Tag: BDA

  • ಸುಮನಹಳ್ಳಿ ಫ್ಲೈಓವರ್ 10 ದಿನ ಬಂದ್ – ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ ಆಯುಕ್ತ

    ಸುಮನಹಳ್ಳಿ ಫ್ಲೈಓವರ್ 10 ದಿನ ಬಂದ್ – ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ ಆಯುಕ್ತ

    ಬೆಂಗಳೂರು: ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಫ್ಲೈ ಓವರ್ 10 ದಿನ ಬಂದ್ ಆಗಲಿದೆ. ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಈ ಗುಂಡಿ ಅಲ್ಲದೇ ಮೇಲ್ಸೇತುವೆ ಹಲವು ಗುಂಡಿಗಳು ಎದ್ದಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು 10 ದಿನಗಳ ಕಾಲ ಮೇಲ್ಸೇತುವೆ ಮೇಲೆ ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿ ಕಡೆ ಹೋಗುವ ವಾಹನಗಳು ಎಂದಿನಂತೆ ಫ್ಲೈಓವರ್ ಮೇಲೆ ಸಂಚರಿಸಬಹುದಾಗಿದೆ.

    ಸುಮನಹಳ್ಳಿ ಸಿಗ್ನಲ್‍ನಲ್ಲಿ ವಿಜಯನಗರ, ಮಾರುಕಟ್ಟೆ ಕಡೆಯಿಂದ ಸುಂಕದಕಟ್ಟೆ, ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ವಾಹನಗಳು ಸಂಚರಿಸುತ್ತವೆ. ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಡಿಎ ಫ್ಲೈಓವರ್ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಉದ್ಘಾಟನೆಯಾದ ಬಳಿಕ 2016ರವರೆಗೆ ಬಿಡಿಎ ನಿರ್ವಹಣೆ ಮಾಡಿ ನಂತರ ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ವಹಣೆ ಸರಿ ಮಾಡದ ಪರಿಣಾಮ ರಸ್ತೆ ಗುಂಡಿ ಬಿದ್ದಿದೆ. ಇದನ್ನು ಓದಿ: ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ಗುಂಡಿ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ವತಃ ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೇಲ್ಸೇತುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೇತುವೆ ಮೇಲೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಇರುವುದರಿಂದ ಗುಂಡಿ ಬಿದ್ದಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಸೇತುವೆ ನಿರ್ವಹಣೆ ಮಾಡಿರಲಿಲ್ಲ. ಈ ಬ್ರಿಡ್ಜ್ ನಿರ್ಮಾಣ ಮಾಡಿದ ಚೆನ್ನೈ ಮೂಲದ ಖಾಸಗಿ ಸಂಸ್ಥೆ ಇಸಿಸಿಐ 3 ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿದೆ. ಈ ಸೇತುವೆ ಹಾಳಾಗಳು ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ನೇರವಾಗಿ ಹೇಳಿದ್ದಾರೆ.

    ಶುಕ್ರವಾರ ರಾತ್ರಿ ಗುಂಡಿ ಬಿದ್ದಿದ್ದರೂ ವಾಹನ ದಟ್ಟನೆ ಹೆಚ್ಚಿದ್ದ ಕಾರಣ ಬ್ಯಾರಿಕೇಡ್ ಹಾಕಿ ರಸ್ತೆಯ ಒಂದು ಬದಿಯಲ್ಲಿ ಸಂಚಾರ ನಡೆಸಲು ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಅನುಮತಿ ನೀಡಿದ್ದರು. ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಫ್ಲೈ ಓವರ್ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಈಗ ವಾಹನಗಳು ಸೇತುವೆಯ ಅಡಿ ಭಾಗದಿಂದ ಸಂಚರಿಸುತ್ತಿವೆ.

  • ಮಾರ್ಚಿನಲ್ಲೇ  ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    ಮಾರ್ಚಿನಲ್ಲೇ ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    – ಮಂದಗತಿಯಲ್ಲಿ ಬಿಡಿಎ ಲ್ಯಾಂಡ್ ಆಡಿಟ್
    – 5 ಸಾವಿರ ಕೋಟಿ ನಷ್ಟ ಸಾಧ್ಯತೆ

    ಬೆಂಗಳೂರು: ಮಾರ್ಚ್ ತಿಂಗಳಿನಲ್ಲೇ ಮುಗಿಯಬೇಕಿದ್ದ ಬಿಡಿಎ ಆಡಿಟ್ ಮಂದಗತಿಯಲ್ಲಿ ಸಾಗುತ್ತಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಒಟ್ಟು 5 ಸಾವಿರ ಕೋಟಿ ನಷ್ಟವಾಗಿರುವ ಸಾಧ್ಯತೆಯಿದೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರಂಭಗೊಂಡ ಬಳಿಕ ಇಲ್ಲಿಯವರೆಗೆ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಬಿಡಿಎಯ ಆಸ್ತಿ ಬಗ್ಗೆ ನಿಖರವಾದ ಮಾಹಿತಿ ಬಿಡಿಎ ಬಳಿಯೇ ಇಲ್ಲದೇ ಇರುವುದರಿಂದ ಲ್ಯಾಂಡ್ ಆಡಿಟ್ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿತ್ತು.

    ದಾಖಲೆಗಳ ಪ್ರಕಾರ ಮಾರ್ಚ್ ತಿಂಗಳಿಗೇ ಲ್ಯಾಂಡ್ ಆಡಿಟ್ ಮುಗಿಯಬೇಕಾಗಿತ್ತು. ಆದರೆ ಅಕ್ಟೋಬರ್ ಆದರೂ ಲ್ಯಾಂಡ್ ಆಡಿಟ್ ಅಪೂರ್ಣವಾಗಿದೆ. ಇಲ್ಲಿಯವರೆಗೆ ಕೇವಲ 20 ಬಡಾವಣೆಗಳ ಆಡಿಟ್ ಮುಗಿದಿದೆ ಎಂದು ದಾಖಲೆಗಳು ತಿಳಿಸಿವೆ. ಲ್ಯಾಂಡ್ ಆಡಿಟ್ ನಿಧಾನವಾಗಲು, ಬಿಡಿಎ ನಲ್ಲಿ ಸಿಬ್ಬಂದಿ ಕೊರತೆಯ ಜೊತೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಕಾರಣ ಎಂದು ಹೇಳಲಾಗ್ತಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣಗೊಂಡರೆ ಬೆಲೆಬಾಳುವ ಆಸ್ತಿಯನ್ನು ಒತ್ತುವರಿ ತೆರವು ಮಾಡಬೇಕಿದೆ. ಅಲ್ಲದೆ ದುರ್ಬಳಕೆಮಾಡಿಕೊಂಡವರ ಹೆಸರೂ ಬಹಿರಂಗವಾಗಲಿದ್ದು, ತಪ್ಪಿತ್ತಸ್ಥ ಮಾಲೀಕರು ಹಾಗೂ ಅಧಿಕಾರಿಗಳಿಗೂ ಶಿಕ್ಷೆಯಾಗಲಿದೆ. ಈಗಾಗಲೇ 2,500 ಸಾವಿರ ಎಕರೆ ಜಾಗ ನಗರದ ಹೃದಯ ಭಾಗ ಹಾಗೂ ಸುತ್ತಮುತ್ತ ಖಾಸಗಿ ವ್ಯಕ್ತಿಗಳು, ಪ್ರಭಾವಿಗಳ ಪಾಲಾಗಿವೆ. ಇದರಿಂದ ಐದು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಬಿಡಿಎಗೆ ನಷ್ಟವಾಗಿದೆ ಎಂಬ ಲೆಕ್ಕಾಚಾರವಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣವಾದರೆ ಇದರ ಪಕ್ಕಾ ಲೆಕ್ಕ ಸಿಗಲಿದ್ದು, ನಷ್ಟದಲ್ಲಿರುವ ಬಿಡಿಎಗೂ ಆರ್ಥಿಕ ಬಲ ಬರಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪ್ರತಿಕ್ರಿಯಿಸಿದ್ದಾರೆ.

    ಬಿಡಿಎ ಆರಂಭದಿಂದ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿ 38 ಸಾವಿರ ಎಕರೆ ಜಮೀನನ್ನು ಭೂಮಾಲೀಕರಿಂದ ವಶಪಡಿಸಿಕೊಂಡಿದೆ. 38 ಸಾವಿರ ಎಕರೆ ಜಮೀನಿನನಲ್ಲಿ ನಿವೇಶನ ನಿರ್ಮಾಣಕ್ಕಾಗಿ 19,000 ಎಕರೆ ಬಳಸಲಾಗಿದೆ. ಜಾಗದ ಮಾಲೀಕರಿಗೆ ಪರಿಹಾರ ನೀಡಿಯೂ, 2500 ಎಕರೆ ದುರ್ಬಳಕೆಯಾಗಿರುವ ಸಾಧ್ಯತೆ ಇದೆ. ಬಿಡಿಎಯ 38 ಸಿ ಬಿಡಿಎ ತಿದ್ದುಪಡಿ ಪ್ರಕಾರ, ನಿಗದಿತ ಶುಲ್ಕವನ್ನು ಭೂಮಾಲೀಕರಿಂದ ಪಡೆದರೆ, ಮಾಲೀಕರಿಗೆ ರೆವೆನ್ಯೂ ದಾಖಲೆಗಳು ಕೂಡಾ ಪಕ್ಕಾ ಆಗಲಿದೆ. ಬಿಡಿಎಗೂ ಆದಾಯ ಬರಲಿದೆ. ಆದರೂ ಲ್ಯಾಂಡ್ ಆಡಿಟ್ ಆಮೆಗತಿಯಲ್ಲಿ ಸಾಗುತ್ತಿದ್ದು, ವರ್ಷ ಕಳೆದರೂ ಆಡಿಟ್ ಸಂಪೂರ್ಣವಾಗುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

  • ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಬೆಂಗಳೂರು: ಬಿಡಿಎ ಆರ್ಥಿಕವಾಗಿ ಕುಸಿದಿದ್ದು, ಕಂಪ್ಯೂಟರ್ ಗಳಿಗೆ ಇಂಟರ್ ನೆಟ್ ಸಂಪರ್ಕ ಸಹ ಇಲ್ಲದೆ ಇ-ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

    ಬಿಡಿಎ ಆರ್ಥಿಕ ಕುಸಿತ ಕಂಡಿದೆ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ಇದೀಗ ಆರ್ಥಿಕ ಕುಸಿತ ಕಂಡಿರುವುದು ಜಗಜ್ಜಾಹೀರಾಗಿದ್ದು, ಇದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಡಿಎ ಕಚೇರಿಯಲ್ಲಿನ ಕಂಪ್ಯೂಟರ್ ಗಳು ಇಂಟರ್‍ನೆಟ್ ಸಂಪರ್ಕ ಕಳೆದುಕೊಂಡಿವೆ.

    ಬಿಡಿಎ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಆದರೆ ಕಳೆದ 4 ದಿನಗಳಿಂದ ಇ-ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾರಣ 2019-20ನೇ ಸಾಲಿನ ಮುಂಗಡ ಬಿಲ್ ಕಟ್ಟಿಲ್ಲ ಎಂದು ಬಿಎಸ್‍ಎನ್‍ಎಲ್ ಸಂಸ್ಥೆ ಕಳೆದ ನಾಲ್ಕು ದಿನಗಳಿಂದ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದೆ.

    ಮಾರ್ಚ್ ನಲ್ಲೇ ಬಿಡಿಎ 13 ಲಕ್ಷ ರೂಪಾಯಿಯಷ್ಟು ಇಂಟರ್‍ನೆಟ್ ಶುಲ್ಕವನ್ನು ಬಿಎಸ್‍ಎನ್‍ಎಲ್‍ಗೆ ಕಟ್ಟಬೇಕಿತ್ತು. ಸೆಪ್ಟೆಂಬರ್ ತಿಂಗಳಾಂತ್ಯ ಬಂದರೂ ಬಿಲ್ ಪಾವತಿಸದ ಕಾರಣ ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಿದೆ. ಇದರಿಂದ ಬಿಡಿಎ ಕಚೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಹಳಿ ತಪ್ಪಿದಂತಾಗಿವೆ.

    ಈ ಬಗ್ಗೆ ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ಪ್ರತಿಕ್ರಿಯಿಸಿ, ಬಿಎಸ್‍ಎನ್‍ಎಲ್ ಸದ್ಯ 30 ಎಂಬಿಪಿಎಸ್ (ಮೆಗಾಬೈಟ್ ಪರ್ ಸೆಕೆಂಡ್) ಸ್ಪೀಡ್‍ನಲ್ಲಿ ಇಂಟರ್ ನೆಟ್ ಒದಗಿಸುತ್ತಿದೆ. ಆದರೆ ಆಕ್ಟ್ ಫೈಬರ್ ನೆಟ್ 100 ಎಂಬಿಪಿಎಸ್ ಸ್ಪೀಡ್‍ನಲ್ಲಿ ವರ್ಷಕ್ಕೆ ಕೇವಲ 2.75 ಲಕ್ಷದಲ್ಲಿ ಸೇವೆ ಕೊಡುತ್ತಿದೆ. ಈ ಸೇವೆ ಪಡೆಯಲು ಬಿಡಿಎ ಚಿಂತನೆ ನಡೆಸಿದೆ. ಬಿಎಸ್‍ಎನ್‍ಎಲ್ ಸೇವೆ ಸುರಕ್ಷತೆ ಎಂಬ ಕಾರಣಕ್ಕೆ ಮುಂದುವರಿಸುತ್ತೇವೆ. ಅವರಿಗೂ ಇದೇ ಸ್ಪೀಡ್‍ನಲ್ಲಿ ಇಂಟರ್ ನೆಟ್ ಸೇವೆ ನೀಡಲು ಕೋರಿದ್ದೇವೆ. ಇಂದಿನಿಂದ ಎಲ್ಲ ಸೇವೆಗಳು ಯಥಾಪ್ರಕಾರ ಮುಂದುವರಿಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಬೋಗಸ್ ಪ್ರಕರಣ ತಡೆಗೆ ಇ – ಆಫೀಸ್ ತರಲು ಮಂದಾದ ಬಿಡಿಎ

    ಬೋಗಸ್ ಪ್ರಕರಣ ತಡೆಗೆ ಇ – ಆಫೀಸ್ ತರಲು ಮಂದಾದ ಬಿಡಿಎ

    ಬೆಂಗಳೂರು: ಬಿಡಿಎನಲ್ಲಿ ನಿವೇಶನಗಳ ಹಂಚಿಕೆ ಮತ್ತು ಮಾರಾಟದಲ್ಲಿ ಬೋಗಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆ, ಖಚಿತ ಅಳತೆ (ಕರೆಕ್ಟ್ ಡೈಮೆನ್ಶನ್) ವರದಿಯನ್ನು ಇ- ಆಫೀಸ್ ಮೂಲಕವೇ ವಿತರಿಸಲು ಬಿಡಿಎ ಮುಂದಾಗಿದೆ.

    ಬಿಡಿಎನಲ್ಲಿ ಆಡಳಿತ ಪಾರದರ್ಶಕವಾಗಿರಬೇಕು ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಈ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಡಿಎ ಭೂಸ್ವಾಧೀನಪಡಿಸಿಕೊಂಡು ರಚಿಸಿರುವ ಬಡಾವಣೆಗಳಲ್ಲಿ ನಿವೇಶನಗಳನ್ನು ರಚಿಸಿ, ಅರ್ಹರಿಂದ ಕಾಲ ಕಾಲಕ್ಕೆ ಅರ್ಜಿ ಆಹ್ವಾನಿಸಿ ವಸತಿ ನಿವೇಶನಗಳನ್ನು ಕೊಡುವ ಉದ್ದೇಶದಿಂದ ಇ-ಆಫೀಸ್ ರಚಿಸಲಾಗಿದೆ.

    ಇದುವರೆಗೆ ಬಿಡಿಎ ಕಡತಗಳನ್ನು ಲಿಖಿತ ರೂಪದಲ್ಲಿ ನಿವೇಶನಗಳ ಖಚಿತ ಅಳತೆ ವರದಿ, ಆಯವ್ಯಯ ಅಂದಾಜು ವೆಚ್ಚಗಳ ಮಾಹಿತಿಯನ್ನು ಮಂಡಿಸಲಾಗುತ್ತಿತ್ತು. ಆದರೆ ಇದಕ್ಕೆ ಡಿಜಿಟಲ್ ಸ್ಪರ್ಶ ನೀಡಿದ್ದು, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲಿಕರಣ ಮಾಡಲಾಗುತ್ತದೆ. ಈ ಮೂಲಕವಾಗಿ ಯಾವುದೇ ದಾಖಲೆಗಳು ಬೇಕು ಅಂದಾಗ ಇ-ಆಫೀಸ್ ಮೂಲಕ ಪಡೆಯಬಹುದು.

    ಆರ್ಥಿಕ ನಷ್ಟದಲ್ಲಿ ಬಿಡಿಎ
    ಪ್ರಸ್ತುತ ಬಿಡಿಎ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಿಡಿಎ ಖಾತೆಯಲ್ಲಿ ಕೇವಲ 5 ಕೋಟಿ ರೂಪಾಯಿ ಮಾತ್ರ ಇದೆ. 400 ಕೋಟಿ ಹಲವು ಕಡೆಗಳಿಂದ ಬರಬೇಕಿದ್ದು, 250 ಕೋಟಿ ಸಾಲವಿದೆ. ಪ್ರಾಧಿಕಾರದ ಆರ್ಥಿಕ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದ್ದು, ಮಾರಾಟವಾಗದೇ ಉಳಿದಿರುವ ಸುಮಾರು 2 ಸಾವಿರ ಫ್ಲ್ಯಾಟ್‍ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಬಿಡಿಎ ಚಿಂತನೆ ನಡೆಸಿದೆ.

  • ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    -ಇದು 600 ಕೋಟಿ ರಿಲೀಸ್ ರಹಸ್ಯ!

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಂಪನಿ ಬ್ಲಾಕ್‍ಲಿಸ್ಟ್ ನಲ್ಲಿ ಇದ್ದರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕರೊಬ್ಬರು ಬಿಡಿಎ ಕಮಿಷನರ್ ಮೇಲೆ ಒತ್ತಡದ ಮೇಲೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಭಾರೀ ಮೊತ್ತದ ಕೋನದಾಸಪುರದ ಉದ್ದೇಶಿತ ವಸತಿ ಸಮುಚ್ಚಯದ ಟೆಂಡರ್ ಗಾಗಿ ಬಿಡಿಎ ಕಮಿಷನರ್ ಮೇಲೆ ಒತ್ತಡ ಹೇರುತ್ತಿದ್ದು, ಶಾಸಕ ಸೋಮಶೇಖರ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಗೆ ನೀಡುವಂತೆ ವಕಾಲತ್ತು ವಹಿಸುತ್ತಿದ್ದಾರೆ. ಚಂದ್ರಕಾಂತ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕನಾಗಿದ್ದು, ಇವರ ಕಂಪನಿಗೆ ಯಾವುದೇ ಟೆಂಡರ್ ಕೊಡಬಾರದು ಎಂದು ಕಂಪನಿಯನ್ನು ಬ್ಲಾಕ್‍ಲಿಸ್ಟ್ ಗೆ ಸೇರಿಸಲಾಗಿದೆ. ಆದರೂ ಅವರಿಗಾಗಿ ಶಾಸಕ ಸೋಮಶೇಖರ್ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಚಂದ್ರಕಾಂತ್

    ಶಾಸಕ ಸೋಮಶೇಖರ್ ಮತ್ತು ಚಂದ್ರಕಾಂತ್ ಆಪ್ತರಾಗಿದ್ದಾರೆ. ಹೀಗಾಗಿ ರಾಮಲಿಂಗಂಗೆ ಕಾಮಗಾರಿ ಕೈಗೆತ್ತಿಕೊಳ್ಳಲು ವರ್ಕ್ ಆರ್ಡರ್ ನೀಡುವಂತೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್‍ಗೆ ಒತ್ತಡ ಹಾಕುತ್ತಿದ್ದರು. ಸರಿ ಸುಮಾರು 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ. ಇತ್ತ ಬಿಡಿಎ ಅಧ್ಯಕ್ಷ ಸೋಮಶೇಖರ್ ಒತ್ತಡಕ್ಕೆ ರಾಕೇಶ್‍ಸಿಂಗ್ ಮಣಿಯಲಿಲ್ಲ. ಕೊನೆಗೆ ಗುತ್ತಿಗೆ ನೀಡದೆ ಇದ್ದುದಕ್ಕೆ ರಾಕೇಶ್ ಸಿಂಗ್ ಮೇಲೆ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿಗೆ ಸೋಮಶೇಖರ್ ದೂರು ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ರಾಕೇಶ್ ಸಿಂಗ್ ವರ್ಗಾವಣೆ ಮಾಡದೇ ಹೋದರೆ ಬೆಂಗಳೂರು ಉತ್ತರ ಗೆಲ್ಲೋದು ಕಷ್ಟವಾಗುತ್ತದೆ. ಎಲೆಕ್ಷನ್ ಫಂಡ್ ಬೇಕು ಅಂದರೆ ನಾನು ಹೇಳುವ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಬೇಕು. ಒಂದು ವೇಳೆ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡದೇ ಹೋದರೆ ನಾವ್ಯಾರು ಜೆಡಿಎಸ್‍ಗೆ ಸಪೋರ್ಟ್ ಮಾಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಕೇಶ್ ಸಿಂಗ್‍

    ಈಗಾಗಲೇ ಕೆಂಪೇಗೌಡ ಲೇಔಟ್‍ನಲ್ಲಿ ಕಾಮಗಾರಿಯನ್ನು ಸೋಮಶೇಖರ್ ಬೆಂಬಲಿಗರು ಸ್ಥಗಿತಗೊಳಿಸಿದ್ದಾರೆ. ಬೇಕಾದವರಿಗೆ ಗುತ್ತಿಗೆ ನೀಡಿಲ್ಲವೆಂದು ಕಾಮಗಾರಿ ಸ್ಥಗಿತಗೊಳಿಸಿದ್ದು, ಇಬ್ಬರ ಜಗಳದಿಂದ ಸೈಟ್ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಇತ್ತ ಮನೆ ಕಟ್ಟುವುದಕ್ಕೂ ಆಗದೆ, ಅತ್ತ ಸೈಟ್ ಹತ್ತಿರ ಹೋಗುವುದಕ್ಕೂ ಆಗದೆ ಮಾಲೀಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

  • 3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    ಬೆಂಗಳೂರು: ಶಾಸಕರಿಗಿಂತ ಸ್ಯಾಂಡಲ್‍ವುಡ್‍ನ ನಟಿ ನಗರದಲ್ಲಿ ಪವರ್ ಫುಲ್ ಆಗಿದ್ದು, ಬೆಂಗಳೂರಿನ ಶಾಸಕರುಗಳು ಬಿಡಿಎಯಲ್ಲಿ ಕೆಲಸ ಆಗ್ತಿಲ್ಲ ಅಂತ ಹೇಳಿದ್ರೂ ಕೆಲಸ ಮಾತ್ರ ಆಗುತ್ತಿರಲಿಲ್ಲ. ಆದರೆ ಈ ನಟಿಯ ಕಡೆಯ ಫೈಲ್ ಬಂದರೆ ಬಿಡಿಎಯಲ್ಲಿ ನೀರು ಕುಡಿದಷ್ಟೆ ಸಲಿಸಾಗಿ ಕೆಲಸ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.

    ನಟಿ ಪೂಜಾ ಗಾಂಧಿ, 2-3 ಬಾರಿ ಗೆದ್ದ ಶಾಸಕರಿಗಿಂತ 5 ವರ್ಷದಲ್ಲಿ 3 ಪಕ್ಷ ಬದಲಿಸಿದ್ದಾರೆ. ನಟಿ ಮಣಿಯ ಕೆಲಸ ಬಿಡಿಎಯಲ್ಲಿ ನಡೆಯುತ್ತದೆ. ನಮ್ಮ ಕೆಲಸ ನಡೆಯಲ್ಲ ಎಂದು ನಗರದ ಕಾಂಗ್ರೆಸ್ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ.

     

    ನಾವು ಶಾಸಕರಾಗುವ ಬದಲು ಬಣ್ಣ ಹಚ್ಚಿಕೊಂಡರೆ ಕೆಲಸ ಆಗುತ್ತಾ ಅಂತ ನಗರದ ಕಾಂಗ್ರೆಸ್ ಶಾಸಕರು ಗರಂ ಆಗಿ ಡಿಸಿಎಂ ಪರಮೇಶ್ವರ್ ರನ್ನ ಕೇಳಿದ್ದಾರೆ. ಅಷ್ಟೇ ಅಲ್ಲದೇ ಏನು ಮಾಡುತ್ತೀರೋ ಗೊತ್ತಿಲ್ಲ ಸರ್ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಬದಲಿಸಿ ಅಂತ ಶಾಸಕರಾದ ಬೈರತಿ ಬಸವರಾಜು ಹಾಗೂ ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಶಾಸಕರ ತಂಡ ಡಿಸಿಎಂ ಪರಮೇಶ್ವರ್ ಗೆ ದೂರು ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳು ಕಳೆದರೂ ಬಿಡಿಎಯಲ್ಲಿ ಮೊದಲಿನ ವೇಗದಲ್ಲಿ ಕೆಲಸ ಆಗುತ್ತಿಲ್ಲ ಎಂಬುದು ಕಾಂಗ್ರೆಸ್ ಶಾಸಕರ ದೂರಾಗಿದೆ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರನ್ನ ಬದಲಿಸಿ ಅಂತ ನಗರದ ಕಾಂಗ್ರೆಸ್ ಶಾಸಕರು ಮೊದಲೇ ಡಿಸಿಎಂ ಪರಮೇಶ್ವರ್  ದೂರು ನೀಡಿದ್ದರು. ಎರಡು ಮೂರು ಬಾರಿ ಗೆದ್ದ ಶಾಸಕರುಗಳಾದ ನಮ್ಮ ಕೆಲಸವೇ ಬಿಡಿಎಯಲ್ಲಿ ಆಗುತ್ತಿಲ್ಲ. ಆದರೆ ನಟಿ ಪೂಜಾ ಗಾಂಧಿ ಕೆಲಸ ಮಾತ್ರ ಬಿಡಿಎಯಲ್ಲಿ ಸಲಿಸಾಗಿ ಆಗುತ್ತೆ ಅಂತ ಕಾಂಗ್ರೆಸ್ ಶಾಸಕರು ಡಿಸಿಎಂ ಪರಮೇಶ್ವರ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ರಾಕೇಶ್ ಸಿಂಗ್

    ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ದೂರು ನೀಡಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬದಲಿಸಿ ಅಂತ ಒತ್ತಡ ಹೇರಿದ್ದರು. ಒಂದೇ ಕೆಲಸಕ್ಕೆ ನಾವು ಹತ್ತಾರು ಬಾರಿ ಬಿಡಿಎ ಮೆಟ್ಟಿಲು ಹತ್ತಿ ಇಳಿಯಬೇಕು. ಆದರೆ ನಟಿ ಪೂಜಾ ಗಾಂಧಿ ಕಡೆಯಿಂದ ಬರುವ ಫೈಲ್‍ ಗೆ ಮಾತ್ರ ಕೂಡಲೆ ಪ್ರತಿಕ್ರಿಯೆ ಸಿಗುತ್ತದೆ ಯಾಕೆ ಅನ್ನೋದು ಶಾಸಕರ ಪ್ರೆಶ್ನೆ ಆಗಿದೆ.

    ರಾಜಕೀಯದಲ್ಲಿ ಏನೂ ಅಲ್ಲದೆ 3-4 ಪಕ್ಷ ಬದಲಿಸಿದ ಪೂಜಾಗಾಂಧಿಗೆ ಇರುವ ಬೆಲೆ, ಮೂರು ಮೂರು ಬಾರಿ ಗೆದ್ದು ಶಾಸಕರಾದ ನಮ್ಮ ಮಾತಿಗೆ ಇಲ್ವಾ ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಮ್ಮ ಸಮಸ್ಯೆ ಬಗೆ ಹರಿಸಿ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಮೊದಲು ಬದಲಿಸಿ ಅಂತ ಪಟ್ಟು ಹಿಡಿದಿದ್ದರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    ಶಾಸಕರ ಒತ್ತಾಯಕ್ಕೆ ಮಣಿದು ಸ್ವಲ್ಪ ಸಮಯಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೀನಿ ಅಂತ ಪರಮೇಶ್ವರ್ ಶಾಸಕರನ್ನ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೋಲ್ಡನ್ ಗೌಡಯ್ಯನ ಕಾಪಾಡಿದ್ದಾರಾ ಇಬ್ಬರು ಸಚಿವರು?

    ಗೋಲ್ಡನ್ ಗೌಡಯ್ಯನ ಕಾಪಾಡಿದ್ದಾರಾ ಇಬ್ಬರು ಸಚಿವರು?

    ಬೆಂಗಳೂರು: ಬಿಡಿಎ ಎಂಜಿನಿಯರ್ ಗೌಡಯ್ಯ ಮನೆ ಮೇಲೆ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ದಾಳಿ ಅಂತ್ಯವಾಗಿದ್ದು, ಸದ್ಯ ಗೌಡಯ್ಯನ ರಹಸ್ಯ ಬಗೆದಷ್ಟೂ ಬಯಲಾಗ್ತಿದೆ.

    ಶುಕ್ರವಾರ ಮಧ್ಯರಾತ್ರಿವರೆಗೆ ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ನಿಟೀಸ್ ಜಾರಿ ಮಾಡಿ ಹಿಂದಿರುಗಿದ್ದಾರೆ. ಹೊಸ ಸರ್ಕಾರ, ಹೊಸ ಸಚಿವರು ಬಂದ್ರೂ ಗೌಡಯ್ಯ ಮಾತ್ರ ಕದಲುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

    ಗೌಡಯ್ಯ ಡಿಸಿಎಂ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಹೀಗಾಗಿ ಪರಮೇಶ್ವರ್ ಅವರು ಬಿಡಿಎ ಅಧ್ಯಕ್ಷರಾಗುತ್ತಿದ್ದಂತೆ ಗೌಡಯ್ಯನ ಬದಲಾವಣೆಗೆ ಮುಂದಾಗಿದ್ದರು. ಆದ್ರೆ ಈ ವೇಳೆ ಗೌಡಯ್ಯನ ಕಾಪಾಡಲು ಸಚಿವ ಎಚ್.ಡಿ.ರೇವಣ್ಣ ಅವರು ಎಂಟ್ರಿ ಕೊಟ್ಟಿದ್ದು, ಗೌಡಯ್ಯನ ಬದಲಾವಣೆ ಮಾಡದಂತೆ ಸಚಿವ ಪರಮೇಶ್ವರ್‍ಗೆ ತಾಕೀತು ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರೇವಣ್ಣ ಅವರು ದೇವೇಗೌಡರಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿದ್ದರು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದಾಳಿ ವೇಳೆ ಸಿಕ್ಕಿದ್ದೇನು..?:
    ಎಸಿಬಿ ದಾಳಿ ವೇಳೆ 10 ಕೆ.ಜಿ ಚಿನ್ನ, ಕೋಟಿ ಕೋಟಿ ನಗದು ಪತ್ತೆಯಾಗಿದೆ. ಅಲ್ಲದೇ 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ. ನಿನ್ನೆಯ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಇತ್ತ ಜಯನಗರದಲ್ಲಿರೋ ಅತ್ತೆಯ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಇಟ್ಟಿದ್ದು ದಾಳಿ ವೇಳೆ ಬಹಿರಂಗವಾಗಿದೆ. ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ 80 ಬಳೆ, ವಜ್ರದ ಸರ ಒಟ್ಟು 4.5 ಕೆ.ಜಿ ಚಿನ್ನದ ಆಭರಣ ಬಚ್ಚಿಟ್ಟಿದ್ದರು. ಆದ್ರೆ ಇದು ಅತ್ತೆಗೇ ಗೊತ್ತಿರಲಿಲ್ಲ. ಎಸಿಬಿ ರೈಡ್ ಮಾಡಿ ಬಾಚಿಕೊಂಡ ಬಳಿಕ ಅತ್ತೆಗೆ ಚಿನ್ನ ಎಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.

    ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ ಕೋಣೆಯೊಂದನ್ನ ಇಟ್ಟಿಕೊಂಡಿದ್ದರು. ಅತ್ತೆ ಮನೆಗೆ ಗೌಡಯ್ಯ ದಂಪತಿ ಹೋದಾಗಲೆಲ್ಲ ರೂಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರಂತೆ. ಮನೆಯಲ್ಲಿದ್ದ ಚಿನ್ನಾಭರಣ ಎಸಿಬಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಾಗ ಗೌಡಯ್ಯನ ಅತ್ತೆ ಕಕ್ಕಾಬಿಕ್ಕಿ ಆದರು. ಸದ್ಯ ಅತ್ತೆ ಮನೆಯಿಂದ 80 ಬಳೆ, 15 ಕ್ಯಾರೆಟ್ ವಜ್ರದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರದಿಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರೀ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=jr1aIT3Pc_g

  • ಇಬ್ಬರು ಭ್ರಷ್ಟ ಅಧಿಕಾರಿಗಳ ಬಳಿಯಿದೆ ಕೋಟ್ಯಂತರ ಆಸ್ತಿ: ಯಾರ ಬಳಿ ಎಷ್ಟು ಆಸ್ತಿ?

    ಇಬ್ಬರು ಭ್ರಷ್ಟ ಅಧಿಕಾರಿಗಳ ಬಳಿಯಿದೆ ಕೋಟ್ಯಂತರ ಆಸ್ತಿ: ಯಾರ ಬಳಿ ಎಷ್ಟು ಆಸ್ತಿ?

    ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿ ಎರಡು ಭಾರೀ ತಿಮಿಂಗಿಲಗಳಿಗೆ ಗಾಳ ಹಾಕಿದೆ. ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್‍ಮೆಂಟ್‍ನಲ್ಲಿರುವ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಅವರ ಬಸವೇಶ್ವರ ನಗರ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ.

    ಎಸಿಬಿ ಅಧಿಕಾರಿಗಳು ರೇಡ್ ಮಾಡುವುದನ್ನು ಮೊದಲೇ ತಿಳಿದ ಟಿ ಆರ್ ಸ್ವಾಮಿ ಬಾಗಿಲು ತೆಗೆಯದೇ ಡ್ರಾಮಾ ಮಾಡಿದ್ರು. ಆದ್ರೂ ಪಟ್ಟು ಬಿಡದ ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿ ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ದುಡ್ಡು ಸಿಕ್ಕಿದೆ.

    ಸ್ವಾಮಿ ಅಪಾರ್ಟ್‍ಮೆಂಟ್‍ನಲ್ಲೇ ಇದ್ದ ಸಹೋದರಿ ಆಟೋ ರಿಕ್ಷಾದಲ್ಲಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಎಸ್.ಜಿ. ಗೌಡಯ್ಯ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಿದಾಗ ಕೋಟ್ಯಾಂತರ ರೂಪಾಯಿ ನಗದು ಹಾಗೂ ಅಕ್ರಮ ಆಸ್ತಿ ಕೂಡ ಸಿಕ್ಕಿದೆ.

    ಯಾರ ಮನೆಯಲ್ಲಿ ಏನು ಸಿಕ್ಕಿದೆ?
    ಎನ್.ಜಿ ಗೌಡಯ್ಯ : ತನ್ನ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 8 ನಿವೇಶನಗಳು, 14 ಅರ್ಪಾಟ್‍ಮೆಂಟ್, ಚಿನ್ನ 3 ಕೆಜಿ,  10 ಕೆಜಿ ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನಗಳು, 1.5 ಕೋಟಿ ರೂ. ಹಾಗೂ ವಿವಿಧ ಬ್ಯಾಂಕಗಳಲ್ಲಿ ಠೇವಣಿಗಳು, ಮಾವನವರ ಮನೆಯಲ್ಲಿ 4.5 ಕೆಜಿ ಚಿನ್ನಾಭರಣ ಸಿಕ್ಕಿದೆ.

    ಸ್ವಾಮಿ.ಟಿ.ಆರ್: ಕುಟುಂಬಸ್ಥರ  ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ.

  • ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

    ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ತಂಡ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ.

    ಮಲ್ಲೇಶ್ವರಂನಲ್ಲಿರುವ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಮನೆ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್‍ ನಲ್ಲಿರುವ ಫ್ಲ್ಯಾಟ್ ಮೇಲೂ ದಾಳಿಯನ್ನು ಮಾಡಲಾಗಿದೆ. ದಾಳಿ ವೇಳೆ ಅಧಿಕ ಪ್ರಮಾಣದ ಅಂದರೆ 10 ಕೋಟಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

    ಕೆಐಡಿಬಿ ಚೀಫ್ ಎಂಜಿನಿಯರ್ ಸ್ವಾಮಿ ಮನೆ ಮಂತ್ರಿ ಸ್ಕೇರ್ ನಲ್ಲಿದ್ದು, ಸ್ವಾಮಿ ಮನೆಯಲ್ಲಿ ಅಧಿಕ ಪ್ರಮಾಣದ ನಗದು ಪತ್ತೆಯಾಗಿದೆ. ಟಿ.ಆರ್.ಸ್ವಾಮಿ ಅವರು ಎಸಿಬಿ ಅಧಿಕಾರಿಗಳನ್ನು ಕಂಡು ದಂಗಾಗಿ ಕಂತೆ ಕಂತೆ ನೋಟುಗಳನ್ನು ಕಿಟಕಿಯ ಹೊರಗಡೆಯಿಂದ ಎಸೆದಿದ್ದಾರೆ. ಆದರೆ ಇದೇ ವೇಳೆ ಅಧಿಕಾರಿಗಳ ಕೈಗೆ ರೆಂಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಅವರನ್ನು ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಮಂತ್ರಿ ಗ್ರೀನ್ಸ್ ಅಪಾರ್ಟ್ ನಲ್ಲಿರುವ ಎರಡು ಫ್ಲ್ಯಾಟ್‍ ನಲ್ಲಿ ಸುಮಾರು 10 ಕೋಟಿ ಹಣ ಪತ್ತೆಯಾಗಿದ್ದು, ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್ ನಲ್ಲಿ ಹಣ ಲೆಕ್ಕ ಹಾಕುತ್ತಿದ್ದಾರೆ.

    ಟಿ.ಆರ್.ಸ್ವಾಮಿ

    ಇತ್ತ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ. ಗೌಡಯ್ಯ ಅವರ ಬಸವೇಶ್ವರ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಯಾವುದೇ ರೀತಿಯ ಹಣ, ಚಿನ್ನ ಪತ್ತೆಯಾಗಿಲ್ಲ. ಬೇನಾಮಿ ಆಸ್ತಿ ಪತ್ರ ಸಿಕ್ಕಿದ್ದು, ಮೂಲ ದಾಖಲಾತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗೌಡಯ್ಯ ಎಸಿಬಿ ದಾಳಿ ಹಿನ್ನೆಲೆಯಲ್ಲಿ ಬಿಡಿಎನಲ್ಲಿರುವ ಕಚೇರಿಗೂ ಬೀಗ ಹಾಕಿದ್ದು, ಕೆಲವೇ ಕ್ಷಣದಲ್ಲಿ ಎಸಿಬಿಯಿಂದ ಗೌಡಯ್ಯ ಕಚೇರಿ ತಪಾಸಣೆ ಸಾದ್ಯತೆ ಇದೆ.

    ವಸತಿ ಸಮುಚ್ಚಯದ ಗುತ್ತಿಗೆದಾರರ ಜೊತೆ ಕಮಿಷನ್ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದಾರೆ ಅನ್ನೋ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಗೌಡಯ್ಯ ತನ್ನ ಕಾರಿನ ಡ್ರೈವರ್ ಗೂ ಸಹ ಮನೆ ತೋರಿಸಿರಲಿಲ್ಲ. ಇವರು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಮಾಹಿತಿ ಮೇರೆಗೆ ಇಂದು ಎಸಿಬಿ ತಂಡ ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಸುಮಾರು ವರ್ಷಗಳಿಂದ ಬಿಡಿಎ ಬಿಟ್ಟು ಕದಲಿಲ್ಲ. ಟ್ರಾನ್ಸ್ ಫರ್ ಆಗಿದ್ದರು ಸಹ ಮತ್ತೆ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣ ನೀಡಿ ಬಿಡಿಎಗೆ ಹಾಕಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಬೆಂಗಳೂರು: ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಬೆಂಬಲಿಗರ ಆಟಾಟೋಪ ಜೋರಾಗಿದೆ.

    ಭೂಪಸಂದ್ರದಲ್ಲಿರೋ ಬಿಡಿಎ ಸೈಟನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಎಬ್ಬಿಸ್ತಿದ್ದಾರೆ. ಯಾಕಪ್ಪ ಬಿಡಿಎ ಸೈಟ್‍ನಲ್ಲಿ ಕಟ್ಟಡ ಕಟ್ತಾಯಿದ್ದೀರ ಅಂತ ಕೇಳಿದ್ರೆ ನೀವ್ಯಾರು ಕೇಳೋದಕ್ಕೆ. ನಾವ್ಯಾರು ಗೊತ್ತಾ ಎಂಎಲ್‍ಎ ಭೈರತಿ ಸುರೇಶ್ ಕಡೆಯವರು ಅಂತಾ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಒತ್ತುವರಿ ಸೈಟ್ ಬಳಿ ಯಾರಾದ್ರೂ ನಿಂತರೂ ಸಹ ಅವಾಜ್ ಹಾಕ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಇದುವರೆಗೂ ಕಟ್ಟಡ ಕಾಮಗಾರಿ ತಡೆಯೋ ಕೆಲಸ ಮಾಡಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.