Tag: Balram Bhargava

  • ಇಂಗ್ಲೆಂಡ್ ಮಾದರಿಯಲ್ಲಿ ಮಕ್ಕಳಿಗೆ ಲಸಿಕೆ: ಬಲರಾಮ್ ಭಾರ್ಗವ್

    ಇಂಗ್ಲೆಂಡ್ ಮಾದರಿಯಲ್ಲಿ ಮಕ್ಕಳಿಗೆ ಲಸಿಕೆ: ಬಲರಾಮ್ ಭಾರ್ಗವ್

    ನವದೆಹಲಿ: ಮಕ್ಕಳಿಗೆ ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಭಾರತ ಇಂಗ್ಲೆಂಡ್ ಮಾದರಿ ಅನುಸರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

    ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಬಗೆಗಿನ ತಯಾರಿಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಜೈಡಸ್ ಕ್ಯಾಡಿಲಾದ ಜೈಕೋವ್-ಡಿ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಈ ಲಸಿಕೆ ಬಳಕೆಗೆ ಲಭ್ಯವಾಗಲಿದ್ದು, ಮೊದಲು 12-18 ವರ್ಷದ ಮಕ್ಕಳಿಗ ನೀಡಲು ಸರ್ಕಾರ ಚಿಂತಿಸಿದೆ ಎಂದು ಹೇಳಿದರು. ಭಾರತದಲ್ಲಿ 94 ಕೋಟಿ ಜನರು ವಯಸ್ಕರಿದ್ದಾರೆ. ಈಗಾಗಲೇ 75 ಕೋಟಿ ಜನರಿಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಮೊದಲ ಡೋಸ್ ನೀಡುವ ಗುರಿ ಹೊಂದಲಾಗಿದ್ದು, ಬಳಿಕ ಮಕ್ಕಳಿಗೆ ವೇಗವಾಗಿ ವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ: 1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

    ಮೊದಲು 17-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದು ಬಳಿಕ 16-17 ಹೀಗೆ ಹಂತ ಹಂತವಾಗಿ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ. ಬೂಸ್ಟರ್ ಶಾಟ್ ನೀಡುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಗಳಿಲ್ಲ ಸಾಧ್ಯವಾದಷ್ಟು ಬೇಗ ಎರಡು ಡೋಸ್‍ಗಳನ್ನು ನೀಡುವುದು ಸರ್ಕಾರ ಗುರಿ ಎಂದು ಅವರು ಹೇಳಿದರು.

  • ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ನವದೆಹಲಿ: ಜುಲೈ ಮಧ್ಯ ಭಾಗ, ಆಗಸ್ಟ್ ವೇಳೆ ದಿನಕ್ಕೆ 1 ಕೋಟಿ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಜುಲೈ ಕೊನೆ ಅಥವಾ ಆಗಸ್ಟ್ ಆರಂಭದ ಹೊತ್ತಿಗೆ ಲಸಿಕೆಯ ಸಮಸ್ಯೆ ಬಗೆಹರಿಯಬಹುದು ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

    ದೇಶದಲ್ಲಿರುವ ಉತ್ಪಾದಕರು ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಒಂದು ತಿಂಗಳ ಒಳಗಡೆ ಲಸಿಕೆ ಹಾಕಿಸಬೇಕೆಂದು ಬಯಸಿದ್ದಲ್ಲಿ ಇದು ಕೊರತೆಯಾಗಿ ಕಾಣುತ್ತದೆ. ನಮ್ಮ ಜನಸಂಖ್ಯೆ ಅಮೆರಿಕದ ಜನಸಂಖ್ಯೆಗಿಂತ 4 ಪಟ್ಟು ಜಾಸ್ತಿ ಇದೆ. ಹೀಗಾಗಿ ತಾಳ್ಮೆ ಮುಖ್ಯ ಎಂದು ಅಭಿಪ್ರಾಯಪಟ್ಟರು.

    ಇಬ್ಬರು ಕೇಂದ್ರ ಸಚಿವರು ಮತ್ತು ಕೇಂದ್ರ ಸುಪ್ರೀಂ ಕೋರ್ಟ್‍ಗೆ ನೀಡಿದ ಭರವಸೆಯನ್ನು ಉಲ್ಲೇಖಿಸಿ, ಡಿಸೆಂಬರ್ ವೇಳೆಗೆ ಇಡೀ ದೇಶಕ್ಕೆ ಲಸಿಕೆ ಹಾಕಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ : ರಾಜ್ಯದಲ್ಲಿ ಕಾಸು ಇದ್ದವರಿಗಷ್ಟೇನಾ ವ್ಯಾಕ್ಸಿನ್? – ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 2,000ವರೆಗೆ ಲಸಿಕೆ ಹಂಚಿಕೆ

    ಕಳೆದ ತಿಂಗಳು ಕೇರಳ ಹೈಕೋರ್ಟ್‍ಗೆ ಕೇಂದ್ರ ಸರ್ಕಾರ ಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿತ್ತು. ದೇಶದಲ್ಲಿ ಪ್ರಸ್ತುತ ತಿಂಗಳಿಗೆ ಸುಮಾರು 8.5 ಕೋಟಿ ಡೋಸ್ ಅಥವಾ ದಿನಕ್ಕೆ ಸುಮಾರು 28.33 ಲಕ್ಷ ಲಸಿಕೆ ಉತ್ಪಾದನೆಯಾಗುತ್ತದೆ. ಜುಲೈ ವೇಳೆಗೆ ಉತ್ಪಾದನೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಸ್ಪುಟ್ನಿಕ್ ವಿ ಉತ್ಪಾದನೆಯೂ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದನ್ನೂ ಓದಿ : ಹಳ್ಳಿ ಜನರಿಗೆ ಫ್ರೀ ಲಸಿಕೆ – ಮಹೇಶ್ ಬಾಬುವಿಗೆ ಅಭಿಮಾನಿಗಳಿಂದ ಮೆಚ್ಚುಗೆ

    ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್‍ಗಳು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ. ಭಾರತಕ್ಕೆ ವಿದೇಶದಿಂದ ಬಂದ ಅತ್ಯಂತ ದೊಡ್ಡ ಪ್ರಮಾಣದ ಲಸಿಕೆ ಇದಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ರಷ್ಯಾದ ಈ ಲಸಿಕೆಯ ವಿತರಣೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಸಂಸ್ಥೆ ಲಸಿಕೆಯ 1.5 ಲಕ್ಷ ಡೋಸ್ ಅನ್ನು ಮೇ 1ರಂದು ಪಡೆದುಕೊಂಡಿತ್ತು.

    ದೇಶೀಯವಾಗಿಯೇ ಸ್ಪುಟ್ನಿಕ್ ಲಸಿಕೆಯ ತಯಾರಿಕೆಯು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ಒಟ್ಟು 6 ಕಡೆಗಳಲ್ಲಿ ಲಸಿಕೆ ತಯಾರಾಗಲಿದೆ. ಧಾರವಾಡದ ಶಿಲ್ಪಾ ಬಯೊಲಜಿಕಲ್ಸ್ ನಲ್ಲಿ ಮೊದಲ 12 ತಿಂಗಳಲ್ಲಿ 5 ಕೋಟಿ ಲಸಿಕೆ ತಯಾರಿಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಡಾ. ರೆಡ್ಡೀಸ್ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ : ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

  • ದೇಶದಲ್ಲಿ ಶೇ.1 ಪ್ರಮಾಣದಲ್ಲಿ ಕೊರೊನಾ ಹರಡಿದೆ: ಐಸಿಎಂಆರ್ ಸ್ಪಷ್ಟನೆ

    ದೇಶದಲ್ಲಿ ಶೇ.1 ಪ್ರಮಾಣದಲ್ಲಿ ಕೊರೊನಾ ಹರಡಿದೆ: ಐಸಿಎಂಆರ್ ಸ್ಪಷ್ಟನೆ

    – ಸೋಂಕು ಸಮುದಾಯಕ್ಕೆ ಹರಡಿಲ್ಲ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ದೇಶದ ಜನಸಂಖ್ಯೆಗೆ ಹೋಲಿಸಿಕೊಂಡರೇ ಶೇ.1 ಪ್ರಮಾಣದಲ್ಲಿ ಸೋಂಕು ಹರಡಿದೆ. ಇದನ್ನು ಸಮುದಾಯ ಹರಡುವಿಕೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಸ್ಪಷ್ಟಪಡಿಸಿದ್ದಾರೆ.

    ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಕೆಲವು ಕಂಟೈನ್ಮೆಂಟ್ ಝೋನ್ ಗಳಿರುವ ನಗರಗಳಲ್ಲಿ ಮಾತ್ರ ಸೋಂಕು ಹರಡುತ್ತಿದೆ. ಅದನ್ನು ತಡೆಯುವ ಕೆಲಸ ನಡೆದಿದ್ದು, ಇದರ ಜೊತೆಗೆ ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಲಾಕ್‍ಡೌನ್‍ನಿಂದ ಭಾರತದಲ್ಲಿ ಕೊರೊನಾ ಬೆಳವಣಿಗೆ ವೇಗಕ್ಕೆ ತಡೆ ಹಾಕಿದ್ದು ಬಹುತೇಕ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರದ ನಿಯಮಗಳ ಪಾಲನೆ ಕಡ್ಡಾಯ. ಕಂಟೈನ್ಮೆಂಟ್‍ಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಸೋಂಕು ಪತ್ತೆ ಹಚ್ಚಲು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಐಸಿಎಂಆರ್ ಪ್ರತಿ ದಿನಕ್ಕೆ ಎರಡು ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.

    ಬಳಿಕ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಯಲದ ಜಂಟಿ ಕಾರ್ಯದರ್ಶಿ ಲವ ಅಗರ್‍ವಾಲ್, ವಿಶ್ವದ ಇತರೇ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಲಕ್ಷದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಗುಣಮುಖವಾಗುತ್ತಿರುವವರ ಪ್ರಮಾಣ ಶೇ.49.21ಕ್ಕೆ ಏರಿಕೆಯಾಗಿದೆ ಎಂದರು.

    ಕೊರೊನಾ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಹಿನ್ನೆಲೆ ರೋಗಿಗಳಲ್ಲಿ ಅನುಮಾನ ಮೂಡದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳು ಕಡ್ಡಾಯವಾಗಿ ಬೆಡ್‍ಗಳ ಮಾಹಿತಿಯನ್ನು ಪ್ರದರ್ಶಿಸಬೇಕು. ಆನ್‍ಲೈನ್‍ನಲ್ಲಿ ಬೆಡ್‍ಗಳ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ. ಈವರೆಗೂ ಯಾವ ರಾಜ್ಯಗಳಲ್ಲೂ ಬೆಡ್‍ಗಳ ಕೊರತೆ ಸೃಷ್ಟಿಯಾಗಿಲ್ಲ. ಸೋಂಕಿಗೆ ಅನುಗುಣವಾಗಿ ಬೆಡ್‍ಗಳನ್ನು ಹೆಚ್ಚಿಸಲಾಗುತ್ತಿದೆ. ರೈಲ್ವೇ ಕೊಚ್‍ಗಳನ್ನು ಬೆಡ್‍ಗಳಾಗಿ ಮಾರ್ಪಡಿಸಿದೆ ರಾಜ್ಯ ಸರ್ಕಾರಗಳು ಅವಶ್ಯಕತೆ ಅನುಗುಣವಾಗಿ ಬಳಸಿಕೊಳ್ಳಬಹುದು ಎಂದರು.