Tag: bairathi rangal

  • ‘ಪುಷ್ಪ 2’ ಚಿತ್ರದ ಮುಂದೆ ಅಬ್ಬರಿಸಲಿದೆ ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ

    ‘ಪುಷ್ಪ 2’ ಚಿತ್ರದ ಮುಂದೆ ಅಬ್ಬರಿಸಲಿದೆ ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಭೈರತಿ ರಣಗಲ್’ (Bhairathi Rangal) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೇ ಆಗಸ್ಟ್ 15ಕ್ಕೆ ‘ಭೈರತಿ ರಣಗಲ್’ ಚಿತ್ರ ಪುಷ್ಪ 2 ಚಿತ್ರದ ಮುಂದೆ ರಿಲೀಸ್ ಆಗಲಿದೆ. ಶಿವಣ್ಣರ ರಗಡ್ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ಶಿವಣ್ಣ- ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿತ್ತು. ಇದೀಗ ಚಿತ್ರದ ಪ್ರೀಕ್ವೆಲ್‌ನಲ್ಲಿ ಶಿವಣ್ಣ ಪಾತ್ರದ ಅಸಲಿ ಕಥೆ ಶುರುವಾಗಲಿದೆ. ಹೊರ ಜಗತ್ತಿಗೆ ಹಣ ಮಾಡುವ, ಮೋಸ ಮಾಡುವ ವ್ಯಕ್ತಿಯಂತೆ ಕಾಣುವ ಈ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ನಂತರದಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. ಆ ವ್ಯಕ್ತಿಯ ಹಿಂದಿನ ಕಥೆ ‘ಭೈರತಿ ರಣಗಲ್’ ಚಿತ್ರದಲ್ಲಿ ಇರಲಿದೆ.

     

    View this post on Instagram

     

    A post shared by Geetha Pictures (@geethapictures)

    ಇದೇ ಆಗಸ್ಟ್ 15ರಂದು ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 ರಿಲೀಸ್ ಆಗಲಿದೆ. ಇದರ ಜೊತೆಗೆ ರೋಹಿತ್ ಶೆಟ್ಟಿ ‘ಸಿಂಗಂ ಅಗೇನ್’ ಚಿತ್ರ, ವಿಜಯ್ ದಳಪತಿ ನಟನೆಯ ಚಿತ್ರ ಕೂಡ ತೆರೆಗೆ ಅಬ್ಬರಿಸಲಿದೆ. ಈ 3 ಚಿತ್ರಗಳ ಮುಂದೆ ಭೈರತಿ ರಣಗಲ್ ಚಿತ್ರ ಸ್ಪರ್ಧೆಗೆ ಇಳಿಯುತ್ತಿದೆ. ಇದನ್ನೂ ಓದಿ:Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    ‘ಪುಷ್ಪ 2’ (Pushpa 2) ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾನ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಯೋಚಿಸಿದ್ದರು. ಆದರೆ, ಈಗ ಶಿವರಾಜ್‌ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದ್ದು, ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ.

    ‘ಭೈರತಿ ರಣಗಲ್’ ಚಿತ್ರಕ್ಕೆ ನರ್ತನ್ ಆ್ಯಕ್ಷನ್ ಕಟ್ ಹೇಳಿದ್ರೆ, ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಶಿವಣ್ಣಗೆ ‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.

  • Exclusive: ರಾಮ್ ಚರಣ್ ಜೊತೆ ‘ಮಫ್ತಿ’ ನಿರ್ದೇಶಕನ ಸಿನಿಮಾ? ನರ್ತನ್ ಸ್ಪಷ್ಟನೆ

    Exclusive: ರಾಮ್ ಚರಣ್ ಜೊತೆ ‘ಮಫ್ತಿ’ ನಿರ್ದೇಶಕನ ಸಿನಿಮಾ? ನರ್ತನ್ ಸ್ಪಷ್ಟನೆ

    ನ್ನಡದ ಹೆಸರಾಂತ ನಿರ್ದೇಶಕ ನರ್ತನ್ ‘ಮಫ್ತಿ’ (Mufti) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೈ ಎನಿಸಿಕೊಂಡರು. ಸದ್ಯ ‘ಭೈರತಿ ರಣಗಲ್’ (Bhairathi Rangal) ಸಿನಿಮಾಗೆ ತಯಾರಿ ಮಾಡ್ತಿರುವ ಈ ಸಂದರ್ಭದಲ್ಲಿ ರಾಮ್ ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ನರ್ತನ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    2017ರಲ್ಲಿ ‘ಮಫ್ತಿ’ (Mufti) ಸಿನಿಮಾಗೆ ಶಿವರಾಜ್‌ಕುಮಾರ್ (Shivarajkumar) ನಿರ್ದೇಶನ ಮಾಡುವ ಮೂಲಕ ಬೆಳಕಿಗೆ ಬಂದ ಪ್ರತಿಭೆ ನರ್ತನ್. ಮೊದಲ ಸಿನಿಮಾದಲ್ಲೇ ತಾನೆಂತಹ ನಿರ್ದೇಶಕ ಎಂಬುದನ್ನ ಸಾಬೀತುಪಡಿಸಿದ್ದರು. ಮಫ್ತಿ ಚಿತ್ರ ಗಲ್ಲಾಪೆಟ್ಟಿಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೆಟ್ ಮಾಡ್ತು. ಶಿವಣ್ಣ, ಶ್ರೀಮುರಳಿ ನಟನೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಿತ್ತೋ ಅದೇ ತರಹ ನರ್ತನ್ ಕಥೆ, ಡೈರೆಕ್ಷನ್‌ಗೆ ಕೂಡ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಇದನ್ನೂ ಓದಿ:ರಸ್ತೆ ಅಪಘಾತ : ಕಿರುತೆರೆ ಖ್ಯಾತ ನಟಿ ವೈಭವಿ ಉಪಾಧ್ಯಾಯ ದುರ್ಮರಣ

    ‘ಮಫ್ತಿ’ ಸಿನಿಮಾದ ಪ್ರೀಕ್ವೇಲ್ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ‘ಭೈರತಿ ರಣಗಲ್’ ಚಿತ್ರದ ಮೂಲಕ ಅಸಲಿ ಕಥೆಯನ್ನ ಬಿಚ್ಚಿಡಲು ನರ್ತನ್ ಸಿದ್ಧತೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ಹವಾ ಕ್ರಿಯೇಟ್ ಮಾಡಿದೆ. ‘ಭೈರತಿ ರಣಗಲ್’ ಸಿನಿಮಾ ಇದೇ ಮೇ 26ಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಜೂನ್ ಮೊದಲ ವಾರದಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಹೀಗಿರುವಾಗ ರಾಮ್ ಚರಣ್ (Ramcharan) ಜೊತೆ ನರ್ತನ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಅಷ್ಟಕ್ಕೂ ಈ ವಿಚಾರ ನಿಜಾನಾ.? ಈ ಬಗ್ಗೆ ನಿರ್ದೇಶಕ ನರ್ತನ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ನಟ ರಾಮ್ ಚರಣ್ ಅವರನ್ನ ಭೇಟಿಯಾಗಿ ಕಥೆ ಹೇಳಿರುವದು ನಿಜ, ಒಂದಿಷ್ಟು ಹಂತದ ಮಾತುಕತೆಯಾಗಿದೆ. ಆದರೆ ರಾಮ್ ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ಫೈನಲ್ ಆಗಿಲ್ಲ. ‘ಭೈರತಿ ರಣಗಲ್’ ಸಿನಿಮಾ ಮುಗಿಯುವವರೆಗೂ ಬೇರೆ ಪ್ರಾಜೆಕ್ಟ್ ಮಾಡೋದಕ್ಕೆ ಹೋಗಲ್ಲ. ಸದ್ಯ ನನ್ನ ಗಮನ ಏನೇ ಇದ್ದರೂ ಶಿವಣ್ಣ ಜೊತೆಗಿನ ಸಿನಿಮಾ ಅಂತಾ ನರ್ತನ್ (Narthan) ಸ್ಪಷ್ಟನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮ್ ಚರಣ್ ಜೊತೆಗಿನ ಸಿನಿಮಾ ಅಂತಿಮ ಆಗಿದ್ದಲ್ಲಿ ಅಧಿಕೃತವಾಗಿ ತಿಳಿಸುವೆ ಎಂದು ಮಾತನಾಡಿದ್ದಾರೆ.

    ಶೃತಿ ನಾಗೇಶ್, ಪಬ್ಲಿಕ್‌ ಟಿವಿ ಡಿಜಿಟಲ್