Tag: bat

  • ಕೊರೊನಾ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ

    ಕೊರೊನಾ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ

    – ಬಾವಲಿ ಮೂಲಕ ಮನುಷ್ಯರಿಗೆ ಹರಡುವ ವೈರಾಣು

    ಬೀಜಿಂಗ್: ಹೆಮ್ಮಾರಿ ಕೊರೊನಾ ಬಳಿಕ ಚೀನಾದಲ್ಲಿ ಮತ್ತೊಂದು ಮಹಾಮಾರಿ ವೈರಸ್ ಪತ್ತೆಯಾಗಿದೆ.

    ಬಾವಲಿ ಮೂಲಕ ಮನುಷ್ಯರಿಗೆ ಹರಡುವ ಎಚ್‌ಕೆಯು5-ಸಿಒವಿ-2 ಎಂಬ ವೈರಾಣು ಇದಾಗಿದೆ. ಈ ವೈರಸ್ ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ ಕೊರೊನಾ ವೈರಸ್ ಆಗಿದ್ದು, ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್‌ಗೆ ಕಾರಣವಾಗುವ ವೈರಸ್ ಒಳಗೊಂಡಿದೆ.

    ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿದೆ. ಮಾನವನ ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರಬಲ್ಲದ್ದಾಗಿದೆ.

  • ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ – ವಿದ್ಯಾರ್ಥಿ ಮೇಲೆ ಬ್ಯಾಟ್‍ನಿಂದ ಹಲ್ಲೆ

    ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ – ವಿದ್ಯಾರ್ಥಿ ಮೇಲೆ ಬ್ಯಾಟ್‍ನಿಂದ ಹಲ್ಲೆ

    ರಾಯ್‍ಪುರ: ಮದ್ಯ ಸೇವಿಸಿ ಶಾಲೆಗೆ ಬಂದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಛತ್ತೀಸ್‍ಗಢದ ಜಶ್‍ಪುರದಲ್ಲಿ ನಡೆದಿದೆ.

    ಸಾಮಾನ್ಯವಾಗಿ ತಂದೆ, ತಾಯಿ ಬಳಿಕ ವಿದ್ಯೆ ಕಲಿಸುವ ಗುರುವಿಗೆ ಪೂಜ್ಯ ಸ್ಥಾನವನ್ನು ನೀಡಲಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿಬುದ್ದಿ ಹೇಳಬೇಕಾದ ಗುರುವೇ ಶಾಲೆಗೆ ಮದ್ಯ ಸೇವಿಸಿ ಬರುವುದು ವಿಪರ್ಯಾಸ ಎಂದೇ ಹೇಳಬಹುದು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲು

    ಮಾರ್ಚ್ 10 ರಂದು ಜಶ್‍ಪುರದ ಶಾಲೆವೊಂದರಲ್ಲಿ ಶಿಕ್ಷಕ ದಿನೇಶ್ ಕುಮಾರ್ ಲಕ್ಷ್ಮೆ ಮದ್ಯ ಸೇವಿಸಿ ಶಾಲೆಗೆ ಬಂದಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ದಿನೇಶ್ ಶಾಲಾ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಕ್ರಿಕೆಟ್ ಬ್ಯಾಟ್‍ನಿಂದ ಸುಮ್ಮನೆ ನಿಂತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಇದೀಗ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಶಿಕ್ಷಕ ದಿನೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿಗಳು ಶನಿವಾರ ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

  • ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಸೈನಿಕನನ್ನ ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಇಂದು ತನ್ನ ಪಾಕಿಸ್ತಾನಿ ಸಹವರ್ತಿಯನ್ನು ಕೇಳಿದೆ.

    ಮೇಜರ್ ಜನರಲ್ ಎಎಸ್ ಪೆಂಧಾರ್ಕರ್ ಘಟನೆ ಕುರಿತು ಮಾಹಿತಿ ನೀಡಿದ್ದು, ಕೆರಾನ್ ಸೆಕ್ಟರ್‌ನಲ್ಲಿ ಬಿಎಟಿ(ಪಾಕ್ ಸೇನೆಯ ಗಡಿ ಕಾರ್ಯಾಚರಣೆ ತಂಡ)ಯ ಸೈನಿಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದನು. ಇದನ್ನು ಎಲ್‍ಒಸಿಯಲ್ಲಿನ ಪಡೆಗಳು ಕಂಡುಹಿಡಿದಿದ್ದು, ಆತನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.

    ಮೃತ ಸೈನಿಕನ ಬಳಿಯಿದ್ದ ಗುರುತಿನ ಚೀಟಿಯಿಂದ ಈತ ಒಬ್ಬ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ. ಈತನ ಹೆಸರು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಪಾಕ್ ಸೈನಿಕರು ಈ ರೀತಿ ಹೊಂಚು ಹಾಕಿ ಒಳನುಸುಳಲು ಪ್ರಯತ್ನಿಸುತ್ತಾರೆ ಎಂದು ನಾವು ಮೊದಲೇ ಗುರುತಿಸಿದ್ದೆವು. ಅದಕ್ಕೆ ಈ ಬಗ್ಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು. ಈ ಪರಿಣಾಮ ಪಾಕ್ ಸೈನಿಕ ಭಾರತದ ಒಳನುಸುತ್ತಿದ್ದಂತೆ ಆತನನ್ನು ಹತ್ಯೆ ಮಾಡಲಾಯಿತು. ಈ ವೇಳೆ ಒಂದು ಎಕೆ ರೈಫಲ್, ಮದ್ದುಗುಂಡುಗಳು ಮತ್ತು ಏಳು ಗ್ರೆನೇಡ್‍ಗಳೊಂದಿಗೆ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

    ಪಾಕ್ ಎಷ್ಟೇ ಪ್ರಯತ್ನ ಪಟ್ಟರು ಗಡಿಭಾಗದಲ್ಲಿ ಕಣ್ಗಾವಲು ಇನ್ನೂ ಪ್ರಗತಿಯಲ್ಲಿದೆ. ನಾವು ಪಾಕಿಸ್ತಾನ ಸೇನೆಗೆ ಹಾಟ್‍ಲೈನ್ ಸಂಪರ್ಕವನ್ನು ಮಾಡಲಾಗಿದ್ದು, ಹತ್ಯೆಗೀಡಾದ ವ್ಯಕ್ತಿಯ ದೇಹವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ ಎಂದರು.

    ಆತನ ಶವವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶದ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಾರ್ಡ್‍ನಲ್ಲಿರುವ ಫೋಟೋದಲ್ಲಿ ಮೃತ ವ್ಯಕ್ತಿ ಪಾಕ್ ಸಶಸ್ತ್ರ ಪಡೆಗಳ ಸಮವಸ್ತ್ರ ಧರಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಎಂದು ಘೋಷಿಸಲಾಗಿತ್ತು. ಆದರೆ ಈ ಪ್ರಯತ್ನದಿಂದ ಆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ ಎಂದರು.

  • ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್

    ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್

    ದುಬೈ: ರಾಜಸ್ಥಾನ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರಿಂದ ಬ್ಯಾಟ್ ಹಾಗೂ ಜೆರ್ಸಿಗೆ ಸಹಿ ಪಡೆದುಕೊಂಡು ಸಂಭ್ರಮಪಟ್ಟಿದ್ದಾರೆ.

    14ನೇ ಆವೃತ್ತಿಯ ಐಪಿಎಲ್‍ನ 47ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ಯುವ ಆರಂಭಿಕ ಆಟಗಾರ 50ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಸಿಎಸ್‍ಕೆ ವಿರುದ್ಧ ರಾಜಸ್ಥಾನ ತಂಡ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್

    ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್ ಕೂಲ್ ಕ್ಯಾಪ್ಟನ್ ಧೋನಿ ಬಳಿ ಹೋಗಿ ತಮ್ಮ ಒಂದು ಜೆರ್ಸಿ ಮತ್ತು ತಾನು ಅರ್ಧಶತಕ ಸಿಡಿಸಿದ ಬ್ಯಾಟ್‍ಗೆ ಸಹಿ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

  • ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಮಾಸೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿಯ ತೀರದಲ್ಲಿ 85 ಬಾವಲಿಗಳ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

    ಮಾಸೂರು ಗ್ರಾಮದ ಕುಮದ್ವತಿ ನದಿ ದಂಡೆಯ ಮೇಲೆ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತೀರುಗುವ ವೇಳೆ 5 ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾರಿನೊಳಗೆ ಪ್ರೇಮಿಗಳು ಆತ್ಮಹತ್ಯೆ

    ಬಂಧಿತ ಆರೋಪಿಗಳಾದ ಬೆಂಗಳೂರು ಮೂಲದ ಮಂಜುನಾಥ್(45), ತುಮಕೂರು ಜಿಲ್ಲೆಯ ಅಗ್ನಿಬನ್ನಿರಾಯನಗರದ ಕೃಷ್ಣಪ್ಪ ಉರ್ಫ್(60), ರಾಮಕೃಷ್ಣಯ್ಯ(52), ಲಕ್ಷ್ಮಯ್ಯ ಹಾಗೂ ಲೋಕೇಶ್ ನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಗೈದ 85 ಬಾವಲಿ ಹಾಗೂ ಬಾವಲಿಗೆ ಬೇಟೆಗೆ ಬಳಸಿರುವ ಆಯುಧಗಳು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ವೃದ್ಧ ಅತ್ತೆಯ ಮೇಲೆ ಕ್ರಿಕೆಟ್ ಬ್ಯಾಟ್ ತುಂಡಾಗುವಂತೆ ಹಲ್ಲೆ!

    ವೃದ್ಧ ಅತ್ತೆಯ ಮೇಲೆ ಕ್ರಿಕೆಟ್ ಬ್ಯಾಟ್ ತುಂಡಾಗುವಂತೆ ಹಲ್ಲೆ!

    ಮುಂಬೈ: ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ವಾಸವಿದ್ದ 73 ವರ್ಷದ ವೃದ್ಧ ಅತ್ತೆಯನ್ನು ಮಗನ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆಗೈದ ಘಟನೆ ನಡೆದಿದೆ.

    ಮಂಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀಕೃಷ್ಣ ನಗರದಲ್ಲಿ ಗುರುವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಿಲೀಪ್ ಬುಕ್ನೆ(52) ಎಂದು ಗುರುತಿಸಲಾಗಿದೆ.

    ಈತ ಅತ್ತೆಗೆ ಕ್ರಿಕೆಟ್ ಬ್ಯಾಟ್ ಎರಡು ತುಂಡಾಗುವವರೆಗೂ ಥಳಿಸಿದ್ದಾನೆ. ಈ ವೇಳೆ ಅಡ್ಡ ಬಂದ ಪತ್ನಿಯನ್ನೂ ಥಳಿಸಿದ್ದಾನೆ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪತ್ನಿ ಮೇಲೆ ಅನುಮಾನಗೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಕ್ನೆ ಹಾಗೂ ಪತ್ನಿ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಹೀಗಾಗಿ ಮನೆಯಲ್ಲಿದ್ದ ವೃದ್ಧ ಅತ್ತೆಯ ಮೇಲೆ ಕೋಪಗೊಂಡು ಮನಬಂದಂತೆ ಬ್ಯಾಟ್‍ನಿಂದ ಥಳಿಸಿದ್ದಾನೆ. ವೃದ್ಧೆ ಹಾಗೂ ಬುಕ್ನೆ ಜುಗಳವಾಗುವ ವೇಳೆ ಪತ್ನಿ ವರ್ಷಾ ಮಧ್ಯ ಪ್ರವೇಶಿಸಿದ್ದು, ಈ ವೇಳೆ ಬುಕ್ನೆ ಪತ್ನಿಯನ್ನೂ ಥಳಿಸಿದ್ದಾನೆ.

    ತಾಯಿಯನ್ನು ಬಿಡಿಸಲು ಹೋದ ವರ್ಷಾಗೂ ಗಂಭೀರ ಗಾಯಗಳಾಗಿದ್ದು, ಈ ವೇಳೆ ವೃದ್ಧೆ ಪ್ರಜ್ಞಾಹೀನಳಾಗಿ ಕೆಳಗೆ ಬಿದ್ದಿದ್ದಾಳೆ. ಕ್ರಿಕೆಟ್ ಬ್ಯಾಟ್ ಮುರಿದ ಬಳಿಕ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಲು ಬೇರೆ ಏನಾದರೂ ಸಿಗುತ್ತದೆಯೇ ಎಂದು ಹುಡುಕಾಡಲು ಹೊರಗೆ ಬಂದಿದ್ದು, ಈ ವರ್ಷಾ ಒಳಗಿನಿಂದ ಬಾಗಿಲು ಹಾಕಿಕೊಂಡು ಜೋರಾಗಿ ಕೂಗಿದ್ದಾಳೆ.

    ಬಳಿಕ ಸ್ಥಳೀಯರು ಆಗಮಿಸಿದ್ದು, ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಷ್ಟೋತ್ತಿಗಾಗಲೇ ಬುಕ್ನೆ ಸ್ಥಳದಿಂದ ಪರಾರಿಯಗಿದ್ದು, ಬಳಿಕ ಮಂಕಾಪುರ ಪೊಲೀಸರು ಶುಕ್ರವಾರ ಆತನನ್ನು ಬಂಧಿಸಿದ್ದಾರೆ. ಬುಕ್ನೆ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ.

  • ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ನವದೆಹಲಿ: ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೀಡಿದ ಸವಾಲನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂರ್ಣ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ನಾನೊಬ್ಬ ಕ್ರಿಕೆಟ್ ಲೆಜೆಂಡ್ ಎಂಬುದನ್ನು ಮೊತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲಿ ಇರುವ ಯುವರಾಜ್ ಸಿಂಗ್ ಅವರು ಗುರುವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸಚಿನ್ ತೆಂಡೂಲ್ಕರ್,ರೋಹಿತ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಅವರಿಗೆ ಕೀಪ್ ಈಟ್ ಆಪ್ ಎಂಬ ಜಾಲೆಂಜ್ ಕೊಟ್ಟಿದ್ದರು. ಈ ಚಾಲೆಂಜ್ ಅನ್ನು ಸ್ವೀಕರಿಸಿರುವ ಸಚಿನ್ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸವಾಲನ್ನು ಪೂರ್ಣಗೊಳಿಸಿದ್ದಾರೆ.

    https://twitter.com/YUVSTRONG12/status/1260931470048129024

    ಯುವರಾಜ್ ಸಿಂಗ್ ಕೊಟ್ಟ ಕೀಪ್ ಈಟ್ ಆಪ್ ಚಾಲೆಂಜ್‍ನಲ್ಲಿ ಕ್ರಿಕೆಟ್ ಬ್ಯಾಟಿನ ಒಂದು ಕಡೆ ಅಂಚಿನಲ್ಲಿ ಬಾಲನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಈ ಸವಾಲನ್ನು ನೀಡಿದ್ದ ಯುವಿ ಈ ಸವಾಲು ಸಚಿನ್ ಮತ್ತು ರೋಹಿತ್ ಗೆ ಸುಲಭವಾಗುತ್ತದೆ. ಆದರೆ ಹರ್ಭಜನ್ ಸಿಂಗ್ ಅವರಿಗೆ ಕಷ್ಟವಾಗುತ್ತದೆ. ಟ್ರೈ ಮಾಡಿ ಎಂದು ಹೇಳಿದ್ದರು. ಈ ಸವಾಲನ್ನು ಸ್ವೀಕರಿಸಿ ಕಣ್ಣು ಮುಚ್ಚಿ ಬಾಲನ್ನು ಬ್ಯಾಲೆನ್ಸ್ ಮಾಡಿರುವ ಸಚಿನ್ ಮತ್ತೆ ಯವರಾಜ್ ಅವರಿಗೆ ಇದನ್ನು ಮಾಡುವಂತೆ ಸವಾಲ್ ಹಾಕಿದ್ದಾರೆ.

    https://www.instagram.com/p/CAPuZhxlGbk/?utm_source=ig_embed

    ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಾಲೆಂಜ್ ಮಾಡಿರುವ ಸಚಿನ್, ಯುವಿ ನೀವು ತುಂಬ ಸುಲಭವಾದ ಆಯ್ಕೆಯನ್ನು ನನಗೆ ನೀಡಿದ್ದೀರಿ. ಆದರೆ ನಾನು ನಿಮಗೆ ಕಠಿಣವಾದ ಆಯ್ಕೆಯನ್ನು ನೀಡುತ್ತಿದ್ದೇನೆ. ಹಾಗೂ ನಿಮ್ಮನ್ನು ಈ ಚಾಲೆಂಜ್‍ಗೆ ನಾಮಿನೇಟ್ ಮಾಡಿದ್ದೇನೆ. ಬನ್ನಿ ನನಗಾಗಿ ಈ ಸವಾಲನ್ನು ಮಾಡಿ ಎಂದು ಸಚಿನ್ ಅವರು ಹೇಳಿದ್ದಾರೆ. ಜೊತೆಗೆ ನಾನು ನಿನಗೆ ವಾಪಸ್ ಚಾಲೆಂಜ್ ಮಾಡುತ್ತಿದ್ದೇನೆ ಯುವರಾಜ್ ಸಿಂಗ್, ಆದರೆ ನಾನು ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ನಾನು ಎಲ್ಲರೂ ಈ ಚಾಲೆಂಜ್ ಮಾಡಲು ಕೇಳುತ್ತೇನೆ ಸೇಫ್ ಆಗಿ ಮನೆಯಲ್ಲೇ ಇರಿ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಸಚಿನ್ ಅವರು ಇನ್ನೊಂದು ವಿಡಿಯೋ ಆಪ್ಲೋಡ್ ಮಾಡಿದ್ದು, ಆದರಲ್ಲಿ ಯುವರಾಜ್ ಸಿಂಗ್ ಅವರಿಗೆ ಚಾಲೆಂಜ್ ಮಾಡಲು ಒಂದು ಸಲಹೆಯನ್ನು ನೀಡಿದ್ದಾರೆ. ನಾನು ಕಣ್ಣಿಗೆ ಕಟ್ಟಿಕೊಂಡಿರುವ ಬಟ್ಟೆ ಬಹಳ ತೆಳುವಾಗಿದೆ. ಈ ರೀತಿ ನೀವು ಚಾಲೆಂಜ್ ಅನ್ನು ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವರಾಜ್ ಸಿಂಗ್ ಅವರು, ನಾನು ಈ ಸವಾಲನ್ನು ಮಾಡಲು ಒಂದು ವಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಸುಮಾರು 60 ವರ್ಷದ ನಂತರ ಕೊರೊನಾದಿಂದ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ನಡುವೆ ಮನೆಯಲ್ಲಿ ಕುಳಿತಿರುವ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಲೈವ್‍ನಲ್ಲಿ ಬಂದು ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ. ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • 15 ಲಕ್ಷಕ್ಕೆ ಬಾಂಗ್ಲಾ ಕ್ರಿಕೆಟರ್ ಬ್ಯಾಟ್ ಖರೀದಿಸಿದ ಅಫ್ರಿದಿ

    15 ಲಕ್ಷಕ್ಕೆ ಬಾಂಗ್ಲಾ ಕ್ರಿಕೆಟರ್ ಬ್ಯಾಟ್ ಖರೀದಿಸಿದ ಅಫ್ರಿದಿ

    ಇಸ್ಲಾಮಾಬಾದ್: ಬಾಂಗ್ಲಾದೇಶ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹರಾಜಿಗಿಟ್ಟಿದ್ದ ಬ್ಯಾಟನ್ನು ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ 20,000 ಡಾಲರ್ (15,17,540 ರೂ.)ಗೆ ಖರೀದಿಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ಬಾಂಗ್ಲಾದೇಶ ಜನರನ್ನು ಕೂಡ ಕಂಗೆಡಿಸಿದೆ. ದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ಪರಿಹಾರಕ್ಕಾಗಿ ಮುಷ್ಫಿಕರ್ ತಮ್ಮ ಫೇವರಿಟ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಇದನ್ನೂ ಓದಿ: ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಮುಷ್ಫಿಕರ್ ರಹೀಮ್ 2013ರಲ್ಲಿ ಶ್ರೀಲಂಕಾ ವಿರುದ್ಧ ದ್ವಿಶತಕ ಸಿಡಿಸಿದ್ದಾಗ ಬಳಸಿದ್ದ ಬ್ಯಾಟನ್ನು ಕಳೆದ ತಿಂಗಳು ಹರಾಜಿಗಿಟ್ಟಿದ್ದರು. ಇದರಿಂದ ಬಂದ ಹಣವನ್ನು ಬಾಂಗ್ಲಾದೇಶದಲ್ಲಿ ಕೊರೊನಾ ವಿರುದ್ಧದ ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ಸದ್ಯ ಬ್ಯಾಟನ್ನು ಅಫ್ರಿದಿ ಖರೀದಿಸಿದ್ದಾರೆ. ಈ ವಿಚಾರವನ್ನು ಮುಷ್ಫಿಕರ್ ರಹೀಮ್ ಇಎಸ್‍ಪಿಎನ್ ಕ್ರಿಕ್ ಇನ್ಫೋ ಜೊತೆ ಹಂಚಿಕೊಂಡಿದ್ದಾರೆ.

    “ನಾನು ಹರಾಜಿಗಿಟ್ಟಿದ್ದ ಕ್ರಿಕೆಟ್ ಬಾಟನ್ನು ಪಾಕಿಸ್ತಾನದ ಆಲ್‍ರೌಡರ್ ಶಾಹಿದ್ ಅಫ್ರಿದಿ ತಮ್ಮ ಸಂಸ್ಥೆಯ ಪರವಾಗಿ ಖರೀದಿಸಿದ್ದಾರೆ. ಈ ಮೂಲಕ ಉತ್ತಮ ಕಾರ್ಯಕ್ಕೆ ನೆರವಾದ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ” ಎಂದು ರಹೀಮ್ ಹೇಳಿದ್ದಾರೆ.

    “ಕೆಲ ಮೋಸಗಾರ ಬಿಡ್ಡರ್ ಗಳಿಂದ ಹರಾಜನ್ನು ರದ್ದುಗೊಳಿಸುವುದಕ್ಕೆ ಮುಂದಾಗಿದ್ದೆವು. ಆದರೆ ಅನಿರೀಕ್ಷಿತವಾಗಿ ಶಾಹಿದ್ ಭಾಯ್ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಬ್ಯಾಟ್ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಈ ವೇಳೆ ನೀವು ಮಾಡುತ್ತಿರುವುದು ನಿಜಕ್ಕೂ ದೊಡ್ಡ ಕಾರ್ಯ. ವಾಸ್ತವ ಬದುಕಿನಲ್ಲಿ ಹೀರೋಗಳು ಮಾತ್ರವೇ ಇದನ್ನು ಮಾಡಲು ಸಾಧ್ಯ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮೇ 13ರಂದು 20,000 ಯುಎಸ್ ಡಾಲರ್‌ಗೆ ಬ್ಯಾಟ್ ಖರೀದಿಸುವ ಬಗ್ಗೆ ಪತ್ರ ಕಳುಹಿಸಿದ್ದರು” ಎಂದು ರಹೀಮ್ ತಿಳಿಸಿದ್ದಾರೆ.

  • ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಇಸ್ಲಾಮಾಬಾದ್: ಕೋವಿಡ್-19 ವೈರಸ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಣ ಸಂಗ್ರಹಿಸಲು ಪಾಕಿಸ್ತಾನ ಟೆಸ್ಟ್ ನಾಯಕ ಅಜರ್ ಅಲಿ ಅವರು ಹರಾಜಿಗೆ ಇಟ್ಟಿದ್ದ ಬ್ಯಾಟ್ ಅನ್ನು ಪುಣೆ ಸಂಸ್ಥೆಯೊಂದು 8 ಕೋಟಿ ರೂ.ಗೆ ಖರೀದಿಸಿದೆ.

    ಅಜರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಗಳಿಸಲು ಬಳಸಿದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯನ್ನು ಆನ್‍ಲೈನ್‍ನಲ್ಲಿ ಹರಾಜಿಗೆ ಇಟ್ಟಿದ್ದರು. ಈ ಮೂಲಕ ಹಣವನ್ನು ಸಂಗ್ರಹಿಸಿ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಸಹಾಯಕ್ಕೆ ಮುಂದಾಗಿದ್ದರು.

    ಪಾಕ್ ಆಟಗಾರ ಅಜರ್ ಅಲಿ ಅವರು ಬ್ಯಾಟ್ ಮತ್ತು ಜರ್ಸಿ ಎರಡಕ್ಕೂ ಪಾಕಿಸ್ತಾನ ತಂಡದ ಆಟಗಾರರ ಆಟೋಗ್ರಾಫ್ ಹಾಕಿಸಿದ್ದರು. ಬ್ಯಾಟ್ ಜರ್ಸಿಗಾಗಿ ತಲಾ 10 ಲಕ್ಷ ಪಾಕಿಸ್ತಾನ ರೂ. ಮೂಲ ಬೆಲೆಯನ್ನು ನಿಗಧಿಪಡಿಸಿದ್ದರು.

    ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಬ್ಯಾಟ್‍ಗೆ 7 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಶರ್ಟ್ ಹರಾಜು ಕೂಡ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಕ್ಯಾಲಿಫೋರ್ನಿಯಾ ಮೂಲದ ಪಾಕಿಸ್ತಾನಿ ಕಾಶ್ ವಿಲ್ಲಾನಿ ಹರಾಜು ಮುಗಿಯುವ ಮುನ್ನ ಶರ್ಟ್ ಗಾಗಿ ಅತಿ ಹೆಚ್ಚು 8.30 ಕೋಟಿ ರೂ. ಬಿಡ್‍ನೊಂದಿಗೆ ಖರೀದಿಸಿದೆ.

    ಕೊರೊನಾ ವೈರಸ್ ವಿರುದ್ಧದ ಅಜರ್ ಅಲಿ ಹೋರಾಟಕ್ಕೆ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನದ ಜಮಾಲ್ ಖಾನ್ ಕೂಡ ಸಾಥ್ ನೀಡಿದ್ದಾರೆ. ಅವರು 1,00,000 ರೂ. ದೇಣಿಗೆ ನೀಡಿದ್ದಾರೆ.

    ಈ ಹಿಂದೆ ಟ್ವೀಟ್ ಮಾಡಿದ್ದ ಅಜರ್ ಅಲಿ, ಈ ಬ್ಯಾಟ್ ಮತ್ತು ಜರ್ಸಿ ನನ್ನ ಅತ್ಯಂತ ಪ್ರಿಯ ವಸ್ತುಗಳು. ಆದರೆ ಕಷ್ಟದ ಸಮಯದಲ್ಲಿ ಇವುಗಳನ್ನು ಜನರ ಅನುಕೂಲಕ್ಕಾಗಿ ಬಳಸಲು ಖುಷಿಯಾಗುತ್ತದೆ. ಇವೆರಡನ್ನೂ ಹರಾಜಿಗಿಟ್ಟು ಬಂದ ಹಣವನ್ನು ಕೊರೊನಾ ವೈರಸ್ ಸಂತ್ರಸ್ತರಿಗೆ ನೀಡಿಲು ನಿರ್ಧಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರ ವರಗೂ ಹರಾಜು ಅವಧಿ ಇದೆ ಎಂದು ತಿಳಿಸಿದ್ದರು.

    2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜರ್ ಅಲಿ 59 ರನ್ ಗಳಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ 2016ರಲ್ಲಿ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 302 ರನ್ ಗಳಿಸಿದ್ದರು. ಈ ಮೂಲಕ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

  • ಬಾವಲಿಗಳಲ್ಲೂ ಕೊರೊನಾ ವೈರಸ್- ಐಸಿಎಂಆರ್ ಸಂಶೋಧನೆಯಲ್ಲಿ ಬಹಿರಂಗ

    ಬಾವಲಿಗಳಲ್ಲೂ ಕೊರೊನಾ ವೈರಸ್- ಐಸಿಎಂಆರ್ ಸಂಶೋಧನೆಯಲ್ಲಿ ಬಹಿರಂಗ

    ಬೆಂಗಳೂರು: ನಿಫಾದಿಂದ ಕಂಗೆಡಿಸಿದ್ದ ಬಾವಲಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ವಿಚಾರ ಕರ್ನಾಟಕವನ್ನೂ ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ವಾಕರ್ಸ್ ಗೂ ಈಗ ಬಾವಲಿಯ ಭಯ ಕಾಡುತ್ತಿದ್ದು ಲಾಕ್‍ಡೌನ್ ನಂತ್ರ ವಾಕ್ ಮಾಡೋದಾ ಬೇಡ್ವಾ ಅನ್ನೋ ಚಿಂತೆಯಲ್ಲಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ಇಡೀ ಜಗತ್ತಿನ ಜನರ ನಿದ್ದೆಗೆಡಿಸಿದೆ. ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ರಾಜ್ಯ, ರಾಷ್ಟ್ರಗಳು ನಲುಗಿ ಹೋಗಿದೆ. ಇಂತಹ ಹೊತ್ತಲ್ಲೇ ಬಾವಲಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರೋದು ಮತ್ತಷ್ಟು ಭೀತಿ ಸೃಷ್ಟಿಸಿದೆ. ಕರ್ನಾಟಕವೂ ಸೇರಿ 9 ರಾಜ್ಯಗಳ ಬಾವಲಿಗಳನ್ನ ಐಸಿಎಂಆರ್ ಸಂಶೊಧನೆಗೊಳಪಡಿಸಿತ್ತು. ಈ ವೇಳೆ ಬಂದಿರುವ ವರದಿ ನೋಡಿ ರಾಜ್ಯದಲ್ಲೂ ಭೀತಿ ಸೃಷ್ಟಿಯಾಗಿದೆ. ಕೊರೊನಾ ಸೋಂಕು ಬಾವಲಿಗಳಲ್ಲಿ ಕಂಡು ಬಂದಿರುವ ಸಂಶೋಧಕರ ಮಾಹಿತಿಯನ್ನು ಐಸಿಎಂಆರ್ ಜನರಲ್ ಆಫ್ ಮೆಡಿಕಲ್ ರಿಸರ್ಚ್ ನ ಮೊದಲ ಅಧ್ಯಾಯದಲ್ಲಿ ಪ್ರಕಟಿಸಿದೆ. ಕೊರೊನಾ ಸಂಬಂಧ ನಡೆದಿರುವ ಸಂಶೋಧನೆ ಮತ್ತು ಪರೀಕ್ಷಾ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಕೊರೊನಾ ಸೋಂಕು ಬಾವಲಿಯಲ್ಲಿ ಕಂಡು ಬಂದಿದೆ ಎನ್ನುವುದರ ಬಗ್ಗೆ ಇಲ್ಲಿ ಉಲ್ಲೇಖಿಸಿಲಾಗಿದೆ.

    ಈ ವರದಿ ಕಬ್ಬನ್ ಪಾರ್ಕಿನಲ್ಲಿ ವಾಕ್ ಮಾಡುತ್ತಿದ್ದ ಜನರ ನಿದ್ದೆಗೆಡಿಸಿದೆ. ಲಾಕ್‍ಡೌನ್ ನಂತ್ರ ಹೇಗೆ ಅಲ್ಲಿ ವಾಕ್ ಮಾಡೋದು ಅನ್ನೋ ಭಯ ಕಾಡುತ್ತಿದೆ. ಕಬ್ಬನ್ ಪಾರ್ಕಿನಲ್ಲಿ ಹೇರಳವಾಗಿ ಬಾವಲಿಗಳು ಇದ್ದು ಇದರಿಂದ ಕೊರೊನಾ ವೈರಸ್ ಸೋಂಕು ತಗುಲಿದ್ರೆ ಹೇಗೆ ಅನ್ನೋ ಚಿಂತೆ ಕಾಡಿದೆ. ಅದಕ್ಕಾಗಿ ಬಾವಲಿಗಳಿಂದ ಸೋಂಕು ಹರಡದಂತೆ ಇಡೀ ಕಬ್ಬನ್ ಪಾರ್ಕಿಗೆ ಔಷಧಿ ಸಿಂಪಡಿಸಿ ಎಂದು ಸರ್ಕಾರಕ್ಕೆ ಮನವಿ ಪತ್ರ ನೀಡಲು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‍ನ ಸದಸ್ಯರು ನಿರ್ಧರಿಸಿದ್ದಾರೆ.

    ನಿಫಾ ವೈರಸ್ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಬರಬಹುದು ಎಂಬ ಆತಂಕ ಶುರುವಾಗಿದೆ. ಈಗೇನಾದ್ರೂ ಬಾವಲಿಗಳಿಂದ ಕೊರೊನಾ ಮನುಷ್ಯನಿಗೆ ಹರಡಲು ಆರಂಭವಾದ್ರೆ ಅದರ ಪ್ರಭಾವ, ತೀವ್ರತೆ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕಿದೆ.