Tag: beaten

  • ಐಎಎಸ್ ಅಧಿಕಾರಿ, ಪತ್ನಿಯಿಂದ ಯುವಕನಿಗೆ ಹಿಗ್ಗಾಮುಗ್ಗ ಥಳಿತ..!

    ಐಎಎಸ್ ಅಧಿಕಾರಿ, ಪತ್ನಿಯಿಂದ ಯುವಕನಿಗೆ ಹಿಗ್ಗಾಮುಗ್ಗ ಥಳಿತ..!

    ಕೋಲ್ಕತ್ತಾ: ಯುವಕನೊಬ್ಬನಿಗೆ ಐಎಎಸ್ ಅಧಿಕಾರಿಯೊಬ್ಬರು ಇತರ ಪೊಲೀಸರ ಎದುರೇ ಮನಬಂದಂತೆ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಇದೀಗ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ.

    ನಿಖಿಲ್ ನಿರ್ಮಲ್, ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಇವರನ್ನು ಜನವರಿ 16ರ ವರೆಗೆ ಸರ್ಕಾರಿ ರಜೆಯ ಮೇಲೆ ಕಳುಹಿಸಲಾಗಿದೆ. ಹೀಗಾಗಿ ನಿಖಿಲ್ ಜಾಗಕ್ಕೆ ಚಿರಂಜಿಬ್ ಘೋಷ್ ಎಂಬವರನ್ನು ನೇಮಿಸಲಾಗಿದೆ. ಥಳಿತಕ್ಕೊಳಗಾದ ಯುವಕನನ್ನು ವಿನೋದ್ ಸರ್ಕಾರ್ ಎಂದು ಗುರುತಿಸಲಾಗಿದೆ.

    ವೈರಲ್ ಆದ ವಿಡಿಯೋದಲ್ಲೇನಿದೆ..?
    ನಿರ್ಮಲ್ ಹಾಗೂ ಅವರ ಪತ್ನಿ ಸ್ಥಳೀಯ ಯುವಕನೊಬ್ಬನಿಗೆ ಫಲಕಟ ಪೊಲೀಸ್ ಠಾಣೆಯ ಒಳಗಡೆ ಚೆನ್ನಾಗಿ ಥಳಿಸಿದ್ದಾರೆ. ಇದೇ ವೇಳೆ ಇನ್ಸ್ ಪೆಕ್ಟರ್ ಸೌಮ್ಯಜಿತ್ ರೇ ಕೂಡ ಅಲ್ಲೇ ಇದ್ದರು.

    ಥಳಿಸಿದ್ದು ಯಾಕೆ..?
    ಯುವಕನೊಬ್ಬ ನಿರ್ಮಲ್ ಪತ್ನಿಯ ಫೇಸ್ ಬುಕ್ ಪ್ರೊಫೈಲ್ ಫೋಟೋಗೆ ಅಶ್ಲೀಲ ಕಮೆಂಟ್ ಮಾಡಿದ್ದಾನೆ. ಕೂಡಲೇ ಆ ಯುವಕನ್ನು ಗುರುತಿಸಿ ಠಾಣೆಗೆ ಬರುವಂತೆ ಸೂಚಿಸಲಾಯಿತು. ಹೀಗೆ ಬಂದ ಯುವಕನಿಗೆ, ಹಿರಿಯ ಇನ್ಸ್ ಪೆಕ್ಟರ್ ಎದುರೇ ಐಎಎಸ್ ಅಧಿಕಾರಿ ಹಾಗೂ ಪತ್ನಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಅಚ್ಚರಿಯ ವಿಚಾರವೆಂದರೆ, ನನ್ನ ಜಿಲ್ಲೆಯಲ್ಲಿ ನನ್ನ ವಿರುದ್ಧ ಯಾವುದೇ ಕೆಲಸವನ್ನು ಮಾಡಲು ನಾನು ಬಿಡಲ್ಲ. ನಿನ್ನ ಮನೆಗೆ ಬಂದು ನಿನ್ನನ್ನು ಕೊಲ್ಲುತ್ತೇನೆ ಎಂದು ಯುವಕನಿಗೆ ಬೆದರಿಕೆ ಹಾಕುತ್ತಲೇ ಪತಿ, ಪತ್ನಿ ಇಬ್ಬರೂ ಮನಬಂದಂತೆ ಥಳಿಸಿದ್ದಾರೆ. ಇದೇ ವೇಳೆ ಪತ್ನಿ ಕೂಡ, ನಿನ್ನ ಇಂತಹ ನೀಚ ಕಮೆಂಟ್ ಮಾಡುವ ಹಿಂದೆ ಯಾರಿದ್ದಾರೆ ಹೇಳು ಎಂದು ಪ್ರಶ್ನಿಸಿ ಗದರಿಸಿದ್ದಾರೆ.

    ಪತಿ ಹಾಗೂ ಪತ್ನಿಯ ಥಳಿತದಿಂದ ಬೇಸತ್ತ ಯುವಕ ಹೊಡೆಯದಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಮಾತ್ರವಲ್ಲದೇ ಅಧಿಕಾರಿಯ ಕಾಲಿಗೆ ಬಿದ್ದು, ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದಾನೆ. ಆದ್ರೂ ಬಿಡದೇ ಅಧಿಕಾರಿ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಪ್ರಕರಣ ಸಂಬಂಧ ಅಧಿಕಾರಿಯಾಗಲಿ ಆಥವಾ ಅವರ ಪತ್ನಿಯಾಗಲಿ ಯಾವುದೇ ದೂರುಗಳನ್ನು ದಾಖಲಿಸಿಲ್ಲ. ದೂರು ದಾಖಲಿಸದೆಯೇ ಯುವಕನನ್ನು ಠಾಣೆಗೆ ಕರೆಸಿ ಥಳಿಸಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಬೆಂಗಳೂರು: ಹೆತ್ತ ಕಂದ ಅಮ್ಮನ ಮೇಲೆ ಕೈ ಮಾಡಿದ್ರು, ಕ್ಷಮಿಸಿ ತನ್ನ ಮಗನನ್ನು ಬಂಧ ಮುಕ್ತಗೊಳಿಸಲು ತಾಯಿ ಮುಂದಾಗಿದ್ದಾರೆ.

    ಅಮ್ಮನನ್ನ ಪೊರಕೆಯಲ್ಲಿ ಹೊಡೆದ ಮಗನಿಗೆ ಕ್ಷಮಾ ಬಿಕ್ಷೆ ನೀಡಲು ತಾಯಿ ನಿರ್ಧರಿಸಿದ್ದಾರೆ. ಶನಿವಾರದಂದು ಜೆ ಪಿ ನಗರದಲ್ಲಿ ತಾಯಿ ಮೇಲೆ ಪೊರಕೆಯಲ್ಲಿ ಮಗನೊಬ್ಬ ಹಲ್ಲೆ ಮಾಡಿದ್ದನು. ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಪೊರಕೆಯಿಂದ ಮಗ ಹೊಡೆದಿದ್ದನು. ಇದೀಗ ತನ್ನ ಕಂದನ ಮೇಲೆ ದೂರು ದಾಖಲಿಸಬೇಡಿ ಎಂದು ಪೊಲೀಸರ ಮೊರೆ ಹೋಗಿ ಮಗನ ಭವಿಷ್ಯ ಹಾಳಾಗುತ್ತೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ನಾನು ನನ್ನ ಮಗನಿಗೆ ಬುದ್ಧಿ ಹೇಳ್ತೀನಿ ಇಷ್ಟಕ್ಕೆ ಇದು ಸಾಕು, ದಯಮಾಡಿ ಅವನನ್ನ ಬಿಟ್ಟು ಬಿಡಿ ಎಂದು ಪೊಲೀಸರಿಗೆ ತಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಜೆಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಹುಡುಗನ ಅಮ್ಮ ಮನವಿ ಮಾಡಿದ್ದಕ್ಕೆ ಮಗನಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!

    ಭಾನುವಾರ ರಾತ್ರಿ ಹುಡುಗನ ಮೇಲೆ ಎಫ್‍ಐಆರ್ ದಾಖಲಾಗಿದ್ದ ಹಿನ್ನೆಲೆ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹುಡುಗ ಬಾಲಾಪರಾಧಿ ಎಂದು ಪತ್ತೆಯಾದ ಬಳಿಕ ತಾಯಿ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಮಂಗಳವಾರ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹುಡುಗನನ್ನ ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆನ್ನು ಕೇಳಿದ್ದಕ್ಕೆ 4ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕಿ

    ಪೆನ್ನು ಕೇಳಿದ್ದಕ್ಕೆ 4ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕಿ

    ಮಡಿಕೇರಿ: 4ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ಟೀಚರ್ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಉದ್ಘಮ್ ಶಾಲೆಯಲ್ಲಿ ನಡೆದಿದೆ.

    ಕುಶಾಲನಗರದ ನಿವಾಸಿ ಜನಿಪೊಳ್ ಎಂಬವರ ಮಗಳು ಕ್ಲಾಸಿನಲ್ಲಿ ತನ್ನ ಗೆಳೆಯರೊಂದಿಗೆ ಪೆನ್ನು ಕೇಳಿದ ಕಾರಣಕ್ಕೆ ಶಿಕ್ಷಕಿ ಮನಬಂದಂತೆ ಥಳಿಸಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ಸದ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಶಿಕ್ಷಕಿಯ ಥಳಿತದಿಂದ ವಿದ್ಯಾರ್ಥಿನಿಯ ಕಾಲು ಊದಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಗೆ ಮೂರು ಬಾರಿ ಶಿಕ್ಷಕಿ ಥಳಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪೋಷಕರಿಗೆ ಶಾಲಾ ಸಿಬ್ಬಂದಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿನಾಕಾರಣ ಥಳಿಸಿ ವಿದ್ಯಾರ್ಥಿಗಳಿಗೆ ಹಿಂಸೆ- ಶಿಕ್ಷಕಿಯ ವರ್ಗಾವಣೆ

    ವಿನಾಕಾರಣ ಥಳಿಸಿ ವಿದ್ಯಾರ್ಥಿಗಳಿಗೆ ಹಿಂಸೆ- ಶಿಕ್ಷಕಿಯ ವರ್ಗಾವಣೆ

    ಮೈಸೂರು: ವಿನಾಕಾರಣ ಥಳಿಸಿ ಹಿಂಸೆ ಕೊಡುತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಪೋಷಕರು ಪಟ್ಟು ಹಿಡಿದು ವರ್ಗ ಮಾಡಿಸಿದ್ದಾರೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಗೀತಾ ಗಾಯಿತ್ರಿ ವರ್ಗಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳಿಗೆ ಗೀತಾಗಾಯಿತ್ರಿ ಮನಬಂದಂತೆ ಥಳಿಸಿದ್ದರು. ಈ ವಿಚಾರವಾಗಿ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿ ಶಿಕ್ಷಕಿಯನ್ನ ಬೇರೆಡೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿದ್ರು.

    ವರ್ಗಾವಣೆ ಮಾಡದಿದ್ದಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಇಓ ಶಾಲೆಗೆ ಭೇಟಿ ಕೊಟ್ಟ ವಿಚಾರಣೆ ನಡೆಸಿದ ವೇಳೆ ಗೀತಾಗಾಯಿತ್ರಿ ಹಲ್ಲೆ ಮಾಡಿದ್ದು ರುಜುವಾತಾಗಿತ್ತು. ಕೂಡಲೇ ಬಿಇಓ ರವರು ಉಪನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹೆಣ್ಮಕ್ಕಳನ್ನು ಚುಡಾಯಿಸಿದ ವೃದ್ಧನನ್ನು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರಿಂದ ಥಳಿತ

    ಹೆಣ್ಮಕ್ಕಳನ್ನು ಚುಡಾಯಿಸಿದ ವೃದ್ಧನನ್ನು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರಿಂದ ಥಳಿತ

    ಮಂಗಳೂರು: ಹೆಣ್ಣುಮಕ್ಕಳನ್ನು ಚುಡಾಯಿಸಿದ ವೃದ್ಧನೊಬ್ಬನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳೂರಿನ ಬೆಂಗ್ರೇಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ವೃದ್ಧನೊಬ್ಬ ಸ್ಥಳೀಯ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದನು. ವೃದ್ಧನ ಈ ಅನಾಚಾರವನ್ನು ಸಹಿಸದ ಸ್ಥಳೀಯರು ಆತನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಬಳಿಕ ಚೆನ್ನಾಗಿ ಥಳಿಸಿದ್ದಾರೆ.

    ಹೆಣ್ಣು ಮಕ್ಕಳ ಹೆತ್ತವರು ವೃದ್ಧನಿಗೆ ಯದ್ವಾತದ್ವ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧನಿಗೆ ಧರ್ಮದೇಟು ಬೀಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದ್ದು, ಚಪಲ ತೀರದ ವೃದ್ಧನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಮೈಸೂರಲ್ಲಿ ಜೆಡಿಎಸ್ ಎಂಎಲ್‍ಎ ಪುತ್ರನ ದರ್ಪ- ಯುವಕನಿಗೆ ಸಾರಾ ಮಹೇಶ್ ಪುತ್ರನಿಂದ ಥಳಿತ

    ಮೈಸೂರಲ್ಲಿ ಜೆಡಿಎಸ್ ಎಂಎಲ್‍ಎ ಪುತ್ರನ ದರ್ಪ- ಯುವಕನಿಗೆ ಸಾರಾ ಮಹೇಶ್ ಪುತ್ರನಿಂದ ಥಳಿತ

    ಮೈಸೂರು: ಇಲ್ಲಿನ ಕೆ.ಆರ್ ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರ ಪುತ್ರ ದರ್ಪ ಮೆರೆದಿರೋ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನಾಲ್ಕೈದು ಮಂದಿ ಜೊತೆಗೂಡಿ ಯುವಕನೊಬ್ಬನ ಕೈ ಕಟ್ಟಿಸಿ ಮನಬಂದಂತೆ ಥಳಿಸುತ್ತಿದ್ದಾರೆ. ಅದರಲ್ಲೂ ಶಾಸಕ ಸಾ.ರಾ. ಮಹೇಶ್ ಅವರ ಮಗ ಜಯಂತ್ ಕಟ್ಟಿಗೆಯ ಕೋಲು ಹಿಡಿದುಕೊಂಡು ಯುವಕನಿಗೆ ಮನಬಂದಂತೆ ಥಳಿಸಿದ್ದಾನೆ.

    ದಮ್ಮಯ್ಯ ಬಿಟ್ಟುಬಿಡಿ ಅಂದ್ರು ಬಿಡದೇ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ತಾನು ಯುವಕನಿಗೆ ಥಳಿಸುತ್ತಿರುವ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದು ಶಾಸಕನ ಮಗನಿಗೆ ಗೊತ್ತಿದೆ. ತನ್ನ ದರ್ಪವನ್ನು ಪ್ರದರ್ಶನಕ್ಕಿಡಲು ಬೇಕಂತಲೇ ವಿಡಿಯೋ ಮಾಡಿದ್ದಾರೆ ಎನ್ನಲಾಗ್ತಿದೆ.

    ಅಂದಹಾಗೆ ಈ ಘಟನೆ ನಡೆದು ಒಂದೂವರೆ ವರ್ಷವಾಗಿದೆ. ಈಗ ರಾಜಕೀಯ ದುರುದ್ದೇಶದಿಂದ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಘಟನೆ ನಡೆದು ಎಷ್ಟು ದಿನವಾದರೂ ಆಗಲಿ. ಹೀಗೇ ಒಬ್ಬ ವ್ಯಕ್ತಿಯ ಮೇಲೆ ದೌರ್ಜನ್ಯ ಮಾಡೋದು ಎಷ್ಟು ಸರಿ. ಶಾಸಕರೇ ಇದೇನಾ ನಿಮ್ಮ ಪುತ್ರನಿಗೆ ನೀವು ಕಲಿಸಿರೋ ಸಂಸ್ಕೃತಿ ಅಂತ ಜನಸಾಮಾನ್ಯರು ಪ್ರಶ್ನಿಸಿದ್ದಾರೆ.

  • 5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    ಹೈದರಾಬಾದ್: ಇಲ್ಲಿನ ಟರ್ನಾಕಾದಲ್ಲಿರೋ ಸೇಕ್ರೆಡ್ ಹಾರ್ಟ್ ಶಾಲೆಯ 5 ವರ್ಷದ ಬಾಲಕನಿಗೆ ಚಡಿ ಏಟು ಕೊಟ್ಟ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಯುಕೆಜಿ ಓದುತ್ತಿದ್ದ ಮೊಹಮ್ಮದ್ ಖಾಜಾ ಲತೀಫ್ ಟೀಚರ್ ಕೈಯಿಂದ ಹೊಡೆತ ತಿಂದ ಬಾಲಕ. ಶಿಕ್ಷಕಿಯನ್ನು ಕುಮುಧಿನಿ ಎಂದು ಗುರುತಿಸಲಾಗಿದ್ದು, ಸದ್ಯ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಾಲೆಯಲ್ಲಿ ಟೀಚರ್ ಕೈಯಿಂದ ಹೊಡೆತ ತಿಂದ ಪರಿಣಾಮ ಬಾಲಕನ ಬೆನ್ನಲ್ಲಿ ಗಾಯಗಳಾಗಿದ್ದು, ಮನೆಗೆ ಬಂದು ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನ ದೂರನ್ನು ಆಲಿಸಿದ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.

    ಬೆಳಗ್ಗೆ ತರಗತಿ ನಡೆಯುತ್ತಿದ್ದ ವೇಳೆ ಬಾಲಕ ಲತೀಫ್ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಆತನಿಗೆ ಕಚ್ಚಿದ್ದಾನೆ. ಹೀಗಾಗಿ ಶಿಕ್ಷಕಿ ಕುಮುಧಿನಿ ಕೋಲಿನಿಂದ ಬಾಲಕನಿಗೆ ಹೊಡೆದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಆದ್ರೆ ಬಾಲಕನ ವಿರುದ್ಧ ಶಿಕ್ಷಕಿಯ ಕ್ರೂರ ವರ್ತನೆಗೆ ಶಿಕ್ಷೆಯಾಗಬೇಕು ಎಂದು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರೋ ಎನ್‍ ಜಿಒವೊಂದು ಪಟ್ಟು ಹಿಡಿದಿದೆ.

    ಸದ್ಯ ಬಾಲಕನ ತಾಯಿ ನೀಡಿದ ದೂರಿನನ್ವಯ ಐಪಿಸಿಯ ಸೂಕ್ತ ಸೆಕ್ಷನ್‍ಗಳಡಿ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.