Tag: basagouda patil yatnal

  • ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಧಾರವಾಡ: ನಾಡಿನ ಜನತೆ ಈಗ ಯುಗಾದಿ ಹಬ್ಬದ (Ugadi Festival) ಸಂಭ್ರಮದಲ್ಲಿದ್ದಾರೆ. ಮುಂದೆ ಶ್ರೀರಾಮ ನವಮಿ ಕೂಡ ಬರಲಿದೆ. ಈ ಎರಡೂ ಹಬ್ಬಗಳು ಹಲಾಲ್ ಮುಕ್ತವಾಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಹಲಾಲ್ ಎಂಬುದು ಇಸ್ಲಾಂಗೆ ಸಂಬಂಧಿಸಿದ್ದು. ಅದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

    ಹಿಂದೂಗಳು ಶುದ್ಧ ಮತ್ತು ಪವಿತ್ರವಾಗಿರುವ ವಸ್ತುಗಳನ್ನು ಖರೀದಿ ಮಾಡಿ ದೇವರಿಗೆ ಸಮರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಬಳಿ ನಾವು ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡಿ, ಪೂಜೆ ಮಾಡುವುದು ಸರಿಯಲ್ಲ. ಇದು ಶಾಸ್ತ್ರದ ವಿರುದ್ಧವಾದದ್ದು. ನಮ್ಮ ದೇವರನ್ನು ನಂಬದೇ ಇರುವವರ ಜೊತೆ ನಾವು ವ್ಯಾಪಾರ ಮಾಡಬಾರದು ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಉಚ್ಚಾಟನೆಯ ಕುರಿತು ಪ್ರತಿಕ್ರಿಯಿಸಿ, ಉಚ್ಚಾಟನೆ ಪ್ರಕ್ರಿಯೆಯನ್ನು ಬಿಜೆಪಿ ವರಿಷ್ಠರು ಮರು ಪರಿಶೀಲಿಸಬೇಕು. ಇದು ಪಕ್ಷದ ಆಂತರಿಕ ವಿಚಾರ. ಇಡೀ ದೇಶದಲ್ಲಿ ಇರುವ ಬಿಜೆಪಿಯು ಹಿಂದುತ್ವದ ಪಕ್ಷ. ಆದರೆ, ಸದ್ಯ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ದುರದೃಷ್ಟಕರ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ತಾಪಮಾನ ಇಳಿಕೆ – 2 ದಿನದಲ್ಲಿ 7 ಡಿಗ್ರಿ ಇಳಿಕೆ

    ಯತ್ನಾಳ್ ಅವರು ಹಿಂದುತ್ವದ ಗಟ್ಟಿ ಧ್ವನಿ. ಅವರ ಉಚ್ಚಾಟನೆಯಿಂದ ರಾಜ್ಯದಲ್ಲಿ ಎಲ್ಲೋ ಒಂದು ಕಡೆ ನೋವು, ವೇದನೆ ಇದೆ. ನಮ್ಮ ಸಂಘಟನೆ ಕೂಡ ಕೇಂದ್ರದ ಪದಾಧಿಕಾರಿಗಳಿಗೆ ಈ ಕುರಿತು ಆಗ್ರಹ ಮಾಡುತ್ತೇವೆ. ಹಿಂದುತ್ವದ ವಿಚಾರ ಬೆಳೆಸಲು ಅವಕಾಶ ಮಾಡಿ ಕೊಡಬೇಕು. ಈಗ ಹಿಂದುತ್ವವನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

    ಯತ್ನಾಳ್ ನಿಜವಾದ ಹಿಂದುತ್ವವಾದಿ. ಅವರು ಹೊಸ ಪಕ್ಷ ಮಾಡುವಾಗ ನಮಗೆ ಆಹ್ವಾನ ನೀಡಿದರೆ ಅದನ್ನು ನಮ್ಮ ಸಂಘಟನೆ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಪೂರ್ವದಲ್ಲಿ ಯತ್ನಾಳ್ ಅವರ ಉಚ್ಚಾಟನೆಯನ್ನು ಬಿಜೆಪಿ ಮರು ಪರಿಶೀಲಿಸಬೇಕು. ಅವರನ್ನು ಪಕ್ಷದೊಳಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ತಪ್ಪು ಒಪ್ಪು ಏನೆಂದು ವರಿಷ್ಠರೇ ನಿರ್ಧಾರ ಮಾಡಲಿ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎನ್ನುತ್ತಿದ್ದೇವೆ. ಹಿಂದುತ್ವದ ವಿಚಾರಧಾರೆ ಹಾಳಾಗದಂತೆ ನೋಡಿಕೊಳ್ಳಲು ಯತ್ನಾಳ್ ಅವರನ್ನು ಪಕ್ಷದ ಒಳಗಡೆ ಕರೆದುಕೊಂಡು ಬರಬೇಕು. ಈ ಸಂಬAಧ ಕೇಂದ್ರಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.

  • ಡಿಕೆಶಿ, ಶಾಮನೂರ್‌ಗೆ ಹೆದರಬೇಡಿ- ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್

    ಡಿಕೆಶಿ, ಶಾಮನೂರ್‌ಗೆ ಹೆದರಬೇಡಿ- ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್

    – ಜನರಿಗೆ ಫ್ರೀ ಕೊಟ್ಟು, ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತಿದ್ದೀರಿ

    ಯಾದಗಿರಿ: ಯಾವ ಡಿಕೆ ಶಿವಕುಮಾರ್ ಗೂ (DK Shivakumar), ಶಾಮನೂರುಗೂ ಅಂಜಬ್ಯಾಡ್ರಿ ಎನ್ನುತ್ತಾ ಸಿಎಂ ಸಿದ್ದರಾಮಯ್ಯ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬ್ಯಾಟ್ ಬೀಸಿದ್ದಾರೆ.

    ಯಾದಗಿರಿಯ (Yadagiri) ಶಹಾಪುರದಲ್ಲಿ ಮಾತನಾಡಿದ ಶಾಸಕರು, ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು. ಲಿಂಗಾಯತ, ಕುರಬ ಇದು ಅಲ್ವೇ ಅಲ್ಲ ಇದು ಮೂರ್ಖತನದ ಹೇಳಿಕೆ. ನಾವು ಜಾತಿ ಮೇಲೆ ಮಾತನಾಡುವುದಿಲ್ಲ. ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಯಾರು ಸಮರ್ಥ ಆಡಳಿತ ಕೊಡ್ತಾರೋ ಅವರು ಸಿಎಂ ಆಗಬೇಕು. ಆದರೆ ಕಾಂಗ್ರೆಸ್‍ನವರೇ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ರು.

    ಸಿದ್ದರಾಮಯ್ಯನವರಿಗೆ (Siddaramaiah) ಆಡಳಿತ ಮಾಡಲು ಕಾಂಗ್ರೆಸ್‍ನವರು ಬಿಡುತ್ತಿಲ್ಲ. ಒಬ್ಬೊಬ್ಬ ಶಾಸಕರು ತಮ್ಮ ಅಸಮಾಧಾನವನ್ನು ಸ್ಫೋಟ ಮಾಡುತ್ತಿದ್ದಾರೆ. ಹೀಗಾಗಿ ಆಡಳಿತ ಮಾಡಲಿಕ್ಕೆ ಆಗುತ್ತಿಲ್ಲ, ಇದರಿಂದ ತಮ್ಮದೇ ಹಾದಿಯಲ್ಲಿ ಸಿದ್ದರಾಮಯ್ಯನವರು ಹೋಗ್ತಿದ್ದಾರೆ. 135 ಶಾಸಕರ ಬೆಂಬಲವನ್ನ ಕರ್ನಾಟಕದ ಜನ ಸಿದ್ದರಾಮಯ್ಯನವರಿಗೆ ನೀಡಿ, ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟ್ ಬೀಸಿದ್ರು. ಇದನ್ನೂ ಓದಿ: ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತಿದ್ದೀರಿ: ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ದುಡ್ಡೆ ಇಲ್ಲ. ಹೀಗಾಗಿ ರಾಜ್ಯದಲ್ಲಿ ಸಾವಿರ ಮದ್ಯದಂಗಡಿ ಓಪನ್ ಮಾಡೋದಕ್ಕೆ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ಯಾರಂಟಿಗಳನ್ನ ಆರು ತಿಂಗಳು ನಡೆಸಲು 56 ಕೋಟಿ ಹಣಬೇಕು. ಜನರಿಗೆ ಅಕ್ಕಿ ಫ್ರೀ, ಬಸ್ ಫ್ರೀ ಕೊಡ್ತೀರಿ, ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತೀರಿ. ಹೀಗಾಗಿ ಹಳ್ಳಿ-ಹಳ್ಳಿಗಳಲ್ಲಿ ಮದ್ಯದಂಗಡಿ ತೆಗೆದು ರಾಜ್ಯದ ಸಂಸ್ಕೃತಿ ಹಾಳು ಮಾಡ್ತಾಯಿದ್ದೀರಿ. ಈ ನಿರ್ಧಾರಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ಹೇಳಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]