Tag: Bank of Maharashtra

  • ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ಮುಂಬೈ: ವಾಟ್ಸಪ್‌ಲ್ಲಿ ವೆಡ್ಡಿಂಗ್ ಕಾರ್ಡ್ (Wedding Card) ಬಂದ ತಕ್ಷಣ ಕ್ಲಿಕ್ ಮಾಡೋಕು ಮುನ್ನ ಎಚ್ಚರವಿರಲಿ. ಹೌದು, ಸರ್ಕಾರಿ ನೌಕರರೊಬ್ಬರು ವಾಟ್ಸಪ್‌ನಲ್ಲಿ (Whatsapp) ಬಂದಿದ್ದ ವೆಡ್ಡಿಂಗ್ ಕಾರ್ಡ್‌ನ್ನು ಕ್ಲಿಕ್ ಮಾಡಿ ಸುಮಾರು 1.90 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಹಿಂಗೋಲಿ (Hingoli) ಜಿಲ್ಲೆಯಲ್ಲಿ ನಡೆದಿದೆ.

    ಸೈಬರ್ ವಂಚನೆಗೊಳಗಾದ ವ್ಯಕ್ತಿಗೆ ಆ.20ರಂದು ವಾಟ್ಸಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಮೆಸೇಜ್ ಬಂದಿತ್ತು. ಸಂದೇಶದಲ್ಲಿ 30/08/2025ರಂದು ಮದುವೆಗೆ ತಪ್ಪದೇ ಬರಬೇಕು. ಪ್ರೀತಿಯು ಸಂತೋಷದ ದ್ವಾರವನ್ನು ತೆರೆಯುವ ಕೀಲಿ ಕೈಯಾಗಿದೆ ಎಂದು ಬರೆದಿದ್ದರು. ಜೊತೆಗೆ ಪಿಡಿಎಫ್ ಫೈಲ್‌ವೊಂದನ್ನು ಕಳುಹಿಸಿದ್ದರು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

    ಪಿಡಿಎಫ್ ಫೈಲ್‌ನ್ನು ಓಪನ್ ಮಾಡಿದ ತಕ್ಷಣವೇ ಸೈಬರ್ ವಂಚಕರು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 1,90,000 ರೂ.ಯನ್ನು ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ವಂಚನೆಗೊಳಗಾದ ವ್ಯಕ್ತಿ ಹಿಂಗೋಲಿ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ದೂರು ದಾಖಲಿಸಿದ್ದು, ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ಸೈಬರ್ ವಂಚಕರು ವ್ಯಕ್ತಿಯ ಫೋನ್ ಹ್ಯಾಕ್ ಮಾಡಲು ಮತ್ತು ಮೊಬೈಲ್‌ನಲ್ಲಿನ ಡೇಟಾ ಕದಿಯಲು ಅಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

    ಈ ರೀತಿ ಬಂದ ಎಪಿಕೆ ಫೈಲ್ಸ್‌ನ್ನು ಒಮ್ಮೆ ಕ್ಲಿಕ್ ಮಾಡಿದರೆ ಮೊಬೈಲ್‌ನಲ್ಲಿ ಕೆಲವು ಫೈಲ್‌ಗಳು ಡೌನ್‌ಲೋಡ್ ಆಗುತ್ತವೆ. ಈ ಮೂಲಕ ಸೈಬರ್ ವಂಚಕರು ಮೊಬೈಲ್‌ನಲ್ಲಿನ ಎಲ್ಲಾ ಆಕ್ಟಿವಿಟಿಯನ್ನು ವೀಕ್ಷಣೆ ಮಾಡಬಹುದು. ಜೊತೆಗೆ ಫೋನ್ ಹ್ಯಾಕ್ ಮಾಡಿ, ಬೇರೆಯವರನ್ನು ವಂಚಿಸಬಹುದಾಗಿದೆ.

    ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸೈಬರ್ ಪೊಲೀಸರು ಪರಿಚಯವಿಲ್ಲದ ಮೂಲಗಳಿಂದ ಬಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸಾರ್ವಜನರಿಗೆ ಸಲಹೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.ಇದನ್ನೂ ಓದಿ: ಬೇಜವಾಬ್ದಾರಿ ಎಪಿಎಂಸಿ ಅಧಿಕಾರಿಗಳ ಅಮಾನತ್ತಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ

  • ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    – 105 ನಕಲಿ ಖಾತೆ ಓಪನ್ ಮಾಡಿಸಿ ಪಂಗನಾಮ

    ರಾಯಚೂರು: ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ 105 ನಕಲಿ ಖಾತೆ ಓಪನ್ ಮಾಡಿಸಿ, ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚಿಸಿ, ಗೋಲ್ಡೋನ್‌ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (Bank of Maharashtra) ನಡೆದಿದೆ.

    ಹೌದು, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಜಿಲ್ಲೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಹಿತ ಕಾಪಾಡಬೇಕಾದ ಬ್ಯಾಂಕ್ ಮ್ಯಾನೇಜರ್ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿ ಪರಾರಿಯಾಗಿದ್ದಾನೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ಗ್ರಾಹಕರ ಹೆಸರಲ್ಲಿ ನಕಲಿ ಖಾತೆಗಳನ್ನ (Fake Bank Accounts) ತೆಗೆದು, ಬಂಗಾರ ಅಡವಿಟ್ಟು ಗೋಲ್ಡೋನ್‌ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಹಿರಿಯ ಅಧಿಕಾರಿಗಳ ಬ್ಯಾಂಕ್ ಆಡಿಟ್ ವೇಳೆ ಸುಮಾರು 10.97 ಕೋಟಿ ರೂ. ಗೋಲ್ಮಾಲ್ ಮಾಡಿರುವುದು ಬಯಲಾಗಿದೆ.ಇದನ್ನೂ ಓದಿ:ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಆಂಧ್ರಪ್ರದೇಶ (Andhra Pradesh)ಪ್ರಕಾಶಂ ಜಿಲ್ಲೆ ಮೂಲದ ಕೆ.ನರೇಂದ್ರ ರೆಡ್ಡಿ ವಂಚಿಸಿ ಪರಾರಿಯಾಗಿರುವ ಮ್ಯಾನೇಜರ್. ಗ್ರಾಹಕರ ದಾಖಲೆಗಳನ್ನು ಪಡೆದು ಗೋಲ್ಡೋನ್‌ ಹೆಸರಿನಲ್ಲಿ ಖಾತೆ ತೆಗೆದು ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚನೆ ಮಾಡಿದ್ದಾನೆ. ಬ್ಯಾಂಕ್‌ಗೆ ಬಂದು ಮೂರು ವರ್ಷದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ ಮ್ಯಾನೇಜರ್ ಗೋಲ್ಡೋನ್‌ (Gold Loan) ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

    ಬ್ಯಾಂಕ್‌ನ ಹಣವನ್ನು 29 ನಕಲಿ ಖಾತೆಗಳಿಗೆ ಗೋಲ್ಡೋನ್‌ ಹೆಸರಿನಲ್ಲಿ ವರ್ಗಾವಣೆ ಮಾಡಿದ್ದಲ್ಲದೆ, 8 ಜನ ಸಂಬಂಧಿಕರ ಹೆಸರಿನ ಖಾತೆಗಳಿಗೂ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಆಡಿಟ್ ವೇಳೆ ಕೆ.ನರೇಂದ್ರ ರೆಡ್ಡಿಯ ಬಣ್ಣ ಬಯಲಾಗಿದ್ದು, ಆಡಿಟ್ ಆರಂಭವಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿನಲ್ ಮ್ಯಾನೇಜರ್ ಸುಚೇತ್ ಡಿಸೋಜಾ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಇದನ್ನೂ ಓದಿ:ರಾಜ್ಯ ಹವಾಮಾನ ವರದಿ 29-03-2025

  • ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ಪಣಜಿ: ಎಟಿಎಂಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಎಟಿಎಂ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ದರೋಡೆಕೋರ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಮುಖ ಸಿಸಿಟಿಯಲ್ಲಿ ಸರಿಯಾಗಿ ಕಂಡಿಲ್ಲ.

    ಸಿಸಿಟಿವಿಯಲ್ಲಿ ಏನಿದೆ?: ಸುಮಾರು 40 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ದರೋಡೆ ಮಾಡಲೆಂದು ವ್ಯಕ್ತಿಯೊಬ್ಬ ಮುಖ ಕಾಣಿಸದಂತೆ ಮಾಸ್ಕ್ ಹಾಕಿಕೊಂಡು ನುಗ್ಗಿದ್ದನು. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಎಟಿಎಂ ಕೊಠಡಿಯ ಒಳಗೆ ತೆರಳಿ ಯಾವುದೇ ಆಯುಧಗಳಿಲ್ಲದೇ ಆತನ ಮೇಲೆ ದಾಳಿ ಮಾಡಿದ್ದಾರೆ. ತನ್ನ ಕಳ್ಳತನದ ವಿಚಾರ ತಿಳಿದ ಸೆಕ್ಯೂರಿಟಿ ಗಾರ್ಡ್ ಮೇಲೆ ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್ ಘಟನೆಯಿಂದ ಗಾಯಗೊಂಡ್ರೂ ಕೂಡ ದರೋಡೆಕೋರನ ಮುಖದಲ್ಲಿರೋ ಮಾಸ್ಕ್ ತೆಗೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ಆತನ ಕೈಯಲಿದ್ದ ಸುತ್ತಿಗೆಯನ್ನು ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರ ಹಲವು ಬಾರಿ ಸೆಕ್ಯೂರಿಟಿಯ ತೆಲೆಗೆ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಕೆಳಗೆ ಬಿದ್ದಿದ್ದಾರೆ. ಆದ್ರೂ ಬಿಡದೆ ಸೆಕ್ಯೂರಿಟಿ ದರೋಡೆಕೋರನ ಮುಖದ ಮೇಲಿದ್ದ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರೋ ಮಾಸ್ಕ್ ಕಳಚುತ್ತಿದ್ದಂತೆಯೇ ಸೆಕ್ಯುರಿಟಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಸದ್ಯ ಪೊಲೀಸರು ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ದರೋಡಕೋರನಿಗಾಗಿ ಬಲೆಬೀಸಿದ್ದಾರೆ.