Tag: Balayya

  • ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?

    ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?

    ಬಾರಿ ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಯಾರೆಲ್ಲಾ ಸೆಲೆಬ್ರಿಟಿಗಳು ಗೆದ್ದರು. ಗದ್ದುಗೆಯ ಗುದ್ದಾಟದಲ್ಲಿ ಸೋತವರ್ಯಾರು, ಗೆದ್ದವರು ಯಾರು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಇದನ್ನೂ ಓದಿ:ಸುದೀಪ್‌ಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್

    ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕ್ವೀನ್ ಕಂಗನಾ (Kangana Ranaut) ಗೆದ್ದಿದ್ದಾರೆ. ಹಿಮಾಚಲ ಪ್ರದೇಶ ಮಂಡಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 70000 ಸಾವಿರಕ್ಕೂ ಅಧಿಕ ಮತಗಳಿಂದ ನಟಿ ಗೆದ್ದಿದ್ದಾರೆ. ತಮ್ಮ ಮೊದಲ ಗೆಲುವನ್ನು ನರೇಂದ್ರ ಮೋದಿಗೆ ಅರ್ಪಿಸಿದ್ದಾರೆ.

    ಮೇ 13ರಂದು ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1,32,725 ಮತಗಳನ್ನು ಪಡೆಯುವ ಮೂಲಕ ಪವನ್ ಕಲ್ಯಾಣ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಗನ್ ಮೋಹನ್ ರೆಡ್ಡಿಗೆ ಪವನ್ ಠಕ್ಕರ್ ಕೊಟ್ಟಿದ್ದಾರೆ.

    ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ (Hema Malini) ಮಥುರಾದಲ್ಲಿ 3ನೇ ಬಾರಿ ಗೆಲುವಿನ ಭಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುಕೇಶ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ನಟಿ ಗೆದ್ದಿದ್ದಾರೆ.

    ಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ರಾಮಾಯಣ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಮೊದಲ ಪ್ರಯತ್ನದಲ್ಲಿ ನಟ ಗೆಲುವು ಸಾಧಿಸಿದ್ದಾರೆ. ಬಾಲಿವುಡ್ ಹಿರಿಯ ನಟ ಶತ್ರುಜ್ಞ ಸಿನ್ಹಾ ಟಿಎಂಸಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ನಿಂತು ಗೆದ್ದಿದ್ದಾರೆ. ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಿಂದ ಭಾರೀ ಮತದಿಂದ ಗೆಲುವು ಸಾಧಿಸಿದ್ದಾರೆ.

    ತೆಲುಗು ನಟ ನಂದಮೂರಿ ಬಾಲಕೃಷ್ಣ ಟಿಡಿಪಿ ಅಭ್ಯರ್ಥಿಯಾಗಿ ಹಿಂದೂಪುರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

    ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿ.ವೈ ರಾಘವೇಂದ್ರಗೆ ಪೈಪೋಟಿ ಕೊಡುವುದರಲ್ಲಿ ನಿರ್ಮಾಪಕಿ ಗೀತಾ ಸೋತಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಸೋಲು ಕಂಡಿದ್ದಾರೆ.

    ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಟಿ ರೋಜಾ ಹೀನಾಯವಾಗಿ ಸೋತಿದ್ದಾರೆ. ತಮಿಳುನಾಡಿನ ವಿರುಧುನಗರ್ ಕ್ಷೇತ್ರದಿಂದ ನಟಿ ರಾಧಿಕಾ ಶರತ್‌ಕುಮಾರ್ ಬಿಜೆಪಿ ಸ್ಪರ್ಧಿಯಾಗಿ ಕಣಕ್ಕೆ ನಿಂತಿದ್ದರು. ನಟಿ ಹೀನಾಯವಾಗಿ ಸೋಲುಂಡಿದ್ದಾರೆ.

  • ಬಿಸಿ ನೀರಿಗೆ ಮದ್ಯ ಮಿಕ್ಸ್‌ ಮಾಡಿ ಮಾವ ಕುಡಿಯುತ್ತಾರೆ- ಬಾಲಯ್ಯ ಅಳಿಯನ ಮಾತು ವೈರಲ್

    ಬಿಸಿ ನೀರಿಗೆ ಮದ್ಯ ಮಿಕ್ಸ್‌ ಮಾಡಿ ಮಾವ ಕುಡಿಯುತ್ತಾರೆ- ಬಾಲಯ್ಯ ಅಳಿಯನ ಮಾತು ವೈರಲ್

    ತ್ತೀಚೆಗೆ ನಂದಮೂರಿ ಬಾಲಕೃಷ್ಣ (Nandamuri Balakrishna) ಭಾರೀ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನಟಿ ಅಂಜಲಿರನ್ನು ತಳ್ಳಿದಕ್ಕೆ ಭಾರೀ ಚರ್ಚೆಯಾಗಿತ್ತು. ವಿವಾದಕ್ಕೆ ನಟಿ ಸ್ಪಷ್ಟನೆ ನೀಡಿ ಬಾಯಿ ಮುಚ್ಚಿಸಿದ್ದರು. ಆದರೆ ಈಗ ಬಾಲಯ್ಯ ಮದ್ಯ ವ್ಯಸನದ ಬಗ್ಗೆ ಅಳಿಯ ಶ್ರೀಭರತ್ (Shri Bharath) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

    ಇತ್ತೀಚೆಗೆ ವಿಶ್ವಕ್ ಸೇನ್, ನೇಹಾ ಶೆಟ್ಟಿ ನಟನೆಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಯ್ಯ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ, ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ಬಾಲಯ್ಯ ತಳ್ಳಿದ್ದರು. ನಟನ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಸ್ವತಃ ಅಂಜಲಿ ಅವರೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನೂ ಓದಿ:40 ಜೀವಂತ ಗುಂಡುಗಳ ಸಮೇತ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟ ಕರುಣಾಸ್

    ಕಾರ್ಯಕ್ರಮದಲ್ಲಿ ಬಾಲಯ್ಯ ಮದ್ಯ ಸೇವಿಸಿದ್ದಕ್ಕೆ ಹೀಗೆ ವರ್ತಿಸಿದ್ದರು. ಎಂದೆಲ್ಲಾ ಆರೋಪಗಳು ವ್ಯಕ್ತವಾಗಿತ್ತು. ಅಂಜಲಿ ಜೊತೆಗಿನ ನಟನ ವರ್ತನೆಯನ್ನು ಖಂಡಿಸಿದ ಬೆನ್ನಲ್ಲೇ ಬಾಲಯ್ಯ ಕಿರಿಯ ಅಳಿಯನ ಶ್ರೀ ಭರತ್ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. ನಮ್ಮ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್‌ ಅನ್ನು ಕುಡಿಯುತ್ತಾರೆ. ಇದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್ ಮೌಲ್ಯ ಹೆಚ್ಚಾಯಿತು ಎಂದು ನಕ್ಕಿದ್ದಾರೆ. ಬಿಸಿನೀರಿನಲ್ಲಿ ಬೆರೆಸಿ ಕುಡಿಯುತ್ತಾರಂತೆ? ಹೌದಾ ಎಂದು ನಿರೂಪಕ ಕೇಳಿದಾಗ, ಹೌದು ನಿಜ ಎಂದು ಭರತ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಾವನ ಬಳಿ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಸದಾ ಬಿಸಿ ನೀರು ಮತ್ತು ಮದ್ಯದ ಬಾಟಲ್ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೇರಿಕಾಗೆ ಹೋದರೂ ತೆಗೆದುಕೊಂಡು ಹೋಗ್ತಾರೆ ಎಂದು ವರ್ಷಗಳ ಹಿಂದೆ ನೀಡಿರುವ ಈಗ ವೈರಲ್ ಆಗಿದೆ. ಮತ್ತೆ ಅಂಜಲಿ ವಿಚಾರಕ್ಕೆ ಕನೆಕ್ಟ್ ಮಾಡಿ ಬಾಲಯ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ.

  • ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ತೆಲುಗಿನ ಖ್ಯಾತ ನಟ ಬಾಲಯ್ಯ (Balayya) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ.  ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲುವನ್ನು ಅರಸಿ ಹೊರಟಿದ್ದಾರೆ.

    ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ (Property) ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.

     

    ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.

  • Exclusive: ತೆಲುಗಿನತ್ತ ಕನ್ನಡದ ನಟ- ಬಾಲಯ್ಯಗೆ ರಿಷಿ ವಿಲನ್

    Exclusive: ತೆಲುಗಿನತ್ತ ಕನ್ನಡದ ನಟ- ಬಾಲಯ್ಯಗೆ ರಿಷಿ ವಿಲನ್

    ‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಖ್ಯಾತಿಯ ರಿಷಿ (Rishi) ಇದೀಗ ತೆಲುಗಿನಲ್ಲಿ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಸ್ಟಾರ್ ನಟ ಬಾಲಯ್ಯ (Balayya) ಅವರ 109ನೇ ಸಿನಿಮಾದಲ್ಲಿ ಕನ್ನಡದ ಪ್ರತಿಭಾನ್ವಿತ ನಟ ರಿಷಿ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗೆದ್ದಿದ್ದ ರಿಷಿ, ಬಾಲಯ್ಯ ಮುಂದೆ ವಿಲನ್ ಆಗಿ ಅಬ್ಬರಿಸಲಿದ್ದಾರೆ.

    ನಟ ರಿಷಿ ಅವರು ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಬಾಲಕೃಷ್ಣ ಅವರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದಲ್ಲಿ ಬಾಲಯ್ಯ ಅವರ 109ನೇ ಸಿನಿಮಾ ಮೂಡಿ ಬರುತ್ತಿದೆ. ಇದನ್ನೂ ಓದಿ:ಗುಡ್ ನ್ಯೂಸ್ ಕೊಟ್ಟ ‘ಉಲ್ಲಾಸ ಉತ್ಸಾಹ’ ನಟಿ ಯಾಮಿ ಗೌತಮ್

    ಬಾಲಯ್ಯ ಮುಂದೆ ರಿಷಿ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲ, ‘ಅನಿಮಲ್’ (Animal) ಚಿತ್ರದ ಖಡಕ್ ವಿಲನ್ ಬಾಬಿ ಡಿಯೋಲ್ (Bobby Deol) ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್- ರಿಷಿ ಇಬ್ಬರೂ ಈ ಚಿತ್ರದಲ್ಲಿ ಖಳನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ರಿಷಿಗೆ ಬಾಬಿ ಡಿಯೋಲ್ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಸದ್ಯ ಈ ಚಿತ್ರದ ಬಗ್ಗೆ ರಿಷಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಡೈರೆಕ್ಟರ್ ಬಾಬಿ ಕೊಲ್ಲಿ ಟೀಮ್, ಸಂಪರ್ಕಿಸಿ ಕಥೆ ಹೇಳಿದಾಗ ತಮ್ಮ ಪಾತ್ರ ಮತ್ತು ಚಿತ್ರದ ಎಳೆ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ರಿಷಿ. ಸಿನಿಮಾ ಕಥೆ ಕೂಡ ವಿಭಿನ್ನವಾಗಿದ್ದು, ಒಂದು ವಾರಗಳ ಕಾಲ ರಿಷಿ ಪಾತ್ರದ ಚಿತ್ರೀಕರಣ ಕೂಡ ಮಾಡಲಾಗಿದೆ. ಮತ್ತೆ ಮುಂದಿನ ವಾರ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ನಡೆಯಲಿದೆ ಎಂದು ರಿಷಿ ತಿಳಿಸಿದ್ದಾರೆ. ಬಾಲಯ್ಯ ಮತ್ತು ಬಾಬಿ ಡಿಯೋಲ್ ಜೊತೆ ನಟಿಸುತ್ತಿರೋದಕ್ಕೆ ರಿಷಿ ಸಂತಸ ವ್ಯಕ್ತಪಡಿಸಿದ್ದಾರೆ.

    ಕನ್ನಡದಲ್ಲಿ ‘ರಾಮನ ಅವತಾರ’, ‘ರುದ್ರ ಗರುಡ ಪುರಾಣ’ ಸೇರಿದಂತೆ ಹಲವು ಸಿನಿಮಾಗಳು ರಿಷಿ ಕೈಯಲ್ಲಿದೆ. ತೆಲುಗಿನ ಮತ್ತೊಂದು ಸಿನಿಮಾದಲ್ಲಿ ಲೀಡ್ ಹೀರೋ ಆಗಿ ರಿಷಿ ನಟಿಸುತ್ತಿದ್ದಾರೆ. ಗೋಪಿ.ಜಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಒಟ್ನಲ್ಲಿ ಕನ್ನಡ ಮತ್ತು ತೆಲುಗು ಎರಡರಲ್ಲೂ ರಿಷಿ ಆ್ಯಕ್ಟೀವ್ ಆಗಿದ್ದಾರೆ.

  • ಬಾಲಯ್ಯ ಮಗನ ಜೊತೆ ಶ್ರೀಲೀಲಾ ಮದುವೆ? ನಟಿ ಸ್ಪಷ್ಟನೆ

    ಬಾಲಯ್ಯ ಮಗನ ಜೊತೆ ಶ್ರೀಲೀಲಾ ಮದುವೆ? ನಟಿ ಸ್ಪಷ್ಟನೆ

    ಶ್ರೀಲೀಲಾ (Sreeleela) ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಹಾಗೆ ಅನ್ನುವುದಕ್ಕಿಂತ ಸುಮ್ಮ ಸುಮ್ಮನೆ ಅವರನ್ನು ಹೀಗೆ ಸಿಲುಕಿಸಿದ್ದಾರೆ. ಈಗ ತಾನೇ ಟಾಲಿವುಡ್ (Tollywood) ಅಂಗಳದಲ್ಲಿ ನೆಲೆ ಊರುತ್ತಿರುವ ಹುಡುಗಿಯನ್ನು ಮದುವೆ ಮಾಡಿಸಲು ಹೊರಟಿದ್ದಾರೆ ಕೆಲವರು. ಇದೇನಿದು? ಯಾರ ಜೊತೆ ಶ್ರೀಲೀಲಾ ಹೆಸರು ಥಳಕು ಹಾಕಿಕೊಂಡಿತು? ಇಲ್ಲಿದೆ ಮಾಹಿತಿ.

    ಕನ್ನಡತಿ ಶ್ರೀಲೀಲಾ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಇನ್ಯಾರದ್ದೋ ತಪ್ಪಿಗೆ ಹೀಗೆ ಅವಮಾನ ಅನುಭವಿಸುತ್ತಿದ್ದಾರೆ. ಈಗ ತಾನೇ ಟಾಲಿವುಡ್ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿಯೇ ಇವರ ಹೆಸರು ಅದೊಬ್ಬ ಸೂಪರ್‌ಸ್ಟಾರ್ ನಟನ ಮಗನ ಜೊತೆ ಸೇರಿಕೊಂಡಿದೆ. ಅಷ್ಟೇ ಅಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ವೈರಲ್ ಆಗುತ್ತಿದೆ. ಇದನ್ನೂ ಓದಿ:ಬಳಕುವ ಬಳ್ಳಿಯಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ

    ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ. ಒಂದಲ್ಲ ಎರಡಲ್ಲ ಭರ್ತಿ ಹನ್ನೊಂದು ಸಿನಿಮಾ ಇವರ ಕೈಯಲ್ಲಿವೆ. ಸ್ಟಾರ್ ನಟರಿಂದ ಹಿಡಿದು ಬಡ್ಡಿಂಗ್ ಆರ್ಟಿಸ್ಟ್ ಅಂತಾರಲ್ಲ. ಅವರ ಜೊತೆ ನಟಿಸುತ್ತಿದ್ದಾರೆ. ಇದೀಗ ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ‘ಭಗವಂತ ಕೇಸರಿ’ (Bhagavantha Kesari) ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸುತ್ತಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಮದುವೆ (Wedding) ಆಗಲಿದ್ದಾರಂತೆ ಕನ್ನಡದ ನಟಿ ಶ್ರೀಲೀಲಾ.

    ಮೋಕ್ಷಗಣನ ಜೊತೆ ಶ್ರೀಲೀಲಾ (Sreeleela) ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಜೊತೆಗೆ ಓಡಾಡಿದ್ದೂ ಸುಳ್ಳಲ್ಲ. ಅಷ್ಟಕ್ಕೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಅಲ್ಲಿಯ ಕೆಲವು ಮೀಡಿಯಾ ವರದಿ ಮಾಡಿವೆ. ಇದನ್ನು ಕೇಳಿ ಶ್ರೀಲೀಲಾ ಫುಲ್ ಅಪ್‌ಸೆಟ್ ಆಗಿದ್ದಾರೆ. ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ. ಸಿನಿಮಾ ಅಂದ ಮೇಲೆ ಈ ರೀತಿ ಗಾಳಿ ಸುದ್ದಿ ಸಾಮಾನ್ಯ. ಇದನ್ನು ತಲೆಗೆ ಹಚ್ಚಿಕೊಳ್ಳದೇ ಕೆಲಸ ಮಾಡಬೇಕಷ್ಟೇ. ಕನ್ನಡದ ಹುಡುಗಿ ಆದಷ್ಟು ಬೇಗ ಇದರಿಂದ ಹೊರಗೆ ಬರಲಿ ಎಂಬುದೇ ಅಭಿಮಾನಿಗಳ ಆಶಯ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಯ್ಯ ಎದುರು ಶ್ರೀಲೀಲಾ ಭಾವುಕರಾಗಿದ್ದೇಕೆ?

    ಬಾಲಯ್ಯ ಎದುರು ಶ್ರೀಲೀಲಾ ಭಾವುಕರಾಗಿದ್ದೇಕೆ?

    ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಹೈಲೆಟ್ ಆಗಿದ್ದಾರೆ. ಸದ್ಯ ಬಾಲಯ್ಯ (Balayya) ಜೊತೆಗೆ ನಟಿಸಿದ ‘ಭಗವಂತ ಕೇಸರಿ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಶ್ರೀಲೀಲಾ ಭಾವುಕರಾಗಿದ್ದಾರೆ.

    ‘ಭಗವಂತ ಕೇಸರಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಶ್ರೀಲೀಲಾ, ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಅನಿಲ್ ರವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಆಗುವ ಪಾತ್ರ ಕೊಟ್ಟಿದ್ದಾರೆ. ಈ ಪಾತ್ರ ನೀಡಿದಕ್ಕೆ ತುಂಬಾ ಧನ್ಯವಾದಗಳು. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಆದರೆ ಈ ಚಿತ್ರದ ಪಾತ್ರ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ. ದಿನಗಳು ಕಳೆದಂತೆ ನಾನು ಆ ಪಾತ್ರವೇ ಆಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದು ಶ್ರೀಲೀಲಾ ಮಾತನಾಡಿದ್ದಾರೆ.

    ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ಲಿ ಇರುತ್ತಿದ್ದೆ. ತಕ್ಷಣವೇ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ : ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ

    ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ದೃಶ್ಯಗಳಿವೆ. ನಿಜ ಜೀವನದಲ್ಲಿ ನಡೆಯುತ್ತಿರುವ ಘಟನೆ ಹಾಗೂ ತಂದೆಯ ಅನುಪಸ್ಥಿತಿಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ನಟಿ ಭಾವುಕರಾಗಿದ್ದಾರೆ.

    ಬಾಲಯ್ಯ- ಕಾಜಲ್ (Kajal) ಜೋಡಿಯಾಗಿ ನಟಿಸಿದ್ದರೆ, ಶ್ರೀಲೀಲಾ ಅವರ ಮಗಳಾಗಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೌಡಿಯಂತೆ ವರ್ತಿಸಿದ್ರಾ ಬಾಲಯ್ಯ? ನಟನ ವಿರುದ್ಧ ಮಾಧವಿ ಲತಾ ಗರಂ

    ರೌಡಿಯಂತೆ ವರ್ತಿಸಿದ್ರಾ ಬಾಲಯ್ಯ? ನಟನ ವಿರುದ್ಧ ಮಾಧವಿ ಲತಾ ಗರಂ

    ತೆಲುಗು ನಟ ಬಾಲಯ್ಯ(Balayya) ಎಕ್ಸ್‌ಪ್ರೆಸ್ಸಿವ್ ಮತ್ತು ಅಗ್ರೆಸ್ಸಿವ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಆದರೆ ಮೊನ್ನೆ ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಆಂಧ್ರಪ್ರದೇಶದ ಹಿಂದುಪುರಂ ಶಾಸಕ- ನಟ ಅಗ್ರೆಸ್ಸಿವ್ ಆಗಿ ವರ್ತಿಸಿ ಓರ್ವ ನಟಿಯಿಂದ ಟೀಕೆಗೆ ಒಳಗಾಗಿದ್ದಾರೆ. ಆ ನಟಿ ಮಾಧವಿ, ಬಾಲಯ್ಯ ವಿಧಾನಸಭೆಯಲ್ಲಿ ರೌಡಿಯಂತೆ ವರ್ತಿಸಿದ್ದಾರೆ ಎಂದಿದ್ದಾರೆ. ನಟಿಯ ಹೇಳಿಕೆ ಬಾಲಯ್ಯ ಫ್ಯಾನ್ಸ್‌ ಕಿಡಿಕಾರಿದ್ದಾರೆ.

    60ರಲ್ಲೂ ಸೂಪರ್ ಸ್ಟಾರ್ ನಂದಿಮೂರಿ ಬಾಲಕೃಷ್ಣ. ನಟರಾಗಿಯೂ ಜನಪ್ರತಿನಿಧಿಯಾಗಿಯೂ ಗುರುತಿಸಿಕೊಂಡಿರೋ ಬಾಲಯ್ಯ ಆಂಧ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಲೀಡರ್. ನಡೆ ನುಡಿ ವಿಚಾರದಲ್ಲಿ ಬಾಲಯ್ಯ ಮೇಲೆ ಟೀಕೆ ಟಿಪ್ಪಣಿ ಇದ್ದಿದ್ದೇ, ಆದರೆ ಬಾಲಯ್ಯ ಎಲ್ಲದಕ್ಕೂ ಡೋಂಟ್‌ಕೇರ್ ಗುಣದವರು. ಆದ್ರೀಗ ಬಾಲಯ್ಯ ವಿದಾನಸಭೆಯಲ್ಲಿ ಗುಡುಗಿರುವ ವಿಚಾರ ಅವರನ್ನ ರೌಡಿಗೆ ಹೋಲಿಸುವಂತೆ ಆಗಿದೆ. ನಟಿ ಮಾಧವಿ ಲತಾ (Madhavi Latha), ಬಾಲಯ್ಯರನ್ನ ರೌಡಿ ಎಂದಿದ್ದಾರೆ.

    ನಟಿಯಾಗಿ ಬಿಜೆಪಿ (Bjp) ಪಕ್ಷದಲ್ಲೂ ಗುರುತಿಸಿಕೊಂಡಿರೋ ಮಾಧವಿ ಲತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಲಯ್ಯರ ಅಗ್ರೆಸ್ಸಿವ್ ಭಾಷಣದ ಝಲಕ್ಕನ್ನ ಹಂಚಿಕೊಂಡು ಆಂಧ್ರದ ಜನ ರೌಡಿಯನ್ನೇ ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಅಷ್ಟಕ್ಕೂ ಮಾಧವಿ ಲತಾ (Madhavi Latha) ಹೀಗೆ ಹೇಳುವುದಕ್ಕೆ ಕಾರಣ ಹಿಂದುಪುರಂ ಶಾಸಕರಾಗಿರೋ ಬಾಲಯ್ಯ ಇತ್ತೀಚೆಗೆ ವಿಧಾನಸಭೆಯಲ್ಲಿ ಭಾಗಿಯಾಗಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಆಕ್ರೋಶ ಹೊರಹಾಕಿ ಗದ್ದಲ ಮಾಡಿದ್ರು. ಇದನ್ನೇ ನಟಿ ಮಾಧವಿ ಪೋಸ್ಟ್ ಮಾಡಿ ಆಂಧ್ರದ ಜನ ರೌಡಿಗಳನ್ನ ಆಯ್ಕೆಮಾಡಿದ್ದಾರೆ. ಕ್ಷಮಿಸಿಬಿಡಿ ಅವರನ್ನ ಎಂಎಲ್‌ಎ ಎಂದೂ ಕರೆಯುತ್ತಾರೆ ಎಂದು ಬರೆದಿದ್ದಾರೆ. ಮಾಧವಿ ಲತಾ ಈ ಹೇಳಿಕೆ ಬಾಲಯ್ಯ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಮಾಧವಿ ಕ್ಷಮಾಪಣೆ ಕೇಳ್ತಾರ? ಪರಿಸ್ಥಿತಿ ಎದುರಿಸುತ್ತಾರಾ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bhagavanth Kesari: ಬಾಲಯ್ಯ ಜೊತೆ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ

    Bhagavanth Kesari: ಬಾಲಯ್ಯ ಜೊತೆ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ

    ಶ್ರೀಲೀಲಾಗೆ(Sreeleela) ಹೊಸ ಚಿಕ್ಕಪ್ಪ ಸಿಕ್ಕಿದ್ದಾನೆ. ಕನ್ನಡ ನೆಲದಿಂದ ತೆಲುಗು (Tollywood) ಮಣ್ಣಿಗೆ ಹಾರಿದ ಈ ಹುಡುಗಿಗೆ ನೋಡನೋಡುತ್ತಲೇ ಒಬ್ಬ ಸ್ಟಾರ್ ಹೀರೋ ‘ಕೂಸೇ’ ಎಂದು ಕರೆದಿದ್ದಾನೆ. ಇದೇನಾಯಿತು ಶ್ರೀಲೀಲಾ ಬಣ್ಣದ ಲೋಕದ ಬದುಕಿನಲ್ಲಿ? ಮಗಳೆ ಹೀಗಂತ ಕೂಗಿ ಕೇಕೆ ಹಾಕಿ ಕುಣಿದಿದ್ದು ಯಾವ ಹೀರೋ? ಇಲ್ಲಿದೆ ಮಾಹಿತಿ.

    ಶ್ರೀಲೀಲಾ ಕೆಮ್ಮಿದರೂ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಅಂತಾರಲ್ಲ.ಹಾಗೆ ಈ ಹುಡುಗಿ ಮಾಡಿದ್ದೆಲ್ಲ ಸಿನಿಮಾ ಹಿಟ್ ಲಿಸ್ಟ್‌ಗೆ ಅನಿವಾರ್ಯವಾಗಿ ಸೇರುವಂತಾಗಿದೆ. ಎರಡೇ ಸಿನಿಮಾಕ್ಕೆ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ಭಗವಂತ ಕೇಸರಿ(Bhagavanth Kesari) ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಅದರ ಹಾಡು ಇದೀಗ ರಿಲೀಸ್ ಆಗಿದೆ. ಅದೇ ಗಣೇಶ ಹಬ್ಬದ ಸುತ್ತ ಚಿತ್ರಿಸಲಾದ ಹಾಡಿನಲ್ಲಿ ಶ್ರೀಲೀಲಾ ಹಾಗೂ ಬಾಲಕೃಷ್ಣ(Balakrishna), ಮಗಳು- ಚಿಕ್ಕಪ್ಪನಾಗಿ ಮಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ನಿರ್ದೇಶನಕ್ಕಿಳಿದ ಸುದೀಪ್- ಕಿಚ್ಚನ ಕೈಜೋಡಿಸಿದ KRG Studios

     

    View this post on Instagram

     

    A post shared by Anil Ravipudi (@anilravipudi)

    ಇದುವರೆಗೆ ಹೀರೋ ಜೊತೆ ಕುಣಿದಿದ್ದ ಶ್ರೀಲೀಲಾ ಇದೇ ಮೊದಲ ಬಾರಿಗೆ ಸ್ಟಾರ್ ಹೀರೋ ಕಮ್ ಚಿಕ್ಕಪ್ಪ ಬಾಲಕೃಷ್ಣ ಜೊತೆ ಹೆಜ್ಜೆ ಹಾಕಿದ್ದಾರೆ. ಭಗವಂತ ಕೇಸರಿ ಸಿನಿಮಾ ಶ್ರೀಲೀಲಾ ವೃತ್ತಿ ಬದುಕಿಗೆ ಹೊಸ ದಿಕ್ಕು ತೋರಿಸುವುದು ಖಚಿತ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಸ್ ಬೆಡಗಿಯ ಕಿಸ್ಮತ್ ಬದಲಿಸಲಿದೆ.

    ಇತ್ತೀಚಿಗೆ ಸ್ಕಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಾಲಯ್ಯ ಭಾಗಿಯಾಗಿದ್ದರು. ನಟನೆ, ಡ್ಯಾನ್ಸ್, ಆಕೆಯ ಸ್ವಭಾವ ಎಲ್ಲಾ ನೋಡಿ ಶ್ರೀಲೀಲಾ ಸರಸ್ವತಿ ದೇವಿಯ ವರಪ್ರಸಾದ ಎಂದು ಹಾಡಿಹೊಗಳಿದ್ದರು. ಈ ಬೆನ್ನಲ್ಲೇ ಭಗವಂತ ಕೇಸರಿ ಸಿನಿಮಾದಲ್ಲಿ ಬಾಲಯ್ಯ ಜೊತೆ ಲೀಲಾ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿರೋದು ಸಖತ್ ಸದ್ದು ಮಾಡ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ತೆಲುಗು ಚಿತ್ರರಂಗದಲ್ಲಿ (Tollywood) ಸೌಂಡ್ ಮಾಡ್ತಿದ್ದಾರೆ. ಟಾಪ್ ಸ್ಟಾರ್ ನಟರಿಗೆ ನಾಯಕಿಯಾಗಿ ಶ್ರೀಲೀಲಾ ಮೆರೆಯುತ್ತಿದ್ದಾರೆ. ‘ಧಮಾಕ’ (Dhamaka)  ಸಕ್ಸಸ್ ನಂತರ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಲೀಲಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕನ್ನಡದ ನಟಿಮಣಿಗೆ ಇರುವ ಡಿಮ್ಯಾಂಡ್ ನೋಡಿ, ಸಮಾರಂಭವೊಂದರಲ್ಲಿ ಶ್ರೀಲೀಲಾ ಸರಸ್ವತಿ ವರಪ್ರಸಾದ ಎಂದು ಹಾಡಿಹೊಗಳಿದ್ದಾರೆ.

    ರಾಮ್ ಪೋತಿನೇನಿ(Ram Pothineni)- ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದ್ದರು. ಆಗ ಶ್ರೀಲೀಲಾ ಬಗ್ಗೆ ನಟನೆ, ಆಕೆಯ ಶಿಸ್ತಿನ ಬಗ್ಗೆ ಬಾಲಯ್ಯ ಕೊಂಡಾಡಿದ್ದರು. ಶ್ರೀಲೀಲಾ ಸಂಪ್ರದಾಯಬದ್ಧ ತೆಲುಗು ಹುಡುಗಿ. ತೆಲುಗು ಚಿತ್ರರಂಗಕ್ಕೆ ಹಲವು ನಟಿಯರು ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗಿದೆ. ಅಂತೆಯೇ ಶ್ರೀಲೀಲಾಗೂ ಸಹ ಇಲ್ಲಿ ಬಹಳ ಒಳ್ಳೆಯ ಭವಿಷ್ಯವಿದೆ ಎಂದ ಬಾಲಕೃಷ್ಣ(Balakrishna) ಶ್ರೀಲೀಲಾ ಅಂದದ ಬಗ್ಗೆ ಹಿಂದಿಯಲ್ಲಿ ಯಾರಿಗೂ ಅರ್ಥವಾಗದಂಥಹಾ ಡೈಲಾಗ್ ಒಂದನ್ನು ಸಹ ಹೊಡೆದರು. ಬಾಲಕೃಷ್ಣ ಡೈಲಾಗ್‌ಗೆ ಶ್ರೀಲೀಲಾ ಸಹಿತ ಎಲ್ಲರೂ ನಕ್ಕರಾದರೂ ಯಾರಿಗೂ ಅರ್ಥವಾಗಲಿಲ್ಲ. ಇದನ್ನೂ ಓದಿ:ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ- ಜೋಡೆತ್ತು ಜೊತೆ ಡಿ ಬಾಸ್ ಪೋಸ್ಟ್ ವೈರಲ್

    ಶ್ರೀಲೀಲಾಗೆ ಸೌಂದರ್ಯವಿದೆ ಜೊತೆಗೆ ಅಭಿನಯವೂ ಇದೆ. ಅಭಿನಯದ ಜೊತೆಗೆ ಡ್ಯಾನ್ಸ್ ಕಲೆಯೂ ಇದೆ. ಇವೆಲ್ಲವನ್ನೂ ಸೇರಿಸಿ ನಮಗೆ ಸಿಕ್ಕಿರುವ ಒಳ್ಳೆಯ ನಟಿ. ಸರಸ್ವತಿ ದೇವಿಯ ವರ ಪ್ರಸಾದ. ನಾನೂ ಸಹ ಅವರೊಟ್ಟಿಗೆ ‘ಭಗವಂತ್ ಕೇಸರಿ’ (Bhagavantha Kesari) ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೆಟ್‌ನಲ್ಲಿ ಅವರ ಶ್ರಮ, ಪ್ರತಿ ಸೀನ್ ಮಾಡುವಾಗಲೂ ತೋರುವ ಶ್ರದ್ಧೆಯನ್ನು ಪ್ರತಿದಿನವೂ ನೋಡುತ್ತಿದ್ದೇನೆ. ಇಷ್ಟು ಒಳ್ಳೆಯ ನಟಿಯಾಗಿದ್ದರೂ, ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಾಮಾನ್ಯರಂತೆ ವರ್ತಿಸುತ್ತಾರೆ ಅದು ನನಗೆ ಬಹಳ ಇಷ್ಟವಾಗುತ್ತದೆ. ಆಕೆಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಬಾಲಯ್ಯ ಹಾರೈಸಿದ್ದಾರೆ.

    ಕನ್ನಡದ ‘ಕಿಸ್’ (Kiss Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗಿನ ಪೆಳ್ಳಿ ಸಂದಡಿ, ‘ಧಮಾಕ’ ಸಿನಿಮಾದ ಮೂಲಕ ಸಕ್ಸಸ್ ಕಂಡರು. ಈಗ ವಿಜಯ್ ದೇವರಕೊಂಡ, ನಿತಿನ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸೂಪರ್ ಸ್ಟಾರ್‌ಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿ ರಶ್ಮಿಕಾ ಠಕ್ಕರ್ ಕೊಡ್ತಿದ್ದಾರೆ. ನಿರ್ದೇಶಕರ ಪಾಲಿನ ನೆಚ್ಚಿನ ನಟಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಯ್ಯ ಪುತ್ರ ಸದ್ಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ಬಾಲಯ್ಯ ಪುತ್ರ ಸದ್ಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ(Balayya) ಪುತ್ರ (Son) ಅದ್ಯಾವಾಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಸೆಲೆಬ್ರಿಟಿ ಜ್ಯೋತಿಷಿ ಈಗ ಶಾಕಿಂಗ್ ಸುದ್ದಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಬಾಲಯ್ಯ ಪುತ್ರ ಈಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ ಅಂತಾ ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ವೇಣು ಸ್ವಾಮಿ (Venu Swamy) ಮಾತು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇದನ್ನೂ ಓದಿ:ಸ್ಪಂದನಾ ನಿಧನ : ವಿಜಯ ರಾಘವೇಂದ್ರ ನಟನೆ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ

    ಬಾಲಯ್ಯ ಪುತ್ರ ಮೋಕ್ಷಜ್ಞ ತೇಜ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ, ಬಾಲಯ್ಯ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿದೆ. ಮೋಕ್ಷಜ್ಞ ತೇಜ (Mokshagna Tej) ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಇನ್ನೂ ಎರಡು ಮೂರು ವರ್ಷ ಬೇಕಾಗಬಹುದು. ತೆಲುಗು ಸಿನಿಮಾಗೆ ಎಂಟ್ರಿ ಕೊಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೇಳುವ ಮೂಲಕ ಬಾಲಯ್ಯನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.

    ‘ಅಖಂಡ’ (Akanda) ಸಿನಿಮಾ ವೇಳೆ ಬಾಲಯ್ಯರನ್ನು ವೇಣು ಸ್ವಾಮಿ ಭೇಟಿ ಮಾಡಿದ್ದರು. ಈ ವೇಳೆ ಮಗನ ಜಾತಕ ನೋಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಬಾಲಯ್ಯ ಪುತ್ರನಿಗೆ ಉತ್ತಮ ಭವಿಷ್ಯವಿದೆ. ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ. ಆದರೆ, ರಾಜಕೀಯದಲ್ಲಿ ಅಲ್ಲ ಎಂದು ವೇಣು ಗೋಪಾಲ ಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ಸಮಂತಾ (Samantha) ವೈವಾಹಿಕ ಜೀವನ ಏರುಪೇರು ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇತ್ತೀಚಿಗೆ ಶ್ರೀಲೀಲಾ ಬಗ್ಗೆ ಮಾತನಾಡಿದ್ದರು. ಸಿನಿಮಾರಂಗದಲ್ಲಿ ಶ್ರೀಲೀಲಾ (Sreeleela) ಭವಿಷ್ಯ ಇನ್ನೂ ಕೆಲವು ವರ್ಷಗಳು ಮಾತ್ರ ಎಂದು ಮಾತನಾಡಿದ್ದರು. ಈಗ ಬಾಲಯ್ಯ ಪುತ್ರನ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ಆಡಿರುವ ಮಾತು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]