ. ಬ್ಲ್ಯಾಕ್‍ಹೆಡ್‍ಗಳು ಮತ್ತು ವೈಟ್‍ಹೆಡ್‍ಗಳು ಇದ್ದಾಗ, ಹೆಚ್ಚಿನ ಜನರು ಅವುಗಳನ್ನು ಒತ್ತುವ ಮೂಲಕ ತೆಗೆದುಹಾಕುತ್ತಾರೆ. ಅದು ಸರಿಯಾದ ಮಾರ್ಗವಲ್ಲ. ಹೀಗೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ನೀವು ಕೆಲವು ಸಿಂಪಲ್ ಟೀಪ್ಸ್‌ಗಳನ್ನು ಮನೆಯಲ್ಲಿಯೇ ಟ್ರೈ ಮಾಡಬಹುದಾಗಿದೆ.

    ನೈಸರ್ಗಿಕ ಪರಿಹಾರವನ್ನು ಹೇಳಲಿದ್ದೇವೆ, ಅದರ ಮೂಲಕ ನೀವು ಕಪ್ಪು ಮತ್ತು ಬಿಳುಪುಗಳ ಸಮಸ್ಯೆಯನ್ನು ಚಿಟಿಕೆಯಿಂದ ತೆಗೆದು ಹಾಕಬಹುದು. ವಿಶೇಷವೆಂದರೆ ಇದಕ್ಕಾಗಿ ನಿಮಗೆ ಯಾವುದೇ ವಿಶೇಷ ಪದಾರ್ಥಗಳ ಅಗತ್ಯವಿಲ್ಲ. ಇದನ್ನೂ ಓದಿ:  ಶಿವಣ್ಣನನ್ನು ಭೇಟಿಯಾಗಿ ಆಶೀರ್ವಾದ ಪಡೆದ ಮಂಜು ಪಾವಗಡ

    ಬ್ಲ್ಯಾಕ್ ಹೆಡ್ಸ್, ವೈಟ್‌ ಹೆಡ್ಸ್‌ಗೆ  ಕಾರಣ: ಚರ್ಮದಲ್ಲಿ ಸಂಗ್ರಹವಾದ ಹೆಚ್ಚುವರಿ ಎಣ್ಣೆ, ನೀರಿನ ಕೊರತೆ, ಕೊಳಕು, ಅತಿಯಾದ ಬೆವರುವುದು. ಎಣ್ಣೆಯುಕ್ತ ಚರ್ಮ, ಮುಖವನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ಈ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.

    * 1 ಟೀಸ್ಪೂನ್ ಅಕ್ಕಿ ಹಿಟ್ಟು, 1 ಟೀಸ್ಪೂನ್ ಪುಡಿ ಸಕ್ಕರೆ, 1 ಟೀಸ್ಪೂನ್ ಅಲೋವೆರಾ ಜೆಲ್, 1 ಟೀಸ್ಪೂನ್ ಗುಲಾಬಿ ನೀರು ಈ ಎಲ್ಲಾ ವಸ್ತುಗಳನ್ನು ಬೆರೆಸಿ ನೈಸರ್ಗಿಕ ಸ್ಕ್ರಬ್ ತಯಾರಿಸಿ ಮತ್ತು ನಿಮ್ಮ ತ್ವಚೆಯನ್ನು ಸೂಪರ್ ಕ್ಲೀನ್ ಮಾಡಿ.

    * ಅಕ್ಕಿ ಹಿಟ್ಟನ್ನು ಸ್ಕ್ರಬ್ ಆಗಿ ಬಳಸಲಾಗುತ್ತದೆ ಏಕೆಂದರೆ ಇದು ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಹೊಸ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಇದು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

    * ಪಪ್ಪಾಯ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿ. ಪಪ್ಪಾಯದಲ್ಲಿ ಆಲ್ಫಾ ಹೈಡ್ರಾಕ್ಸಿನ್ ಎಂಬ ಹಣ್ಣಿನ ಆಮ್ಲವಿದೆ. ಇದು ಮಸುಕಾದ ಮತ್ತು ಸತ್ತ ಜೀವಕೋಶಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಪಪ್ಪಾಯ ಹಣ್ಣಿನ ಲೇಪನ ಹೊಂದುವುದರಿಂದ ಮುಖದಲ್ಲಿ ಕಪ್ಪು ಕಲೆಗಳನ್ನು ನಿವಾರಿಸಿ ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

    * ಒಂದು ಬೌಲ್‍ಅಲ್ಲಿ ಎರಡು ಟೇಬಲ್ ಚಮಚ ಮೊಸರು, ಸ್ವಲ್ಪ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ. ಮೂಖಕ್ಕೆ ಹಚ್ಚಿದೆರ ನಿಮ್ಮ ಮೂಖ ಪಳ ಪಳನೆ ಹೊಳೆಯುತ್ತದೆ.

  • ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ದೇಹ ಸೌಂದರ್ಯಕ್ಕಾಗಿ ಎಷ್ಟೋ ಜನ ತುಂಬ ಪ್ರಯತ್ನ ಪಡುತ್ತಿರುರತ್ತಾರೆ. ನಾವು ಎಲ್ಲರ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಆದರೆ ಏನೋ ಮಾಡಲು ಹೋಗಿ, ಏನೋ ಮಾಡಿಕೊಂಡು ಇರುವ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಅಂತವರಿಗೆ ನೈಸರ್ಗಿಕವಾಗಿ ಹೇಗೆ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುವುದಕ್ಕೆ ಮಾಹಿತಿ ಈ ಕೆಳಗಿನಂತಿದೆ.

    ದಾಸವಾಳದಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು, ಅಧಿಕ ರಕ್ತದೊತ್ತಡ ನಿಯಂತ್ರಣ, ತೂಕ ನಷ್ಟ ಮತ್ತು ಕೂದಲು ಬೆಳವಣಿಗೆಗೆ ಇದು ಸಹಾಯಕವಾಗಿದೆ.

    ದಾಸವಾಳದ ಚಹಾದಿಂದಾಗುವ ಸೌಂದರ್ಯ ಪ್ರಯೋಜನಗಳು:
    1. ಹೊಸ ಚರ್ಮದ ಬೆಳವಣಿಗೆಗೆ ಸಹಾಯಕ: ದಾಸವಾಳದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಈ ಚಹಾ ಕುಡಿಯುವುದರಿಂದ ದೇಹದಲ್ಲಿ ಹಾಳಾದ ಚರ್ಮ ಬೆಳವಣಿಗೆಗೆ ಸಹಾಯಕವಾಗಿದೆ. ನಿಮ್ಮ ಚರ್ಮವನ್ನು ಆರೋಗ್ಯಕರ, ತಾರುಣ್ಯ ಮತ್ತು ಹೊಳೆಯುವಂತೆ ಮಾಡಲು ಉಪಯುಕ್ತವಾಗುತ್ತದೆ.

    2. ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

    3. ಉರಿಯೂತವನ್ನು ಸರಾಗಗೊಳಿಸುತ್ತದೆ: ಕಪ್ಪು ಕಲೆಗಳು, ಚರ್ಮ ಸುಕ್ಕಾಗಿರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಚರ್ಮದ ಮೇಲೆ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ನಿಯಂತ್ರಿಸಲು ಸಹ ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮಾನ್ಸೂನ್ ವೇಳೆ ಧರಿಸಬಹುದಾದ 7 ಶೈಲಿಯ ಡ್ರೆಸ್‍ಗಳು

    4. ಕೂದಲು ಬೇರುಗಳನ್ನು ಬಲಪಡಿಸುತ್ತದೆ: ದಾಸವಾಳದಿಂದ ಮಾಡಿದ ಚಹಾದ ಮತ್ತೊಂದು ಅದ್ಭುತ ಪ್ರಯೋಜನವೆಂದರೆ ಇದು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ಕೂದಲಿನ ಉತ್ತಮ ಬೆಳವಣಿಗೆಗೆ ಪ್ರಮುಖ ಪೋಷಕಾಂಶಗಳಾಗಿವೆ. ಆದ್ದರಿಂದ, ದಾಸವಾಳದ ಚಹಾವನ್ನು ಕುಡಿಯುವುದರಿಂದ ನಿಮ್ಮ ಕೂದಲು ದಪ್ಪ, ಹೊಳೆಯುವಂತೆ ಮತ್ತು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

    5. ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ: ನೀವು ದಾಸವಾಳದ ಚಹಾವನ್ನು ಕ್ಲೆನ್ಸರ್ ಆಗಿ ಬಳಸಿದರೆ, ತಲೆಹೊಟ್ಟು ನಿವಾರಣೆಯಾಗಲು ಸಹಾಯಕವಾಗುತ್ತದೆ. ಇದನ್ನೂ ಓದಿ:ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

    
    
  • ಬೊಜ್ಜು ಕರಗಿಸಿ ಸ್ಲಿಮ್‌ ಆಗಲು ಸ್ಕಲ್ಪ್ಟ್‌ಗೆ ಭೇಟಿ ನೀಡಿ

    ಬೊಜ್ಜು ಕರಗಿಸಿ ಸ್ಲಿಮ್‌ ಆಗಲು ಸ್ಕಲ್ಪ್ಟ್‌ಗೆ ಭೇಟಿ ನೀಡಿ

    ನೀವು ದಪ್ಪಗಿದ್ದೀರಾ? ನಿಮ್ಮ ತೂಕವನ್ನು ಕಡಿಮೆ ಮಾಡಬೇಕು ಎಂದು ಆಲೋಚಿಸುತ್ತಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ನಿಮ್ಮ ದೇಹಕ್ಕೆ ಅನುಗುಣವಾಗಿ ಸಲಹೆಗಳನ್ನು ನೀಡಿ ತೂಕವನ್ನು ಕಡಿಮೆ ಮಾಡುವ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಹೆಸರಾಂತ ಸಂಸ್ಥೆ ಬೆಂಗಳೂರಿನಲ್ಲಿದೆ.

    ಪ್ರಸಿದ್ಧ ಸ್ಕಲ್ಪ್ಟ್‌ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಸೌಂದರ್ಯ ಕ್ಷೇತ್ರದಲ್ಲಿ 2 ದಶಕಗಳ ಅನುಭವ ಹೊಂದಿರುವ ಗೀತಾ ಪಾಲ್‌ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಪ್ರತಿಯೊಬ್ಬರೂ ಸುಂದರವಾಗಿ ಜನಿಸಿದ್ದಾರೆ. ಸುಂದರವಾಗಿ ಜನಿಸಿದವರಿಗೆ ಸ್ವಲ್ಪ ಮಾರ್ಗದರ್ಶನ ನೀಡಿ ಅವರನ್ನು ಮತ್ತಷ್ಟು ಹೊಳೆಯುವಂತೆ ಮಾಡುವುದೇ ನಮ್ಮ ಧ್ಯೇಯ ಎಂದು ಸ್ಕಲ್ಪ್ಟ್‌ ಹೇಳಿಕೊಂಡಿದೆ.

    ಕೇವಲ ತೂಕ ಕಡಿಮೆ ಮಾತ್ರ ಅಲ್ಲ ಇಲ್ಲಿ ಲೇಸರ್‌ ಕೇಶ ಮಂಡನ(ಲೇಸರ್‌ ಹೇರ್‌ ರಿಮೂವಲ್‌) ಕೂದಲ ಕಸಿ( ಹೇರ್‌ ಟ್ರಾನ್ಸ್ಪಾಂಟ್‌), ಸೌಂದರ್ಯ ಸೇವೆ ಸಿಗುತ್ತದೆ. ಈ ಸೇವೆ ನೀಡಲೆಂದು ಸುಶಿಕ್ಷಿತ ಸಲಹೆಗಾರರು, ಪೌಷ್ಟಿಕತಜ್ಞರು, ಭೌತ ಚಿಕಿತ್ಸಕರು, ವೈದ್ಯರು, ತಂತ್ರಜ್ಞರು ತಂಡವೇ ಇದೆ.

    ಸ್ಲಿಮ್ಮಿಂಗ್ ಮತ್ತು ಸೌಂದರ್ಯದ ಇತ್ತೀಚಿನ ತಂತ್ರಜ್ಞಾನದ ಪ್ರಯೋಜನ ಸ್ಕಲ್ಪ್ಟ್‌ನಲ್ಲಿ ಸಿಗುವುದು ವಿಶೇಷ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿಕಿತ್ಸೆಯನ್ನು ಇಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

    ಬೊಜ್ಜು ಕರಗಿಸುವುದು ಅಂದರೆ ಅದು ಸುಲಭವಲ್ಲ. ವ್ಯಕ್ತಿಯ ಆರೋಗ್ಯ, ಆಹಾರ ಇವುಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಲ್ಲಿ ನುರಿತ ತಂಡವಿದ್ದು ಗ್ರಾಹಕರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಿ ಹಿತಮಿತವಾದ ಡಯಟ್‌ ಬಗ್ಗೆ ಸುಲಭವಾಗಿ ಅರ್ಥವಾಗುವ ಹಾಗೆ ಹೇಳಿಕೊಡುತ್ತಾರೆ. ಹೇಗೆ ಗ್ರಾಹಕರು ಬದಲಾಗಿದ್ದಾರೆ ಎಂದರೆ 86 ಕೆಜಿ ತೂಕದ19 ವರ್ಷದ ಯುವತಿ 53 ಕೆಜಿಗೆ ಇಳಿದಿದ್ದರೆ 10 ವಾರದಲ್ಲೇ 13.8 ಕೆಜಿ ತೂಕವನ್ನು ಇಳಿಸಿದ ಗ್ರಾಹಕರಿದ್ದಾರೆ.

    ಅಕ್ಟೋಬರ್‌ 16, 2016ರಂದು ಆರಂಭಗೊಂಡ ಸಂಸ್ಥೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರಿದ್ದಾರೆ. ಗುಣಮಟ್ಟದ ಸೇವೆ ನೀಡುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಸುಲಭವಾಗಲೆಂದು ಬೆಂಗಳೂರಿನ ಕೋರಮಂಗಲ, ಜಯನಗರ, ಸದಾಶಿವ ನಗರ, ಇಂದಿರಾ ನಗರದಲ್ಲಿ ಸ್ಕಲ್ಪ್ಟ್‌ ತನ್ನ ಕಚೇರಿಯನ್ನು ತೆರೆದಿದೆ.

    ಸಂಪರ್ಕ ಹೇಗೆ?
    www.sculptbygp.com ವೆಬ್‌ಸೈಟಿಗೆ ಭೇಟಿ ನೀಡಬಹುದು. ಅಲ್ಲಿ ನಿಮಗೆ ಯಾವ ಸೇವೆ ಬೇಕು ಎನ್ನುವುದನ್ನು ತಿಳಿಯಬಹುದು. ಒಂದು ಏನಾದರೆ ಸಂದೇಹಗಳಿದ್ದರೆ ಚಾಟ್‌ ಮಾಡುವ ಮೂಲಕ ಪ್ರಶ್ನಿಸಬಹುದು. ಒಂದು ವೇಳೆ ನೇರವಾಗಿ ಕರೆ ಮಾಡಬೇಕಾದರೆ 91080 80012 ಸಂಖ್ಯೆಗೆ ಕರೆ ಮಾಡಬಹುದು. ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಸ್ಕಲ್ಪ್ಟ್‌ ಕಚೇರಿಯನ್ನು ಸಂಪರ್ಕ ಮಾಡಬಹುದು.

    ಸ್ಕಲ್ಪ್ಟ್‌ನಲ್ಲಿ ಕೇವಲ ಕೂದಲ ಕಸಿ, ಬೊಜ್ಜು ಕರಗಿಸುವುದು ಮಾತ್ರ ಅಲ್ಲ ಮುಖದ ಮೇಕಪ್‌ ಹೇಗಿರಬೇಕು ಮತ್ತು ಯಾವ ರೀತಿ ಹೇರ್‌ ಸ್ಟೈಲ್‌ ಮಾಡಬಹುದು? ಇವುಗಳ ಬಗ್ಗೆ ಕೋರ್ಸ್‌ ಸಹ ಇಲ್ಲಿ ನೀಡಲಾಗುತ್ತದೆ. ಈ ವಿಷಯದ ತಜ್ಞರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.

    ಇನ್ಯಾಕೆ ತಡ ಈ ಮೇಲಿನ ವಿಷಯದಲ್ಲಿ ನಿಮಗೆ ಮತ್ತಷ್ಟು ವಿವರ ಬೇಕಿದ್ದರೆ ಕೂಡಲೇ www.sculptbygp.com ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಬಗೆ ಹರಿಸಿ ಲೈಫ್‌ ಲಾಂಗ್‌ ಸಂತೋಷವಾಗಿರಿ.

  • ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ

    ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ

    ಬೆಂಗಳೂರು: ವಯಸ್ಸಿಗು ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ. ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ನಟಿ ರಾಗಿಣಿ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಇದನ್ನೂ ಓದಿ: ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡೋರ ಬಗ್ಗೆ ಗೊತ್ತಿಲ್ಲ: ರಚಿತಾ ರಾಮ್

    ಪಬ್ಲಿಕ್ ಟಿವಿ ಜೊತೆ ಫೋನ್ ಮೂಲಕ ಮಾತನಾಡಿದ ನಟಿ ರಾಗಿಣಿ, ಕಳೆದ ಮೂರು ದಿನಗಳಿಂದ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ನಾನು ಸುದ್ದಿ ನೋಡಿ ತಿಳಿದುಕೊಂಡಿದ್ದೇನೆ. ಸ್ಟಾರ್ ನಟ-ನಟಿಯರ ಹೆಸರನ್ನು ಸುಮ್ಮನೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದರು.

    ಇಡೀ ದೇಶದಲ್ಲಿ ಏನೇನೋ ಸುದ್ದಿ ಹೋಗುತ್ತಿದೆ. ಏನೇನೋ ಕಥೆಗಳು ನಡೆಯುತ್ತಿದೆ. ಬಾಂಬೆಯಲ್ಲಿ ನಡೆಯುತ್ತಿರುವ ಕೇಸ್‍ನಿಂದ ಈ ವಿಚಾರ ಹೊರಗಡೆ ಬರುತ್ತಿದೆ. ರೂಟ್ ಕಾರ್ಟ್ ಮೂಲಕ ಎಲ್ಲರನ್ನೂ ಹುಡುಕಲಿ. ಆದರೆ ಅನಾವಶ್ಯಕವಾಗಿ ಇಂಡಸ್ಟ್ರಿ ಅಥವಾ ವೈಯಕ್ತಿಕವಾಗಿ ದೂಷಿಸುವುದು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಎಲ್ಲ ಮಾಹಿತಿ ಗೊತ್ತಿದ್ದರೆ ರಕ್ಷಣೆ ತೆಗೆದುಕೊಂಡು ಬಹಿರಂಗಪಡಿಸಲಿ. ಸುಮ್ಮನೆ ಊಹೆಯಿಂದ ಆರೋಪ ಮಾಡುವುದು ಸರಿಯಲ್ಲ. ಯಾವತ್ತಿದ್ದರೂ ಸತ್ಯ ಹೊರಗೆ ಬರಬೇಕು ಎಂದು ನಟಿ ರಾಗಿಣಿ ಗರಂ ಆದರು.

    ಇದೇ ವೇಳೆ ಸೌಂದರ್ಯ ಕಾಪಾಡಿಕೊಳ್ಳಲು ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ ರಾಗಿಣಿ, ಮೊದಲಿಗೆ ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ. ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಎಲ್ಲರೂ ನೈಸರ್ಗಿಕವಾಗಿ ಸೌಂದರ್ಯ ಹೊಂದಿರುತ್ತಾರೆ. ನೈಸಗಿರ್ಕ ಬ್ಯೂಟಿ ಆ್ಯಂಟಿ ಏಜಿಂಗೂ ಪ್ರಕ್ರಿಯೆ ಏನಿದೆ ಎಂದರೆ, ಮೆಡಿಟೇಶನ್, ವ್ಯಾಯಾಮದ ಮೂಲಕ ಮಾಡುತ್ತಾರೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಡ್ರಗ್ಸ್‌ಗೂ ಆ್ಯಂಟಿ ಏಜಿಂಗೂ ಸಂಬಂಧವೇ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದರು.

  • ಮದ್ವೆಯಾಗಿ ಮಗುವಿದ್ದ ಸಂಬಂಧಿ ಹಿಂದೆ ಬಿದ್ಳು- ಕಾಲುಗಳನ್ನ ಕತ್ತರಿಸಿ, ಸಮಾಧಿ ಮಾಡಿದ ಪ್ರಿಯಕರ

    ಮದ್ವೆಯಾಗಿ ಮಗುವಿದ್ದ ಸಂಬಂಧಿ ಹಿಂದೆ ಬಿದ್ಳು- ಕಾಲುಗಳನ್ನ ಕತ್ತರಿಸಿ, ಸಮಾಧಿ ಮಾಡಿದ ಪ್ರಿಯಕರ

    – 1 ತಿಂಗ್ಳ ನಂತ್ರ ನಾಪತ್ತೆಯಾಗಿದ್ದ ಬ್ಯೂಟಿಷಿಯನ್ ಶವ ಪತ್ತೆ

    ತಿರುವನಂತಪುರಂ: 42 ವರ್ಷದ ಮಹಿಳೆ ಕಾಣೆಯಾಗಿ ಒಂದು ತಿಂಗಳ ನಂತರ ಪೊಲೀಸರು ಆಕೆಯ ಶವವನ್ನು ಪಾಲಕ್ಕಾಡ್ ಜಿಲ್ಲೆಯಲ್ಲಿ ಪತ್ತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

    ಸುಚಿತ್ರಾ ಮೃತ ಮಹಿಳೆ. ಈಕೆಯನ್ನು ಪಾಲಕ್ಕಾಡ್ ಮೂಲದ ಸಂಗೀತ ಶಿಕ್ಷಕ ಪ್ರಶಾಂತ್(34) ಕೊಲೆ ಮಾಡಿದ್ದಾನೆ. ಬುಧವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕಾಲುಗಳನ್ನು ಕತ್ತರಿಸಿ ಅರ್ಧ ಸುಟ್ಟು, ಸಮಾಧಿ ಮಾಡಿದ್ದ ಸ್ಥಿತಿಯಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ.

    ಏನಿದು ಪ್ರಕರಣ?
    ಜಿಲ್ಲೆಯ ಕೊಟ್ಟಿಯಂ ಬಳಿಯ ತ್ರಿಕೋವಿಲ್‍ವಟ್ಟಂ ಮೂಲದ ಸುಚಿತ್ರಾ ಬ್ಯೂಟಿಷಿಯನ್ ಆಗಿದ್ದಳು. ಸುಚಿತ್ರಾಗೆ ಮದುವೆಯಾಗಿ ಪತಿಯಿಂದ ವಿಚ್ಛೇದನ ಪಡೆದುಕೊಂಡು ಪೋಷಕರ ಮನೆಯಲ್ಲಿದ್ದಳು. ಸುಚಿತ್ರಾ ಮಾರ್ಚ್ 18 ರಂದು ಕೊಚ್ಚಿಯಲ್ಲಿ ನಡೆಯುತ್ತಿದ್ದ ತರಬೇತಿ ಅಧಿವೇಶನಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದಳು. ಆದರೆ ಮಾರ್ಚ್ 20 ರಿಂದ ಆಕೆಯ ಫೋನ್ ನಾಟ್ ರೀಚೆಬಲ್ ಬಂದಿದೆ. ನಂತರ ಮಾರ್ಚ್ 22 ರಂದು ಸುಚಿತ್ರಾ ಕುಟುಂಬದವರು ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸುಚಿತ್ರಾ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಐದು ದಿನಗಳ ಕಾಲ ರಜೆ ತೆಗೆದುಕೊಂಡಿದ್ದು ತಿಳಿದುಬಂದಿದೆ. ನಂತರ ಪೊಲೀಸರು ಸುಚಿತ್ರಾರ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಸುಚಿತ್ರಾ ಪಾಲಕ್ಕಾಡ್‍ನ ಸಂಗೀತ ಶಿಕ್ಷಕನಾಗಿದ್ದ ಪ್ರಶಾಂತ್ ಜೊತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಮೃತ ಸುಚಿತ್ರಾ ಮತ್ತು ಪ್ರಶಾಂತ್ ಇಬ್ಬರು ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.

    ಕೊಲ್ಲಂನ ಅಪರಾಧ ವಿಭಾಗದ ಅಧಿಕಾರಿಗಳ ತಂಡ ತನಿಖೆಗಾಗಿ ಪಾಲಕ್ಕಾಡ್‍ಗೆ ಹೋಗಿದೆ. ಅಲ್ಲಿ ಸೈಬರ್ ಸೆಂಟರ್ ಸಹಾಯದಿಂದ ಆತನ ಕಾಲ್ ಟ್ರೇಸ್ ಮಾಡಿ ಪ್ರಶಾಂತ್ ನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಸುಚಿತ್ರಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾರ್ಚ್ 18 ರಂದು ಪ್ರಶಾಂತ್ ತಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದಾನೆ. ಅದೇ ದಿನ ಸುಚಿತ್ರಾ ಆತನ ಮನೆಗೆ ಹೋಗಿದ್ದಾಳೆ. ಇಬ್ಬರು ಒಟ್ಟಿಗೆ ಇದ್ದಾಗ ಜಗಳವಾಗಿದೆ. ಕೋಪದಲ್ಲಿ ಸುಚಿತ್ರಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಆರೋಪಿ ಪ್ರಶಾಂತ್‍ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಮೃತ ಸುಚಿತ್ರಾ ಆರೋಪಿ ಪ್ರಶಾಂತ್ ಪತ್ನಿಯ ದೂರದ ಸಂಬಂಧಿಯಾಗಿದ್ದು, ಮಗುವಿನ ನಾಮಕರಣ ದಿನ ಇಬ್ಬರಿಗೂ ಪರಿಚಯವಾಗಿದೆ. ಅಂದಿನಿಂದ ಇಬ್ಬರೂ ಸ್ನೇಹಿತರಾಗಿದ್ದರು. ದಿನ ಕಳೆದಂತೆ ಸುಚಿತ್ರಾ, ಪ್ರಶಾಂತ್‍ನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಇರಲು ಇಷ್ಟಪಟ್ಟಿದ್ದಳು. ಆದರೆ ಆರೋಪಿ ಪ್ರಶಾಂತ್ ಸಮಾಜದ ಭಯದಿಂದ ಇದಕ್ಕೆ ಒಪ್ಪಲಿಲ್ಲ. ಇದರಿಂದ ಮಧ್ಯೆ ಜಗಳ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ಪ್ರಶಾಂತ್ ಆಕೆಯ ಎರಡು ಕಾಲುಗಳನ್ನು ಕತ್ತರಿಸಿ, ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಪ್ರಯತ್ನಿಸಿದ್ದಾನೆ. ಕೊನೆಗೆ ಸುಡುವುದು ಬೇಡ ಎಂದು ಸಮಾಧಿ ಮಾಡಿದ್ದಾರೆ. ಪಾಲಕ್ಕಾಡ್‍ನ ರಾಮನಾಥಪುರಂ ಬಳಿಯ ಆತನ ಬಾಡಿಗೆ ಮನೆಯ ಆವರಣದಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಪೊಲೀಸರು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಆರೋಪಿ ಪ್ರಶಾಂತ್‍ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

     

  • ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೈದರಾಬಾದ್: ನಾನು ನಟಿ ಸೌಂದರ್ಯ ಅವರ ಜೊತೆ ಸಂಬಂಧ ಹೊಂದಿದ್ದೆ ಎಂದು ಟಾಲಿವುಡ್‍ನ ಖ್ಯಾತ ಖಳನಟ ಜಗಪತಿ ಬಾಬು ಅವರು ಹೇಳಿದ್ದಾರೆ.

    ಕನ್ನಡ, ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಅವರು 2004ರಲ್ಲಿ ಅಗಲಿದ್ದಾರೆ. ಆದರೆ ನಟಿ ಸೌಂದರ್ಯ ಜಗಪತಿ ಬಾಬು ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಸ್ವತಃ ಜಗಪತಿ ಬಾಬು ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಇತ್ತೀಚೆಗೆ ಮಾಧ್ಯಮಗಳ ಸಂವಾದದ ವೇಳೆ ಮಾತನಾಡಿದ ನಟ ಜಗಪತಿ, ಸೌಂದರ್ಯ ಅವರ ಜೊತೆ ಸಂಬಂಧ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

    “ಹೌದು, ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು. ನಾನು ಮತ್ತು ಸೌಂದರ್ಯ ಅವರ ಸಹೋದರ ಉತ್ತಮ ಸ್ನೇಹಿತರಾಗಿದ್ದೆವು. ಆದ್ದರಿಂದ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಈ ವೇಳೆ ಸೌಂದರ್ಯ ಅವರನ್ನ ಭೇಟಿ ಮಾಡುತ್ತಿದ್ದೆ. ಆದರೆ ಜನರು ಅವರ ಬಗ್ಗೆ ತಪ್ಪಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಸಂಬಂಧದ ಬಗ್ಗೆ ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ.

    ಸಾಮಾನ್ಯವಾಗಿ ಜನರು ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸುತ್ತಾರೆ. ಆದರೆ ನಮ್ಮಿಬ್ಬರ ಸಂಬಂಧ ವಿಭಿನ್ನವಾಗಿತ್ತು. ನಮ್ಮಿಬ್ಬರ ಮಧ್ಯೆ ಉತ್ತಮ ಭಾಂದವ್ಯವಿತ್ತು. ಅದು ಅವರೊಂದಿಗಿನ ನನ್ನ ಸಂಬಂಧ” ಎಂದು ಸ್ಪಷ್ಟ ಪಡಿಸಿದ್ದಾರೆ.

    ‘ರೈತು ಭಾರತಂ’ ಸಿನಿಮಾದ ಮೂಲಕ ಸೌಂದರ್ಯ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಸೌಂದರ್ಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಹಿಂದಿ ಸಿನಿಮಾದಲ್ಲೂ ಅಭಿನಯಸಿದ್ದಾರೆ. ಅವರು2004ರಲ್ಲಿ ಬಿಡುಗಡೆಯಾದ ‘ಆಪ್ತಮಿತ್ರ’ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಸದ್ಯಕ್ಕೆ ನಟ ಜಗಪತಿ ಬಾಬು ಸ್ಯಾಂಡಲ್‍ವುಡ್‍ನ ‘ರಾಬರ್ಟ್’ ಮತ್ತು ಉಪ್ಪಿ ರೂಪೀ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.