Tag: bangkok

  • 14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    ಬ್ಯಾಂಕಾಕ್: ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ಅವುಗಳಿಗೂ ಭಾವನೆಗಳಿವೆ ಎಂದು ಈ ವೀಡಿಯೋ ನೋಡಿದರೆ ಅರ್ಥವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

    ಟ್ವಿಟ್ಟರ್ ನಲ್ಲಿ ಬ್ಯುಟೆಂಗೆಬೀಡೆನ್ ಅವರು ವೀಡಿಯೋವನ್ನು ಹಂಚಿಕೊಂಡಿದ್ದು, ಆನೆಗಳು 14 ತಿಂಗಳ ನಂತರ ತಮ್ಮ ಪಾಲಕರೊಂದಿಗೆ ಮತ್ತೆ ಒಂದಾಗುತ್ತಿವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಈ ಭಾವನಾತ್ಮಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ಘಟನೆಯು ಥೈಲ್ಯಾಂಡ್‍ನ ಎಲಿಫೆಂಟ್ ನೇಚರ್ ಪಾರ್ಕ್‍ನಲ್ಲಿ ನಡೆದಿದ್ದು, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು ಬಿಂಬಿಸುವ ಈ ಹೃದಯಸ್ಪರ್ಶಿ ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

    ವೀಡಿಯೋದಲ್ಲಿ, ಥಾಯ್ಲೆಂಡ್‍ನ ಅಭಯಾರಣ್ಯದಲ್ಲಿ ಆನೆಗಳ ಹಿಂಡು 14 ತಿಂಗಳ ನಂತರ ಹಿಂತಿರುಗಿದ್ದು, ಆನೆಗಳನ್ನು ಪಾಲಕ ಡೆರಕ್ ಥಾಂಪ್ಸನ್ ಸಂತೋಷದಿಂದ ಸ್ವಾಗತಿಸುತ್ತಾನೆ. ಆಗ ಎಲ್ಲ ಆನೆಗಳು ಅವನ ಸುತ್ತ ಬಂದು ನಿಂತುಕೊಳ್ಳುತ್ತವೆ. ಆಗ ಥಾಂಪ್ಸನ್ ಅವುಗಳನ್ನು ಅಪ್ಪಿಕೊಳ್ಳುತ್ತಾನೆ. ಆನೆಗಳು ಥಾಂಪ್ಸನ್ ನನ್ನು ತಮ್ಮ ಸೊಂಡಿಲಿನಿಂದ ಅಪ್ಪಿಕೊಂಡು ಅವುಗಳ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಈ ವೀಡಿಯೋ ನೋಡಿದರೆ ಮನುಷ್ಯ ಮತ್ತೆ ಪ್ರಾಣಿಗಳ ನಡುವೆ ಯಾವ ರೀತಿಯ ಬಾಂಧವ್ಯವಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತೆ.

    ವೀಡಿಯೋ ನೋಡಿದ ನೆಟ್ಟಿಗರು, ಪ್ರೀತಿಯು ಸಾರ್ವತ್ರಿಕ ಭಾವನೆಯಾಗಿದೆ. ಪ್ರೀತಿ ಮಾಡುವುದನ್ನು ನಾವು ಪ್ರಾಣಿಗಳಿಂದ ಕಲಿಯಬೇಕು ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು, ದೇವರ ಅತ್ಯಂತ ಅದ್ಭುತ ಸೃಷ್ಟಿ ಎಂದರೆ ವನ್ಯಜೀವಿಗಳು. ನಾನು ಚಿಕ್ಕಂದಿನಿಂದಲೂ ಆನೆಗಳನ್ನು ಪ್ರೀತಿಸುತ್ತೇನೆ. ನಾನು ಪ್ರತಿ ಬಾರಿ ಆನೆಗಳ ವೀಡಿಯೋವನ್ನು ನೋಡುತ್ತೇನೆ. ಅದರಿಂದ ನನಗೆ ಶಾಂತಿ ಸಿಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಬ್ಯಾಂಕಾಕ್: ಥೈಲ್ಯಾಂಡ್‍ನ 36 ವರ್ಷದ ಮಹಿಳೆಯೊಬ್ಬಳು ತನ್ನ ಜೊತೆಗಿರಲು ನಿರಾಕರಿಸಿದ ಮಾಜಿ ಪ್ರಿಯಕರನ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾಳೆ.

    ಮಹಿಳೆ ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.

    ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕನೋಕ್ ವಾನ್ ಎಂಬ ಮಹಿಳೆ, ಡಬ್ಬವೊಂದರಲ್ಲಿ ತಂದಿದ್ದ ಇಂಧನವನ್ನು ಬೈಕ್ ಮೇಲೆ ಸುರಿದಿದ್ದಾಳೆ. ನಂತರ ಬೈಕ್‍ಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಕೆನಡಾದಲ್ಲಿ ಮಗನ ಮದುವೆ – ಆನ್‍ಲೈನ್‍ನಲ್ಲಿ ಆಶೀರ್ವಾದಿಸಿದ ಪೋಷಕರು

    ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅದೃಷ್ಟ ಎಂಬಂತೆ ಘಟನೆ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ಕುಡಿದು ರನ್‍ವೇನಲ್ಲಿ ಕಾರು ಓಡಿಸಿದ ಭೂಪ- ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ

    ಕುಡಿದು ರನ್‍ವೇನಲ್ಲಿ ಕಾರು ಓಡಿಸಿದ ಭೂಪ- ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ

    ಬ್ಯಾಂಕಾಕ್: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ವಿಮಾನ ಲ್ಯಾಂಡ್ ಆದ ತಕ್ಷಣ ರನ್‍ವೇನಲ್ಲೇ ಕಾರ್ ಓಡಿಸಿರೋ ಘಟನೆ ಬ್ಯಾಂಕಾಕ್‍ನಲ್ಲಿ ನಡೆದಿದೆ. ಕಾರು ಕಂಡ ತಕ್ಷಣ ಭದ್ರತಾ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

    ಬ್ಯಾಂಕಾಕ್‍ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಾರಿನ ಚಾಲಕ ಮದ್ಯಪಾನ ಮಾಡಿದ ಪರಿಣಾಮವಾಗಿ ತಪ್ಪು ತಿರುವು ಪಡೆದು ರನ್‍ವೇಯಲ್ಲಿ ಚಲಿಸಿದ್ದಾನೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಈ ಘಟನೆಯ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಅವರು ಹೇಳುವ ಪ್ರಕಾರ, ಕಾರು ರಸ್ತೆ ಬಿಟ್ಟು ಯಾವ ರೀತಿ ರನ್‍ವೇಗೆ ಬಂದಿದೆ ಎಂದು ತಿಳಿದಿಲ್ಲ. ಆದರೆ ಈ ವಿಮಾನ ನಿಲ್ದಾಣ ಪ್ರತಿಷ್ಠಿತ ಕಂಪನಿಗೆ ಸೇರಿರುವುದಾಗಿದ್ದು ಅಲ್ಲಿನ ಭದ್ರತಾ ಸಿಬ್ಬಂದಿಯ ಲೋಪದೋಷ ಎದ್ದುಕಾಣುತ್ತಿದೆ. ಇದು ತುಂಬಾ ಭಯಾನಕವಾದ ದೃಶ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಕಾರು ಚಾಲಕನಿಗೆ ಮದ್ಯದ ಅಮಲು ಜಾಸ್ತಿಯಾಗಿದ್ದ ಕಾರಣ ತಿಳಿಯದೆ ರನ್‍ವೇಗೆ ಕಾರು ಬಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಕಾರಿನ ಚಾಲಕನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಆತ ಮದ್ಯಪಾನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಪ್ರತಿಪತ್ ಮಸಕುಲ್ ಎಂದು ಗುರುತಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸ್ಕ್ವಾಡ್ರನ್ ನಾಯಕ ಸುತಿರಾವತ್ ಸುವನ್ವತ್ ಹೇಳಿದ್ದಾರೆ.

    ಕಾರು ಚಾಲಕ ತಾನು ಕುಡಿದಿರುವುದಾಗಿ ಒಪ್ಪಿಕೊಂಡಿದ್ದು, ಇದರ ಜೊತೆಗೆ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಮಾದಕ ದ್ರವ್ಯ ಸೇವಿಸಿ ಕಾರು ಚಾಲಾಯಿಸಿದ ಕಾರಣ ಪ್ರಕರಣ ದಾಖಲಾಗಿದೆ.

  • ಬಸ್ಸಿಗೆ ರೈಲು ಡಿಕ್ಕಿ – ದೇವಾಲಯಕ್ಕೆ ಹೋಗ್ತಿದ್ದ 18 ಮಂದಿ ದುರ್ಮರಣ

    ಬಸ್ಸಿಗೆ ರೈಲು ಡಿಕ್ಕಿ – ದೇವಾಲಯಕ್ಕೆ ಹೋಗ್ತಿದ್ದ 18 ಮಂದಿ ದುರ್ಮರಣ

    – 40ಕ್ಕೂ ಅಧಿಕ ಮಂದಿ ಗಂಭೀರ
    – ಹಾರ್ನ್ ಮಾಡಿದ್ರೂ ಕೇಳಿಸಿಕೊಳ್ಳದ ಚಾಲಕ

    ಬ್ಯಾಂಕಾಕ್: ಧಾರ್ಮಿಕ ಸಮಾರಂಭಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸಿಗೆ ಸರಕು ರೈಲು ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಪೂರ್ವ ಬ್ಯಾಂಕಾಕ್‍ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಚಾಚೊಂಗ್ಸಾವೋ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರು ಸ್ಥಿತಿ ಗಂಭೀರವಾಗಿದೆ ಮತ್ತು ಎಂಟು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಛೋಂಬರಿ ಪ್ರಾಂತ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 60 ಸಿಬ್ಬಂದಿ ಸಮುತ್ ಪ್ರಕಾನ್ ಪ್ರಾಂತ್ಯದ ಬೌದ್ಧ ದೇವಾಲಯವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೈಲು ಬರುವ ಮುನ್ಸೂಚನೆಯಿದ್ದರೂ ಬಸ್ ಚಾಲಕ ಖ್ಲಾಂಗ್ ಕ್ವಾಂಗ್ ಕ್ಲಾನ್ ಜಿಲ್ಲೆಯ ನಿಲ್ದಾಣದ ಬಳಿ ರೈಲ್ವೆ ಕ್ರಾಸಿಂಗ್ ಮೇಲೆ ಹೋಗಿದ್ದಾನೆ. ಅಲ್ಲದೇ ಬರುತ್ತಿದ್ದ ರೈಲು ಹಾರ್ನ್ ಮಾಡಿದರೂ ಚಾಲಕ ಕೇಳಿಸಿಕೊಳ್ಳಲಿಲ್ಲ. ಪರಿಣಾಮ ವೇಗವಾಗಿ ಬಂದ ರೈಲು ಬಸ್ಸಿಗೆ ಡಿಕ್ಕಿ ಹೊಡೆದಿದೆ.

    ಪರಿಣಾಮ ಎಂಟು ಪುರುಷರು ಮತ್ತು 10 ಮಹಿಳೆಯರು ಸಾವನ್ನಪ್ಪಿದ್ದು, 40ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮಾಡುತ್ತಿವೆ. ಬಸ್ಸಿನಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

  • ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    ಬಿಕಿನಿ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಿಂಗಿ ಜೋಡಿ ಸಾವು

    – ರಾತ್ರಿ ಕುಟುಂಬಸ್ಥರ ಜೊತೆ ಪಾರ್ಟಿ
    – ಬೆಳಗ್ಗೆ ರೂಮಿನಲ್ಲಿ ಶವವಾಗಿ ಪತ್ತೆ

    ಬ್ಯಾಂಕಾಕ್: ಸಲಿಂಗಿ ಜೋಡಿಯೊಂದು ಪರಸ್ಪರ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿರುವ ಘಟನೆ ಯ್ಲೆಂಡ್‍ನ ಪ್ರವಾಸಿ ಹೋಟೆಲ್ ರೂಮಿನಲ್ಲಿ ನಡೆದಿದೆ.

    ಮೃತರನ್ನು ರಾಟ್ರೀ ಸ್ರಿವಿಬೂನ್ (24) ಮತ್ತು ಪಟ್ಸಾನನ್ ಚನ್‍ಪ್ರಪಾತ್ (29) ಎಂದು ಗುರುತಿಸಲಾಗಿದೆ. ಬ್ಯಾಂಕಾಕ್‍ನಿಂದ 100 ಕಿ.ಮೀ ದೂರದಲ್ಲಿರುವ ಪಟ್ಟಾಯದಲ್ಲಿನ ಸಮುದ್ರ ತೀರದ ರೆಸಾರ್ಟ್ ನಲ್ಲಿರುವ ಹೋಟೆಲ್ ರೂಮಿನಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬದವರು ಬೆಳಗ್ಗೆ ರೂಮಿಗೆ ಹೋಗಿ ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಇಬ್ಬರಿಗೂ ಕುತ್ತಿಗೆ ಸೇರಿದಂತೆ ಅನೇಕ ಕಡೆ ಚಾಕುವಿನಿಂದ ಇರಿದ ಗಾಯಗಳಾಗಿದ್ದವು. ಇಬ್ಬರು ಸಾಯುವ ಕೆಲ ಗಂಟೆಗಳ ಮೊದಲು ಆನ್‍ಲೈನಲ್ಲಿ ಪೋಸ್ಟ್ ಮಾಡಿದ್ದ ಫೋಟೋದ ಬಗ್ಗೆ ವಾಗ್ವಾದ ನಡೆದಿದೆ. ರಾಟ್ರೀ ಸ್ವಿಮ್ಮಿಂಗ್ ಪೂಲ್ ಅಂಚಿನಲ್ಲಿ ಕುಳಿತು ಹಸಿರು ಬಣ್ಣದ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ.

    ಪಟ್ಸಾನನ್ ಮತ್ತು ರಾಟ್ರೀ ಸಾಯುವ ಮುನ್ನ ಅಂದರೆ ರಾತ್ರಿಯಷ್ಟೇ ಕುಟುಂಬದ ಜೊತೆ ಒಟ್ಟಿಗೆ ಸೇರಿ ಊಟ ಮಾಡಿದ್ದರು. ಅಲ್ಲದೇ ಅವರೊಂದಿಗೆ ಸಂತಸದಿಂದ ಕಾಲ ಕಳೆದಿದ್ದರು. ಆದರೆ ಬೆಳಗ್ಗೆ ಸಲಿಂಗಿ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.

    ಪಾರ್ಟಿ ವೇಳೆ ಎಲ್ಲರೂ ಖುಷಿಯಿಂದ ಇದ್ದೆವು. ಆಗ ಪಟ್ಸಾನನ್ ಮತ್ತು ರಾಟ್ರೀ ಇಬ್ಬರ ಸಂಬಂಧವೂ ಚೆನ್ನಾಗಿತ್ತು. ಆದರೆ ನನ್ನ ಸಹೋದರಿಯ ಗೆಳತಿ ಸ್ವಲ್ಪ ಹೊಟ್ಟೆಕಿಚ್ಚಿನ ಸ್ವಭಾವದವಳಾಗಿದ್ದಳು. ಹೀಗಾಗಿ ಇಬ್ಬರ ಸಾವಿನಿಂದ ನಾವು ಆಘಾತಗೊಂಡಿದ್ದೇವೆ ಎಂದು ರಾಟ್ರೀ ಸಹೋದರ ಪೈರೋಜ್ ತಿಳಿಸಿದ್ದಾರೆ.

    ಘಟನೆ ಸ್ಥಳದಲ್ಲಿ ಚಾಕು ಪತ್ತೆಯಾಗಿದೆ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ನಂತರ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೂ ನಾವು ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಯಾರ ಮೇಲೆ ಅನುಮಾನ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿದ್ದಾರೆ.

  • ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ಕೊರೊನಾ ವೈರಸ್‍ನಿಂದ ನವಜಾತ ಶಿಶುಗಳನ್ನು ರಕ್ಷಿಸಲು ಹೊಸ ಪ್ಲಾನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹುಟ್ಟಿದ ಶಿಶುಗಳಿಗೆ ಸ್ಪೆಷಲ್ ಫೇಸ್ ಶೀಲ್ಡ್ ಹಾಕುವ ಮೂಲಕ ಮಕ್ಕಳಿಗೆ ವೈರಸ್ ಹರಡುವುದನ್ನು ತಡೆಗಟ್ಟಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ.

    ಬ್ಯಾಂಕಾಕ್‍ನ ಪ್ರರಮ್ 9 ಆಸ್ಪತ್ರೆಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿರುವ ಶಿಶುಗಳ ಮುಖಕ್ಕೆ ಶೀಲ್ಡ್ ಹಾಕಿ ಕೊರೊನಾ ಸೋಂಕು ತಗುಲದಂತೆ ನಿಗಾವಹಿಸಲಾಗಿದೆ.

    ಈವರೆಗೆ ಥೈಲ್ಯಾಂಡ್‍ನಲ್ಲಿ 2,473 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅವರಲ್ಲಿ 33 ಮಂದಿ ಸಾವನ್ನಪ್ಪಿದ್ದು, 1,013 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

    ಶುಕ್ರವಾರ ಒಂದೇ ದಿನ ಥೈಲ್ಯಾಂಡ್‍ನಲ್ಲಿ 50 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ 50 ಸೋಂಕಿತರಲ್ಲಿ 27 ಮಂದಿ ಹಳೆಯ ಸೋಂಕಿತ ರೋಗಿಗಳ ಸಂಪರ್ಕದಲ್ಲಿ ಇದ್ದವರಾಗಿದ್ದು, 8 ಮಂದಿಗೆ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಇರದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.

    ವಿಶ್ವಾದ್ಯಂತ ಬರೋಬ್ಬರಿ 17,00,951 ಮಂದಿಗೆ ಕೊರೊನಾ ತಗುಲಿದ್ದು, ಈವರೆಗೆ 1,02,789 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ 3,76,796 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

  • ಐಷಾರಾಮಿ ಹೋಟೆಲಿನಲ್ಲಿ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿ ಥೈಲ್ಯಾಂಡ್ ರಾಜ

    ಐಷಾರಾಮಿ ಹೋಟೆಲಿನಲ್ಲಿ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿ ಥೈಲ್ಯಾಂಡ್ ರಾಜ

    ಬ್ಯಾಂಕಾಕ್: ಕೊರೊನಾ ವೈರಸ್ ಭೀತಿಯಿಂದ ಹೋಂ ಕ್ವಾರಂಟೈನ್‍ನಲ್ಲಿರುವವರು ತಮ್ಮ ಮನೆಯವರಿಂದಲೇ ದೂರ ಒಂದು ರೂಮಿನಲ್ಲಿದ್ದಾರೆ. ಆದರೆ ಥೈಲ್ಯಾಂಡ್ ಮಹಾರಾಜ ಭವ್ಯವಾದ ಹೋಟೆಲ್‍ನಲ್ಲಿ ಅದರಲ್ಲೂ ಜೊತೆಗೆ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿದ್ದಾರೆ ಎಂದು ವರದಿಯಾಗಿದೆ.

    ರಾಜ ಮಹಾ ವಾಜಿರಲಾಂಗ್ ಕಾರ್ನ್ ಕೊರೊನಾ ವೈರಸ್ ಸಮಯದಲ್ಲಿ ತನ್ನ ದೇಶವನ್ನು ಬಿಟ್ಟು ಜರ್ಮನಿಗೆ ಹೋಗಿದ್ದಾರೆ. ಕೊರೊನಾದಿಂದ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಆದರೆ ರಾಜ ಮಾತ್ರ ಪ್ರತ್ಯೇಕವಾಗಿ ಜರ್ಮನಿಗೆ ಹೋಗಿ ಐಸೋಲೇಶನ್‍ನಲ್ಲಿದ್ದಾರೆ. ಬವೇರಿಯಾದ ಐಷಾರಾಮಿ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಲ್ಲದೇ ಇಡೀ ಹೋಟೆಲ್ ಅನ್ನು ರಾಜನೇ ಕಾಯ್ದಿರಿಸಿದ್ದಾರೆ. ಈ ವಾಸ್ತವ್ಯಕ್ಕಾಗಿ ಅವರು ಜಿಲ್ಲಾ ಕೌನ್ಸಿಲ್‍ನಿಂದ ವಿಶೇಷ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

    ಆಶ್ಚರ್ಯಕರ ವಿಚಾರವೆಂದರೆ ರಾಜನ ಜೊತೆಗೆ 20 ಮಹಿಳೆಯರು ಸಹ ಈ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲದೇ ರಾಜ ಹೆಚ್ಚಿನ ಸಂಖ್ಯೆಯ ಸೇವಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಾಜನ 4ನೇ ಪತ್ನಿ ಹೋಟೆಲ್‍ನಲ್ಲಿ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ರಾಜ ಜರ್ಮನಿಯಲ್ಲಿ ವಾಸ್ತವ್ಯ ಮಾಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ, ಥೈಲ್ಯಾಂಡ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಥೈಲ್ಯಾಂಡ್‍ನಲ್ಲಿ ರಾಜನನ್ನು ಟೀಕಿಸಿದ್ದಕ್ಕಾಗಿ 15 ವರ್ಷಗಳ ಜೈಲು ಶಿಕ್ಷೆ ಇದೆ. ಆದರೂ ‘ನಮಗೆ ರಾಜ ಏಕೆ ಬೇಕು?’ ಎಂದು ಟ್ವಿಟ್ಟರಿನಲ್ಲಿ ರಾಜನನ್ನು ಟೀಕೆ ಮಾಡಲಾಗುತ್ತಿದೆ.

    ಇದುವರೆಗೂ ಥೈಲ್ಯಾಂಡ್‍ನಲ್ಲಿ 1,524ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳು ಕಂಡುಬಂದಿದ್ದಾರೆ. ಇಲ್ಲಿಯವರೆಗೂ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ವಜಿರಲೊಂಗ್ ಕಾರ್ನ್ ಅವರಿಗೆ ಈ ಹಿಂದೆಯೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 2019 ರಲ್ಲಿ 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದರು.

  • ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    – ಪೊಲೀಸರ ಬಳಿ ಕೈ ಮುಗಿದು ಕ್ಷಮೆ

    ಬ್ಯಾಂಕಾಕ್: ಜೋಡಿಯೊಂದು ಕುಡಿದ ಮತ್ತಿನಲ್ಲಿ ಬೀಚ್‍ನ ತೀರದಲ್ಲಿ ಸೆಕ್ಸ್ ಮಾಡಿದ್ದಾರೆ. ಬಳಿಕ ಅವರು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿರುವ ಘಟನೆ ಥೈಲ್ಯಾಂಡ್‍ನ ಪ್ರಸಿದ್ಧ ಪಟ್ಟಾಯ ಬೀಚ್‍ನಲ್ಲಿ ನಡೆದಿದೆ.

    ಜೋಡಿಯನ್ನು ರೋಮನ್ ಗ್ರಿಗೊರೆಂಕೊ (26) ಮತ್ತು ದರಿಯಾ ವಿನೋಗ್ರಾಡೋವಾ (19) ಎಂದು ತಿಳಿದು ಬಂದಿದೆ. ಇಬ್ಬರೂ ರಷ್ಯಾ ಮೂಲದವರಾಗಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಥೈಲ್ಯಾಂಡ್‍ಗೆ ಬಂದಿದ್ದರು. ಜೋಡಿ ಸೆಕ್ಸ್ ಮಾಡಿರುವುದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ಕೊಟ್ಟಿದ್ದಾರೆ. ಬೀಚ್‍ನಲ್ಲಿ ಅನೇಕ ಮಂದಿ ಓಡಾಡುತ್ತಿದ್ದರೂ ಜೋಡಿ ಅಸಭ್ಯವಾಗಿ ನಡೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪೊಲೀಸರು ವಿಡಿಯೋ ನೋಡಿ ಜೋಡಿ ಉಳಿದುಕೊಂಡಿದ್ದ ಹೋಟೆಲ್ ಪತ್ತೆ ಮಾಡಿ ಅವರನ್ನು ಬಂಧಿಸಿದ್ದರು. ನಂತರ ಅವರಿಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ್ದು ಅಪರಾಧ. ಇದರಿಂದ ನಗರದ ಬೀಚ್ ಖ್ಯಾತಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮ್ಮನ್ನು ಕ್ಷಮಿಸಿ” ಎಂದು ರೋಮನ್ ಕೇಳಿಕೊಂಡಿದ್ದಾನೆ.

    ಜೋಡಿ ಕ್ಷಮೆ ಕೇಳಿದ ನಂತರ ಪೊಲೀಸರು ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಬೀಚ್‍ನ ಸಮೀಪದಲ್ಲಿ ಜೋಡಿ ಮದ್ಯಪಾನ ಮಾಡಿದ್ದರು. ಅಲ್ಲದೇ ಬೀಚ್ ಬಳಿಯೂ ಕುಡಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ಅವರು ಎಲ್ಲಿದ್ದೇವೆ ಎಂಬ ಅರಿವನ್ನು ಕಳೆದುಕೊಂಡಿದ್ದರು. ಹೀಗಾಗಿ ಇಬ್ಬರು ಲೈಂಗಿಕ ಸಂಬಂಧ ಹೊಂದಿದ್ದಾರೆ. ಅಲ್ಲಿ ಸಿಸಿಟಿವಿಯನ್ನು ಪರಿಶೀಲನೆ ಮಾಡಿ ಅವರನ್ನು ಬಂಧಿಸಿದ್ದೆವು. ಕಳೆದ ವಾರವೂ ಇದೇ ಬೀಚ್‍ನಲ್ಲಿ ಇಂತಹ ಘಟನೆ ನಡೆದಿತ್ತು. ಇದರಿಂದ ಬೀಚ್‍ನ ಖ್ಯಾತಿಗೆ ಧಕ್ಕೆಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ರಸ್ತೆಯಲ್ಲಿ ಅಡ್ಡಗಟ್ಟಿ ಕಾರಿನ ಟಾಪ್ ಮೇಲೆ ಕೂತ ಗಜರಾಜ – ವಿಡಿಯೋ ವೈರಲ್

    ರಸ್ತೆಯಲ್ಲಿ ಅಡ್ಡಗಟ್ಟಿ ಕಾರಿನ ಟಾಪ್ ಮೇಲೆ ಕೂತ ಗಜರಾಜ – ವಿಡಿಯೋ ವೈರಲ್

    ಬ್ಯಾಂಕಾಕ್: ಸಾಮಾನ್ಯವಾಗಿ ಕಾರಿನ ಟಾಪ್ ಮೇಲೆ ನಾಯಿ, ಕೋತಿ, ಪಕ್ಷಿಗಳು ಹಾಗೂ ಜನರು ಹತ್ತಿ ಕೂತ ದೃಶ್ಯವನ್ನು ನೋಡಿರಬಹುದು. ಆದರೆ ಥೈಲ್ಯಾಂಡ್‌ನಲ್ಲಿ ದೈತ್ಯ ಆನೆಯೊಂದು ಕಾರಿನ ಟಾಪ್ ಹತ್ತಿ ಕೂತ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಥೈಲ್ಯಾಂಡ್‌ನ ಖಾವೊ ಯೈ ರಾಷ್ಟ್ರೀಯ ಉದ್ಯಾನವದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರನ್ನು ಆನೆಯೊಂದು ಅಡ್ಡಗಟ್ಟಿ, ಕಾರಿನ ಟಾಪ್ ಮೇಲೆ ಹತ್ತಿ ಕೂತಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಇತರೆ ವಾಹನ ಸವಾರರು ವಿಡಿಯೋ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಡ್ಯುಯಾ(35) ಹೆಸರಿನ ಆನೆ ರಾಷ್ಟ್ರೀಯ  ಉದ್ಯಾನವದ ರಸ್ತೆ ಮಧ್ಯೆ ಬರುತ್ತಿತ್ತು. ಈ ವೇಳೆ ಈ ಮಾರ್ಗದಲ್ಲಿಯೇ ಚಲಿಸುತ್ತಿದ್ದ ಕಾರನ್ನು ಅಟ್ಟಗಟ್ಟಿದೆ. ನಂತರ ಕಾರಿನ ಟಾಪ್ ಮೇಲೆ ಕುಳಿತುಕೊಳ್ಳಲು ಯತ್ನಿಸಿದೆ. ಮೊದಲು ಕಾರಿನ ಮುಂಬದಿಯಿಂದ ಹತ್ತಲು ಆನೆ ಪ್ರಯತ್ನಿಸಿದೆ. ಅದು ಆಗದೇ ಇದ್ದಾಗ ಕಾರಿನ ಹಿಂಬದಿಯಿಂದ ಹತ್ತಿ ಟಾಪ್ ಮೇಲೆ ಕುಳಿತಿದೆ. ಬಳಿಕ ಆನೆ ಕಾರನ್ನು ಬಿಟ್ಟು ಸರಿದಾಗ ಚಾಲಕ ವಾಹನ ಚಲಾಯಿಸಿಕೊಂಡು ಮುಂದೆ ಬಂದಿದ್ದಾನೆ. ಈ ವೇಳೆ ಕಾರಿನ ಹಿಂಬದಿ ಗಾಜು ಒಡೆದು ಪುಡಿಯಾಗಿರುವುದು, ಆನೆಯ ಭಾರಕ್ಕೆ ಕಾರಿನ ಟಾಪ್ ಕುಗ್ಗಿ ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    https://www.facebook.com/supparach.niltarach/posts/2562223873823430

    ಅದೃಷ್ಟವಾಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಹಾನಿಗೊಳಗಾದ ಕಾರಿನ ಒಳಗೆ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಆನೆ ಹಲವು ಪ್ರವಾಸಿಗರ ಕಾರುಗಳ ಮೇಲೂ ಕುಳಿತುಕೊಳ್ಳಲು ಯತ್ನಿಸಿರುವ ಫೋಟೋಗಳನ್ನು ವಾಹನ ಸವಾರ ಪಾಸ್ಸಾಕಾರ್ನ್ ನಿಲ್ತಾರಾಚ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉದ್ಯಾನವನದ ಅಧಿಕಾರಿಗಳು, ಈ ಆನೆ ಅಲ್ಲಿ ಜನರಿಗೆ ಸ್ವಾಗತ ಕೋರಲು ಬಂದಿತ್ತು. ಅದು ಯಾವತ್ತು ಯಾವ ಪ್ರವಾಸಿಗರು ಹಾಗೂ ವಾಹನಕ್ಕೂ ಹಾನಿ ಮಾಡಿರಲಿಲ್ಲ. ಆದರೆ ಯಾಕೋ ಗೊತ್ತಿಲ್ಲ ಈ ಬಾರಿ ಹೀಗೆ ಮಾಡಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಾಗುವಾಗ ಆಸೆಗಳು ಅಡ್ಡ ಬಂದರೆ ಅವುಗಳಿಂದ 30 ಮೀಟರ್ ಅಂತರ ಕಾಯ್ದುಕೊಂಡು ಸಾಗಿರಿ ಎಂದು ತಿಳಿಸಿದ್ದಾರೆ.

  • ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ – ಆರ್‌ಸಿಇಪಿ ಒಪ್ಪಂದದಿಂದ ಹಿಂದಕ್ಕೆ ಸರಿದ ಭಾರತ

    ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ – ಆರ್‌ಸಿಇಪಿ ಒಪ್ಪಂದದಿಂದ ಹಿಂದಕ್ಕೆ ಸರಿದ ಭಾರತ

    ಬ್ಯಾಂಕಾಕ್: ದೇಶಾದ್ಯಂತ ಭಾರೀ ವಿವಾದ-ಚರ್ಚೆಗೆ ಗ್ರಾಸವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರ ಬಂದಿದೆ.

    ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಹಿತಾಸಕ್ತಿಯನ್ನು ಬಲಿಗೊಡುವ ಯಾವುದೇ ಕೆಲಸವನ್ನು ಮಾಡಲ್ಲ. ನನ್ನ ಆತ್ಮಸಾಕ್ಷಿಯೂ ಇದಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಇಪಿ ವಿಚಾರದ ಬಗ್ಗೆ ಭಾರತೀಯರಿಂದ ನನಗೆ ಯಾವುದೇ ಧನಾತ್ಮಕ ಉತ್ತರ ಸಿಗಲಿಲ್ಲ. ಹೀಗಾಗಿ ಈ ಒಪ್ಪಂದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾರೆ.

    ಭಾರತವನ್ನು ಹೊರತುಪಡಿಸಿ ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ ಸೂಚಿಸಿವೆ. ವಿಯೆಟ್ನಾಂನಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.

    2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಈ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಕೆಲವು ಉತ್ಪನ್ನಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಸರ್ಕಾರ ಆಗ್ರಹಿಸಿತ್ತು. ನಂತರ ಬಂದ ಮೋದಿ ಸರ್ಕಾರ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದ್ದರಿಂದ ಒಪ್ಪಂದ ಜಾರಿಯಾಗಿರಲಿಲ್ಲ.

    ಅಮೆರಿಕದ ವ್ಯಾಪಾರ ಸಮರದಿಂದ ಆರ್ಥಿಕತೆ ಕುಸಿದಿರುವ ಚೀನಾ ಒಪ್ಪಂದ ಅಂತಿಮವಾಗಲೇಬೇಕೆಂದು ಪಟ್ಟು ಹಿಡಿದ ಕಾರಣ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಒಪ್ಪಂದವು ಜಾರಿಯಾದರೆ ಆಸಿಯಾನ್ ರಾಷ್ಟ್ರಗಳು ಮತ್ತು ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ ಎಂಬ ವಿರೋಧ ಕೇಳಿಬಂದಿದೆ.

    ಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದ ಹೈನುಗಾರಿಕೆಗೆ ಧಕ್ಕೆಯಾಗಲಿದೆ ಎಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು.

    ರಾಜ್ಯದಲ್ಲಿ ಪ್ರತಿಭಟನೆ: ಆರ್‌ಸಿಇಪಿ ಜಾರಿ ಮಾಡಬಾರದೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಿಸಾನ್ ಘಟಕದಿಂದ ಭಾರಿ ಪ್ರತಿಭಟನೆ ನಡೆಸಲಾಯ್ತು. ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಮುತ್ತಿಗೆಗೆ ಯತ್ನಿಸಿದರು. ಜಪಾನ್, ಕೊರಿಯಾ ಜೊತೆ ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿ ರೈತರನ್ನ ಬೀದಿಗೆ ಬೀಳಿಸಲು ಮೋದಿ ಹೊರಟಿದ್ದಾರೆ. ಪ್ರವಾಹ, ಬರದಿಂದ ರಾಜ್ಯದ ರೈತರು ತತ್ತರಿಸುತ್ತಿದ್ದಾರೆ. ಈ ಒಪ್ಪಂದದಿಂದ ೧೦ ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ.