Tag: bangladesh

  • ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

    ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

    ಚಿತ್ರದುರ್ಗ: ನಗರದ ಮೂರು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, 6 ಜನ ಆರೋಪಿಗಳನ್ನು ಬಂಧಿಸಿ, 6 ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ.

    ಬಾಂಗ್ಲಾದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲ್ಪಟ್ಟ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಒಡನಾಡಿ ಸಂಸ್ಥೆಯು ಬಾಂಗ್ಲಾದೇಶದ ಬಾಲಕಿಯೊಬ್ಬಳನ್ನು ವಿಚಾರಿಸಿ, ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.

    ನಗರದ ಆದರ್ಶ, ಅನುಗ್ರಹ ಮತ್ತು ರಾಜಧಾನಿ ಲಾಡ್ಜ್‌ಗಳಲ್ಲಿ ಬಾಂಗ್ಲಾದೇಶದ ಯುವತಿಯರನ್ನು ಇರಿಸಿ, ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಇಂದು ಡಿವೈಎಸ್‍ಪಿ ಸಂತೋಷ್ ಖಚಿತ ಪಡಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ 3 ಲಾಡ್ಜ್‌ಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದರು.

    ದಾಳಿಯಲ್ಲಿ ಅಕ್ರಮವಾಗಿ ದೇಶದ ಒಳಗೆ ನುಸುಳಿ ಬಂದಿರುವ ಬಾಂಗ್ಲಾದೇಶ ಮೂಲದ 6 ಜನ ಯುವತಿಯರನ್ನು ರಕ್ಷಿಸಿದ ಪೊಲೀಸರು, ಸ್ಥಳದಲ್ಲಿಯೇ 3 ಜನರನ್ನು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಮತ್ತೇ ಮೂವರನ್ನು ಬಂಧಿಸಿದ್ದಾರೆ. ಲಾಡ್ಜ್‌ಗಳ ಮಾಲೀಕರು ಲಾಡ್ಜ್‌ನ ಸ್ನಾನದ ಕೊಠಡಿ ಹಾಗೂ ರೂಮ್‍ಗಳ ಕಿಂಡಿಗಳಲ್ಲಿ ಯುವತಿಯರನ್ನು ಬಚ್ಚಿಟ್ಟು, ವೇಶ್ಯವಾಟಿಕೆ ನಡೆಸುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಎರಡು ವರ್ಷಗಳ ಹಿಂದೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಅನುಗ್ರಹ ಲಾಡ್ಜ್‌ನ ಮೇಲೆ ಪೊಲೀಸರು ದಾಳಿ ನಡೆಸಿ, ಲಾಡ್ಜ್‌ನನ್ನು ಸೀಜ್ ಮಾಡಿದ್ದರು. ಮೊದಲೆಲ್ಲ ವಿವಿಧ ರಾಜ್ಯಗಳಿಂದ ಮಹಿಳೆಯನ್ನು ಕರೆತಂದು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಮಹಿಳೆಯರನ್ನು ಲಾಡ್ಜ್ ಮಾಲೀಕರು ಇರಿಸಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವೇಶ್ಯಾವಾಟಿಕೆ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.

  • ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

    ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

    ನವದೆಹಲಿ: ಚೊಚ್ಚಲ ಏಷ್ಯಾ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ ಹಾಗೂ ಬಾಂಗ್ಲಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಜು ಜೈನ್ ಪಾತ್ರ ಮಹತ್ವದಾಗಿದೆ.

    ಆರು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಏಷ್ಯಾ ಕಪ್ ಟೂರ್ನಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಬಾಂಗ್ಲಾ ವಿರುದ್ಧ ಸೋಲುಂಡಿತ್ತು. ಬಾಂಗ್ಲಾ ಮಹಿಳಾ ತಂಡದ ಈ ಸಾಧನೆಯ ಹಿಂದೆ ಕೋಚ್ ಅಂಜು ಜೈನ್ ರ ಶ್ರಮ ಕಾಣಸಿಗುತ್ತದೆ.

    ಅಂದಹಾಗೇ ಅಂಜು ಜೈನ್ ಟೀಂ ಇಂಡಿಯಾದ ಮಾಜಿ ಆಟಗಾರ್ತಿಯಾಗಿದ್ದು, 8 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 2012 ರ ಟಿ20 ವಿಶ್ವಕಪ್ ಹಾಗೂ 2013 ರ ವಿಶ್ವಕಪ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಏಕದಿನದಲ್ಲಿ 1,729 ರನ್ ಹಾಗೂ ಟೆಸ್ಟ್ ನಲ್ಲಿ 441 ರನ್ ಗಳಿಸಿದ್ದಾರೆ. ಬಾಂಗ್ಲಾ ಮಹಿಳಾ ತಂಡದ ಕೋಚ್ ಆಗಿದ್ದ ಇಂಗ್ಲೆಂಡ್ ಆಲೌಂಡರ್ ಡೇವಿಡ್ ಕ್ಯಾಪೆಲ್ ರ ಸ್ಥಾನಕ್ಕೆ ಮೇ 21 ರಂದು ಅಂಜು ಜೈನ್ ಆಯ್ಕೆ ಆಗಿದ್ದರು.

    ಈ ಕುರಿತು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಂಜು ಜೈನ್, ತಾವು ಕೋಚ್ ಆಗಿ ಆಯ್ಕೆ ಆದ ಸಂದರ್ಭದಲ್ಲಿ ತಂಡದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಆಟಗಾರರಲ್ಲಿ ಮೊದಲು ನೈತಿಕ ಧೈರ್ಯ ತುಂಬುವುದೇ ನನ್ನ ಕಾರ್ಯವಾಗಿತ್ತು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 112 ರನ್ ಗಳಿಗೆ ಕಟ್ಟಿ ಹಾಕಿದ್ದು ಮಹತ್ವದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.

    ಏಷ್ಯಾ ಕಪ್ ಗೆದ್ದಿರುವುದು ತಂಡಕ್ಕೆ ಬಹು ದೊಡ್ಡ ಸಾಧನೆಯಾದರೆ, ತಮಗೆ ವೈಯಕ್ತಿಕವಾಗಿ ಸ್ಮರಣೀಯ ಘಟನೆ. ಇದಕ್ಕೂ ಮುನ್ನ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ವೇಳೆ ತಂಡದ ಕೆಲ ವೈಫಲ್ಯಗಳ ಕುರಿತು ಹೆಚ್ಚಿನ ಗಮನ ನೀಡುವುದು ಬೃಹತ್ ಸವಾಲಾಗಿತ್ತು. ಆದರೆ ಆಟಗಾರ್ತಿಯರು ತಮ್ಮ ಸಾಮಥ್ರ್ಯವನ್ನು ಗಣನೀವಾಗಿ ಉತ್ತಮ ಪಡಿಸಿಕೊಂಡಿದ್ದರು ಎಂದು ಹೇಳಿದರು.

  • ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

    ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

    ಕೌಲಾಲಂಪುರ: ಮಲೇಷಿಯಾದಲ್ಲಿ ನಡೆದ ಏಷ್ಯಾ ಕಪ್ ಟಿ-20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದ್ದು, ಈ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

    ಟೀಂ ಇಂಡಿಯಾ ನೀಡಿದ್ದ 113 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾ ಪರ ನಿಗರ್ ಸುಲ್ತಾನಾ (27) ಹಾಗೂ ರುಮಾನಾ ಅಹ್ಮದ್ (23) ಇಬ್ಬರ ಉತ್ತಮ ಆಟದ ನೆರವಿನಿಂದ ಮೂರು ವಿಕೆಟ್ ಅಂತರದ ಗೆಲುವು ಪಡೆಯಿತು. ಕೊನೆಯ ಓವರ್ ನಲ್ಲಿ ತಂಡದ ಗೆಲುವಿಗೆ 9 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ಎಸೆದ ಓವರ್ ನ ಕೊನೆಯ ಎಸೆತದಲ್ಲಿ ಎರಡು ರನ್ ಸಿಡಿಸಿದ ಜಹನ್ಸಾ ಆಲಂ ಬಾಂಗ್ಲಾ ಗೆಲುವಿನ ನಗೆ ಬೀರಲು ಕಾರಣರಾದರು. ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪೂನಂ ಯಾದವ್ 4 ಓವರ್ ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಾಯಕಿ ಹರ್ಮನ್‍ ಪ್ರೀತ್ ಕೌರ್ ಅವರ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ (56) ಸಿಡಿಸಿ ತಂಡ ಗೌರವ ಮೊತ್ತ ಗಳಿಸಲು ಕಾರಣರಾಗಿದ್ದರು. ಇನ್ನುಳಿದಂತೆ ತಂಡದ ಪರ ವೇದಾ ಕೃಷ್ಣಮೂರ್ತಿ (11), ಮಿಥಾಲಿ ರಾಜ್ (11) ಹಾಗೂ ಅಂತಿಮ ಹಂತದಲ್ಲಿ ಜೂಲನ್ ಗೋಸ್ವಾಮಿ (10) ರನ್ ಗಳಿಸಿದರು. ಸ್ಮೃತಿ ಮಂದಣ್ಣ (7), ದೀಪ್ತಿ ಶರ್ಮಾ (4), ಅನುಜಾ ಪಾಟೀಲ್ (3), ತನಿಯ ಭಾಟಿಯಾ (3), ಶಿಖಾ ಪಾಂಡೆ (1) ವೈಫಲ್ಯ ಅನುಭವಿಸಿದರು. ಇನ್ನು ಬಾಂಗ್ಲಾದೇಶದ ಪರ ರುಮಾನಾ ಅಹ್ಮದ್ ಮತ್ತು ಖದಿಜಾ ಟುಲ್ ಕುಬ್ರಾ ತಲಾ 2 ವಿಕೆಟ್ ಪಡೆದಿದ್ದು, ಜಹನ್ಸಾ ಆಲಂ ಮತ್ತು ಸಲ್ಮಾ ಕುಟನ್ ತಲಾ 1 ವಿಕೆಟ್ ಪಡೆದರು.

    ಗಾಯದ ಸಮಸ್ಯೆಯಿಂದ ಪಂದ್ಯಕ್ಕೆ ಅಲಭ್ಯರಾಗಿದ್ದ ಟೀಂ ಇಂಡಿಯಾ ವೇಗಿ ಶಿಖಾ ಪಾಂಡೆ ಭಾರತಕ್ಕೆ ಪಂದ್ಯದಲ್ಲಿ ಹಿನ್ನಡೆ ಉಂಟಾಗಲು ಪ್ರಮುಖ ಕಾರಣವಾಯಿತು. ಫೈನಲ್ ಪಂದ್ಯದ ಸೋಲಿನೊಂದಿಗೆ ಟೀಂ ಇಂಡಿಯಾ ಮಹಿಳಾ ತಂಡ ವಾರದ ಅವಧಿಯಲ್ಲಿ ಎರಡನೇ ಭಾರಿಗೆ ಬಾಂಗ್ಲಾ ವಿರುದ್ಧ ಸೋಲಿನ ಕಹಿ ಅನುಭವಿಸಿದೆ. ಭಾರತದ ಸ್ಫೋಟಕ ಆಟಗಾರ್ತಿ ಮಿಥಾಲಿ ರಾಜ್ ಬಾಂಗ್ಲಾ ವಿರುದ್ಧದ ಎರಡು ಪಂದ್ಯಗಳಲ್ಲಿ ವೈಪಲ್ಯ ಅನುಭವಿಸಿದ್ದರು.

  • ರಶೀದ್ ಖಾನ್ ಸ್ಪಿನ್ ಮೋಡಿ: ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 45 ರನ್ ಜಯ

    ರಶೀದ್ ಖಾನ್ ಸ್ಪಿನ್ ಮೋಡಿ: ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 45 ರನ್ ಜಯ

    ಡೆಹ್ರಾಡೂನ್: ಸ್ಪಿನ್ ಸೆನ್ಸೇಶನ್ ರಶೀದ್ ಖಾನ್ ಅಮೋಘ ಬೌಲಿಂಗ್ ನೆರವಿನಿಂದ ಅಫ್ಘಾನಿಸ್ತಾನ ತಂಡವು, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 45 ರನ್‍ಗಳಿಂದ ಗೆದ್ದು ಬೀಗಿದೆ.

    ಡೆಹ್ರಾಡೂನ್‍ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನವನ್ನು ತವರು ಮೈದಾನವನ್ನಾಗಿ ಆಯ್ಕೆ ಮಾಡಿದ್ದ ಬಳಿಕ ತಾನಾಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನ ಅನುಭವಿ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿತು.

    25 ಸಾವಿರ ಅಭಿಮಾನಿಗಳಿಂದ ಭರ್ತಿಯಾಗಿದ್ದ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತ್ತು. 168 ರನ್ ಚೇಸಿಂಗ್ ವೇಳೆ ಬಾಂಗ್ಲಾದೇಶ, ರಶೀದ್ ಖಾನ್ ಹಾಗೂ ಶಪೂರ್ ಝದ್ರಾನ್ ಮಾರಕ ದಾಳಿಯನ್ನು ಎದುರಿಸಲಾಗದೇ 19 ಓವರ್ ಗಳಲ್ಲಿ 122 ರನ್ ಪೇರಿಸಲಷ್ಟೇ ಶಕ್ತವಾಯಿತು. ಆ ಮೂಲಕ 45 ರನ್‍ಗಳಿಂದ ಅಸ್ಗರ್ ಬಳಗಕ್ಕೆ ಶರಣಾಯಿತು.

    3 ಓವರ್ ಗಳ ಬಿಗು ಬೌಲಿಂಗ್ ದಾಳಿಯಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟ ಖಾನ್, ಮೂರು ಪ್ರಮುಖ ವಿಕೆಟ್‍ಗಳನ್ನು ಕಿತ್ತು, ಬಾಂಗ್ಲಾ ಪಾಲಿಗೆ ವಿಲನ್ ಆದರು. ಆ ಮೂಲಕ ಟಿ20 ಕ್ರಿಕೆಟ್‍ನಲ್ಲಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಬಳಿಕ 50 ವಿಕೆಟ್ ಕಬಳಿಸಿದ ಎರಡನೇ ಅತ್ಯಂತ ಕಿರಿಯ ಬೌಲರ್ ಎಂಬ ಕೀರ್ತಿಗೂ ರಶೀದ್ ಖಾನ್ ಪಾತ್ರರಾದರು.

    ತಾನೆಸೆದ ಪ್ರಥಮ ಓವರ್ ನ ಮೊದಲೆರೆಡು ಎಸೆತಗಳಲ್ಲಿ ಖಾನ್, ಅನುಭವಿ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮುಷ್ಫಿಕುರ್ ರಹ್ಮಾನ್ ಹಾಗೂ ಶಬ್ಬೀರ್ ರಹ್ಮಾನ್ ವಿಕೆಟ್ ಪಡೆದು ತಂಡಕ್ಕೆ ಬ್ರೇಕ್ ನೀಡಿದರು. ರಶೀದ್ ಖಾನ್‍ಗೆ ಉತ್ತಮ ಸಾಥ್ ನೀಡಿದ ಶಪೂರ್ ಝದ್ರ್ರಾನ್ 40 ರನ್ ನೀಡಿ 3 ವಿಕೆಟ್ ಕಬಳಿಸಿದರು.

    ಬಾಂಗ್ಲಾ ಪರ ಲಿಟಾನ್ ದಾಸ್ 30 (20 ಎಸೆತ), ಮುಷ್ಫಿಕರ್ ರಹ್ಮಾನ್ 20 (17), ಮೊಹಮ್ಮದುಲ್ಲ 29 (25), ಶಕೀಬ್ ಅಲ್ ಹಸನ್ 15 (15) ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‍ಮನ್‍ಗಳು 15 ರನ್ ಗೆರೆ ದಾಟಲಿಲ್ಲ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ಪರ, ಮೊಹಮ್ಮದ್ ಶಹಜಾದ್ 40 (37 ಎಸೆತ), ಉಸ್ಮಾನ್ ಘನಿ 26 (24), ಅಸ್ಗರ್ ಸ್ತಾನಿಕ್ ಝೈಯ್ 25 (24), ಸಮೀಉಲ್ಲಾ ಶೆನ್ವಾರಿ 36 (18) ಹಾಗೂ ಶಫೀಖುಲ್ಲಾ 24 (8) ರನ್ ಗಳಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು. ಬಾಂಗ್ಲಾ ಪರ ಅಬ್ದುಲ್ ಹಸನ್ 40 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮದುಲ್ಲ 1 ರನ್ನಿಗೆ 2 ವಿಕೆಟ್ ಪಡೆದರು.

  • ಬಾಂಗ್ಲಾದೇಶದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ರದ್ದು

    ಬಾಂಗ್ಲಾದೇಶದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ರದ್ದು

    ಢಾಕಾ: ಸರ್ಕಾರಿ ಸೇವೆಗಳಲ್ಲಿ ನೀಡಲಾಗುತ್ತಿದ್ದ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.

    ಬಾಂಗ್ಲಾ ದೇಶದಲ್ಲಿ ಈವರೆಗೂ ವಿಶೇಷ ವರ್ಗಕ್ಕೆ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಬುಧವಾರದಂದು ಪ್ರಧಾನಿ ಶೇಖ್ ಹಸೀನಾ ಮೀಸಲಾತಿ ರದ್ದು ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಮೀಸಲಾತಿ ರದ್ದು ಮಾಡುವಂತೆ ಆಗ್ರಹಿಸಿ ರಾಜಧಾನಿ ಢಾಕಾದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ಸರ್ಕಾರ ಈಗ ಮೀಸಲಾತಿಯನ್ನು ರದ್ದು ಪಡಿಸುವ ನಿರ್ಧಾರವನ್ನು ಕೈಗೊಂಡಿದೆ.

    ಬಾಂಗ್ಲಾದೇಶದ ಸರ್ಕಾರಿ ವಲಯದಲ್ಲಿ ಶೇ.56 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು. ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಉದ್ಯೋಗದಲ್ಲಿ ಮೀಸಲಾತಿ ಇತ್ತು. ಈಗ ಮೀಸಲಾತಿ ರದ್ದಾಗಿದ್ದರೂ ಅಂಗವಿಕಲರು ಮತ್ತು ಹಿಂದುಳಿದ ವರ್ಗದ ಅಲ್ಪಸಂಖ್ಯಾತರಿಗಿದ್ದ ಮೀಸಲಾತಿ ಮುಂದುವರಿಯಲಿದೆ.

    ದೇಶದ ಜನಸಂಖ್ಯೆಯಲ್ಲಿ ಇರುವ ಶೇ.98 ರಷ್ಟು ಜನ ಕೇವಲ ಶೇ.44 ಉದ್ಯೋಗಕ್ಕೆ ಪೈಪೋಟಿ ನಡೆಸಬೇಕು. ಶೇ.2 ರಷ್ಟಿರುವವರಿಗೆ ಶೇ.56 ಮೀಸಲಾತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ತೀವ್ರಗೊಂಡ ಬಳಿಕ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಮೀಸಲಾತಿ ರದ್ದು ಮಾಡುವ ಕುರಿತು ನಿರ್ಧಾರವನ್ನು ಪ್ರಕಟಿಸಿದೆ.

    ವಿದ್ಯಾರ್ಥಿಗಳ ಹಿಂಸಾಚಾರದ ಪ್ರತಿಭಟನೆಯಿಂದ ಢಾಕಾ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ವಿರುದ್ಧ ಅಶ್ರುವಾಯು ಹಾಗೂ ರಬ್ಬರ್ ಗುಂಡು ಹಾರಿಸಿದ್ದರು. ಈ ಸಂಬಂಧ 100ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಲ್ಲದೇ ದೇಶ ನಾನಾ ಭಾಗಗಳಲ್ಲಿ ಮೀಸಲಾತಿ ರದ್ದತಿಯ ವಿರುದ್ಧ ಹೋರಾಟಗಳು ನಡೆಯುತಿತ್ತು.

    ವಿದ್ಯಾರ್ಥಿಗಳ ಪ್ರತಿಭಟನೆಯಿಂದ ದೇಶದ್ಯಾಂತ ಇರುವ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿ ಹಾಗೂ ಪರೀಕ್ಷೆ ರದ್ದಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಶೇಖ್ ಹಸೀನಾ, ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಮೀಸಲಾತಿ ರದ್ದಾಗಿರುವುದರಿಂದ ಈಗ ವಿದ್ಯಾರ್ಥಿಗಳು ಮನೆಗೆ ತೆರಳಬೇಕು ಎಂದು ಮನವಿ ಮಾಡಿದ್ದಾರೆ.

  • ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

    ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

    ಅಸ್ಸಾಂ: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾಳೆ.

    ಮೌಸಮಿ ದಾಸ್(21) ಬಾಂಗ್ಲಾದೇಶಕ್ಕೆ ಓಡಿಹೋದ ಯುವತಿ. ಮಾರ್ಚ್ 12ರಂದು ಮೌಸಮಿ ತನ್ನ ಮನೆಯಿಂದ ಕಾಣೆಯಾಗಿದ್ದಳು. ನಂತರ ಆಕೆಯ ಪೋಷಕರು ಕರೀಮ್‍ಗಂಜ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೇ ಈ ದೂರಿನಲ್ಲಿ ಪೋಷಕರು ಆಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು.

    ಮಾರ್ಚ್ 27ರಂದು ವಾಟ್ಸಾಪ್‍ನಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಮೌಸಮಿ ದಾಸ್ ಪೊಲೀಸ್ ಠಾಣೆಯಲ್ಲಿ ಇರುವುದು ಕಂಡು ಬಂದಿತ್ತು. ಇದಾದ ಬಳಿಕ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬಾಂಗ್ಲಾದೇಶದಲ್ಲಿ ನಾನು ಖುಷಿಯಾಗಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಬರಲು ಇಷ್ಟವಿಲ್ಲ ಎಂದು ಮೌಸಾಮಿ ತಿಳಿಸಿದ್ದಾಳೆ.

    ವಿಡಿಯೋದಲ್ಲಿ ಏನಿದೆ?
    ನಾನು ಮೌಸಾಮಿ ದಾಸ್. ನಾನು ಭಾರತದಿಂದ ಓಡಿ ಬಂದಿದ್ದೇನೆ ಹಾಗೂ ನನ್ನ ಇಚ್ಛೆಯಿಂದ ಬಂದಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಆಗಲು ಇಷ್ಟವಿಲ್ಲ. ನನ್ನ ಪತಿ ಜೊತೆ ಇರಲು ಇಷ್ಟಪಡುತ್ತೇನೆ. ಇನ್ನೂ ಬಾಂಗ್ಲಾದೇಶ ತುಂಬಾ ಚೆನ್ನಾಗಿದೆ. ನಾನು ಇಲ್ಲಿ ಇರಲು ಇಷ್ಟಪಡುತ್ತೇನೆ ಹಾಗೂ ಇಲ್ಲಿಯೇ ಇರುತ್ತೇನೆ. ನನಗೆ 21 ವರ್ಷವಾಗಿದೆ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗೋಕ್ಕೆ ನಾನು ಚಿಕ್ಕ ಮಗು ಅಲ್ಲ. ಪತಿಯಾದ ನೂಮನ್ ಬಾದ್‍ಶಾ ಜೊತೆ ಅಸ್ಸಾಂನ ಕರೀಂಗಂಜ್‍ನಿಂದ ಬಂದಿದ್ದೇನೆ ಎಂದು ಮೌಸಾಮಿ ಹೇಳಿದ್ದಾಳೆ.

    ಮೌಸಾಮಿ ಹಿಂದೂವಿನಿಂದ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದು, ವಿಡಿಯೋದಲ್ಲಿ ಬುರ್ಕಾ ಹಾಕಿರುವುದು ಕಂಡು ಬಂದಿದೆ. ಮೌಸಾಮಿ ಬಾಂಗ್ಲಾದೇಶ ತಲುಪಿದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ತನ್ನ ಪ್ರಿಯಕರ ನೂಮನ್ ಬಾದ್‍ಶಾ ಜೊತೆ ವಿವಾಹವಾಗಿದ್ದಾಳೆ. ಇನ್ನೂ ಮೌಸಾಮಿ ಹತ್ತಿರ ಯಾವುದೇ ಪಾಸ್‍ಪೋರ್ಟ್ ಹಾಗೂ ವೀಸಾ ಇಲ್ಲ. ಆಕೆ ಅಕ್ರಮವಾಗಿ ಬಾಂಗ್ಲಾ ತಲುಪಿದ್ದಾಳೆ ಎಂದು ವರದಿಯಾಗಿದೆ.

  • ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಕೊಲಂಬೊ: ನಿದಾಸ್ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾ ನಡುವಿನ ಪಂದ್ಯದ ವೇಳೆ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಡ್ರೆಸ್ಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮವೊಂದು ವರದಿ ಮಾಡಿದೆ.

    ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಬ್ರಾಡ್ ಪಂದ್ಯ ನಂತರ ಉಂಟಾದ ಅನುಚಿತ ವರ್ತನೆ ಕುರಿತು ಮೈದಾನದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಘಟನೆಯನ್ನು ಕಣ್ಣರೇ ಕಂಡಿದ್ದ ಕ್ರೀಂಡಾಗಣದ ಸಿಬ್ಬಂದಿ ಹೇಳಿಕೆ ಪಡೆದು, ಸಿಸಿಟಿವಿ ದೃಶ್ಯಗಳನ್ನು ಪರೀಶಿಲನೆ ನಡೆಸಲಾಗಿತ್ತು. ಈ ವೇಳೆ ಬಾಂಗ್ಲಾ ನಾಯಕ ಶಕೀಬ್ ಬದಲವಂತವಾಗಿ ರೂಮ್ ನ ಬಾಗಿಲನ್ನು ತಳ್ಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪಂದ್ಯದ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್‍ಗೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಇಬ್ಬರು ಆಟಗಾರಿಗೂ ತಲಾ ಒಂದು ಡಿಮೆರಿಟ್ ಅಂಕ ನೀಡಿತ್ತು. ಇದನ್ನು ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಇದನ್ನು ಓದಿ:  ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

  • ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

    ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

    ಕೊಲಂಬೊ: ಟೀಂ ಇಂಡಿಯಾದ ಅಭಿಮಾನಿಗಳು ದಿನೇಶ್ ಕಾರ್ತಿಕ್ ಆಟದ ಕುರಿತು ಸಂಭ್ರಮಿಸುತ್ತಿದ್ದರೆ, ಇತ್ತ ಬಾಂಗ್ಲಾ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಬೌಲರ್ ರುಬೆಲ್ ಹುಸೇನ್ ಫೈನಲ್ ಪಂದ್ಯದ ಸೋಲಿಗೆ ನಾನೇ ಹೊಣೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತಂಡದ ಗೆಲುವಿನ ಸನಿಹದಲ್ಲಿತ್ತು. ಆದರೆ ನನ್ನ ತಪ್ಪಿನಿಂದ ಪಂದ್ಯದಲ್ಲಿ ಸೋಲು ಪಡೆಯುವುದನ್ನು ಊಹಿಸಿರಲಿಲ್ಲ. ನಾನು ದೇಶದ ಪ್ರಜೆಗಳಲ್ಲಿ ಕ್ಷಮೆ ಕೇಳುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.

    ನಿದಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು ಭಾರತದ ವಿರುದ್ಧ ಐತಿಹಾಸಿಕ ಗೆಲುವಿನ ವಿಶ್ವಾಸದಲ್ಲಿ ಪಂದ್ಯವನ್ನು ಆರಂಭಿಸಿದ್ದರು. ಆದರೆ ರುಬೆಲ್ ಬೌಲ್ ಮಾಡಿದ 19ನೇ ಓವರ್ ಪಂದ್ಯದ ಗತಿಯನ್ನೇ ಬದಲಾಯಿಸಿತ್ತು.

    ಪಂದ್ಯದ 18 ನೇ ಓವರ್ ಮುಕ್ತಾಯ ವೇಳೆಗೆ 2 ಓವರ್ ಗಳಲ್ಲಿ ಟೀಂ ಇಂಡಿಯಾ 34 ರನ್ ಗಳಿಸಿಬೇಕಿತ್ತು. ಬಾಂಗ್ಲಾ ಕ್ಯಾಪ್ಟನ್ ಶಕೀಬ್, ರೂಬೆಲ್ ಗೆ ಬೌಲ್ ಮಾಡಲು ನೀಡಿದ್ದರು. ಸ್ಟ್ರೇಕ್ ನಲ್ಲಿದ್ದ ದಿನೇಶ್ ಕಾರ್ತಿಕ್ ಮುಂದಿನ ಮೂರು ಎಸೆಗಳಲ್ಲಿ ಕ್ರಮವಾಗಿ 6, 4, 6 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿನ ಆಸೆಯನ್ನು ಚಿಗುರುವಂತೆ ಮಾಡಿದ್ದರು. ಅಂತಿಮವಾಗಿ ಈ ಓವರ್ ನಲ್ಲಿ ರುಬೆಲ್ 22 ರನ್ ನೀಡಿದ್ದರು.

    ಈ ಪಂದ್ಯದಲ್ಲಿ 4 ಓವರ್ ಎಸೆದ ರೂಬೆಲ್ ಒಂದು ವಿಕೆಟ್ ಪಡೆದು 8.75 ಎಕನಾಮಿಯಲ್ಲಿ 35 ರನ್ ನೀಡಿ ದುಬಾರಿ ಎನಿಸಿಕೊಂಡರು. ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಕಾರಣರಾದ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 362.50 ಸ್ಟ್ರೈಕ್ ರೇಟ್ ನಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 29 ರನ್ ಸಿಡಿಸಿದ್ದರು.

  • ರೋಹಿತ್ ಸಿಕ್ಸ್ ಗೆ ನಾಗಿನ್ ಡ್ಯಾನ್ಸ್ ಮಾಡಿದ ಸುನಿಲ್ ಗವಾಸ್ಕರ್

    ರೋಹಿತ್ ಸಿಕ್ಸ್ ಗೆ ನಾಗಿನ್ ಡ್ಯಾನ್ಸ್ ಮಾಡಿದ ಸುನಿಲ್ ಗವಾಸ್ಕರ್

    ಕೊಲಂಬೋ: ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ ಸಿಕ್ಸ್ ಗೆ ಖುಷಿಯಾಗಿ ಕಾಮೆಂಟರಿ ಬಾಕ್ಸ್ ನಲ್ಲಿಯೇ ಮಾಜಿ ನಾಯಕ ಸುನಿಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ.

    ಭಾನುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4 ವಿಕೆಟ್‍ಗಳ ಅಂತರದಿಂದ ಸೋಲಿಸುವ ಮೂಲಕ ರೋಚಕ ಗೆಲುವನ್ನು ಸಹ ಪಡೆ ದುಕೊಂಡಿತ್ತು. ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಸ್ತುಫಿಜುರ್ ರಹಿಮ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ನಾಗಿನ್ ಡ್ಯಾನ್ಸ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದರು. ಹೀಗೆ ನಂತರ ಹಲವು ಬಾರಿ ಆಟಗಾರರು ಮೈದಾನದಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ರು.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಅಭಿಮಾನಿಗಳು ರೋಹಿತ್ ಶರ್ಮಾರ ಹೊಡೆತಗಳಿಗೆ ನಾಗಿನ್ ಡ್ಯಾನ್ಸ್ ಮಾಡುತ್ತಿದ್ರು. ಇದೇ ವೇಳೆ ಕಾಮೆಂಟ್ರಿ ಬಾಕ್ಸ್ ನಲ್ಲಿದ್ದ ಸುನಿಲ್ ಗವಾಸ್ಕರ್ ಸಹ ನಾಗಿನ್ ಡ್ಯಾನ್ಸ್ ಮಾಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ರು.

    ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು.

    ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.

    https://twitter.com/DSportINLive/status/975406453992443904

    https://twitter.com/IndianzCricket/status/975406268671180800

  • ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

    ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

    ಕೊಲಂಬೊ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾ ವಿರುದ್ಧ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸ್ ಹೊಡೆತವನ್ನು ನಾನು ನೋಡಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಕಾರ್ತಿಕ್ ಕೊನೆಯ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾ ಆಗುತ್ತದೆ ಎಂದು ತಿಳಿದು ಸೂಪರ್ ಓವರ್ ಗೆ ಸಿದ್ಧತೆ ನಡೆಸಲು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಪ್ಯಾಡ್ ಧರಿಸಿದ್ದಾಗಿ ತಿಳಿಸಿದರು. ಅಲ್ಲದೇ ದಿನೇಶ್ ಅವರ ಪ್ರದರ್ಶನ ನೋಡಲು ಸಂತಸ ಉಂಟಾಯಿತು. ಈ ಮೂಲಕ ದಿನೇಶ್ ತಮ್ಮ ಸಾಮರ್ಥ್ಯವನ್ನು ತೊರಿಸಿದ್ದಾರೆ ಎಂದು ಹೊಗಳಿದರು.

    ಇದೇ ವೇಳೆ ದಿನೇಶ್ ಭಿನ್ನ ಹಾಗೂ ಭಾರೀ ಹೊಡೆತಗಳನ್ನು ಸಿಡಿಸುವ ಕೌಶಲ್ಯ ಹೊಂದಿದ್ದಾರೆ. ಅದ್ದರಿಂದಲೇ ಅವರಿಗೆ ಹಿಂಬಡ್ತಿ ನೀಡಲಾಯಿತು. ಈ ನಿರ್ಧಾರದ ಕುರಿತು ನನಗೆ ಹೆಮ್ಮೆಯಾಗುತ್ತಿದೆ ಎಂದು ರೋಹಿತ್ ತಿಳಿಸಿದರು.

    ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.