Tag: bbk 11

  • ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇದೀಗ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ದೊಡ್ಮನೆಯ ಮಹಾರಾಜನಾಗಿ ಆಳಿದ ಉಗ್ರಂ ಮಂಜು ಅವರು ಗೌತಮಿಗೆ ಕಟುಕ ರಾಜನಾಗಿರಲಿಲ್ಲ. ಈ ವಿಷ್ಯದಲ್ಲಿ ಪಕ್ಷಪಾತವಾಗಿ ಮಂಜು ಆಡಿದ್ದರು. ಅದಕ್ಕೆ ಸುದೀಪ್ (Sudeep) ವಾರಾಂತ್ಯ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ, ಬಿಗ್ ಬಾಸ್‌ನಲ್ಲಿ ಆಟ ಆಡಿ ಎಂದು ಮಂಜು ಹಾಗೂ ಗೌತಮಿಗೆ (Gouthami) ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    ಗೆಳತಿ ಮಂಜು ಅವರು ಪಕ್ಷಪಾತವಾಗಿ ಆಟ ಆಡಿದ್ದರು. ಇದು ಮನೆಯ ಉಳಿದ ಸದಸ್ಯರ ಮೇಲೂ ಪರಿಣಾಮ ಬಿದ್ದಿತ್ತು. ಇದರ ಬಗ್ಗೆ ಮನೆ ಮಂದಿಗೂ ಬೇಸರವಿದೆ. ಈ ಕುರಿತು ಸುದೀಪ್ ಅವರು ಪರೋಕ್ಷವಾಗಿಯೇ ಮಾತನಾಡಿದರು. ಬಿಗ್ ಬಾಸ್‌ಗೆ ಇಲ್ಲಿ ಯಾರೂ ಸಂಬಂಧ ಬೆಳೆಸಲು ಬಂದಿಲ್ಲ. ಈ ರಾಜನ ಆಟ ಮೊದಲಿಗೆ ಚೆನ್ನಾಗಿಯೇ ಟೇಕ್ ಓವರ್ ಆಗಿತ್ತು. ಆಮೇಲೆ ಏನಾಯ್ತು ಮುಂಜು ಅವರೆ? ಇಲ್ಲಿ ಪಾತ್ರವನ್ನೂ, ಸಂಬಂಧವನ್ನೂ ನಿಭಾಯಿಸುವಾಗ, ಈ ರೀತಿ ಆಗತ್ತದೆ. ಈ ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿ ಇಡಿ. ಸಂಬಂಧ ಹೊರಗಡೆ ಬೆಳೆಸಿ, ಸದ್ಯಕ್ಕೆ ಬಿಗ್ ಬಾಸ್‌ನಲ್ಲಿ ಆಟ ಆಡಿ. ವೀಕ್ಷಕರಿಗೆ ಇದೊಂದು ಉಪಕಾರ ಮಾಡಿ ಎಂದು ಗೌತಮಿ ಮತ್ತು ಮಂಜುಗೆ (Ugramm Manju) ಸುದೀಪ್ ಎಚ್ಚರಿಕೆ ನೀಡಿದ್ದಾರೆ.

    ಒಂದು ಸಲಹೆ ಏನೆಂದರೆ, ನೀವು ಅಲ್ಲಿ ಸ್ನೇಹಿತರಾಗಿಯೇ ಇರಿ. ಆದರೆ ಟಾಸ್ಕ್ ಅಂತ ಬಂದಾಗ, ನಿಮ್ಮ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮನೆಯಲ್ಲಿ ಬಂದಿವೆ. ಆದರೆ ನಾಳೆ ನೀವಿಬ್ಬರೂ ಜಗಳ ಆಡಿ ಅಂತಲ್ಲ. ಟಾಸ್ಕ್ ಅಂತ ಬಂದಾಗ ಸರಿಯಾಗಿ ಗಮನ ವಹಿಸಿ. ಆಗಿಲ್ಲ ಅಂದರೆ ಬಿಗ್ ಬಾಸ್ ಹತ್ತಿರ ಹೇಳಿ. ಉಸ್ತುವಾರಿ ವಹಿಸಿಕೊಳ್ಳಬೇಡಿ ಎಂದಿದ್ದಾರೆ ಸುದೀಪ್.

    ಇನ್ನೂ ಯುವರಾಣಿ ಮೋಕ್ಷಿತಾ ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆ ಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದರೆ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಮಂಜುಗೆ ಹೇಳಿರುತ್ತಾರೆ. ರಾಜನಾಗಿ ಮಂಜು ಅವರು ಗೌತಮಿಗೆ ಮೋಕ್ಷಿತಾರ ಆಜ್ಞೆ ಪಾಲಿಸಿ ಎಂದು ಹೇಳದೇ ಬೆಂಬಲ ನೀಡಿರುತ್ತಾರೆ. ಅದಕ್ಕಾಗಿ ಸುದೀಪ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    ಬಿಗ್ ಬಾಸ್ ಮನೆಯ ಆಟ (Bigg Boss Kannada 11) ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಒಂದ್ ಕಡೆ ಬಿಗ್ ಬಾಸ್‌ನಿಂದ ನಾನು ಹೊರಹೋಗುತ್ತೇನೆ ಎಂದು ಶೋಭಾ ಶೆಟ್ಟಿ (Shobha Shetty) ಕಣ್ಣೀರಿಟ್ಟಿದ್ದರೆ, ಇತ್ತ ಐಶ್ವರ್ಯಾ ಸಿಂಧೋಗಿ (Aishwarya Shindogi) ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದರ್ಶನ್ ಸರ್ಜರಿಗೆ ತರಾತುರಿಯಲ್ಲಿ ಪ್ಲ್ಯಾನ್‌ – ಜಾಮೀನು ಅವಧಿ ಉಳಿದಿರೋದು 11 ದಿನ ಮಾತ್ರ

    ದೊಡ್ಮನೆಯಲ್ಲಿ 60 ದಿನಗಳನ್ನು ಪೂರೈಸಿರೋ ಐಶ್ವರ್ಯಾ ಅವರು ಮನರಂಜನೆ, ಫಿಸಿಕಲ್ ಟಾಸ್ಕ್ಗಳಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಶಿಶಿರ್ ಜೊತೆ ಹೈಲೆಟ್ ಆಗಿದ್ದೇ ಹೆಚ್ಚು. ಇದೀಗ ಅವರ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜನಾ? ಎಂಬುದು ಇಂದಿನ ಸಂಚಿಕೆಯಲ್ಲಿ (ಡಿ.1) ಉತ್ತರ ಸಿಗಲಿದೆ. ಇದನ್ನೂ ಓದಿ:ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ಇನ್ನೂ ಈ ವಾರದಲ್ಲಿ ಅವರು ಉತ್ತರ ಪ್ರದರ್ಶನ ನೀಡಿದ್ದು, ಮನೆ ಮಂದಿಯಿಂದ ಉತ್ತಮ ಪಟ್ಟ ಅವರಿಗೆ ಸಿಕ್ಕಿತ್ತು. ಕಳಪೆ ಆಟ ಎಂದು ಶೋಭಾ ಶೆಟ್ಟಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಐಶ್ವರ್ಯಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಫ್ಯಾನ್ಸ್‌ಗೆ ಅಚ್ಚರಿಯ ಜೊತೆ ಶಾಕ್ ಕೊಟ್ಟಿದೆ.

  • ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಕಾರ್ಯಕ್ರಮವು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, 62 ದಿನಗಳನ್ನು ಪೂರೈಸಿದೆ. ಸದ್ಯ ಬಿಗ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದು, ಇದರಲ್ಲಿ ಒಬ್ಬರು ಇಂದು ಹೊರ ಹೋಗಲಿದ್ದಾರೆ. ಅದು ಯಾರು ಎಂಬುದೇ ಸೀಕ್ರೆಟ್. ಇದರ ನಡುವೆ ಶೋಭಾ ಶೆಟ್ಟಿ (Shobha Shetty) ಪ್ರೇಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನನಗೆ ಬಿಗ್ ಬಾಸ್ ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಸುದೀಪ್ ಮುಂದೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಡ್ಯಾನ್ಸ್- ‘ಪುಷ್ಪ 2’ ಪ್ರೋಮೋ ಔಟ್

    ಭಾನುವಾರದ ಎಪಿಸೋಡ್‌ನ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಸುದೀಪ್ (Sudeep) ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇಲ್ಲಿ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾರನ್ನು ನೋಡಿದ್ದಾರೆ. ಬಿಗ್ ಬಾಸ್‌ನಿಂದ ನನ್ನನ್ನು ಕಳುಹಿಸಿ ಎಂದು ಕೈ ಮುಗಿದು ಅಂಗಲಾಚಿರುವ ಶೋಭಾ ಕೇಳಿಕೊಂಡಿದ್ದಾರೆ.

    ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ. ನಿಮ್ಮನ್ನು ಸೇಫ್ ಮಾಡಿದರಲ್ಲ ಜನ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿಮಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ.

    ಆದರೆ ಈ ವೇಳೆ ಶೋಭಾ ಶೆಟ್ಟಿ ಕಣ್ಣೀರಲ್ಲೇ ಕೈ ಮುಗಿದು, ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಇಲ್ಲಿ ಇರೋರ್ ನಿರೀಕ್ಷೆ ರೀಚ್ ಆಗೋದು ಕಷ್ಟ ಅನಿಸುತ್ತಿದೆ. ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಇದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ. ಶೋಭಾ ಶೆಟ್ಟಿ ಕಣ್ಣೀರು ಹಾಕುವಾಗ ಚೈತ್ರಾ ಅವರ ಸಮಾಧಾನ ಮಾಡುತ್ತಿದ್ದರು.

    ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ (Bigg Boss Telugu 7) ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗರ‍್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

  • BBK 11: ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ-  ಜೈಲಿಗಟ್ಟಿದ ಮನೆ ಮಂದಿ

    BBK 11: ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ- ಜೈಲಿಗಟ್ಟಿದ ಮನೆ ಮಂದಿ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ (Shobha Shetty) ಈ ವಾರದ ಕಳಪೆ (Kalape) ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಮನೆ ಮಂದಿಯೆಲ್ಲಾ ಸೇರಿ ಕಳಪೆ ಪಟ್ಟ ಕೊಟ್ಟಿರೋದು ಶೋಭಾಗೆ ಶಾಕ್ ಆಗಿದೆ. ಜೈಲು ಪಾಲಾಗಿದ್ದಕ್ಕೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    ಈ ವಾರ ನಿಮ್ಮ ಆಟದ ಪ್ರದರ್ಶನ ಕಡಿಮೆ ಎಂದೆನಿಸಿತು. ಅದಕ್ಕೆ ಕಳಪೆ ಪಟ್ಟ ಕೊಡುತ್ತಿದ್ದೇನೆ ಎಂದ ಧನರಾಜ್ ಮಾತಿಗೆ ಶೋಭಾ ಗರಂ ಆಗಿದ್ದಾರೆ. ನೀವ್ಯಾಕೆ ನನ್ನ ಟಾರ್ಗೆಟ್ ಮಾಡುತ್ತಿದ್ದೀರಾ? ಎಂದಿದ್ದಾರೆ. ಜೀವನದಲ್ಲಿ ಏನೇನೋ ಫೇಸ್ ಮಾಡಿದ್ದೇನೆ. ಇದು ಏನು ಅಲ್ಲ ನನಗೆ ಎಂದು ತಿರುಗೇಟು ನೀಡಿದ್ದಾರೆ ಶೋಭಾ. ಇಡೀ ಮನೆ ಅವರಿಗೆ ಕಳಪೆ ಕೊಟ್ಟಿರೋದು ಕೆಲ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

    ಅಮ್ಮಾ ಇವತ್ತು ನಾನು ಜೈಲಿಗೆ ಹೋಗ್ತಾ ಇದ್ದೀನಿ. ಅದನ್ನು ನೋಡಿ ನೀವು ಅಳಬೇಡಿ ಎಂದು ಶೋಭಾ ಕಣ್ಣೀರಿಟ್ಟಿದ್ದಾರೆ. ಇತ್ತ ನನ್ನ ನಿರ್ಧಾರ ತಪ್ಪಾಗಿದ್ಯಾ ಎಂದು ಗೊಂದಲದಲ್ಲಿದ್ದ ಧನರಾಜ್‌ಗೆ ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ರಜತ್ ಸಲಹೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಬೆಳ್ಳಗೆ ಇರೋದೆಲ್ಲ ಹಾಲಲ್ಲ ಎಂದು ಶೋಭಾಗೆ ಕುಟುಕಿದ್ದಾರೆ. ಎಲ್ಲರೂ ನನಗೆ ಕಳಪೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶೋಭಾ ಜೈಲಿನಲ್ಲಿ ಗಳಗಳನೆ ಅತ್ತಿದ್ದಾರೆ.

    ಇನ್ನೂ ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗಾರ್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

  • BBK 11: ಉಗ್ರಂ ಮಂಜು, ಮೋಕ್ಷಿತಾ ದಿಢೀರ್‌ ಬಂಧನ- ಟ್ವಿಸ್ಟ್‌ ಕೊಟ್ಟ ʻಬಿಗ್‌ ಬಾಸ್‌ʼ

    BBK 11: ಉಗ್ರಂ ಮಂಜು, ಮೋಕ್ಷಿತಾ ದಿಢೀರ್‌ ಬಂಧನ- ಟ್ವಿಸ್ಟ್‌ ಕೊಟ್ಟ ʻಬಿಗ್‌ ಬಾಸ್‌ʼ

    ಬಿಗ್ ​ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮಹಾರಾಜ ಉಗ್ರಂ ಮಂಜು ಮತ್ತು ಯುವರಾಣಿ ಮೋಕ್ಷಿತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆಟವೇ ರದ್ದಾಗಿತ್ತು. ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್​​ ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ರಾಜ ಮತ್ತು ಯುವರಾಣಿ ಇಬ್ಬರನ್ನು ಬಂಧನದಲ್ಲಿ ಇರಿಸಿದ್ದಾರೆ. ಅದಷ್ಟೇ ಅಲ್ಲ, ಇಬ್ಬರಿಗೂ ಬಿಡುಗಡೆ ಭಾಗ್ಯ ಸಿಗಬೇಕಾದ್ರೆ, ಮನೆ ಮಂದಿ ಟಾಸ್ಕ್‌ ಗೆಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಹಿನಿ ಹಂಚಿಕೊಂಡ ಪ್ರೋಮೋ ಕುತೂಹಲ ಮೂಡಿಸಿದೆ.

    ರಾಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ (Ugramm Manju) ಹಾಗೂ ಮೋಕ್ಷಿತಾರನ್ನು (Mokshitha Pai) ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್​ ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್​ ಬಾಸ್​​ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.

    ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್​ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ, ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ ಗೌಡ ಕೆಂಡಕಾರಿದ್ದಾರೆ. ಆಟದ ವೇಳೆ, ತ್ರಿವಿಕ್ರಮ್‌ಗೆ ಫೌಲ್‌ ಕೊಟ್ಟಿದ್ದಕ್ಕೆ ಕಿತ್ತಾಟ ಶುರುವಾಗಿದೆ. ಬಂಧನಕ್ಕೆ ಒಳಗಾಗಿರುವ ಮಂಜು, ಮೋಕ್ಷಿತಾರನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

  • ಗದ್ದುಗೆಗಾಗಿ ಗುದ್ದಾಟ- ಬುರುಡೆ ಒಡೆಯುವ ವಿಚಾರವೆತ್ತಿದ ರಜತ್‌ ಮೇಲೆ ಉಗ್ರಂ ಮಂಜು ಗರಂ

    ಗದ್ದುಗೆಗಾಗಿ ಗುದ್ದಾಟ- ಬುರುಡೆ ಒಡೆಯುವ ವಿಚಾರವೆತ್ತಿದ ರಜತ್‌ ಮೇಲೆ ಉಗ್ರಂ ಮಂಜು ಗರಂ

    ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಕ್ಯಾಪ್ಟನ್ ಉಗ್ರಂ ಮಂಜು (Ugramm manju)  ಮಹಾರಾಜರಾಗಿ ಆಳುತ್ತಿದ್ದಾರೆ. ರಾಜನ ದರ್ಬಾರ್ ನಡುವೆ ಮೋಕ್ಷಿತಾರನ್ನು ಯುವರಾಣಿಯನ್ನಾಗಿ ಬಿಗ್ ಬಾಸ್ ಘೋಷಿಸಿ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ವಿಂಗಡಿಸಿದ್ದಾರೆ. ಹೀಗಿರುವಾಗ ಟಾಸ್ಕ್ ವೇಳೆ, ಉಗ್ರಂ ಮಂಜು, ರಜತ್ ನಡುವೆ ಕಿರಿಕ್ ನಡೆದಿದ್ದು, ಬುರುಡೆ ಒಡೆಯುವ ವಿಚಾರ ಬಂದಿದೆ. ಮತ್ತೆ ಮನೆಯಲ್ಲಿ ರಂಪಾಟ ಶುರುವಾಗಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ದೊಡ್ಮನೆಯಲ್ಲಿ ಯುವರಾಣಿ ಮೋಕ್ಷಿತಾ (Mokshitha Pai) ಅವರ ಬಣವಾದರೆ, ಇನ್ನೊಂದು ಕಡೆ ರಾಜ ಮಂಜಣ್ಣ ಬಣವಾಗಿದೆ. ಅಂತೆಯೇ ನಿನ್ನೆಯ ಎಪಿಸೋಡ್‌ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಗುದ್ದಾಟ ನಡೆದಿದೆ. ಇಂದು ಬಿಗ್ ಬಾಸ್ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಅದುವೇ ಮಣ್ಣಿನಿಂದ ಅಸ್ತ್ರ ಮಾಡೋದು. ಈ ವೇಳೆ, ಮನೆ ರಣರಂಗವಾಗಿದೆ.

    ಈ ವೇಳೆ, ಮಣ್ಣಿನ ಉಂಡೆಗಳನ್ನು ಎತ್ತಿಕೊಳ್ಳುವಾಗ ಪ್ರಜೆಗಳ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಮಂಜು (Ugramm Manju) ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ವಾಕ್ಸಮರ ಶುರುವಾಗಿದೆ. ಮಂಜು ಬಣದ ಪ್ರಜೆಗಳು, ಮೋಕ್ಷಿತಾ ಬಣದ ಸದಸ್ಯರನ್ನು ತಳ್ಳಿ ಮಣ್ಣನ್ನು ಎತ್ತಿಕೊಂಡು ಹೋಗಿದ್ದಾರೆ. ಇದಕ್ಕೆ ಕೋಪಿಸಿಕೊಂಡ ರಜತ್, ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ರಜತ್ ವಾರ್ನಿಂಗ್ ಕೊಟ್ಟಿದ್ದಾರೆ.

    ಬಳಿಕ ಮಂಜು ಅಲ್ಲಿಗೆ ಎಂಟ್ರಿಯಾಗಿ ಬುರುಡೆ ಒಡಿತಿಯಾ ನೀನು? ಏನು ರೌಡಿಸಂ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕಿರುಚಾಡಿದ್ದಾರೆ. ಅದಕ್ಕೆ ಮತ್ತೆ ಕೌಂಟರ್ ಕೊಟ್ಟ ಮಂಜು, ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತ ಮಂಜು ಮುಂದೆ ತೊಡೆ ತಟ್ಟಿದ್ದಾರೆ.

  • BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

    BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

    ನ್ನಡದ ಬಿಗ್ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರಿದೆ.  ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಬದಲಾಗಿ ಹೋಗಿದೆ. 9ನೇ ವಾರದಲ್ಲಿ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಒಂದು ಕಡೆ ಮಹಾರಾಜ ಉಗ್ರಂ ಮಂಜು, ಮತ್ತೊಂದು ಕಡೆ ಯುವರಾಣಿ ಮೋಕ್ಷಿತಾ ಪೈ (Mokshitha Pai) ಮನೆಯ ಪಟ್ಟಕ್ಕಾಗಿ ಕಿರಿಕ್‌ ನಡೆದಿದೆ. ಈ ವೇಳೆ, ನಿನ್ನದು ನರಿ ಕಣ್ಣೀರು ಎಂದು ಮೋಕ್ಷಿತಾಗೆ ಮಂಜು ತಿವಿದಿದ್ದಾರೆ. ಇದನ್ನೂ ಓದಿ:‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ಯುವರಾಣಿ ಮೋಕ್ಷಿತಾ ಅವರನ್ನು ನೋಡಿದಾಗ ಎಲ್ಲರೂ ತಲೆ ಬಾಗಿ ನಮಸ್ಕಾರ ಮಾಡಬೇಕು ಅಂತ ಗೋಲ್ಡ್ ಸುರೇಶ್ ಗೌತಮಿ, ತ್ರಿವಿಕ್ರಮ್, ಧನರಾಜ್ ಮುಂದೆ ಹೇಳುತ್ತಾ ಇರುತ್ತಾರೆ. ಆಗ ಗೌತಮಿ ಆಗೋದಿಲ್ಲ. ಯಾರು ಹತ್ತಿರ ತಲೆ ಬಗ್ಗಿಸಲಿ, ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಂತೆ ಲೆಕ್ಕ ಅಂತ ಹೇಳಿದ್ದಾರೆ.

    ಆಗ ಮಂಜಣ್ಣ ನಾಲಿಗೆಗೆ ಮೆತ್ತಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ಯುವರಾಣಿ ಪಟ್ಟ ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್ ಬಾಸ್ (Bigg Boss) ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಯಾರ ಯಾರ ಯೋಗ್ಯತೆ ಏನು ಎಂಬುದು ಗೊತ್ತಿದೆ ಎಂದು ಮಂಜು ಮೋಕ್ಷಿತಾಗೆ ಟಾಂಗ್ ಕೊಟ್ಟಿದ್ದಾರೆ.

    ಅದಕ್ಕೆ ನಿಮಗೆ ಯೋಗ್ಯತೆ ಏನು ಎಂಬುದು ನನಗೂ ಗೊತ್ತಿದೆ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ. ‘ಆಕಾಶದಲ್ಲಿ ನೀ ದೀಪವಾದೆ’ ಎಂದು ಮೋಕ್ಷಿತಾ ಹಾಡಿದ ಹಾಡನ್ನೇ ಹಾಡುತ್ತಾ ಮಂಜು (Ugramm Manju) ಕೆಣಕಿದ್ದಾರೆ. ಸಿಟ್ಟಿನಲ್ಲಿ ಥೂ ಎಂದು ಮಂಜುಗೆ ಹೇಳಿದ್ದಾರೆ. ಸ್ನೇಹಿತರಾಗಿದ್ದ ಗೌತಮಿ, ಮೋಕ್ಷಿತಾ, ಮಂಜು ನಡುವೆ ಈಗ ಬಿಗ್ ವಾರ್ ಶುರುವಾಗಿದೆ.

  • ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸುತ್ತೇನೆ- ಚೈತ್ರಾ ವಿರುದ್ಧ ರೊಚ್ಚಿಗೆದ್ದ ರಜತ್

    ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸುತ್ತೇನೆ- ಚೈತ್ರಾ ವಿರುದ್ಧ ರೊಚ್ಚಿಗೆದ್ದ ರಜತ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಕ್ಷುಲ್ಲಕ ಕಾರಣ ನೀಡಿ ನಾಮಿನೇಟ್ ಮಾಡಿದ್ದಕ್ಕೆ ಚೈತ್ರಾ ವಿರುದ್ಧ ರಜತ್ (Rajath Kishen) ಗರಂ ಆಗಿದ್ದಾರೆ. ನೀವು ಕೊಟ್ಟಿರುವ ಕಾರಣ ಸುದೀಪ್  (Sudeep) ಸರ್ ಸರಿ ಅಂದರೆ ಅರ್ಧ ಮೀಸೆ ಬೋಳಿಸುತ್ತೇನೆ ಎಂದು ಚೈತ್ರಾ ವಿರುದ್ಧ ರಜತ್ ಗುಡುಗಿದ್ದಾರೆ. ಇದನ್ನೂ ಓದಿ:‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

    ಚೈತ್ರಾ (Chaithra Kundapura) ಅವರು ರಜತ್‌ರನ್ನು ನಾಮಿನೇಟ್ ಮಾಡುವಾಗ ನನ್ನನ್ನು ಬಾಸ್ ಅಂತ ವ್ಯಂಗ್ಯದಿಂದ ಕರೆಯುತ್ತಾರೆ. ವ್ಯಂಗ್ಯ ಮತ್ತು ಅವಮಾನ ಯಾವುದು ಅಂತ ತಿಳಿಯದೇ ಇರೋವಷ್ಟು ಮುಗ್ಧೆ ನಾನಲ್ಲ ಎಂದರು. ಮತ್ತೆ ಶಿಶಿರ್ ಮತ್ತು ಐಶ್ವರ್ಯಾಗೆ ಹುಡುಗಿರ ಕೈ ಹಿಡಿದುಕೊಂಡು ಓಡಾಡಿದ್ರೆ ಇಲ್ಲಿ ಬಿಗ್ ಬಾಸ್ ಆಟ ಗೆಲ್ಲೋಕೆ ಆಗಲ್ಲ ಎಂದು ರಜತ್ ತಿವಿದಿದ್ದರು. ಇದನ್ನು ಕೂಡ ಚೈತ್ರಾ ನಾಮಿನೇಷನ್‌ಗೆ ಕಾರಣ ನೀಡಿದರು. ಇದು ರಜತ್ ಕೋಪಕ್ಕೆ ಕಾರಣವಾಗಿದೆ.

    ಮೊನ್ನೆಯಷ್ಟೇ ವೀಕೆಂಡ್ ಪಂಚಾಯಿತಿಯಲ್ಲಿ ಸರಿಯಾದ ಕಾರಣ ಕೊಟ್ಟು ನಾಮಿನೇಟ್ ಮಾಡಿ ಅಂತ ಸುದೀಪ್ ಸರ್ ಹೇಳಿದ್ದಾರೆ. ಮತ್ತೆ ಹಾಗೇ ಮಾಡುತ್ತಾರೆ ಎಂದು ರಜತ್ ಕ್ಯಾತೆ ತೆಗೆದಿದ್ದಾರೆ. ನೀವು ಕೊಟ್ಟಿದ್ದ ಕಾರಣ ಸುದೀಪ್ ಸರ್ ಸರಿ ಅಂತ ಹೇಳಲಿ. ಅಲ್ಲೇ ನಾನು ಈ ಮನೆ ಬಿಟ್ಟು ಹೋಗುತ್ತೇನೆ. ನಾಮಿನೇಷನ್‌ಗೆ ನೀವು ಕೊಟ್ಟಿದ್ದ ಕಾರಣ ಸರಿ ಅಂದರೆ ಸುದೀಪ್ ಸರ್, ನಾನು ಈ ಮನೆ ಬಿಟ್ಟು ಹೋಗುತ್ತೇನೆ ಎಂದು ಚೈತ್ರಾಗೆ ರಜತ್ ಸವಾಲು ಹಾಕಿದ್ದಾರೆ. ಯಾರಾದರೂ ತೂಕದ ವ್ಯಕ್ತಿ ಹತ್ತಿರ ಮಾತನಾಡಬಹುದು. ಇವರ ಹತ್ತಿರ ಮಾತನಾಡೋಕೆ ಆಗಲ್ಲ ಎಂದು ಚೈತ್ರಾ ಮಾತಿಗೆ ಮಾತು ಕೊಟ್ಟಿದ್ದಾರೆ.

  • ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್‌ ಫೈಟ್‌

    ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್‌ ಫೈಟ್‌

    ಬಿಗ್ ಬಾಸ್ ಸಾಮ್ರಾಜ್ಯದ (Bigg Boss Kannada 11) ಆಟದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಉಗ್ರಂ ಮಂಜು ಸಾಮ್ರಾಜ್ಯ ಪತನದತ್ತ ಸಾಗುತ್ತಿದ್ದು, ಗದ್ದುಗೆ ಮೇಲೆ ಯುವರಾಣಿ ಮೋಕ್ಷಿತಾ ಕಣ್ಣೀಟ್ಟಿದ್ದಾರೆ. ಸಾಮ್ರಾಜ್ಯದ ಮೇಲೆ ಯುವರಾಣಿ ಮೋಕ್ಷಿತಾರ (Mokshitha Pai) ಕಣ್ಣು ಬಿದ್ದಿದೆ. ಮಹಾರಾಜರು ಮಂಜುಗಾಗಿ  ಅಲಂಕರಿಸಿರುವ ಕುರ್ಚಿ ಮೇಲೆ ಮೋಕ್ಷಿತಾ ಹೋಗಿ ಕೂತಿದ್ದಾರೆ. ಇದರಿಂದ ದೊಡ್ಮನೆ ಇದೀಗ ಇಬ್ಭಾಗವಾಗಿದ್ದು, ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ.

    ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಇದೀಗ ಮೋಕ್ಷಿತಾ ಯುವರಾಣಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಂಜು ಅವರ ಮನೆಯ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್ ಬಾಸ್ ಧ್ವನಿ ಕೇಳಿಸಿದೆ. ಈ ಬೆನ್ನಲ್ಲೇ ಉಗ್ರಂ ಮಂಜು (Ugramm Manju) ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ. ಯುವರಾಣಿ ಮೋಕ್ಷಿತಾ ಕೂಡ ಮಾತಿಗೆ ಮಾತು ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಕುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ. ಈ ಗದ್ದುಗೆ ಕಿತ್ತಾಟದಲ್ಲಿ ಯಾರು ಗೆದ್ದಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ. ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋ ವೈರಲ್‌ ಆಗಿದೆ.

    ಅಂದಹಾಗೆ, ಕಳೆದ ವಾರಾಂತ್ಯ ಬಿಗ್‌ ಬಾಸ್‌ನಿಂದ ಧರ್ಮ ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಮತ್ತು ರಜತ್‌ ಆಗಮಿಸಿದ್ಮೇಲೆ ಆಟ ಮತ್ತಷ್ಟು ಹೊರ ತಿರುವು ಪಡೆಯುತ್ತಿದೆ. ಈ ವಾರ ದೊಡ್ಮನೆಯಿಂದ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

  • ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ದೊಡ್ಮನೆಯ (Bigg Boss Kannada 11) ಆಟ ರೋಚಕ ತಿರುವುಗಳನ್ನು ಪಡೆದು 60ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath Kishen) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಮೇಲೆ ಆಟ ಇಂಟರೆಸ್ಟಿಂಗ್ ಆಗಿದೆ. ಇದೀಗ ಹನುಮಂತ ನಾಮಿನೇಟ್ ಮಾಡಿದ್ದಕ್ಕೆ ಫೈರ್ ಲೇಡಿ ಶೋಭಾ ಶೆಟ್ಟಿ ಗರಂ ಆಗಿದ್ದಾರೆ. ಈ ವೇಳೆ, ಹನುಮಂತ, ಶೋಭಾ, ಮಂಜು ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ, ಶೋಭಾ ಶೆಟ್ಟಿ ಹೆಸರನ್ನು ಹನುಮಂತ ಸೂಚಿಸಿದರು. ಅದಕ್ಕೆ ಕೊಟ್ಟ ಕಾರಣ ಶೋಭಾಗೆ ಸಿಟ್ಟು ತರಿಸಿದೆ. ನೇರವಾಗಿ ಶೋಭಾ ಶೆಟ್ಟಿಗೆ ನಿಮ್ಮ ಕ್ಯಾಪ್ಟನ್ಸಿ ನನಗೆ ಇಷ್ಟ ಆಗಿಲ್ಲ ಎಂದಿದ್ದಾರೆ. ನಿಮ್ಮ ಬುದ್ದಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ. ಎಲ್ಲಾ ರಜತ್ ಮತ್ತು ಮಂಜು ಪ್ಲ್ಯಾನ್ ಮಾಡಿದಂತೆ, ಆಟ ಆಡಿದ್ದೇವೆ ಎಂದು ಹನುಮಂತ (Hanumantha) ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂದು ಹನುಮಂತಗೆ ಶೋಭಾ ತಿರುಗೇಟು ನೀಡಿದ್ದಾರೆ.

    ಸದ್ಯ ಬಿಗ್ ಬಾಸ್ ಸಾಮ್ರಾಜ್ಯದ ರಾಜನಾಗಿರುವ ಉಗ್ರಂ ಮಂಜು ಅವರು ಹನುಮಂತ ಕೊಟ್ಟ ಕಾರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಶೋಭಾ ರಾಂಗ್ ಆಗಿದ್ದಾರೆ. ಆ ಕಾರಣ ಸೂಕ್ತ ಅನ್ನೋದಾಗಿದ್ರೆ ನಾನು ವಾದನೇ ಮಾಡುತ್ತಿರಲಿಲ್ಲ ಎಂದಿದ್ದಾರೆ. ನಟಿಗೆ ಇದು ‘ಬಿಗ್ ಬಾಸ್’ ಮಹಾಪ್ರಭುಗಳ ಆಜ್ಞೆ ಎಂದು ಮಂಜು ಸಿಟ್ಟಿನಿಂದ ಹೋಗಿ ಕುಳಿತುಕೊಳ್ಳಿ ಎಂದಿದ್ದಾರೆ. ಇಲ್ಲ ನಾನು ಕೂರಲ್ಲ ಮಹಾಪ್ರಭು ಎಂದು ಶೋಭಾ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.