Tag: barjari bachelors

  • ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಕಿರುತೆರೆಯಲ್ಲೂ ಸ್ಟಾರ್‌ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸದಾ ತಾನು ತರುವ ಸದಭಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಈ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ಧವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮವಾಗಿದೆ. ಹತ್ತು ಎಲಿಜಬಲ್ ಬ್ಯಾಚುಲರ್‌ಗಳ ಕನಸುಗಳನ್ನ ನಿಜರೂಪಕ್ಕೆ ತರುತ್ತಾ ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನ ಕರುನಾಡಿಗೆ ತೋರಿಸುತ್ತಾ ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನ ಕರುನಾಡಿಗೆ ಸಾರುವ ಈ ರಿಯಾಲಿಟಿ ಶೋನ ನಿರೂಪಣೆಯ ಜವಾಬ್ದಾರಿಯನ್ನ ಹೊತ್ತಿರೋದು ನಿರೂಪಕ ಅಕುಲ್ ಬಾಲಾಜಿ (Akul Balaji) ವಿಭಿನ್ನ ಮ್ಯಾನರೀಸಂ ಜೊತೆ ಸಖತ್ ಮಾತುಗಳ ಮೂಲಕ ಮನೋರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ ಬಹಳ ದಿನಗಳ ನಂತರ ಮತ್ತೆ ವಾಹಿನಿಗೆ ವಾಪಸ್ಸಾಗುತ್ತಿರೋದು ಮತ್ತೊಂದು ಹೈಲೈಟ್.

    ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿದ, ಪ್ರೇಮಲೋಕ ಸೃಷ್ಟಿಸಿದ ಕರುನಾಡಿನ ರಣಧೀರ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಿದ್ರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರು ಖುರ್ಚಿಯ ಗತ್ತನ್ನ ಹೆಚ್ಚುಮಾಡಿದ್ದಾರೆ. ಹತ್ತು ಬ್ಯಾಚುಲರ್‌ಗಳ ಇಷ್ಟ ಕಷ್ಟಗಳ ನಡುವೆ ಹೆಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಕರುನಾಡಿನ ರಾಕ್ ಸ್ಟಾರ್ ಚಂದನ್ ಶೆಟ್ಟಿ. ಟೀನೇಜ್ ಹುಡುಗರ ಪಲ್ಸ್ ರೇಟ್‌ ಯಾವಾಗಲು ಜಾಸ್ತಿ ಮಾಡೋ ಹಾಡುಗಳನ್ನ ಕೊಟ್ಟು ಕನ್ನಡಿಗರು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಚಂದನ್ ಶೆಟ್ಟಿಯವರ ರಾಗ ಸಂಯೋಜನೆಗೆ ರಾಕೇಶ್ ಸಿ.ಎ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್‌ಗಳ ಆಸೆ, ಕನಸುಇಷ್ಟ, ಕಷ್ಟ, ತುಮುಲ ಮತ್ತು ತೊಳಲಾಟ ಎಲ್ಲವು ಎದ್ದು ಕಾಣುತ್ತದೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ನಮ್ಮ ಬ್ಯಾಚುಲರ್‌ಗಳ ಬಯೋಡೇಟಾ ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ನಿಮ್ಮ ಮನೆಗೆ ಬರಲಿದೆ.

    ಸತತ 4 ವರ್ಷಗಳಿಂದ ನಮ್ಮನ್ನ ನಂ.1 ಸ್ಥಾನದಲ್ಲಿ ಇಟ್ಟಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಂದು ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್‌ನ ನಿಮ್ಮ ಮುಂದೆ ತರುವ ತಯಾರಿ ಮಾಡಿದ್ದೇವೆ. ಸಮಾಜದಲ್ಲಿ ಬ್ಯಾಚುಲರ್‌ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್‌ಗಳ ಸಮಸ್ಯೆಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುರಲ್ಸ್.

  • ವಧು ಅನ್ವೇಷಣೆಗಾಗಿ ‘ಭರ್ಜರಿ ಬ್ಯಾಚುಲರ್ಸ್‌ʼ ಅಡ್ಡಾಗೆ ಕಾಲಿಟ್ಟ ಹನುಮಂತ

    ವಧು ಅನ್ವೇಷಣೆಗಾಗಿ ‘ಭರ್ಜರಿ ಬ್ಯಾಚುಲರ್ಸ್‌ʼ ಅಡ್ಡಾಗೆ ಕಾಲಿಟ್ಟ ಹನುಮಂತ

    ಹಾವೇರಿಯ ಹೈದ, ಚಿಲ್ಲೂರು ಚಿಂಗಾರಿ ಮತ್ತೆ ಕ್ಯಾಮೆರಾ ಮುಂದೆ ಕಂಗೊಳಿಸ್ತಿದ್ದಾನೆ. ಸೂಟು-ಬೂಟು ಹಾಕ್ಕೊಂಡು ಟೀಮ್ ಜೊತೆ ಈ ಸಲ ಕಮ್ ನಮ್ದೆ ಅಂತ ಬೆನ್ಜ್ ಕಾರ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ. ಅಂಗಿ-ಲುಂಗಿ ಜೊತೆ ಕಾಮಾಗಿದ್ದ ಹನುಮಂತನ (Hanumantha) ನಯಾ ಅವತಾರ ನೋಡಿ ಕನ್ನಡಿಗರು ಕೇಕೆ ಹಾಕಿದ್ದಾರೆ. ಕುರಿಮ್ಯಾನ್ ಮಾಡ್ತಿರುವ ನಯಾ ಪ್ರಾಜೆಕ್ಟ್ ಜೊತೆಗೆ ಹನುಮನ ಮದುವೆಗೆ ಮ್ಯಾಚ್ ಆಗುವ ರಿಯಾಲಿಟಿ ಶೋನ ಕಂಪ್ಲೀಟ್ ಡಿಟೈಲ್ಸ್ ನಿಮ್ಮ‌ ಮುಂದೆ ಬರ್ತಿದೆ ನೋಡಿ.

    ಖಾಸಗಿ ವಾಹಿನಿಯಲ್ಲಿ ಗಾಯಕ ಹನುಮಂತ ಹೊಸ ಅವತಾರದಲ್ಲಿ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ ಪ್ರೋಮೋ ಮೂಲಕ ‘ಭರ್ಜರಿ ಬ್ಯಾಚುಲರ್ಸ್‌ʼ ಒಳ್ಳೆ ಹೈಪ್ ಕ್ರಿಯೇಟ್ ಮಾಡಿದೆ. ಸುಂದರವಾದ ಹುಡುಗಿಯರನ್ನ ರ‍್ಯಾಂಪ್ ಮೇಲೆ ವಾಕ್ ಮಾಡಿಸಿ ಶೋಗೆ ಗ್ಲಾಮರ್ ಸೇರಿಸಿದೆ ‘ಭರ್ಜರಿ ಬ್ಯಾಚುಲರ್ಸ್‌ʼ (Bharjari Bachelors) ಟೀಮ್. ನೀವು ಮದುವೆ ಆಗೋ ಹುಡುಗ ಹೇಗಿರಬೇಕು ಅನ್ನೋ ಪ್ರಶ್ನೆ ಮೂಲಕ ಹುಡುಗಿಯರ ಅಂತರಾಳವನ್ನ ಪ್ರೋಮೋದಲ್ಲಿ ಅನಾವರಣ ಮಾಡಲಾಗಿದೆ. ಸುಂದರಿಯರ ಕಲ್ಪನೆಗೆ ವಿರುದ್ಧವಾದ ಹುಡುಗರನ್ನ ಅಖಾಡಕ್ಕೆ ಇಳಿಸಿ ನೋಡುಗರಿಗೆ ಭರವಸೆ ಮೂಡಿಸಿದೆ. ಈ ಶೋನಲ್ಲಿ ಸಮ್‌ಥಿಂಗ್ ಸ್ಪೆಷಲ್ ಇದೆ ಅಂತ ಸಣ್ಣ ತುಣುಕು ಗ್ಯಾರೆಂಟಿ ಕೊಟ್ಟಿದೆ. ಇದನ್ನೂ ಓದಿ:ಚೆಕ್‌ ಬೌನ್ಸ್‌ ಕೇಸ್:‌ ಕೋರ್ಟ್‌ಗೆ ಶರಣಾದ ಬಾಲಿವುಡ್‌ ನಟಿ ಅಮೀಷಾ ಪಟೇಲ್

    ಮಾಡೆಲ್‌ಗಳ ಮಾತು ಕೇಳಿದ್ಮೇಲೆ ಬಾಯ್ಸ್ ಎಂಟ್ರಿ ಕೊಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ಡಿಫರೆಂಟ್ ಎಂಟ್ರಿ. ಪಂಚ್ ಲೈನ್‌ಗಳು, ಭರ್ಜರಿ ಕಾಸ್ಟ್ಯೂಮ್‌ಗಳು ಜೊತೆಗೆ ರಿಚ್ ಹೋಟೆಲ್ ಕಾಸ್ಟ್ಲಿ ಕಾರು.. ಬಟ್ ಹುಡುಗರು ಮಾತ್ರ ಪಕ್ಕಾ ಲೋಕಲ್. ಈ ಸೂಪರ್ ಮಾಡೆಲ್‌ಗಳ ಜೊತೆ ಸೂಪರ್ ಟ್ಯಾಲೆಂಟ್ ಹುಡುಗರು ಏನು ಮಾಡ್ತಾರೆ ಹೇಗೆ ವರ್ಕ್ಔಟ್ ಮಾಡಿಕೊಳ್ತಾರೆ ಅನ್ನೋದು ಶೋನ ಹೂರಣ. ಹೆಗಲ ಮೇಲೆ ಟವೆಲ್ ಹಾಕ್ಕೊಂಡು, ಹಳೆ ಲುಂಗಿ ಕಾಮನ್ ಅಂಗಿ ಜೊತೆ ಸ್ಟೇಜ್ ಹತ್ತಿದ ಹನುಮಂತ ಪಕ್ಕದ ಮನೆ ಹುಡುಗನ ಹಾಗೇ ಕನ್ನಡಿಗರ ಮನದಲ್ಲಿ ಜಾಗ ಗಿಟ್ಟಿಸಿ ಬಿಟ್ಟ. ಜವಾರಿ ಹುಡುಗನ ಕಂಠಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ರು. ಹಳ್ಳಿ ಹುಡುಗ ಕಿರುತೆರೆಯಲ್ಲಿ ಹೊಸದೊಂದು ಪುಟವನ್ನ ತನಗಾಗಿ ಬರೆದುಕೊಂಡ. ಹಾಡಿಗೆ ಮಾತ್ರವಲ್ಲ ಡ್ಯಾನ್ಸ್‌ಗೂ ಸೈ ಅಂತ ಡಿಕೆಡಿ ವೇದಿಕೆಯಲ್ಲಿ ಕುಣಿದು ಜನರನ್ನ ಕುಣಿಸಿದ. ಹಾಡು ಮಾತು ಜೊತೆಗೆ ಒಂದಿಷ್ಟು ಡ್ಯಾನ್ಸ್ ಮಾಡಿ ಬಪ್ಪರೆ ಮಗ ಅಂತ ಅನಿಸಿಕೊಂಡ.

    ಜುಲೈ ಅಂತ್ಯಕ್ಕೆ ‘ಭರ್ಜರಿ ಬ್ಯಾಚುಲರ್ಸ್‌ʼ ನಿಮ್ಮ ಮನೆಯಂಗಳಕ್ಕೆ ಬರೋ ಸಾಧ್ಯತೆಯಿದೆ. ಮತ್ತೆ ಕಿರುತೆರೆಯಲ್ಲಿ ಹನುಮನ ಪಯಣ ಶುರುವಾಗಿದೆ. ಪಯಣ ಸುಂದರ ಮನರಂಜನೆಯ ತಾಣಕ್ಕೆ ಸೇರಲಿದೆ ಅನ್ನೊದು ಕೂಡ ಖಾತ್ರಿಯಾಗಿದೆ. ಹನುಮಂತ ದ್ಯಾವರಿಗೆ ಕೈ ಮುಗಿದು ನಮ್ಮ ಹನುಮಂತನಿಗೆ ಒಳ್ಳೆ ಹುಡುಗಿ ಸಿಗ್ಲಿ ಅಂತ ನೀವು ಹರಸಿ. ಮುಂದೆ ಹನುಮನ ಪಾಡು ಹೇಗಿರುತ್ತೆ ಅನ್ನೋದನ್ನ ನೋಡುವ.