Tag: Banana

  • ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದ ಪಾಪಿಗಳು

    ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದ ಪಾಪಿಗಳು

    ಮಡಿಕೇರಿ: ತೋಟದೊಳಗೆ ಗೋವುಗಳು ಬರುತ್ತಿವೆ ಎಂದು ಪಾಪಿಗಳು ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಐಗೂರಿನಲ್ಲಿರುವ ಟಾಟಾ ಎಸ್ಟೇಟ್‍ಗೆ ಸ್ಥಳೀಯ ದನಗಳು ಹೋಗುತ್ತಿದ್ದವಂತೆ. ಹೀಗಾಗಿ ನಿಷ್ಕರುಣೆಯವರಾದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಹಸುಗಳಿಗೆ ತಿನಿಸಿ ಕೊಂದಿದ್ದಾರೆ. ಕಳೆದ ಹಲವು ದಿನಗಳಿಂದ 20ಕ್ಕೂ ಹೆಚ್ಚು ಹಸುಗಳಿಗೆ ಇದೇ ರೀತಿ ವಿಷವಿಟ್ಟು ಕೊಂದಿದ್ದಾರೆ.

    ಸತ್ತ ಹಸುಗಳನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ಹಸುಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮದವರು, ಹುಡುಕಾಡಲು ಪ್ರಾರಂಭಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

    ಈ ಸುದ್ದಿ ಎಲ್ಲೆಡೆ ಅಬ್ಬುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಎಸ್ಟೇಟ್ ಮ್ಯಾನೇಜರ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಎಸ್ಟೇಟ್ ಮ್ಯಾನೇಜರ್ ಹಸುಗಳು ಎಸ್ಟೇಟ್‍ನ ಒಳಗೆ ಸಾವನ್ನಪ್ಪಿದ್ದವು. ನಾವೇ ಗುಂಡಿಗೆ ಹಾಕಿದ್ದೇವೆಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಯಾವಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜೋರು ಮಾಡಿದರೋ ಆಗ ‘ನಾನು ಇಲ್ಲಿಯವನೇ, ನನ್ನನ್ನು ಹೆದರಿಸೋದು ಬೇಡ ಅಂತ’ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜನರು ಮ್ಯಾನೇಜರ್ ವಿರುದ್ಧ ತೀವ್ರ ಗಲಾಟೆ ಮಾಡಿದ್ದಾರೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಸದ್ಯ ಎಸ್ಟೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಗ್ದ ಗೋವುಗಳಿಗೆ ವಿಷವಿಟ್ಟ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    – ನಂದಿ ಬೆಟ್ಟದಲ್ಲಿರುವ ಮಂಗಳಿಗೆ ಬಾಳೆಹಣ್ಣು ನೀಡಿದ ನಟ

    ಬೆಂಗಳೂರು: ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎಂದು ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಅವರು ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆಗಿದೆ. ಜನರಿಗೆ ಊಟ ಸಿಗದೆ ಪರಾದಾಡುತ್ತಿದ್ದಾರೆ. ಇನ್ನೂ ಈ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಷ್ಟವಂತು ಹೇಳತೀರದು. ಹಾಗಾಗಿ ಹಲವಾರು ಈ ಲಾಕ್‍ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅಂತಯೇ ನಟ ಚಂದನ್ ಅವರು ಕೂಡ ನಂದಿ ಬೆಟ್ಟಕ್ಕೆ ತೆರಳಿ ಅಲ್ಲಿನ ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ.

    https://www.instagram.com/p/B-cJpFwAw91/

    ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚಂದನ್, ಪಾಠವನ್ನು ಕಲಿತೆ. ಸಾಮಾಜಿಕ ಅಂತರ ಎಂಬುದನ್ನು ನಾವು ಯಾವಾಗ ಕಲಿಯುತ್ತೆವೆ ಎಂದರೆ, 500 ಮಂಗಗಳಿಗೆ ಆಹಾರ ನೀಡುವುದು ಗುಂಪು ಸೇರುವುದಕ್ಕಿಂತ ಒಳ್ಳೆಯದು ಎಂದು ನಮಗೆ ಅರ್ಥವಾದಾಗ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕೋತಿಗೆ ಬಾಳೆಹಣ್ಣು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B-CN2ddgZeM/

    ನಂದಿ ಬೆಟ್ಟದಲ್ಲಿ ಸಾಕಷ್ಟು ಮಂಗಗಳು ಇದ್ದಾವೆ. ಇವುಗಳು ಅಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ನಂಬಿ ಮತ್ತು ಅಲ್ಲಿನ ಅಂಗಡಿಗಳನ್ನು ನಂಬಿ ಬದುಕುತ್ತಿದ್ದವು. ಈಗ ದೇಶವೇ ಲಾಕ್‍ಡೌನ್ ಆಗಿದೆ. ಜೊತೆಗೆ ನಂದಿ ಬೆಟ್ಟದ ಬಾಗಿಲು ಮುಚ್ಚಿದೆ. ಅಲ್ಲಿಗೆ ಯಾವುದೇ ಪ್ರವಾಸಿಗರು ಹೋಗುತ್ತಿಲ್ಲ. ಅಂಗಡಿಗಳು ತೆರೆಯುತ್ತಿಲ್ಲ. ಆದ್ದರಿಂದ ಅಲ್ಲಿರುವ ಸಾವಿರಾರು ಮಂಗಗಳು ಹಸಿವಿನಿಂದ ಬಳಲುತ್ತಿವೆ. ಇದನ್ನು ಅರಿತ ಚಂದನ್ ಅಲ್ಲಿಗೆ ಹೋಗಿ ಅವುಗಳಿಗೆ ಆಹಾರ ನೀಡಿದ್ದಾರೆ.

    https://www.instagram.com/p/B9WlVsagIVt/

    ಸಾಕಷ್ಟು ಸಿನಿಮಾ ನಟ-ನಟಿಯರು ಕೂಡ ತಮ್ಮ ಮನೆ ಅಕ್ಕಪಕ್ಕ ನಾಯಿಗಳು ಮತ್ತು ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಐಂದ್ರಿಂತಾ ರೇ ಅವರು ತಮ್ಮ ಮನೆಯ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ನೀಡಿದ್ದರು. ಈ ಹಿಂದೆ ಸಂಯುಕ್ತ ಹೊರನಾಡು ಅವರು ಕೂಡ ತಮ್ಮ ಸ್ನೇಹಿತ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನ ಹಲವಡೆ ಬೀದಿನಾಯಿಗಳಿಗೆ ಆಹಾರ ನೀಡಿದ್ದರು.

  • ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು

    ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು

    – ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ

    ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ.

    ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ, ಮತ್ತೊಂದು ಕಡೆ ಜನರಿಗೆ ತರಕಾರಿ ಸಿಗುತ್ತಿಲ್ಲ. ಹಾಗಾಗಿ ರೈತರಿಗೆ ಕೊರೊನಾ ಎಫೆಕ್ಟ್ ತಟ್ಟಿದೆ.

    ಕೋಲಾರ ಜಿಲ್ಲೆ ಪೆಚ್ಚಾರ್ಲಹಳ್ಳಿ ಗ್ರಾಮದ ನಾಗೇಶ್ ಸುಮಾರು 5 ಎಕರೆಯಲ್ಲಿ ಚೆಂಡುಮಲ್ಲಿಗೆ ಹೂ ಬೆಳೆದಿದ್ದರು. ಬೆಳೆದ ಹೂವಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಡೆ ಸಿಗದೆ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಬೆಲೆ ಇಲ್ಲದೆ ಕಂಗಾಲಾಗಿ ಗಿಡದಲ್ಲಿದ್ದ ಹೂ ಕಿತ್ತು ತಿಪ್ಪೆಗೆ ಸುರಿಯತ್ತಿದ್ದಾನೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ನಾಗರಾಜ್ ತನ್ನ ಆರು ಎಕರೆ ಭೂಮಿಯಲ್ಲಿ ಬಾಳೆಹಣ್ಣು ಬೆಳೆದಿದ್ದನು. ಆದರೆ ಲಕ್ಷಾಂತರ ರೂಪಾಯಿ ಬೆಲೆಯ ಬಾಳೆಹಣ್ಣು ತೋಟದಲ್ಲೇ ಕೊಳೆಯುತ್ತಿದೆ. ಬಾಳೆ ಹಣ್ಣನ್ನು ಮಾರುಕಟ್ಟೆಗೂ ಹಾಕಲಾಗದೆ, ತೋಟದಲ್ಲೂ ಉಳಿಸಿಕೊಳ್ಳಲಾಗದೆ ರೈತ ಪರದಾಡುತ್ತಿದ್ದನು. ಕೊನೆಗೆ ರೈತ ನಾಗರಾಜ್ ಹಾಗೂ ಕುಟುಂಬಸ್ಥರು ಹಣ್ಣಾಗಿರುವ ಬಾಳೆಹಣ್ಣನ್ನು ಹಳ್ಳಿ ಜನರಿಗೆ ಉಚಿತವಾಗಿ ಹಂಚುವ ಕೆಲಸ ಮಾಡಿದ್ದಾರೆ.

  • ಕೊರೊನಾ ಭಾರತ ಬಿಟ್ಟು ತೊಲಗು – ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದ ಯುವಕ

    ಕೊರೊನಾ ಭಾರತ ಬಿಟ್ಟು ತೊಲಗು – ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದ ಯುವಕ

    ಚಿತ್ರದುರ್ಗ: ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸುವ ಭಕ್ತರ ಬಗ್ಗೆ ಕೇಳಿದ್ದೇವೆ. ಆದರೆ ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಜನರನ್ನು ಆತಂಕಕ್ಕೀಡು ಮಾಡಿದೆ. ಆದ್ದರಿಂದ ಜಿಲ್ಲೆಯ ಯುವಕನೊಬ್ಬ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ತೇರಿಗೆ ಎಸೆಯುವ ಮೂಲಕ ದೇವರ ಮೊರೆ ಹೋಗಿದ್ದಾನೆ.

    ಪ್ರದೀಪ್ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದಿದ್ದಾನೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿಯಲ್ಲಿ ಶನಿವಾರ ಶ್ರೀ ಮುತ್ತಿನ ಕುಮಾರಿ ದೇವಿ ಜಾತ್ರೆ ನಡೆದಿದೆ. ಜಾತ್ರೆಯಲ್ಲಿ ತಮ್ಮ ಇಷ್ಟಾರ್ಥ ನೆರವೇರಲಿ ಎಂದು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸುತ್ತಾರೆ.

    ಆದರೆ ಇದೇ ಗ್ರಾಮದ ಪ್ರದೀಪ್ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ನಂತರ ಅದನ್ನು ತೇರಿಗೆ ಎಸೆಯುವ ಮೂಲಕ ದೇವರನ್ನು ಪ್ರಾರ್ಥಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈಗಾಗಲೇ ಅನೇಕ ಜಿಲ್ಲೆಗಳಲ್ಲೂ ಸೋಂಕಿನ ಪ್ರಕರಣಗಳು ಕಂಡು ಬಂದಿದೆ. ಹೀಗಾಗಿ ರಾಜ್ಯದ ಜನತೆಯನ್ನು ಕೊರೊನಾ ವೈರಸ್ ಬಾರಿ ಆತಂಕಕ್ಕೀಡು ಮಾಡಿದೆ. ಆದ್ದರಿಂದ ಅನೇಕರು ಪೂಜೆ ಹಾಗೂ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾರೆ.

  • ರಾತ್ರೋರಾತ್ರಿ 6 ಎಕರೆ ಬಾಳೆ, ಮಾವು ಬೆಳೆ ನಾಶ ಪಡಿಸಿದ ಕಿಡಿಗೇಡಿಗಳು- ರೈತ ಕಂಗಾಲು

    ರಾತ್ರೋರಾತ್ರಿ 6 ಎಕರೆ ಬಾಳೆ, ಮಾವು ಬೆಳೆ ನಾಶ ಪಡಿಸಿದ ಕಿಡಿಗೇಡಿಗಳು- ರೈತ ಕಂಗಾಲು

    ರಾಮನಗರ: ದ್ವೇಷದ ಹಿನ್ನೆಲೆಯಲ್ಲಿ ಆರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಹಾಗೂ ಮಾವಿನ ಸಸಿಗಳನ್ನು ಕತ್ತರಿಸಿ ನಾಶ ಮಾಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಗೇರಹಳ್ಳಿಯಲ್ಲಿ ನಡೆದಿದೆ.

    ಸಾತನೂರು ಸಮೀಪದ ಗೇರಹಳ್ಳಿ ಗ್ರಾಮದ ರೈತ ಚಿಕ್ಕಪುಟ್ಟೇಗೌಡ ಅವರಿಗೆ ಸೇರಿದ ತೋಟ ಇದಾಗಿದ್ದು, ರಾತ್ರೋರಾತ್ರಿ ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಮುಚ್ಚಿನಿಂದ ಬಾಳೆ ಬೆಳೆ ಹಾಗೂ ಮಾವಿನ ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ.

    ದುಷ್ಕರ್ಮಿಗಳ ಈ ಕೃತ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದ್ದು, ರೈತ ಚಿಕ್ಕಪುಟ್ಟೇಗೌಡ ಕಂಗಾಲಾಗಿದ್ದಾರೆ. ಸುಮಾರು 12 ಲಕ್ಷ ರೂ. ವೆಚ್ಚ ಮಾಡಿ ಬಾಳೆ ಹಾಗೂ ಮಾವು ಸಸಿಗಳನ್ನು 6 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದರು. ಬಾಳೆ ಸಸಿಗಳೆಲ್ಲ ಗೊನೆ ಬಿಡುವ ಹಂತಕ್ಕೆ ತಲುಪಿದ್ದರೆ, ನೂರಾರು ಗಿಡಗಳು ಈಗಾಗಲೇ ಬಾಳೆಗೊನೆಯನ್ನು ಬಿಟ್ಟಿದ್ದವು. ಆದರೆ ಇದೀಗ ಸಂಪೂರ್ಣ ತೋಟವೇ ನಾಶ ಮಾಡಿರುವುದು ರೈತನಿಗೆ ಅಘಾತ ತಂದಿದೆ.

    ಘಟನೆ ಸಂಬಂಧ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಶ್ವಾನದಳ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಳೆ ನಾಶ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬ ಮಾಹಿತಿ ಲಭಿಸಿದೆ.

  • 85 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ತಿಂದ ಕಲಾವಿದ

    85 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ತಿಂದ ಕಲಾವಿದ

    ರೋಮ್: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ 85 ಲಕ್ಷ ರೂ. ಮೌಲ್ಯದ ಬಾಳೆಹಣ್ಣನ್ನು ಅಮೆರಿಕದ ಕಲಾವಿದ ತಿಂದು ಹಾಕಿದ್ದಾರೆ.

    ಇಟಲಿಯ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಅವರು ಯಾವುದೇ ಚಿತ್ರಗಳಿಲ್ಲದ, ಬರಹಗಳಿಲ್ಲದ ಗೋಡೆಯ ಮೇಲೆ ಟೇಪಿನಿಂದ ಅಂಟಿಸಿದ್ದರು. ಈ ಕಲಾಕೃತಿಯನ್ನು ಕ್ಯಾಟೆಲನ್ ಅವರು ಮಿಯಾಮಿ ಬೀಚ್‍ನ ‘ಆರ್ಟ್ ಬೇಸೆಲ್’ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಇದನ್ನು ಫಾನ್ಸ್ ನ ವ್ಯಕ್ತಿಯೊಬ್ಬರು 85 ಲಕ್ಷ ರೂ. (1.2 ಲಕ್ಷ ಡಾಲರ್) ನೀಡಿ ಖರೀಸಿದ್ದರು. ಆದರೆ ಪ್ರದರ್ಶನ ನೋಡಲು ಬಂದಿದ್ದ ಅಮೆರಿಕದ ಕಲಾವಿದ ಡೇವಿಡ್ ಡಾಟೂನಾ ಅದನ್ನು ತಿಂದು ಹಾಕಿದ್ದಾರೆ.

    https://www.instagram.com/p/B5yJTV4Bka3/?utm_source=ig_embed

    ಪ್ರದರ್ಶನದಲ್ಲಿ ಡೇವಿಡ್ ಡಾಟೂನಾ 85 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ತಿನ್ನುತ್ತಿರುವ ದೃಶ್ಯವನ್ನು ಅನೇಕರು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸ್ವತಃ ಡೇವಿಡ್ ಡಾಟೂನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಹಂಗ್ರಿ ಆರ್ಟಿಸ್ಟ್, ನನ್ನಿಂದ ಕಲಾ ಪ್ರದರ್ಶನ ನಡೆಯಿತು. ನಾನು ಮೌರಿಜಿಯೊ ಕ್ಯಾಟೆಲನ್ ಕಲಾಕೃತಿಗಳನ್ನು ಪ್ರೀತಿಸುತ್ತೇನೆ ಹಾಗೂ ಬಾಳೆಹಣ್ಣು ಕಲಾಕೃತಿಯನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ಇದು ತುಂಬಾ ರುಚಿಕರವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲಾ ಪ್ರದರ್ಶನ ಗ್ಯಾಲರಿಯ ನಿರ್ದೇಶಕ ಲೂಸಿಯನ್ ಟೆರ್ರಾಸ್, ಮೌರಿಜಿಯೊ ಕ್ಯಾಟೆಲನ್ ಅವರ ಬಾಳೆಹಣ್ಣು ಕಲಾಕೃತಿ ಪ್ರದರ್ಶದ ಆಕರ್ಷನೀಯ ವಸ್ತುವಾಗಿತ್ತು. ಆದರೆ ಡೇವಿಡ್ ಡಾಟೂನಾ ಅದನ್ನು ತಿಂದು ಹಾಕಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ 15 ನಿಮಿಷದಲ್ಲಿ ಬೇರೆ ಬಾಳೆಹಣ್ಣನ್ನು ಆ ಜಾಗದಲ್ಲಿ ಅಂಟಿಸಲಾಗಿದೆ ಎಂದು ತಿಳಿಸಿದ್ದಾರೆ.

    https://twitter.com/isaaacarrasco/status/1203388720143097857

    ಇಟಲಿಯ ಕಲಾವಿದ ಮೌರಿಜಿಯಾ ಕ್ಯಾಟೆಲನ್ ಈ ಹಿಂದೆ 18 ಕ್ಯಾರೆಟ್‍ಗಳ ಚಿನ್ನದಿಂದ ಕಮೋಡ್ ತಯಾರಿಸಿದ್ದರು. ಈ ಶೌಚಾಲಯದ ಕಮೋಡ್ ಮೌಲ್ಯವು 12.78 ಕೋಟಿ ರೂ. (1.8 ದಶಲಕ್ಷ ಡಾಲರ್) ಆಗಿತ್ತು. ಇದಕ್ಕೆ ಅಮೆರಿಕ ಎಂದು ಹೆಸರು ಇಡಲಾಗಿತ್ತು. ಈ ಕಮೋಡ್ ಅನ್ನು ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ರಿಟನ್‍ನ ಬ್ಲೆನ್‍ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಇದನ್ನು ಕಳ್ಳರು ಎಗರಿಸಿದ್ದು, ವಿಶ್ವಕ್ಕೆ ಅಚ್ಚರಿ ಮೂಡಿಸಿತ್ತು.

  • 2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    ನವದೆಹಲಿ: ನಟ ರಾಹುಲ್ ಬೋಸ್ ಅವರಿಂದ 2 ಬಾಳೆಹಣ್ಣಿಗೆ 442 ರೂ. ಪಡೆದಿದ್ದ ಹೋಟೆಲ್ ನಡೆಯನ್ನು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಶೀಯೇಷನ್ಸ್ ಆಫ್ ಇಂಡಿಯಾ (FHRAI) ಸಮರ್ಥಿಸಿಕೊಂಡಿದೆ. 442 ರೂ. ಪಡೆದಿದ್ದು ಯಾವುದೇ ಕಾನೂನು ಬಾಹಿರ ಕೆಲಸವಲ್ಲ ಎಂದು ತಿಳಿಸಿದೆ.

    ಬಾಳೆಹಣ್ಣಿನ ಮೇಲೆ ಶೇ.18 ಜಿಎಸ್‍ಟಿ ಪಡೆಯೋದು ತಪ್ಪಲ್ಲ, ಅದು ಕಾನೂನಿನ ಅನಿವಾರ್ಯವಾಗಿದೆ. ಜೆಡಬ್ಲ್ಯೂ ಮ್ಯಾರಿಯಟ್ ಚೈನ್ ಹೋಟೆಲ್ ದೇಶದ ಹಲವು ನಗರಗಳಲ್ಲಿದೆ. ಈ ಎಲ್ಲ ಹೋಟೆಲ್ ಗಳಲ್ಲಿ ಪ್ರಮಾಣೀಕೃತ ಉತ್ತಮ ಶ್ರೇಣಿಯ (Standard operating procedure) ಸೇವೆಯನ್ನು ನೀಡಲಾಗುತ್ತದೆ. ಈ ರೀತಿಯ ಹೋಟೆಲ್ ಗಳು ಕೇವಲ ಹಣ್ಣು, ತರಕಾರಿ ತಂದು ನೇರವಾಗಿ ನೀಡಲ್ಲ. ಸುಸಜ್ಜಿತವಾಗಿ ಸ್ವಚ್ಛವಾದ ಪ್ಲೇಟ್ ನಲ್ಲಿರಿಸಿ ಗ್ರಾಹಕರು ವಾಸ್ತವ್ಯ ಹೂಡಿರುವ ಕೋಣೆಗೆ ತಲುಪಿಸುತ್ತದೆ. ಇದರ ಜೊತೆಗೆ ಪಾನೀಯ ಹಾಗು ಇತರೆ ಖಾದ್ಯಗಳನ್ನು ಜೊತೆಯಾಗಿ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಫೆಡರೇಶನ್ ಹೇಳಿದೆ.

    ಅಂಗಡಿಗಳಲ್ಲಿ ಮಾರುಕಟ್ಟೆಯ ಬೆಲೆ ನೀಡಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೋಟೆಲ್ ನಲ್ಲಿ ಪ್ಲೇಟ್ ಜೊತೆಗೆ ವಿವಿಧ ಚಮಚಗಳು (Cutlery) ಮತ್ತು ಸ್ವಚ್ಛತೆಯಿಂದ ಕೂಡಿದ ಸೇವೆಯ ಜೊತೆಗೆ ಐಷಾರಾಮಿ ಅನುಭವದೊಂದಿಗೆ ಗ್ರಾಹಕರು ಕೇಳಿದ ವಸ್ತು ಲಭ್ಯವಾಗುತ್ತದೆ. ರಸ್ತೆ ಬದಿಯಲ್ಲಿ 10 ರೂ.ಗೆ ಕಾಫಿ ಸಿಕ್ಕರೆ, ಅದೇ ಲಕ್ಷುರಿ ಹೋಟೆಲ್ ಗಳಲ್ಲಿ 250 ರೂ. ಸಿಗುತ್ತದೆ ಎಂದು ಫೆಡರೇಶನ್ ಉಪಾಧ್ಯಕ್ಷ ಗುರುಭಕ್ಷೀಶ್ ಸಿಂಗ್ ಕೊಹ್ಲಿ ಹೇಳಿದ್ದಾರೆ.

    ನಟ ರಾಹುಲ್ ಬೋಸ್ 2 ಬಾಳೆಹಣ್ಣಿಗೆ 442 ರೂ. ಬಿಲ್ ನೀಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದರು.

  • 2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    ಚಂಡೀಗಢ: ಬಾಲಿವುಡ್ ನಟ ರಾಹುಲ್ ಬೋಸ್ ಅವರಿಗೆ ಎರಡು ಬಾಳೆ ಹಣ್ಣಿಗೆ 442 ರೂ. ಬಿಲ್ ನೀಡಿದ್ದ ಪಂಚತಾರಾ ಹೋಟೆಲ್‍ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

    ನಟನಿಗೆ ದುಬಾರಿ ಬಿಲ್ ನೀಡಿ ಶಾಕ್ ನೀಡಿದ್ದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‍ಗೆ ಗ್ರಾಹಕ ಪ್ರಾಧಿಕಾರ ಕ್ರಮಕೈಗೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಪ್ರಕರಣದಲ್ಲಿ 25 ಸಾವಿರ ದಂಡ ರೂ. ದಂಡ ವಿಧಿಸಿದೆ.

    51 ವರ್ಷದ ನಟ ರಾಹುಲ್ ಬೋಸ್ ತಮಗೇ ದುಬಾರಿ ಬಿಲ್ ನೀಡಿದ್ದ ಕುರಿತು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ವಿಡಿಯೋದಲ್ಲಿ ಹೋಟೆಲ್ ನೀಡಿದ್ದ ಬಿಲ್ ಕೂಡ ಸ್ಪಷ್ಟವಾಗಿ ಕಂಡಿತ್ತು. ಬಿಲ್ ನಲ್ಲಿ ಹೋಟೆಲ್ ಹಣ್ಣುಗಳಿಗೂ ಕೂಡ ಜಿಎಸ್‍ಟಿ ವಿಧಿಸಿತ್ತು. ಆದರೆ ಹಣ್ಣುಗಳು ಜಿಎಸ್‍ಟಿ ಅಡಿ ಬರುವುದಿಲ್ಲ. ಪರಿಣಾಮ ತೆರಿಗೆ ಅಧಿಕಾರಿಗಳು ಹೋಟೆಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂದೀಪ್ ಸಿಂಗ್ ಬರಾರ್ ಅವರು, ನಟ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹಾಗೂ ಬಿಲ್ ಆಧಾರದ ಮೇಲೆ ಆ ಪಂಚತಾರಾ ಹೋಟೆಲ್ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಮೊದಲು ಹೋಟೆಲ್ ಬಾಳೆಹಣ್ಣು ಸರ್ವ್ ಮಾಡಿದ್ದ ಬೆಳ್ಳಿ ತಟ್ಟೆಗೆ ಜಿಎಸ್‍ಟಿ ವಿಧಿಸಿದೆ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು.

    ನಟ ರಾಹುಲ್ ಬೋಸ್ ಮಾಡಿರುವ ವಿಡಿಯೋ ಪೋಸ್ಟ್ ನಲ್ಲಿ, ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದರು. ರಾಹುಲ್ ಬೋಸ್ ತಮ್ಮ ಬೆಳಗಿನ ವ್ಯಾಯಾಮ ಮುಗಿಸಿ ಹೋಟೆಲ್‍ಗೆ ತೆರಳಿದ್ದು, ಈ ಸಂದರ್ಭದಲ್ಲಿ 2 ಬಾಳೆ ಹಣ್ಣು ಆರ್ಡರ್ ಮಾಡಿದ್ದಾರೆ. ಅವರಿಗೆ 445 ರೂ. ಗಳ ಬಿಲ್ ಅನ್ನು ಹೋಟೆಲ್ ಸಿಬ್ಬಂದಿ ನೀಡಿದ್ದರು.

  • ಟೀಂ ಇಂಡಿಯಾ ಆಟಗಾರರು ಬಾಳೆಹಣ್ಣಿಗೆ ಬೇಡಿಕೆ ಇಟ್ಟಿದ್ದು ಏಕೆ ಗೊತ್ತಾ?

    ಟೀಂ ಇಂಡಿಯಾ ಆಟಗಾರರು ಬಾಳೆಹಣ್ಣಿಗೆ ಬೇಡಿಕೆ ಇಟ್ಟಿದ್ದು ಏಕೆ ಗೊತ್ತಾ?

    ಮುಂಬೈ: ವಿದೇಶಿ ಕ್ರಿಕೆಟ್ ಟೂರ್ನಿಗಳಿಗೆ ಆಟಗಾರರೊಂದಿಗೆ ಪತ್ನಿಯರು ಆಗಮಿಸಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದ ವಿರಾಟ್ ಕೊಹ್ಲಿ ಮಾತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಮ್ಮತಿ ಸೂಚಿಸಿದ್ದು ಹಳೆಯ ಸುದ್ದಿ. ಆದರೆ ಈಗ ಮುಂದಿನ ವಿಶ್ವಕಪ್ ವೇಳೆ ತಮಗೆ ಬಾಳೆಹಣ್ಣು ಬೇಕೆಂದು ಟೀಂ ಇಂಡಿಯಾ ಆಟಗಾರರು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.

    ಐಸಿಸಿ ವಿಶ್ವಕಪ್ ಕ್ರಿಕೆಟ್ 2019ರ ಟೂರ್ನಿ ಮೇ 30 ರಿಂದ ಜುಲೈ 15ರವರೆಗೂ ಇಂಗ್ಲೆಂಡ್‍ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರು ಟೂರ್ನಿಯ ವೇಳೆ ಬಾಳೆಹಣ್ಣಿಗಾಗಿ ಬೇಡಿಕೆ ಇಟ್ಟಿರುವ ಹಿಂದೆ ಪ್ರಮುಖ ಕಾರಣವಿದೆ. ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಭಾರತೀಯ ಆಟಗಾರರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಇದು ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡಿತ್ತು. ಅಲ್ಲದೇ ಹಲವು ಆಟಗಾರರು ಟೂರ್ನಿಯ ವೇಳೆ ದೈಹಿಕ ಸಾಮಥ್ರ್ಯವನ್ನು ಕಾಯ್ದುಕೊಳ್ಳಲು ಸಮಸ್ಯೆ ಎದುರಿಸಿದ್ದರು. ಅದ್ದರಿಂದ ಈ ಬಾರಿ ಆಟಗಾರರು ಬಾಳೆಹಣ್ಣುಗಳಿಗೆ ಬೇಡಿಕೆ ಇಟ್ಟಿದ್ದಾರೆ.

    ಈ ಕುರಿತು ಟೀಂ ಇಂಡಿಯಾ ಆಡಳಿತ ಮಂಡಳಿಯ ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಆಟಗಾರರ ಬೇಡಿಕೆಗೆ ಇದೂವರೆಗೂ ಬಿಸಿಸಿಐ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದೊಮ್ಮೆ ಟೂರ್ನಿಯ ಆಯೋಜಕರು ಉತ್ತಮ ಆಹಾರದ ವ್ಯವಸ್ಥೆ ಮಾಡದಿದ್ದರೆ ಬಿಸಿಸಿಐ ತನ್ನ ಹಣದಿಂದಲೇ ಆಟಗಾರರಿಗೆ ಬಾಳೆಹಣ್ಣಿನ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ.

    ಉಳಿದಂತೆ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಟೂರ್ನಿಯ ವೇಳೆ ಅಲ್ಲಿ ಪ್ರಯಾಣ ನಡೆಸಲು ಬಸ್ ಬದಲಾಗಿ ರೈಲಿನಲ್ಲೇ ಪ್ರಯಾಣದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ. ಇದರ ಹಿಂದೆಯೂ ಕಾರಣವಿದ್ದು, ಬಸ್ ಪ್ರಯಾಣದ ವೇಳೆ ಆಟಗಾರರ ಪತ್ನಿ ಹಾಗೂ ಗೆಳತಿಯರಿಗೆ ಬಸ್ಸಿನಲ್ಲಿ ಬರಲು ಅವಕಾಶವಿಲ್ಲ. ಅದ್ದರಿಂದ ಆಟಗಾರರು ಈ ಬೇಡಿಕೆ ಮುಂದಿಟ್ಟಿದ್ದಾರೆ. ರೈಲಿನಲ್ಲಿ ವ್ಯವಸ್ಥೆ ಮಾಡಿದರೆ ಭದ್ರತೆಯ ಸಮಸ್ಯೆ ಆಗಲಿರುವ ಕಾರಣ ಈ ಬೇಡಿಕೆಗೆ ಸ್ಪಂದಿಸುವುದು ಕಷ್ಟ ಎನ್ನಲಾಗಿದೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಟೂರ್ನಿಗಳ ವೇಳೆ ಟೀಂ ಇಂಡಿಯಾ ಆಟಗಾರರೊಂದಿಗೆ ಅವರ ಪತ್ನಿಯರು ಆಗಮಿಸಲು ಬಿಸಿಸಿಐ ಅನುಮತಿ ನೀಡಿತ್ತು. ಆದರೆ ಟೂರ್ನಿಯ ಆರಂಭದ 10 ದಿನಗಳ ಬಳಿಕ ಪತ್ನಿಯರಿಗೆ ಆಗಮಿಸಲು ನಿಯಮವನ್ನು ವಿಧಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು: ನಾಡಹಬ್ಬ ದಸರಾಗೆ ಚಾಲನೆ ಸಿಕ್ಕಾಗಿನಿಂದಲೂ ಅರಮನೆ ನಗರಿಯಲ್ಲಿ ದಿನಕ್ಕೊಂದು ಸ್ಪರ್ಧೆಗಳು ಗಮನಸೆಳೆಯುತ್ತಲೇ ಇದ್ದು, ಇಂದು ನಗರದ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆ ಜನರಿಗೆ ಮನರಂಜನೆ ನೀಡಿತ್ತು.

    ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲನೆಯದಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು, ನಂತರ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿತ್ತು. ಲಾಟರಿ ಮೂಲಕ ಪ್ರತಿ ವಿಭಾಗಗಳಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಸ್ಪರ್ಧೆಗೆ ಪಚ್ ಬಾಳೆಯನ್ನು ಬಳಸಲಾಗಿತ್ತು.

    ಶಾಲಾ ಮಕ್ಕಳ ವಿಭಾಗದಲ್ಲಿ 1.10 ನಿಮಿಷದಲ್ಲಿ ನಾಲ್ಕು ಬಾಳೆಹಣ್ಣು ತಿನ್ನುವ ಮೂಲಕ ಪಿರಿಯಾಪಟ್ಟಣದ ಭರತ್ ಮೊದಲನೇ ಸ್ಥಾನ ಪಡೆದುಕೊಂಡರೆ, 1.15 ನಿಮಿಷಗಳ ಮೂಲಕ ಯುಕ್ತ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ, 1.30 ನಿಮಿಷದಲ್ಲಿ 5 ಬಾಳೆಹಣ್ಣು ತಿಂದ ಮಹದೇವಸ್ವಾಮಿ ಪ್ರಥಮ ಸ್ಥಾನ ಗೆದ್ದರೆ, 1.45 ನಿಮಿಷಗಳ ಮೂಲಕ ಆಲಾಮ್ ಎರಡನೇ ಸ್ಥಾನ ಪಡೆದರು. ಅಲ್ಲದೇ ಮಹಿಳೆಯರ ವಿಭಾಗದಲ್ಲಿ ಪ್ರತಿಯೊಬ್ಬರಿಗೂ 4 ಬಾಳೆಹಣ್ಣುಗಳನ್ನು ನೀಡಲಾಗಿತ್ತು. 1.2 ನಿಮಿಷದಲ್ಲಿ ನಾಲ್ಕೂ ಬಾಳೆಹಣ್ಣು ತಿನ್ನುವ ಮೂಲಕ ಅಮೃತ ಪ್ರಥಮ ಸ್ಥಾನ ಪಡೆದರೆ, 1.8 ನಿಮಿಷದಲ್ಲಿ ತಿಂದ ಶೋಭಾ ಎರಡನೇ ಸ್ಥಾನ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv