Tag: Bangalore

  • ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಧಿಕಾ ಒಂದು ವಸ್ತುವನ್ನ ಕದ್ದು ತಂದಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

    ಯಶ್ ಅವರನ್ನು ಭೇಟಿ ಮಾಡಲು ರಾಧಿಕಾ `ಕೆಜಿಎಫ್ ಸೆಟ್’ ಗೆ ಹೋಗಿದ್ದರು. ಅಲ್ಲಿಂದ ಸ್ಪೆಷಲ್ ಆಗಿ ಕಣ್ಣಿಗೆ ಕಂಡ ಒಂದು ವಸ್ತುವನ್ನು ತೆಗೆದುಕೊಂಡು ಬಂದಿದ್ದಾರೆ. ರಾಧಿಕಾ ಕೆಜಿಎಫ್ ಸೆಟ್ ನಲ್ಲಿದ್ದ ಹಳದಿ ಬಣ್ಣ ಸನ್ ಗ್ಲಾಸ್ ಅನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಅದನ್ನು ಹಾಕಿಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

    ಆ ಫೋಟೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಯಾರಿಗೂ ತಿಳಿಯದಂತೆ ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ. ಫೋಟೋ ನೋಡಿರುವ ಅಭಿಮಾನಿಗಳು ರಾಧಿಕಾ ಅವರ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮೂಲಕ ತಿಳಿಸಿದ್ದಾರೆ.

    ಕೆಲವರು ಈ ಫೋಟೋಗೆ ಲೈಕ್ ಕೊಟ್ಟು ಕೆಜಿಎಫ್ ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದ್ದು, ಕೆಜಿಎಫ್ ಸೆಟ್ ಗೆ ಹೋದಾಗ ನೀವಾದರೂ ನಿರ್ದೇಶಕರಿಗೆ ಹೇಳಿ ಬೇಗ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಅದರ ಜೊತೆಯಲ್ಲಿ ಯಶ್ ಅಣ್ಣನಿಗೂ ಚಿತ್ರ ರಿಲೀಸ್ ಮಾಡಿಸುವಂತೆ ತಿಳಿಸಿ ಎಂದಿದ್ದಾರೆ.

  • ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ

    ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ

    ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 34 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    2017-18 ಸಾಲಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲೆತ್ನಿಸಿದ 100 ಕೆ.ಜಿ. ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30 ಕೋಟಿಗೂ ರೂ. ಅಧಿಕವಾಗಿದೆ.

    ಅಕ್ರಮವಾಗಿ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿರುವ 34 ಜನ ಆರೋಪಿಗಳನ್ನ ಅಧಿಕಾರಿಗಳು ಬಂಧಿಸಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಧ್ಯ ಏಷ್ಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಜೋರ್ಡಾನ್, ಶ್ರೀಲಂಕಾ ಮತ್ತು ದಕ್ಷಿಣಾ ಏಷ್ಯಾದ ಅಕ್ರಮ ಸ್ಮಗ್ಲರ್ಸ್ ಇದೀಗ ಕಂಬಿ ಎಣಿಸುತ್ತಿದ್ದಾರೆ.

    ಬಟ್ಟೆ, ಕೊರಿಯರ್, ಬೆಲ್ಟ್ ಬಕಲ್, ಚಪ್ಪಲಿ, ಚಾಕಲೇಟ್, ಸೋಪ್, ಒಳ ಉಡುಪು, ಮಣ್ಣು ಮಿಶ್ರಿತ ಪುಡಿ ಹೀಗೆ ವಿವಿಧ ರೂಪಗಳಲ್ಲಿ ವಿಮಾನ ನಿಲ್ದಾಣದ ಮೂಲಕ ಸ್ಮಗ್ಲಿಂಗ್ ನಡೆಸುವ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    2016-17 ಸಾಲಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು 34 ಕೆ.ಜಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದರು. ಇದರ ಮಾರುಕಟ್ಟೆ ಮೌಲ್ಯ 9.97 ಕೋಟಿ ರೂ. ಕಳೆದ ಸಾಲಿಗೆ ಹೋಲಿಸಿಕೊಂಡರೆ ಪ್ರಸಕ್ತ ಸಾಲಿನಲ್ಲಿ ಶೇ 200 ರಷ್ಟು ಅಕ್ರಮ ಸಾಗಾಟ ಪ್ರಕರಣ ಹೆಚ್ಚಾಗಿವೆ ಎಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಸರ್ಕಾರ ಒಂದೊಂದು ಜಾತಿಯ ಸಮುದಾಯಕ್ಕೆ ಒಂದೊಂದು ಭಾಗ್ಯವನ್ನು ಕೊಟ್ಟಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಭಾಗ್ಯ, ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ, ಹಿಂದುಳಿದವರಿಗೆ ಲ್ಯಾಪ್ ಟಾಪ್ ಭಾಗ್ಯ ನೀಡಿದೆ. ಆದರೆ ಇದೀಗ ರಾಜ್ಯದ ದೊಡ್ಡ ಸಮುದಾಯವಾದ ಒಕ್ಕಲಿಗರಿಗೆ ಕಾಂಡೊಮ್ ಭಾಗ್ಯ ದಯಾಪಾಲಿಸಿದೆ.

    ಹೌದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಹೆಬ್ಬಾಳ ಜಂಕ್ಷನ್ ನಲ್ಲಿರೋ ಕಗ್ಗತ್ತಲ ಕಾಡಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ ಗಿಮಿಕ್ ಮಾಡಲು ಹೋದ ಕೃಷಿ ಸಚಿವ ಕೃಷ್ಣೆಭೈರೇಗೌಡ, ಬಿಡಿಎ ಕೆಂಪೇಗೌಡರಿಗೆ ಅಪಮಾನ ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ.

    ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಿಕರ್ತರಾದ ನಾಡುಪ್ರಭು ಕೆಂಪೇಗೌಡರ ಅಶ್ವರೂಢನ ಪುತ್ಥಳಿಯನ್ನು, ಬಿಡಿಎ ಅಭಿವೃದ್ಧಿಯನ್ನೇ ಕಾಣದ, ಅನೈತಿಕ ಚಟುವಟಿಕೆಗಳ ಗೂಡಾಗಿರೋ ಪಾರ್ಕ್‍ನಲ್ಲಿ ಅನಾವರಣಗೊಳಿಸಿದೆ. ಜೊತೆಗೆ ಈ ಜಾಗ ಅನೈತಿಕ ಹಾಗೂ ಅಸಭ್ಯ ವರ್ತನೆಗಳ ತಾಣವಾಗಿದೆ. ಬಿಡಿಎ ಈ ಜಾಗದಲ್ಲಿ ಪುತ್ಥಳಿ ಅನಾವರಣಕ್ಕೂ ಮುನ್ನ ಸ್ವಚ್ಛತೆ ಮಾಡದೇ, ಇಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ಕಾಂಡೊಮ್ ಗಳ ರಾಶಿ ಮಧ್ಯಯೇ ಪುತ್ಥಳಿಯನ್ನಟ್ಟಿದೆ. ಚುನಾವಣೆಯ ತರಾತುರಿಗೆ ಬಿದ್ದ ಬಿಡಿಎ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಯಾರ ಬೇಡಿಕೆಯೂ ಇಲ್ಲದೇ ಬೆಂಗಳೂರಿಗರನ್ನು ಸೆಳೆಯಲು ಹೋಗಿ ಮಹಾ ಎಡವಟ್ಟು ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಎಂ.ನಾಗರಾಜ್ ಹೇಳಿದ್ದಾರೆ.

    ಹೆಬ್ಬಾಳ ಜಂಕ್ಷನಲ್ಲಿ ನಿರ್ಮಾಣವಾಗಿರೋ ನಾಡಪ್ರಭುವಿನ ಪುತ್ಥಳಿ ಜಾಗವನ್ನು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಾರ್ಕ್ ಅಂತಾ ಕರೆಯುತ್ತಿದೆ. ಅಸಲಿಗೆ ಇದು ಪಾರ್ಕ್ ಅಲ್ಲ, ಕಸದ ಡಂಪಿಂಗ್ ಯಾರ್ಡ್ ಆಗಿದೆ. ಈ ಜಾಗದಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ. ಸ್ವಚ್ಫತೆಯಂತೂ ಮೊದಲೇ ಇಲ್ಲ. ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರೋ ಕೆಂಪೇಗೌಡರ ಅಶ್ವರೂಢನ ಪುತ್ಥಳಿಗೆ ಒಂದೇ ಒಂದು ವಿದ್ಯುತ್ ದೀಪವನ್ನು ಹಾಕಿಲ್ಲ. ಕಲ್ಲಿನಿಂದ ಕೋಟೆ ಆಕಾರದಲ್ಲಿ 30 ಅಡಿ ಎತ್ತರ ಕಟ್ಟಲಾಗಿದೆ. ಅದರ ಮೇಲೆ ಕೆಂಪೇಗೌಡರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಬಿಟ್ಟರೆ ಪುತ್ಥಳಿ ಸುತ್ತಲೂ ಪಾರ್ಕ್ ನಿರ್ಮಾಣ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದು ಹೋಗಲಿ ಅಲ್ಲಿ ಬಿದ್ದಿರೋ ಕಾಂಡೊಮ್ ತೆರವು ಮಾಡೋದು, ಅಲ್ಲಿರೋ ಮಂಗಳಮುಖಿಯರ ಉಪಟಳಕ್ಕೆ ಬ್ರೇಕ್ ಕೂಡ ಹಾಕುತ್ತಿಲ್ಲ ಎಂದು ಪ್ರೋ.ಎಂ.ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಸಲಿಗೆ ಬೆಂಗಳೂರಿನ್ನು ಕಟ್ಟಿದ ನಾಡದೊರೆ ಕೆಂಪೇಗೌಡರಿಗೆ ನಗರದಲ್ಲಿ ಜಾಗವೇ ಇಲ್ಲದೇ ಇದ್ರೆ ಇಂಥ ಕಸದ ತೊಟ್ಟಿಯಲ್ಲಿ, ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಇಡೋದೆ ಬೇಡ, ಪುತ್ಥಳಿಯನ್ನು ತೆರವುಗೊಳಿಸಲಿ. ಇಂಥಹ ಜಾಗದಲ್ಲಿ ಧೀಮಂತ ನಾಯಕನ ಪುತ್ಥಳಿಯನ್ನು ಇಡೋ ದರ್ದು ಸಿಎಂ ಸಿದ್ದರಾಮಯ್ಯರಿಗೆ ಏನಿತ್ತು ಅಂತ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

  • 51 ಪುಟ ಡೆತ್ ನೋಟ್ ಬರೆದು ಪ್ರೆಸ್‍ಕ್ಲಬ್ ನಲ್ಲೇ ವಿಷ ಕುಡಿದ ರೌಡಿ ನಾಗ!

    51 ಪುಟ ಡೆತ್ ನೋಟ್ ಬರೆದು ಪ್ರೆಸ್‍ಕ್ಲಬ್ ನಲ್ಲೇ ವಿಷ ಕುಡಿದ ರೌಡಿ ನಾಗ!

    ಬೆಂಗಳೂರು: ಸಹೋದರನ ಪತ್ನಿ ಮತ್ತು ಅವರ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ ಆರೋಪದಡಿ ಬಂಧಕ್ಕೆ ಒಳಗಾಗಿದ್ದ ರೌಡಿ ನಾಗರಾಜ್, ಬೇಲ್ ಪಡೆದು ಹೊರಬಂದ ಕೂಡಲೇ ಭಾರೀ ಹೈಡ್ರಾಮಾ ಮಾಡಿದ್ದಾನೆ.

    ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ರೌಡಿ ನಾಗರಾಜ್, ನನಗೆ ಸಚಿವರಾದ ಕೆಜೆ ಜಾರ್ಜ್ ಮತ್ತು ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್‍ರಿಂದ ಮೋಸ ಆಗಿದೆ. ಅಷ್ಟೇ ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರನ್ನು ಉಪಯೋಗಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾನೆ.

    ಬೆಂಗಳೂರು ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ 81 ಜನರ ವಿರುದ್ಧ ಆರೋಪ ಮಾಡಿದ್ದು, ಹೀಗಾಗಿ ವಿಷ ಸೇವಿಸ್ತಿದ್ದೀನಿ ಎಂದು ರೌಡಿ ನಾಗರಾಜ್ ಎಲ್ಲರೆದುರೇ ವಿಷ ಕುಡಿದಿದ್ದಾನೆ. ಈ ವೇಳೆ ವಿಷ ಕುಡಿಯುದನ್ನು ತಡೆಯೋಕೆ ಯತ್ನಿಸಿದ ವೇಳೆ ದೊಡ್ಡ ಮಟ್ಟದಲ್ಲಿ ಅಬ್ಬರಿಸಿಬಿಟ್ಟಿದ್ದಾನೆ.ವಿಷ ಸೇವಿಸಿದ ಹಿನ್ನೆಲೆಯಲ್ಲಿ ರೌಡಿ ನಾಗರಾಜ್ ನನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೌಡಿ ನಾಗರಾಜ್ ವಿಷ ಕುಡಿಯುವ ಮೊದಲು 51 ಪುಟಗಳ ಡೆತ್ ನೋಟ್ ಬರೆದುಕೊಂಡು ಬಂದಿದ್ದ. ಈ ಡೆತ್ ನೋಟ್ ನಲ್ಲಿ ಗಾಂಧಿನಗರದಿಂದ ಸ್ಪರ್ಧಿಸಿ ಎಂಎಲ್‍ಎ ಆಗೋಕೆ ಯತ್ನಿಸಿದ್ದೆ. ಈ ಬಾರಿ ಚುನಾವಣೆಗೆ ನಿಂತರ ದಿನೇಶ್ ಗುಂಡೂರಾವ್ ಸೋಲುತ್ತಿದ್ದರು. ಗುಂಡೂರಾವ್ ಜೊತೆ ಪೊಲೀಸ್ ಅಧಿಕಾರಿಗಳು ಕುಮ್ಮಕ್ಕಿನಿಂದಾಗಿ ನನ್ನ ಮೇಲೆ 9 ಸುಳ್ಳು ಕೇಸ್ ದಾಖಲಿಸಲಾಗಿದೆ. ಇದರಿಂದಾಗಿ ನನ್ನ ಜೀವನ ಹಾಳಾಯ್ತು ಎಂದು ಆರೋಪಿಸಿದ್ದಾನೆ.

    ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ದಿನೇಶ್ ಅವರ ಪತ್ನಿ ತಬು ಗುಂಡೂರಾವ್, ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅವರ ಪತ್ನಿ ಅಂಜಲಿ, ಅಜಯ್ ಹಿಲೋರಿ ಸೇರಿದಂತೆ ಎಸ್‍ಐ, ಎಎಸ್‍ಐ, ಪೊಲೀಸ್ ಪೇದೆವರೆಗೂ ಒಟ್ಟು 83 ಹೆಸರು ಉಲ್ಲೇಖಿಸಿದ್ದಾನೆ. ನನ್ನ ಸಾವಿಗೆ ಈ 83 ಮಂದಿ ಕಾರಣರೆಂದು 51 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ನಾಗರಾಜ್ ನನ್ನು ಐಸಿಯುನಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಪತ್ನಿ ಲಕ್ಷ್ಮಿ ಮತ್ತು ಸಂಬಂಧಿಕರು ಭೇಟಿ ನೀಡಿದ್ದಾರೆ.

    https://www.youtube.com/watch?v=7ji-VBZk5CI

  • ಅಭಿಮಾನಿಗಳ ಹಾರೈಕೆಯಿಂದ ಚೇತರಿಕೆ ಕಂಡಿದ್ದೀನಿ, ಅವರ ಪ್ರೀತಿಗೆ ನಾನು ಆಭಾರಿ: ಜಯಂತಿ

    ಅಭಿಮಾನಿಗಳ ಹಾರೈಕೆಯಿಂದ ಚೇತರಿಕೆ ಕಂಡಿದ್ದೀನಿ, ಅವರ ಪ್ರೀತಿಗೆ ನಾನು ಆಭಾರಿ: ಜಯಂತಿ

    ಬೆಂಗಳೂರು: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

    ವಿಕ್ರಂ ಆಸ್ಪತ್ರೆಯಲ್ಲಿ ನಟಿ ಜಯಂತಿ ಆರೋಗ್ಯ ಕುರಿತಾಗಿ ವಿಲ್ ಚೇರ್ ನಲ್ಲಿ ಬಂದು ಮಾತನಾಡಿ, ನಾನು ಬರುವಾಗ ಹೇಗಿದ್ದೆ ಈಗಲೂ ಚೆನ್ನಾಗಿ ಇದ್ದೇನೆ. ವೈದ್ಯರು ನನಗೆ ಮರುಜನ್ಮ ಕೊಟ್ಟಿದ್ದಾರೆ. ಮಗು ತರ ನನ್ನನ್ನು ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳ ಪ್ರೀತಿಗೆ ನಾನು ಆಭಾರಿ ಎಂದು ಭಾವುಕರಾಗಿ ಮಾತನಾಡಿದ್ದಾರೆ.

    ಡಾ. ಸತೀಶ್ ಮಾತನಾಡಿ, 10 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಇದ್ದರು.  ಜಯಂತಿ ಅವರು ಆರೋಗ್ಯ ಚೇತರಿಕೆಯಾಗಿದ್ದು,  ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ.

    ಅಮ್ಮ ಆರಾಮವಾಗಿದ್ದಾರೆ. ಫಿಸಿಯೋಥೆರಪಿ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಡಯೆಟ್ ಚಾರ್ಟ್ ಹೇಳಿದ್ದಾರೆ. ಅಮ್ಮನಿಗೆ ಸ್ವಲ್ಪ ಇದೆಲ್ಲ ಕಷ್ಟವಾಗಬಹುದು. ಆದರೆ ಹತ್ತು ದಿನ ಬಳಿಕ ಮತ್ತೆ ರೂಟೀನ್ ಚಕಪ್ ಇದೆ. ಆಗ ಆಸ್ಪತ್ರೆಗೆ ಬರಬೇಕು. ಅಮ್ಮನಿಗೆ ರೂಮರ್ಸ್ ಬಗ್ಗೆ ಏನು ಹೇಳಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಹೇಳಿದೆ. ಆಗ ಅಮ್ಮ ಮೊದಲು ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ನಂತರ ಬಿಡಪ್ಪ ಅಭಿಮಾನಿಗಳ ಹಾರೈಕೆ ಇರುವುದಕ್ಕೆ ಚೇತರಿಕೆ ಕಂಡಿದ್ದೀನಿ ಎಂದು ಹೇಳಿದ್ರು ಅಂತಾ ಮಗ ಕೃಷ್ಣ ಕುಮಾರ್ ಹೇಳಿದ್ದಾರೆ.

    ಮಾರ್ಚ್ 26 ಸೋಮವಾರ ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

  • ಮೂರು ದಿನಗಳ ಹಿಂದೆ ಎಚ್‍ಡಿಕೆ, ಇಂದು ಸಿಎಂ ಭೇಟಿ – ಕುತೂಹಲ ಮೂಡಿಸಿದೆ ಸ್ಯಾಂಡಲ್ ವುಡ್ ಕಿಚ್ಚನ ನಡೆ

    ಮೂರು ದಿನಗಳ ಹಿಂದೆ ಎಚ್‍ಡಿಕೆ, ಇಂದು ಸಿಎಂ ಭೇಟಿ – ಕುತೂಹಲ ಮೂಡಿಸಿದೆ ಸ್ಯಾಂಡಲ್ ವುಡ್ ಕಿಚ್ಚನ ನಡೆ

    ಬೆಂಗಳೂರು: ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಈ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟ್ ಪಕ್ಕಾ ಆಗಿದೆ ಎಂಬೆಲ್ಲ ಗಾಸಿಪ್ ಗಳು ಮಾಮೂಲಿ. ಆದರೆ ಈ ರೇಸಿನಲ್ಲಿ ಕಿಚ್ಚ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ವಿಶೇಷ!

    ಕಿಚ್ಚ ಸುದೀಪ್ ದಿಢೀರ್ ಎಂದು ಮೂರನೇ ಬಾರಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಸುದೀಪ್ ಬೆಂಗಳೂರಿನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿಕೆ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದೀಗ ಇಂದು ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ಇದನ್ನು ಓದಿ: ಮಾಜಿ ಸಿಎಂ ಎಚ್‍ಡಿಕೆ ಮನೆಗೆ ಸುದೀಪ್ ಭೇಟಿ – 2 ಗಂಟೆಗಳ ಕಾಲ ಸುದೀರ್ಘ ಚರ್ಚೆ

    ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮನೆಗೆ ಸ್ವತಃ ಬೇಟಿ ನೀಡಿ ಸರಿಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿರೋದು ರಾಜಕೀಯ ಪಂಡಿತರ ತಲೆ ಕೆಡಿಸಿದೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಶಾಸಕ ಸಾರಾ ಮಹೇಶ್ ಮುಂತಾದವರು ಹಾಜರಿದ್ದರು.

    ಚುನಾವಣೆ ಸಮಯ ಹತ್ತಿರವಾಗುತ್ತಿದ್ದಂತೆಯೇ ನಟ ಸುದೀಪ್ ಅವರ ಈ ಭೇಟಿಗಳು ಕುತೂಹಲ ಮೂಡಿಸಿದೆ. ಈ ಹಿಂದೆ ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದರು. ಶಾಸಕ ಶ್ರೀನಿವಾಸಮೂರ್ತಿ ಹಾಗೂ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಕೊನೆ ಘಳಿಗೆಯಲ್ಲಿ ಕೃತಿಗೆ ದರ್ಶನ್ ಜೊತೆ ನಟಿಸುವ ಅವಕಾಶ ಕೈ ತಪ್ತು!

    ಕೊನೆ ಘಳಿಗೆಯಲ್ಲಿ ಕೃತಿಗೆ ದರ್ಶನ್ ಜೊತೆ ನಟಿಸುವ ಅವಕಾಶ ಕೈ ತಪ್ತು!

    ಬೆಂಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸೋಕೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಆದರೆ ದರ್ಶನ್‍ಗೆ ಜೋಡಿಯಾಗುವ ಅವಕಾಶ ಬಹುಭಾಷಾ ನಟಿಯೊಬ್ಬರಿಗೆ ಒದಗಿಬಂದಿದ್ದು, ಆದರೆ ಕೊನೆ ಘಳಿಗೆಯಲ್ಲಿ ಅದು ಕೈತಪ್ಪಿ ಹೋಗಿದೆ.

    ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಬಹುಭಾಷಾ ನಟಿ ಕೃತಿ ಕರಬಂಧ ತಿರಸ್ಕರಿದ್ದಾರೆ. ಕೃತಿ ಕರಬಂಧ ಈಗ ಸೌತ್ ಇಂಡಿಯಾ ಚಿತ್ರಗಳಲ್ಲಷ್ಟೆ ಅಲ್ಲದೇ ಬಾಲಿವುಡ್‍ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.

    ಸ್ಯಾಂಡಲ್‍ವುಡ್ ಕೃತಿಯ ತವರೂರು. ಹೀಗಾಗೇ ಕೃತಿಗೆ ದರ್ಶನ್ ಅಭಿನಯಿಸುತ್ತಿರುವ `ಯಜಮಾನ’ ಸಿನಿಮಾದಿಂದ ಆಫರ್ ಬಂದಿತ್ತು. ಯಜಮಾನ ನಿರ್ದೇಶಕ ಪೊನ್ ಕುಮಾರ್ ಜೊತೆ ಕೃತಿ ಈ ಹಿಂದೆ ತಿರುಪತಿ ಎಕ್ಸ್ ಪ್ರೆಸ್ ಸಿನಿಮಾ ಮಾಡಿದ್ದರು. ಆದರೆ ಯಜಮಾನ ತಂಡ ನೀಡಿದ್ದ ಡೇಟ್ ಕೃತಿಗೆ ಹೊಂದಿಕೆಯಾಗಿಲ್ಲ. ಆ ವೇಳೆ ಹಿಂದಿ ಸಿನಿಮಾದಲ್ಲಿ ಬ್ಯುಸಿ ಇದ್ದರು. ಆದ್ದರಿಂದ ಯಜಮಾನ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದ್ರೆ ಶೀಘ್ರದಲ್ಲೇ ಒಂದೊಳ್ಳೆ ಚಿತ್ರದ ಮೂಲಕ ವಾಪಸ್ ಬರುತ್ತೀನಿ ಅಂತ ಕೃತಿ ಭರವಸೆ ನೀಡಿದ್ದಾರೆ.

    ಯಜಮಾನ ಚಿತ್ರದಲ್ಲಿ ಕೃತಿ ಬದಲು ಇದೀಗ ಟಾಲಿವುಡ್ ನಟಿ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಟಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ.

     

    ಮಾಸ್ತಿಗುಡಿ ಚಿತ್ರದ ನಂತರ ಕನ್ನಡದಲ್ಲಿ ಕೃತಿ ಅಭಿನಯದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ ಅದ್ಯಾವಾಗ “ರಾಜ್ ರೀಬೂಟ್” ಹಿಂದಿ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸ್ಕೊಂಡ್ರೋ ಕೃತಿಯ ಅಭಿನಯಕ್ಕೆ ಬಿಟೌನ್ ಕೂಡ ಫಿದಾ ಆಗಿದೆ. ಗೆಸ್ಟ್ ಇನ್ ಲಂಡನ್, ಶಾದಿ ಮೆ ಜರೂರ್ ಆನಾ, ವೀರ್ ಕೀ ವೆಡ್ಡಿಂಗ್ ಮತ್ತು ಕಾರ್‍ವಾನ್ ಹೀಗೆ ಒಂದಲ್ಲಾ ಎರಡಲ್ಲ ಸಾಲು-ಸಾಲು ಚಿತ್ರಗಳ ಜೊತೆ ಕೃತಿ ಬಾಲಿವುಡ್‍ನಲ್ಲಿ ಬ್ಯುಸಿ ಆಗಿದ್ದಾರೆ. ಒಂದೊಮ್ಮೆ ಬಾಲಿವುಡ್‍ಗೆ ಹೋದ ಬಳಿಕ ಇದೀಗ `ದಳಪತಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ತೆರೆಮೇಲೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಎರಡು ವರ್ಷಗಳ ಹಿಂದೆ ದಳಪತಿ ಚಿತ್ರ ಒಪ್ಪಿಕೊಂಡಿದ್ದರು. ಈ ಚಿತ್ರವನ್ನು ಪ್ರಶಾಂತ್‍ರಾಜ್ ನಿರ್ದೇಶನ ಮಾಡಿದ್ದು, ಪ್ರೇಮ್ ನಾಯಕರಾಗಿದ್ದಾರೆ. ಈ ಚಿತ್ರ ಏಪ್ರಿಲ್ 13ರಂದು ರಿಲೀಸ್ ಆಗುತ್ತಿದೆ.

  • ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

    ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

    ಬೆಂಗಳೂರು: ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಮಗೆ ಇದರಿಂದ ತುಂಬ ನೋವಾಗಿದೆ ಇನ್ಮುಂದೆ ಹೀಗೆ ಆಗುವುದಿಲ್ಲ. ನಾವು ಕನ್ನಡಿಗರಿಗೆ ನೋಯಿಸಬೇಕು ಅಂತ ಆ ರೀತಿ ಮಾತನಾಡಲಿಲ್ಲ ಎಂದು ಹೇಳಿ ರಾಜರಥ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರ್ಯಾಪಿಡ್ ರಶ್ಮಿ ಅವರಲ್ಲಿ ಆ ವಿಡೀಯೊವನ್ನ ಡಿಲೀಟ್ ಮಾಡಲು ತಿಳಿಸಿದ್ದೇವೆ. ಯಾವುದೋ ಸಮಯದಲ್ಲಿ ಹೀಗೆ ಆಗಿ ಹೋಗಿದೆ ಎಂದು ಹೇಳಿದರು. ಈ ವೇಳೆ ರಾಜರಥ ಚಿತ್ರ ತಂಡ ಎದ್ದುನಿಂತು ಕನ್ನಡಿಗರ ಕ್ಷಮೆ ಯಾಚಿಸಿತು.

    ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದ್ ಮಾತನಾಡಿ, ನಿನ್ನೆ ಸಂಜೆಯಿಂದ ದೂರವಾಣಿ ಕರೆಗಳು ಬರುತ್ತಿದೆ. ಸಾರ್ವಜನಿಕವಾಗಿ ತಪ್ಪು ನಡೆದಿದೆ ನೀವೇ ಕ್ಷಮೆ ಕೇಳಬೇಕು ಅಂತ ಹೇಳಿದಾಗ ಚಿತ್ರ ತಂಡದವರು ಬಂದಿದ್ದಾರೆ. ಚಿತ್ರ ರಿಲೀಸ್ ಆಗುವ ಮೊದಲೇ ಈ ರೀತಿ ಮಾತನಾಡಿದ್ದಾರೆ. ಕೆಲವರು ಕೇಳುವ ಪ್ರಶ್ನೆಗಳು ಉದ್ರೇಕಗೊಳಿಸುತ್ತದೆ. ಎಂತಹವರಿಗಾದರು ಸಿಟ್ಟು ತರಿಸುತ್ತೆ ಎಂದು ಹೇಳಿದರು.

    ಮಾಡಿದ ಸಿನಿಮಾಗಳೆಲ್ಲಾ ಹಿಟ್ ಆಗಲೇ ಬೇಕು ಅಂತ ಇಲ್ಲ. ಕೆಟ್ಟ ಪದವನ್ನು ಯಾರು ಬಳಸಿರಲಿಲ್ಲ. ರಾಜ್ ಕುಮಾರ್ ಆಗಿರಲಿ, ವಿಷ್ಣುವರ್ಧನ್, ಅಂಬರೀಶ್ ಯಾರೂ ಸಹ ಕೆಟ್ಟದಾಗಿ ಮಾತನಾಡಿರಲಿಲ್ಲ ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿತ್ರತಂಡ ಪೂರ್ತಿ ಕನ್ನಡದವರು, ಕನ್ನಡಿಗರ ಬಗ್ಗೆ ಈ ರೀತಿಯ ಮಾತು ಸರಿಯಲ್ಲ ಎಂದರು.

    ಭಂಡಾರಿ ಸಹೋದರರು ಹೇಳಿದ್ದು ಏನು?
    ಸಂದರ್ಶನದ ನಡುವೆ ರ್ಯಾಪಿಡ್ ರಶ್ಮಿ “ರಾಜರಥ ಸಿನಿಮಾ ನೋಡದ ಪ್ರೇಕ್ಷಕರು______” ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ನನ್ ಮಕ್ಳು” ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು” ಎಂದು ಹೇಳಿದ್ದಾರೆ.

    ಫೇಸ್‍ಬುಕ್ ನಲ್ಲಿ ಕ್ಷಮೆ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೇ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ  ಸಿಕ್ತು ಬಂಪರ್ ಆಫರ್!

    ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ ಸಿಕ್ತು ಬಂಪರ್ ಆಫರ್!

    ಬೆಂಗಳೂರು: ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡಿದ್ದ ಕಾಮನ್ ಮ್ಯಾನ್ ದಿವಾಕರ್ ಅವರಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ.

    ದಿವಾಕರ್ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ ‘ಬಿಗ್ ಬಾಸ್’ ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ಬಳಿಕ ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದ್ದರು.

    `ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಕುಡುಕನಾಗಿ ತಮ್ಮ ನಟನಾ ಪ್ರತಿಭೆಯನ್ನು ದಿವಾಕರ್ ಹೊರ ಹಾಕಿದ್ದರು. ಈಗ ಅದೆಲ್ಲವೂ ದಿವಾಕರ್ ಭವಿಷ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈಗ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ದಿವಾಕರ್ ಅವರಿಗೆ ಲಭಿಸಿದೆ.

    `ಸಾಹೇಬ’, `ಬೃಹಸ್ಪತಿ’ ಸಿನಿಮಾಗಳ ಬಳಿಕ ನಟ ಮನೋರಂಜನ್ ರವಿಚಂದ್ರನ್ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ `ಚಿಲ್ಲಂ’. ಇದೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ದಿವಾಕರ್ ಪಾಲಾಗಿದೆ. ಈ ಚಿತ್ರದಲ್ಲಿ ಹೀರೋ ಮನೋರಂಜನ್ ರವಿಚಂದ್ರನ್ ಗೆಳೆಯನ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ.

    ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. ‘ಚಿಲ್ಲಂ’ ಚಿತ್ರಕಥೆ ಡ್ರಗ್ಸ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

    ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸಲಿದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ ‘ಚಿಲ್ಲಂ’ ಚಿತ್ರಕ್ಕೆ ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳಲಿದ್ದಾರೆ.

  • ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆಯ ಅಸಲಿ ಕಿಡ್ನಾಪ್ ಕಥೆ ಇಲ್ಲಿದೆ

    ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆಯ ಅಸಲಿ ಕಿಡ್ನಾಪ್ ಕಥೆ ಇಲ್ಲಿದೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರತಿ ನಿತ್ಯ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾಕಷ್ಟು ಮಹಿಳಾಮಣಿಯರ ಮನಸ್ಸು ಗೆದ್ದಿರುವ ಧಾರವಾಹಿಗಳ ಟಾಪ್ ಲಿಸ್ಟ್ ನಲ್ಲಿದೆ. ಇದರಲ್ಲಿ ಲಕ್ಷ್ಮಿ ಬಾರಮ್ಮ ಗೊಂಬೆ ಅಲಿಯಾಸ್ ನೇಹಾ ಗೌಡ ಈಗ ಕಿಡ್ನಾಪ್ ಆಗಿದ್ದಾರೆ. ಆದರೆ ಕಿಡ್ನಾಪ್ ಹಿಂದಿನ ಅಸಲಿ ಕಥೆ ಬೇರೆನೇ ಇದೆ.

    ಹೌದು. ಕೆಲ ದಿನಗಳ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುತ್ತಿದ್ದ ನಟಿ ನೇಹಾ ಗೌಡ ಕಿಡ್ನಾಪ್ ಆಗಿದ್ದರು. ಧಾರಾವಾಹಿ ಪ್ರಿಯರಿಗೆ ಗೊಂಬೆಯನ್ನು ಕಿಡ್ನಾಪ್ ಮಾಡಿದವರು ಯಾರು ಎನ್ನುವುದೇ ಆತಂಕ? ಯಾರು ಮಾಡಿರುತ್ತಾರೆ? ಅಥವಾ ಹೊಸ ವಿಲನ್ ಎಂಟ್ರಿ ಆಗುತ್ತಾ ಅಂತೆಲ್ಲಾ ಪ್ರಶ್ನೆ ಹಾಕಿಕೊಂಡು ಕುತುಹಲದಿಂದ ಕಾಯುತ್ತಿದ್ದಾರೆ. ಆದರೆ ಧಾರಾವಾಹಿಯಲ್ಲಿ ಮಾತ್ರ ಗೊಂಬೆ ಇನ್ನು ಸಿಕ್ಕಿಲ್ಲ. ವಾರಗಟ್ಟಲೆಯಿಂದ ಗೊಂಬೆಗಾಗಿ ಹುಡುಕಾಟ ನಡೆಯುತ್ತಲೇ ಇದೆ.

    ಗೊಂಬೆ ಕಿಡ್ನಪ್ ನ ಅಸಲಿ ಕಥೆಯೇ ಬೇರೆ ಇದೆ. ಅಂದರೆ ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೊಂಬೆ ಕೆಲಸದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಧಾರಾವಾಹಿಯಲ್ಲಿ ಅಭಿನಯಿಸುವುದನ್ನು ಬಿಟ್ಟಿಲ್ಲ. ತನ್ನ ಪತಿ ಚಂದನ್ ಜೊತೆ ಹನಿಮೂನ್ ಹೋಗಿದ್ದಾರೆ. ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷೀ ಬಾರಮ್ಮ ಖ್ಯಾತಿಯ ಗೊಂಬೆ

    ಹಾಂಕಾಂಗ್ ನ ಪ್ರವಾಸಿ ಸ್ಥಳಗಳಿಗೆ ನೇಹಾ ಗೌಡ ಹಾಗೂ ಚಂದನ್ ಭೇಟಿ ನೀಡಿದ್ದು, ನವದಂಪತಿ ಜೊತೆಯಲ್ಲಿ ತೆಗೆಸಿಕೊಂಡು ಫೋಟೋಗಳನ್ನ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ ಅವರ ಮದುವೆ ಕಾರ್ಯಕ್ರಮ ಫೆಬ್ರವರಿ 18 ರಂದು ನಡೆದಿತ್ತು. ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರ ವಿವಾಹ ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ನಡೆದಿತ್ತು.