Tag: balcony

  • 5ನೇ ತರಗತಿಯ ಬಾಲಕಿಗೆ ಕತ್ತರಿಯಿಂದ ಚುಚ್ಚಿ, ಬಾಲ್ಕನಿಯಿಂದ ಎಸೆದ ಶಿಕ್ಷಕಿ

    5ನೇ ತರಗತಿಯ ಬಾಲಕಿಗೆ ಕತ್ತರಿಯಿಂದ ಚುಚ್ಚಿ, ಬಾಲ್ಕನಿಯಿಂದ ಎಸೆದ ಶಿಕ್ಷಕಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಘಾತಕಾರಿ ಘಟನೆಗಳು ನಡೆಯುವುದು ಮುಂದುವರಿಯುತ್ತಲೇ ಇವೆ. 5ನೇ ತರಗತಿಯ ಬಾಲಕಿಯೊಬ್ಬಳನ್ನು (Girl) ಆಕೆಯ ಶಿಕ್ಷಕಿಯೇ (Teacher) ಕತ್ತರಿಯಿಂದ (Scissors) ಚುಚ್ಚಿ, ಬಾಲ್ಕನಿಯಿಂದ (Balcony) ಎಸೆದಿರುವ ಕ್ರೂರ ಘಟನೆ ಶುಕ್ರವಾರ ನಡೆದಿದೆ.

    ದೆಹಲಿಯ ನಿಗಮ್ ಬಾಲಿಕಾ ವಿದ್ಯಾಲಯದಲ್ಲಿ ಇಂದು ಬೆಳಗ್ಗೆ 11:15ರ ವೇಳೆಗೆ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕಿ ವಂದನಾ ಮೇಲೆ ಆಕೆಯ ಶಿಕ್ಷಕಿ ದಾಳಿ ನಡೆಸಿ, ಬಾಲ್ಕನಿಯಿಂದ ಹೊರ ದಬ್ಬಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ ಆರೋಪಿ ಶಿಕ್ಷಕಿ ಗೀತಾ ದೇಶ್ವಾಲ್ ಬಾಲಕಿ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಶಾಲೆಯ ಮತ್ತೊಬ್ಬ ಶಿಕ್ಷಕಿ ಮಧ್ಯಪ್ರವೇಶಿಸಿ ಬಾಲಕಿಯನ್ನು ಹೊಡೆಯುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಬಾಲಕಿ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಇದನ್ನೂ ಓದಿ: ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ತಕ್ಷಣವೇ ಸ್ಥಳೀಯರು ಒಟ್ಟಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಬಾರಾ ಹಿಂದೂ ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೊಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನಾಧರಿಸಿ ಶಿಕ್ಷಕಿ ವಿರುದ್ಧ ಪೊಲೀಸರು ಭಾರತೀಯ ದಂಡಸಂಹಿತೆ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ – ಸಿಎಂ ನಿತೀಶ್ ಕುಮಾರ್

    Live Tv
    [brid partner=56869869 player=32851 video=960834 autoplay=true]

  • ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಅಬುದಾಬಿ: ದುಬೈನ ಬಾಲ್ಕನಿಯೊಂದರ ಮೇಲೆ ಬೆತ್ತಲೆಯಾಗಿ ನಿಂತು ಪೋಸ್ ನೀಡಿದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

    ವೈರಲ್ ಆಗಿರುವ ಫೋಟೋ ಹಾಗೂ ವೀಡಿಯೋದಲ್ಲಿ, ಶನಿವಾರ 12ಕ್ಕೂ ಹೆಚ್ಚು ಮಹಿಳೆಯರು ಮರೀನಾ ಸಮೀದಲ್ಲಿರುವ ಬಾಲ್ಕನಿಯಲ್ಲಿ ಹಾಡಹಗಲಲ್ಲೇ ಬೆತ್ತಲೆಯಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಮುಸ್ಲಿಂಮರೆ ಹೆಚ್ಚಾಗಿರುವ ಯುಎಇಯಲ್ಲಿನ ಈ ಘಟನೆ ಮುಸ್ಲಿಂಮರ ಸಂಪ್ರದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವುದು, ಆಘಾತಕಾರಿ ಸಂಗಾತಿಯಾಗಿರುವುದರಿಂದ ಇದೀಗ ಅಧಿಕಾರಿಗಳನ್ನು ಕೆರಳಿಸಿದೆ. ವೀಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತಯೇ ಇದೀಗ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.

    ಈ ಘಟನೆ ಇದೀಗ ವಿಶ್ವದ್ಯಾಂತ ಭಾರೀ ಸದ್ದು ಮಾಡುತ್ತಿದ್ದು, ಸದ್ಯ ದುಬೈ ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

  • ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ನವದೆಹಲಿ: ಅಂಬೆಗಾಲಿಡುವ ಮಗು ಬಾಲ್ಕನಿಯಲ್ಲಿದ್ದ ಕಂಬದ ಮೇಲೆ ಕೈ ಇಟ್ಟು ಇಣುಕಿ ನೋಡುತ್ತಿದ್ದಾಗ ಬೆಕ್ಕು ತಡೆದು ಮಗುವಿನ ಪ್ರಾಣ ಉಳಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ. ಈ ವೀಡಿಯೋ ತುಣಕನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಅಂಬೆಗಾಲಿಡುತ್ತಿರುವ ಮಗುವೊಂದು ಬಾಲ್ಕಾನಿಯಲ್ಲಿ ನಿಂತು ಹೊರಗೆ ನೋಡಲು ಅಲ್ಲಿದ್ದ ಕಂಬವನ್ನು ಹಿಡಿದು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಅಲ್ಲಿಯೇ ಕುಳಿತಿದ್ದ ಬೆಕ್ಕು ಮಗುವನ್ನು ಅಪಾಯದಿಂದ ರಕ್ಷಿಸುವ ಸಲುವಾಗಿ ರೇಲಿಂಗ್ ಮೇಲೆ ಇಟ್ಟಿದ್ದ ಆತನ ಕೈಗಳನ್ನು ಬಿಡಿಸಿದೆ. ಅಲ್ಲದೆ ಬಾಲ್ಕನಿ ಹಳಿಗಳ ಗೋಡೆ ಮೇಲೆ ನಡೆಯುವ ಮೂಲಕ ಬೆಕ್ಕು ತನ್ನ ಪ್ರಾಣವನ್ನು ಲೆಕ್ಕಿಸದೇ, ಮಗು ಕೆಳಗೆ ಇಣುಕಿ ನೋಡುವುದನ್ನು ತಡೆದಿದೆ.

    https://twitter.com/SudhaRamenIFS/status/1353192960972759042

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್ ಗಳು ಹರಿದು ಬಂದಿದ್ದು, ಕೆಲವರು ವೀಡಿಯೋವನ್ನು ಅದ್ಭುತ ಎಂದು ಕಮೆಂಟ್  ಮಾಡಿದರೆ ಇನ್ನೂ ಕೆಲವರು ಮಗುವಿನ ಪೋಷಕರ ಬೇಜವಾಬ್ದಾರಿ ಕುರಿತಂತೆ ಟೀಕಿಸಿದ್ದಾರೆ.

  • ಲಾಕ್‍ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆ ವಿಚಾರವನ್ನ ರಿವೀಲ್ ಮಾಡಿದ ರಾಧಿಕಾ

    ಲಾಕ್‍ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆ ವಿಚಾರವನ್ನ ರಿವೀಲ್ ಮಾಡಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಲಾಕ್‍ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಬರುತ್ತಿಲ್ಲ. ಇನ್ನೂ ಸ್ಟಾರ್ ನಟ-ನಟಿಯರು ಕೂಡ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಜನರು ಕೂಡ ಮನೆಯಲ್ಲಿದ್ದು ಬೇಸರವಾದಾಗ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಿಗೆ ಬಂದು ಕುಟುಂಬದವರಿಂದ ಕಾಲಕಳೆಯುತ್ತಿದ್ದಾರೆ. ಇದನ್ನು ಗಮನಿಸಿದ ರಾಧಿಕಾ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗೆ “ಈ ಲಾಕ್‍ಡೌನ್ ಸಮಯದಲ್ಲಿ ನಾನು ಗಮನಿಸಿದ ಒಂದು ಒಳ್ಳೆಯ ವಿಷಯವೆಂದರೆ, ಅನೇಕ ಜನರು ತಮ್ಮ ಮನೆಯಿಂದ ಹೊರಬಂದು ತಮ್ಮ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಒಂದು ವೇಳೆ ಈ ಲಾಕ್‍ಡೌನ್ ಇಲ್ಲದಿದ್ದರೆ ಟೆರೇಸ್ ಮತ್ತು ಬಾಲ್ಕನಿಗಳನ್ನು ಜನರು ನಿರ್ಲಕ್ಷಿಸುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋ ಕಳೆದ ವರ್ಷ ರಾಧಿಕಾ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ಕ್ಲಿಕ್ಕಿಸಿದ್ದಾಗಿದೆ. ಇತ್ತೀಚೆಗಷ್ಟೆ ರಾಧಿಕಾ ಅವರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    https://www.instagram.com/p/B_VEZC4gQka/?igshid=1tjsmqvy6fkso

    ರಾಧಿಕಾ ತಮ್ಮ ಅಪ್ಪ-ಅಪ್ಪ ಐರಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದರು. ಅದಕ್ಕೆ “ನಾನು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನು ನೋಡಿ. ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದಿದ್ದರು.

    ಅಲ್ಲದೇ “ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೇ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಅಪ್ಪಾ, ಆದರೆ ಐರಾ ಮತ್ತು ಜೂನಿಯರ್ ಯಶ್‍ಗೆ ಮಿಮಿ ಮತ್ತು ಅಜ್ಜು ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮಾನನ್ನು ಮಿಮಿ ಎಂದು ಕರೆಯುತ್ತಾಳೆ. ಯಾಕೆಂದರೆ ನಾನು ನನ್ನ ಅಮ್ಮನನ್ನು ಮಮ್ಮಿ ಎಂದು ಕರೆಯುತ್ತೇನೆ. ಅದನ್ನು ಕೇಳಿಸಿಕೊಂಡು ಐರಾ ಮಿಮಿ ಎಂದು ಕರೆಯುತ್ತಾಳೆ” ಎಂದು ಬರೆದುಕೊಂಡಿದ್ದರು.

  • ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    – ಸೆಕೆ ಎಂದು ಬಾಲ್ಕನಿ ಬಾಗಿಲು ತೆರೆದಿದ್ದೇ ತಪ್ಪಾಯ್ತು
    – ಲಾಕ್‍ಡೌನ್‍ನಿಂದ ರಾಜಸ್ಥಾನದಲ್ಲಿ ಪತಿ ಲಾಕ್

    ಭೋಪಾಲ್: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್‍ ಆಗಿದೆ. ಈ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಫ್ಲಾಟ್‍ಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಶಹಪುರ ಪ್ರದೇಶದಲ್ಲಿ ನಡೆದಿದೆ.

    53 ವರ್ಷದ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ದೃಷ್ಟಿ ವಿಶೇಷ ಚೇತನ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಫ್ಲಾಟ್‍ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

    ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಪತಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

    ಶುಕ್ರವಾರ ಮುಂಜಾನೆ ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

    ನಂತರ ಆರೋಪಿ ಫ್ಲಾಟ್ ಬಾಗಿಲು ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಫೋನ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆ ಕಿರುಚಿಕೊಂಡಿದ್ದಾರೆ. ತಕ್ಷಣ ನೆರೆಯವರು ಬಂದು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಲಕ್ನೋ: 4 ವರ್ಷದ ಬಾಲಕಿಯೊಬ್ಬಳು 9ನೇ ಮಹಡಿಯಲ್ಲಿದ್ದ ತನ್ನ ಮನೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರೋ ದಾರುಣ ಘಟನೆ ಉತ್ತರಪ್ರದೇಶದ ಇಂದೆರಾಪುರಂನಲ್ಲಿ ನಡೆದಿದೆ.

    ಇಲ್ಲಿನ ಸನ್‍ರೈಸ್ ಸೊಸೈಟಿಯಲ್ಲಿ 9ನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಿಂದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಸೊಸೈಟಿಯ ಇತರೆ ನಿವಾಸಿಗಳು ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಳು.

    ಬಾಲ್ಕನಿಯಲ್ಲಿ ಇಡಲಾಗಿದ್ದ ಸ್ಟೂಲ್ ಈ ದುರ್ಘನೆಗೆ ಕಾರಣವೆಂದು ಹೇಳಲಾಗಿದೆ. ಸೊಸೈಟಿಯ ಫ್ಲಾಟ್ ನಂಬರ್ 1001ರಲ್ಲಿ ಮನೀಷ್ ಸಚ್‍ದೇವಾ ಎಂಬವರು ಕುಟುಂಬದೊಂದಿಗೆ ವಾಸವಿದ್ದಾರೆ. ಸೋಮವಾರ ಸಂಜೆ ಮನೀಷ್ ಪತ್ನಿ ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳಲು ಹೊರಗಡೆ ಹೋಗಿದ್ದರು. ಈ ವೇಳೆ ಬಾಲಕಿ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಳು. ಬಾಲಕಿ ಸ್ಟೂಲ್ ಮೇಲೆ ಹತ್ತಿ ಕೆಳಗೆ ಇಣುಕಿ ನೋಡಿದ್ದಾಳೆ. ಹೀಗೆ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ.

    ಬಾಲಕಿ ಸಾವಿಗೆ ಪೋಷಕರ ಬೇಜವಾಬ್ದಾರಿತನವೇ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ. ಬಾಲಕಿ ಸಾವಿನಿಂದ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇಲ್ಲ.

    ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳು ಹಾಗೂ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‍ಗಳನ್ನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

    ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

    ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು ಅಪಾಯದಲ್ಲಿದ್ರೆ ಎಲ್ಲಾ ದೇವರಿಗೂ ಅಲ್ಲೇ ಹರಕೆ ಮಾಡಿಕೊಳ್ತಾರೆ. ಹೀಗೆ ಮಗುವೊಂದರ ತಲೆ ಬಾಲ್ಕನಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಮಗುವನ್ನ ಕಾಪಾಡಲು ಕಷ್ಟಪಡುತ್ತಿದ್ರೆ ಮಗುವಿನ ತಂದೆ ಏನು ಮಾಡಿದ ಗೊತ್ತಾ?

    ಮಗುವಿನ ತಂದೆ ಗಾಬರಿಯಿಂದ ಪರದಾಡ್ತಾ ಅದರ ತಲೆಯನ್ನ ಹೇಗಾದ್ರೂ ಕಂಬಿಗಳ ಮಧ್ಯದಿಂದ ಬಿಡಿಸಿದ್ರೆ ಸಾಕು ಅಂತ ಪ್ರಾರ್ಥಿಸುತ್ತಿದ್ದ ಅಂದ್ಕೊಂಡ್ರಾ? ಇಲ್ಲ. ಆತ ಮಗುವಿನ ಹಿಂದೆ ಕುಳಿತು ವಿಡಿಯೋ ಮಾಡ್ತಿದ್ದ.

    ಚೀನಾದ ಫುಜಿಯಾನ ಪ್ರಾಂತ್ಯದಲ್ಲಿ ಕಳೆದ ವಾರ ಈ ಘಟನೆ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮಗುವಿಗೆ ಯಾವುದೇ ರೀತಿ ಗಾಯವಾಗಬಾರದೆಂದು ಅದನ್ನು ರಕ್ಷಿಸಲು ಶ್ರಮಿಸುತ್ತಿದ್ದರು. ಆದ್ರೆ ಮಗುವಿನ ತಂದೆ ಮಾತ್ರ ಒಂದು ಕೈಯಲ್ಲಿ ಮಗುವನ್ನ ಹಿಡಿದು ಮತ್ತೊಂದು ಕೈಯಲ್ಲಿ ಸೆಲ್‍ಫೋನ್ ಹಿಡಿದುಕೊಂಡು ಮಗುವಿನ ಕಡೆ ತಲೆಯೇ ಕೆಡಿಸಿಕೊಳ್ಳದೇ ವಿಡಿಯೋ ಮಾಡ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ನೆಟಿಜನ್‍ಗಳ ಆಕ್ರೋಶಕ್ಕೆ ಕಾರಣವಾಗಿದೆ.

    ತಂದೆಯ ಬೇಜವಾಬ್ದಾರಿತನವನ್ನ ಜನರು ಖಂಡಿಸಿದ್ದರೆ. ಮಗುವಿನ ತಲೆಯನ್ನ ಕಂಬಿಗಳಿಂದ ಹೊರತೆಗೆದ ನಂತರವಷ್ಟೇ ಆ ವ್ಯಕ್ತಿ ವಿಡಿಯೋ ಮಾಡೋದನ್ನ ನಿಲ್ಲಿಸಿದ ಎಂದು ವರದಿಯಾಗಿದೆ.