Tag: Bangaluru

  • ನಿಶ್ಚಿತಾರ್ಥದ ಸಂಭ್ರಮದಲ್ಲಿ `ಗೂಗ್ಲಿ’ ನಿರ್ದೇಶಕ ಪವನ್ ಒಡೆಯರ್

    ನಿಶ್ಚಿತಾರ್ಥದ ಸಂಭ್ರಮದಲ್ಲಿ `ಗೂಗ್ಲಿ’ ನಿರ್ದೇಶಕ ಪವನ್ ಒಡೆಯರ್

    ಬೆಂಗಳೂರು: ಮೊನ್ನೆ ತಾನೇ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಾವು ಮೆಚ್ಚಿದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮತ್ತೊಬ್ಬ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ.

    ಕುಟುಂಬದ ಹಿರಿಯರು ನೋಡಿ ಮೆಚ್ಚಿರುವ ಅಪೇಕ್ಷಾ ಪುರೋಹಿತ್ ಜೊತೆಗೆ ವಿವಾಹ ಬಂಧನಕ್ಕೆ ಪವನ್ ಒಳಗಾಗಲಿದ್ದಾರೆ. ಡಿಸೆಂಬರ್ 7 ರಂದು ಪವನ್-ಅಪೇಕ್ಷಾ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

    ಅಂದಹಾಗೇ ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಡುಗಡೆಗೊಂಡ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

    ಅಪೇಕ್ಷಾ ಓದಿದ್ದು ಫ್ಯಾಷನ್ ಡಿಸೈನಿಂಗ್. ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದ `ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ನಂತರ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬರಲು ಟಿ.ಎನ್. ಸೀತಾರಾಮ್ ನಿರ್ದೇಶನದ `ಕಾಫೀ ತೋಟ’ ಸಿನಿಮಾ ಇವರಿಗೆ ಉತ್ತಮ ಅವಕಾಶವನ್ನು ನೀಡಿತ್ತು. ಸಿನಿಮಾ ರಂಗಕ್ಕೆ ಅಚ್ಚರಿಯಾಗಿ ಬಂದ ಇವರು `ಕಿನಾರೆ’ ಮತ್ತು `ಕಾಣದ ಕಡಲಿಗೆ’ ಎಂಬ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

    ಗುರು-ಹಿರಿಯರು ನಿಶ್ಚಯಿಸಿದಂತೆ ಡಿಸೆಂಬರ್ 7ರಂದು ನಿಶ್ಚಿತಾರ್ಥ ನಡೆಯಲಿದ್ದು, ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    https://www.instagram.com/p/BcEJevTHxjs/?hl=en&taken-by=apekshapurohit

    https://www.instagram.com/p/BcAh6hBHv5I/?hl=en&taken-by=apekshapurohit

    https://www.instagram.com/p/Bb844uJnvfR/?hl=en&taken-by=apekshapurohit

    https://www.instagram.com/p/Bb4VLnQnNhz/?hl=en&taken-by=apekshapurohit

    https://www.instagram.com/p/Bbm88Z0H0vf/?hl=en&taken-by=apekshapurohit

    https://www.instagram.com/p/BbV0gyOHayZ/?hl=en&taken-by=apekshapurohit

    https://www.instagram.com/p/BbQ4HCFHSxL/?hl=en&taken-by=apekshapurohit

    https://www.instagram.com/p/BbGxb3snjuE/?hl=en&taken-by=apekshapurohit

    https://www.instagram.com/p/Ba3oegIn0It/?hl=en&taken-by=apekshapurohit

    https://www.instagram.com/p/BacLgr4HiO6/?hl=en&taken-by=apekshapurohit

    https://www.instagram.com/p/Bax1pY3n4f7/?hl=en&taken-by=apekshapurohit

    https://www.instagram.com/p/BaOONhjnUOd/?hl=en&taken-by=apekshapurohit

    https://www.instagram.com/p/BaCSo6NnMXj/?hl=en&taken-by=apekshapurohit

    https://www.instagram.com/p/BZ8XjWknc5l/?hl=en&taken-by=apekshapurohit

    https://www.instagram.com/p/BZndgkXnQWu/?hl=en&taken-by=apekshapurohit

    https://www.instagram.com/p/BZKqxp7HgLr/?hl=en&taken-by=apekshapurohit

    https://www.instagram.com/p/BYsSBuEnEsJ/?hl=en&taken-by=apekshapurohit

    https://www.instagram.com/p/BYAxNuJn5v3/?hl=en&taken-by=apekshapurohit

    https://www.instagram.com/p/BX23uvAnbPl/?hl=en&taken-by=apekshapurohit

    https://www.instagram.com/p/BXO0fkunN1y/?hl=en&taken-by=apekshapurohit

    https://www.instagram.com/p/BWkGyimHL1L/?hl=en&taken-by=apekshapurohit

    https://www.instagram.com/p/BVmFzs2n_X1/?hl=en&taken-by=apekshapurohit

    https://www.instagram.com/p/BVT5oDXHiGo/?hl=en&taken-by=apekshapurohit

    https://www.instagram.com/p/BU6E8RdBWFE/?hl=en&taken-by=apekshapurohit

    https://www.instagram.com/p/BUjVoKiB-tw/?hl=en&taken-by=apekshapurohit

    https://www.instagram.com/p/BTqBQoZBf8e/?hl=en&taken-by=apekshapurohit

    https://www.instagram.com/p/BSu1NoRh0uz/?hl=en&taken-by=apekshapurohit

    https://www.instagram.com/p/BRx7UDkhdRN/?hl=en&taken-by=apekshapurohit

    https://www.instagram.com/p/BQlXQb6B35z/?hl=en&taken-by=apekshapurohit

    https://www.instagram.com/p/_yAVUUvTDg/?taken-by=pavanwadeyar

  • ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕ

    ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕ

    ಬೆಂಗಳೂರು: ರಾಜ್ಯ ಸರ್ಕಾರದ ಅತ್ಯುನ್ನತ ಹುದ್ದೆಗಳು ಮಹಿಳೆಯರ ಪಾಲಾಗಿವೆ. ಡಿಜಿಯಾಗಿ ಕೆಲ ದಿನ ಹಿಂದಷ್ಟೇ ನೀಲಮಣಿ ರಾಜು ಅಧಿಕಾರ ಸ್ವೀಕರಿಸಿದ್ದರು. ಈಗ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕಗೊಂಡಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

    ಮುಖ್ಯಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಠಿಯಾ ನವೆಂಬರ್ 30 ರಂದು ನಿವೃತ್ತಿಯಾಗಲಿದ್ದು, ಅಂದೇ ರತ್ನಪ್ರಭಾ ಅವರ ನೇಮಕ ಕುರಿತ ಪ್ರಕಟಣೆ ಹೊರಬಿಳುವ ಸಾಧ್ಯತೆ ಇದೆ. ರಾಜ್ಯದ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ಅಧಿಕಾರ ವಹಿಸಲಿದ್ದಾರೆ. 2000ರಲ್ಲಿ ತೆರೆಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿದಾಸ್ ಮುಖ್ಯಕಾರ್ಯದರ್ಶಿಯಾಗಿದ್ದರು. ಇನ್ನು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್ ನೇಮಕವಾಗಿದೆ.

    ರತ್ನಪ್ರಭಾ ಯಾರು? 1981ರ ಬ್ಯಾಚ್‍ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ರತ್ನಪ್ರಭಾ ಅವರ ತಾಯಿ ಕಾರ್ಕಳ ಮೂಲದವರು, ತಂದೆ ಹೈದ್ರಬಾದ್‍ನವರು. ಪತಿ ಆಂಧ್ರಪ್ರದೇಶ ಕೇಡರ್‍ನ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1983 – ಬೀದರ್ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭ ಮಾಡಿದ ಇವರು ಚಿಕ್ಕಮಗಳೂರು, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಅಲ್ಲದೇ ಸೆನ್ಸಾರ್ ಬೋರ್ಡ್‍ನ ಹೈದ್ರಬಾದ್ ಪ್ರಾದೇಶಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ರತ್ನಪ್ರಭಾ ಬೀದರ್ ಜಿಲ್ಲಾಧಿಕಾರಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ, ಸಹಕಾರ ಇಲಾಖೆ ಹೆಚ್ಚುವರಿ ರಿಜಿಸ್ಟ್ರರ್, ಗುಲ್ಬರ್ಗಾ ಪ್ರಾದೇಶಿಕ ಆಯುಕ್ತೆ, ಆಂಧ್ರ ಪ್ರದೇಶ ಸರ್ಕಾರದಲ್ಲಿ ಐಟಿಬಿಟಿ, ಕಂದಾಯ, ಸಾರಿಗೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ವಾಣಿಜ್ಯ & ಕೈಗಾರಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯಾಗಿ ಹಲವು ಅತ್ಯುನ್ನತ ಹುದ್ದೆಗಳಳನ್ನು ನಿರ್ವಹಿಸಿದ್ದಾರೆ.

     

  • ಮಂಡ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ: ಡಿಕೆ ಸುರೇಶ್ ಹೇಳಿದ್ದು ಹೀಗೆ

    ಮಂಡ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ: ಡಿಕೆ ಸುರೇಶ್ ಹೇಳಿದ್ದು ಹೀಗೆ

    ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಮಾಜಿ ಸಂಸದೆ ರಮ್ಯಾ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಸಂಸದ ಡಿಕೆ ಸುರೇಶ್ ಮುನ್ಸೂಚನೆ ನೀಡಿದ್ದಾರೆ.

    ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆಗಳನ್ನು ನಡೆಸುತ್ತಿದ್ದು, ಹಲವು ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರಂತೆ ಮಾಜಿ ಸಂಸದೆ ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿಯನ್ನು ಹೊಂದಿದ್ದರೆ, ಖಂಡಿತ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

    ರಮ್ಯಾ ಅವರಿಗೆ ಪ್ರಸ್ತುತ ಹೈಕಮಾಂಡ್ ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಹೊಣೆಯನ್ನು ನೀಡಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೈಕಮಾಂಡ್ ಒಂದು ವೇಳೆ ರಮ್ಯಾ ಅವರ ಅವಶ್ಯಕತೆ ಅರಿತು ಚುನಾವಣೆಗೆ ಸ್ಪರ್ಧಿಸಲು ಸೂಚನೆ ನೀಡಿದರೆ ಸ್ಪರ್ಧಿಸಬೇಕಾಗುತ್ತದೆ ಎಂದರು.

    ರಾಜ್ಯ ರಾಜಕಾರಣ ಪ್ರವೇಶದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ. ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದ ಜನರು ಚುನಾವಣೆಯಲ್ಲಿ ಸ್ಪರ್ಧಿಸಲು ಕೇಳಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ. ಚುನಾವಣೆಯ ಟಿಕೆಟ್ ಹಂಚಿಕೆಯ ವಿಚಾರ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.

    https://www.youtube.com/watch?v=QxHvyneQsfU

  • ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

    ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

    ಬೆಂಗಳೂರು: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು 15 ಮಂದಿ ಕೆಎಸ್ಆರ್‌ಪಿ  ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ಇದೇ ತಿಂಗಳ 24 ರ ಶುಕ್ರವಾರದಂದು ನಡೆದಿದ್ದು, ನಾಯಿಯನ್ನು ಕಾಪಾಡುತ್ತಿರುವ ಫೋಟೋವನ್ನು ಪೂರ್ವ ವಲಯದ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

    ತಮ್ಮ ಟ್ವೀಟ್ ನಲ್ಲಿ ಅಭಿಷೇಕ್ ಗೋಯಲ್, ಮೊದಲು ನಾಯಿಯ ತಲೆಯನ್ನು ಕೊಡದಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಯ್ತು. ನಂತರ ನಾಯಿಯ ಉಸಿರಾಟಕ್ಕೆ ತೊಂದರೆಯಾಗಬಾರದು ಎಂದು ಮೊದಲಿಗೆ ಕೊಡಕ್ಕೆ ಒಂದು ಸಣ್ಣ ರಂಧ್ರವನ್ನು ಮಾಡಲಾಯಿತು. ನಂತರ ನಿಧಾನವಾಗಿ ಕೊಡವನ್ನು ಕತ್ತರಿಸಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಡಿಸಿಪಿ ಅವರು ಮಾಡಿದ ಟ್ವೀಟ್‍ಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಧನ್ಯವಾದಗಳನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

  • ಖಿನ್ನತೆಗೆ ಒಳಗಾಗಿರುವ ಯುವಕನ ಬಾಳಿಗೆ ಬೇಕಿದೆ ಬೆಳಕು

    ಖಿನ್ನತೆಗೆ ಒಳಗಾಗಿರುವ ಯುವಕನ ಬಾಳಿಗೆ ಬೇಕಿದೆ ಬೆಳಕು

    ಬೆಂಗಳೂರು: ಓಡಾಡಲು ಕಷ್ಟ ಪಡುವ ಮಲ್ಟಿ ಟ್ಯಾಲೆಂಟೆಡ್, ಗುಣಪಡಿಸಲಾಗದ ಕಾಯಿಲೆ. ಅವಮಾನ ಪಟ್ಟು ವಿದ್ಯಾಭ್ಯಾಸ ಮುಗಿಸಿದ ಸ್ನಾತಕೊತ್ತರ ಪದವಿ ಪಡೆದ ಸ್ವಾಭಿಮಾನಿ. ಇತನ ಬಾಳಿನಲ್ಲಿ ಬಿರುಗಾಳಿಯಂತೆ ಬೀಸಿದೆ ಮಾನಸಿಕ ಕಿನ್ನತೆ. ಕಿನ್ನತೆ ನಿವಾರಣೆಯಾದ್ರೆ ಇತನ ಬಾಳು ಸುಂದರವಾಗುತ್ತೆ ಅನ್ನೋದು ಪೋಷಕರ ಆಳಲು.

    ಸ್ವತಃ ಊಟ ಮಾಡಲಾಗದೇ, ಓಡಾಡಲು ಕಷ್ಟ ಪಡುತ್ತಿರುವ 30 ವರ್ಷದ ನಿತ್ಯಾನಂದ ಮಾತು ಬಾರದ ಮಹಾ ಛಲಗಾರ. ಕೇಳಿದ್ದನ್ನು ಆಲಿಸಿ ಬರೆಯುವ ನಿಪುಣ. ಈತ ಬೆಂಗಳೂರಿನ ಜೆಪಿನಗರದ ನಿವಾಸಿಯಾಗಿದ್ದು, ದಿನಮಣಿ ಹಾಗೂ ಪರಿಮಳ ದಂಪತಿಯ ಪುತ್ರ.

    ನಿತ್ಯಾನಂದ ಎರಡೂವರೆ ವರ್ಷ ವಯಸ್ಸಿನಲ್ಲಿರುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ಒಳಗಾಗಿದ್ದು, ಇದೀಗ ಬದುಕು ನಶ್ವರವಾಗಿದೆ. ತೀಕ್ಷ್ಣ ಬುದ್ಧಿಮತಿಯಾಗಿರುವ ನಿತ್ಯಾನಂದನನ್ನು ಕಂಡು ಹಲವರು ಅಣಕಿಸಿದ್ದುಂಟು. ತಾಯಿಗೆ ಮಗನ ಅಸಹಾಯಕತೆಯನ್ನ ಕಂಡು ಎಲ್ಲಾ ಮಕ್ಕಳಂತೆ ನನ್ನ ಮಗನಿಲ್ಲವಲ್ಲ ಎಂಬ ಕೊರಗು. ಆದರೆ ಧೃತಿಗೆಡದ ತಾಯಿ ನನ್ನ ಮಗ ಎಲ್ಲರಂತೆ ಸಮಾಜದಲ್ಲಿ ಬದುಕಬೇಕೆಂದು ಮಗನ ನಿತ್ಯದ ಕರ್ಮಗಳನ್ನು ಸ್ವತಃ ತಾವೇ ಮಾಡಿಸಿ ಶಾಲೆಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಿದ್ದಾರೆ.

    ದೈಹಿಕವಾಗಿ ಅಶಕ್ತನಾಗಿರುವ ಈ ತೀಕ್ಷ್ಣ ಬುದ್ಧಿಮತಿ ನಿತ್ಯಾನಂದ ಅಮ್ಮನ ಆಸೆಯಂತೆ ತನ್ನ ನ್ಯೂನತೆಯನ್ನು ಬದಿಗಿರಿಸಿ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ 78%, ಬಿಎ ಪದವಿಯಲ್ಲಿ 67%, ಎಂಎ ಇನ್ ಸೋಷಿಯಲಾಜಿಯಲ್ಲಿ 66% ಪಡೆದು ಮಾದರಿಯಾಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಈ ಛಲಗಾರ ಪಿಎಚ್‍ಡಿ ಮಾಡುವ ಹುಮ್ಮಸಿನಲ್ಲಿದ್ದಾರೆ.

    ದೈಹಿಕ ನ್ಯೂನತೆಯ ನಡುವೆಯೂ ನಿತ್ಯಾನಂದ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಅಷ್ಟೇ ಅಲ್ಲದೇ ಮನೆಯಿಂದಲೇ ಕಂಪ್ಯೂಟರ್‍ನಲ್ಲಿ ಕೆಲಸ ಮಾಡಿ ಅಷ್ಟೋ ಇಷ್ಟೋ ಸಂಪಾದಿಸಿ ಸ್ವಾಭಿಮಾನಿಯಾಗಿದ್ದಾರೆ. ಜೊತೆಗೆ ಕೀ ಬೋರ್ಡ್ ನುಡಿಸಲು ಕಲಿಯುತ್ತಿರುವ ನಿತ್ಯಾನಂದ ಸರಾಗವಾಗಿ ಕೀ ಬೋರ್ಡ್ ನುಡಿಸುತ್ತಾರೆ.

    ಓದಿನಲ್ಲಿ ಸದಾ ಮುಂದು, ಲವಲವಿಕೆಯಿಂದ ಇರುವ ಪ್ರತಿಭಾವಂತ ಯುವಕ ನಿತ್ಯಾನಂದ ಮಾನಸಿಕ ಖಿನ್ನತೆ ಬಳಲುತ್ತಿದ್ದು, ಬೆಳಕು ಕಾರ್ಯಕ್ರಮ ಮೂಲಕವಾದರೂ ತನ್ನ ಮಗ ಖಂಡಿತವಾಗಲು ಖಿನ್ನತೆಯಿಂದ ಹೊರಬರುತ್ತಾನೆಂಬ ಈ ತಾಯಿಯ ನಂಬಿಕೆ ಇಟ್ಟಿದ್ದಾರೆ.

    https://www.youtube.com/watch?v=esiRyA8mrHE

  • ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

    ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಮಂಗಳವಾರ ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಿ ಇಂದು ಬೆಳಗ್ಗೆ ನಗರಕ್ಕೆ ಬಂದಿದ್ದ ಮಹಿಳಾ ಟೆಕ್ಕಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ 10 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗೀತಾಂಜಲಿ(27) ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ. ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    ಏನಿದು ಪ್ರಕರಣ?
    ಗೋವಾ ಮೂಲದ ಗೀತಾಂಜಲಿ ತಮ್ಮನ ಜೊತೆ ಎಚ್‍ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ 11.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾರತ್ತಹಳ್ಳಿ ಪೊಲೀಸರು ಈಗ ಗೀತಾಂಜಲಿ ಮೊಬೈಲ್ ಕರೆಗಳನ್ನು ಪರಿಶೀಲಿಸುತ್ತಿದ್ದು, ಸಹೋದ್ಯೋಗಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. 6 ತಿಂಗಳ ಹಿಂದೆ ಕಂಪೆನಿಗೆ ಸೇರಿದ್ದ ಗೀತಾಂಜಲಿ ಮಂಗಳವಾರ ಮತ್ತು ಗುರುವಾರ ರಜೆ ಹಾಕಿದ್ದರು. ರಜೆ ಹಾಕಿದ್ದರೂ ಅವರು ಇಂದು ಗೋವಾದಿಂದ ಮರಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

    https://www.youtube.com/watch?v=6yT49Ani9xI

  • ಬೆಂಗ್ಳೂರಲ್ಲಿ ಮುಂಜಾನೆ ಲಾಂಗು, ಮಚ್ಚುಗಳ ಸದ್ದು- ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ವ್ಯಕ್ತಿಯ ಬರ್ಬರ ಕೊಲೆ

    ಬೆಂಗ್ಳೂರಲ್ಲಿ ಮುಂಜಾನೆ ಲಾಂಗು, ಮಚ್ಚುಗಳ ಸದ್ದು- ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ವ್ಯಕ್ತಿಯ ಬರ್ಬರ ಕೊಲೆ

    ಬೆಂಗಳೂರು: ನಗರದಲ್ಲಿ ಇಂದು ಮುಂಜಾನೆ ಮಚ್ಚು, ಲಾಂಗುಗಳು ಸದ್ದು ಮಾಡಿದ್ದು, ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯ ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

    ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಡ್ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು. 35 ವರ್ಷದ ವ್ಯಕ್ತಿಯ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.

    ದುಷ್ಕರ್ಮಿಗಳು ಮೊದಲು ಮಣಪ್ಪುರಂ ಗೋಲ್ಡ್ ಲೋನ್ ಸೆಂಟರ್ ಬಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ನಂತರ ಅಲ್ಲಿಂದ ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೃತ್ಯವೆಸಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಘಟನಾ ಸ್ಥಳಕ್ಕೆ ಆಗಮಿಸಿ ತುಂಡಾದ ಕೈ ಸಮೇತ ಮೃತ ದೇಹವನ್ನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ನಡೆದ ಪ್ರದೇಶವಾದ ಮಣಪ್ಪುರಂ ಗೋಲ್ಡ್ ಲೋನ್ ಸೆಂಡರ್ ಸುತ್ತಮುತ್ತ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಗಳನ್ನು ಅಳವಡಿಸಿಲ್ಲ. ಸಿಸಿಟಿವಿ ದೃಶ್ಯ ಲಭ್ಯವಾದರೆ ಕೊಲೆಯಾದ ವ್ಯಕ್ತಿ ಯಾರು, ದುಷ್ಕರ್ಮಿಗಳು ಯಾರು ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಸಹಕಾರಿಯಾಗುತ್ತಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರಿಂದ ಎಡವಟ್ಟು!

    ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರಿಂದ ಎಡವಟ್ಟು!

    ಬೆಂಗಳೂರು: ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರು ಎಡವಟ್ಟು ಕೆಲಸ ಮಾಡಿದ್ದಾರೆ. ಹೌದು ಕಾಂಗ್ರೆಸ್ ಪಕ್ಷವನ್ನು ಅಣಕಿಸಲು ಹೋಗಿ ಕಾಂಗ್ರೆಸ್ ಗಿಡ ಎಂದೇ ಕರೆಯಲಾಗುವ ಪಾರ್ಥೇನಿಯಂ ಗಿಡಗಳನ್ನು ತಂದು ಬೆಂಗಳೂರಿನ ನಡುರಸ್ತೆಯಲ್ಲಿ ನೆಟ್ಟು ಎಡವಟ್ಟು ಮಾಡಿದ್ದಾರೆ.

    ಗುರುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿ ವಾರ್ಡನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯನ್ನು ಮಾಡಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಅಣಕಿಸುವ ಸಲುವಾಗಿ ಬಿಜೆಪಿ ನಾಯಕರು ರಸ್ತೆಯಲ್ಲಿ ಪಾರ್ಥೇನಿಯಂ ಗಿಡನೆಟ್ಟಿದ್ದಾರೆ.

    ಬೆಂಗಳೂರು ಪ್ರಸ್ತುತ ಪಾರ್ಥೇನಿಯಂ ಮುಕ್ತ ನಗರವಾಗಿದ್ದು, ಇದನ್ನು ಮಾಡಲು ಹಲವು ವರ್ಷಗಳ ಕಾಲ ಬಿಬಿಎಂಪಿ ಮತ್ತು ಬಿಡಿಎ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಆದ್ರೆ ನಿನ್ನೆ ಬಿಜೆಪಿ ಪಕ್ಷದ ಸಿಟಿ ರೌಂಡ್ಸ್ ವೇಳೆ ಪಾರ್ಥೆನಿಯಂ ಗಿಡವನ್ನೆ ರಸ್ತೆ ಮಧ್ಯೆ ನೆಟ್ಟ ಬಿಜೆಪಿ ನಾಯಕರು ಮತ್ತೆ ನಗರಕ್ಕೆ ಪಾರ್ಥೇನಿಯಂ ಕಾಲಿಡುವಂತೆ ಮಾಡಿದ್ದಾರೆ.

    ಈ ಹಿಂದೆ ಪಾರ್ಥೇನಿಯಂ ಎಂಬ ರಕ್ಕಸ ಇಡೀ ಸಿಲಿಕಾನ್ ಸಿಟಿಯನ್ನೇ ಆವರಿಸಿತ್ತು, ಪಾರ್ಥೇನಿಯಂ ಮಾರಿಯಿಂದ ಬೆಂಗಳೂರಿನ ನಿವಾಸಿಗಳನ್ನು ಅಸ್ತಮಾ ಆವರಿಸಿಕೊಂಡಿತ್ತು. ಈ ಒಂದು ಗಿಡ ಬರೋಬ್ಬರಿ 1 ಲಕ್ಷ ಗಿಡವನ್ನು ಹುಟ್ಟು ಹಾಕುವ ಶಕ್ತಿಯನ್ನು ಹೊಂದಿದೆ. ಇದರಿಂದ ಭಾರತದಲ್ಲೇ ನಂಬರ್ ಒನ್ ಅಸ್ತಮಾ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದಿತ್ತು.

    ಆದರೆ ಕಾಂಗ್ರೆಸ್ ಪಕ್ಷವನ್ನು ಅಣಕಿಸುವ ನಡೆದ ಪ್ರತಿಭಟನೆಯಲ್ಲಿ ಈಗ ಬಿಜೆಪಿ ಪಾರ್ಥೇನಿಯಂ ಗಿಡದ ಅಪಾಯವನ್ನು ಅರಿಯಾದೆ ಅದನ್ನು ನಗರದ ರಸ್ತೆಗಳಲ್ಲಿ ನಾಟಿ ಮಾಡಿದೆ. ಪ್ರತಿಭಟನೆ ಮಾಡೋ ಭರದಲ್ಲಿ ಸಿಲಿಕಾನ್ ಸಿಟಿಯನ್ನು ಮತ್ತೆ ಪಾರ್ಥೇನಿಯಂ ಹಬ್ಬಿಸಲು ಬಿಎಸ್‍ವೈ, ಅಶೋಕ್ ನೇತೃತ್ವದಲ್ಲೇ ಸಿಟಿ ರೌಂಡ್‍ಗಳನ್ನು ಮಾಡಿದ್ದಾರೆ.

     

  • ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್‍ವೈ ತಿಳಿಸಿದ್ರು

    ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್‍ವೈ ತಿಳಿಸಿದ್ರು

    ಬೆಂಗಳೂರು: ನಾಗಸಾಧುಗಳು ನಮ್ಮನೆಗೆ ಭೇಟಿ ನೀಡಿ ಅರ್ಧಗಂಟೆಗಳ ಕಾಲ ನನ್ನ ಜೊತೆ ಮಾತುಕತೆ ನಡೆಸಿದರು. ಕೇಂದ್ರದ ಮೋದಿ ಆಡಳಿತದ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ ಆಶಿರ್ವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಾಧುಗಳ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಸಾಧುಗಳ ಭೇಟಿ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ನಾಗ ಸನ್ಯಾಸಿಗಳು ಯಾರ ಮನೆಗೂ ಹೋಗುವುದಿಲ್ಲ ಅದೂ ಅತೀ ಅಪರೂಪ. ಮೊನ್ನೆ ಇದ್ದಕ್ಕಿದ್ದ ಹಾಗೇ ನಮ್ಮ ಮನೆಗೆ ಸುಮಾರು 18 ಜನರ ನಾಗಾ ಸನ್ಯಾಸಿಗಳು ಗುಂಪು ಬಂದು ಅರ್ಧಗಂಟೆ ಕಾಯ್ದಿದ್ದಾರೆ, ನಾನು ದೇವನಹಳ್ಳಿಯಲ್ಲಿ ಬಿಜೆಪಿ ವಿಸ್ತಾರಕರ ಸಭೆಯಲ್ಲಿದ್ದೆ. ನಾಗಸಾಧುಗಳು ಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ನಾನು ಓಡಿ ಬಂದೆ. ಬಳಿಕ ಸಾಧುಗಳ ಜೊತೆ ಅರ್ಧಗಂಟೆಗಳ ಕಾಲ ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಸಿದರು ಎಂದು ತಿಳಿಸಿದರು.

    ಕೇಂದ್ರದಲ್ಲಿ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶಂನೀಯ ಮಾತುಗಳನ್ನಾಡಿದರು. ಅಲ್ಲದೇ ಬರೋ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಪಕ್ಷ ಆಡಳಿತಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಚುನಾವಣೆ ಆದ ಮೇಲೆ ಮತ್ತೊಮ್ಮೆ ನಾವೆಲ್ಲಾ ನಿಮ್ಮನೆಗೆ ಭೇಟಿ ನೀಡುತ್ತೇವೆ ಎಂದು ಹೇಳಿ ನಾಗಸಾಧುಗಳು ಆಶಿರ್ವಾದ ಮಾಡಿದ್ದಾರೆ ಎಂದರು.

    ಸಾಧುಗಳ ಆಶಿರ್ವಾದ ಅನಿರೀಕ್ಷಿತ, ನಮ್ಮ ಪೂರ್ವ ಜನ್ಮದ ಪುಣ್ಯಫಲ. ಹುಡುಕಿಕೊಂಡು ಹೋದರೂ ಸಿಗದ ಅಪರೂಪದ ವ್ಯಕ್ತಿಗಳು. ಅವರೇ ನೇರವಾಗಿ ನಮ್ಮ ಮನೆಗೆ ಬಂದು ಆಶಿರ್ವಾದ ಮಾಡಿ ಹೋಗಿದ್ದಾರೆ. ಇದು ನನ್ನ ಭಾಗ್ಯ ಎಂದು ಸಾಧುಗಳ ಭೇಟಿಯ ಬಗ್ಗೆ ಸ್ಪಷ್ಟಪಡಿಸಿದರು.