Tag: ball

  • ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ದುರ್ಮರಣ!

    ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ದುರ್ಮರಣ!

    ಮುಂಬೈ: ಬಾಲಕನೊಬ್ಬನ ಖಾಸಗಿ ಅಂಗಕ್ಕೆ ಕ್ರಿಕೆಟ್‌ ಬಾಲ್‌ ಬಡಿದು ಸ್ಥಳದಲ್ಲಿಯೇ ಮೃಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಬಾಲಕನನ್ನು ಶೌರ್ಯ (11) ಎಂದು ಗುರಿತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

    ಬಾಲಕ ಶೌರ್ಯ ತನ್ನ ಸ್ನೇಹಿತರ ಜೊತೆ ಕ್ರಿಕೆಟ್‌ ಆಟವಾಡುತ್ತಿದ್ದನು. ಅಂತೆಯೇ ಈತ ಬೌಲಿಂಗ್‌ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್‌ ನೇರವಾಗಿ ಚೆಂಡನ್ನು ಶೌರ್ಯ ಕಡೆಗೆ ಹೊಡೆದಿದ್ದಾನೆ. ಹೀಗಾಗಿ ಚೆಂಡು ಬಲದಿಂದ ಶೌರ್ಯ ಅವರ ಖಾಸಗಿ ಭಾಗಕ್ಕೆ ಬಂದು ಬಡಿದಿದೆ. ಕೂಡಲೇ ಆತ ಕುಸಿದು ಬಿದ್ದಿದ್ದಾನೆ.

    ಕೂಡಲೇ ಸ್ನೇಹಿತರು ಬಂದು ಶೌರ್ಯನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಶೌರ್ಯ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಗಾಂಧೀನಗರ: ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ (Dalit Boy) ಚೆಂಡನ್ನು (Ball) ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ (Dalit Man)  ಹೆಬ್ಬೆರಳನ್ನೇ ( ಕತ್ತರಿಸಿರುವ ವಿಕೃತ ಘಟನೆ ಗುಜರಾತ್‌ನಲ್ಲಿ ನಡೆದಿದೆ.

    ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

    ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

  • ರಿಮೋಟ್ ಕಂಟ್ರೋಲ್ ಕಾರ್ ಮೂಲಕ ಗ್ರೌಂಡ್‌ಗೆ ಪ್ರವೇಶಿಸಿತು ಕ್ರಿಕೆಟ್ ಚೆಂಡು

    ರಿಮೋಟ್ ಕಂಟ್ರೋಲ್ ಕಾರ್ ಮೂಲಕ ಗ್ರೌಂಡ್‌ಗೆ ಪ್ರವೇಶಿಸಿತು ಕ್ರಿಕೆಟ್ ಚೆಂಡು

    ಲಂಡನ್: ಯಾವುದೇ ಮನೋರಂಜನಾ ಕಾರ್ಯಕ್ರಮಗಳಲ್ಲೂ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿ ಪ್ರೇಕ್ಷಕರ ಗಮನ ಸೆಳೆಯುವುದು ಇದೀಗ ಸರ್ವೇ ಸಾಮಾನ್ಯ. ಇದು ಕ್ರಿಕೆಟ್‌ಗೂ ಹೊರತೇನಲ್ಲ, ಹೊಸ ಹೊಸ ಐಡಿಯಾಗಳನ್ನು ಬಳಸಿ ಆಟಗಾರರನ್ನು ಪರಿಚಯಿಸುವುದು ಟ್ರೆಂಡ್. ಇದು ಅಭಿಮಾನಿಗಳಿಗೆ ಕುತೂಹಲ ಕೆರಳಿಸುವಂತೆ ಮಾಡುತ್ತದೆ.

    ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಬ್ಲಾಸ್ಟ್ ಪಂದ್ಯದಲ್ಲಿ ಒಂದು ವಿನೂತನ ಉಪಾಯವನ್ನು ಮಾಡಲಾಗಿತ್ತು. ಪಂದ್ಯದಲ್ಲಿ ಬಳಸಬೇಕಿದ್ದ ಚೆಂಡನ್ನು ಮೈದಾನಕ್ಕೆ ಅಂಪೈರ್ ಹಿಡಿದುಕೊಂಡು ಬಂದಿರಲಿಲ್ಲ. ಬದಲಿಗೆ ರಿಮೋಟ್ ಕಂಟ್ರೋಲ್‌ನ ಪುಟ್ಟ ಕಾರೊಂದು ಮೈದಾನ ಪ್ರವೇಶಿಸಿ, ಚೆಂಡನ್ನು ಹಿಡಿದುಕೊಂಡು ಬಂದಿದೆ. ಇದನ್ನೂ ಓದಿ: ಸರಣಿ ಗೆಲ್ಲುವ ತವಕದಲ್ಲಿ ರೋಹಿತ್ ಪಡೆ – ತಂಡಕ್ಕೆ ಮರಳಿದ ಕೊಹ್ಲಿ, ಜಡೇಜಾ, ಬುಮ್ರಾ

    ಟಿ20 ಬ್ಲಾಸ್ಟ್ 2022ಯ ಸರ‍್ರೆ ಹಾಗೂ ಯಾರ್ಕ್‌ಷೈರ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿಮೋಟ್ ನಿಯಂತ್ರಿತ ಕಾರೊಂದು ಚೆಂಡನ್ನು ಎತ್ತಿಕೊಂಡು ಬೌಂಡರಿಯಿಂದ ಮೈದಾನದ ಮಧ್ಯ ಭಾಗದವರೆಗೆ ಹೋಗಿದೆ. ಇದರ ವೀಡಿಯೋವನ್ನು ಪಂದ್ಯಾವಳಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯಾರ್ಕ್‌ಷೈರ್ ಬೌಲಿಂಗ್‌ನಲ್ಲಿ ಸರ‍್ರೆಯನ್ನು 1 ರನ್‌ನಿಂದ ಸೋಲಿಸಿತು. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಈವರೆಗೆ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ

    ಟಾಸ್ ಗೆದ್ದ ಸರ‍್ರೆ ನಾಯಕ ವಿಲ್ ಜಾಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯಾರ್ಕ್‌ಷೈರ್ ತನ್ನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅವರು 62 ರನ್ ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದ್ದರು. ಆದರೆ ವಿಲ್ ಫ್ರೇನ್ ಅವರು 14 ಎಸೆತಗಳಲ್ಲಿ ಅಜೇಯ 32 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಲಂಡನ್: ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ತಂತ್ರಜ್ಞಾನ ಕ್ರಿಕೆಟ್ ಲೋಕದಲ್ಲಿ ಕಾಣ ಸಿಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಸ್ಮಾರ್ಟ್ ಬಾಲ್ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದೆ.

    ಸ್ಮಾರ್ಟ್ ಬಾಲ್ ಎಂದರೇನು?
    ಕ್ರಿಕೆಟ್‍ನಲ್ಲಿ ಬಳಸುವ ಬಾಲ್ ಇದೀಗ ಹೊಸ ಸ್ಪರ್ಶದೊಂದಿಗೆ ಸ್ಮಾರ್ಟ್ ಬಾಲ್ ಆಗಿದೆ. ಸಾಂಪ್ರದಾಯಿಕವಾಗಿ ಬಳಸುವ ಬಾಲ್‍ಗೆ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ಸ್ಮಾರ್ಟ್ ಬಾಲ್ ಆಗಿ ಮಾರ್ಪಡಿಸಲಾಗಿದೆ. ಈ ಬಾಲ್‍ಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗಿದ್ದು, ಅದರೊಳಗೆ ಇರುವ ಸೆನ್ಸರ್‍ ಗಳು ವಿವಿಧ ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಸ್ಮಾರ್ಟ್ ಬಾಲ್ ಸಂಗ್ರಹಿಸುವ ವಿವಿಧ ಮಾಹಿತಿಯನ್ನು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್‍ಗಳಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಇದಕ್ಕಾಗಿ ವಿಶೇಷ ಅಪ್ಲಿಕೇಷನ್(ಆ್ಯಪ್) ಕೂಡ ಹೊರತರಲಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ಕ್ರೀಡಾ ತಂತ್ರಜ್ಞಾನ ಸಂಸ್ಥೆಯಾದ ಸ್ಟೋಟ್ರ್ಸ್ ಕೋರ್ ತನ್ನ ಅತ್ಯುನ್ನತ ತಂತ್ರಜ್ಞಾನದೊಂದಿಗೆ ಕುಕಾಬುರಾ ಸಹಯೋಗದಲ್ಲಿ ಈ ಸ್ಮಾರ್ಟ್ ಬಾಲ್ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಬಾಲ್ ಉಳಿದ ಚೆಂಡಿನಂತೆ ಇರಲಿದ್ದು, ಚೆಂಡಿನ ಒಳಗೆ ಸ್ಮಾರ್ಟ್ ಚಿಪ್ ಒಂದನ್ನು ಮಾತ್ರ ಅಳವಡಿಸಲಾಗುತ್ತದೆ. ಇದನ್ನು ಹೊರತು ಪಡಿಸಿ ಈ ಚೆಂಡಿನ ಗಾತ್ರ, ತೂಕಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕುಕಾಬುರಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ಈ ಸ್ಮಾರ್ಟ್ ಬಾಲ್‍ನ ಒಳಗೆ ಇರುವ ಸ್ಮಾರ್ಟ್ ಚಿಪ್ ಬೌಲರ್ ಎಸೆಯುವ ಚೆಂಡು ಬೌನ್ಸ್ ಆಗುವ ಮುನ್ನ ಚೆಂಡಿನ ವೇಗ, ಬೌನ್ಸ್ ಆದ ಬಳಿಕ ಚೆಂಡಿನ ವೇಗ, ಸ್ಪಿನ್ ಬೌಲರ್ ಎಸೆದ ಬಾಲ್ ಎಷ್ಟರ ಮಟ್ಟಿಗೆ ತಿರುವು ಪಡೆದುಕೊಂಡಿದೆ ಮತ್ತು ಚೆಂಡಿನ ಮೇಲೆ ಬೌಲರ್‍ನ ಶಕ್ತಿಯ ಪ್ರಯೋಗವನ್ನು ಕೇವಲ ಐದು ಸೆಕೆಂಡುಗಳಲ್ಲಿ ತಿಳಿದುಕೊಳ್ಳಲು ಸಹಾಯವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಒಂದು ಗಂಟೆ ಚಾರ್ಜ್ ಮಾಡಿದರೆ 30 ಗಂಟೆಗಳ ಕಾಲ ಬಳಸಬಹುದಾಗಿದೆ. ಸರಾಸರಿ 300 ಕಿಮೀ. ವೇಗದವರೆಗೂ ಯಾವುದೇ ತೊಂದರೆಗಳಿಲ್ಲದೆ ಈ ಬಾಲ್‍ನ್ನು ಬಳಸಬಹುದಾಗಿದೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ಈಗಾಗಲೇ ಸ್ಮಾರ್ಟ್‍ಗಳನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಪ್ರಯೋಗ ಮಾಡಲು ತಯಾರಿಗಳು ನಡೆದಿದ್ದು ಇಲ್ಲಿ ಯಶಸ್ವಿಯಾದರೆ ಮುಂದೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸ್ಮಾರ್ಟ್ ಬಾಲ್‍ಗಳನ್ನು ಕಾಣಬಹುದಾಗಿದೆ.

  • ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಸಿಡ್ನಿ: 2020ರ ಬಿಗ್ ಬ್ಯಾಷ್ ಲೀಗ್‍ನ 23ನೇ ಪಂದ್ಯದಲ್ಲಿ ಬ್ಯಾಟ್ಸ್ ಮ್ಯಾನ್ ಸಿಕ್ಸರ್ ಗೆ ಅಟ್ಟಿದ ಚೆಂಡು ಪ್ರೇಕ್ಷಕನ ಬಿಯರ್ ಗ್ಲಾಸ್ ಸೇರಿದೆ. ಚೆಂಡು ಗ್ಲಾಸ್ ನಲ್ಲಿ ಬೀಳುತ್ತಿದ್ದಂತೆ ಖುಷಿಗೊಂಡ ಪ್ರೇಕ್ಷಕ ಬಾಲ್ ತೆಗೆಯದೇ ಮತ್ತೊಂದು ಗುಟುಕು ಏರಿಸಿದ್ದಾನೆ. ಐಸಿಸಿ ವೀಡಿಯೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಮೆಲ್ವರ್ನ್ ಸ್ಟಾರ್ಸ್ ಮತ್ತು ಹೊಬಾರ್ಟ್ ಹರಿಕೆನ್ಸ್ ತಂಡಗಳ ನಡುವೆ ಮ್ಯಾಚ್ ನಡೆದಿತ್ತು. ಹೋಬಾರ್ಟ್ ತಂಡದ ಬ್ಯಾಟಿಂಗ್ ವೇಳೆ 16ನೇ ಓವರ್ ನಲ್ಲಿ ಡೇವಿಡ್ ಮಲನ್ ಅದ್ಭುತವಾದ ಸಿಕ್ಸ್ ಬಾರಿಸಿದರು. ಈ ಬಾಲ್ ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರ ಬಿಯರ್ ಗ್ಲಾಸ್ ನಲ್ಲಿ ಬಿತ್ತು. ಇದಕ್ಕೂ ಮುಂಚೆ ಯುವಕನೋರ್ವ ಈ ಬಾಲ್ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದ. ಆದ್ರೆ ಆತನ ಕೈಗೆ ತಾಕಿದ ಬಾಲ್ ಬಿಯರ್ ಗ್ಲಾಸ್ ಸೇರಿಕೊಂಡಿತು.

    ಇತ್ತ ಫೀಲ್ಡರ್ ಬಾಲ್ ನೀಡುವಂತೆ ಹೇಳಿದಾಗ ಅಭಿಮಾನಿ ಗ್ಲಾಸ್ ನಲ್ಲಿದ್ದ ಬಾಲ್ ತೆಗೆಯದೇ ಒಂದು ಗುಟುಕು ಬಿಯರ್ ಕುಡಿದಿದ್ದಾನೆ. ಬಿಯರ್ ಖಾಲಿಯಾಗ್ತಿದ್ದಂತೆ ಬಾಲ್ ಎಸೆದಿದ್ದಾನೆ. ಬಿಯರ್ ಕುಡಿದಿದನ್ನ ನೋಡಿದ ಗ್ಯಾಲರಿಯಲ್ಲಿದ್ದ ಜನ ಚಪ್ಪಾಳೆ ಹೊಡೆದು ಜೋರಾಗಿ ಕೂಗಿದ್ದಾರೆ.

    ಈ ಪಂದ್ಯವನ್ನ ಹೋಬಾರ್ಟ್ ತಂಡ 21 ರನ್ ಗಳ ಅಂತರದಿಂದ ಗೆದ್ದು ಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಹೋಬಾರ್ಟ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತ್ತು. ಡೇವಿಡ್ ಮಲಾನ್ 75 ರನ್ ಸೇರಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೋಬಾರ್ಟ್ ನೀಡಿದ ಮೊತ್ತವನ್ನ ಬೆನ್ನತ್ತಿದ ಮೆಲ್ವರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 143 ರನ್ ಗಳಿಸಲು ಮಾತ್ರ ಶಕ್ತವಾಯ್ತು. ಮೆಲ್ಬರ್ನ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸವೆಲ್ 37 ಎಸೆತದಲ್ಲಿ 70 ರನ್ ಗಳಿಸಿ ತಂಡದ ಚೇತರಿಕೆಗೆ ಕಾರಣರಾಗಿದ್ದರು. 70 ರನ್ ನಲ್ಲಿ 4 ಫೋರ್ ಮತ್ತು 5 ಸಿಕ್ಸ್ ಸೇರಿವೆ.

  • ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

    ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅವರು ಆಚಾನಕ್ ಆಗಿ ಬಾಲಿಗೆ ಎಂಜಲು ಹಚ್ಚಿ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಕಾರಣದಿಂದ 6 ತಿಂಗಳ ತಡವಾಗಿ ಐಪಿಎಲ್ ಯುಎಇಯಲ್ಲಿ ಆರಂಭವಾಗಿದೆ. ಇಡೀ ವಿಶ್ವದಲ್ಲೇ ಕೊರೊನಾ ಇರುವ ಕಾರಣದಿಂದ ಬಿಸಿಸಿಐ ಕೆಲ ಹೊಸ ಕೊರೊನಾ ನಿಯಮಗಳನ್ನು ರಚಿಸಿಕೊಂಡು ಐಪಿಎಲ್ ಆಡಿಸುತ್ತಿದೆ. ಈ ನಿಯಮಗಳ ಪ್ರಕಾರ ಬಾಲಿಗೆ ಎಂಜಲು ಹಚ್ಚುವುದನ್ನು ನಿಷೇಧ ಮಾಡಿದೆ.

    ರಾಬಿನ್ ಉತ್ತಪ್ಪ ಎಡವಟ್ಟು
    ಟಾಸ್ ಸೋತ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಬಂದಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಜಯದೇವ್ ಉನಾದ್ಕಟ್ ಅವರು ಇನ್ನಿಂಗ್ಸ್‍ನ ಮೂರನೇ ಓವರ್ ಬೌಲ್ ಮಾಡುತ್ತಿದ್ದರು. ಆಗ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ ಅವರು ದೊಡ್ಡ ಹೊಡೆತಕ್ಕೆ ಕೈಹಾಕಿ ಉತ್ತಪ್ಪ ಅವರಿಗೆ ಕ್ಯಾಚ್ ನೀಡಿದರು. ಆದರೆ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಉತ್ತಪ್ಪ ಆ ನಂತರ ಬಾಲಿಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಕಾರಣದಿಂದ ಬಾಲಿಗೆ ಎಂಜಲು ಹಚ್ಚುವುದನ್ನು ಐಪಿಎಲ್ ನಿಷೇಧ ಮಾಡಿದೆ. ಈ ನಿಯಮ ಐಸಿಸಿ ಕೂಡ ಜಾರಿಗೆ ತಂದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲೂ ಬ್ಯಾನ್ ಮಾಡಲಾಗಿದೆ. ಜೊತೆಗೆ ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದರೆ ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಇದನ್ನೂ ಮೀರಿ ಮೂರನೇ ಬಾರಿ ತಪ್ಪು ಮಾಡಿದರೆ ಎದರುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ ಐದು ರನ್‍ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಮಾಡಿದೆ.

    https://twitter.com/ItsRaviMaurya/status/1311308712670195713

    ಕೋಲ್ಕತ್ತಾಗೆ ಸುಲಭ ಜಯ
    ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಸುಲಭವಾಗಿ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್ ಮತ್ತು ಇಯೋನ್ ಮೋರ್ಗಾನ್ ಅವರ ಉತ್ತಮ ಆಟದಿಂದ ನಿಗದಿತ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು 175 ರನ್ ಟಾರ್ಗೆಟ್ ನೀಡಿತ್ತು.

    ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಶಿವಮ್ ಮಾವಿ ಮತ್ತು ಕಮಲೇಶ್ ನಾಗರ್ಕೋಟಿ ಬೌಲಿಂಗ್‍ಗೆ ತತ್ತರಿಸಿ ಹೋಯ್ತು. ಪವರ್ ಪ್ಲೇ ಹಂತದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್ ಮತ್ತು ಉತ್ತಮ ಲಯದಲ್ಲಿದ್ದ ಸಂಜು ಸಮ್ಸನ್ ಬೇಗ ಔಟ್ ಆದರು. ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಆಡುವ ಮೂಲಕ ಅರ್ಧ ಶತಕ ಬಾರಿಸಿದ ಟಾಮ್ ಕರ್ರನ್ ಅವರ ಪಂದ್ಯ ಗೆಲ್ಲಿಸುವ ಪ್ರಯತ್ನ ವಿಫಲವಾಗಿದ್ದು, ಈ ಮೂಲಕ 37 ರನ್‍ಗಳ ಅಂತರದಲ್ಲಿ ಕೋಲ್ಕತ್ತಾ ಜಯ ಗಳಿಸಿತು.

  • ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಲಂಡನ್: ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ್ದಕ್ಕೆ ಆಸ್ಟ್ರೇಲಿಯಾದ ಅನುಭವಿ ಕೌಂಟಿ ಕ್ರಿಕೆಟ್ ಬೌಲರ್ ಮೀಚ್ ಕ್ಲೇಡನ್ ಅವರನ್ನು ಮಾನತು ಮಾಡಲಾಗಿದೆ.

    ಕೌಂಟಿ ಕ್ರಿಕೆಟ್‍ನಲ್ಲಿ ಮೀಚ್ ಕ್ಲೇಡನ್ ಅವರು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ಆಡುತ್ತಾರೆ. ಕಳೆದ ತಿಂಗಳು ಮಿಡ್ಲ್‍ಸೆಕ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೀಚ್ ಕ್ಲೇಡನ್ ಮೂರು ವಿಕೆಟ್ ಪಡೆದಿದ್ದರು. ಈ ವೇಳೆ ಅವರು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಾಲಿಗೆ ಹಾಕಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಮೀಚ್ ಕ್ಲೇಡನ್ ಅವರು ಕಳೆದ ತಿಂಗಳು ನಡೆದ ಮಿಡ್ಲ್‍ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಬಾಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿ ವಿರೂಪಗೊಳಿಸಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

    ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್ ಆಟದಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಪ್ರೋಟೋಕಾಲ್‍ಗಳನ್ನು ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ಬೌಲರ್ ಬಾಲಿಗೆ ಉಗುಳನ್ನು ಹಚ್ಚುವುದನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ ಬಾಲ್‍ಗೆ ಸ್ಯಾನಿಟೈಸರ್ ಹಾಕಿದ ಮೀಚ್ ಕ್ಲೇಡನ್ ಅವರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸರ್ರೆ ವಿರುದ್ಧದ ಮುಂದಿನ ಬಾಬ್ ವಿಲ್ಲೀಸ್ ಟ್ರೋಫಿ ಪಂದ್ಯದಲ್ಲಿ ಕ್ಲೇಡನ್ ಅವರು ಆಡುವುದಿಲ್ಲ ಎಂದು ತಂಡ ತಿಳಿಸಿದೆ.

  • ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಕೊಲಂಬೋ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ 2ನೇ ದಿನ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ.

    ಗಾಲೆಯಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಎಸೆದ ಚೆಂಡು ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರ ಹೆಲ್ಮೆಟ್‍ಗೆ ಸಿಕ್ಕಿ ಹಾಕಿಕೊಂಡಿತ್ತು.

    https://twitter.com/ooccricket/status/1161998041714438144

    ಇನ್ನಿಂಗ್ಸ್ ನ 82 ಓವರ್ ನ ಮೊದಲ ಎಸೆತದಲ್ಲಿ ನಡೆದಿದ್ದು, ಎಂಬುಲ್ಡೆನಿಯಾ ಎಸೆದ ಚೆಂಡನ್ನು ಹಿಂದಕ್ಕೆ ಹೊಡೆಯಲು ಟ್ರೆಂಡ್ ಬೌಲ್ಟ್ ಯತ್ನಿಸಿದಾಗ ಅವರ ಬ್ಯಾಟ್ ತುದಿಗೆ ತಗಲಿದ ಚೆಂಡು ಬೌಲ್ಟ್ ಅವರ ಹೆಲ್ಮೆಟ್‍ನ ಮುಂದಿನ ಭಾಗದಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತದೆ.

    ಬ್ಯಾಟ್‍ಗೆ ತಗಲಿ ನೇರವಾಗಿ ಮುಖದ ಕಡೆ ಬಂದ ಚೆಂಡನ್ನು ಕಂಡು ಸ್ವಲ್ಪ ಮಟ್ಟಿಗೆ ಗಾಬರಿಯ ಬೌಲ್ಟ್, ತನ್ನ ಸುತ್ತ ಸುತ್ತಿಗೊಂಡಿರುವ ಶ್ರೀಲಂಕಾ ಆಟಗಾರರನ್ನು ನೋಡಿ ನಗುತ್ತಾರೆ. ಈ ವಿಚಿತ್ರ ದೃಶ್ಯವನ್ನು ಕಂಡು ಕಾಮೆಂಟ್ರಿ ಹೇಳುವವರು ಕೂಡ ನಗುತ್ತಾರೆ.

    ಈ ಪಂದ್ಯದಲ್ಲಿ ಬೌಲ್ಟ್ ಅವರು 18 ರನ್ ಹೊಡೆದು ಸುರಂಗ ಲಕ್ಮಲ್ ಅವರಿಗೆ ಔಟ್ ಆಗುತ್ತಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 267 ರನ್ ಹೊಡೆದು ಆಲೌಟ್ ಆಗಿದೆ.

    ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ. ಇನ್ನೂ 2 ದಿನದ ಆಟ ಬಾಕಿಯಿದೆ.

  • ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ಮೇಲೆ ಅಭಿಮಾನಿಗಳು ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಧೋನಿ ಕೂಡ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವವನ್ನು ನೀಡುತ್ತಾರೆ. ಈ ಮಾತಿಗೆ ಪೂರಕ ಎಂಬಂತೆ ಡೆಲ್ಲಿ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧೋನಿ ವಿಶೇಷ ಗಿಫ್ಟ್ ನೀಡಿದ್ದಾರೆ.

    ಟೆನ್ನಿಸ್ ಬಾಲ್ ಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಬೀಸುವ ಮೂಲಕ ಧೋನಿ ಅಷ್ಟು ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸಿಎಸ್‍ಕೆ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.

    ಪಂದ್ಯದ ವೇಳೆ ಧೋನಿ ಮೈದಾನ ಪ್ರವೇಶ ಮಾಡುತ್ತಿದಂತೆ ನೆರೆದಿದ್ದ ಅಭಿಮಾನಿಗಳ ಅವರ ಘೋಷಣೆ ಕೂಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸ್ಟೇಡಿಯಂ ಮೇಲೆ ಕುಳಿತ್ತಿದ್ದ ಅಭಿಮಾನಿಗಳಿಗೂ ಟೆನ್ನಿಸ್ ರಾಕೆಟ್ ನಿಂದ ಚೆಂಡನ್ನು ಹೊಡೆದಿದ್ದರು. ಈ ವಿಡಿಯೋವನ್ನು ಸುಮಾರು 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

    ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್‍ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 13 ಪಂದ್ಯಗಳಲ್ಲಿ ಸಿಎಸ್‍ಕೆ 9ರಲ್ಲಿ ಜಯ ಪಡೆದು 18 ಅಂಕಗಳಿಸಿದೆ. 8 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

  • ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ರಾಜ್‍ಕೋಟ್: ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಿರುವ ಎಸ್‍ಜಿ ಚೆಂಡಿನ ವಿರುದ್ಧ ಟೀಂ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಅಸಮಾಧಾನ ಹೊರಹಾಕಿದ್ದು, ಎಸ್‍ಜಿ ಚೆಂಡು ಈ ಹಿಂದೆ ನಾವು ಬಳಕೆ ಮಾಡಿದ ಗುಣಮಟ್ಟದಲ್ಲಿ ಇಲ್ಲ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

    ಜಯಗಳಿಸಿದ ಬಳಿಕ ಮಾತನಾಡಿದ ಅಶ್ವಿನ್, ಪಂದ್ಯಕ್ಕೆ ಬಳಕೆ ಮಾಡಿದ ಎಸ್‍ಜಿ ಚೆಂಡು ಗುಣಮಟ್ಟ ನಿರಾಸೆ ಮೂಡಿಸಿದ್ದು, ಈ ಹಿಂದೆ ಬಳಕೆ ಮಾಡುತ್ತಿದ್ದ ಚೆಂಡು 70-80 ಓವರ್ ಗಳ ಬಳಿಕವೂ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕುಕಾಬುರಾ ಹಾಗೂ ಡ್ಯೂಕ್ಸ್ ಚೆಂಡಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಅಶ್ವಿನ್, ಕುಕಾಬುರಾ ಬಿಳಿ ಬಣ್ಣದ ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಆದರೆ ಕೆಂಪು ಬಣ್ಣದ ಚೆಂಡು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಿಂದ 6 ವಿಕೆಟ್ ಪಡೆದ ಅಶ್ವಿನ್ ದಕ್ಷಿಣ ಆಫ್ರಿಕಾ ವೇಗಿ ಅಲನ್ ಡೊನಾಲ್ಡ್ (330 ವಿಕೆಟ್) ಅವರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ನೀಡಿ 4 ವಿಕೆಟ್, 2ನೇ ಇನ್ನಿಂಗ್ಸ್ ನಲ್ಲಿ 71 ರನ್ ನೀಡಿ 2 ಪಡೆಯುವ ಮೂಲಕ ಒಟ್ಟಾರೆ ಟೆಸ್ಟ್ ಪಂದ್ಯಗಳಲ್ಲಿ 333 ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಶ್ವಿನ್ 24ನೇ ಸ್ಥಾನ ಪಡೆದಿದ್ದಾರೆ.

    ಅಂದಹಾಗೇ ವಿಶ್ವ ಕ್ರಿಕೆಟ್‍ನಲ್ಲಿ ನಡೆಯುವ ಪಂದ್ಯದಲ್ಲಿ ವಿವಿಧ ದೇಶಗಳಲ್ಲಿ ಆಯಾ ಕಂಪೆನಿಗಳು ತಯಾರಿಸಿದ ಚೆಂಡು ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಕುಕಾಬುರಾ ಚೆಂಡನ್ನು ಆಸ್ಟ್ರೇಲಿಯಾದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಚೆಂಡನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ನಡೆಯುವ ಪಂದ್ಯದ ವೇಳೆ ಬಳಕೆ ಮಾಡಲಾಗುತ್ತದೆ.

    ಡ್ಯೂಕ್ಸ್ ಚೆಂಡನ್ನು ಇಂಗ್ಲೆಂಡ್‍ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಇದನ್ನು ಇಂಗ್ಲೆಂಡ್, ಯುಕೆ ಮತ್ತ ವೆಸ್ಟ್ ಇಂಡೀಸ್ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ಉಳಿದಂತೆ ಎಸ್‍ಜಿ ಚೆಂಡನ್ನು ಭಾರತದಲ್ಲಿ ಉತ್ಪಾದನೆ ಮಾಡಿ ಇಲ್ಲಿನ ಪಂದ್ಯಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

    ಈ ಮೂರು ಕಂಪೆನಿಗಳು ಉತ್ಪಾದನೆ ಮಾಡುವ ಚೆಂಡುಗಳಲ್ಲಿ ಪ್ರಮುಖವಾಗಿ ಚೆಂಡಿನ ಹೊಲಿಗೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಆಯಾ ದೇಶಗಳ ವಾತಾವರಣಕ್ಕೆ ಅನುಗುಣವಾಗಿ ಚೆಂಡನ್ನು ತಯಾರು ಮಾಡಲಾಗುತ್ತದೆ. ಎಸ್‍ಜಿ ಬಾಲಿನ ಸಮಸ್ಯೆ ಏನೆಂದರೆ ಅದಷ್ಟು ಬೇಗ ಬಾಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕುಕಾಬುರಾ ಚೆಂಡು 20 ಓವರ್, ಡ್ಯೂಕ್ಸ್ ಚೆಂಡು 50-55, ಎಸ್‍ಜಿ 10 ಓವರ್ ಗಳ ವರೆಗೂ ಸ್ವಿಂಗ್ ಆಗುವ ಸಾಮಥ್ರ್ಯ ಹೊಂದಿದೆ.

    ಸ್ಯಾನ್ಸ್ಪೆರೆಲ್ಸ್ ಗ್ರೀನ್ಸ್ ಲ್ಯಾಂಡ್ ಬಾಲ್ ಗಳನ್ನು ಸಂಕ್ಷಿಪ್ತವಾಗಿ ಎಸ್‍ಜಿ ಬಾಲ್ ಎಂದೇ ಕರೆಯಲಾಗುತ್ತದೆ. ಉತ್ತರ ಪ್ರದೇಶ ಮೀರತ್ ನಲ್ಲಿರುವ ಕಂಪೆನಿ ಈ ಬಾಲ್ ಗಳನ್ನು ತಯಾರಿಸುತ್ತದೆ. ಕುಕಾಬುರಾ ಬಾಲಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಎಸ್‍ಜಿ ಬಾಲ್ ಬೆಲೆ ಕಡಿಮೆಯಿದೆ. ಒಂದು ಕುಕಾಬುರಾ ಚೆಂಡಿನ ಬೆಲೆ 2,299 ರೂ. ಇದ್ದರೆ ಎಸ್‍ಜಿ ಬಾಲಿನ ಬೆಲೆ 1,464 ರೂ. ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv