Tag: beach

  • ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ಗಲಾಟೆ: ಯುವಕ-ಯುವತಿಯರಿಗೆ ಪೋಷಕರಿಂದಲೇ ಏಟು

    ಉಡುಪಿ: ಭಿನ್ನ ಕೋಮಿನ ಆರು ಯುವಕ-ಯುವತಿಯರಿಂದ ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಪೋಷಕರೇ ಯುವಕರಿಗೆ ಏಟು ನೀಡಿದ ಘಟನೆ ಉಡುಪಿಯ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ.

    ಬೀಚ್ ನಲ್ಲಿ ಬರ್ತ್ ಡೇ ಪಾರ್ಟಿ ನೆಪದಲ್ಲಿ ಅನುಚಿತ ವರ್ತನೆ ತೋರಿದ ಯುವಕ-ಯುವತಿಯರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿ ಮತ್ತು ಶೃಂಗೇರಿಯ ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದು, ಪೋಷಕರೇ ಏಟು ನೀಡಿದ್ದಾರೆ.

    ಈ ನಡುವೆ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮೂವರು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಮುಚ್ಚಳಿಕೆ ಬರೆಸಿ ಪೋಷಕರ ಜೊತೆ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ. ಇದೇ ವೇಳೆ ಬೀಚ್ ನಲ್ಲಿ ಅನುಚಿತ ವರ್ತನೆಗೆ ಅವಕಾಶ ಕೊಡಬೇಡಿ ಎಂದು ಸ್ಥಳೀಯರು ಒತ್ತಾಯಿಸಿದ್ರು.

  • ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಜಿಂಗ್: ಮದುವೆ ಫೋಟೋ ತುಂಬಾ ಚೆನ್ನಾಗಿ ಇರಬೇಕು ಅಂತ ಎಲ್ಲಾ ಜೋಡಿಗಳೂ ಆಸೆ ಪಡ್ತಾರೆ. ಹಾಗೇ ಇತ್ತೀಚೆಗೆ ವೆಡ್ಡಿಂಗ್ ಫೋಟೋಗ್ರಫಿ ಕೂಡ ತುಂಬಾ ಕಾಮನ್ ಆಗಿದೆ. ಕಣ್ಮನ ಸೆಳೆಯೋ ಸ್ಥಳಗಳಲ್ಲಿ ವಧು ವರ ಫೋಟೋ ತೆಗೆದಿಕೊಳ್ಳಬಯಸುತ್ತಾರೆ. ಆದ್ರೆ ಇಲ್ಲೊಂದು ಜೋಡಿಗೆ ರೊಮ್ಯಾಂಟಿಕ್ ಫೋಟೋಶೂಟ್ ದುಸ್ವಪ್ನದಂತಾಗಿತ್ತು. ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೀನಾದಲ್ಲಿ ಹೊಸದಾಗಿ ಮದುವೆಯಾಗಿದ್ದ ವಧು ವರರಿಬ್ಬರೂ ಸಮುದ್ರ ಕಿನಾರೆಯಲ್ಲಿ ಫೋಟೋ ಶೂಟ್ ಮಡಿಸುತ್ತಿದ್ರು. ಸಮುದ್ರದ ಬಂಡೆಗಳ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಪೋಸ್ ಕೊಡ್ತಿದ್ರು. ಈ ವೇಳೆ ಅವರು ಮುಂದೇನಾಗುತ್ತೆ ಅಂತ ನಿರೀಕ್ಷಿಸಿರಲಿಲ್ಲ. ಬಂಡೆ ಮೇಲೆ ನಿಂತ ಇಬ್ಬರೂ ಚುಂಬಿಸುತ್ತಾ ಪೋಸ್ ಕೊಡುತ್ತಿದ್ದಂತೆ ಅಲೆ ಬಂದು ಬಡಿದು ವಧು ಜಾರಿಬಿದ್ದಿದ್ದಾಳೆ. ಅಲೆಗಳ ರಭಸಕ್ಕೆ ಒಂದಿಷ್ಟು ದೂರ ಕೊಚ್ಚಿಹೋಗಿದ್ದಾಳೆ.

    ಆಕೆ ಬಿದ್ದ ಪರಿಣಾಮ ವರ ಕೂಡ ಕೆಳಗೆ ಬಿದ್ದಿದ್ದು, ಹೆಂಡ್ತಿಯನ್ನ ಹಿಡಿದುಕೊಂಡಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಈ ವಿಡಿಯೋಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕೆಲವರು ವಧು-ವರನ ಸ್ಥಿತಿ ನೋಡಿ ಅಯ್ಯೋ ಪಾಪ ಅಂದಿದ್ರೆ ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.

     

  • ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಯೇರಿ ಪರದಾಡಿದ ಬೆಂಗ್ಳೂರಿನ ಟೆಕ್ಕಿಯ ರಕ್ಷಣೆ

    ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಯೇರಿ ಪರದಾಡಿದ ಬೆಂಗ್ಳೂರಿನ ಟೆಕ್ಕಿಯ ರಕ್ಷಣೆ

    ಮಂಗಳೂರು: ಸೆಲ್ಫಿ ತೆಗೆಯಲು ಸಮುದ್ರ ದಡದ ಪಕ್ಕದಲ್ಲಿದ್ದ ಬಂಡೆಕಲ್ಲು ಹತ್ತಿ ಬಳಿಕ ದಡ ಸೇರಲಾಗದೆ ಪರದಾಡುತ್ತಿದ್ದ ಟೆಕ್ಕಿಯನ್ನು ರಕ್ಷಣೆ ಮಾಡಿದ ಘಟನೆ ಸುರತ್ಕಲ್ ಬೀಚ್ ನಲ್ಲಿ ಇಂದು ನಡೆದಿದೆ.

    ಬೆಂಗಳೂರಿನ ಕೆ ಅರ್ ಪುರಂ ನಿವಾಸಿ ಭರತ್ ಮತ್ತು ಏಳು ಮಂದಿ ಗೆಳೆಯರ ತಂಡ ಸುರತ್ಕಲ್ ಲೈಟ್ ಹೌಸ್ ಬಳಿ ಸಮುದ್ರ ತೀರಕ್ಕೆ ಆಗಮಿಸಿದ್ರು. ಈ ವೇಳೆ ಟೆಕ್ಕಿ ಭರತ್ ಸಮುದ್ರದ ಸುಂದರ ದ್ರಶ್ಯದೊಂದಿಗೆ ತನ್ನ ಸೆಲ್ಫಿ ತೆಗೆಯಲು ಸಮುದ್ರದ ದಡದಲ್ಲಿದ್ದ ಬಂಡೆಕಲ್ಲಿನ್ನು ಏರಿದ್ದರು.

    ಈ ವೇಳೆ ಸಮುದ್ರದ ಅಲೆಗಳು ಹೆಚ್ಚಾಗಿರೋದ್ರಿಂದ ಕೆಳಗೆ ಇಳಿಯಲಾಗದೆ ಪರದಾಡಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಶಾಸಕ ಮೊಯಿದ್ದೀನ್ ಬಾವನಿಗೆ ವಿಚಾರ ತಿಳಿಸಿದ್ದು ತಕ್ಷಣ ಜಾವೇದ್ & ಟೀಮ್ ಜೀವ ರಕ್ಷಕ ತಂಡಕ್ಕೆ ಕೂಡಲೇ ಮಾಹಿತಿ ರವಾನಿಸಿದ್ದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದ ಜೀವ ರಕ್ಷಕ ತಂಡ ಟೆಕ್ಕಿ ಭರತ್ ನನ್ನು ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=kWnBGOZd6Lk&feature=youtu.be

  • ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ್ ಬೀಚ್ ವಿಶ್ವದಲ್ಲೇ 8ನೇ ಸುಂದರ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಅಮೆರಿಕದ ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್ ವಿಶ್ವದ 343 ಬೀಚ್‍ಗಳನ್ನು ಗುರುತಿಸಿ ಶ್ರೇಯಾಂಕ ನೀಡಿದೆ. ಈ ಪಟ್ಟಿಯಲ್ಲಿ ರಾಧಾನಗರ್ ಬೀಚ್‍ಗೆ ವಿಶ್ವದಲ್ಲಿ 8ನೇ ಸ್ಥಾನ ಸಿಕ್ಕಿದೆ.

    ಏಷ್ಯಾ ಖಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ರಾಧಾನಗರ್ ಬೀಚ್‍ಗೆ ಸಿಕ್ಕಿದರೆ, ಐದನೇ ಸ್ಥಾನವನ್ನು ಗೋವಾ ಬೀಚ್ ಪಡೆದುಕೊಂಡಿದೆ.

    ಬ್ರೆಜಿಲ್‍ನ ಫೆರ್ನಾಂಡೋ ಡಿ ನೂರನ್ಹಾ ಬೀಚ್ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಫಿಲಿಪ್ಪೀನ್ಸ್ ವೈಟ್ ಬೀಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    12 ತಿಂಗಳ ಅವಧಿಯಲ್ಲಿ ಈ ಬೀಚ್‍ಗೆ ಭೇಟಿ ನೀಡಿದ ಪ್ರವಾಸಿಗರು ನೀಡಿದ ರೇಟಿಂಗ್ ಆಧಾರದಲ್ಲಿ ಟ್ರಿಪ್ ಅಡ್ವೈಸರ್ ಈ ಶ್ರೇಯಾಂಕ ನೀಡಿದೆ.

  • ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

    ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

    ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

    ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.