Tag: Banglow

  • ವಾರ್ಡ್ ಅಭಿವೃದ್ಧಿ ಮಾಡದೆ ಸಂಬಂಧಿ ಮನೆ ರೋಡಿಗೆ ಟಾರ್- ಜನರ ದುಡ್ಡಲ್ಲಿ ಕೈ ಕಾರ್ಪೊರೇಟರ್ ಗಳ  ಜಾತ್ರೆ

    ವಾರ್ಡ್ ಅಭಿವೃದ್ಧಿ ಮಾಡದೆ ಸಂಬಂಧಿ ಮನೆ ರೋಡಿಗೆ ಟಾರ್- ಜನರ ದುಡ್ಡಲ್ಲಿ ಕೈ ಕಾರ್ಪೊರೇಟರ್ ಗಳ ಜಾತ್ರೆ

    ಬೆಂಗಳೂರು: ಕೆ.ಆರ್ ಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರು ದೋಸ್ತಿಗಳಾಗಿದ್ದು, ಈ ಇಬ್ಬರೂ ತಮ್ಮ ವಾರ್ಡ್‍ಗೆ ಮೂಲಸೌಕರ್ಯ ಅಭಿವೃದ್ಧಿ ಮಾಡದೇ ತಮ್ಮ ಸಂಬಂಧಿಕರ ಮನೆಯ ರೋಡಿಗೆ ಟಾರ್ ಹಾಕಿಸಿದ್ದಕ್ಕೆ ಜನರಿಂದ ಆಕ್ರೋಶ ಕೇಳಿಬಂದಿದೆ.

    ಹೌದು. ಬೆಂಗಳೂರಿನ ಬಸವನಪುರ ವಾರ್ಡ್ ಸಂಖ್ಯೆ 53ರಲ್ಲಿರುವ ಸಾಯಿ ಸೆರೆನಿಟಿ ಎಂಬ ಖಾಸಗಿ ಲೇಔಟ್‍ನಲ್ಲಿರೋ ರಸ್ತೆಗೆ ಇದೀಗ ತಾನೇ ಟಾರ್ ಹಾಕಿದ್ದಾರೆ. ಹಾಗೇ ಈ ರಸ್ತೆಯಲ್ಲಿ ನಡೆದು ಹೋದ್ರೆ ಒಂದು ಭವ್ಯ ಬಂಗಲೆ ಎದುರಾಗುತ್ತದೆ. ಅಷ್ಟಕ್ಕೂ ಈ ಬಂಗಲೆ ಯಾವುದೋ ವಿವಿಐಪಿಯದ್ದಲ್ಲ. ಆದರೂ ಈ ಬಂಗಲೆ ಇರುವ ರಸ್ತೆಗೆ ಮಾತ್ರ ಟಾರ್ ಇದೆ ಅಂದ್ರೆ ಎಂಥವರಿಗೂ ಅನುಮಾನ ಬರದೇ ಇರಲ್ಲ.


    ಕಾರ್ಪೊರೇಟರ್ ಬಿ.ಎನ್ ಜಯಪ್ರಕಾಶ್ ಅವರ ಕ್ಷೇತ್ರದಲ್ಲಿ ಈ ರಸ್ತೆ ಬರುತ್ತದೆ. ಬಂಗಲೆ ಡಾ ರಮೇಶ್ ಅನ್ನೋರದ್ದಾಗಿದೆ. ಡಾ ರಮೇಶ್ ಬೇರಾರೂ ಅಲ್ಲ, ದೇವಸಂದ್ರ ವಾರ್ಡ್ ಸಂಖ್ಯೆ 55ರ ಕಾರ್ಪೊರೇಟರ್ ಶ್ರೀಕಾಂತ್ ಅವರ ಅಣ್ಣ. ಈ ಕಾರಣಕ್ಕೆ ಡಾ.ರಮೇಶ್ ಮನೆ ಇರುವ ರಸ್ತೆಗೆ ಮಾತ್ರ ಕಾರ್ಪೊರೇಟರ್ ಜಯಪ್ರಕಾಶ್ ಬಿಬಿಎಂಪಿಯಿಂದ ಟಾರ್ ಹಾಕಿಸಿಕೊಟ್ಟಿದ್ದಾರೆ. ಮುಂದಿನ ವಾರ ಈ ಬಂಗಲೆಯ ಗೃಹಪ್ರವೇಶ ಇದೆ. ಗೃಹಪ್ರವೇಶಕ್ಕೆ ಬರುವ ಅತಿಥಿಗಳಿಗಾಗಿ ರಸ್ತೆಗೆ ಟಾರ್ ಹಾಕಿಸಲಾಗಿದೆ. ಮೂರು ದಿನಗಳ ಹಿಂದೆ ಬಸವನಪುರ ವಾರ್ಡ್ ಬಿಬಿಎಂಪಿ ಎಂಜಿನಿಯರ್ ಖುದ್ದು ನಿಂತು ರಸ್ತೆಗೆ ಟಾರ್ ಹಾಕಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ದುರಂತ ಅಂದ್ರೆ ಇದೇ ಲೇಔಟ್‍ನ ಉಳಿದ ರಸ್ತೆಗಳು ಟಾರ್ ಕಾಣದೇ ಗುಂಡಿಗಳಿಂದ ತುಂಬಿಹೋಗಿವೆ. ಅಲ್ಲಿಗೆಲ್ಲ ಟಾರ್ ಹಾಕದ ಈ ಜನಪ್ರತಿನಿಧಿಗಳು ತಮ್ಮ ಸಂಬಂಧಿ ಮನೆ ಇರುವ ರಸ್ತೆಗೆ ಮಾತ್ರ ಟಾರ್ ಹಾಕ್ಸಿದ್ದು ಎಷ್ಟು ಸರಿ? ಬಸವನಪುರ ಮತ್ತು ದೇವಸಂದ್ರ ವಾರ್ಡ್‍ಗಳಲ್ಲಿ ನೀರು, ರಸ್ತೆ, ಕಸದ ಸಮಸ್ಯೆ ಬೇಜಾನ್ ಇದೆ. ಇಷ್ಟಿದ್ರೂ ತಲೆಕೆಡಿಸಿಕೊಳ್ಳದ ಇವರು ತಮ್ಮ ಸ್ವಾರ್ಥಕ್ಕೆ ಜನರ ತೆರಿಗೆ ದುಡ್ಡನ್ನು ಉಡಾಯಿಸಿದ್ದಾರೆ ಎಂದು ನಿವಾಸಿಗಳು ಶಾಪ ಹಾಕ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೆಂಗ್ಳೂರಿನಲ್ಲಿ ನೇಪಾಳ ಮೂಲದ ಯುವತಿ ಮೇಲೆ 6 ಮಂದಿಯಿಂದ ಗ್ಯಾಂಗ್ ರೇಪ್

    ಬೆಂಗ್ಳೂರಿನಲ್ಲಿ ನೇಪಾಳ ಮೂಲದ ಯುವತಿ ಮೇಲೆ 6 ಮಂದಿಯಿಂದ ಗ್ಯಾಂಗ್ ರೇಪ್

    ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ನೇಪಾಳ ಮೂಲದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

    ಹೀಗೆ ಪಾಳುಬಿದ್ದಿರುವ ಬಂಗಲೆಗೆ ನೇಪಾಳ ಮೂಲದ ಯುವತಿಯನ್ನು ಅಪಹರಿಸಿಕೊಂಡು ಬಂದು ಅತ್ಯಾಚಾರ ನಡೆಸಿರುವ ಘಟನೆ ನಡೆದಿರೋದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅವಡದೇನಹಳ್ಳಿಯಲ್ಲಿ. ಕಳೆದ ಮೂರು ದಿನಗಳ ಹಿಂದೆ ಆರು ಯುವಕರ ಗುಂಪೊಂದು ನೇಪಾಳಿ ಯುವತಿಯನ್ನು ಇಲ್ಲಿಗೆ ಕರೆ ತಂದು ಅತ್ಯಾಚಾರವೆಸಗಿ ಕೊನೆಯಲ್ಲಿ ಯುವತಿ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಮುಂಜಾನೆ ಯುವತಿ ನೋವಿನಿಂದ ಕಿರುಚಿಕೊಂಡು ರಸ್ತೆಗೆ ಬಂದಾಗ ಯುವತಿಯನ್ನು ಕಂಡ ಎನ್‍ಜಿಓ ಒಂದರ ಕಾರ್ಯಕರ್ತರಾದ ಪಾರಿಜಾತ ಮತ್ತು ಶಂಕರ್ ಕೂಡಲೇ 108 ಅಂಬ್ಯುಲೆನ್ಸ್ ಮುಖಾಂತರ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಯುವತಿ ಈಗ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದಕ್ಕೂ ಮುನ್ನ ಯುವತಿ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದಳೆಂದು ತಿಳಿದು ಬಂದಿದೆ.

    ವಿಷಯ ತಿಳಿದ ಬೆಂಗಳೂರು ಗ್ರಾಮಾಂತರ ಎಸ್.ಪಿ ಅಮಿತ್ ಸಿಂಗ್ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯಿಂದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾಮುಕರಿಗಾಗಿ ಬಲೆ ಬೀಸಿದ್ದಾರೆ.

                                                                ಶಂಕರ್
                                                                                    ಪಾರಿಜಾತ