Tag: BBK

  • BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

    BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

    ಕನ್ನಡದ ಬಿಗ್‌ಬಾಸ್ ಸೀಸನ್ 12ರ (BBK 12) ಪ್ರಸಾರದ ದಿನಾಂಕ ಫಿಕ್ಸ್ ಆಗಿರುವುದರಿಂದ ಮನೆಯೊಳಗೆ ಹೋಗುವ ಸ್ಪರ್ಧಿಗಳ ಕುರಿತು ನಿರೀಕ್ಷೆ ಜೋರಾಗಿದೆ.

    ಕಾರ್ಯಕ್ರಮ ಪ್ರಸಾರವಾಗೋದಕ್ಕೂ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗುವುದು ಸಾಮಾನ್ಯ. ಅದರಂತೆ ಈ ಬಾರಿಯೂ ದೊಡ್ಮನೆಗೆ ಹೋಗುವ ಸ್ಪರ್ಧಿಗಳ ಸಂಭವನೀಯ ಪಟ್ಟಿ ಮುನ್ನಲೆಗೆ ಬಂದಿದ್ದು ಅದರಲ್ಲಿ ಹಿರಿಯ ನಟಿ ಸುಧಾರಾಣಿ (Actress Sudharani) ಹೆಸರು ಚಾಲ್ತಿಯಲ್ಲಿದೆ.

    ಖ್ಯಾತ ನಟಿ ಸುಧಾರಾಣಿ, ಸುದೀಪ್ (Sudeep) ಜೊತೆಯೂ ನಟಿಸಿದ್ದ ನಟಿ, ಇವರು ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ನಟಿ ಸುಧಾರಾಣಿ ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿದ್ದು, ಹೆಚ್ಚು ಫಾಲವೋರ್ಸ್‌ ಹೊಂದಿರುವ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಗ್‌ಬಾಸ್ ಸೀಸನ್ 12ರ ಹೈಲೈಟ್ ಕಂಟೆಸ್ಟಂಟ್‌ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ ಎಲ್ಲಾ ವಯೋಮಾನ ಹಾಗೂ ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾ ಎಲ್ಲದರ ಖ್ಯಾತಿಯನ್ನ ಗಣನೆಗೆ ತೆಗೆದುಕೊಳ್ಳಲಾಗುತ್ತೆ. ಅದರಂತೆ ಸುಧಾರಾಣಿ ಅವರಿಗೆ ಆಹ್ವಾನ ಹೋಗಿದೆ ಎನ್ನಲಾಗುತ್ತಿದೆ.

    ಈ ವಿಚಾರವಾಗಿ ಸುಧಾರಾಣಿ ತಮ್ಮ ಇನ್‌ಸ್ಟಾಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೇಳಿದ್ದಾರೆ. ಹೀಗಾಗಿ ಸುಧಾರಾಣಿ ಈ ಮಾತು ಸದ್ಯಕ್ಕೆ ಗೊಂದಲ ಸೃಷ್ಟಿಸಿದ್ದರೂ ಬಿಗ್‌ಬಾಸ್ ಮನೆಯಲ್ಲಿ ಸುಧಾರಾಣಿ ನೋಡುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ.

  • ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ಬಿಗ್ ಬಾಸ್ (Bigg Boss) ನಿರೂಪಕರ ಬಗ್ಗೆ ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚು ಚರ್ಚೆ ಮಾಡಲಾಗುತ್ತಿತ್ತು. ತೆಲುಗು ಮತ್ತು ಕನ್ನಡ ಬಿಗ್ ಬಾಸ್ ಶೋಗೆ ಈ ಬಾರಿ ಹೋಸ್ಟ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಮೂಡಿತ್ತು. ಈ ಗೊಂದಲಕ್ಕೆ ತೆಲುಗಿನಲ್ಲಿ ತೆರೆ ಬಿದ್ದಿದೆ. ಕನ್ನಡದಲ್ಲಿ ಇನ್ನೂ ಬಾಕಿ ಇದೆ. ಈ ವರ್ಷದಿಂದ ಬಿಗ್ ಬಾಸ್ ನಿರೂಪಿಸಲ್ಲ ಅಂತ ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾಗಿ ಗೊಂದಲ ಹಾಗೆಯೇ ಮುಂದುವರೆದಿದೆ.

    ಕೆಲ ವರ್ಷಗಳಿಂದ ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ್ (Nagarjuna) ನಡೆಸಿಕೊಡುತ್ತಿದ್ದರು. ಈ ಸೀಸನ್ ನಲ್ಲಿ ನಾಗಾರ್ಜುನ್ ಇರುವುದಿಲ್ಲ ಎಂದು ಹೇಳಲಾಗಿತ್ತು. ವಿಜಯ್ ದೇವರಕೊಂಡ ಅಥವಾ ಬಾಲಯ್ಯ ಶೋ ನಡೆಸಿಕೊಡಲಿದ್ದಾರೆ ಅಂತಾನೂ ಸುದ್ದಿ ಆಗಿತ್ತು. ಇದೀಗ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ನಾಗಾರ್ಜುನ್ ಅವರೇ ಪ್ರೋಮೋದಲ್ಲಿದ್ದಾರೆ. ಅಲ್ಲಿಗೆ ತೆಲುಗು ಶೋ ನಿರೂಪಣೆಯನ್ನು ನಾಗಾರ್ಜುನ್ ಮಾಡೋದು ಪಕ್ಕಾ ಆಗಿದೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

    ಕನ್ನಡದಲ್ಲೂ ಸುದೀಪ್ ಜಾಗಕ್ಕೆ ಯಾರನ್ನು ತರಬೇಕು ಅಂತ ತಲೆಕೆಡಿಸಿಕೊಂಡು ಕೂತಿದೆ ಕಲರ್ಸ್ ವಾಹಿನಿ. ಈ ನಡುವೆ ವಾಹಿನಿಯ ಮುಖ್ಯಸ್ಥರು ಸುದೀಪ್ ಅವರನ್ನು ಭೇಟಿ ಮಾಡಿದ ವಿಚಾರವೂ ಹರಿದಾಡುತ್ತಿದೆ. ವಾಹಿನಿಗೆ ಕೆಲವು ಕಂಡಿಷನ್ ಅನ್ನು ಸುದೀಪ್ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಸುದೀಪ್ ಕಂಡಿಷನ್ ಗೆ ಚಾನೆಲ್ ಕೂಡ ಒಪ್ಪುವ ಸಾಧ್ಯತೆ ಇದೆಯಂತೆ. ಹಾಗಾಗಿ ಕನ್ನಡದಲ್ಲಿ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಅನ್ನೋದು ಆಪ್ತರ ಅನಿಸಿಕೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

  • ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಕೊನೆಗೂ ಬಿಗ್‍ಬಾಸ್ ಮನೆಯಲ್ಲಿ ಇಶಾನಿ (Eshani) ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ (Varthur Santhosh) ಅವರ ಕಾರಣದಿಂದ ಎಲಿಮಿನೇಷನ್ (Elimination) ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.

    ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ (Kichcha Sudeepa), ನಿಜ. ನಿಮ್ಮ ಪಯಣ ಬಿಗ್‍ಬಾಸ್ (Bigg Boss Kannada) ಮನೆಯಲ್ಲಿ ಮುಗಿಯುತ್ತಿದೆ. ಆಲ್‍ದಿ ಬೆಸ್ಟ್ ಎಂದು ಹೇಳಿದರು. ಭಾನುವಾರದ ಎಪಿಸೋಡ್‍ನಲ್ಲಿ ಇನ್ನೊಬ್ಬರು ಬಿಗ್‍ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

    ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್‍ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ

    ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಇಂದು ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

  • ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬಿಗ್‍ಬಾಸ್ ಮನೆಯಲ್ಲಿ ಈ ವಾರ ಅಡುಗೆ ಮನೆಯ ಜವಾಬ್ದಾರಿಯನ್ನು ಪುರುಷ ಸದಸ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಚಪಾತಿ ವಿಚಾರವಾಗಿ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ಕಿಚನ್‍ನಲ್ಲಿ ಅಡುಗೆ ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ಪ್ರಶಾಂತ್ ಚಪಾತಿ ಹಿಟ್ಟನ್ನು ಕಲಿಸುತ್ತಿರುವುದನ್ನು ಅರವಿಂದ್ ನೋಡಿ ನಾನು ಆಗಲೇ ಕಲಸಬೇಡಿ ಎಂದು ಹೇಳಿದೆ. ನೀವು ನನ್ನ ಮಾತಾಗಲಿ, ಯಾರ ಮಾತು ಕೇಳುವುದಿಲ್ಲ ಎನ್ನುತ್ತಾರೆ. ಆಗ ಪ್ರಶಾಂತ್ ನಮ್ಮ ಮನೆಯಲ್ಲಿ ಒವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ, ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು ಆದರೆ, ಒತ್ತುವುದು ನಾವು ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ. ಸ್ವಲ್ಪವಾದರೂ ಅಪರೂಪಕ್ಕೆ ಕೇಳಿ ಎಂದು ಹೇಳುತ್ತಾರೆ.

    ನಂತರ ಪ್ರಶಾಂತ್ ಅದು ಚಪಾತಿ ಮಾಡುವ ವಿಧಾನ, ಹೊಸದಾಗಿ ನಾನೇನು ಮಾಡುತ್ತಿಲ್ಲ. ವೈಷ್ಣವಿಯವರು ಎಸಿ ಇದೆ ಕಲ್ಲಿನ ರೀತಿಯಾಗುತ್ತದೆ ಎಂದು ಹೇಳಿದಕ್ಕೆ ಒಳಗೆ ಇಟ್ಟಿದೆ. ಇಲ್ಲ ಬಿಸಾಕಿ ಬೇರೆ ಮಾಡೋಣಾ ಬಿಡಿ. ಏನು ಮಾಡುವುದಕ್ಕೆ ಆಗುತ್ತದೆ ಎನ್ನುತ್ತಾರೆ. ಇದನ್ನು ಕೇಳಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಶಾಕ್ ಆಗುತ್ತಾರೆ. ಬಳಿಕ ಬೀಸಾಕುವುದಾ ಸರ್.. ಏನು ಹೇಳುತ್ತಿದ್ದೀರಾ? ಹೇಳಿದರೆ ಕೋಪ ಮಾಡಿಕೊಳ್ಳುತ್ತೀರಾ ಒಂದು ಮಾತು ಕೇಳುವುದಿಲ್ಲ. ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ ಎಂದು ಹೇಳುತ್ತಾರೆ.

    ಆಯ್ತು ರಾಜಾ… ಒಂದಿಪ್ಪತ್ತು ಎರಡು ಬಾರಿ ಹೇಳಿದ್ಯಾ, ಕಲಸಿ ಇಟ್ಟರೆ ಮತ್ತಗೆ ಆಗುತ್ತದೆ ಎಂದು ಪದ್ಧತಿ ಹಾಗಾಗಿ ಕಲಿಸಿ ಇಟ್ಟೆ. ಮನೆಯಲ್ಲಿ ಚಪಾತಿ ಮಾಡುವುದು ನಾನೇ 40 ವರ್ಷದಲ್ಲಿ ಒಂದಿಪ್ಪತ್ತು ವರ್ಷ ಚಪಾತಿ ಮಾಡಿದ್ದೇನೆ. ಆ ಇಪ್ಪತ್ತು ವರ್ಷದಲ್ಲಿ 4 ಗಂಟೆ ಮುಂಚೆಯೇ ಚಪಾತಿ ಹಿಟ್ಟನ್ನು ಕಲಿಸಿ ಇಡುತ್ತಿದ್ದೆ. ಹಾಗೆ ಇಲ್ಲಿಯೂ ಮಾಡಲು ಹೋದೆ ಆದ್ರೆ ಆಗಲಿಲ್ಲ. ಬೇಡ ಅಂದರೆ ಬೀಸಾಕೋಣ, ಇಲ್ಲ ಬೇರೆ ಏನಾದರೂ ಮಾಡೋಣ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಇಲ್ಲ ಬಿಸಾಕಲು ಆಗುವುದಿಲ್ಲ ಎಂದರೆ, ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಲಿಮಿಟೆಡ್ ದಿನಸಿ ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದೇ ಆಗಿ ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ. ಇದಕ್ಕೆ ಪ್ರಶಾಂತ್‍ರವರು ಗೊತ್ತಿಲ್ಲದೇ ಅಲ್ಲ ಗೊತ್ತಿದೆ ಮಾಡಿದ್ದು, ಆದರೆ ಇಲ್ಲಿ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಮರು ವಾದ ಮಾಡುತ್ತಾರೆ.