Tag: banadariyali

  • Exclusive: ವಿಜಯ್ ಸೇತುಪತಿ ಜೊತೆ ನಟಿಸ್ತಿರೋದೇ ಅದ್ಭುತ ಫೀಲಿಂಗ್- ರುಕ್ಮಿಣಿ ವಸಂತ್

    Exclusive: ವಿಜಯ್ ಸೇತುಪತಿ ಜೊತೆ ನಟಿಸ್ತಿರೋದೇ ಅದ್ಭುತ ಫೀಲಿಂಗ್- ರುಕ್ಮಿಣಿ ವಸಂತ್

    ‘ಬೀರ್‌ಬಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಕನ್ನಡದಲ್ಲಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗಲೇ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ತಮ್ಮ ಪಾತ್ರ, ವಿಜಯ್ ಜೊತೆ ನಟಿಸಿದ ಅನುಭವವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರುಕ್ಮಿಣಿ ಹಂಚಿಕೊಂಡಿದ್ದಾರೆ.

    ‘ಘೋಸ್ಟ್’ ಶ್ರೀನಿ ನಿರ್ದೇಶನದ ಬೀರ್‌ಬಲ್ ಚಿತ್ರಕ್ಕೆ ನಾಯಕಿ ನಟಿಯಾಗಿ ಬೆಂಗಳೂರು ಬ್ಯೂಟಿ ರುಕ್ಮಿಣಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ (Goldenstar Ganesh) ಜೊತೆ ‘ಬಾನದಾರಿಯಲಿ’, ರಕ್ಷಿತ್ ಶೆಟ್ಟಿ(Rakshit Shetty) ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ಶ್ರೀಮುರಳಿ ಜೊತೆ ‘ಬಘೀರ’ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಈ ಬೆನ್ನಲ್ಲೇ ಕಾಲಿವುಡ್‌ನತ್ತ ರುಕ್ಮಿಣಿ ಮುಖ ಮಾಡಿದ್ದಾರೆ. ತಮಿಳಿನ ನಟ ವಿಜಯ್ ಜೊತೆ ನಟಿಸುವ ಅವಕಾಶ ಹೇಗೆ ಸಿಕ್ತು.? ಎಂಬುದನ್ನ ನಟಿ ತಿಳಿಸಿದ್ದಾರೆ.

    ಚಿತ್ರತಂಡ ಈ ಸಿನಿಮಾ ವಿಚಾರವಾಗಿ ನನಗೆ ಕರೆ ಮಾಡಿದ್ದರು. ಒಮ್ಮೆ ಭೇಟಿಯಾಗಿ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದೇವು. ನನಗೆ ತಮಿಳಿನಲ್ಲಿ ಸ್ಪಷ್ಟತೆ ಇಲ್ಲದಿರೋ ಕಾರಣ ನೀವು ಯೋಚಿಸಿ ಎಂದು ತಂಡಕ್ಕೆ ತಿಳಿಸಿದ್ದೆ, ಆದರೆ ಚಿತ್ರತಂಡ ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರಕ್ಕೆ ನೀವು ಸೂಕ್ತ ಎಂದಾಗ ಬಂದ ಅವಕಾಶವನ್ನ ಒಪ್ಪಿಕೊಂಡೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ತಮಿಳಿನ ನನ್ನ ಮೊದಲ ಸಿನಿಮಾದಲ್ಲೇ ವಿಜಯ್ ಸೇತುಪತಿ ಸರ್ ಜೊತೆ ನಟಿಸುವ ಆಫರ್ ಸಿಕ್ಕಿದ್ದರ ಬಗ್ಗೆ ತುಂಬಾನೇ ಖುಷಿಯಿದೆ. ಅವರ ಜೊತೆ ನಟಿಸ್ತಿರೋದು ಅದ್ಭುತ ಫೀಲಿಂಗ್, ನಾನು ಡೈಲಾಗ್ ಹೇಳುವಾಗ ವಿಜಯ್ ಸರ್ ತಾಳ್ಮೆಯಿಂದ ಕಾದು ನನಗೆ ಸಪೋರ್ಟ್ ಮಾಡುತ್ತಾರೆ. ಹೊಸಬರು ಎಂದೂ ದೂರದೇ ಕಂಫರ್ಟ್ ಫೀಲಿಂಗ್ ಕೊಡುತ್ತಾರೆ. ವಿಜಯ್ ಸರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ನನ್ನ ಅದೃಷ್ಟ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.

    ಆರ್ಮುಗ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಮಲೇಷಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್ ಇರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದೆ. ನಾನು ಮಲೇಷಿಯಾದ ಪ್ರಜೆಯಾಗಿರುತ್ತೇನೆ, ಇದೊಂದು ವಿಭಿನ್ನ ಪಾತ್ರವಾಗಿದೆ. ನನ್ನ ತಂಡದ ಬೆಂಬಲದಿಂದ ಈ ಪ್ರಾಜೆಕ್ಟ್ ಅಷ್ಟು ಕಷ್ಟ ಎಂದೇನಿಸುತ್ತಿಲ್ಲ. ಬಾನದಾರಿಯಲಿ, ಬಘೀರ, ಸಪ್ತಸಾಗರದಾಚೆ ಎಲ್ಲೋ, ಈ ಮೂರು ಸಿನಿಮಾದಲ್ಲಿ ನನ್ನ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಥೆ ಮತ್ತು ಪಾತ್ರ ಜನರ ಮನಸ್ಸಿಗೆ ತಲುಪುತ್ತದೆ ಎಂಬ ಭರವಸೆ ನನಗಿದೆ ಎಂದು ನಟಿ ರುಕ್ಮಿಣಿ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಭರವಸೆಯ ನಟಿಯಾಗಿ ಗಮನ ಸೆಳೆದಿರುವ ರುಕ್ಮಿಣಿ ವಸಂತ್ ಅವರು ತೆರೆಗೆ ರೆಡಿಯಿರುವ ಚಿತ್ರಗಳ ಮೂಲಕ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ‘ಬೀರ್‌ಬಲ್’ ಸುಂದರಿಯ ನಟನೆಯನ್ನ ಪ್ರೇಕ್ಷಕರ ಪ್ರಭುಗಳು ಒಪ್ಪಿಕೊಳ್ತಾರಾ ಕಾದುನೋಡಬೇಕಿದೆ.‌

    ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್

  • ವಿಜಯ್ ಸೇತುಪತಿಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ

    ವಿಜಯ್ ಸೇತುಪತಿಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ

    ‘ಬೀರಬಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಚೆಲುವೆ ರುಕ್ಮಿಣಿ ವಸಂತ್ (Rukmini Vasanth) ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕನ್ನಡ ಚಿತ್ರರಂಗದಲ್ಲಿ ಮಿಂಚ್ತಿರುವ ಯುವ ನಟಿ ರುಕ್ಮಿಣಿ ಈಗ ತಮಿಳಿನಲ್ಲಿ ಬಂಪರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ನಟ ವಿಜಯ್ ಸೇತುಪತಿಗೆ (Vijay Sethupathi) ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ.

    ಗೋಲ್ಡನ್ ಸ್ಟಾರ್ ಜೊತೆ ಬಾನದಾರಿಯಲಿ, ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacche Yello) ಸಿನಿಮಾ ತೆರೆಗೆ ಬರುವ ಮುನ್ನವೇ ತಮಿಳಿನಲ್ಲಿ ಸೂಪರ್ ಸ್ಟಾರ್ ಮಿಂಚುವ ಅವಕಾಶವನ್ನ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್‌ಗೆ ಹಾರಿದ ಅಜಯ್ ದೇವಗನ್ ಪುತ್ರಿ- ಬಾಯ್ ಫ್ರೆಂಡ್ ಜೊತೆ ಭರ್ಜರಿ ಪಾರ್ಟಿ

     

    View this post on Instagram

     

    A post shared by Rukmini Vasanth (@rukmini_vasanth)

    ಆರ್ಮುಗ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ವಿಜಯ್- ರುಕ್ಮಿಣಿ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತವನ್ನ ಮಲೇಷಿಯಾದಲ್ಲಿ ಅದ್ದೂರಿಯಾಗಿ ನಡೆದಿದೆ. ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಮಲೇಷಿಯಾದಲ್ಲೇ ಶುರುವಾಗಲಿದೆ.

    ಒಂದು ಭಿನ್ನ ಕಥೆಯ ಮೂಲಕ ವಿಜಯ್- ರುಕ್ಮಿಣಿ ಬರುತ್ತಿದ್ದಾರೆ. ಈ ಮೂಲಕ ಕಾಲಿವುಡ್ ಅಂಗಳಕ್ಕೆ ಮತ್ತೊಬ್ಬ ಕನ್ನಡತಿಯ ಎಂಟ್ರಿಯಾಗಿದೆ. ಇನ್ನೂ ಚಿತ್ರದಲ್ಲಿ ಯೋಗಿ ಬಾಬು, ಬಿ.ಎಸ್ ಅವಿನಾಶ್, ದಿವ್ಯಾ ಸೇರಿದಂತೆ ಹಲವರು ಕಲಾವಿದರಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗಲಿದೆ.

  • ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಕೀನ್ಯಾ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿ ಡ್ಯಾನ್ಸ್

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸದ್ಯ `ಬಾನದಾರಿಯಲಿ’ (Banadariyali)  ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಗಣೇಶ್ ಕೀನ್ಯಾಗೆ ಹಾರಿದ್ದಾರೆ. ಈ ವೇಳೆ ಕಿನ್ಯಾ ಮಕ್ಕಳ ಜೊತೆ ಗಣೇಶ್ ಹೆಜ್ಜೆ ಹಾಕಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ದಿಲ್ ರಂಗೀಲಾ’ (Dilrangeela) ಮತ್ತು `99′ ಚಿತ್ರದ `ಬಾನದಾರಿಯಲಿ’ ನಂತರ ಮತ್ತೆ ಪ್ರೀತಂ ಗುಬ್ಬಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆ್ಯಕ್ಷನ್ ಕಟ್ ಹೇಳಲಿ ಸಜ್ಜಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಭರ್ಜರಿ ಆಗಿ ನಡೆಯುತ್ತಿದ್ದು, ಈ ಸಿನಿಮಾದಮ ಶೂಟಿಂಗ್‌ಗಾಗಿ ಕಿನ್ಯಾಗೆ ಹಾರಿದ್ದಾರೆ. ಕೀನ್ಯಾ ಮಕ್ಕಳ ಜೊತೆ ಗಣೇಶ್ ಖುಷಿಯಿಂದ ಕುಣಿದಿದ್ದಾರೆ. ಈ ವೀಡಿಯೋಗೆ ಅಪಾರ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಇನ್ನೂ ಈ ಚಿತ್ರದಲ್ಲಿ ಗಣೇಶ್ ಭಿನ್ನ ಕಥೆ ಮತ್ತು ಪಾತ್ರದ ಮೂಲಕ ರಂಜಿಸಲು ರೆಡಿಯಾಗಿದ್ದಾರೆ. ಗಣೇಶ್‌ಗೆ ನಾಯಕಿಯರಾಗಿ ಕೊಡಗಿನ ಕುವರಿ ರೀಷ್ಮಾ ಮತ್ತು ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ.

    `ಗಾಳಿಪಟ 2′ (Galipata 2) ಚಿತ್ರದ ಸಕ್ಸಸ್ ನಂತರ `ಬಾನದಾರಿಯಲಿ’ ಈ ಚಿತ್ರದ ಮೂಲಕ ಗಣೇಶ್ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]