Tag: Bannerghatta Park

  • ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    – ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್‌ನಿಂದ ಕಳಿಸಲಾಗಿದ್ದ ಶೆರಿಯಾರ್‌ ಸಿಂಹ

    ಚೆನ್ನೈ/ಬೆಂಗಳೂರು: ತಮಿಳುನಾಡಿನ ವಂಡಾಲೂರು ಮೃಗಾಲಯಕ್ಕೆ (Vandalur Zoo) ಬೆಂಗಳೂರಿನಿಂದ ಕಳಿಸಲಾಗಿದ್ದ ಸಿಂಹವೊಂದು ರಾತ್ರೋರಾತ್ರಿ ನಾಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. 2‌ ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಶೆರಿಯಾರ್ ಹೆಸರಿನ 5 ವರ್ಷದ ಗಂಡು ಸಿಂಹವನ್ನು (Lion Sheryaar) ಗುರುವಾರ (ಅ.02) ಮೊದಲ ಬಾರಿಗೆ ಸಫಾರಿ ವಲಯಕ್ಕೆ ಬಿಡಲಾಗಿತ್ತು. ಆದರೆ, ನಿಗದಿತ ಸಮಯ ಕಳೆದರೂ ಸಿಂಹ ಮಾತ್ರ ಬೋನಿಗೆ ವಾಪಸ್ಸಾಗಲಿಲ್ಲ. ಶನಿವಾರ ಸಂಜೆಯವರೆಗೂ ಸಿಂಹ ಬೋನಿಗೆ ಹಿಂತಿರುಗಲಿಲ್ಲ ಎಂದು ವರದಿಯಾಗಿತ್ತು. ಇದರಿಂದ ಆಘಾತಗೊಂಡ ಮೃಗಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕಾಗಿ ರಾಯಚೂರಿನಿಂದ ಕೊಪ್ಪಳಕ್ಕೆ 200 ಬಸ್ – ಇತ್ತ ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ

    ನಾಪತ್ತೆಯಾಗಿದ್ದ ಶೆರಿಯಾರ್‌ ಸಿಂಹವನ್ನು ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ದತ್ತು ಪಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೃಗಾಲಯದ ಸಿಬ್ಬಂದಿ ಮತ್ತು ವಿಶೇಷ ತಂಡ ರಾತ್ರಿಯಿಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. ಅಕ್ಟೋಬರ್ 4 ರಂದು ಶೆರಿಯಾ‌ರ್ ಸಿಂಹ ಸಫಾರಿ ವಲಯದೊಳಗೆ ಕಾಣಿಸಿಕೊಂಡ ಬಳಿಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ

    ಶೆರಿಯಾರ್‌ ಸಿಂಹವನ್ನು 2023ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 2023ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಿಂದ ವಂಡಲೂರಿಗೆ ತರಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

  • ಇಸ್ರೇಲ್‍ನಿಂದ ತಂದಿದ್ದ ಜೀಬ್ರಾ ಬನ್ನೇರುಘಟ್ಟದಲ್ಲಿ ಸಾವು

    ಇಸ್ರೇಲ್‍ನಿಂದ ತಂದಿದ್ದ ಜೀಬ್ರಾ ಬನ್ನೇರುಘಟ್ಟದಲ್ಲಿ ಸಾವು

    ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗಂಡು ಜೀಬ್ರಾ ಏಕಾಏಕಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಇಸ್ರೇಲ್ ನಿಂದ ಪ್ರಾಣಿಯ ವಿನಿಮಯ ಒಪ್ಪಂದದ ಅಡಿಯಲ್ಲಿ 4 ವರ್ಷಗಳ ಹಿಂದೆ ಎರಡು ಹೆಣ್ಣು, ಎರಡು ಗಂಡು ಜೀಬ್ರಾಗಳನ್ನು ತರಲಾಗಿತ್ತು. ಈ ತಂಡದಲ್ಲಿ ಇದ್ದ ಗಂಡು ಜೀಬ್ರಾ ಸಾವನ್ನಪ್ಪಿರುವುದಕ್ಕೆ ಪ್ರಾಣಿ ಪ್ರೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಇಸ್ರೇಲ್ ನಿಂದ ತಂದಿದ್ದ ಜೀಬ್ರಾಗಳಲ್ಲಿ ಕಳೆದ ವರ್ಷವಷ್ಟೇ ಗರ್ಭಿಣಿಯಾಗಿದ್ದ ಜೀಬ್ರಾವೊಂದು ಗಿಡ ನೆಡಲು ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಆದಾದ ಒಂದು ವರ್ಷದ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ. ಉದ್ಯಾನವನದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಂದು ಜೀಬ್ರಾ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ.

    ಜೀಬ್ರಾ ಸಾವಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ಯನ್ನು ಉದ್ಯಾನವನದ ವೈದ್ಯರ ತಂಡ ಕೈಗೊಂಡಿದ್ದು, ಇದೀಗ ಉದ್ಯಾನವನದಲ್ಲಿ ವಿದೇಶದಿಂದ ತರಲಾಗಿರುವ ನಾಲ್ಕು ಜೀಬ್ರಾಗಳಲ್ಲಿ ಕೇವಲ 2 ಜೀಬ್ರಾಗಳು ಮಾತ್ರ ಉಳಿದಿವೆ.

    ಜೀಬ್ರಾ ಬಂದ ಆರಂಭದಲ್ಲಿ ಇವುಗಳನ್ನು ಪ್ರತ್ಯೇಕವಾಗಿ ಇರಿಸಿ ನೋಡಲಾಗಿತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕವೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

  • ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನ

    ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನ

    ಬೆಂಗಳೂರು: ನಗರದ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯ ಜೀವಿಗಳನ್ನು ಕಂಡು ಸಂತಸಗೊಳ್ಳುತ್ತಾರೆ. ಇದೀಗ ಪಾರ್ಕ್ ಗೆ ಹೊಸ ಅತಿಥಿ ಆಗಮನವಾಗಿದ್ದು. ಸಾಕಷ್ಟು ಪ್ರಾಣಿಪ್ರಿಯರನ್ನು ಸೆಳೆಯುತ್ತಿದೆ

    ಉದ್ಯಾನವನದ ಆನೆ ಕ್ಯಾಂಪ್ ನಲ್ಲಿರುವ ನಿಸರ್ಗ ಎಂಬ ಆನೆ ಕಳೆದ 20 ದಿನಗಳ ಹಿಂದೆ ಗಂಡು ಮರಿಗೆ ಜನ್ಮ ನೀಡಿದ್ದು, ಇಷ್ಟು ದಿನ ತಾಯಿಯ ಆರೈಕೆಯಲ್ಲಿದ್ದ ಮರಿ ಆನೆಯನ್ನು ಪಾರ್ಕ್ ಸಿಬ್ಬಂದಿ ಪ್ರವಾಸಿಗರ ವೀಕ್ಷಣೆಗೆ ಬಿಟ್ಟಿರುವುದರಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆನೆ ಕ್ಯಾಂಪ್ ನಲ್ಲಿ 22 ಆನೆಗಳಿದ್ದು, ಇದೀಗ ಈ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ತಾಯಿ ಮಗನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಪಾರ್ಕ್ ಸಿಬ್ಬಂದಿ ತಾಯಿ ನಿಸರ್ಗಾಗೆ ಹುಲ್ಲು ಹಾಗು ಬೆಲ್ಲದ ಜೊತೆಗೆ ವಿವಿಧ ಬಗೆಯ ಕಾಳುಗಳ ಆಹಾರ ನೀಡುತ್ತಿದ್ದಾರೆ.

    ಉದ್ಯಾನವನದಲ್ಲಿ ಇತರೇ ಪ್ರಾಣಿಗಳಿಗಿಂತ ಆನೆಗಳು ಹೆಚ್ಚು ಅಕರ್ಷಣಿಯವಾಗಿದ್ದು, ಇದೀಗ ಇದರ ಸೊಬಗನ್ನು ಮರಿ ಆನೆ ಮತ್ತಷ್ಟು ಹೆಚ್ಚಿಸಿದೆ. ಮರಿ ಆನೆಯ ಮತ್ತಷ್ಟು ತುಂಟಾಟವನ್ನು ನೋಡಲು ನೀವು ಒಮ್ಮೆ ಬನ್ನೇರುಘಟ್ಟ ಆನೆ ಕ್ಯಾಂಪ್ ಗೆ ಭೇಟಿ ನೀಡಬಹುದು.