Tag: bath

  • ಮೊಹರಂ- ಕೆಂಡ ಹಾಯುವ ಮುನ್ನ ಕೆರೆಯಲ್ಲಿ ಮುಳುಗಿ ಯುವಕರು ಸಾವು

    ಮೊಹರಂ- ಕೆಂಡ ಹಾಯುವ ಮುನ್ನ ಕೆರೆಯಲ್ಲಿ ಮುಳುಗಿ ಯುವಕರು ಸಾವು

    ಧಾರವಾಡ: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.

    ಕಾಶೀಂ ನದಾಫ(24) ಹಾಗೂ ಶರೀಫ ನದಾಫ(20) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ಮೊಹರಂ ಹಬ್ಬ ಹಿನ್ನೆಲೆಯಲ್ಲಿ ಕಾಶೀಂ ಹಾಗೂ ಇನ್ನಿಬ್ಬರು ಮುಳಮುತ್ತಲ ಗ್ರಾಮದ ಕೆರೆಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮುಗಿಸಿ ಮೊಹರಂ ಹಬ್ಬದ ಕೆಂಡ ಹಾಯಲು ಹೋಗಬೇಕಿದ್ದ ಈ ಯುವಕರು, ಕೆರೆಗೆ ಬಂದು ಈಜಲು ಇಳಿದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಈ ವೇಳೆ ಕೆರೆಯ ಪಕ್ಕದಲ್ಲೇ ಇದ್ದ ಶರೀಫ್ ಕೆರೆಯಲ್ಲಿ ಮುಳುಗುತಿದ್ದ ಇಬ್ಬರನ್ನು ಹೊರ ತೆಗೆದಿದ್ದಾನೆ. ನಂತರ ಶರೀಫ್ ಕಾಶೀಂ ನನ್ನು ಉಳಿಸಲು ಹೋದಾಗ ಕಾಶೀಂ ಹಾಗೂ ಶರೀಫ್ ಇಬ್ಬರೂ ಮುಳುಗಿ ಸಾವನ್ನಪ್ಪಿದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಸಾವನ್ನಪ್ಪಿದ ಯುವಕರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದು, ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಡಗಿನ ಯುವಕ ಕೇರಳದಲ್ಲಿ ನೀರು ಪಾಲು

    ಕೊಡಗಿನ ಯುವಕ ಕೇರಳದಲ್ಲಿ ನೀರು ಪಾಲು

    ಮಡಿಕೇರಿ: ಕೊಡಗು ಜಿಲ್ಲೆಯ ಯುವಕ ಕೇರಳದ ಇರಿಟ್ಟಿಯ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಚೆಟ್ಟಳ್ಳಿಯ ಪ್ರದೀಶ್ (22) ಮೃತ ಯುವಕ. ಕೇರಳದ ಇರಿಟ್ಟಿ ಪಕ್ಕದ ಕೂಟುಪುಯ ಎಂಬಲ್ಲಿ ಕೇಬಲ್ ಕೆಲಸದಲ್ಲಿದ್ದ ಪ್ರದೀಶ್ ಹಾಗೂ ಮತ್ತಿಬ್ಬರು ಗುರುವಾರ ವಳವುಪಾರ ಬಳಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ. ಈ ಸಂದರ್ಭ ಪ್ರದೀಶ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಇರಿಟ್ಟಿ ಅಗ್ನಿಶಾಮಕ ದಳದವರು ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಇರಿಟ್ಟಿ ಸಬ್ ಇನ್‍ಸ್ಪೆಕ್ಟರ್ ಪುಷ್ಕರನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಯಾರಮ್ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.

  • 65 ವರ್ಷಗಳಿಂದ ಸ್ನಾನ ಮಾಡದೇ ಸುದ್ದಿಯಾದ ವ್ಯಕ್ತಿ

    65 ವರ್ಷಗಳಿಂದ ಸ್ನಾನ ಮಾಡದೇ ಸುದ್ದಿಯಾದ ವ್ಯಕ್ತಿ

    – ದೇಹ ಕೊಳಕಾಗಿರುವುದರಿಂದ ಆರೋಗ್ಯವಾಗಿದ್ದಾನೆ

    ಟೆಹ್ರಾನ್: 65 ವರ್ಷಗಳಿಂದ ಸ್ನಾನ ಮಾಡದೇ ಇರುವ ವಿಶ್ವದ ಅತ್ಯಂತ ಕೊಳಕು ವ್ಯಕ್ತಿಯೊಬ್ಬರು ಇರಾನ್‍ನಲ್ಲಿ ಕಂಡುಬಂದಿದ್ದಾರೆ.

    ಅಮೌ ಹಜಿ (83) ವರ್ಷದ ಈ ಇವರು ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ಈತ 65 ವರ್ಷಗಳಿಂದ ಸ್ನಾನ ಮಾಡಿಲ್ಲವಂತೆ. ಇವರಿಗೆ ನೀರು ಎಂದರೆ ಭಯವಂತೆ ಮತ್ತು ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗೀ ಸ್ನಾನವೇ ಮಾಡುವುದಿಲ್ಲ. ದೇಹವನ್ನು ನಾನು ಕೊಳಕು ಮಾಡಿಟ್ಟುಕೊಂಡಿರುವುದರಿಂದ ತಾನು ಇಷ್ಟು ದಿನ ಬದುಕುಳಿದಿದ್ದೇನೆ ಎಂದು ಅಮೌ ಹೇಳಿಕೊಂಡಿದ್ದಾರೆ.

    ಅಮೌ ಇರಾನಿನ ಮರುಭೂಮಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ. ಮಾಂಸಾಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಇವರು ಉಳಿದುಕೊಳ್ಳುಲು ಸ್ವಂತ ಮನೆ ಇಲ್ಲ. ಈ ಕಾರಣಕ್ಕೆ ಇವರು ಸಿಕ್ಕ ಜಾಗದಲ್ಲಿ ಉಳಿದುಕೊಂಡು ಕಾಲ ಕಳೆಯುತ್ತಾರೆ. ಅಮೌ ಪರಿಸ್ಥಿತಿ ಕಂಡ ಗ್ರಾಮಸ್ಥರು ಆತನಿಗಾಗಿ ಗುಡಿಸಿಲನ್ನು ನಿರ್ಮಸಿಕೊಟ್ಟದ್ದರು. ಆದರೆ ಒಂದು ದಿನವು ಅಲ್ಲಿ ಅಮೌ ಹಜಿ ಉಳಿದುಕೊಂಡಿಲ್ಲ.

    ಅಮೌ ಹಜಿ ಅವರು ಸ್ನಾನ ಮಾಡದೇ ಇದ್ದರೂ ಇವರಿಗೆ ಯಾವುದೇ ರೀತಿಯ ಸೋಂಕು ತಗುಲಿಲ್ಲ ಎಂಬುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಪ್ರತಿದಿನ 5 ಲೀಟರ್ ನೀರನ್ನು ಕುಡಿಯುತ್ತಾರೆ. ಇವರಿಗೆ ಸಿಗರೇಟು ಎಂದರೆ ಬಲು ಇಷ್ಟವಾಗಿದೆ. ಪ್ರಾಣಿಗಳ ಒಣಗಿದ ಸಗಣಿಯನ್ನು ತೆಗೆದುಕೊಂಡು ಧೂಮಪಾನವನ್ನು ಮಾಡುತ್ತಾರೆ.

    ನನ್ನ ದೇಹ ಕೊಳಕಾಗಿದೆ ಆದರೆ ನನಗೆ ಯಾವುದೇ ರೋಗವಿಲ್ಲ. ನಾನು ಸಂತೋಷವಾಗಿದ್ದೇನೆ. ಒಳ್ಳೆಯ ಜೀವನವನ್ನು ನಡೆಸುತ್ತೇದ್ದೇನೆ ಎಂದು ಅಮೌ ಹಜಿ ಹೇಳುತ್ತಾರೆ.

  • ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    – ತಾಲೂಕು ಆಡಳಿತದಿಂದ ಆದೇಶ

    ಶಿವಮೊಗ್ಗ: ದಕ್ಷಿಣ ಭಾರತದ ವಾರಾಣಸಿ ಎಂದೇ ಖ್ಯಾತಿ ಪಡೆದಿರುವ ತುಂಗಾ-ಭದ್ರಾ ನದಿಯ ಸಂಗಮವಾಗಿರುವ ಕೂಡ್ಲಿಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಪುಷ್ಕರ ಸ್ನಾನಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಪುಷ್ಕರವನ್ನು ನಿಷೇಧಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರಾಚೀನ ಕಾಲದಿಂದಲೂ ಪೂಜೆ, ಧ್ಯಾನ ಮತ್ತು ಶಾಂತಿಯ ಪ್ರಮುಖ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ಎರಡು ನದಿಗಳ ಸಂಗಮವಾಗಿದೆ. ದೇಶದಲ್ಲಿ ನದಿಗಳು ಸೇರುವ ಪವಿತ್ರ ಸ್ಥಳಗಳಲ್ಲಿ ಪುಷ್ಕರ ನಡೆಯುವುದು ಸಂಪ್ರದಾಯವಾಗಿದ್ದು, ಇಂದಿನಿಂದ 12 ದಿನಗಳ ಕಾಲ ಈ ಪುಷ್ಕರ ಸಂಭ್ರಮ ನಡೆಯುತ್ತದೆ. ಗುರುವು ಇಂದಿನಿಂದ ತನ್ನ ಪಥ ಬದಲಾಯಿಸುತ್ತಿದ್ದು, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಪುಣ್ಯ ದಿನಗಳಂದು ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ತಾಣವಾಗಿರುವ ಕೂಡ್ಲಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಸ್ನಾನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

    ಇಂದಿನಿಂದ ಆರಂಭವಾಗಬೇಕಿದ್ದ ಪುಷ್ಕರ ಸ್ನಾನಕ್ಕೆ ನಿರ್ಬಂಧ ಹೇರಲಾಗಿದ್ದು, ಕೂಡ್ಲಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮ ಪಂಚಾಯಿತಿ ಈ ಬಾರಿಯ ಪುಷ್ಕರವನ್ನು ನಿಷೇಧಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪುಷ್ಕರ ಸ್ನಾನ ಮಾಡಿದರು.

    ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಷ್ಕರದ ದಿನಗಳಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದರು. ಇಂದಿನ ಯೋಗದ ದಿನ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ತಾಲೂಕು ಆಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುಷ್ಕರ ನಡೆಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ಬಿಸಿಲನ್ನು ತಾಳಲಾರದೆ ನೀರಿಗೆ ತಲೆಯೊಡ್ಡಿದ ಕಾಳಿಂಗ ಸರ್ಪ: ವಿಡಿಯೋ

    ಬಿಸಿಲನ್ನು ತಾಳಲಾರದೆ ನೀರಿಗೆ ತಲೆಯೊಡ್ಡಿದ ಕಾಳಿಂಗ ಸರ್ಪ: ವಿಡಿಯೋ

    ಬೆಂಗಳೂರು: ಬಿಸಿಲನ್ನು ತಾಳಲಾರದೆ ಕಾಳಿಂಗ ಸರ್ಪವೊಂದು ಶಾಂತ ರೀತಿಯಿಂದ ನೀರಿಗೆ ತಲೆಯೊಡ್ಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗಿದೆ.

    ಈಗ ಬಿಸಿಲಿನ ತಾಪಮಾನ ಬಹಳ ಜಾಸ್ತಿ ಇದೆ. ಮಾನವರಿಗೆ ಬಿಸಿಲನ್ನು ತಡೆಯಲು ಆಗುತ್ತಿಲ್ಲ. ಹೀಗಿರುವಾಗ ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯನ್ನು ತಡೆಯಲಾರದೇ ಮನೆಯೊಂದರ ಬಳಿ ಬಂದಿದೆ. ಈ ವೇಳೆ ಅಲ್ಲಿ ಓರ್ವ ಅದರ ತಲೆ ಮೇಲೆ ನೀರು ಹಾಕಿದ್ದು, ಹಾವು ಕೂಡ ಸುಮ್ಮನೇ ಇರುವುದು ಅಚ್ಚರಿ ಮೂಡಿಸಿದೆ.

    ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುತ್ತಿರುವ ವಿಡಿಯೋವನ್ನು ಮೊದಲಿಗೆ ಟ್ವಿಟ್ಟರ್ ನಲ್ಲಿ ಉಮಾ ಜೆ ಎನ್ನುವವರು ಹಂಚಿಕೊಂಡಿದ್ದಾರೆ. ಆದರೆ ಈವರೆಗೆ ಅದು ಎಲ್ಲಿಯ ವಿಡಿಯೋ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ವಿಡಿಯೋದಲ್ಲಿ ಜನರು ಮಲೆಯಾಳಂ ಮಾತನಾಡುತ್ತಿದ್ದು, ಈ ವಿಡಿಯೋ ಕೇರಳದ ಇರಬಹುದು ಎಂದು ಅಂದಾಜಿಸಲಾಗಿದೆ. ಈಗ ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಶೇರ್ ಆಗುತ್ತಿದೆ.

    ಒಂದು ನಿಮಿಷ ನಾಲ್ಕು ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಮೊದಲಿಗೆ ಕಾಳಿಂಗ ಸರ್ಪ ಯಾವುದೋ ಮನೆಯ ಹತ್ತಿರ ಬಂದಿರುತ್ತದೆ. ಈ ವೇಳೆ ಹಾವಿನ ಬಗ್ಗೆ ತಿಳಿದ ವ್ಯಕ್ತಿ ಬಂದು ಹಾವಿಗೆ ಬಿಸಿಲಿನ ತಾಪ ತಡೆಯಲು ಆಗುತ್ತಿಲ್ಲ ಎಂದು ಪಕ್ಕದಲ್ಲಿ ಇದ್ದ ಬಕೆಟ್ ತೆಗೆದುಕೊಂಡು ನೀರನ್ನು ಸುರಿಯುತ್ತಾನೆ. ಮೂರು ಬಾರಿ ನೀರು ಸುರಿದರು ಕಾಳಿಂಗ ಸರ್ಪ ಮಾತ್ರ ಎಲ್ಲೂ ಹೋಗದೆ ಸುಮ್ಮನೆ ಇರುತ್ತದೆ.

    ಬೇಸಿಗೆ ಕಾಲದಲ್ಲಿ ಕಾಡಿನಲ್ಲೂ ನೀರು ಹೆಚ್ಚಿಗೆ ಇರುವುದಿಲ್ಲ. ಹೀಗಾಗಿ ಹಾವುಗಳು, ಪ್ರಾಣಿ ಪಕ್ಷಿಗಳು ಈ ಸಮಯದಲ್ಲಿ ನೀರನ್ನು ಮತ್ತು ಆಹಾರವನ್ನು ಅರಸಿ ನಾಡಿಗೆ ಬರುತ್ತವೆ. ಈ ವೇಳೆ ಕೆಲವರ ಅವುಗಳನ್ನು ಹೊಡೆದು ಕೊಲ್ಲುತ್ತಾರೆ. ಆದರೆ ಈ ವಿಡಿಯೋದಲ್ಲಿ ಹಾವಿನ ಕಷ್ಟವನ್ನು ತಿಳಿದ ವ್ಯಕ್ತಿ ಅದಕ್ಕೆ ನೀರಿನಿಂದ ಸ್ನಾನ ಮಾಡಿಸಿ ಮಾನವೀಯತೆ ಮೆರೆದಿದ್ದಾನೆ.

    ಕಾಳಿಂಗ ಸರ್ಪ ಹಾವುಗಳ ಜಾತಿಯಲ್ಲೇ ಅತ್ಯಂತ ವಿಷಕಾರಿ ಹಾವು ಹಾಗೂ ಇದರಲ್ಲಿ ಒಂದು ಆನೆ ಅಥವಾ 20 ಮನುಷ್ಯರನ್ನು ಕೊಲ್ಲುವಷ್ಟು ವಿಷವಿರುತ್ತದೆ ಎಂದು ಉರಗತಜ್ಞರು ಹೇಳಿದ್ದಾರೆ. ಇದರ ಜೊತೆಗೆ ಸರಿಯಾದ ಟ್ರೈನಿಂಗ್ ತಗೆದುಕೊಳ್ಳದೆ ಕಾಳಿಂಗ ಸರ್ಪದ ಜೊತೆ ಸರಸಕ್ಕೆ ಇಳಿಯಬಾರದು. ಹಾಗೇ ಮಾಡಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು ಎಂದು ಉರಗ ತಜ್ಞರು ಸಲಹೆ ನೀಡಿದ್ದಾರೆ.

  • ಸಂಬಂಧಿಕರ ಮನೆಗೆ ಬಂದು ಕೃಷ್ಣಾನದಿ ಪಾಲಾದ ಯುವಕರು

    ಸಂಬಂಧಿಕರ ಮನೆಗೆ ಬಂದು ಕೃಷ್ಣಾನದಿ ಪಾಲಾದ ಯುವಕರು

    ರಾಯಚೂರು: ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ರಾಜ್ಯದ ರಾಯಚೂರು ಗಡಿಭಾಗದಲ್ಲಿನ ತೆಲಂಗಾಣದ ವಾಸವಿನಗರದಲ್ಲಿ ನಡೆದಿದೆ.

    ಹೈದರಾಬಾದಿನಲ್ಲಿ ಓದುತ್ತಿದ್ದ 25 ವರ್ಷದ ವಿದ್ಯಾರ್ಥಿ ಶ್ರೀಹರಿರಾಜು ಹಾಗೂ ಹೋಟೆಲ್ ಉದ್ಯಮದಲ್ಲಿದ್ದ 28 ವರ್ಷದ ರಾಮಕೃಷ್ಣ ರಾಜು ಮೃತ ದುರ್ದೈವಿಗಳು. ವಾಸವಿನಗರದ ಕೃಷ್ಣಾ ನದಿಯ ಸ್ನಾನ ಘಟ್ಟದ ಬಳಿ ಈ ಘಟನೆ ನಡೆದಿದೆ.

    ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯುವಕರು ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನ ಮಾತನಾಡಿಸಲು ವಾಸವಿನಗರಕ್ಕೆ ಬಂದಿದ್ದರು. ಈ ವೇಳೆ ಸ್ನಾನಕ್ಕೆ ಕೃಷ್ಣಾನದಿಯಲ್ಲಿ ನೀರಿಗೆ ಇಳಿದ ಐವರಲ್ಲಿ ಇಬ್ಬರು ನೀರುಪಾಲಾಗಿದ್ದಾರೆ.

    ತೆಲಂಗಾಣದ ಕೃಷ್ಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃಷ್ಣಾ ಠಾಣೆ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ.

  • ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

    ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

    ಮಂಗಳೂರು: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು ಆಗಿರುವ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್‍ನಲ್ಲಿ ನಡೆದಿದೆ.

    ಮೃತ ಯುವಕರನ್ನು 28 ವರ್ಷದ ಕಾವೂರಿನ ಗುರುಪ್ರಸಾದ್ ಮತ್ತು 32 ವರ್ಷದ ಬಜ್ಪೆ ಗ್ರಾಮದ ನಿವಾಸಿ ಸುಜಿತ್ ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನೂ ಇಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ‘ಕೆಸರ್ಡೊಂಜಿ ದಿನ’ ಎಂಬ ಕಾರ್ಯಕ್ರಮದ ಅಂಗವಾಗಿ ಕೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯುವಕರು ಮೈಯಲ್ಲಾ ಕೆಸರಾಗಿದ್ದ ಕಾರಣ ಸ್ನಾನ ಮಾಡಲು ಸಮುದ್ರಕ್ಕೆ ಇಳಿದಿದ್ದಾರೆ. ಈ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

  • ನೀರು ತಂದು ಕೊಟ್ಟಿಲ್ಲವೆಂದು ಲವ್ವರ್, ರೂಮೆಟ್‍ಗೆ ಚಾಕು ಇರಿದ- ಪ್ರಿಯತಮೆ ಸಾವು

    ನೀರು ತಂದು ಕೊಟ್ಟಿಲ್ಲವೆಂದು ಲವ್ವರ್, ರೂಮೆಟ್‍ಗೆ ಚಾಕು ಇರಿದ- ಪ್ರಿಯತಮೆ ಸಾವು

    ರಾಂಚಿ: ಸ್ನಾನ ಮಾಡಲು ನೀರು ತಂದು ಕೊಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕನೊಬ್ಬ ತನ್ನ 21 ವರ್ಷದ ಪ್ರಿಯತಮೆ ಹಾಗೂ ಆಕೆಯ ರೂಮೆಟ್ ಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ನಡೆದಿದೆ.

    ಈ ಘಟನೆ ಜಾರ್ಖಂಡ್ ಜಿಲ್ಲೆಯ ಪಶ್ಚಿಮ ಸಿಂಗ್ಭುಮ್ ನಲ್ಲಿ ಭಾನುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಿಯತಮೆ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಆಕೆಯ ರೂಮೆಟ್ ಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ಇಂದ್ರಜಿತ್ ಮಹತಾ ತಿಳಿಸಿದ್ದಾರೆ.

    ಯುವತಿಯರಿಬ್ಬರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮನೆಗೆ ಆರೋಪಿ ಆಗಾಗ ಬರುತ್ತಿದ್ದನು. ಶನಿವಾರ ಸಂಜೆ ಯುವತಿಯರಿಬ್ಬರು ಶಾಪಿಂಗ್ ಮಾಡಲು ಹೊರಗಡೆ ತೆರಳಿದ್ದು, ಮರಳಿ ಬಂದಿದ್ದಾರೆ. ಈ ವೇಳೆ ಆರೋಪಿ ಮನೆಗೆ ಬಂದಿದ್ದಾನೆ. ಅಲ್ಲದೇ ತನಗೆ ಈಗಲೇ ಸ್ನಾನ ಮಾಡಬೇಕು ಬಾವಿಯಿಂದ ನೀರು ತಂದುಕೊಡು ಎಂದು ಹೇಳಿದ್ದಾನೆ. ಆದರೆ ಈತನ ಮಾತನ್ನು ಪ್ರಿಯತಮೆ ನಿರಾಕರಿಸಿದ್ದಾಳೆ. ಅಲ್ಲದೇ ನೀನೇ ಹೋಗಿ ನೀರು ತೆಗೆದುಕೊಂಡ ಬಾ ಎಂದು ಹೇಳಿದ್ದಾಳೆ. ಇದೇ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟುಗೊಂಡ ಆರೋಪಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಪ್ರಿಯತಮೆಗೆ ಹಾಗೂ ಆಕೆಯ ರೂಮೆಟ್ ಗೆ ಇರಿದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

    ಚಾಕು ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ರೂಮೆಟ್ ನನ್ನು ಕೂಡಲೇ ಚದ್ರಧರ್‍ಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇತ್ತ ಮೃತಪಟ್ಟ ಯುವತಿಯನ್ನು ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

  • ಶೇವಿಂಗ್, ಸ್ನಾನ ಮಾಡ್ತಿಲ್ಲವೆಂದು ಮದ್ವೆಯಾದ ವರ್ಷದಲ್ಲೇ ಪತಿಗೆ ವಿಚ್ಛೇದನ!

    ಶೇವಿಂಗ್, ಸ್ನಾನ ಮಾಡ್ತಿಲ್ಲವೆಂದು ಮದ್ವೆಯಾದ ವರ್ಷದಲ್ಲೇ ಪತಿಗೆ ವಿಚ್ಛೇದನ!

    ಭೋಪಾಲ್: ಪತಿ ಸರಿಯಾಗಿ ಶೇವಿಂಗ್ ಮತ್ತು ಸ್ನಾನ ಮಾಡುತ್ತಿಲ್ಲ ಎಂದು 23 ವರ್ಷದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಈ ದಂಪತಿ ಕಳೆದ ವರ್ಷ ಮದುವೆಯಾಗಿದ್ದರು. ಭೋಪಾಲ್ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್.ಚಂದ್ ಈ ದಂಪತಿಗೆ ಆರು ತಿಂಗಳ ಕಾಲ ಪ್ರತ್ಯೇಕವಾಗಿ ಇರಬೇಕೆಂದು ಆದೇಶಿಸಿದ್ದಾರೆ. ನಂತರ ವಿಚ್ಛೇದನ ತೀರ್ಪು ನೀಡಲಾಗುವುದು ಎಂದು ಕೌನ್ಸಿಲರ್ ಶೈಲ್ ಅವಸ್ಥಿ ತಿಳಿಸಿದ್ದಾರೆ.

    ನನ್ನ ಪತಿ ತನ್ನ ಗಡ್ಡವನ್ನು ಕ್ಷೌರ ಮಾಡುವುದಿಲ್ಲ ಮತ್ತು 7-8 ದಿನಗಳವರೆಗೂ ಸ್ನಾನ ಮಾಡುವುದಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಹೀಗಾಗಿ ಮಹಿಳೆ ಮತ್ತು ಪತಿ ವಿಚ್ಛೇದನಕ್ಕಾಗಿ ಪರಸ್ಪರ ಒಪ್ಪಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.

    ಮಹಿಳೆ ಭೋಪಾಲ್ ಸಮೀಪದ ಬಾರಿಗಢ ನಿವಾಸಿಯಾಗಿದ್ದು, ಪತಿಯನ್ನು ಸ್ನಾನ ಮಾಡುವಂತೆ ಹೇಳಿದ್ರೆ ವಾಸನೆ ಹೋಗಿಸಲು ಆತ ಪರ್ಫ್ಯೂಮ್ ಹಾಕಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ. ಪತಿ ಸಿಂಧಿ ಸಮುದಾಯದವರಾಗಿದ್ದು, ಪುಟ್ಟ ಅಂಗಡಿಯಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ರೂ ಕುಟುಂಬದವರು ಒಪ್ಪಿಯೇ ಮದುವೆ ಮಾಡಿಸಿದ್ದಾರೆ.

    ಈ ದಂಪತಿಗೆ ಇನ್ನೂ ಮಕ್ಕಳಾಗಿಲ್ಲ. ಮಹಿಳಾ ಕುಟುಂಬದ ಸದಸ್ಯರು ಪತಿಗೆ ವಿಚ್ಛೇದನ ಕೊಡಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ ಮಹಿಳೆ ಒಪ್ಪಲಿಲ್ಲ ಎಂದು ಅವಸ್ಥಿ ಹೇಳಿದ್ದಾರೆ.

  • ಅಂತ್ಯಸಂಸ್ಕಾರಕ್ಕಾಗಿ ಸ್ನಾನ ಮಾಡಿಸುತ್ತಿರುವಾಗ್ಲೇ ಎದ್ದು ಕುಳಿತ 95ರ ವೃದ್ಧ

    ಅಂತ್ಯಸಂಸ್ಕಾರಕ್ಕಾಗಿ ಸ್ನಾನ ಮಾಡಿಸುತ್ತಿರುವಾಗ್ಲೇ ಎದ್ದು ಕುಳಿತ 95ರ ವೃದ್ಧ

    ಜೈಪುರ್: ಮೃತಪಟ್ಟಿದ್ದಾರೆಂದುಕೊಂಡಿದ್ದ 95 ವರ್ಷದ ವೃದ್ಧರೊಬ್ಬರು ಅಂತ್ಯಸಂಸ್ಕಾರದ ವೇಳೆ ಎದ್ದು ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ರಾಜಸ್ಥಾನದ ಝನ್‍ಝನು ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ 95 ವರ್ಷದ ಬುಧ್‍ರಾಮ್ ಗುಜ್ಜರ್ ಮನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರು ಗುಜ್ಜರ್ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ವಾಪಾಸ್ಸು ತಂದು, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

    ಅಂತ್ಯಸಂಸ್ಕಾರದ ಸಿದ್ಧತೆ ವೇಳೆ ಎಲ್ಲಾ ಕುಟುಂಬಸ್ಥರು ತಮ್ಮ ತಲೆ ಬೋಳಿಸಿಕೊಂಡು ವಿಧಿ-ವಿಧಾನದ ಪ್ರಕಾರ ಕಾರ್ಯವನ್ನು ನಡೆಸುತ್ತಿದ್ದರು. ಈ ವೇಳೆ ಮೃತದೇಹಕ್ಕೆ ಸ್ನಾನ ಮಾಡಿಸುವ ಶಾಸ್ತ್ರವನ್ನು ನಡೆಸಲು ಸಿದ್ಧರಾಗಿದ್ದರು. ಈ ವೇಳೆ ಗುಜ್ಜರ್ ದೇಹಕ್ಕೆ ನೀರು ಹಾಕುತ್ತಿರುವಾಗ ಏಕಾಏಕಿ ಅವರ ದೇಹ ನಡುಗಲು ಶುರುಮಾಡಿದೆ. ಬಳಿಕ ಜೋರಾಗಿ ಉಸಿರಾಡುತ್ತಾ ಗುಜ್ಜರ್ ಎದ್ದು ಕುಳಿತ್ತಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಹಾಗೂ ಕುಟುಂಬದವರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.

    ನಂತರ ಕುಟುಂಬಸ್ಥರು ಗುಜ್ಜರ್ ಅವರನ್ನು ಮಾತನಾಡಿಸಿದಾಗ, ನನಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ನಿದ್ದೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಗುಜ್ಜರ್ ಪವಾಡ ಸದೃಶ ಮತ್ತೊಮ್ಮೆ ಬದುಕಿದ್ದಾರೆಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆಯಿಡೀ ಮೃತ ಗುಜ್ಜರ್ ದಿಢೀರನೇ ಹೇಗೆ ಎದ್ದು ಕುಳಿತರು ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews