ಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕೆಲಸ ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೊಪ್ಪಳ (Koppal) ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ದೂರವಾಣಿ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಜೊತೆ ಸಿಎಂ ಮಾತನಾಡಿ ಕಾರ್ಖಾನೆ ಕೆಲಸವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಕೊಪ್ಪಳದ ಶಾಸಕರು, ಜನಪ್ರತಿನಿಧಿಗಳ ಸರ್ವಪಕ್ಷ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದರು.ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗ ಕಾರ್ಖಾನೆ ಸ್ಥಾಪನೆ ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡಿತು. ಸಚಿವ ಶಿವರಾಜ್ ತಂಗಡಗಿ (Shivaraj Tangadagi) ನೇತೃತ್ವದ ನಿಯೋಗದಲ್ಲಿ ಬಿಜೆಪಿ ಶಾಸಕರೂ ಭಾಗಿಯಾಗಿದ್ದರು. ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಗಾರರ ನಿಯೋಗದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಇನ್ನೂ ಸಿಎಂ ಭೇಟಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡು ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಬಾರದೆಂದು ಜಿಲ್ಲೆಯ ಜನರು, ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿ, ಸರ್ಕಾರಕ್ಕೆ ಮನವಿಯನ್ನ ಕೊಟ್ಟಿದ್ದರು. ನಾನು ಜಿಲ್ಲಾಮಂತ್ರಿಯಾಗಿ ಮನವಿ ಸ್ವೀಕಾರ ಮಾಡಿದ್ದೆ. ಈ ಕಾರ್ಖಾನೆ 2006ರಲ್ಲಿ ಪ್ರಾರಂಭವಾಗಿದ್ದು, ಆಗ ರೈತರು ಜಮೀನು ಕೊಟ್ಟಿದ್ದಾರೆ. ಯಾರಿಂದ ಸಮಸ್ಯೆ ಆಗಿದೆ ಎನ್ನುವುದನ್ನು ನಾನು ಹೇಳುವುದಿಲ್ಲ. ರಾಜಕೀಯ ಮಾಡುವ ಇಚ್ಛೆ ನನಗಿಲ್ಲ. ಪಕ್ಷಾತೀತವಾಗಿ ನಾವು ಇಂಡಸ್ಟ್ರಿ ವಿಸ್ತರಣೆಗೆ ವಿರೋಧ ಇದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಜನಪ್ರತಿನಿಧಿಗಳು ಕೂಡ ವಿರೋಧ ಮಾಡಿದ್ದಾರೆ. ಗವಿಮಠದ ಶ್ರೀಗಳು ಕೂಡ ನಮಗೆ ಬೆಂಬಲಿಸಿದ್ದಾರೆ. ಸಿಎಂ ಬಳಿಯೂ ನಾವು ಮಾತುಕತೆ ಮಾಡಿ ಮನವಿ ನೀಡಿದ್ದೇವೆ ಎಂದು ವಿವರಿಸಿದರು.ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ
ಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದೆ. ನಾಳೆ (ಮಾ.04) ಕೊಪ್ಪಳದ ಸರ್ವಪಕ್ಷಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಭೇಟಿ ಮಾಡಲಿದ್ದಾರೆ.
ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದ್ದರೂ ಕೂಡ ಸದ್ದಿಲ್ಲದೇ ಪ್ಲಾಂಟ್ ನಿರ್ಮಾಣಕ್ಕೆ ಸಂಸ್ಥೆ ಭೂಮಿ ಪೂಜೆ ನೆರವೇರಿಸಿದೆ. ಈ ನಡುವೆ ಉದ್ದೇಶಿತ ಸ್ಥಳದಲ್ಲಿ ಪ್ಲ್ಯಾಂಟ್ ನಿರ್ಮಾಣ ವಿರೋಧಿಸಿ ಕೊಪ್ಪಳದ ಸರ್ವಪಕ್ಷಗಳ ನಿಯೋಗ ನಾಳೆ ಮುಖ್ಯಮಂತ್ರಿಯನ್ನು ಮಾಡಲಿದ್ದು, ಸಿಎಂ ಭೇಟಿ ಮತ್ತು ಸಭೆಯ ಫಲಿತಾಂಶ ಕೊಪ್ಪಳ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಐಐಟಿ ಬಾಬಾ ಜೈಪುರದಲ್ಲಿ ಅರೆಸ್ಟ್
ಫೆ.24ರಂದು ನಡೆದ ಕೊಪ್ಪಳ ಬಂದ್ನಲ್ಲಿ ಗಮಿಮಠದ ಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳಿಗೆ ವಾರ್ನಿಂಗ್ ಮಾಡಿದ್ದರು. ಯಾವುದೇ ಕಾರಣಕ್ಕೂ ಕೊಪ್ಪಳದಲ್ಲಿ ಸ್ಟೀಲ್ ಪ್ಲ್ಯಾಂಟ್ ವಿಸ್ತರಣೆ ಆಗಬಾರದು, ಅದನ್ನ ತಡೆಯುವ ಜವಾಬ್ದಾರಿ ಪಕ್ಷಾತೀತವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಜೊತೆ ಮಾತನಾಡಿ ವಾಪಸ್ ಪಡೆದುಕೊಳ್ಳುವಂತೆ ಒತ್ತಡ ಹಾಕಬೇಕಾಗಿದೆ.
ಇದರ ಬೆನ್ನಲ್ಲೇ ಬಲ್ಡೋಟಾ ಕಂಪನಿ ಭೂಮಿ ಪೂಜೆ ನೆರವೇರಿಸಿದೆ. ಹೀಗಾಗಿ ಸದ್ಯ ಜನಪ್ರತಿನಿಧಿಗಳು ಸಿಎಂ ಜೊತೆ ಪಕ್ಷಾತೀತವಾಗಿ ಬಲ್ಡೋಟಾ ಕಾರ್ಖಾನೆ ರದ್ದು ಮಾಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿರುವ ಅಭಿನವ ಗವಿಶ್ರೀಗಳು ಅನುಷ್ಠಾನಕ್ಕೆ ಕುಳಿತ ಹಿನ್ನೆಲೆ ಯಾರೊಂದಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ, ಭಾನುವಾರ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಬಂದಾಗಲು ಸಹ ಸ್ವಾಮೀಜಿ ದರ್ಶನ ನೀಡಿಲ್ಲ.
ಈ ಕುರಿತು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸದ್ಯ ಪೂಜ್ಯರ ಸಲಹೆಯಂತೆ ಸಿಎಂ ಜೊತೆ ಮಾತನಾಡಲು ದಿನಾಂಕ ನಿಗದಿ ಮಾಡಿದ್ದೇವೆ. ಒಂದು ಕಡೆ ರಾಜ್ಯ ಸರ್ಕಾರ ಬಲ್ಡೋಟಾ ಕಂಪನಿ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜೊತೆಗೆ ಕದ್ದು ಮುಚ್ಚಿ ಭೂಮಿ ಪೂಜೆ ನಡಿದಿದೆ. ಆದ್ರೆ ಈ ಬಗ್ಗೆ ಕೇಂದ್ರದ ಎದುರು ಯಾವುದೇ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ ಎಂದಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಸ್ಟೀಲ್ ಪ್ಲ್ಯಾಂಟ್ ವಿಸ್ತರಣೆ ಮಾಡಲಾಗ್ತಿದೆ. ಜನಸಾಮಾನ್ಯರ ವಿರೋಧ ಕಟ್ಟಿಕೊಂಡು ಜನರಿಗೆ ತೊಂದರೆಯಾಗುವಂತಹ ಯೋಜನೆಗಳನ್ನ ತರಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದೀನಿ. ಈ ಹೋರಾಟಕ್ಕೆ ನಮ್ಮ ಪಕ್ಷ, ನಾನು ಎಲ್ಲರೂ ಸ್ವಾಮೀಜಿಗಳ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.
ಜನರು, ಸಚಿವರು, ಸಂಸದರು, ಶಾಸಕರು ವಿರೋಧ ಮಾಡ್ತಿದ್ದಾರೆ, ಆದ್ರೆ ಕಂಪನಿ ಮಾತ್ರ ಇದಕ್ಕೆ ಸೊಪ್ಪು ಹಾಕದೆ ಕದ್ದು ಮುಚ್ಚಿ ಭೂಮಿ ಪೂಜೆ ಮಾಡಿದೆ. ಇತ್ತ ಜನಪ್ರತಿನಿಧಿಗಳು ಸಿಎಂನ್ನು ಭೇಟಿ ಮಾಡಲಿದ್ದು, ಬಳಿಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಜಿಲ್ಲೆಯ ಜನರು ಕೂತುಹಲದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ
– ನಮ್ಮೂರು ಜಪಾನ್ ಮಾಡೋದು ಬೇಡ. ನಮ್ಮನ್ನು ಜೋಪಾನ ಮಾಡಿ ಎಂದ ಸ್ವಾಮೀಜಿ
ಕೊಪ್ಪಳ: ಬಲ್ಡೋಟಾ ಕಾರ್ಖಾನೆಗೆ (Baldota Factory) ಇತಿಶ್ರೀ ಇಡುವುದು ನನಗೆ ಗೊತ್ತು, ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್ನಿಂದ ರೊಟ್ಟಿ ಡೌನ್ಲೋಡ್ ಮಾಡಲಾಗುವುದಿಲ್ಲ. ನನ್ನದು ಇದೇ ಮೊದಲು, ಇದೇ ಕೊನೆಯ ಹೋರಾಟವಾಗಬೇಕು ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಬಂದ್ ಹಿನ್ನೆಲೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಠದ ಭಕ್ತರಿಗಾಗಿ ನನ್ನ ಎಲ್ಲ ಇತಿ-ಮಿತಿ ಬದಿಗಿಟ್ಟು ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಸಮಸ್ಯೆಯನ್ನು ತಾತ್ವಿಕವಾಗಿ, ಸಾತ್ವಿಕವಾಗಿ ಹಾಗೂ ಪ್ರೇಮದಿಂದ ಸರ್ಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ. ಜೊತೆಗೆ ಮುಂದೆ ಏನು ಮಾಡಬೇಕು ಎಂಬುವುದು ನನಗೆ ಗೊತ್ತಿದೆ. ಗವಿಸಿದ್ದೇಶ್ವರನ ಇಚ್ಛೆಯಂತೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಕಾಡಾನೆ, ಮಾನವನ ಸಂಘರ್ಷ – ಆನೆ ದಾಳಿಗೆ ಯುವಕ ಬಲಿ
ಮಠದ ಜಾತ್ರೆ, ದಾಸೋಹ ಭಕ್ತರಿಂದಲೇ ನಡೆಯುತ್ತದೆ. ಇಂತಹ ಭಕ್ತರು ಸಮಸ್ಯೆಗೆ ಸಿಲುಕಿದ್ದರಿಂದ ನಾನು ಹೊರಗೆ ಬರಲೇಬೇಕಾಯಿತು. ನನ್ನ ಆತ್ಮಸಾಕ್ಷಿಗೆ ಕೇಳಿ ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾನು ನನ್ನ ಎಲ್ಲ ಗಡಿ ದಾಡಿ, ಇಲ್ಲಿಗೆ ಬಂದಿದ್ದೇನೆ. ಈಗಲೂ ನಾನು ಜಾತ್ರೆಯಲ್ಲಿ ಹೇಳಿದೆ ಮಾತಿಗೆ ಬದ್ಧನಾಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ನೇತೃತ್ವ ವಹಿಸುವುದಿಲ್ಲ. ಇದು ನನ್ನ ಮೊದಲ ಮತ್ತು ಕೊನೆಯ ಹೋರಾಟ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ನಾನು ಮುಂದೆ ಎಲ್ಲಿಯೂ ಬರುವುದಿಲ್ಲ. ಸರ್ಕಾರ ನಮಗೆ ತಾಯಿ ಇದ್ದಂತೆ. ನಮಗೆ ಆರೋಗ್ಯಯುತವಾದ ಕೊಪ್ಪಳ ಕೊಡಿ ಎಂದು ಕೇಳಿಕೊಳ್ಳುತ್ತೇವೆ. ಇದರ ಹೊರತಾಗಿ ದುಡಿಯುವುದನ್ನು ಬಿಟ್ಟು ಹೊಡೆದಾಡುವುದನ್ನು ನಾನು ಕಲಿಸುವುದಿಲ್ಲ. ನಾವು ಯಾವ ಸರ್ಕಾರದ ವಿರುದ್ಧವೂ ಗುಡುಗುವುದಿಲ್ಲ. ನಮ್ಮೂರು ಜಪಾನ್ ಮಾಡುವುದು ಬೇಡ. ನಮ್ಮನ್ನು ಜೋಪಾನ ಮಾಡಿ ಅಂತಾ ನಾನು ಕೇಳಿಕೊಳ್ಳಬಲ್ಲೆ ಎಂದು ಮುಂದಿನ ಹೋರಾಟದಿಂದ ವಿಮುಕ್ತರಾದರು. ಸಚಿವ ಶಿವರಾಜ ತಂಗಡಗಿ, ಸೋಲಿಲ್ಲದ ಸರದಾರ ರಾಘವೇಂದ್ರ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೊಪ್ಪಳ ಜಿಲ್ಲೆಯವರು. ನಿಮ್ಮ ಒಂದು ಪತ್ರವಿಲ್ಲದೇ ಒಬ್ಬ ಸಣ್ಣ ಆಫೀಸರ್ ಕೂಡ ಬದಲಾಗುವುದಿಲ್ಲ. ಆದರೆ ಇಂತಹ ದೊಡ್ಡ ಫ್ಯಾಕ್ಟರಿ ಬಂದರೂ ಸುಮ್ಮನೇ ಕೂತಿರುವುದು ಸರಿಯಲ್ಲ. ನೀವು ಮೂವರು ಸೇರಿ ಏನು ಮಾಡುತ್ತೀರಿ ಗೊತ್ತಿಲ್ಲ. ಕಾರ್ಖಾನೆ ಆರಂಭ ರದ್ದು ಆದೇಶ ತೆಗೆದುಕೊಂಡು ಕೊಪ್ಪಳಕ್ಕೆ ಬರಬೇಕು ಎಂದು ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಸೇರಿ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ತಾಕೀತು ಮಾಡಿದರು. ಇನ್ನು ಉಳಿದವರೆಲ್ಲ ಅವರಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಒಂದು ದೇಶದ ಪ್ರಗತಿಯಲ್ಲಿ ಕಾರ್ಖಾನೆಗಳು ಬೇಕು. ಆದರೆ, ಎಷ್ಟು ಬೇಕು? ಯಾವ ಭಾಗಕ್ಕೆ ಎಷ್ಟು ಬೇಕು? ಎಂಬುದು ಮುಖ್ಯ. ಈಗಾಗಲೇ ಕೇವಲ ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆ ಇವೆ. ಇದರಲ್ಲಿ 20ಕ್ಕೂ ಹೆಚ್ಚು ದೂಳು ಉಗುಳುವ ಕಾರ್ಖಾನೆ ಇವೆ. ಕೊಪ್ಪಳ ತಾಲೂಕಿನ ಸುತ್ತಲೂ ಕಾರ್ಖಾನೆ ಆಗುತ್ತಿವೆ. ಇದರಿಂದ ಇಲ್ಲಿನ ಜನರು ಕೊಪ್ಪಳ ಬಿಟ್ಟು ಎಲ್ಲಿಗೆ ಹೋಗಬೇಕು. ಮಗುವಿನ ಮುಖದ ಮೇಲೆ ಒಂದು ಕಾಡಿಗೆ ಇದ್ದರೆ ಚಂದ. ಆದರೆ, ಮುಖದ ತುಂಬೆಲ್ಲ ಕಾಡಿಗೆ ಇದ್ದರೆ ಹೇಗೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಗವಿಸಿದ್ದೇಶ್ವರ ಅಜ್ಜನನ್ನು ಪ್ರೀತಿಸಿದಷ್ಟೇ ನಿಮ್ಮನ್ನೂ ಪ್ರೀತಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಗವಿಶ್ರೀ ಗುಡುಗು ಎಂದು ಬರೆದಿದ್ದಾರೆ. ನಾನು ಗುಡುಗು ಹಾಕುವವನಲ್ಲ. ನನ್ನ ಮೇಲೆಯೇ ಗುಡುಗಿ ಹೋಗಿದ್ದಾರೆ. ಗುಡುಗಿದವ ಹುಡುಗಿ ಹೋಗುತ್ತಾನೆ ಎಂದು ಸುಮ್ಮನಾಗಿದ್ದೇನೆ. ನಾನು ಸಿಎಂ ಸ್ಥಾನಕ್ಕೆ ಗೌರವ ನೀಡುತ್ತೇನೆ. ನಾನು ಬಂದ್ ಮಾಡುವುದು, ಹೋರಾಟ ಮಾಡುವುದನ್ನು ನಾನು ಕಲಿಸಲ್ಲ. ನಾನು ಭಕ್ತರಿಗೆ ಬಡಿದಾಟ ಕಲಿಸುವುದಿಲ್ಲ. ನಿಮ್ಮ ಭಕ್ತಿಯನ್ನು ನಾನು ಬೇರೆ ವಿಚಾರಕ್ಕೆ ಬಳಕೆ ಮಾಡಿಕೊಳ್ಳುವಷ್ಟು ಅಜ್ಞಾನ ನನ್ನಲ್ಲಿ ಇಲ್ಲ ಎಂದರು.
ಜರ್ಮನ್ ತಂತ್ರಜ್ಞಾನ ಬಳಸಿ, ಕಾರ್ಖಾನೆ ನಿರ್ಮಾಣ ಮಾಡುತ್ತೇವೆ ಎಂದು ಬಲ್ದೋಟಾ ಸಂಸ್ಥೆ ಹೇಳಿಕೊಂಡಿದೆ. ಸರ್ಕಾರ ಮೊದಲು ಇರುವ ಕಾರ್ಖಾನೆಗೆ ಈ ಟೆಕ್ನಾಲಜಿ ಬಳಸಿ, ಮಾಲಿನ್ಯ ಕಡಿಮೆ ಮಾಡಲಿ. ಹುಟ್ಟುವ ಮಕ್ಕಳು ನಪುಂಸಕರಾಗುತ್ತಿದ್ದಾರೆ. ಕ್ಯಾನ್ಸರ್, ಅಸ್ತಮಾಕ್ಕೆ ತುತ್ತಾಗುತ್ತಿದ್ದಾರೆ. ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್ನಿಂದ ರೊಟ್ಟಿ ಡೌನ್ಲೋಡ್ ಮಾಡಲು ಆಗುವುದಿಲ್ಲ. ರೊಟ್ಟಿಗಾಗಿ ಭೂಮಿ ತಾಯಿ ಬೇಕು. ಕೊಪ್ಪಳಕ್ಕೆ ಒಂದು ವಿಶೇಷ ಕೈಗಾರಿಕೆ ನೀತಿ ಬೇಕಿದೆ. ಇಲ್ಲಿಗೆ ಬಂದ ಕಾರ್ಖಾನೆ ಎಷ್ಟು? ಆಗಿರುವ ಸಮಸ್ಯೆ ಎಷ್ಟು? ಎಂಬುದರ ಬಗ್ಗೆ ಅಧ್ಯಯನ ಆಗಬೇಕು. ಕಿರ್ಲೋಸ್ಕರ್ ಇಲ್ಲಿಗೆ ಬಂದು 20-30 ವರ್ಷ ಆಯ್ತು. ಇವರಿಗೆಲ್ಲ ಗಿಣಿಗೇರದಲ್ಲಿ ಒಂದು ಸಿಬಿಎಸ್ಸಿ ಶಾಲಾ, ಆಸ್ಪತ್ರೆ ಮಾಡುವಷ್ಟು ಬಡತನ ಇದೆಯಾ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?
ಕೊಪ್ಪಳ: ಬಲ್ಡೋಟಾ ಫ್ಯಾಕ್ಟರಿ (Baldota factory) ಸ್ಥಾಪನೆ ವಿರೋಧಿಸಿ ಕೊಪ್ಪಳದಲ್ಲಿ (Koppal) ಇಂದು ಸ್ವಯಂಪ್ರೇರಿತ ಬಂದ್ಗೆ ಪರಿಸರ ಸಂರಕ್ಷಣಾ ಸಮಿತಿ ಕರೆ ನೀಡಿದೆ. ಬಂದ್ ಹಿನ್ನೆಲೆ ಕೊಪ್ಪಳ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಕೊಪ್ಪಳ ಬಿಇಓ ಶಂಕರಯ್ಯ (Shankarayya) ರಜೆ ಘೋಷಿಸಿದ್ದಾರೆ.
ಕೊಪ್ಪಳ ನಗರ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬಲ್ಡೋಟಾ ಸ್ಟೀಲ್ ಫ್ಯಾಕ್ಟರಿಯು ಆರಂಭದಿಂದ ಕೊಪ್ಪಳ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರದಲ್ಲಿ ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತದೆ, ಈ ಹಿನ್ನೆಲೆ ನಗರಕ್ಕೆ ಹೊಂದಿಕೊಂಡು ಫ್ಯಾಕ್ಟರಿ ಬೇಡ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳಿದ್ದ 6 ಮಂದಿ ಸಾವು – ಇಂದು ಬೀದರ್ಗೆ ಮೃತದೇಹ ರವಾನೆ
ಕೊಪ್ಪಳ ಬಂದ್ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪ್ರತಿಭಟನಾಕಾರರು ಕೊಪ್ಪಳ ಬಸ್ ಡಿಪೋಗೆ ನುಗ್ಗಿ ವಾಗ್ವಾದ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ಬಂದ್ ಮಾಡುವಂತೆ ತಾಕೀತು ಮಾಡಿದ್ದು, ಡಿಪೋದಿಂದ ಬಸ್ ಹೊರಗೆ ಬಾರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿಗರಿಗೆ ತ್ಯಾಜ್ಯ, ಮೆಡಿಕಲ್ ವೇಸ್ಟ್ ಡಂಪಿಂಗ್ – ಕಂಟಕವಾಯ್ತಾ ನೆರೆಯ ಕೇರಳ..?