Tag: Bangalore

  • 50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    ಬೆಂಗಳೂರು: ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಭರ್ಜರಿ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಅಭಿನಯಿಸಿರುವ ಈ ಸಿನಿಮಾ ಇವತ್ತಿಗೆ 50 ನೇ ದಿನವನ್ನು ಪೂರೈಸಿ ಮುನ್ನುಗ್ಗುತ್ತಿದೆ.

    ನಟ ಧ್ರುವ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇವರು ಮಾಡಿದ ಮೊದಲನೇ ಸಿನಿಮಾ `ಅದ್ಧೂರಿ’ ಯಿಂದಲ್ಲಿಯೇ ಕನ್ನಡ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದು, ಭರ್ಜರಿ ಅವರ ಮೂರನೇ ಸಿನಿಮಾವಾಗಿದೆ. ಅವರ ಅಭಿಮಾನಿಗಳು ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸನ್ನೇ ತಂದುಕೊಟ್ಟಿದ್ದಾರೆ.

    ಮಲ್ಟಿಫ್ಲೆಕ್ಸ್ ನಲ್ಲಿ ಮಾತ್ರವಲ್ಲದೆ ಬಿ ಹಾಗೂ ಸಿ ಸೆಂಟರ್ ಗಳಲ್ಲಿ ಕೂಡ ಪ್ರೇಕ್ಷಕರಿಂದ ಚಿತ್ರಕ್ಕೆ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನು ವಾಪಸ್ ಪಡೆದುಕೊಂಡಿದ್ದು, ಐವತ್ತು ದಿನಗಳಿಗೆ 69 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಸಾಕಷ್ಟು ಕಾರಣಗಳಿಂದ ‘ಭರ್ಜರಿ’ ಸಿನಿಮಾ ತಡವಾಗಿ ಬಂದಿದ್ದರೂ ಈಗಿನ ಜನರೇಷನ್‍ಗೆ ತಕ್ಕಂತೆ ಸಿನಿಮಾ ಇರುವುದರಿಂದ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ರಾಜ್ಯದ 129 ಸೆಂಟರ್ ನಲ್ಲಿ 50 ದಿನಗಳನ್ನು ಪೂರೈಸಿದೆ. ಸುಮಾರು ಹತ್ತು ವರ್ಷದ ನಂತರ ಇದೇ ಮೊದಲ ಬಾರಿಗೆ ಇಷ್ಟು ಸೆಂಟರ್ ನಲ್ಲಿ ಐವತ್ತು ದಿನಗಳು ಓಡಿರುವ ಸಿನಿಮಾಗಿದೆ.

    ಐವತ್ತು ದಿನಗಳನ್ನು ಪೂರೈಸಿರುವುದರಿಂದ ಸಿನಿಮಾ ತಂಡ ಇಂದು ಥಿಯೇಟರ್ ಬಳಿ ಹಬ್ಬದಂತೆ ಆಚರಣೆ ಮಾಡಿದೆ. ಮಧ್ಯಾಹ್ನದ ಶೋನಲ್ಲಿ ಧ್ರುವ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಿಹಿ ಹಂಚಿದ್ದಾರೆ. ಅಭಿಮಾನಿಗಳು ಖುಷಿಗಾಗಿ ರಕ್ತದಾನ, ಅನ್ನದಾನ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಾರೆ ‘ಭರ್ಜರಿ’ ಸಿನಿಮಾದ ಅದ್ದೂರಿ ಯಶಸ್ಸಿನಿಂದ ಧ್ರುವ ಸರ್ಜಾಗೆ ಮತ್ತಷ್ಟು ಬೇಡಿಕೆಯಾಗಿದೆ.

    ಚೇತನ್ ಕುಮಾರ್ ಅವರ ನಿರ್ದೇಶನ ಮಾಡಿದ್ದು, ನಟಿ ರಚಿತಾ ರಾಮ್, ಹರಿಪ್ರಿಯ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    https://www.youtube.com/watch?v=6LgGIqjKHSg

    https://www.youtube.com/watch?v=NGmvPSFlobs

     

  • ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಜೀ ಕನ್ನಡ ವಾಹಿನಿಯು ಪ್ರತಿಭಾವಂತ ಪ್ರತಿಭೆಗಳ ಆಯ್ಕೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್ ನಡೆಸುತ್ತಿದೆ.

    ನವೆಂಬರ್ 4 ರಿಂದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್ 14 ಹಾಗೂ ಕಾಮಿಡಿ ಕಿಲಾಡಿಗಳು ಸೀಜನ್ 2 ಆಡಿಷನ್ ಆರಂಭವಾಗಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್‍ನಲ್ಲಿ ಭಾಗವಹಿಸುವವರು 5 ರಿಂದ 13 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಆದರೆ ಕಾಮಿಡಿ ಕಿಲಾಡಿಗಳು ಆಡಿಷನ್‍ಗೆ ಯಾವುದೇ ವಯೋಮಿಯ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮೊದಲು ತುಮಕೂರು ಮತ್ತು ಹಾವೇರಿಯಲ್ಲಿ ಆಡಿಷನ್ ಮುಗಿಸಿದ್ದು, ಇಂದು ಕೋಟೆನಾಡು ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.

    ಕೋಟೆನಾಡಿನ ಡಾನ್ ಬಾಸ್ಕೋ ಶಾಲೆಯಲ್ಲಿ ಆಡಿಷನ್ ನಡೆಯುತ್ತಿದ್ದು, ಈ ಆಡಿಷನ್‍ಗೆ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತರ ವಿದ್ಯಾರ್ಥಿಗಳು, ಯುವಕರು ಮತ್ತು ಯುವತಿಯರು ಭಾಗವಹಿಸಿದ್ದರು. ಸ್ಪರ್ಧಿಗಳ ಆಯ್ಕೆಗಾಗಿ ವಿವಿಧ ಬಗೆಯ ಪ್ರಯೋಗಗಳನ್ನು ಮಾಡುವ ಮೂಲಕ ಅವರಲ್ಲಿ ಅಡಗಿರೋ ಕಲೆ, ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಜೀ ಕನ್ನಡ ವಾಹಿನಿ ಮಾಡಿದೆ.

    ಸೋಮವಾರ ಶಿವಮೊಗ್ಗ ಮತ್ತು ಕಾರವಾರದಲ್ಲಿ ಆಡಿಷನ್ ನಡೆಯಲಿದ್ದು, ನವೆಂಬರ್ 22 ರಂದು ರಾಮನಗರ ಮತ್ತು ಕೋಲಾರದಲ್ಲಿ ಆಡಿಷನ್ ಕೊನೆಗೊಳ್ಳಲಿದೆ. ಈ ಬಾರಿಯ ಲಿಟ್ಲ್ ಚಾಂಪ್ಸ್ ಮತ್ತು ಕಾಮಿಡಿ ಕಿಲಾಡಿ ಸೀಜನ್ ಗೆ ಪಬ್ಲಿಕ್ ಟಿವಿಯ ಸಹಯೋಗವಿದೆ.

  • 10 ರೂ. ಬೀಳಿಸಿ 2 ಲಕ್ಷ ರೂ. ದೋಚಿದ ಕಳ್ಳರು

    10 ರೂ. ಬೀಳಿಸಿ 2 ಲಕ್ಷ ರೂ. ದೋಚಿದ ಕಳ್ಳರು

    ಬೆಂಗಳೂರು: ನಗರದ ಬ್ಯಾಂಕೊಂದರಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು 2 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಅತ್ತಬೆಲೆಯಲ್ಲಿ ನಡೆದಿದೆ.

    ವೃತ್ತಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿರುವ ಏಡುಕೊಂಡಲ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿ. ಇವರು ಇಂದು ಬೆಳ್ಳಗೆ 10.30 ರ ಸಮಯದಲ್ಲಿ ಅತ್ತಿಬೆಲೆಯ ಸಿಂಡಿಕೇಟ್ ಬ್ಯಾಂಕ್‍ಗೆ ಆಗಮಿಸಿ ಕೆಲಸಗಾರರಿಗೆ ಬಟವಾಡೆ ಮಾಡುವ ಸಲುವಾಗಿ ಹಣ ಡ್ರಾ ಮಾಡಿದ್ದಾರೆ.

    ಏಡುಕೊಂಡಲ ಅವರು ಹಣ ಡ್ರಾ ಮಾಡಿಕೊಂಡು ಬ್ಯಾಂಕ್‍ನಿಂದ ಹೊರಬಂದ ಬಳಿಕ ಹಣವಿದ್ದ ಬ್ಯಾಗನ್ನು ತಮ್ಮ ಪಲ್ಸರ್ ಬೈಕ್ ನಲ್ಲಿ ಇಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ 10 ರೂ. ಮುಖ ಬೆಲೆಯ ನಾಲ್ಕು ನೋಟುಗಳನ್ನು ಕೆಳಕ್ಕೆ ಬೀಳಿಸಿ ತೆಗೆದುಕೊಳ್ಳುವಂತೆ ತಿಳಿಸಿದ್ದಾನೆ. ಆರೋಪಿಯ ಮಾತು ನಂಬಿ ಕೆಳಗೆ ಬಿದ್ದಿದ್ದ ನೋಟುಗಳನ್ನು ತೆಗೆದುಕೊಳ್ಳಲು ನೋಡುವಷ್ಟರಲ್ಲಿ ಬೈಕ್ ನಲ್ಲಿಟ್ಟಿದ್ದ 2 ಲಕ್ಷ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.

    ಇದನ್ನೂ ಓದಿ: ಹಣ ಬಿದ್ದಿದೆ ಅಂತಾ ಕಾರಿನಿಂದ ಇಳಿಸ್ತಾರೆ- ಕಾರಿನಲ್ಲಿಯ ಬ್ಯಾಗ್ ತಗೊಂಡು ಎಸ್ಕೇಪ್ ಆಗ್ತಾರೆ

    ಘಟನೆ ನಡೆದ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತಾದರೂ ಈ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಕಳ್ಳರ ಕೈಚಳಕದ ದೃಶ್ಯ ಸೆರೆಯಾಗಿಲ್ಲ. ಅಲ್ಲದೇ ಈ ಬ್ಯಾಂಕ್ ಮುಂಭಾಗದಲ್ಲಿ ಪ್ರತಿ ಶನಿವಾರ ಇಂತಹ ಘಟನೆಗಳು ನಡೆಯುತ್ತಿದ್ದು, ಕಳೆದ ವಾರ ಇದೇ ರೀತಿ 5 ಲಕ್ಷ ರೂ. ಹಣ ಕಳವು ಮಾಡಲಾಗಿತ್ತು.

    ಘಟನೆಯ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=_9mutYZrmUg

  • ವಿಡಿಯೋ: 5 ದಿನಗಳಿಂದ ಅರಳಿಕಟ್ಟೆ ಸುತ್ತುತ್ತಿದೆ ನಾಯಿ- ಬೆಂಗ್ಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಅಚ್ಚರಿ

    ವಿಡಿಯೋ: 5 ದಿನಗಳಿಂದ ಅರಳಿಕಟ್ಟೆ ಸುತ್ತುತ್ತಿದೆ ನಾಯಿ- ಬೆಂಗ್ಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಅಚ್ಚರಿ

    ಬೆಂಗಳೂರು: ಕಳೆದ ಐದು ದಿನಗಳಿಂದ ನಾಯಿಯೊಂದು ಹಗಲು ರಾತ್ರಿಯೆನ್ನದೆ ಅರಳಿಕಟ್ಟೆಯನ್ನು ಸುತ್ತುತ್ತಿರುವ ಅಚ್ಚರಿಯ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

    ಮಹಿಳೆ ಅಥವಾ ಯುವತಿಯರು ದೇವರಲ್ಲಿ ಬೇಡಿಕೆಯನ್ನಿಟ್ಟು, ಈಡೇರಿಸುವಂತೆ ಬೇಡಿಕೊಂಡು ಅರಳಿಕಟ್ಟೆ ಸುತ್ತುವುದನ್ನ ನೋಡಿದ್ದೇವೆ. ಆದರೆ ಇಲ್ಲಿ ನಾಯಿಯೊಂದು ಆಯ್ಯಪ್ಪಸ್ವಾಮಿ ದೇವಸ್ಥಾನದ ಮುಂದಿರುವ ಅರಳಿಕಟ್ಟೆಯನ್ನು ಐದು ದಿನದಿಂದ ಹಗಲು ರಾತ್ರಿಯೆನ್ನದೆ ಸುತ್ತುತ್ತಿದೆ. ಈ ನಾಯಿ ಐದು ದಿನದಿಂದ ತಿಂಡಿ ಆಹಾರವನ್ನು ಸ್ವೀಕರಿಸದೇ ದಿನದ 24 ಗಂಟೆಯೂ ಮರವನ್ನ ಸುತ್ತುತ್ತಿದೆ. ಈ ಅಚ್ಚರಿಯ ದೃಶ್ಯವನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.

    ಮೊದಲ ಬಾರಿಗೆ ಪ್ರಾಣಿಯೊಂದು ಮರವನ್ನು ಸುತ್ತುತ್ತಿರುವುದನ್ನು ನಾವು ನೋಡುತ್ತಿರುವುದು. ಈ ನಾಯಿಗೆ ದೇವರ ಕರುಣೆ ಇದೆ. ಅದಕ್ಕಾಗಿ ಈ ರೀತಿ ಮರವನ್ನು ಸುತ್ತುತ್ತಿದೆ. ನಾಯಿಯು ಮೊದಲು ಬಿಲ್ವೆಪತ್ರೆ ಮರ ಸುತ್ತಿದ್ದು, ನಂತರ ಬನ್ನಿಮರ ಹಾಗೂ ಅರಳಿಮರವನ್ನು ಸುತ್ತಿ ಕೊನೆಯಲ್ಲಿ ಎಲ್ಲಾ ಮರಗಳನ್ನು ಸುತ್ತುತ್ತಿದೆ. ನಾಯಿಗೆ ತಿಂಡಿ ನೀರು ನೀಡಿದರೂ ಅದು ಏನನ್ನೂ ತಿನ್ನಲಿಲ್ಲ. ಸುಸ್ತಾದರೆ ಸ್ವಲ್ಪ ಕುಳಿತುಕೊಳ್ಳುತ್ತದೆ. ಇಲ್ಲವಾದ್ರೆ ಮರವನ್ನು ಸುತ್ತುತ್ತಲೇ ಇರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಶುಕ್ರವಾರದಿಂದ ಕಾರ್ತೀಕ ಪೌರ್ಣಿಮೆ ಇದೆ. ಈ ದೇವಸ್ಥಾನದ ಜಾಗದಲ್ಲಿ ಒಂದು ಶಕ್ತಿ ಇರಬಹುದು. ನಾಯಿ ಮರ ಸುತ್ತುವುದು ಜನರ ಗಮನಕ್ಕೆ ಬಂದಿರಲಿಲ್ಲ. ಶುಕ್ರವಾರ ಮಧ್ಯಾಹ್ನದಿಂದ ಬಿಸ್ಕೆಟ್, ಹಾಲು, ನೀರು ಕೊಟ್ಟರೂ ಅದು ತಿನ್ನುತ್ತಿಲ್ಲ. ಇಲ್ಲಿ ಸುಮಾರು 30 ವರ್ಷಗಳಿಂದ ಅಯ್ಯಪ್ಪನ ಸನ್ನಧಿ ಇದೆ. ಶಬರಿಮಲೆಯಲ್ಲಿ ಯಾವ ರೀತಿ ಪೂಜೆ ನಡೆಯುವುದೋ ಅದೇ ತೆರನಾಗಿ ಇಲ್ಲಿಯೂ ನಡೆಯುತ್ತದೆ. ಈ ನಾಯಿಗೂ ಇಲ್ಲಿಗೂ ಒಂದು ನಿಕಟ ಸಂಬಂಧ ಇದೆ. ಅದರ ಪೂವರ್ಜರು ಇಲ್ಲಿ ಇದ್ದಿರಬಹುದು. ಇಲ್ಲಿ ದೇವಸ್ಥಾನವನ್ನು ಕಟ್ಟಿದವರಿರಬಹುದು. ಇನ್ನೂ ಬಾಕಿ ಇರುವ ಸೇವೆಯನ್ನು ಈ ನಾಯಿ ರೂಪದಲ್ಲಿ ಬಂದು ಸಲ್ಲಿಸುತ್ತಿರಬಹುದು ಎಂದು ದೇವಸ್ಥಾನದ ಪೂಜಾರಿ ಪ್ರಶಾಂತ್ ಭಟ್ ಹೇಳಿದ್ರು.

    https://www.youtube.com/watch?v=mhlZrzCtG98

  • ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದೆ. ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಎರಡು ಮಹತ್ವದ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿತ್ತು. ಕಾರವಾರ, ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣವನ್ನು ಸಿಬಿಐ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೈಬಿಟ್ಟಿತ್ತು. ಈ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳೇ ಇದ್ದು, ನರೇಂದ್ರ ಮೋದಿ, ಅಮಿತ್ ಶಾ ಜೊತೆ ಇರುವ ಉದ್ಯಮಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.

    ಉದ್ಯಮಿಗಳ ಮೇಲೆ ಎಸ್‍ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಿಜೆಪಿಯ ಹಣಬಲಕ್ಕೆ ಬ್ರೇಕ್ ಹಾಕಲು ಈ ಪ್ಲ್ಯಾನ್ ಮಾಡಿದೆ. ಬಿಜೆಪಿಯ ಐಟಿ ಶಸ್ತ್ರಕ್ಕೆ ಪ್ರತಿಯಾಗಿ ಎಸ್‍ಐಟಿ ಶಸ್ತ್ರ ಬಳಸಲು ಮುಂದಾಗಿದೆ. ನವೆಂಬರ್ 8ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

  • ಆಟೋ ವರ್ಕ್ ಶಾಪ್‍ನಲ್ಲಿ ಅಗ್ನಿ ಅವಘಡ: 1 ಆಟೋ ಭಸ್ಮ

    ಆಟೋ ವರ್ಕ್ ಶಾಪ್‍ನಲ್ಲಿ ಅಗ್ನಿ ಅವಘಡ: 1 ಆಟೋ ಭಸ್ಮ

    ಬೆಂಗಳೂರು: ಶುಕ್ರವಾರ ರಾತ್ರಿ ವರ್ಕ್ ಶಾಪ್ ಕ್ಲೋಸ್ ಆದ ಬಳಿಕ ಬೆಂಕಿ ಕಾಣಿಸಿಕೊಂಡು ಆಟೋವೊಂದು ಭಸ್ಮವಾಗಿರುವ ಘಟನೆ ನಗರದ ಸಾರಕ್ಕಿ ಸಿಗ್ನಲ್ ಬಳಿ ನಡೆದಿದೆ.

    ಧಾನ್ವಿ ಆಟೋ ವರ್ಕ್ ಶಾಪ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಶಾಪ್‍ನಲ್ಲಿದ್ದ 5 ಆಟೋಗಳಲ್ಲಿ ಒಂದು ಆಟೋ ಸಂಪೂರ್ಣ ಸುಟ್ಟುಹೊಗಿದೆ. ಶಾರ್ಟ್ ಸಕ್ರ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಒಟ್ಟು 5 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ಬಂಟಿ ಔರ್ ಬಬ್ಲಿ ಸಿನಿಮಾ ರೀತಿಯಲ್ಲಿ ಸ್ಯಾಂಡಲ್‍ವುಡ್ ಜೋಡಿಯಿಂದ ಜನರಿಗೆ ಮೋಸ

    ಬಂಟಿ ಔರ್ ಬಬ್ಲಿ ಸಿನಿಮಾ ರೀತಿಯಲ್ಲಿ ಸ್ಯಾಂಡಲ್‍ವುಡ್ ಜೋಡಿಯಿಂದ ಜನರಿಗೆ ಮೋಸ

    ಬೆಂಗಳೂರು: ಬಾಲಿವುಡ್‍ನ `ಬಂಟಿ ಔರ್ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ಮೋಸ ಮಾಡೋ ರೀತಿಯಲ್ಲೇ ಇಲ್ಲೊಂದು ಸ್ಯಾಂಡಲ್‍ವುಡ್ ಜೋಡಿ ರಿಯಲ್ ಲೈಫ್‍ನಲ್ಲಿ ಜನರಿಂದ ಹಣ ಪಡೆದು ಮೋಸ ಮಾಡಿದ್ದಾರೆ.

    ಸ್ಯಾಂಡಲ್‍ವುಡ್‍ನ ನಟ ಮತ್ತು ಕೊ-ಆರ್ಡಿನೇಟರ್ ಆಗಿರುವ ಚಂದು ಆಚಾರ್ಯ ಮತ್ತು ವೀಣಾ ಜೋಡಿ ಜನರಿಗೆ ಮಹಾ ಮೋಸ ಮಾಡಿದ್ದಾರೆ. ಇವರು ಬೊಮ್ಮಸಂದ್ರದಲ್ಲಿ ಜನಸ್ಫೋಟ ಸೌಂದರ್ಯ ಕೊ-ಆಪರೇಟೀವ್ ಬ್ಯಾಂಕ್ ಮಾಡಿದ್ರು. ಚಂದು ಆಚಾರ್ಯ ನೂರಾರು ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಿದ್ದಾನೆ.

    ವಂಚಿಸಿದ್ದು ಹೇಗೆ?: ಮೊದಲು ವೀಣಾ ಜನರನ್ನು ಸಂಪರ್ಕಿಸಿ, ನೀವು ನಮ್ಮಲ್ಲಿ ಹಣ ಹೂಡಿದರೆ ಒಂದು ಸೈಟ್ ಮತ್ತು ಪ್ರತೀ ತಿಂಗಳ ಕಂತಿಗೆ ಅಕ್ಕಿ, ಬೇಳೆ ನೀಡುತ್ತೇವೆ ಎಂದು ಹೇಳಿ ಆಮಿಷ ಒಡ್ಡಿ ನಂಬಿಸಿದ್ದಳು. ನಂತರ ಇದನ್ನ ನಂಬಿದ ನೂರಾರು ಜನರು ಇವರು ಬೋಗಸ್ ಕಂಪನಿಗೆ ಹಣ ಕಟ್ಟಿದ್ದಾರೆ. ಒಂದು ತಿಂಗಳಾದ ಮೇಲೆ ಮನೆಗೆ ರೇಷನ್, ಬೇಳೆ ಕೊಡದಾಗ ಇವರು ಮೋಸ ಮಾಡಿ ಹಣವನ್ನು ವಂಚಿಸಿದ್ದಾರೆ ಎಂದು ಗೊತ್ತಾಗಿದೆ. ನಂತರ ಮೋಸ ಹೋದ ಜನರು ಬಾಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

    ಚಂದು ಆಚಾರ್ಯ, ಕಂಡೋರ ಹೆಂಡ್ತಿಯನ್ನು ಕರೆದುಕೊಂಡು ಬಂದಿದ್ದನಂತೆ. ವೀಣಾಳನ್ನು ಪಾಲಾಕ್ಷಯ್ಯ ಎಂಬವರು ಮದುವೆ ಮಾಡಿಕೊಂಡಿದ್ದರು. ಸಿನಿಮಾ ಹಾಗೂ ಸೀರಿಯಲ್‍ನಲ್ಲಿ ಚಾನ್ಸ್ ಕೊಡಿಸ್ತೀನಿ ಅಂತಾ ತಲೆ ಕಡೆಸಿ ಗಂಡ ಪಾಲಾಕ್ಷಯ್ಯ ಬಾಂಬೆಗೆ ಕೆಲಸಕ್ಕೆ ಹೋದಾಗ ವೀಣಾಳನ್ನ ಕರೆದುಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ತಿಂಗಳ ಹಿಂದೆ ಪಾಲಾಕ್ಷಯ್ಯ ಮನೆಗೆ ನುಗ್ಗಿ ಮನೆಯಲ್ಲಿರೊ ಸಾಮಾನನ್ನ ಹೊತ್ತೊಯ್ದಿದ್ದಾರೆ.

    ವೀಣಾ ಹಾಗೂ ಪಾಲಾಕ್ಷಯ್ಯ ದಂಪತಿಗೆ 15 ವರ್ಷದ ಮಗಳಿದ್ದು, ಅವಳನ್ನೂ ಕರೆದುಕೊಂಡು ಹೋಗಿದ್ದಾರೆ. ನೀನು ನಿನ್ನ ಅಪ್ಪನ ಜೊತೆ ಮಾತಾಡಿದ್ರೆ ವಿಷ ಕುಡಿದು ಸತ್ತು ಹೋಗುತ್ತೀನಿ ಎಂದು ಮಗುವನ್ನ ಹೆದರಿಸುತ್ತಿದ್ದಳು. ನನ್ನ ಮಗುವನ್ನ ನನಗೆ ಕೊಡಿ ಅಂತಾ ನಾನು ಎಷ್ಟು ಕೇಳಿಕೊಂಡರೂ ಕೊಟ್ಟಿಲ್ಲ. ನನಗೆ ಚಂದು ಆಚಾರ್ಯ ಕೊಲೆ ಬೆದರಿಕೆ ಹಾಕಿದ್ದ. ಹೇಗಾದರೂ ಮಾಡಿ ನ್ಯಾಯ ದೊರಕಿಸಿಕೊಡಿ ಅಂತಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಯ್ಯ ದೂರು ದಾಖಲಿಸಿದ್ದಾರೆ.

    ಚಂದು ಆಚಾರ್ಯ ಮತ್ತು ವೀಣಾ ಜನರಿಂದ ಹಣ ಸಂಗ್ರಹಿಸಿ ಪರಾರಿಯಾಗಿದ್ದು, ತಲೆ ಮರೆಸಿಕೊಂಡು ಓಡಾಡ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಇವರ ಹುಡುಕಾಟದಲ್ಲಿ ತೊಡಗಿದ್ದಾರೆ.

  • 40ರ ಪ್ರಿನ್ಸಿಪಾಲ್‍ಗಾಗಿ 20ರ ಯುವಕನ ಆತ್ಮಹತ್ಯೆ ಯತ್ನ: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್

    40ರ ಪ್ರಿನ್ಸಿಪಾಲ್‍ಗಾಗಿ 20ರ ಯುವಕನ ಆತ್ಮಹತ್ಯೆ ಯತ್ನ: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್

    ಬೆಂಗಳೂರು: ನಗರದ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ತರುಣ್ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಸ್‍ಎಸ್‍ಎಲ್‍ಸಿ ಫೇಲ್ ಆಗಿರುವ ತರುಣ್ ಜೆಪಿ ನಗರದ ಖಾಸಗಿ ಶಾಲೆಯಲ್ಲಿ ರಿಸೆಪ್ಸನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ. ಈ ವೇಳೆ ಅಲ್ಲಿದ್ದ ಪ್ರಿನ್ಸಿಪಾಲ್ ಜೊತೆ ಲವ್ವಿಡವ್ವಿ ಶುರವಾಗಿದೆ.

    ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳಿಂದ ಲಿವಿಂಗ್ ರಿಲೇಷನ್ ಶಿಪ್ ಇಟ್ಕೊಂಡಿದ್ದರು. ಆದರೆ ಒಂದೂವರೆ ತಿಂಗಳಿಂದ ತರುಣನನ್ನ ಪ್ರಿನ್ಸಿಪಾಲ್ ತಿರಸ್ಕರಿಸಿದ್ದಾರೆ. ಪ್ರಿನ್ಸಿಪಾಲ್ ತಿರಸ್ಕರಿಸಿದ್ದಕ್ಕೆ ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕುಯ್ದುಕೊಂಡಿದ್ದ ತರುಣ್ ಗುರುವಾರ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎಂದು ಹೇಳುತ್ತಿರುವ ಯುವಕನ ಪೋಷಕರು ನಿಧನರಾಗಿದ್ದಾರೆ. ಈಗಾಗಲೇ ಪ್ರಿನ್ಸಿಪಾಲ್ ಗೆ ಮದುವೆಯಾಗಿ 20 ವರ್ಷದ ಮಗಳಿದ್ದು, ಪತಿ ಕೇರಳದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • ಆಧಾರ್ ಲಿಂಕ್ ಮಾಡಿದ್ರೆ ವಾಟ್ಸಪ್ ಸರಿಯಾಗುತ್ತೆ: #whatsappdown ಬಗ್ಗೆ ಜನ ಹೇಳಿದ್ದೇನು?

    ಆಧಾರ್ ಲಿಂಕ್ ಮಾಡಿದ್ರೆ ವಾಟ್ಸಪ್ ಸರಿಯಾಗುತ್ತೆ: #whatsappdown ಬಗ್ಗೆ ಜನ ಹೇಳಿದ್ದೇನು?

    ಬೆಂಗಳೂರು: ವಿಶ್ವಾದ್ಯಂತ ಕೆಲ ಕಾಲ ಕ್ರ್ಯಾಷ್ ಆಗಿ ವಾಟ್ಸಪ್ ತನ್ನ ಗ್ರಾಹಕರಿಗೆ ಶಾಕ್ ನೀಡಿತ್ತು, ಆದರೆ ಕೆಲವೇ ಸಮಯದಲ್ಲಿ ಸಮಸ್ಯೆಯನ್ನು ಬಗೆಹರಿಸಿದರೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡಿಗ್ ಆಗಿದ್ದು ಜನ ತಮ್ಮದೇ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಹೀಗಾಗಿ ಜನರ ಕೆಲ ಫನ್ನಿ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.

    ವಾಟ್ಸಪ್ ಕ್ರ್ಯಾಷ್! ಅಗಿರುವ ಹಿಂದೆ ಮೋದಿ ಜೀ ಅವರ ಕೈವಾಡ ಇದೆ ಎಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ – ಅಮಿತ್ ಕುಮಾರ್.

    ಆಧಾರ್ ಸಂಖ್ಯೆಯನ್ನು ವಾಟ್ಸಪ್ ಗೆ ಲಿಂಕ್ ಮಾಡಿ. ವಾಟ್ಸಪ್ ಆರಂಭವಾಗುತ್ತದೆ – ಅಮಿರ್ ಪಠಾಣ್.

    ವಾಟ್ಸಪ್ ಸಂಸ್ಥೆಯಲ್ಲಿ ಭಾರತೀಯ ಎಂಜಿನಿಯರ್ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಗೆಳತಿ ಆತನನ್ನು ಬ್ಲಾಕ್ ಮಾಡಿರಬೇಕು ಅದ್ದರಿಂದಲೇ ಆತ ವಾಟ್ಸಪ್ ಬ್ಲಾಕ್ ಮಾಡಿದ್ದಾನೆ- ಪೋಡಾರ್.

    ವಾಟ್ಸಪ್ ಕ್ರಾಷ್ ಆಗಿರುವುದರಿಂದ ಮೇಸೆಜ್ ಕಳುಹಿಸಲಾಗದೆ 500 ಜನರು ಭಾರತದಲ್ಲಿ ಸಾವನ್ನಪ್ಪಿದ್ದಾರೆ- ಭಾರ್ಗವ್ ವ್ಯಾಸ್.

    ವಿಶ್ವಾದ್ಯಂತ ಯುರೋಪ್, ಮಲೇಷಿಯಾ, ಇಂಡೋನೆಷಿಯಾ, ಚೀನಾ, ಸೌದಿ ಆರೇಬಿಯಾ, ಯುಎಸ್‍ಎ, ಶ್ರೀಲಂಕಾ ಸೇರಿದಂತೆ ಭಾರತದಲ್ಲಿ ವಾಟ್ಸಪ್ ಕೆಲ ಕಾಲ ಕ್ರಾಷ್ ಆಗಿತ್ತು.

    ಯಾವ ಕಾರಣಕ್ಕೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು ಎನ್ನುವುದನ್ನು ವಾಟ್ಸಪ್ ತಿಳಿಸಿಲ್ಲ. ಭಾರತದಲ್ಲಿ ಮಧ್ಯಾಹ್ನ ಸಮಸ್ಯೆ ಪರಿಹಾರವಾದರೂ ಕೆಲವೊಂದು ದೇಶಗಳಲ್ಲಿ ಸಮಸ್ಯೆ ಪರಿಹಾರವಾಗಿಲ್ಲ.

    2009ರಲ್ಲಿ ಆರಂಭಗೊಂಡಿದ್ದ ವಾಟ್ಸಪ್ ಸೇವೆಯನ್ನು 100 ಕೋಟಿಗೂ ಅಧಿಕ ಜನ ಬಳಸುತ್ತಿದ್ದಾರೆ. 2014ರಲ್ಲಿ ಫೇಸ್‍ಬುಕ್ ವಾಟ್ಸಪ್ ಕಂಪೆನಿಯನ್ನು ಖರೀದಿಸಿತ್ತು.

    https://twitter.com/ShrrinG/status/926377656865538048?

    https://twitter.com/IamBonkosi_SA/status/926375538213687296?

    https://twitter.com/musicleadsus/status/926371302457397248?

    https://twitter.com/ntsoahae_naledi/status/926377583121494016?

    https://twitter.com/DrakeIsBae96/status/926374986910232576

  • ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದನ್ನು ಹೇಳಿಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

    ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದನ್ನು ಹೇಳಿಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರದ ಅನುದಾನವನ್ನು ಸರ್ಕಾರ ಸರಿಯಾಗಿ ಬಳಕೆ ಮಾಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ನೀಡುವ ಅನುದಾನ ರಾಜ್ಯ ಸಂಗ್ರಹಿಸುವ ತೆರಿಗೆ ಹಣದಿಂದ ನೀಡುತ್ತದೆ. ಅನುದಾನವನ್ನು ನೀಡುವುದು ಹಣಕಾಸು ಆಯೋಗವೇ ಹೊರತು ಸರ್ಕಾರವಲ್ಲ ಎಂದು ಹೇಳಿದ್ದಾರೆ.

    ಅಲ್ಲದೇ ರಾಜ್ಯ ಸರ್ಕಾರ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಲ್ಲ ಅಂದರೆ ಸದನದ ವಿರೋಧಿ ಪಕ್ಷದ ನಾಯಕರು ಅಧಿವೇಶನದಲ್ಲಿಯೇ ಮಾತನಾಡಬಹುದು. ಆದರೆ ಬಿಜೆಪಿ ನಾಯಕರು ಈ ಕುರಿತು ಒಮ್ಮೆಯು ಪ್ರಶ್ನೆ ಮಾಡಿಲ್ಲ. ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳಿ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವುದು ನಮ್ಮ ಹಕ್ಕು ಎಂದು ಹೇಳಿದರು.

    ರಾಜ್ಯ ಸರ್ಕಾರಕ್ಕೆ ಕನ್ನಡ ರಾಜ್ಯೋತ್ಸವ ನಡೆಸಲು ಆಸಕ್ತಿ ಇಲ್ಲ, ಟಿಪ್ಪು ಜಯಂತಿ ಆಚರಿಸಲು ಹೆಚ್ಚು ಉತ್ಸುಕವಾಗಿದೆ ಎನ್ನುವ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯಿಸಿರುವ ಸಿಎಂ, ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ರಾಷ್ಟ್ರಪತಿಗಳೇ ತಮ್ಮ ಭಾಷಣದಲ್ಲಿ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರಿಗೆ ಇತಿಹಾಸ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

    ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ವಿಚಾರ ಕುರಿತ ಪ್ರಶ್ನೆಗೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ನಿರಂತರವಾಗಿ ಸೇವೆಯನ್ನು ನೀಡುವಂತೆ ಸೂಚಿಸಿದ್ದೇವೆ. ಅಲ್ಲದೇ ಔಷಧಿಗಳ ಪೂರೈಕೆಯಲ್ಲೂ ಯಾವುದೇ ವ್ಯತ್ಯಾಸ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಕಾಯ್ದೆಯಲ್ಲಿ ತಿದ್ದುಪಡಿಯನ್ನು ಮಾಡಲಾಗಿದ್ದು, ಸದನದಲ್ಲಿ ಮಂಡನೆ ಮಾಡಿ ಚರ್ಚೆ ನಡೆಸಬೇಕಿದೆ. ಈಗಾಗಲೇ ವೈದ್ಯರ ಜೊತೆ ಹಲವು ಬಾರಿ ಚರ್ಚೆಯನ್ನು ನಡೆಸಿದ್ದು. ಹೀಗಿದ್ದರು ವೈದ್ಯರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.