Tag: bbk 11

  • BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

    BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

    ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು (Ugramm Manju) ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ. ಇದನ್ನೂ ಓದಿ:ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ (Mokshitha Pai) ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ (Trivikram) ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ತ್ರಿವಿಕ್ರಮ್‌ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುವಂತೆ ಮಾತನಾಡುತ್ತಾರೆ ಎಂದು ಮೋಕ್ಷಿತಾ ಕಾರಣ ಕೊಟ್ಟಿದ್ದಾರೆ. ಅದಕ್ಕೆ, ಉಗ್ರಂ ಮಂಜು ಅವರು ಅದು ನಂಬಿಕೆ ದ್ರೋಹ ಎಂದು ತ್ರಿವಿಕ್ರಮ್‌ ಮೇಲೆ ಕೂಗಾಡಿದ್ದಾರೆ.

    ಮೋಕ್ಷಿತಾ ನೀಡಿರುವ ಕಾರಣಕ್ಕೆ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.

    ಕಳೆದ ವಾರಾಂತ್ಯ ಧರ್ಮ ಕೀರ್ತಿರಾಜ್ ಅವರ ಎಲಿಮಿನೇಷನ್ ನಡೆದಿದೆ. ಈ ವಾರ ಇನ್ನೂಳಿದ ಸ್ಪರ್ಧಿಗಳ ನಡುವೆ ಉಳಿವಿಕೆಗಾಗಿ ಜಟಾಪಟಿ ಶುರುವಾಗಿದೆ. ಬಿಗ್ ಬಾಸ್‌ನಲ್ಲಿ ರಾಜನಾಗಿ ಆಳ್ವಿಕೆ ಮಾಡುತ್ತಿರುವ ಉಗ್ರಂ ಮಂಜು ದರ್ಬಾರ್ ಜೋರಾಗಿದೆ. ಹಾಗಾದ್ರೆ ಮುಂದೆ ಏನೆಲ್ಲಾ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ದೊಡ್ಮನೆಯ (Bigg Boss Kannada 11) ಆಟದಿಂದ 57ದಿನಕ್ಕೆ ಧರ್ಮ ಕೀರ್ತೀರಾಜ್ (Dharma Keerthiraj) ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಧರ್ಮ ಆಪ್ತ ದರ್ಶನ್‌ಗೆ (Darshan) ಜಾಮೀನು ಸಿಕ್ಕಿರುವ ಬಗ್ಗೆ ಹಾಗೂ ಕೇಸ್ ಕುರಿತು ಅವರು ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಸರ್‌ಗೆ ಬೇಲ್ ಸಿಕ್ಕಿದು ತುಂಬಾ ಖುಷಿಯಾಯ್ತು ಎಂದು ಧರ್ಮ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ (Darshan) ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ ಖುಷಿಯಾಯಿತು. ಜೊತೆಗೆ ಅವರಿಗೆ ಬೆನ್ನು ನೋವಿದೆ ಆಪರೇಷನ್ ಮಾಡಬೇಕು ಎಂದಿದ್ದು ಬೇಜರಾಯಿತು. ಇದನ್ನೂ ಓದಿ:ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಓಡಿಸುವಾಗ ಆವಾಗಲೇ ಅವರಿಗೆ ಬೆನ್ನು ನೋವಿತ್ತು. ಸ್ಟಂಟ್ ಮಾಡುವಾಗಲೂ ಅವರಿಗೆ ಬೆನ್ನಿಗೆ ಎಷ್ಟು ನೋವಾಗುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಈ ಸಲ ಸ್ವಲ್ವ ಜಾಸ್ತಿ ಆಗಿರೋದು ಕೇಳಿ ನೋವಾಗಿದೆ. ಅವರು ಬೇಗ ಗುಣಮುಖರಾಗಲಿ ಅಂತ ಆಶಿಸುತ್ತೇನೆ ಎಂದಿದ್ದಾರೆ ಧರ್ಮ.

    ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ನೋಡಿದಾಗ ಕಾನೂನಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಇದನ್ನು ಕೋರ್ಟ್ ನಿರ್ಧಾರ ಮಾಡುತ್ತೆ. ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಸಿನಿಮಾರಂಗದಲ್ಲಿ ನಾನು ನಿಲ್ಲೋಕೆ ಅವರು ಕಾರಣ. ಅವರು ನನ್ನ ಶಕ್ತಿ. ನಾನು ದೇವರಲ್ಲಿ ಕೇಳಿಕೊಳ್ಳೋದು ಏನು ಅಂದರೆ ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ ಎಂದು ದರ್ಶನ್ ಕುರಿತು ನಟ ಮಾತನಾಡಿದ್ದಾರೆ.

    ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ (Navagraha) ಸಿನಿಮಾದಲ್ಲಿ ಧರ್ಮ ಅವರು ಚಾಕ್‌ಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಶರ್ಮಿಳಾ ಮಾಂಡ್ರೆಗೆ ಹೀರೋ ಆಗಿ ನಟಿಸಿದ್ದರು. ಈ ಚಿತ್ರದ ಮೂಲಕ ಧರ್ಮ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  • ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟದಿಂದ ಧರ್ಮ ಕೀರ್ತಿರಾಜ್ (Dharma Keerthiraj) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಆಟ, ಅನುಷಾ (Anusha Rai) ಒಡನಾಟ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಾಕ್‌ಲೇಟ್ ಹೀರೋ ಧರ್ಮ ರಿಯಾಕ್ಟ್ ಮಾಡಿದ್ದಾರೆ. ಅನುಷಾ ಕುಟುಂಬದಿಂದ ಮದುವೆ (Wedding) ಪ್ರಪೋಸಲ್ ಬಂದ್ರೆ ನಟನ ಉತ್ತರವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ಧರ್ಮ ಮತ್ತು ಅನುಷಾ (Anusha Rai) ಬಿಗ್ ಬಾಸ್ ಮನೆಯಲ್ಲಿ ಒಡನಾಟ ನೋಡಿ ಅಭಿಮಾನಿಗಳು ಇವರು ರಿಯಲ್ ಲೈಫ್‌ನಲ್ಲೂ ಜೊತೆಯಾದ್ರೆ ಚೆನ್ನಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಈ ಜೋಡಿಯ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ಹಾಗಾಗಿ ಮದುವೆ ಬಗ್ಗೆ ಧರ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಫ್ರೆಂಡ್ಸ್ ಅನ್ನೋದ್ದಕ್ಕೆ ನಾವಿಬ್ಬರು ಉದಾಹರಣೆ. ನನ್ನ ಮತ್ತು ಅನುಷಾ ಸ್ನೇಹ ಚೆನ್ನಾಗಿತ್ತು. ಫ್ಯಾನ್ಸ್ ಹೇಳ್ತಿದ್ದಾರೆ ನಾವು ಲವರ್ಸ್ ಅಂತ ಆದರೆ ಹಾಗೇ ನಮ್ಮೀಬ್ಬರ ನಡುವೆ ಏನು ಇಲ್ಲ. ನಮ್ಮದು ನಿಷ್ಕಲ್ಮಶ ಸ್ನೇಹ, ನಮ್ಮೀಬ್ಬರಿಗೂ ಪ್ರೀತಿ ಅನ್ನೋ ಭಾವನೆ ಇಲ್ಲ. ಸ್ನೇಹಿತರು ಹೇಗಿರಬೇಕು ಹಾಗೇ ಇದ್ದೀವಿ. ಬಿಗ್ ಬಾಸ್‌ನಲ್ಲಿ ಎಮೋಷನಲ್ ಆಗಿ ಬೆಂಬಲ ಬೇಕು. ಆ ರೀತಿಯಲ್ಲಿ ಅನುಷಾ ನನಗೆ ವಂಡಲ್‌ಫುಲ್ ಫ್ರೆಂಡ್ ನನಗೆ. ನೀವು ನಮ್ಮನ್ನ ಸಿನಿಮಾ ಮೂಲಕ ಜೊತೆಯಾಗಿ ನೋಡಬಹುದು. ಸಿನಿಮಾದಲ್ಲಿ ಕಪಲ್ ಆಗಿದ್ದೀವಿ. ಅಲ್ಲಿ ನೋಡಿ ನೀವು ನಮ್ಮನ್ನು ಬೆಂಬಲಿಸಬಹುದು ಎಂದಿದ್ದಾರೆ.

    ಅನುಷಾ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ. ಅವರ ಮನೆ ಕಡೆಯಿಂದಲೂ ಮದುವೆ ಸಂಬಂಧ ಬರಲ್ಲ. ಏನಾದರೂ ಮದುವೆ ಸಂಬಂಧ ಬಂದರೆ ಕೂಡ ಅದು ಆಗಲ್ಲ. ನಮ್ಮೀಬ್ಬರ ನಡುವೆ ಫ್ರೆಂಡ್‌ಶಿಪ್ ಟ್ಯಾಗ್ ತುಂಬಾ ಚೆನ್ನಾಗಿದೆ. ಅದು ಫ್ರೆಂಡ್ಸ್ ಆಗಿಯೇ ಉಳಿದುಕೊಂಡರೆ ಚೆನ್ನಾಗಿರುತ್ತೆ ಅನಿಸುತ್ತದೆ. ಮದುವೆ ರೂಪದಲ್ಲಿ ಕನೆಕ್ಟ್ ಆಗಲ್ಲ ಎಂದು ಧರ್ಮ ಮಾತನಾಡಿದ್ದಾರೆ.

  • BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) ಆಟ ಶುರುವಾಗಿ 55 ದಿನಗಳನ್ನು ಪೂರೈಸಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ಮೇಲೆ ಆಟ ಮತ್ತಷ್ಟು ರೋಚಕವಾಗಿದೆ. ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದ ಬಳಸಿದ್ದ ರಜತ್ ಕಿಶನ್‌ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್‌ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ (Sudeep) ಮಾತಿಗೆ ಸುರೇಶ್ ಅವರು ಎದೆಗೆ ಕೊಟ್ರೋ ಅದನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಆ ಪದಗಳೆಲ್ಲವೂ ಮಾತಿನ ಭರದಲ್ಲಿ ಬಂತು ಎಂದು ರಜತ್ ಸಮಜಾಯಿಸಿ ಕೊಡುತ್ತಾರೆ.

    ನನಗೆ ಕೋಪ ಬಂದಾಗ ಇಂತಹದ್ದೇ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು ನಗುತ್ತಾ, ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್‌ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

    ನ.20ರ ಎಪಿಸೋಡ್‌ನಲ್ಲಿ ಟಾಸ್ಕ್ ಆಡುವಾಗ ಬೀಪ್ ಪದಗಳನ್ನೇ ಸುರೇಶ್‌ಗೆ ಬಳಕೆ ಮಾಡಿದರು. ರಜತ್ ಆಡಿದ ಮಾತಿಗೆ ಸುರೇಶ್ ಬಿಗ್ ಬಾಸ್ ಆಟವನ್ನು ಕ್ವೀಟ್ ಮಾಡುತ್ತೇನೆ. ಇಲ್ಲಿಂದ ನನ್ನನ್ನು ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ರಜತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

    BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

    ದೊಡ್ಮನೆಯಲ್ಲಿ (Bigg Boss Kannada 11) ಇಂದು (ನ.23) ಕಿಚ್ಚನ ವಾರಾಂತ್ಯದ ಪಂಚಾಯಿತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ವೀಕ್ಷಕರು ಎದುರು ನೋಡುತ್ತಿದ್ದಾರೆ. ಇದರ ನಡುವೆ ನಿನ್ನೆ ರಜತ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಆದರೂ ಮನೆಮಂದಿಗೆ ರಜತ್ (Rajath) ಕ್ವಾಟ್ಲೆ ಕೊಡೋದನ್ನು ಅವರು ಬಿಟ್ಟಿಲ್ಲ. ಇದನ್ನೂ ಓದಿ: ರಾಮ್ ಪೋತಿನೇನಿ ಹೊಸ ಚಿತ್ರಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿ

    ಇಂದು (ನ.23) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ದೊಡ್ಮನೆಯ ಸ್ಪರ್ಧಿಗಳಿಗೆ ರಜತ್ ಚೆನ್ನಾಗಿ ಆಟ ಆಡಿಸಿದ್ದಾರೆ. ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ. ರಜತ್ ಜೈಲು ವಾಸದಲ್ಲಿದ್ರೂ ಮನೆ ಮಂದಿಗೆ ತಲೆ ನೋವಾಗಿದೆ.

    ಜೈಲು ಸೇರಿದ ರಜತ್‌ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಭವ್ಯಾ ಗೌಡ (Bhavya Gowda) ಅವರು ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್‌ಗೆ ನೀಡುತ್ತಾರೆ. ನಾನು ಕಟ್ ಮಾಡುತ್ತೇನೆ, ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ ಕಟ್ ಮಾಡ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.

    ನನಗೆ ಕಳಪೆ ಕೊಡುತ್ತೀರಾ? ಎಲ್ಲರೂ ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ. ಏನ್ ಮಾಡ್ತೀರಿ ಇವಾಗ ಏನೂ ಮಾಡೋಕೆ ಆಗಲ್ಲ. ನನಗೂ ಹೊಟ್ಟೆ ಉರಿತಾ ಇಲ್ವಾ ಎಂದು ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ರಜತ್‌ಗೆ ಚೆಲ್ಲಾಟ ಆಗಿದ್ರೆ, ಮನೆ ಮಂದಿಗೆ ಸಂಕಟ ಆಗ್ತಿರೋದಂತೂ ಗ್ಯಾರಂಟಿ.

  • BBK 11: ಕೊಟ್ಟ ಮಾತಿನಂತೆ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ

    BBK 11: ಕೊಟ್ಟ ಮಾತಿನಂತೆ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ

    ನ್ನಡದ ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ರಂಗೇರಿದೆ. ತಮ್ಮ ಮುಗ್ಧತೆಯಿಂದ ಜನರ ಮನಸ್ಸನ್ನು ಗೆದ್ದಿರುವ ಹನುಮಂತ ಇದೀಗ ಸುದೀಪ್ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಆಡಿದ ಮಾತಿನಂತೆ ಸುದೀಪ್ (Sudeep) ಅವರು ಕುರಿಗಾಹಿ ಹನುಮಂತಗೆ ವಿಶೇಷ ಗಿಫ್ಟ್‌ವೊಂದನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    ದೊಡ್ಮನೆಯಲ್ಲಿರುವ ಹನುಮಂತಗೆ (Hanumantha) ಸುದೀಪ್ ಸ್ಪೆಷಲ್ ಗಿಫ್ಟ್‌ವೊಂದನ್ನು ನೀಡಿದ್ದಾರೆ. ಬ್ರಾಂಡೆಡ್ ಬಟ್ಟೆಗಳು, ಹೊಸ ಚಡ್ಡಿ, ಲುಂಗಿಯನ್ನು ಕಳುಹಿಸಲಾಗಿದೆ. ಸುದೀಪ್ ಕಳುಹಿಸಿದ ಉಡುಗೊರೆ ನೋಡಿ ಹನುಮಂತ ಭಾವುಕರಾಗಿದ್ದಾರೆ. ಅವರು ಕೊಟ್ಟಿರುವ ಉಡುಗೊರೆ ನೋಡಿದ್ರೆ, ನನಗೆ ನಂಬೋಕೆ ಆಗುತ್ತಿಲ್ಲ. ಅಷ್ಟೊಂದು ಖುಷಿಯಾಗುತ್ತಿದೆ. ಧನ್ಯವಾದಗಳು ಸರ್ ಎಂದಿದ್ದಾರೆ.

    ಹೊಸ ಬಟ್ಟೆಗಳ ಜೊತೆ ಚಡ್ಡಿ ಇರೋದನ್ನು ನೋಡಿ ‌ʻಮಾವೋ 3 ಸಾವಿರದ ಚಡ್ಡಿʼ ಎಂದು ಹನುಮಂತ ನಕ್ಕಿದ್ದಾರೆ. ಇದರೊಂದಿಗೆ ವಿಶೇಷ ಕವನವೊಂದನ್ನು ಸುದೀಪ್ ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಮೈಯ ಮುಚ್ಚೋ ಬಟ್ಟೆ ನೋಡಿ ಮಾನವ ಅಳೆಯಬ್ಯಾಡ್ರಿ
    ಮನಸ ತೋರೋ ನಗುವ ನೋಡದೆ ಸುಮ್ಮನೆ ಇರಬ್ಯಾಡ್ರಿ
    ಕುರಿಯ ಕಾಯೋ ಕುರಿಗಾಹಿ ಕೊಡುತಾನೋ ಕಂಬಳಿ
    ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ಅಂಬಲಿ
    ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ
    ದಿನ ದಿನವೂ ಪದವ ಕಟ್ಟಿ ಹೊಸ ಹಾಡ ಹಾಡೋ
    ‘ಇಂತಿ ನಿಮ್ಮ ಬಾದ್‌ಷಾ ಕಿಚ್ಚ’

    ಕಳೆದ ವಾರಾಂತ್ಯದಲ್ಲಿ ಸುದೀಪ್ ಅವರು ಹನುಮಂತಗೆ ಪ್ರತಿದಿನ ನೀವ್ಯಾಕೆ ಸ್ನಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದರು. ಆಗ ನನ್ನ ಬಳಿ 4ರಿಂದ 5 ಬಟ್ಟೆಗಳಿವೆ. ಪ್ರತಿದಿನ ಸ್ನಾನ ಮಾಡಿದ್ರೆ ಪದೇ ಪದೇ ಬಟ್ಟೆ ಒಗೆಯಬೇಕು ಎಂದು ಹನುಮಂತ ಉತ್ತರಿಸಿದರು. ಅವರ ಮಾತು ಕೇಳಿದ ಸುದೀಪ್, ನಿಮ್ಮ ಬಟ್ಟೆಯ ಅಳತೆ ನಮಗೆ ಕೊಡಿ. ನಮ್ಮ ಡಿಸೈನರ್‌ಗೆ ಹೇಳಿ ನಿಮಗೆ ಬಟ್ಟೆ ಕಳುಹಿಸುತ್ತೇನೆ ಎಂದು ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತನ್ನು ಅವರು ಪೂರೈಸಿದ್ದಾರೆ. ಕಿಚ್ಚನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ.

  • BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್‌ನಲ್ಲಿ ತನು ಪಾತ್ರದ ಮೂಲಕ ಗಮನ ಸೆಳೆದಿದ್ದ ಶೋಭಾ ಶೆಟ್ಟಿ ಆ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ‘ಬಿಗ್ ಬಾಸ್ ತೆಲುಗು 7’ರಲ್ಲಿ ರಂಜಿಸಿದ್ದ ನಟಿ ಇದೀಗ ಮತ್ತೆ ಕನ್ನಡದ ಬಿಗ್ ಬಾಸ್ 11ರಲ್ಲಿ ಫೈರ್ ಲೇಡಿಯಾಗಿ ಅಬ್ಬರಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಶೋಭಾ ಅವರ ಅಸಲಿ ಮುಖ ಅನಾವರಣ ಆಗಿದೆ.

    ಶೋಭಾ ಶೆಟ್ಟಿ (Shobha Shetty)  ‘ಬಿಗ್ ಬಾಸ್’ನಲ್ಲಿ ಅವರು ಯಾವಾಗಲೂ ಅಗ್ರೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಭಾವನಾತ್ಮಕ ಮುಖವನ್ನು ತೋರಿಸಿದ್ದಾರೆ. ಕುಟುಂಬಸ್ಥರನ್ನು ನೆನೆದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಕೆಲಸಗಳ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ನಾನು ಕುಟುಂಬಕ್ಕೆ ಹೆಚ್ಚು ಟೈಮ್ ನೀಡೋಕೆ ಆಗಿಲ್ಲ. ನಾನು ಕುಟುಂಬದ ಜೊತೆ ಸಾಕಷ್ಟು ಕನೆಕ್ಟ್ ಆಗಿದ್ದೇನೆ. ನನ್ನ ಮೊದಲ ಆದ್ಯತೆ ಕುಟುಂಬ ಎಂದು ಶೋಭಾ ಭಾವುಕರಾದರು.

    ಸೆಟ್‌ನಲ್ಲಿ ಫ್ಯಾಮಿಲಿಗೆ ಸಂಬಂಧಿಸಿದ ದೃಶ್ಯ ನಡೆದರೆ ಅದು ನನಗೆ ಕನೆಕ್ಟ್ ಆಗುತ್ತದೆ. ಬೇರೆ ಭಾಷೆಯಲ್ಲಿ ನಾವು ಹೋಗಿ ಕೆಲಸ ಮಾಡಬೇಕು ಎಂದರೆ ಅದು ಅಷ್ಟು ಸುಲಭ ಅಲ್ಲ. ನಾನು ಪ್ರತಿ ಕ್ಷಣ ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ ಎಂದಿದ್ದಾರೆ ಶೋಭಾ.

    ಶೋಭಾ ಶೆಟ್ಟಿ ಇದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅವರು ಅಳುತ್ತಿರುವುದನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಶೋಭಾಗೆ ಹೀಗೊಂದು ಮುಖ ಇದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

    ಅಂದಹಾಗೆ, ಶೋಭಾ ಅವರು ‘ಕಾರ್ತಿಕ ದೀಪಂ’ ಸೀರಿಯಲ್‌ನಲ್ಲಿ ನಟಿಸಿದರು. ತಮ್ಮ ಮನೋಜ್ಞ ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ನಟಿ ಹತ್ತಿರವಾಗಿದ್ದಾರೆ.

  • ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಸ್ಯಾಂಡಲ್‌ವುಡ್ ನಟಿಯರಾದ ದಿವ್ಯಾ ಉರುಡುಗ (Divya Uruduga), ಖುಷಿ ರವಿ (Ravi Kushee), ನಮ್ರತಾ ಗೌಡ ದುಬೈಗೆ ಹಾರಿದ್ದಾರೆ. ಅಲ್ಲಿನ ಸುಂದರ ಸ್ಥಳಗಳಿಗೆ ಭೇಟಿ ನೀಡಿರುವ ಕಲರ್‌ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ? ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

     

    View this post on Instagram

     

    A post shared by DU✨ (@divya_uruduga)

    ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ ದುಬೈನಲ್ಲಿದ್ದಾರೆ. ಅವರೊಂದಿಗೆ ಖುಷಿ ರವಿ, ನಮ್ರತಾ (Namratha Gowda) ಸಾಥ್ ನೀಡಿದ್ದಾರೆ. ಮರಳಿನಲ್ಲಿ ಬಳಸುವ ಸ್ಯಾಂಡ್ ಮೋಟರ್ ಬೈಕ್ ಅನ್ನು ಏರಿ ಖುಷಿ, ದಿವ್ಯಾ ರೌಂಡ್ ಹೊಡೆದಿದ್ದಾರೆ.

     

    View this post on Instagram

     

    A post shared by Kushee Ravi (@iamkusheeraviofficial)

    ಅದಷ್ಟೇ ಅಲ್ಲ, ಸಾಕಿರುವ ರಣಹದ್ದನ್ನು ಕೈಯಲ್ಲಿ ಹಿಡಿದು ನಟಿಯರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದಿವ್ಯಾ, ನಮ್ರತಾ, ಖುಷಿ ರಣಹದ್ದನ್ನು ಹಿಡಿದು ಖುಷಿಪಟ್ಟಿದ್ದಾರೆ.

    ಅಂದಹಾಗೆ, ಕೆಲಸಕ್ಕೆ ಬ್ರೇಕ್ ನೀಡಿ ದುಬೈಗೆ ಹೋಗಿದ್ದಕ್ಕೆ ಕಾರಣವಿದೆ. ಅದವೇ ರಾಜ್ ಕಪ್ ಕ್ರಿಕೆಟ್ ಟೂರ್ನ್ಮೆಂಟ್‌ಗಾಗಿ ನಟಿಯರು ತೆರಳಿದ್ದಾರೆ. ಸದ್ಯ ದಿವ್ಯಾ ಉರುಡುಗ ‘ನಿನಗಾಗಿ’ (Ninagai)  ಸೀರಿಯಲ್ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ.

    ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ 10’ ಆದ್ಮೇಲೆ ಹಲವು ಶೋ ಮತ್ತು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮಾಡಲು ಉತ್ತಮ ಕಥೆಗಾಗಿ ಎದುರು ನೋಡ್ತಿದ್ದಾರೆ.


    ‘ದಿಯಾ’ (Dia) ಖ್ಯಾತಿಯ ಖುಷಿ ರವಿ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರಗಳ ಜೊತೆ ತೆಲುಗಿನಲ್ಲೂ ಖುಷಿಗೆ ಬೇಡಿಕೆಯಿದೆ.

  • BBK 11: ತಾಕತ್ತು ಇದ್ದರೆ ತಡೆಯಿರಿ ನೋಡೋಣ- ಶಿಶಿರ್‌ಗೆ ಚೈತ್ರಾ ಅವಾಜ್

    BBK 11: ತಾಕತ್ತು ಇದ್ದರೆ ತಡೆಯಿರಿ ನೋಡೋಣ- ಶಿಶಿರ್‌ಗೆ ಚೈತ್ರಾ ಅವಾಜ್

    ‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಮನೆಯ ಆಟ ರಂಗೇರಿದೆ. ಇದೀಗ ಮತ್ತೆ ಟಾಸ್ಕ್‌ವೊಂದರಲ್ಲಿ ಶಿಶಿರ್ ಶಾಸ್ತ್ರಿ (Shishir Shastry) ಮತ್ತು ಚೈತ್ರಾ ಕುಂದಾಪುರ (Chaithra Kundapura) ನಡುವೆ ಕಿರಿಕ್ ನಡೆದಿದೆ. ತಾಕತ್ತು ಇದ್ದರೆ ತಡೆಯಿರಿ ನೋಡೋಣ ಅಂತ ಶಿಶಿರ್‌ಗೆ ಚೈತ್ರಾ ಸವಾಲು ಹಾಕಿದ್ದಾರೆ.

    ನಿನ್ನೆ (ನ.20) ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ಬಿಗ್ ಫೈಟ್ ನಡೆದಿತ್ತು. ಗುಗ್ಗು ನನ್ನ ಮಗ ಎಂದು ಸುರೇಶ್‌ಗೆ ರಜತ್ ನಿಂದಿಸಿದ್ದರು. ಈ ಘಟನೆ ಮರೆಯುವ ಮೊದಲೇ ಇತ್ತ ಶಿಶಿರ್ ಮತ್ತು ಚೈತ್ರಾ ನಡುವೆ ಕಿತ್ತಾಟ ನಡೆದಿದೆ. ಭವ್ಯಾ ಟೀಮ್‌ನವರು ಟಾಸ್ಕ್ ಆಡುವಾಗ ಯಡವಟ್ಟು ಮಾಡಿದ್ದಾರೆ. ಇದನ್ನು ಗಮನಿಸಿದ ಉಸ್ತುವಾರಿ ಶಿಶಿರ್ ಆಟದ ಬಗ್ಗೆ ಚಕಾರವೆತ್ತಿದ್ದಾರೆ. ಇದನ್ನೂ ಓದಿ:‘ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್

    ಈ ವಿಚಾರವಾಗಿ ಶಿಶಿರ್ ಮತ್ತು ಚೈತ್ರಾ ನಡುವೆ ವಾಗ್ವಾದ ನಡೆದಿದೆ. ಸೋಲುತ್ತೇವೆ ಅಂತ ಭಯ ಇದ್ದಾಗ ಹೀಗೆ ಆಡೋದು ಅಂತ ಚೈತ್ರಾ ಕಿಡಿಕಾರಿದ್ದಾರೆ. ಆಗ ಶಿಶಿರ್ ಬರೀ ಮಾತು, ಅದು ಬಿಟ್ಟು ಬೇರೆ ಏನು ಇಲ್ಲ ಎಂದು ತಿರುಗೇಟು ನೀಡುತ್ತಾರೆ. ಆಗ ಚೈತ್ರಾ ಇದನ್ನೂ ಬಿಟ್ಟು ಬೇರೆ ಏನು ಹೇಳೋದಕ್ಕೆ ಬರುತ್ತೆ ನಿಮಗೆ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

    ಆಗ ಸುಮ್ಮನೆ ಹೋಗು ಆ ಕಡೆ ಅಂತ ಶಿಶಿರ್ ಜೋರಾಗಿ ಕೂಗಾಡಿದ್ದಾರೆ. ನನ್ನ ಆ ಕಡೆ ಹೋಗು ಅಂತ ಹೇಳೋದ್ದಕ್ಕೆ ಯಾವ ಅಧಿಕಾರ ಕೂಡ ನಿಮಗಿಲ್ಲ. ಆ ಕಡೆ ಹೋಗೋದಿಲ್ಲ ಇಲ್ಲೇ ನಿಂತುಕೊಳ್ಳುತ್ತೇನೆ. ತಾಕತ್ತು ಇದ್ದರೆ ತಡೆಯಿರಿ ನೋಡೋಣ ಅಂತ ಅವಾಜ್ ಹಾಕಿದ್ದಾರೆ. ಇಬ್ಬರ ಜಗಳ ನೋಡಿ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

  • ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದ್ಮೇಲೆ ಅಸಲಿ ಆಟ ಶುರುವಾಗಿದೆ. ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇದೀಗ ಚೈತ್ರಾ ಕೈಯಲ್ಲಿದ್ದ ಹಣವನ್ನು ಭವ್ಯಾ ಟೀಮ್ ಯಾಮಾರಿಸಿ ಕಸಿದುಕೊಂಡು ಹೋಗಿದ್ದಾರೆ. ಅದಕ್ಕೆ, ಗುಂಪು ಕಟ್ಟಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಚೈತ್ರಾ ಖಡಕ್ ಆಗಿ ಹೇಳಿದ್ದಾರೆ.

    ‘ಬಿಗ್ ಬಾಸ್’ ಮನೆಯಲ್ಲಿ ಈಗ ನೀಲಿ ಮತ್ತು ಕೆಂಪು ಎಂಬ ಎರಡು ತಂಡಗಳು ರಚೆನೆ ಆಗಿದ್ದು, ಆ ತಂಡಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಕೆಂಪು ಬಣ್ಣದ ಟೀಮ್‌ಗೆ ಶೋಭಾ ಕ್ಯಾಪ್ಟನ್, ನೀಲಿ ಬಣ್ಣದ ಟೀಮ್‌ಗೆ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಇವೆರಡು ತಂಡಗಳ ಸದಸ್ಯರ ಬಳಿ ಹಣವಿದೆ. ಸದ್ಯ ಆ ಹಣವನ್ನು ಕಿತ್ತುಕೊಳ್ಳುವುದಕ್ಕೆ ಎರಡು ಟೀಮ್ ಕಡೆಯಿಂದ ಸ್ಕೆಚ್ ರೆಡಿ ಆಗಿದೆ. ಇದನ್ನೂ ಓದಿ:ನಾಗಾರ್ಜುನ ಅಕ್ಕಿನೇನಿ ಸೋದರಳಿಯನ ಜೊತೆ ಮೀನಾಕ್ಷಿ ಚೌಧರಿ ಮದುವೆ?- ಸ್ಪಷ್ಟನೆ ನೀಡಿದ ನಟಿ

    ಇಂದು (ನ.21) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಚೈತ್ರಾ ಬಳಿಯಿದ್ದ ಹಣವನ್ನು ಭವ್ಯಾ ತಂಡದ ಗೌತಮಿ ಯಾಮಾರಿಸಿ ಎತ್ತಿಕೊಂಡು ಬಂದಿದ್ದಾರೆ. ಅದಕ್ಕೆ ಚೈತ್ರಾ (Chaithra Kundapura) ಫುಲ್ ಖಡಕ್ ಆಗಿ, ಎಲ್ಲರೂ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಗುಂಪುಗಾರಿಕೆ ಮಾಡ್ಕೊಂಡು ಕುತಂತ್ರತನವನ್ನು ನಾನು ಮಾಡೋದಿಲ್ಲ. ಡ್ರಾಮಾ ಕ್ವೀನ್‌ಗಳು ಯಾರು ಎಂದು ಗೊತ್ತಾಯ್ತು. ನನ್ನ ಆಟವನ್ನು ಇನ್ಮೇಲೆ ಶುರು ಮಾಡ್ತೀನಿ ಎಂದು ಗುಡುಗಿದ್ದಾರೆ. ಗುಂಪು ಕಟ್ಕೊಂಡು ಪ್ಲ್ಯಾನ್ ಮಾಡ್ಕೊಂಡು ಬರಲ್ಲ, ಸಿಂಗಲ್ ಸಿಂಹ ಥರ ಹೊಡೀತಿನಿ ಅಂತ ಗರ್ಜಿಸಿದ್ದಾರೆ ಚೈತ್ರಾ.

    ಅಂದಹಾಗೆ, ನಿನ್ನೆಯ ಸಂಚಿಕೆಯಲ್ಲಿ (ನ.20) ಎದುರಾಳಿ ತಂಡದ ಐಶ್ವರ್ಯಾ ಬಳಿಯಿದ್ದ 2000 ಹಣವನ್ನು ಕದ್ದುಕೊಂಡು ಬಂದಿದ್ದರು ಚೈತ್ರಾ. ಇದು ಐಶ್ವರ್ಯಾಗೆ ಬಹಳ ನೋವು ತರಿಸಿತ್ತು. ಅದಕ್ಕೀಗ ಚೈತ್ರಾ ಹಣವನ್ನು ಭವ್ಯಾ ತಂಡದವರು ಯಾಮಾರಿಸಿ ತಿರುಗೇಟು ಕೊಟ್ಟಿದ್ದಾರೆ.