Tag: Baraguru Ramachandrappa

  • ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

    ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

    ಬೆಂಗಳೂರು: ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ? ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ.

    TEXTBOOK

    ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳಬೇಕಿತ್ತಾ? ಇದೆಲ್ಲವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿತ್ತು. ಒಡೆಯರ್ ಬಗ್ಗೆ ಯಾಕೆ ಪಠ್ಯ ಬಿಟ್ಟಿದ್ದರು? ಬೆಂಗಳೂರಿನಲ್ಲಿ ದೇವಸ್ಥಾನ ಇರಲಿಲ್ಲವಾ? ಯಾಕೆ ದೇವಾಲಯದ ಫೋಟೋ ಹಾಕಿಲ್ಲ? ಈಗ ಇದನ್ನ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಅದನ್ನೂ ವಿವಾದಕ್ಕೆ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ

    Text book

    ಗೊಂದಲವಿದ್ದರೆ ನಾನೇ ಪರಿಹಾರ ಮಾಡ್ತೇನೆ: ಮೊದಲು ಟಿಪ್ಪು ಅಂದ್ರು, ಅಮೇಲೆ ಭಗತ್ ಸಿಂಗ್ ಬಗ್ಗೆ ವಿವಾದ ಮಾಡಿದ್ರು, ನಂತರ ಕುವೆಂಪು ಅಂದವರೇ ಈಗ ಬಸವಣ್ಣ ಎನ್ನುತ್ತಿದ್ದಾರೆ. ಸತ್ಯ ಹೊರಗಡೆ ಬಂದಹಾಗೇ ಅವರ ನಿಲುವು ಬದಲಾವಣೆ ಮಾಡ್ತಿದ್ದಾರೆ. ಬೇಕು ಅಂತ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಪಠ್ಯಪುಸ್ತಕದ ಬಗ್ಗೆ ಯಾರಿಗೇ ಗೊಂದಲ ಇರಲಿ. ಸ್ವಾಮೀಜಿಗಳಿಗೆ ಗೊಂದಲ ಇದ್ದರೂ ನಾನೇ ಭೇಟಿ ಮಾಡಿ ಪರಿಹಾರ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಹಳ ಜನ ಸ್ನೇಹಿತರಿದ್ದಾರೆ- ರಾಜಕೀಯ ದಾಳ ಉರುಳಿಸಿದ ಸಿಎಂ

    bc nagesh

    ಪರಿಷ್ಕರಣೆ ಕೆಲಸ ಈಗ ಮುಕ್ತಾಯ ಆಗಿದೆ. ಪದೇ ಪದೇ ಪರಿಷ್ಕರಣೆ ಮಾಡಲು ಆಗೋದಿಲ್ಲ. ಈಗಾಗಲೇ ಶೇ.75 ಪಠ್ಯಪುಸ್ತಕ ಮುದ್ರಣದ ಕಾರ್ಯ ಮುಗಿದಿದೆ. ಶೇ.66 ರಷ್ಟು BEO ಕಚೇರಿಗಳಿಗೆ ತಲುಪಿದೆ. ಕಲಿಕಾ ಚೇತರಿಕೆ ಮುಗಿಯೋ ಒಳಗೆ ಪಠ್ಯ ಪುಸ್ತಕ ತಲುಪಿಸುವ ಪ್ರಯತ್ನ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯೂ ಮಂಗಳೂರು ಕೋರ್ಟ್‌ನಲ್ಲಿ ಮಳಲಿ ವಿಚಾರಣೆ

    ಇದರಲ್ಲಿ ಬಸವಣ್ಣನವರ ಪಠ್ಯ ತೆಗೆದಿಲ್ಲ. ಆದರೆ ಬರಗೂರು ಸಮಿತಿಯಲ್ಲಿ ಏನಿತ್ತು? ಈಗ ಏನು ಸೇರ್ಪಡೆಯಾಗಿದೆ ಎಂಬುದನ್ನು ಚೆಕ್ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

  • ಕುವೆಂಪು ಪಾಠ ಕೈಬಿಟ್ಟಿಲ್ಲ, ಸಚಿವರ ಹೇಳಿಕೆ ಅಪ್ಪಟ ಸುಳ್ಳು – ಬರಗೂರು ರಾಮಚಂದ್ರಪ್ಪ

    ಕುವೆಂಪು ಪಾಠ ಕೈಬಿಟ್ಟಿಲ್ಲ, ಸಚಿವರ ಹೇಳಿಕೆ ಅಪ್ಪಟ ಸುಳ್ಳು – ಬರಗೂರು ರಾಮಚಂದ್ರಪ್ಪ

    ಬೆಂಗಳೂರು: ಪಠ್ಯ ಪುಸ್ತಕಗಳ ಪರಿಷ್ಕರಣೆ ಸಂಬಂಧ ಹಲವಾರು ಗೊಂದಲಗಳಿಗೆ ತೆರೆ ಎಳೆದಿದ್ದ ಸಚಿವ ಬಿ.ಸಿ.ನಾಗೇಶ್ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಾಹಿತಿ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರು ಸುದೀರ್ಘ ಪತ್ರದ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ.

    ಪತ್ರದಲ್ಲಿ ಏನಿದೆ?: ನನ್ನ ಸಭಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು, ಗಾಂಧಿ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕೆಂಪೇಗೌಡರ ಪಠ್ಯ ವಿಷಯಗಳನ್ನು ಕೈಬಿಟ್ಟಿರುವುದಾಗಿ ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ. ಇಷ್ಟಕ್ಕೂ ಎಲ್ಲ ಪಠ್ಯಪುಸ್ತಕಗಳನ್ನು ನಾನೊಬ್ಬನೇ ಬರೆದಂತೆ ಬಿಂಬಿಸಿ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ.

    BaraguruRamachandrappa

    ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ, ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತಾ ಕೈ ಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ `ಭರತ ಭೂಮಿ ನಮ್ಮ ತಾಯಿ’ ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ

    bc nagesh

    7ನೇ ತರಗತಿ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿಯವರನ್ನು ಕುರಿತ ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿಯ ಭಾಗ-1 ಮತ್ತು 10ನೇ ತರಗತಿಯ ಭಾಗ-2ರಲ್ಲಿ ಡಾ.ಅಂಬೇಡ್ಕರ್ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ `ನಮ್ಮ ಸಂವಿಧಾನ’ ಎಂಬ ಪಾಠವಿದ್ದು ಅಲ್ಲಿಯೂ ಡಾ.ಅಂಬೇಡ್ಕರ್ ಕುರಿತ ವಿವರಗಳಿವೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಮಾಜ ವಿಜ್ಞಾನದ 6ನೇ ತರಗತಿಯ ಭಾಗ-2 ಮತ್ತು 10ನೇ ತರಗತಿಯ ಭಾಗ-1ರಲ್ಲಿ ಪಾಠಗಳಿವೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 5ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೊಸದಾಗಿ ಒಂದು ಪಾಠವನ್ನೂ ಸೇರಿಸಲಾಗಿದೆ.

    ಮದಕರಿ ನಾಯಕರ ಬಗ್ಗೆ ಪಾಠವನ್ನು ಕೈಬಿಟ್ಟಿಲ್ಲ. ಮದಕರಿ ನಾಯಕರ ಜೊತೆಗೆ ಸುರಪುರ ಸಂಸ್ಥಾನದ ಬಗ್ಗೆಯೂ ಬರೆಸಿ ಸೇರಿಸಲಾಗಿದೆ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ವಿವರಗಳಿಲ್ಲ ಎನ್ನುವುದು ಕೂಡ ತಪ್ಪು ಮಾಹಿತಿ, ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಲಾಗಿದೆ. ಇದಿಷ್ಟು ಪಾಠಗಳು ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-1ನೇ ಪಠ್ಯಪುಸ್ತಕದಲ್ಲಿವೆ.

    text book

    7ನೇ ತರಗತಿಯ ಭಾಗ-2ರ ಸಮಾಜ ವಿಜ್ಞಾನ ಪಠ್ಯದಲ್ಲಿ ರಾಣಿ ಅಬ್ಬಕ್ಕ ಕುರಿತ ವಿವರಗಳಿವೆ. 7ನೇ ತರಗತಿಯ ಭಾಗ-1ರ ಸಮಾಜ ವಿಜ್ಞಾನ ಪಠ್ಯದಲ್ಲಿ `ಮೈಸೂರು ಒಡೆಯರು’ ಎಂಬ ಪ್ರತ್ಯೇಕ ಅಧ್ಯಾಯವೇ ಇದೆ. ಸಚಿವರು ಹೇಳಿದಂತೆ ಇಲ್ಲಿನ ವಿವರಗಳು ಕಡಿಮೆ ಎನ್ನಿಸಿದರೆ `ಮರುಪರಿಷ್ಕರಣೆ’ಯಲ್ಲಿ ವಿಸ್ತರಿಸಬಹುದಿತ್ತಲ್ಲ? ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ 

    ಟಿಪ್ಪುವನ್ನೂ ಒಳಗೊಂಡಂತೆ ಯಾರ ಬಗ್ಗೆಯೂ ನಮ್ಮ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಮಿತಿಯವರು ಆಧಾರವಿಲ್ಲದೆ ಏನನ್ನೂ ಸೇರಿಸಿಲ್ಲ. ಟಿಪ್ಪು, ಸಾವರ್ಕರ್ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ ನಡೆದ ಘಟನೆಗಳ ವಾಸ್ತವದ ಮಾಹಿತಿಯನ್ನಷ್ಟೇ ಕೊಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದ ಮಕ್ಕಳಿಗೆ ಪರ ಮತ್ತು ವಿರೋಧದ ಚರ್ಚೆಗಳ ಬದಲು ಮಾಹಿತಿ ಒದಗಿಸುವ ಉದ್ದೇಶವೇ ಮುಖ್ಯವೆಂದು ಭಾವಿಸಲಾಗಿದೆ.

    bc nagesh
    ಸಾಂದರ್ಭಿಕ ಚಿತ್ರ

    ವಾಸ್ತವವಾಗಿ ಆಗ 27 ಸಮಿತಿಗಳಿದ್ದವು. 172 ಜನ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದರು. 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರಿದ್ದರು. ಈ ಸಮಿತಿಗಳಾಚೆಗೂ ನಾವು ಅಧ್ಯಾಪಕರ ಸಂಘಗಳ ಜೊತೆ, ಡಯಟ್ ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲ ಪಠ್ಯವಿಷಯ ಪರಿಣಿತರ ಜೊತೆ ಮೂವತ್ತಕ್ಕೂ ಹೆಚ್ಚು ಸಮಾಲೋಚನೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ. ಆನಂತರವೇ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಮಾಹಿತಿ ಕೊರತೆ ಮತ್ತು ದೋಷಗಳು ಉಳಿದಿದ್ದರೆ, ಮುಂದೆ ಪರಿಷ್ಕರಿಸಬಹುದೆಂದು ಮೊದಲಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ.

    ಆದರೆ, ನಮಗಿಂತ ಹಿಂದೆ ಪಠ್ಯಪುಸ್ತಕ ರಚನೆ ಮಾಡಿದವರ ಬಗ್ಗೆ ಒಂದೇ ಒಂದು ಟೀಕೆಯನ್ನೂ ಮಾಡಿಲ್ಲ. ವೈಯಕ್ತಿಕ ನಿಂದನೆ ಮಾಡುವುದನ್ನು ನನಗೆ ಕಲಿಸಿಲ್ಲ. ಮಾನ್ಯ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆ ಕಾಪಾಡಲಿ.

  • ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

    ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

    ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಉಂಟಾಗಿದ್ದ ಗೊಂದಲಗಳು, ವಿವಾದಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತೆರೆ ಎಳೆದಿದ್ದಾರೆ.

    ಒಂದು ಗಂಟೆಗೂ ಹೆಚ್ಚು ಸಮಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ನಾರಾಯಣ ಗೌಡರಿಗೆ ಕೈ ಪಾಲಿಕೆ ಸದಸ್ಯರಿಂದ ಫುಲ್ ಕ್ಲಾಸ್

    siddaramaiah bc nagesh

    ಕಾಂಗ್ರೆಸ್ ಅವಧಿಯಲ್ಲಿ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಪಠ್ಯಕ್ಕೆ ವಿರೋಧ ಮಾಡಿದ್ದ ಸಾಹಿತಿಗಳು, ಕಾಂಗ್ರೆಸ್ ನಾಯಕರ ವಿರುದ್ಧ ದಾಖಲೆ ಸಮೇತ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ನಾರಾಯಣ ಗುರು, ಭಗತ್ ಸಿಂಗ್ ಪಠ್ಯಗಳನ್ನು ಕೈ ಬಿಟ್ಟಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

    ಹೆಡ್ಗೆವಾರ್ ಪಠ್ಯ ಸೇರ್ಪಡೆ, ಕೆಂಪೇಗೌಡರ ಜೀವನ ಚರಿತ್ರೆ, ಟಿಪ್ಪು ವೈಭವೀಕರಣದ ಬಗ್ಗೆ ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    bc nagesh
    ಸಾಂದರ್ಭಿಕ ಚಿತ್ರ

    ಪಠ್ಯದಲ್ಲಿ ಏನಿದೆ, ಏನಿಲ್ಲ? – ಸಚಿವರು ಹೇಳಿದ್ದೇನು?

    • ನಾರಾಯಣಗುರು ಪಠ್ಯವನ್ನ 10ನೇ ತರಗತಿ ಇತಿಹಾಸ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ. ಇತಿಹಾಸ ಪುಸ್ತಕದಲ್ಲಿ ಹೆಚ್ಚು ಪಠ್ಯ ಇತ್ತೆಂಬ ಕಾರಣಕ್ಕೆ ಕನ್ನಡಕ್ಕೆ ಸೇರ್ಪಡೆ ಮಾಡಲಾಗಿದೆ. 6ನೇ ತರಗತಿ ಪಠ್ಯದಲ್ಲಿರೋ ನಾರಾಯಣಗುರು ಪಠ್ಯವೂ ಹಾಗೇ ಉಳಿಸಿಕೊಳ್ಳಲಾಗಿದೆ.
    • ಭಗತ್ ಸಿಂಗ್ ಪಠ್ಯ ತೆಗೆದಿಲ್ಲ. ಭಗತ್ ಸಿಂಗ್ ಜೊತೆ ಕ್ರಾಂತಿಕಾರಿಗಳಾದ ರಾಜ್‌ಗುರು, ಸುಖ್‌ದೇವ್ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲಿ ಅವರು ಬರೆದಿರು `ತಾಯಿ ಭಾರತೀಯರ ಅಮರಪುತ್ರರು’ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.
    • ಡಾ.ಜಿ.ರಾಮಕೃಷ್ಣರ ಭಗತ್ ಸಿಂಗ್ ಪಠ್ಯವೂ ಕೈ ಬಿಟ್ಟಿಲ್ಲ. ಮೈಸೂರು ಒಡೆಯರ್ ಪಠ್ಯವನ್ನ ಬರಗೂರು ರಾಮಚಂದ್ರಪ್ಪ ಸಮಿತಿ ಕೈ ಬಿಟ್ಟಿತ್ತು. 5 ಪುಟದ ಪಠ್ಯವನ್ನ 4 ಪುಟಕ್ಕೆ ಇಳಿಸಿತ್ತು. ಇದನ್ನ ಸರಿ ಮಾಡಿದ್ದೇವೆ.
    • ಬರಗೂರು ಸಮಿತಿ ಒಂದು ಪುಟ ಇದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು 6 ಪುಟಕ್ಕೆ ಹೆಚ್ಚಿಸಿತ್ತು. ಓಟ್ ಬ್ಯಾಂಕ್‌ಗಾಗಿ ಒಡೆಯರ್ ಪಠ್ಯ ಕೈ ಬಿಟ್ಟು ಟಿಪ್ಪು ಸುಲ್ತಾನ್ ಪಠ್ಯ ಸೇರ್ಪಡೆ ಮಾಡಿತ್ತು. ಟಿಪ್ಪು ವೈಭವೀಕರಣವನ್ನು, ಅದರಲ್ಲಿದ್ದ ತಪ್ಪುಗಳನ್ನು ತಪ್ಪು ಸರಿ ಮಾಡಲಾಗಿದೆ. ಟಿಪ್ಪುವಿನ ನಿಜವಾದ ಮುಖವಾಡವನ್ನ ಪಠ್ಯದಲ್ಲಿ ಸೇರಿಸಿದ್ದೇವೆ.
    • ಪೆರಿಯಾರ್ ಪಠ್ಯ ಮುಂದುವರಿಸಲಾಗಿದೆ. ರಾಮನ ಬಗ್ಗೆ ಆಕ್ಷೇಪಾರ್ಹ ಮತ್ತು ರಾವಣನ ಪರ ಇದ್ದ ಸಾಲುಗಳನ್ನ ತೆಗೆಯಲಾಗಿದೆ. ಕುವೆಂಪು ಪಠ್ಯವನ್ನ ನಾವು ಬದಲಾವಣೆ ಮಾಡಿಯೇ ಇಲ್ಲ. ಬರಗೂರು ಸಮಿತಿ ಕುವೆಂಪು ಪಠ್ಯವನ್ನು ಕೈ ಬಿಟ್ಟಿತ್ತು. ನಾವು ಹೆಚ್ಚುವರಿಯಾಗಿ 2 ಪಠ್ಯ ಸೇರ್ಪಡೆ ಮಾಡಿದ್ದೇವೆ.
    • ಕುವೆಂಪು ಅವರ `ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಇತಿಹಾಸದ ಬಗ್ಗೆ ಬರಗೂರು ರಾಮಚಂದ್ರಪ್ಪ ತಪ್ಪು ಮಾಹಿತಿ ಕೊಟ್ಟಿದ್ದರು. ಅದನ್ನೂ ಸರಿ ಮಾಡಿದ್ದೇವೆ.
    • ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರು, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಪಠ್ಯ ಬರಗೂರು ಸಮಿತಿ ಕೈ ಬಿಟ್ಟಿತ್ತು. ಅವರ ಪಠ್ಯ ಸೇರ್ಪಡೆ ಮಾಡಿದ್ದೇವೆ.
    • ಹಿಂದೂ ಮಹಾ ಸಾಗರವನ್ನು ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಿದ್ರು. ಅದನ್ನು ಸರಿ ಮಾಡಿದ್ದೇವೆ. ಬರಗೂರು ರಾಮಚಂದ್ರಪ್ಪ ಸಮಿತಿ ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಪಠ್ಯವನ್ನು ತೆಗೆದು ಹಾಕಿತ್ತು. ಅದನ್ನ ಸೇರಿಸಲಾಗಿದೆ. ಜೊತೆಗೆ ಬರಗೂರು ಸಮಿತಿ ವಿವೇಕಾನಂದರ ಬಗ್ಗೆಯಿದ್ದ ವಿಕೃತಿಯನ್ನು ಸರಿ ಮಾಡಿದ್ದೇವೆ.
    • `ಏರುತಿಹುದು, ಹಾರುತಿಹುದು ನಮ್ಮ ಬಾವುಟ’ ಹಾಗೂ ನಾಡಪ್ರಭು ಕೆಂಪೇಗೌಡರ ಪಠ್ಯವನ್ನು ಸೇರಿಸಿದ್ದೇವೆ. ಚರ್ಚ್‌ಗಳು, ದೇವಾಲಯಗಳ ಬಗ್ಗೆ ಪಠ್ಯ ಇತ್ತು. ಇದ್ರಲ್ಲಿ ದೇವಾಲಯ ಫೋಟೋವೇ ಇರಲಿಲ್ಲ. ಅದನ್ನ ಸರಿ ಮಾಡಿದ್ದೇವೆ. ಸಿಂಧೂ ನಾಗರಿಕತೆ ಪಠ್ಯ ಸೇರ್ಪಡೆ ಮಾಡಿದ್ದೇವೆ. ಮೊಘಲರು, ಬ್ರಿಟಿಷರ ವಿರುದ್ಧ ಹೋರಾಡಿದ ವೀರರ ಬಗ್ಗೆಯೂ ಪಠ್ಯ ಸೇರ್ಪಡೆ ಮಾಡಲಾಗಿದೆ.
    • ಹೆಡ್ಗೆವಾರ್ ಬಗ್ಗೆ ಈಗ ಮಾತಾಡೋರು ಯಾರು ಹುಟ್ಟಿರಲಿಲ್ಲ. ಅದಕ್ಕಾಗಿ ಅವರ ಪಠ್ಯ, ಒಂದು ಭಾಷಣ ಸೇರ್ಪಡೆ ಮಾಡಿದ್ದೇವೆ. ದೇಶ ಭಕ್ತಿ ಬಗ್ಗೆ, ದೇಶಕ್ಕೆ ಸಮರ್ಪಣೆ ಭಾವದ ಬಗ್ಗೆ ತಿಳಿಸಲು ಹೆಡ್ಗೆವಾರ್ ಬಗ್ಗೆ ಸೇರಿಸಲಾಗಿದೆ. ಆರ್‌ಎಸ್‌ಎಸ್ ಬಗ್ಗೆ ಸೇರಿಸಿಲ್ಲ.
    • ಪ್ರಸ್ತುತ ಸಾಹಿತಿಗಳಲ್ಲೂ ಜಾತಿ ಬಣ್ಣ ಹುಡುಕುವ ಕೆಲಸ ಮಾಡೋದು ಸರಿಯಲ್ಲ. ಬರಗೂರು ಸಮಿತಿ ಸಂದೇಶ ನಿಡಗುಂಡ, ಶಿವಯೋಗಿ, ಸಾ.ಶಿ.ಮರುಳಯ್ಯ, ಸಿದ್ದಯ್ಯ ಪುರಾಣಿಕರನ್ನ ಪಠ್ಯ ಕೈ ಬಿಟ್ಟಿದ್ದರು. ಅದನ್ನೂ ಈಗ ಸೇರಿಸಲಾಗಿದೆ.

  • ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

    ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

    ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರು ನನ್ನ ಜೊತೆ ಚರ್ಚೆಗೆ ಬರಲಿ. ಇದು ನನ್ನ ಓಪನ್‌ ಚಾಲೆಂಜ್‌. ನಾನು ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ ಎಂದು ಬರಹಗಾರ ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಎಡಪಂಥೀಯ ವಿಚಾರವನ್ನು ತುಂಬುವ ಕೆಲಸ ಮಾಡಿತ್ತು. ಅದನ್ನು ನಾವು ಸರಿ ಮಾಡಿದ್ದೇವೆ. ಕಾಂಗ್ರೆಸ್ ಯಾವುದನ್ನು ಮಾಡಿತ್ತೋ ಅದನ್ನು ಸಂಪೂರ್ಣ ಉಲ್ಟಾ ಮಾಡಿದ್ದೇವೆ. ಎಂದು ಹೇಳಿದರು.

    ಕಾಂಗ್ರೆಸ್ ಅವಧಿಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರಿಗೆ ನಾನು ಚಾಲೆಂಜ್ ಹಾಕ್ತೀನಿ. ಅವರು ಎಲ್ಲಿ ಬೇಕಾದ್ರೂ ಕರೆದರೂ ಅಲ್ಲಿಗೆ ಬಂದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ 10ನೇ ತರಗತಿ ವಿದ್ಯಾರ್ಥಿಗಳು

    ಟಿಪ್ಪು ಮೈಸೂರು ಹುಲಿ ಅಲ್ಲ. ಮೈಸೂರು ಹುಲಿ ಅಂತ ಎಲ್ಲೂ ಪುರಾವೆ ಇಲ್ಲ. ಹೀಗಾಗಿ ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದೇವೆ. ಹೀಗಿದ್ದರೂ ಪಠ್ಯದಲ್ಲಿ ಟಿಪ್ಪುವನ್ನು ಕೈಬಿಟ್ಟಿಲ್ಲ. ಲಂಕೇಶ್, ಅನಂತಮೂರ್ತಿ, ಸಾರಾ ಅಬೂಬಕ್ಕರ್ ಸೇರಿದಂತೆ ಅನೇಕ ಲೇಖಕರ ಪಠ್ಯದ ಮೂಲಕ ಎಡಪಂಥೀಯ ಚಿಂತನೆಯನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

    ನಾನು ಆರ್‌ಎಸ್‌ಎಸ್‌ ವ್ಯಕ್ತಿಯಲ್ಲ. ಆರ್‌ಎಸ್‌ಎಸ್‌ ಶಾಖೆಗೂ ನಾನು ಹೋಗಿಲ್ಲ. ನಾನು ಆರ್‌ಎಸ್‌ಎಸ್‌ ಕಾರ್ಯಕರ್ತನೂ ಅಲ್ಲ. ಹೆಡ್ಗೆವಾರ್ ಅವರ ಮೌಲ್ಯಗಳನ್ನು ಮಕ್ಕಳು ಓದಬೇಕು. ಅದಕ್ಕೆ ಅವರ ಚಿಂತನೆಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಸರ್ಕಾರ ದೊಡ್ಡ ತಪ್ಪು ಮಾಡಿತ್ತು. ಅದನ್ನ ನಾವು ಸರಿ ಮಾಡಿದ್ದೇವೆ. ಮಕ್ಕಳು ಯಾವುದು ಓದಬೇಕೋ ಅ ಪಠ್ಯಗಳನ್ನು ಸೇರ್ಪಡೆ ಮಾಡಿದ್ದೇವೆ. ಹೆಡ್ಗೆವಾರ್ ರಾಷ್ಟ್ರವಾದ ಚಿಂತನೆ ಬಗ್ಗೆ ಭಾಷಣ ಮಾಡಿದ್ದರು. ಅವರ ಕಲ್ಪನೆಯನ್ನು ಮಕ್ಕಳು ಓದಬೇಕು. ಡಾ.ಕೇಶವ ಬಲಿರಾಂ ಹೆಡ್ಗೆವಾರ್ ಆದರ್ಶ ವ್ಯಕ್ತಿಯಾಗಿದ್ದು ಪಠ್ಯದಲ್ಲಿ ಅವರ ಭಾಷಣವನ್ನು ಸೇರಿಸಿದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು.

    ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ 10ನೇ ತರಗತಿಯ ಐದನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ಈ ಪಾಠವನ್ನು ಸೇರಿಸಿದ್ದಕ್ಕೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

  • ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಹರಿಪ್ರಿಯಾ ನಟನೆಯ ತಾಯಿ ಕಸ್ತೂರ್ ಗಾಂಧಿ

    ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಹರಿಪ್ರಿಯಾ ನಟನೆಯ ತಾಯಿ ಕಸ್ತೂರ್ ಗಾಂಧಿ

    ರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‍ಗಾಂಧಿ’ ಕನ್ನಡ ಚಿತ್ರವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಅಲ್ಲದೆ, ಈಗಾಗಲೇ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದೆ. ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದೆ. ಇದನ್ನೂ ಓದಿ : ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್

    ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಬರಗೂರರ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದಾರೆ. ಈ ಚಿತ್ರವು ಕಸ್ತೂರ್ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಕಸ್ತೂರ್ ಬಾ ಅವರ ಅನುಭವದ ನೋಟದಲ್ಲಿ ಗಾಂಧಿಯವರನ್ನು ಕಂಡುಕೊಳ್ಳುವ ಅಭಿವ್ಯಕ್ತಿ ವಿಧಾನವನ್ನು ಅನುಸರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಎದುರಿಸಿದ ಮಾನಸಿಕ ತಲ್ಲಣಗಳನ್ನು ಚಿತ್ರಿಸಲಾಗಿದೆ.  ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಕಸ್ತೂರ್ ಬಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ಹರಿಪ್ರಿಯ ಅಭಿನಯಿಸಿದ್ದಾರೆ. ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು ಡಾ. ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಸುಂದರರಾಜ್, ರೇಖಾ, ಪ್ರಮೀಳಾ ಜೋಷಾಯ್, ಸುಂದರರಾಜ ಅರಸು, ರಾಘವ್, ವೆಂಕಟರಾಜು, ವತ್ಸಲಾ ಮೋಹನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಸುರೇಶ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

  • ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಧಾರವಾಡ: ಪೇಜಾವರ ಶ್ರೀಗಳ ನಿಧನ ನೋವಿನ ವಿಚಾರ, ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಂಬನಿ ಮಿಡಿದಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು, ಸೈದ್ಧಾಂತಿಕವಾಗಿ ಅವರು ನನ್ನ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಸಾವಿಗೆ ಯಾವುದೇ ಸಿದ್ಧಾಂತವಿಲ್ಲ. ಈ ಸಂದರ್ಭದಲ್ಲಿ ಅವರನ್ನು ನೆನೆಯಬೇಕು, ಏಕೆಂದರೆ ಅನೇಕ ಚರ್ಚೆಗಳಿಗೆ, ಚಿಂತನೆಗಳಿಗೆ ಅವರು ಮುಖಾಮುಖಿಯಾದವರು. ಇಂಥ ಅವರ ವ್ಯಕ್ತಿತ್ವ ತುಂಬಾ ಮುಖ್ಯ ಎಂದರು.

    ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ಚರ್ಚೆ ಮಾಡುವ ಗುಣ ಬಹಳ ಮುಖ್ಯ. ಆ ಗುಣ ಅವರಲ್ಲಿ ಇತ್ತು. ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ, ಚರ್ಚೆಗೆ ಅವರು ಎಲ್ಲ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು ಎಂದು ಶ್ರೀಗಳ ಕುರಿತು ವಿವರಿಸಿದರು.

    ವೈಚಾರಿಕ ವಾಗ್ವಾದಕ್ಕೆ ಇಳಿಯುತ್ತಿದ್ದರು. ಅಂಥ ಚರ್ಚೆಗೆ ಕಾರಣವಾದ ಅವರು ಇಂದು ಇಲ್ಲ. ಪೇಜಾವರ ಶ್ರೀಗಳು ನಂಬಿದ ಚೌಕಟ್ಟಿನೊಳಗೆ ಇಫ್ತಾರ್ ಕೂಟ ಏರ್ಪಡಿಸಿದ್ದರು. ಅವರ ಈ ಧೈರ್ಯವನ್ನು ಇಂದು ನೆನಪಿಸಿಕೊಳ್ಳಬೇಕು. ಬೇರೆ ಧರ್ಮವನ್ನು ಗೌರವಿಸಿದ ಅವರಿಗೆ ತುಂಬು ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಬರಗೂರು ಈ ವೇಳೆ ಹೇಳಿದರು.

  • ರಾಜಕಾರಣದಲ್ಲಿ ಪುಡಾರಿಗಳೇ ಮುನ್ನೆಲೆಯಲ್ಲಿದ್ದಾರೆ: ಬರಗೂರು ಕಿಡಿ

    ರಾಜಕಾರಣದಲ್ಲಿ ಪುಡಾರಿಗಳೇ ಮುನ್ನೆಲೆಯಲ್ಲಿದ್ದಾರೆ: ಬರಗೂರು ಕಿಡಿ

    -ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವಿಲ್ಲ

    ಧಾರವಾಡ: ಇಂದಿನ ರಾಜಕಾರಣದಲ್ಲಿ ಎಲ್ಲ ಪುಡಾರಿಗಳೇ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಇಂದಿನ ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವೇ ಇಲ್ಲದಂತಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಪುಂಡತನ, ಪುಡಾರಿತನ ಮುಂದೆ ಬಂದಾಗ ಗೌರವ ಇರುವ ವ್ಯಕ್ತಿಗಳಿಗೆ ಅಲ್ಲಿ ನಿಲ್ಲಲು ಸಾಧ್ಯವಿಲ್ಲ. ಇನ್ನು ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ವ್ಯಕ್ತಿಗಳು ಇಂದಿನ ರಾಜಕೀಯದಲ್ಲಿ ನಿಲ್ಲಲು ಆಗುತ್ತಿಲ್ಲ. ರಾಜಕಾರಣ ಇಂದು ನಾವೆಲ್ಲ ನಾಚಿಕೆ ಪಡುವ ಸ್ಥಿತಿ ಬಂದಿದೆ ಎಂದು ಹೇಳಿದರು.

    ಸೈದ್ಧಾಂತಿಕ ರಾಜಕಾರಣ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ತಾವು ಅಲಂಕರಿಸಿದ ಯಾವುದೇ ಹುದ್ದೆಗಳಿಗೆ ಗೌರವ ತರುವಂತಹ ಭಾಷೆಯನ್ನ ರಾಜಕಾರಣಿಗಳು ಬಳಸುತ್ತಿಲ್ಲ. ದೆಹಲಿಯಿಂದ ಹಿಡಿದು ಬೆಂಗಳೂರವರೆಗೂ ಯಾರೂ ತಮ್ಮ ಹುದ್ದೆಗೆ ತಕ್ಕಂತೆ ಮಾತನಾಡುತ್ತಿಲ್ಲ, ಹೀಗಾಗಿ ನಮ್ಮಂಥಹ ಮರ್ಯಾದಸ್ಥರು ಒಂದಷ್ಟು ಕಾಲ ರಾಜಕಾರಣದಿಂದ ಹಿಂದೆ ಸರಿದಿದ್ದೇವೆ ಎಂದು ಬರಗೂರು ಹೇಳಿದರು.

    ದೇಶದಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿ ಇಲ್ಲ. ವ್ಯಕ್ತಿ ಕೇಂದ್ರೀತವಾದ ಭಾಷೆ ಬಳಸುವ ಹೃದಯಹೀನ ಜನ ಆಡಳಿತ ಮಾಡಲು ಹೋದಾಗ ಈ ರೀತಿ ಆಗುತ್ತದೆ ಎಂದು ಹರಿಹಾಯ್ದರು.

  • ಸಾಹಿತಿಗಳ ಹತ್ಯೆಗೆ ಸ್ಕೆಚ್ ಹಾಕ್ತಾರಂದ್ರೆ ನಮ್ಮ ದೇಶ ಯಾವ ಸ್ಥಿತಿಯಲ್ಲಿದೆಯೆಂಬ ಪ್ರಶ್ನೆ ಹುಟ್ಟುತ್ತೆ: ಬರಗೂರು ರಾಮಚಂದ್ರಪ್ಪ

    ಸಾಹಿತಿಗಳ ಹತ್ಯೆಗೆ ಸ್ಕೆಚ್ ಹಾಕ್ತಾರಂದ್ರೆ ನಮ್ಮ ದೇಶ ಯಾವ ಸ್ಥಿತಿಯಲ್ಲಿದೆಯೆಂಬ ಪ್ರಶ್ನೆ ಹುಟ್ಟುತ್ತೆ: ಬರಗೂರು ರಾಮಚಂದ್ರಪ್ಪ

    ಬೆಂಗಳೂರು: ಸಾಹಿತಿಗಳ ಹತ್ಯೆಗೆ ಸ್ಕೆಚ್ ಹಾಕ್ತಾರೆ ಅಂದ್ರೆ ನಮ್ಮ ದೇಶ ಯಾವ ಸ್ಥಿತಿಯಲ್ಲಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಅಸಮಾಧಾನ ಹೊರಹಾಕಿದ್ದಾರೆ.

    ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಾಹಿತಿ, ಇದೊಂದು ಸೌಜನ್ಯಯುತವಾದ ಭೇಟಿಯಾಗಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಭಿನಂದಿಸಿದ್ದೇನೆ. ಇತ್ತ ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಹೀಗಾಗಿ ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

    ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು ಎಂಬ ವಿಷಯ ಮುಖ್ಯ. ಆ ವ್ಯಕ್ತಿ ಯಾವ ಧರ್ಮಕ್ಕೆ ಸೇರಿದವನು ಅನ್ನೋದು ಮುಖ್ಯವಲ್ಲ. ಹಿಟ್ ಲಿಸ್ಟ್ ನಲ್ಲಿ ನನ್ನ ಹೆಸರು ಇರೋದರ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ನಾನು ಯಾರ ವಿರೋಧಿಯೂ ಅಲ್ಲ. ಅದು ಹಿಂದೂ ಆಗಿರಬಹುದು ಅಥವಾ ಮುಸ್ಲಿಂ ಆಗಿರಬಹುದು, ಕೋಮುವಾದವನ್ನು ನಾನು ವಿರೋಧಿಸುತ್ತೇನೆ. ಸದ್ಯ ನನ್ನ ಮನೆಯ ಬಳಿ ಒಬ್ಬ ಗನ್ ಮ್ಯಾನ್ ಇದ್ದಾರೆ. ಸೂಕ್ತ ಭದ್ರತೆ ನೀಡಿದ್ದಾರೆ ಎಂದು ಹೇಳಿದರು.

  • ಪಠ್ಯಪುಸ್ತಕದಲ್ಲಿ ಸೈನಿಕರಿಗೆ ಅವಮಾನ- ತೀವ್ರ ಟೀಕೆ ಬಳಿಕ ಬರಗೂರು ಪಠ್ಯ ತೆಗೆದ ಮಂಗ್ಳೂರು ವಿವಿ

    ಪಠ್ಯಪುಸ್ತಕದಲ್ಲಿ ಸೈನಿಕರಿಗೆ ಅವಮಾನ- ತೀವ್ರ ಟೀಕೆ ಬಳಿಕ ಬರಗೂರು ಪಠ್ಯ ತೆಗೆದ ಮಂಗ್ಳೂರು ವಿವಿ

    ಮಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬರೆದ ಸೈನಿಕರನ್ನು ಅವಹೇಳನ ಮಾಡುವಂತಹ ಯುದ್ಧ ಒಂದು ಉದ್ಯಮ ಎಂಬ ಗದ್ಯವನ್ನು ಕೊನೆಗೂ ಹಿಂಪಡೆಯಲು ಮಂಗಳೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.

    ಮಂಗಳೂರು ವಿಶ್ವವಿದ್ಯಾನಿಲಯದ ಈ ವರ್ಷದ ಶೈಕ್ಷಣಿಕ ವರ್ಷದ ಬಿಸಿಎ ಪದವಿಯ ಮೊಲದ ಸೆಮಿಸ್ಟರ್ ಕನ್ನಡ ಭಾಷಾ ಪುಸ್ತಕದಲ್ಲಿ `ಯುದ್ಧ ಒಂದು ಉದ್ಯಮ’ ಅನ್ನುವ ಬರಗೂರು ರಾಮಚಂದ್ರಪ್ಪನವರ ಗದ್ಯದಲ್ಲಿ ಸೈನಿಕರು ಅತ್ಯಾಚಾರಿಗಳು, ಅವರು ಗಡಿಭಾಗದಲ್ಲಿ ಯುದ್ಧದ ಸಂದರ್ಭ ಅತ್ಯಾಚಾರ ಮಾಡುತ್ತಾರೆ ಎಂದು ವಿವಾದಾತ್ಮಕವಾಗಿ ಬಿಂಬಿಸಲಾಗಿತ್ತು. ಇದು ಭಾರೀ ವಿವಾದಕ್ಕೀಡಾಗಿದ್ದರಿಂದ ಇದೀಗ ಮಂಗಳೂರು ವಿವಿ ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ ಸಭೆ ನಡೆಸಿದ್ದು, ಈ ಪಾಠವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆ.

    ಇದನ್ನೂ ಓದಿ: ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

    ಬರಗೂರು ಅವರ ಈ ಲೇಖನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದನ್ನು ಅಳೆದು ತೂಗಿ ಪಠ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಈ ವರ್ಷ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಲಾಗಿತ್ತು. ಆಗ ವಿದ್ಯಾರ್ಥಿಗಳಿಂದಾಗಲಿ, ಶಿಕ್ಷಕರಿಂದಾಗಲಿ ವಿರೋಧ ವ್ಯಕ್ತವಾಗಿಲ್ಲ. ಇದೀಗ ಸೈನಿಕರಿಗೆ ಅವಮಾನವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ಬಳಿಕ ಚರ್ಚೆಯಾಗಿ ಸೈನಿಕರ ಭಾವನೆಗಳಿಗೆ ಗೌರವಕೊಟ್ಟು ಪಠ್ಯವನ್ನು ಹಿಂಪಡೆಯಲಾಗಿದೆ.

    ಈ ಪಠ್ಯದಿಂದ ಮುಂದಿನ ಪರೀಕ್ಷೆಗೆ ಯಾವುದೇ ಪ್ರಶ್ನೆಗಳು ಬರೋದಿಲ್ಲ, ಮಾತ್ರವಲ್ಲ ಮುಂದಿನ ವರ್ಷದಿಂದ ಮುದ್ರಣ ಮಾಡಲಾಗುವುದಿಲ್ಲ ಎಂದು ಪಠ್ಯ ಪುಸ್ತಕ ಮುದ್ರಣ ಸಮಿತಿ ಸ್ಪಷ್ಟಪಡಿಸಿದೆ.

  • ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

    ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

    ಬೆಂಗಳೂರು: ಬರಗೂರು ರಾಮಚಂದ್ರಪ್ಪನವರು ಬರೆದ ಪಾಠದಲ್ಲಿ ಸೈನಿಕರಿಗೆ ಅವಮಾನ ಮಾಡುವ ವಿಚಾರ ಉಲ್ಲೇಖವಾಗಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಪಠ್ಯಪುಸ್ತಕ ಕಾರ್ಯನಿರ್ವಹಕ ಸಂಪಾದಕರಾಗಿರುವ ಡಾ. ನಾಗಪ್ಪ ಗೌಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಒಂದು ಪದವನ್ನು ನೋಡಿಕೊಂಡು ಸಂಪೂರ್ಣ ಗದ್ಯದ ಮೇಲೆ ಆರೋಪ ಎಸಗುವುದು ಸರಿಯಲ್ಲ. ಸೈನ್ಯಕ್ಕೆ ಸೇರಿದ್ದ ಗೆಳೆಯರೊಬ್ಬರ ಅಭಿಪ್ರಾಯವನ್ನು ಆಧಾರಿಸಿ ಈ ಪಠ್ಯವನ್ನು ಬರೆದಿದ್ದಾರೆ. ಪಠ್ಯದಲ್ಲಿ ಎಲ್ಲೂ ಭಾರತೀಯ ಸೇನೆ ಎಂದು ಉಲ್ಲೇಖವಾಗಿಲ್ಲ. ಇಡೀ ವಿಶ್ವದಲ್ಲಿ ಆಗುತ್ತಿರುವ ವಿಚಾರವನ್ನು ನೋಡಿಕೊಂಡು ಈ ಗದ್ಯವನ್ನು ಬರೆದಿದ್ದಾರೆ ಎಂದು ಅವರು ಹೇಳಿದರು.

    ವೈಚಾರಿಕ ಲೇಖನವಾಗಿರುವ ಈ ಗದ್ಯದಲ್ಲಿ, ಯೋಧರಿಗೆ ಅವಮಾನ ಮಾಡುವ ಬರಹವನ್ನು ಬರಗೂರು ಅವರು ಬರೆದಿಲ್ಲ ಎಂದು ನಾಗಪ್ಪ ಗೌಡ ಸ್ಪಷ್ಟನೆ ನೀಡಿದರು.

    ಏನಿದು ವಿವಾದ?: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಯೋಧರಿಗೆ ಅವಮಾನ ಎಸಗುವ ಪಠ್ಯವನ್ನು ಬೋಧಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯವನ್ನು ಈ ವರ್ಷದಿಂದ ಪ್ರಥಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ಸೇರಿದಂತೆ ವಿವಿಧ ತರಗತಿಗಳಿಗೆ ಬೋಧಿಸಲಾಗುತ್ತಿದ್ದು, ಈ ಪಾಠದಲ್ಲಿ ಯೋಧರನ್ನು ಮತ್ತು ಯುದ್ಧವನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಮೂಲಕ ಹೊರಬಂದ ಪುಸ್ತಕದಲ್ಲಿ ಯುದ್ಧ ಅಂದ್ರೆ ಒಂದು ಉದ್ಯಮ, ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತದೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೆ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಮೂಡಿಸಿ ಭ್ರಮೆ ಸೃಷ್ಠಿಸಲಾಗುತ್ತಿದೆ. ಯುವ ಮನಸ್ಸುಗಳಿಗೆ ಯುದ್ಧ ಮತ್ತು ದೇಶದ ಬಗ್ಗೆ ಕೀಳಾಗಿ ಬಿಂಬಿಸುವ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಪಠ್ಯದಲ್ಲಿ ಬರೆಯಲಾಗಿದೆ.

    ಬರಗೂರು ಅವರ ಈ ಗದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಒಟ್ಟು 12 ಗದ್ಯಗಳಿದ್ದು ಬರಗೂರು ರಾಮಚಂದ್ರಪ್ಪ ಅವರದ್ದು 10ನೇ ಗದ್ಯವಾಗಿದೆ.