Tag: Bangalore

  • ಪುನೀತ್ ಬದಲಿಗೆ ಕೋಟ್ಯಾಧಿಪತಿ ಶೋಗೆ ಎಂಟ್ರಿಕೊಡಲಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

    ಪುನೀತ್ ಬದಲಿಗೆ ಕೋಟ್ಯಾಧಿಪತಿ ಶೋಗೆ ಎಂಟ್ರಿಕೊಡಲಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

    ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವು ಬರೀ ಸ್ಯಾಂಡಲ್‍ವುಡ್ ಗೆ ಸೀಮಿತವಾಗಿರದೆ ಬಾಲಿವುಡ್ ನಲ್ಲೂ ಜನಪ್ರಿಯವಾಗಿದೆ.

    ಈಗಾಗಲೇ ಕೋಟ್ಯಾಧಿಪತಿ ಕಾರ್ಯಕ್ರಮದ ಎರಡು ಸೀಸನ್ ಗಳು ಮುಗಿದಿದ್ದು, ಮೂರನೇ ಸೀಸನ್ ಶುರು ಮಾಡಲು ಖಾಸಗಿ ವಾಹಿನಿ ಸಿದ್ಧತೆ ನಡೆಸುತ್ತಿದೆ. ಆದರೆ ಈಗ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಬದಲು ನಟ ಯಶ್ ಇರುತ್ತಾರೆ ಎನ್ನಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪುನೀತ್ ಮತ್ತು ಯಶ್ ಬದಲಿಗೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ.

    ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಖ್ಯಾತಿ ಹೊಂದಿರುವ ನಟ ರಮೇಶ್ ಅರವಿಂದ್ ಈಗ `ಕನ್ನಡ ಕೋಟ್ಯಾಧಿಪತಿ’ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಬರುವ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಕೊನೆಯ ಹಂತದ ಅಂದರೆ ಅಗ್ರಿಮೆಂಟ್ ಗಳಿಗೆ ರಮೇಶ್ ಸಹಿ ಹಾಕಿದರೆ ಕಾರ್ಯಕ್ರಮದ ನಿರೂಪಣೆ ಮಾಡುವುದು ಅಧಿಕೃತವಾಗಲಿದೆ.

    ನಟ ಪುನೀತ್ ರಾಜ್ ಕುಮಾರ್ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಪುನೀತ್ `ಫ್ಯಾಮಿಲಿ ಪವರ್’ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಬಳಿಕ `ನಟ ಸಾರ್ವಭೌಮ’ ಸಿನಿಮಾದ ಶೂಟಿಂಗ್ ಆರಂಭವಾಗುತ್ತದೆ. ಅಷ್ಟೇ ಅಲ್ಲದೇ ಸಂತೋಷ್ ಆನಂದ್ ರಾಮ್ ನಿರ್ದೇಶಕದಲ್ಲಿ ಮೂಡಿಬರುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಬೇಕಾಗಿದೆ. ಈ ಕಾರಣದಿಂದ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.

  • ಶಾಲೆ ಪಾಠ ಬಿಟ್ಟು ಫೋನಿನಲ್ಲಿ ಕಾಮ ಪಾಠ ಮಾಡಿದ ಶಿಕ್ಷಕ!

    ಶಾಲೆ ಪಾಠ ಬಿಟ್ಟು ಫೋನಿನಲ್ಲಿ ಕಾಮ ಪಾಠ ಮಾಡಿದ ಶಿಕ್ಷಕ!

    ಬೆಂಗಳೂರು: ಶಿಕ್ಷಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುವ ಆರೋಪಿ ಮಂಜೇಶ್ ಅದೇ ಶಾಲೆಯಲ್ಲಿ ಆರನೇ ತರಗತಿ ಓದುವ ವಿದ್ಯಾರ್ಥಿನಿಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಫೋನ್ ಮಾಡಿ ವಾಟ್ಸಪ್ ಕಾಲ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಮನೆಬಿಟ್ಟು ಬಂದು ತನ್ನ ಜೊತೆ ಮಲಗು.. ಹೀಗೆ ಅಸಭ್ಯ ರೀತಿಯಲ್ಲಿ ಮಾತನಾಡಿದ್ದಾನೆ.

    ವಿದ್ಯಾರ್ಥಿನಿ ತನ್ನ ಅಣ್ಣನ ಮೊಬೈಲ್‍ನಲ್ಲಿ ಆತನ ಜೊತೆ ಮಾತನಾಡಿದ್ದು, ಹೀಗಾಗಿ ಮನೆಯವರಿಗೆ ತಿಳಿದಿದೆ. ನಂತರ ಮನೆಯವರು ಮೊಬೈಲ್ ನ ಆಡಿಯೋ ರೆಕಾರ್ಡ್ ಕೇಳಿಸಿಕೊಂಡಿದ್ದಾರೆ. ಆಗ ಆರೋಪಿ ಮಂಜೇಶ್‍ನ ಕೃತ್ಯ ಗೊತ್ತಾಗಿದೆ. ತಕ್ಷಣ ಪೋಷಕರೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಶಿಕ್ಷಕನೇ ಕಾಮುಕನಾಗಿದ್ದಕ್ಕೆ ವಿದ್ಯಾರ್ಥಿನಿಯ ಪೋಷಕರು ಆತನಿಗೆ ಸರಿಯಾಗಿಯೇ ಪಾಠ ಕಲಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವೋಟರ್ ಐಡಿಯಲ್ಲಿ ಮೂಡಿದ ಮದ್ವೆಯ ಆಮಂತ್ರಣ

    ವೋಟರ್ ಐಡಿಯಲ್ಲಿ ಮೂಡಿದ ಮದ್ವೆಯ ಆಮಂತ್ರಣ

    ಹಾವೇರಿ: ರಾಜ್ಯ ಚುನಾವಣೆ ಆಯೋಗ ಮತದಾನ ಮಾಡಿ ಅಂತಾ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಿದೆ. ಆದರೆ ಇಲ್ಲೊಬ್ಬರು ಮತದಾನದ ಅರಿವು ಮೂಡಿಸಲಿಕ್ಕೆ ತನ್ನ ಮದ್ವೆಯ ಆಮಂತ್ರಣ ಪತ್ರಿಕೆಯನ್ನು ವೋಟರ್ ಐಡಿಯಲ್ಲಿ ಮಾಡಿಸಿದ್ದಾರೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದಲ್ಲಿ ಮದುವೆಯಾಗುತ್ತಿರುವ ಜೋಡಿ ತಮ್ಮ ಲಗ್ನಪತ್ರಿಕೆಯನ್ನ ವಿಭಿನ್ನ ರೀತಿಯಲ್ಲಿ ಪ್ರಿಂಟ್ ಮಾಡಿಸಿ ಹಂಚುತ್ತಿದ್ದಾರೆ. ಸಿದ್ದಪ್ಪ ಜ್ಯೋತಿಯವರನ್ನು ಇದೇ 27ರಂದು ಮದುವೆಯಾಗಲಿದ್ದಾರೆ. ಆ ಮದುವೆಗೆ ವೋಟರ್ ಐಡಿಯ ಆಮಂತ್ರಣ ಮಾಡಿಸಿದ್ದಾರೆ. ಈ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುದರ ಜೊತೆಗೆ ಈ ಟ್ರೆಂಡ್ ಅನ್ನು ಹುಟ್ಟು ಹಾಕಿದ್ದಾರೆ.

    ಮದುವೆಯ ಕರೆಯೋಲೆಯನ್ನ ಮತದಾರರ ಗುರುತಿನ ಚೀಟಿಯ ಮಾದರಿಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಕರೆಯೋಲೆಯಲ್ಲಿ ದೊಡ್ಡಚಿಕ್ಕಣ್ಣನವರ ಬಂಧುಗಳ ಮದುವೆ ಸಂಭ್ರಮ ಎಂಬ ತಲೆ ಬರಹ ಹಾಕಿದ್ದು, ಎಸ್‍ಜೆಎಂಆರ್ ಜಿ  27042018 ಎಂದು ವೋಟರ್ ಐಡಿ ಕಾರ್ಡ್‍ನ ನಂಬರ್ ಹಾಕಿದ್ದಾರೆ. ಇದರ ಅರ್ಥ ಸಿದ್ದಪ್ಪ-ಜ್ಯೋತಿ ಮದುವೆ 27-04-2018 ಎಂದು ಅರ್ಥಕೊಡುತ್ತದೆ.

    ಕೆಳಗೆ ಮತದಾರರ ಹೆಸರು ಬರುವ ಸ್ಥಳದಲ್ಲಿ ಮದುಮಕ್ಕಳ ಹೆಸರು ಎಂದು ಹಾಕಿ ಚಿ.ಸಿದ್ದಪ್ಪ ಮತ್ತು ಚಿ.ಕು.ಸೌ.ಜ್ಯೋತಿ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲು ಮದುವೆ ದಿನಾಂಕ ಎಂದು ಮುದ್ರಿಸಿ 27-04-2018, ಸಮಯ 12-30 ಎಂದು ನಮೂದಿಸಿದ್ದಾರೆ. ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ.

    “ಜೀವ ಉಳಿಸಲು ರಕ್ತದಾನ, ದೇಶಕಟ್ಟಲು ಮತದಾನ, ಮತದಾನ ಮಹಾದಾನ, ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ, ಮತ ಮಾರಿಕೊಳ್ಳುವ ಹೇಡಿಗಳು ನಾವಲ್ಲ, ಮತವೆಂಬ ಅಸ್ತ್ರ ಬಳಸಿ ಪ್ರಾಮಾಣಿಕರನ್ನು ಆರಿಸುವ ಪ್ರಬುದ್ಧರು ನಾವು” ಎಂಬ ಸಂದೇಶವನ್ನು ಮುದ್ರಿಸಿದ್ದಾರೆ. ಕೊನೆಗೆ ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ ಎಂಬ ಸಾಲುಗಳು ಮುದ್ರಿಸಿದ್ದಾರೆ. ಈ ಎಲ್ಲಾ ವಿಚಾರ, ಮಾಹಿತಿಗಳು ವೋಟರ್ ಐಡಿಯ ಆಕಾರ, ಮಾದರಿ, ಬಣ್ಣ ಎಲ್ಲವೂ ಚುನಾವಣಾ ಗುರುತಿನ ಪತ್ರದ ಮಾದರಿಯಲ್ಲೇ ರೂಪುಗೊಂಡಿದೆ.

    ಇದಕ್ಕೆಲ್ಲ ಜಿಲ್ಲಾಧಿಕಾರಿಗಳು ಸಹಕಾರ ನೀಡಿದ್ದಾರೆ. ಈ ರೀತಿಯಲ್ಲೂ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಸ್ನೇಹಿತರು ಹರ್ಷವ್ಯಕ್ತಪಡಿಸಿದ್ದಾರೆ ಎಂದು ವರ ಸಿದ್ದಪ್ಪ ಸಂತೋಷದಿಂದ ಹೇಳಿದ್ದಾರೆ.

  • ಪತಿ ಬಿಟ್ಟು ಮತ್ತೊಬ್ಬನೊಂದಿಗೆ ಪ್ರಣಯದಾಟ – ಗಂಡನಿಗೆ ಗೊತ್ತಾದ್ಮೇಲೆ ಆತ್ಮಹತ್ಯೆಗೆ ಶರಣಾದ ದಲಿತ ಸಂಘಟನೆ ಅಧ್ಯಕ್ಷೆ

    ಪತಿ ಬಿಟ್ಟು ಮತ್ತೊಬ್ಬನೊಂದಿಗೆ ಪ್ರಣಯದಾಟ – ಗಂಡನಿಗೆ ಗೊತ್ತಾದ್ಮೇಲೆ ಆತ್ಮಹತ್ಯೆಗೆ ಶರಣಾದ ದಲಿತ ಸಂಘಟನೆ ಅಧ್ಯಕ್ಷೆ

    ಬೆಂಗಳೂರು: ದಲಿತ ಸಂಘಟನೆ ಅಧ್ಯಕ್ಷೆ ಸಹರಾ ಭಾನು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮನ ಬೆದರಿಕೆಯಿಂದ ಸಹರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಹರಾ ಭಾನು ದಲಿತ ಸಂಘಟನೆಯ ಕಾರ್ಯದರ್ಶಿ ರಫೀಕ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಪತಿ ಅಬ್ದುಲ್ ಚಾಂದ್ ಗೊತ್ತಾಗುತ್ತಿದ್ದಂತೆ ಬುಧವಾರ ಸಹರಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಇತ್ತ ಸಹರಾ ಸಾವಿನ ಬಳಿಕ ರಫೀಕ್ ಸಹ ಫೇಸ್‍ಬುಕ್ ಲೈವ್‍ನಲ್ಲಿ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಹರಾ ಭಾನು ಪತಿಯ ಕಿರುಕುಳದಿಂದ ಸಾವನ್ನಪ್ಪಿದ್ದಾಳೆಂಬದುನ್ನು ಬಿಂಬಿಸಲು ರಫೀಕ್ ನಕಲಿ ಡೆತ್ ನೋಟ್ ಬರೆದಿದ್ದಾನೆ ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

    ಡೆತ್ ನೋಟ್‍ನಲ್ಲಿ ಏನಿದೆ: ಡೆತ್ ನೋಟ್ ನಲ್ಲಿ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದು, ಎಲ್ಲ ವಿಚಾರದಲ್ಲಿಯೂ ನನ್ನನ್ನು ಅನುಮಾನದಿಂದ ನೋಡುತ್ತಾನೆ. ಪತಿ ಅಬ್ದುಲ್ ಹಾಗು ಕುಟುಂಬಸ್ಥರು ಸಹ ನನಗೆ ಸಪೋರ್ಟ್ ನೀಡುತ್ತಿಲ್ಲ. ಆದ್ದರಿಂದ ಸಾಯಲು ನಾನು ನಿರ್ಧರಿಸಿದ್ದು, ನನ್ನ ಸಾವಿಗೆ ಪತಿಯೇ ಕಾರಣ ಅಂತಾ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.

    ಸಹರಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ಫೆಬ್ರವರಿ 22ರಂದು ಬರೆಯಲಾಗಿದೆ. ಅಂದ್ರೆ ಸಹರಾ ಈ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರಾ ಅಥವಾ ಈಗ ಸಾವಿನ ಬಳಿಕ ಪತ್ರ ಬೆಳಕಿಗೆ ಬಂದಿದೆಯಾ ಎಂಬ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಸಹರಾ ಆತ್ಮಹತ್ಯೆಗೆ ಶರಣಾದ ತಕ್ಷಣ ರಫೀಕ್ ನಕಲಿ ಡೆತ್ ನೋಟ್ ತಯಾರಿಸಿ ಎಸ್ಕೇಪ್ ಆಗಲು ಪ್ರಯತ್ನಿಸಿರುವ ಸಾಧ್ಯತೆಗಳಿವೆ ಅಂತಾ ಶಂಕಿಸಲಾಗಿದೆ.

    ರಫೀಕ್ ಹೇಳೋದು ಹೀಗೆ: ಸಹರಾ ಭಾನು ಸಾವನ್ನಪ್ಪಿದ್ದು, ಅವರ ಏಳಿಗೆಯನ್ನು ಸಹಿಸದ ಕೆಲವರು ಆಕೆಯನ್ನು ಸಾಯಿಸಿದ್ದಾರೆ. ಸಹಾರ ಪತಿ ಅಬ್ದುಲ್ ಚಾಂದಪಾಶಾ, ಸೋದರರದಾದ ಫಯಾಜ್, ಯಜಾಜ್, ರಕ್ಷಣಾ ವೇದಿಕೆಯ ಲಕ್ಷ್ಮೀ, ರವಿ, ಸೋನು ಸಿಲಾವತ್, ಸಲೀಂ, ಪದ್ಮಾ, ಸುಜಿ, ಪರ್ವೀನ್ ಬಿ, ಪರ್ವೀನ್ ತಾಜ್, ವಾಣಿ ಇವರೆಲ್ಲ ಸಹರಾ ಭಾನು ಸಾವಿಗೆ ಕಾರಣರಾಗಿದ್ದಾರೆ. ಇಂದು ಸಹರಾ ನಮ್ಮ ಮಧ್ಯೆ ಇಲ್ಲ. ನಾನು ಅವರೆಲ್ಲ ಕೆಲಸಗಳನ್ನು ಮಾಡುತ್ತಿದ್ದೆ. ಆಕೆ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಳು. ನಾನು ಸಹರಾಳನ್ನು ಸಂಘಟನೆಗೆ ತಂದು ತಪ್ಪು ಮಾಡಿದ್ದರಿಂದ ಇಂದು ಆಕೆ ಸಾವನ್ನಪ್ಪಿದ್ದಾಳೆ. ಸಹರಾ ಯಾರಿಗೂ ತೊಂದರೆ ಕೊಟ್ಟಿಲ್ಲ ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ರು. ಆದ್ದರಿಂದ ನಾನು ಸಹ ವಿಷ ಸೇವಿಸಿ ಸಾಯುತ್ತಿದ್ದೇನೆ ಅಂತಾ ರಫೀಕ್ ಹೇಳಿದ್ದಾನೆ.

    ಸಹರಾ ಜೊತೆ ಖಾಸಗಿಯಾಗಿರುವ ಸನ್ನಿವೇಶವನ್ನು ರಫೀಕ್ ವಿಡಿಯೋ ಮಾಡಿಕೊಂಡಿದ್ದನು. ಕರೆದಾಗ ಬರದೆ ಹೋದ್ರೆ ನಮ್ಮಿಬ್ಬರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ರಫೀಕ್ ಬೆದರಿಕೆ ಹಾಕಿದ್ದ ಹಾಗು ಇಬ್ಬರ ಅನೈತಿಕ ಸಂಬಂಧ ಪತಿಗೂ ತಿಳಿಯುತ್ತಿದ್ದಂತೆ ಸಹರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

  • ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಸೇರ್ಪಡೆ

    ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಸೇರ್ಪಡೆ

    ಬೆಂಗಳೂರು: ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಹೊಸ ಅತಿಥಿಗಳ ಸೇರ್ಪಡೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ.

    ಜೈವಿಕ ಉದ್ಯಾನವನಕ್ಕೆ ಗುರುವಾರ ಕೂಡ ಹೊಸ ಅತಿಥಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೇದಾ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಉದ್ಯಾನವನದ ಆನೆಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

    ಇದೇ ತಿಂಗಳಿನಿಂದ ಬನ್ನೇರುಘಟ್ಟಕ್ಕೆ ಹೊಸ ಅತಿಥಿಗಳ ಆಗಮನವಾಗುತ್ತಿದ್ದು, ಮೊದಲಿಗೆ ಮೈಸೂರು ಜೂ ನಿಂದ ಗೌರಿ ಎಂಬ ಎರಡೂವರೆ ವರ್ಷದ ಜಿರಾಫೆಯನ್ನು ತರಲಾಗಿತ್ತು. ನಂತರ ಪಾರ್ಕ್ ನಲ್ಲಿರುವ ಝೀಬ್ರಾ ಮರಿಯೊಂದಕ್ಕೆ ಕಳೆದ ವಾರ ಜನ್ಮ ನೀಡಿತ್ತು. ಈಗ ವೇದಾ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.

    ಸದ್ಯಕ್ಕೆ ತಾಯಿ ಮತ್ತು ಮರಿಯಾನೆ ಆರೋಗ್ಯದಿಂದ ಇವೆ. ಈಗ ಬೇಸಿಗೆ ರಜೆ ಇರುವ ಕಾರಣ ಈ ಮೂರು ಹೊಸ ಅತಿಥಿಗಳ ಆಗಮನದಿಂದ ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

  • ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ 200 ಕೋಟಿ ರೂ. ವಂಚನೆ ಕೇಸ್ ಸಿಐಡಿಗೆ ವರ್ಗಾವಣೆ

    ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ 200 ಕೋಟಿ ರೂ. ವಂಚನೆ ಕೇಸ್ ಸಿಐಡಿಗೆ ವರ್ಗಾವಣೆ

    ಬೆಂಗಳೂರು: ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ ಬಹುಕೋಟಿ ವಂಚನೆ ಕೇಸ್ ಈಗ ಸಿಐಡಿಗೆ ವರ್ಗಾವಣೆಯಾಗಿದೆ. ಸದ್ಯಕ್ಕೆ 300 ಕೋಟಿಯಷ್ಟು ವಂಚನೆ ಆಗಿದೆ ಅಂತ ಬನಶಂಕರಿ ಪೊಲೀಸರು ದಾಖಲೆ ನೀಡಿದ್ದರೂ. ಆದರೆ ಸಿಐಡಿ ಪೊಲೀಸರು ಸುಮಾರು 500 ಕೋಟಿ ರೂ. ಯಷ್ಟು ವಂಚನೆ ಆಗಿದೆ ಎಂದು ಶಂಕಿಸಿದ್ದಾರೆ.

    ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ ಸಂಸ್ಥಾಪಕ ರಾಘವೇಂದ್ರ ಸುಮಾರು 1,800 ಜನರಿಗೆ 500 ಕೋಟಿಯಷ್ಟು ವಂಚನೆ ಮಾಡಿದ್ದರು. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಪೊಲೀಸರಿಗೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ 500 ಕೋಟಿಯಷ್ಟು ವಂಚನೆ ಆಗಿರುವ ಬಗ್ಗೆ ಸಾಕ್ಷ್ಯಾಧಾರವನ್ನು ಸಂಗ್ರಹಿಸಿದ್ದಾರೆ.

    ಇನ್ನು ರಾಹುಲ್ ದ್ರಾವಿಡ್, ಪತ್ರಕರ್ತ ಸೂತ್ರಂ ಸುರೇಶ್‍ನ ಮೂಲಕ 30 ಕೋಟಿ ರೂ. ಹೂಡಿದ್ದಾರೆ. ಅಲ್ಲದೇ ಸಿನಿಮಾ, ಕ್ರೀಡಾಪಟು ಹಾಗೂ ವೈದ್ಯರೇ ಸುಮಾರು 200 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ವಿವಿಧ ಠಾಣೆಗಳಲ್ಲಿ ಇದುವರೆಗೂ 1,300ಕ್ಕೂ ಅಧಿಕ ಜನ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೂಡ ಆರಂಭವಾಗಿದೆ.

    ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಘವೇಂದ್ರ ಮತ್ತು ಸೂತ್ರಂ ಸುರೇಶ್ ಸೇರಿದಂತೆ ಐವರನ್ನು ಸಿಐಡಿ ಪೊಲೀಸರು ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಕೂಡ ಇದ್ದಾರೆ ಎಂಬ ಅಂಶಗಳನ್ನು ಸಿಐಡಿ ಪೊಲೀಸರು ತಿಳಿಸಿದ್ದಾರೆ.

  • ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

    ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

    ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈಗ ಚಿತ್ರ ನಟಿ ಅಮೂಲ್ಯರವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಅವರು ಈಗ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಜೆಡಿಎಸ್ ಕಚೇರಿಯಲ್ಲಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಕೂಡಾ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅಮೂಲ್ಯ, ನಾನು ನನ್ನ ಪತಿ ಮತ್ತು ಮಾವ ಅವರ ಜೊತೆ ಪಕ್ಷ ಸೇರ್ಪಡೆ ಆಗಿದ್ದೀನಿ. ಮುಂದಿನ ದಿನಗಳಲ್ಲಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಅಮೂಲ್ಯ ತಿಳಿಸಿದ್ದಾರೆ.

    ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಆರ್ ಆರ್ ನಗರಕ್ಕೆ ಟಿಕೆಟ್ ಕೊಡೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ರಾಮಚಂದ್ರ ಅವರು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಲ್ಲಿ ಟಿಕೆಟ್ ಸಿಕ್ಕದ ಹಿನ್ನೆಲೆಯಲ್ಲಿ ಚಿಕ್ಕಪೇಟೆಯ ಹೇಮಚಂದ್ರಸಾಗರ್ ಮತ್ತು ಸಿ.ವಿ ರಾಮನ್ ನಗರದ ರಮೇಶ್ ಜೆಡಿಎಸ್ ಸೇರ್ಪಡೆಯಾದರು.

    ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ದಿನೇ ದಿನೇ ಪಕ್ಷದ ಶಕ್ತಿಯನ್ನು ಕಾರ್ಯಕರ್ತರು ಹೆಚ್ಚಿಸಿದ್ದಾರೆ. ಸಾಕಷ್ಟು ಜನ ಪಕ್ಷಕ್ಕೆ ಬಂದು ಸೇರುತ್ತಾ ಇದ್ದಾರೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೇ ಮಾಡುತ್ತಾರೆ. ನಾಳೆಯೂ ಸಾಕಷ್ಟು ಜನ ಜೆಡಿಎಸ್ ಸೇರ್ಪಡೆಯಾಗುತ್ತಾರೆ. ರಾಯಚೂರು ಹುಬ್ಬಳ್ಳಿ ಬಂಡಾಯ ಎದ್ದವರು ಬರುತ್ತಾರೆ. ಬೆಂಗಳೂರು ಒಂದರಲ್ಲೇ 8 ರಿಂದ 10 ಸೀಟು ಗೆಲ್ಲುತ್ತೇವೆ. ಇವತ್ತಿನ ಬೆಳವಣಿಗೆ ನೋಡಿದರೆ ಜೆಡಿಎಸ್ ಗೆ ಒಳ್ಳೆಯ ಕಾಲ ಬಂದಿದೆ ಎಂದು ತಿಳಿಸಿದರು.

    ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕುರುಬರ ಸಂಘ ಪ್ರತಿಭಟನೆ ವಿಚಾರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ನಾನು ಕುರುಬ ಸಮುದಾಯವನ್ನು ಬೈಯೋದಿಲ್ಲ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಫ್ಲೆಕ್ಸ್ ಗಳಿಗೆ ಚಪ್ಪಲಿಯಲ್ಲಿ ಹೊಡೆಸಿದ್ದಾರೆ. ಚಪ್ಪಲಿಯಿಂದ ನಮ್ಮ ಫ್ಲೆಕ್ಸ್ ಗಳಿಗೆ ಚಪ್ಪಲಿಯಿಂದ ಹೊಡೆಸಿದ್ದರೂ ನನಗೆ ಬೇಜಾರಿಲ್ಲ. ಒಳ್ಳೆಯದಾಗಲಿ ಎಂದರು.

  • ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಭಾರೀ ಮಳೆ – ಸಿಡಿಲು ಬಡಿದು ಮೂವರ ದುರ್ಮರಣ

    ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಭಾರೀ ಮಳೆ – ಸಿಡಿಲು ಬಡಿದು ಮೂವರ ದುರ್ಮರಣ

    ಬೆಂಗಳೂರು: ಬಿಸಿಲಿನ ಜಳಕ್ಕೆ ಬಳಲಿ ಬೆಂಡಾಗಿದ್ದ ಸಿಲಿಕಾನ್ ಮಂದಿಗೆ ವರುಣ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ.

    ನಗರದ ಸದಾಶಿವನಗರ, ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್ ,ಮೈಸೂರು ರೋಡ್, ಎಮ್ ಜಿ ರೋಡ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೇಲ್ಮೈ ಸುಳಿಗಾಳಿಯ ಹಿನ್ನೆಲೆಯಲ್ಲಿ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

    ಮಲ್ಲೇಶ್ವರಂನಲ್ಲಿ ಸುರಿದ ಮಳೆಗೆ ಮರ ಧರೆಗುರುಳಿದೆ. ಆರ್‍ಎಂವಿಯಲ್ಲಿ ಮರ ಬಿದ್ದು, ಒಂದು ಕಾರು ಜಖಂ ಆಗಿದೆ. ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೋರುಗುಂಟೆ ಪಾಳ್ಯ, ಮಹಾಲಕ್ಷ್ಮಿ ಲೇಔಟ್, ಕುಳ್ಳಪ್ಪ ಸರ್ಕಲ್, ಎಂಸ್ ರಾಮಯ್ಯ ಆಸ್ಪತ್ರೆ ಮತ್ತು ಜಾಲಹಳ್ಳಿ ಬಳಿ 40ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.

    ದಾವಣಗೆರೆಯಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಹರಪನಹಳ್ಳಿ ತಾಲೂಕಿನ ಹುಣಸೆಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಮೇಕೆ ಮೇಯಿಸುತ್ತಿದ್ದ ಯುವಕ, 11 ಮೇಕೆಗಳು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿವೆ.

    ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಣದಲ್ಲಿ ಮೆಕ್ಕೆಜೋಳದ ರಾಶಿ ಮಾಡುವಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹನುಮನಹಳ್ಳಿ ಗ್ರಾಮದ ಕಿರಣ್ ಕುಮಾರ್ ಹಾಗೂ ಲೋಕೇಶ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಓರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರಿನಲ್ಲಿ ಭಾನುವಾರದಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಮಳೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆಗಳಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

  • ಸೆಟ್ ನಲ್ಲಿ ನಾಯಕಿಯ ಬದಲು ಇನ್ಯಾರಿಗೋ ಕಿಸ್ ಮಾಡಿದ್ರು ನಟ ಪ್ರೇಮ್

    ಸೆಟ್ ನಲ್ಲಿ ನಾಯಕಿಯ ಬದಲು ಇನ್ಯಾರಿಗೋ ಕಿಸ್ ಮಾಡಿದ್ರು ನಟ ಪ್ರೇಮ್

    ಬೆಂಗಳೂರು: ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶಿಸಿರುವ ದಳಪತಿ ಸಿನಿಮಾ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ದಳಪತಿಯ ಚಿತ್ರತಂಡ ಖಾಸಗಿ ರೇಡಿಯೋ ಕಾರ್ಯಕ್ರಮಕ್ಕೆ ಬಂದಿತ್ತು. ಈ ಕಾರ್ಯಕ್ರಯದಲ್ಲಿ ನಟ ಪ್ರೇಮ್ ಸೇರಿದಂತೆ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಟಿ ಕೃತಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಸಿನಿಮಾಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು.

    ನಿರೂಪಕಿ ಪ್ರೇಮ್ ಗೆ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಬರುತ್ತದೆ ಎಂದು ಒಂದು ಪ್ರಶ್ನೆ ಕೇಳಿದ್ದಾರೆ. ಆಗ ನಟಿ ಕೃತಿ ಅವರು ಸಿನಿಮಾ ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ಘಟನೆಯ ಬಗ್ಗೆ ಹೇಳಿದ್ದಾರೆ.

    ಸಿನಿಮಾದಲ್ಲಿ ನಟ ಮತ್ತು ನಟಿಯ ಮಧ್ಯೆ ಒಂದು ಕಿಸ್ಸಿಂಗ್ ಸೀನ್ ನ ಶೂಟಿಂಗ್ ನಡೆಯುತ್ತಿತ್ತು. ಆಗ ನಾನು ಬೈಸಿಕಲ್ ಮೇಲೆ ಬರುತ್ತಿದ್ದೆ. ನನಗೆ ನಟ ಪ್ರೇಮ್ ಬಂದು ಕಿಸ್ ಮಾಡಬೇಕಿತ್ತು. ಆದರೆ ನನ್ನನ್ನ ನಿರ್ಲಕ್ಷಿಸಿ ನಿರ್ದೇಶಕ ಪ್ರಶಾಂತ್ ಸರ್ ಗೆ ಕಿಸ್ ಮಾಡಿದ್ರೂ ಎಂದು ಹೇಳಿದ್ದಾರೆ.

    ದಳಪತಿ ಸಿನಿಮಾದ ಮೊದಲ ಭಾಗವನ್ನು ಹೀರೋ ಮತ್ತು ಹೀರೋಯಿನ್ ಮಧ್ಯೆಯ ಲವ್ವಿಗೇ ಮೀಸಲಿಡಲಾಗಿದೆ. ಕ್ಯೂಟ್ ಎನಿಸೋ ಹೀರೋಯಿನ್ ಮೇಲೆ ಹುಡುಗನಿಗೆ ಭಲೇ ಪ್ರೀತಿ. ಪ್ರೀತಿಸುವ ಬಹುತೇಕರು ಮಾಡುವಂತೆ ಇಲ್ಲೂ ಕೂಡಾ ಹೀರೋ ಒಂದಿಷ್ಟು ಸುಳ್ಳು ಹೇಳಿ ಹುಡುಗಿಯನ್ನು ಪಟಾಯಿಸಿಕೊಂಡಿರುತ್ತಾನೆ. ದಿನ ಕಳೆದಂತೆ ಹುಡುಗಿಗೆ ಈತನ ಅಸಲಿಯತ್ತು ಗೊತ್ತಾಗಿಬಿಡುತ್ತದೆ. ಸುಳ್ಳು ಹೇಳಿದರೇನು ಹುಡುಗನಿಗೆ ಒಳ್ಳೇತನವಿದ್ದರೆ ಸಾಕು ಅಂತಾ ಮತ್ತೆ ಆಕೆ ಕೋಪವನ್ನು ತಣ್ಣಗಾಗಿಸಿಕೊಳ್ಳುವ ಹೊತ್ತಿಗೆ ಯಾರೂ ಊಹಿಸಲಾರದ ಟ್ವಿಸ್ಟ್ ನಡೆಯುತ್ತದೆ.

    ಪ್ರಶಾಂತ್ ರಾಜ್ ಅವರ ನಿರ್ದೇಶನಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಸಾಥ್ ನೀಡಿವೆ.

  • ಬಿಪಿ, ಶುಗರ್ ಏನಿಲ್ಲ ಆದ್ರೆ ಆರೋಗ್ಯ ಸರಿಯಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ: ಟಿಕೆಟ್ ವಂಚಿತ ಅಭ್ಯರ್ಥಿ

    ಬಿಪಿ, ಶುಗರ್ ಏನಿಲ್ಲ ಆದ್ರೆ ಆರೋಗ್ಯ ಸರಿಯಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ: ಟಿಕೆಟ್ ವಂಚಿತ ಅಭ್ಯರ್ಥಿ

    ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ 218 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಬಾದಾಮಿಯ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಭಿನ್ನಮತ ಮುಗಿಲೆದ್ದಿದೆ.

    ಭಾನುವಾರ ರಾತ್ರಿ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಇದರಲ್ಲಿ ಈ ಬಾರಿ ಹಾಲಿ ಶಾಸಕರಾದ ಬಾಗಲಕೋಟೆಯ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ರನ್ನು ಕೈಬಿಡಲಾಗಿದೆ. ಸದ್ಯಕ್ಕೆ ಬಾದಾಮಿ ಕ್ಷೇತ್ರದಲ್ಲಿ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

    ಟಿಕೆಟ್ ಸಿಗದ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಪಕ್ಷ ಟಿಕೆಟ್ ಘೋಷಣೆ ಮಾಡಿಲ್ಲ. ಸಿಎಂ ಬಾದಾಮಿ ಅಭ್ಯರ್ಥಿಯಾಗಿದ್ದರೆ ಆದರೆ ಸ್ಥಾನ ಬಿಟ್ಟುಕೊಡುತ್ತಿದೆ. ಆದರೆ ಈಗ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಆದ್ದರಿಂದ ಈಗ ಸಾಧ್ಯವಿಲ್ಲ ಸಿಎಂ ಕೂಡಾ ನನಗೆ ಬಿಫಾರಂ ಕೊಡುತ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ನನ್ನ ಆರೋಗ್ಯ ಸರಿಯಿಲ್ಲ ಅನ್ನೋದು ಸುಳ್ಳು. ನನಗೆ ಬಿಪಿ, ಶುಗರ್ ಏನು ಇಲ್ಲ. ನಾನು ಆರೋಗ್ಯವಾಗಿದ್ದೀನಿ. ನಾನು 5 ಬಾರಿ ಶಾಸಕನಾಗಿದ್ದೀನಿ. 6 ನೇ ಬಾರಿಯೂ ನಾನೇ ಗೆದ್ದು ಶಾಸಕನಾಗುತ್ತೇನೆ. ಕಾಂಗ್ರೆಸ್ ಟಿಕೆಟ್ ಕೊಡುತ್ತದೆ. ನಾನು ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಭರವಸೆ ಕೊಟ್ಟಿದ್ದಾರೆ. ಮುಂದಿನ 2 ದಿನ ಕಾದು ನೋಡಿ, ಮತ್ತೆ ನಾನೇ ಟಿಕೆಟ್ ತಗೊಂಡು ಶಾಸಕನಾಗುವೆ. ಟಿಕೆಟ್ ನನಗೆ ಸಿಗುತ್ತದೆ ಎಂದು ಹೇಳಿದ್ದಾರೆ.