Tag: Bajrangi 2

  • ‘ಭಜರಂಗಿ 2’ ಮೋಷನ್ ಪೋಸ್ಟರ್ ರಿಲೀಸ್- ಕಿರಾಕಿ ಸಾಮ್ರಾಜ್ಯದ ಹಂತಕನ ಭಯಾನಕ ರೂಪ ದರ್ಶನ

    ‘ಭಜರಂಗಿ 2’ ಮೋಷನ್ ಪೋಸ್ಟರ್ ರಿಲೀಸ್- ಕಿರಾಕಿ ಸಾಮ್ರಾಜ್ಯದ ಹಂತಕನ ಭಯಾನಕ ರೂಪ ದರ್ಶನ

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನಿರ್ದೇಶಕ ಎ. ಹರ್ಷ ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಭಜರಂಗಿ 2’. ಈ ಜೋಡಿ ಈಗಾಗಲೇ ವಜ್ರಕಾಯ, ಭಜರಂಗಿ ಚಿತ್ರದ ಮೂಲಕ ಸೂಪರ್ ಸಕ್ಸಸ್ ನೀಡಿ ಮೋಡಿ ಮಾಡಿದ್ದು, ‘ಭಜರಂಗಿ 2’ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವ ಹಾದಿಯಲ್ಲಿದೆ. ಟೀಸರ್ ಮೂಲಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ‘ಭಜರಂಗಿ 2’ ಚಿತ್ರ ಇಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.

    ಮೋಷನ್ ಪೋಸ್ಟರ್ ನಲ್ಲಿ ಕಿರಾಕಿ ಸಾಮ್ರಾಜ್ಯದ ಕರಾಳ ದರ್ಶನದ ಜೊತೆಗೆ ಕಿರಾಕಿ ಸಾಮ್ರಾಜ್ಯದ ಕೊಲೆಗಡುಕನ ಭಯಂಕರ ರೂಪವನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಮತ್ತೊಮ್ಮೆ ಮೋಷನ್ ಪೋಸ್ಟರ್ ಮೂಲಕ ಹೊಸ ಕಥೆ ಹೇಳಿ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ ನಿರ್ದೇಶಕ ಎ. ಹರ್ಷ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹೊಸ ಗೆಟಪ್ ನಲ್ಲಿ ಮತ್ತಷ್ಟು ಎನರ್ಜಿಟಿಕ್ ಆಗಿ ತೆರೆ ಮೇಲೆ ಕಾಣಸಿಗಲಿದ್ದು, ‘ಭಜರಂಗಿ 2’ ಫ್ಯಾಂಟಸಿ ಸಿನಿಮಾವಾಗಿದ್ದು ಎರಡು ಶೇಡ್ ನಲ್ಲಿ ಶಿವಣ್ಣ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಶಿವಣ್ಣ ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ‘ಭಜರಂಗಿ 2’ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಈ ಹಿಂದೆ ಕಾಣಿಸಿಕೊಳ್ಳದ ಗೆಟಪ್ ನಲ್ಲಿ, ವಿಭಿನ್ನ ಪಾತ್ರದಲ್ಲಿ ಶ್ರುತಿ ತೆರೆ ಮೇಲೆ ರಂಜಿಸಲಿದ್ದಾರೆ.

    ವಜ್ರಕಾಯ, ಭಜರಂಗಿ ಸಿನಿಮಾಗಳಿಗಿಂತಲೂ ಎಲ್ಲಾ ರೀತಿಯಲ್ಲೂ ಅದ್ಧೂರಿತನದಿಂದ ಕೂಡಿರಲಿದೆ ‘ಭಜರಂಗಿ 2 ಚಿತ್ರ’. ಅದರ ಝಲಕ್ ಈಗಾಗಲೇ ಟೀಸರ್ ನಲ್ಲಿ ನೋಡಿಯೂ ಆಗಿದೆ. ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಚಂದನವನದ ಹೆಸರಾಂತ ನಿರ್ಮಾಪಕರು, ವಿತರಕರಾದ ಜಯಣ್ಣ, ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ‘ಭಜರಂಗಿ 2’ ಚಿತ್ರ ಮೂಡಿಬರಲಿದ್ದು, ಸ್ವಾಮಿ.ಜೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟೀಸರ್ ಮೂಲಕ ಧೂಳೆಬ್ಬಿಸಿದ ‘ಭಜರಂಗಿ 2’ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿ ಬಳಗದ ನಿರೀಕ್ಷೆ ಹೆಚ್ಚಿದ್ದು ಚಿತ್ರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.

    https://www.youtube.com/watch?v=vZGKtlPP7Ow&feature=youtu.be

  • ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

    ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

    ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ಸೆಟ್ಟಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಇದೀಗ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, ಆತಂಕಕ್ಕೀಡು ಮಾಡಿದೆ.

    ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಬಳಿಯ ಮೋಹನ್.ಬಿ.ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣದ ಸೆಟ್ ಹಾಕಲಾಗಿತ್ತು. ಭಾರೀ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸೆಟ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದೇ ಸೆಟ್ಟಿನಲ್ಲಿ ಇತ್ತೀಚೆಗಷ್ಟೇ ಬೆಂಕಿ ಅವಘಡ ಸಂಭವಿಸಿತ್ತು. ಇದೀಗ ಮತ್ತೆ ಅಗ್ನಿ ಅನಾಹುತ ಸಂಭವಿಸಿದ್ದು, ಆತಂಕ ಸೃಷ್ಟಿಸಿದೆ. ಶೂಟಿಂಗ್ ಸ್ಥಳದಲ್ಲಿ 400ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    2 ಅಗ್ನಿಶಾಮಕದಳ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಸೆಟ್‍ನಲ್ಲಿದ್ದ 400ಕ್ಕೂ ಹೆಚ್ಚು ಕಲಾವಿದರು, ಸಹಕಲಾವಿದರೂ, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರತಂಡದ ನಿರ್ಲಕ್ಷ್ಯವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ಅವಘಡದ ಬಳಿಕ ಚಿತ್ರತಂಡ ಆತಂಕಕ್ಕೊಳಗಾಗಿದ್ದು, ಬೆಂಕಿ ನಂದಿಸಲು ಹರಸಾಹಸ ನಡೆದಿದೆ. ಈ ಮೂಲಕ ಭಜರಂಗಿ-2 ಸಿನಿಮಾ ಪದೇ ಪದೆ ಅವಘಡಗಳಿಗೆ ತುತ್ತಾಗುತ್ತಿದೆ. ಬೆಂಕಿ ಅವಘಡದ ಬಳಿಕ ಶೂಟಿಂಗ್ ಸ್ಥಗಿತಗೊಂಡಿದ್ದು, ನಟ ಶಿವರಾಜ್ ಕುಮಾರ್ ಸಹ ಸಿನಿಮಾ ಸೆಟ್ಟಿನಿಂದ ಹೊರಟಿದ್ದಾರೆ.

    2 ದಿನಗಳ ಹಿಂದೆ ಬೆಂಕಿ ಅವಘಡ, ಅಲ್ಲದೆ ಶನಿವಾರ ಬಸ್ ಅಪಘಾತವಾಗಿತ್ತು. ಎರಡು ದಿನದ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ನಂತರವೂ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ತಂಡದ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಳೆದೊಂದು ವಾರದಲ್ಲಿ ಇದು ಮೂರನೇ ಅವಘಡವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ವೇಳೆ ನಾನೂ ಸ್ಥಳದಲ್ಲಿದ್ದೆ, ಘಟನೆಯಿಂದ ಆಘಾತವಾಯಿತು, ದೇವರ ದಯೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ. ಮುಂದೆ ಎಚ್ಚರಿಕೆಯಿಂದ ಇರುತ್ತೇವೆ ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಕಿ ಅವಘಡದಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದ್ದು, ಸದ್ಯಕ್ಕೆ ಚಿತ್ರೀಕರಣ ಮಾಡದಿರಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ.

  • ಶಿವಣ್ಣ ಭಜರಂಗಿಯಾಗಿ ಮತ್ತೆ ಅಬ್ಬರಿಸೋದು ಪಕ್ಕಾ!

    ಶಿವಣ್ಣ ಭಜರಂಗಿಯಾಗಿ ಮತ್ತೆ ಅಬ್ಬರಿಸೋದು ಪಕ್ಕಾ!

    ಬೆಂಗಳೂರು: ಯುವ ನಿರ್ದೇಶಕ ಎ ಹರ್ಷ ಮತ್ತೆ ಶಿವರಾಜ್ ಕುಮಾರ್ ಅವರ ಜೊತೆಗೊಂದು ಚಿತ್ರ ಮಾಡುತ್ತಾರೆಂಬ ಸುದ್ದಿ ಬಹಳಷ್ಟು ಹಿಂದೆಯೇ ಹಬ್ಬಿಕೊಂಡಿತ್ತು. ಬಳಿಕ ಅದು ನಿಜವಾದಂತಾಗಿ ಆ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅಂತ ನಾಮಕರಣವಾಗಿರೋದರ ಬಗ್ಗೆಯೂ ಸುದ್ದಿ ಹರಡಿತ್ತು. ಆ ಬಳಿಕ ಈ ಪ್ರಾಜೆಕ್ಟಿಗೆ ಭಜರಂಗಿ 2 ಎಂಬ ಟೈಟಲ್ಲು ಫಿಕ್ಸಾಗಿ ಇದೀಗ ಖುದ್ದು ಶಿವಣ್ಣನೇ ಈ ಚಿತ್ರದ ಚಿತ್ರೀಕರಣಕ್ಕೆ ಹೊರಡೋ ಉತ್ಸಾಹದಲ್ಲಿದ್ದಾರೆ.

    ಎ.ಹರ್ಷ ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶನ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿವಣ್ಣನೊಂದಿಗಿನ ಚಿತ್ರದ ಬಗ್ಗೆ ಗುಲ್ಲೆದ್ದಿತ್ತು. ಹರ್ಷ ಸೀತಾರಾಮ ಕಲ್ಯಾಣ ಮುಗಿಸಿಕೊಂಡವರೇ ಸೀದಾ ಶಿವಣ್ಣನ ಬಳಿ ಹೋಗಿ ಈ ಕಥೆಯನ್ನು ಹೇಳಿದ್ದರಂತೆ. ಶಿವಣ್ಣ ಕೂಡಾ ಖುಷಿಯಿಂದ ಒಪ್ಪಿಗೆ ಸೂಚಿಸುತ್ತಲೇ ಸ್ಕ್ರಿಪ್ಟ್ ಕೆಲಸಕ್ಕೆ ಪಟ್ಟಾಗಿ ಕೂತಿದ್ದರು. ಇದೀಗ ಎಲ್ಲವನ್ನೂ ಮುಗಿಸಿಕೊಂಡು ಚಿತ್ರೀಕರಣಕ್ಕೆ ತಯಾರಾಗಿದ್ದಾರೆ.

    ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ತಿಂಗಳ ಇಪ್ಪತ್ತನೇ ತಾರೀಕಿನಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ನಡೆಯಲಿದೆ. ಶಿವಣ್ಣನೇ ತಯಾರಾಗಿರೋದರಿಂದ ಆ ಮುಹೂರ್ತದಿಂದಲೇ ಚಿತ್ರೀಕರಣ ಚಾಲೂ ಆಗಲಿದೆ. ವರ್ಷಾಂತರಗಳ ಹಿಂದೆ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ನಿನಲ್ಲಿ ಭಜರಂಗಿ ಎಂಬ ಚಿತ್ರ ತೆರೆ ಕಂಡಿತ್ತು. ಅದು ಹಿಟ್ ಕೂಡಾ ಆಗಿತ್ತು. ಅದಾದ ನಂತರದಲ್ಲಿ ಹರ್ಷ ಮತ್ತೆ ಶಿವಣ್ಣನ ಜೊತೆ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದರಂತೆ. ಆದರೆ ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ.

    ಈ ಹಿಂದೆ ಸದರಿ ಚಿತ್ರಕ್ಕೆ ಮೈ ನೇಮ್ ಈಸ್ ಆಂಜಿ ಅನ್ನೋ ಹೆಸರು ಫಿಕ್ಸಾಗಿತ್ತಲ್ಲಾ? ಅದು ಶಿವಣ್ಣನ ಅಭಿಮಾನಿ ಬಳಗಕ್ಕೂ ಹಿಡಿಸಿತ್ತು. ಆದರೆ ಆಂಜನೇಯನ ಪರಮ ಭಕ್ತರಾದ ಎ ಹರ್ಷ ಅವರಿಗೆ ಆ ಟೈಟಲ್ ಸಮಾಧಾನ ತಂದಿರಲಿಲ್ಲ. ನಂತರ ಅಳೆದೂ ತೂಗಿ ಕಡೆಗೂ ಭಜರಂಗಿ 2 ಎಂಬ ಟೈಟಲ್ಲೇ ನಿಕ್ಕಿಯಾಗಿದೆ. ಈ ಚಿತ್ರವೂ ಭಜರಂಗಿಯಂತೆಯೇ ಸೂಪರ್ ಹಿಟ್ ಆಗುವಂತೆ ಮೂಡಿ ಬರಲಿದೆ ಎಂಬ ನಿರೀಕ್ಷೆ ಶಿವಣ್ಣನ ಅಭಿಮಾನಿಗಳಲ್ಲಿದೆ.