Tag: Bachegowda

  • ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಆನೇಕಲ್: ಬಹಿರಂಗ ವೇದಿಕೆಯೊಂದರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡಗೆ ಚಾಲೆಂಜ್ ಮಾಡಿದ್ದು, ಹೊಸಕೋಟೆಯಲ್ಲಿ ಇನ್ನೂ ಫೈಟ್ ಮುಗಿದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಎಂಟಿಬಿ, ನಿಮ್ಮಿಬ್ಬರ ಅನುದಾನದಲ್ಲಿ ನಡೆಯುವ ಕಾಮಗಾರಿಯ ಪೂಜೆ ನೀವು ಮಾಡಿ. ಜನರಿಗೆ ಯಾರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ತಿಳಿಯಲಿ. ನಾನು ತಂದ ಅನುದಾನದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ತಮ್ಮ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಟಿಬಿ ಟಾಂಗ್ ನೀಡಿದರು.

    ಶಾಸಕರ ನಿಧಿ ಕೇವಲ 50 ಲಕ್ಷ ಮಾತ್ರ ಇದೆ. ಈಗ ನಡೆಯುತ್ತಿರೋ ಕಾಮಗಾರಿಗಳು ಕೋಟಿ ಲೆಕ್ಕದ ಅನುದಾನ ನಾನು ತಂದದ್ದು. ಇನ್ನು ಕೇವಲ 25 ದಿನದಲ್ಲಿ 20 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಹೊಸಕೋಟೆಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಲಾಗುತ್ತೆ. ನಾನು 3 ಬಾರಿ ಶಾಸಕನಾಗಿದ್ದವನು, 6 ತಿಂಗಳು ಮಂತ್ರಿ ಆಗಿದ್ದಾಗ ತಂದ ಅನುದಾನವಾಗಿದೆ ಎಂದರು.

    ಕಾವೇರಿ ನೀರು ಹೊಸಕೋಟೆಗೆ ಕೊಡಲು ಯಡಿಯೂರಪ್ಪ ಒಪ್ಪಿದ್ದಾರೆ. ಈ ಕೆಲಸಗಳು ನನ್ನ ಅನುದಾನದಲ್ಲಿ ಬಂದವು. ಅಪ್ಪ ಲೋಕಸಭಾ ಸದಸ್ಯ, ಮಗ ಶಾಸಕ ಇವರಿಬ್ಬರೂ ಹೊಸಕೋಟೆಗೆ ಕೊಟ್ಟ ಅನುದಾನ ಬಹಿರಂಗಪಡಿಸಲಿ ಎಂದು ಅಪ್ಪ- ಮಗನಿಗೆ ಎಂಟಿಬಿ ಸವಾಲೆಸೆದರು.

  • ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ಬೆಂಗಳೂರು: ನಾನು ಉಪಚುನಾವಣೆಯಲ್ಲಿ ಸೋಲಲು ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡ ಅವರೇ ನೇರ ಕಾರಣ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಆರೋಪಿಸಿದ್ದಾರೆ.

    ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನ್ನ ಸೋಲಿನ ಪರಾಮರ್ಶೆ ಮಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮ. ಹೀಗಾಗಿ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನ ನಾನು ಗೌರವಿಸುತ್ತೇನೆ ಎಂದರು.

    ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಸುಮಾರು 71 ಸಾವಿರ ಮತದಾರರು ಮತವನ್ನ ಹಾಕಿದ್ದಾರೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

    ನಾನು ಉಪಚುನಾವಣೆಯಲ್ಲಿ ಸೋಲಲು ಬಿಎನ್ ಬಚ್ಚೇಗೌಡರೇ ನೇರ ಕಾರಣರಾಗಿದ್ದಾರೆ. ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ, ಈಗ ಸಂಸದರಾಗಿ ಬಿಜೆಪಿ ಪಕ್ಷದಿಂದ ಎಲ್ಲಾ ಅಧಿಕಾರವನ್ನ ಅನುಭವಿಸಿ ಪಕ್ಷಕ್ಕೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಪರವಾಗಿ ಕೆಲಸ ಮಾಡದೆ ಮಗನನ್ನ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.

    ಭಾರತೀಯ ಜನತಾ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದೆ. ಮಗನನ್ನ ಬೆಳಸಲು ರಾಜಕೀಯ ದುರುದ್ದೇಶದಿಂದ ಪಕ್ಷದ ಪರ ಕೆಲಸ ಮಾಡದೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕುತಂತ್ರ ನಡೆಸಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡಿರುವ ಬಚ್ಚೇಗೌಡರ ವಿರುದ್ಧ ಈ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರಲ್ಲಿ ಈ ಮೂಲಕ ಒತ್ತಾಯ ಮಾಡುವುದಾಗಿ ಹೇಳಿದರು.

  • ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಬೆಂಗಳೂರು: ಇಂದು ಇಡೀ ದಿನ ಟೈಮ್ ತೆಗೆದುಕೊಳ್ಳಿ ನಾಳೆ ಬೆಳಗ್ಗೆ ಫೈನಲ್ ಆಗಬೇಕು. ಸೋಮವಾರ ನೀವು ಪ್ರಚಾರಕ್ಕೆ ಇಳಿಯಲೇಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಾರ್ನ್ ಮಾಡಿದ್ದಾರೆ.

    ಬಚ್ಚೇಗೌಡರ ಜೊತೆ ಕೊನೆಯ ಬಾರಿ ಮಾತುಕತೆ ನಡೆಸಿದ ಯಡಿಯೂರಪ್ಪ, ದಿನಕ್ಕೆ ಎರಡು `ಹೊಸ’ ಕಡೆ ಪ್ರಚಾರ ಮಾಡ್ಲೇಬೇಕು. ಸೋಮವಾರದೊಳಗೆ ಪ್ರಚಾರಕ್ಕೆ ಇಳಿಯಬೇಕು. ಇಲ್ಲದಿದ್ದರೆ ಪಕ್ಷ ವಿಧಿಸೋ ಕ್ರಮವನ್ನು ಎದುರಿಸಿ. ನಿಮ್ಮ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದಿನಕ್ಕೆ ಎರಡು ಕಡೆಯಾದ್ರೂ ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಪ್ರಚಾರ ಮಾಡಿ. ಇನ್ನೆರಡು ದಿನವಾದ್ರೂ ಟೈಮ್ ತೆಗೆದುಕೊಂಡು ಪ್ರಚಾರಕ್ಕೆ ಬನ್ನಿ ಎಂದು ಸಂದೇಶ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಟ್ಟಿನಲ್ಲಿ ಬಿಜೆಪಿ, ಸಿಎಂ ಬಿಎಸ್‍ವೈ ವಾರ್ನಿಂಗ್‍ಗೆ ಬಚ್ಚೇಗೌಡರು ಮಣೀತಾರಾ ಅಥವಾ ಡೋಂಟ್ ಕೇರ್ ಎಂದು ಮಗನ ಪರ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

  • ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಬೆಂಗಳೂರು: ಬಿಜೆಪಿ ಬಿಡುವಂಗಿಲ್ಲ, ಕಟ್ಟಿಕೊಳ್ಳುವಂಗಿಲ್ಲ ಎಂಬತಹ ಧರ್ಮಸಂಕಟದಲ್ಲಿ ಸಂಸದ ಬಚ್ಚೇಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಪಕ್ಷದ ಚಿಹ್ನೆ ಕಮಲ ಆದರೆ ಮಗ ಶರತ್ ಬಚ್ಚೇಗೌಡರ ಪಕ್ಷೇತರ ಚಿಹ್ನೆ ಕುಕ್ಕರ್ ಆಗಿರುವುದರಿಂದ ಬಚ್ಚೇಗೌಡರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಬರೀ 10 ದಿನ ಮಾತ್ರ ಉಳಿದಿದೆ. ಆದರೆ ಬಚ್ಚೆಗೌಡರು ಮಾತ್ರ ನಾಪತ್ತೆಯಾಗಿದ್ದಾರೆ. ಬಿಜೆಪಿ ಉಸ್ತುವಾರಿ ಹಾಕಿದ್ದರೂ ಕ್ಯಾರೇ ಎನ್ನದೇ ಪ್ರಚಾರಕ್ಕೂ ಹೋಗದೆ ಬಚ್ಚೇಗೌಡರು ಸೈಲೆಂಟ್ ಆಗಿದ್ದಾರೆ. ಒಬ್ಬ ಹಿರಿಯ ನಾಯಕ, ಪಕ್ಷದ ಸಂಸದ ಆಗಿದ್ದರೂ ಕೈಕಟ್ಟಿಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಈ ಮೂಲಕ ರಹಸ್ಯವಾಗಿ ರಾಜಕೀಯ ಚದುರಂಗದಾಟಕ್ಕೆ ಇಳಿದು ಬಿಟ್ಟರಾ ಬಚ್ಚೇಗೌಡರು ಎನ್ನುವ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಬಚ್ಚೇಗೌಡರ ಮನವೊಲಿಕೆ ಪ್ರಯತ್ನವನ್ನು ಸಿಎಂ ಯಡಿಯೂರಪ್ಪ ಕೈಬಿಟ್ಟಿದ್ದು, ಬಚ್ಚೇಗೌಡರ ಜತೆ ಬಿಜೆಪಿ ನಾಯಕರು ಕೂಡ ದೂರ ಸರಿದಿದ್ದಾರೆ. ಹೀಗಾಗಿ ಉಪಚುನಾವಣೆಗೂ ಮುನ್ನವೇ ಬಚ್ಚೇಗೌಡರ ಮೇಲೆ ಕ್ರಮನಾ ಅಥವಾ ಮುಗಿದ ಮೇಲೆ ಬಚ್ಚೇಗೌಡರ ಮೇಲೆ ಕ್ರಮನಾ ಎನ್ನುವ ಪ್ರಶ್ನೆ ಕಾಡುತ್ತಿದ್ದು, ಬಿಜೆಪಿಯ ಹೆಜ್ಜೆ, ಬಚ್ಚೇಗೌಡರ ರಹಸ್ಯ ಕುತೂಹಲ ಸೃಷ್ಟಿಸಿದೆ.

  • ನನ್ನ ನಾಮಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಾರೆ: ಎಂಟಿಬಿ ನಾಗರಾಜ್

    ನನ್ನ ನಾಮಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಾರೆ: ಎಂಟಿಬಿ ನಾಗರಾಜ್

    ಬೆಂಗಳೂರು: ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಸೋಮವಾರ ಅಧಿಕೃತವಾಗಿ ಮೊತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ವೇಳೆ ಬಿಜೆಪಿ ಮುಖಂಡರು ಸೇರಿಂದಂತೆ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡರು ಬರುತ್ತಾರೆ ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದಾರೆ.

    ಬುಧವಾರ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಉಪಚುನಾವಣಾ ಕಣ ರಂಗೇರುವಂತೆ ಮಾಡಿದೆ. ಅದರಲ್ಲೂ ಹೊಸಕೋಟೆಯಲ್ಲಿ ಬಿಜೆಪಿಯಿಂದ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದರೆ ಇನ್ನೊಂದು ಕಡೆ ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಉಪಚುನಾವಣೆಯ ಕಾವು ಹೆಚ್ಚಾಗುವಂತೆ ಮಾಡಿದೆ.

    ಇಂದು ಅವಿಮುಕ್ತೇಶ್ವರ ದೇವಾಲಯದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಈಗಾಗಲೇ ನನಗೆ ಬಿಜೆಪಿ ಬಿ ಫಾರಂ ನೀಡಿದೆ. ಸಾಂಕೇತಿಕವಾಗಿ ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಸೋಮವಾರ ಸಹ ಸಿಎಂ, ಬಿಜೆಪಿ ಮುಖಂಡರೊಂದಿಗೆ ಮತ್ತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಈ ವೇಳೆ ಸಂಸದ ಬಚ್ಚೇಗೌಡರೂ ಬರುತ್ತಾರೆ ಎಂದು ತಿಳಿಸಿದರು.

    ಒಂದು ಕಡೆ ಸ್ವಾಭಿಮಾನದ ಹೆಸರಿನಲ್ಲಿ ಶರತ್ ಬಚ್ಚೇಗೌಡ ಬಿಜೆಪಿ ವಿರುದ್ಧವೇ ತೊಡೆ ತೊಟ್ಟಿದ್ದಾರೆ. ಆದರೆ ಈಗ ಮಗನ ವಿರುದ್ಧ ಸ್ಪರ್ಧಿಸುತ್ತಿರುವ ಎಂಟಿಬಿ ನಾಗರಾಜ್ ಪರವಾಗಿ ನಾಮ ಪತ್ರ ಸಲ್ಲಿಕೆಗೆ ಬಚ್ಚೇಗೌಡರು ಬರುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

  • ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ಚಿಕ್ಕಬಳ್ಳಾಪುರ: ಕರ್ನಾಟಕ ರಾಜಕಾರಣ ನಾಳೆಯಿಂದ ಕುರುಕ್ಷೇತ್ರ ಆಗುತ್ತೆ. ಮೂರು-ನಾಲ್ಕು ದಿನದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು, ಎರಡು, ಮೂರು, ನಾಲ್ಕು ಅಂತ ಎಣಿಸಿ ನೋಡಿ. ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ. ಯಡಿಯೂರಪ್ಪ ಈ ಕುರುಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ ಅದು ನೆರವೇರುತ್ತಿದೆ. ಈಗ ಯಡಿಯೂರಪ್ಪ ಸಿಎಂ ಅಗಬೇಕು ಎಂಬುದೇ ನನ್ನ ಆಸೆಯಾಗಿದೆ. ಎರಡು ಮೂರು ದಿನ ಕಾದು ನೋಡಿ ಯಡಿಯೂರಪ್ಪ ಸಿಎಂ ಅಗ್ತಾರೆ ಎಂದರು. ಇದೇ ವೇಳೆ  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಚ್ಚೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು.

  • ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    – ನನ್ನ ಅಭಿವೃದ್ಧಿ ಕಾರ್ಯಗಳನ್ನ ಮೊಯ್ಲಿ ತಮ್ಮದೆಂದು ಹೇಳುತ್ತಿದ್ದಾರೆ
    – ಕೇಂದ್ರದಲ್ಲಿ ಶಕ್ತಿಶಾಲಿ ಸರ್ಕಾರಕ್ಕಾಗಿ ಮೋದಿಗೆ ಮತ ನೀಡಿ

    ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ವಿರುದ್ಧವಾಗಿ ಮತ ಚಲಾವಣೆ ಮಾಡುವಂತೆ ಈಗಾಗಲೇ ತೀರ್ಮಾನ ಮಾಡಿರುವುದರಿಂದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಲು ಪಕ್ಷ ಹೇಳಿದರೆ ಪ್ರಚಾರ ಮಾಡ್ತೇನೆ ಎಂದು ಮಾಜಿ ಸಿಎಂ ಎಸ್‍ಎಂ ಕೃಷ್ಣ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಿ ಎಂದರೆ ನಾನು ಅಲ್ಲಿಗೆ ಹೋಗುತ್ತೇನೆ. ಇವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡು ಎಂದು ಹೇಳಿದ್ದಾರೆ. ಹೀಗಾಗಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

    ಇದೇ ವೇಳೆ ಮಹಾಘಟಬಂಧನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 25 ಪಕ್ಷಗಳು ಸೇರಿ ಸರ್ಕಾರ ಮಾಡಿದರೆ ಎಂತಹ ವೈವಿಧ್ಯಮಯ ಸರ್ಕಾರ ಮಾಡಲು ಸಾಧ್ಯ ನೀವೇ ಒಮ್ಮೆ ಯೋಚಿಸಿ. ಕೇಂದ್ರದಲ್ಲಿ ಯಾವಾಗಲೂ ಗಟ್ಟಿ, ಶಕ್ತಿ ಶಾಲಿ ಸರ್ಕಾರ ಇರಬೇಕು. ಹೀಗಾಗಿ ಮೋದಿಯವರ ಗಟ್ಟಿ ಸರ್ಕಾರ ಹೇಗಿದೆ ಎಂಬುದನ್ನು ಎಂದು ಅರ್ಥಮಾಡಿಕೊಂಡು ಮತ ಚಲಾಯಿಸಿ, ಮುಂದಿನ 5 ವರ್ಷವೂ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬುದೇ ತಮ್ಮ ಕೋರಿಕೆ ಎಂದರು.

    ಮೊಯ್ಲಿ ವಿರುದ್ಧ ಅಸಮಾಧಾನ: ಎತ್ತಿನಹೊಳೆ ಯೋಜನೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ವಿಮಾನ ನಿಲ್ದಾಣಕ್ಕೆ ಕೇಂಪೇಗೌಡ ಹೆಸರಿಡಲು ಶ್ರಮಿಸಿದ್ದ ತಾನು ಎಂದು ವೀರಪ್ಪಮೊಯ್ಲಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕೆಲ ಅಪಪ್ರಚಾರಗಳು ನಡೆಯುತ್ತಿದ್ದಾರೆ. ಸುಳ್ಳಿನ ಸರಮಾಲೆಗಳ ಮೂಲಕ ವೀರಪ್ಪ ಮೊಯ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ದು ನಾನು. ಆದರೆ ಮೊಯ್ಲಿ ತಾವು ಮಾಡಿದ್ದು ಎನ್ನುತ್ತಿದ್ದಾರೆ. ಜನ ಮುರ್ಖರು ಎಂದು ತಿಳಿದುಕೊಂಡು ಹಾಗೇ ಹೇಳಿದ್ದಾರಯೇ ಎಂಬುವುದು ತಿಳಿಯುತ್ತಿಲ್ಲ. ಜನ ಬುದ್ಧಿವಂತಾರಗಿದ್ದು ಚರಿತ್ರೆಯನ್ನ ತಿಳಿದುಕೊಳ್ಳುತ್ತಾರೆ. 2001-2002 ರಲ್ಲಿ ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ರನ್ನ ಭೇಟಿ ಮಾಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. ಆಗ ಬಿಜೆಪಿಯವರು ಎಸ್‍ಎಂ ಕೃಷ್ಣ ಕಾಂಗ್ರೆಸ್ ಸಿಎಂ ಬರಬೇಡಿ ಎಂದಿದ್ದರು. ಅದನ್ನ ಕೇಳಿಸಿಕೊಂಡ ವಾಜಪೇಯಿ ಅವರು ಒಂದು ಕಿವಿಯಲ್ಲಿ ಕೇಳಿ ಸುಮ್ಮನಾದರು. ಕೊನೆಗೆ ಮತ್ತೊಮ್ಮೆ ನಾನು ದಿವಂಗತ ಅನಂತ್ ಕುಮಾರ್ ಹಾಗೂ ನಿತಿನ್ ಗಡ್ಕರಿ ಮೂಲಕ ಮತ್ತೆ ಭೇಟಿ ಮಾಡಿದಾಗ ಬರಲು ಒಪ್ಪಿದರು. ಆದರೆ ಸೂಕ್ತ ರಕ್ಷಣೆ ಸಮಸ್ಯೆಯಿಂದ ದೇವನಹಳ್ಳಿ ಬದಲು ವಿಧಾನಸೌಧಕ್ಕೆ ಬಂದು ಒಂದು ಬಟನ್ ಒತ್ತುವ ಮೂಲಕ ಅಲ್ಲಿದಂಲೇ ವಿಮಾನ ನಿಲ್ದಾಣಕ್ಕೆ ಅಡಿಪಾಯ ಚಾಲನೆ ಹಾಕಿದರು. ಇದು ಚರಿತ್ರೆ, ಇತಿಹಾಸ ಎಂದರು.

    ಆಗ ವೀರಪ್ಪಮೊಯ್ಲಿ ಎಲ್ಲಿದ್ದರು ಎನ್ನುವುದೇ ನನಗೆ ಗೊತ್ತಿಲ್ಲ. ಹೀಗಾಗಿ ಜನರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಕರಾವಳಿಯವರು ಅತಿ ಬುದ್ದಿವಂತರು ಎಂಬುವುದನ್ನು ತೋರಿಸುವ ಪ್ರಯತ್ನ ಮಾಡಬೇಡಿ. ಚರಿತ್ರೆಗಳನ್ನ ತಿರುಚಿ ಬೇರೆ ವ್ಯಾಖ್ಯಾನ ನೀಡುವುದು ಸಾಧುವಲ್ಲ ಎಂದು ವೀರಪ್ಪ ಮೊಯ್ಲಿಗೆ ಟಾಂಗ್ ನೀಡಿದರು. ಕಳೆದ ಬಾರಿ ಕೇಂಪೇಗೌಡ ವಂಶಸ್ಥರಾದ ಬಚ್ಚೇಗೌಡರನ್ನ ಯಾವ ಕಾರಣಕ್ಕೆ ಸೋಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಚ್ಚೇಗೌಡರನ್ನ ಬಿಟ್ಟು ಎಲ್ಲಿಂದಲೋ ಬಂದವರನ್ನ ಎರಡನೇ ಸಲ ಗೆಲ್ಲಿಸಿದ್ದು, ಇದು ಈ ಮಣ್ಣಿಗೆ ಕಳಂಕ ಬಗೆದಂತೆ ಎಂದು ಬಣ್ಣಿಸಿದರು. ಈ ಬಾರಿಯಾದರು ಬಚ್ಚೇಗೌಡ ರನ್ನ ಗೆಲ್ಲಿಸಿ ಮೋದಿ ಕೈಯನ್ನ ಬಲಪಡಿಸುವಂತೆ ಮನವಿ ಮಾಡಿಕೊಂಡರು.

  • 2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    ಚಿಕ್ಕಬಳ್ಳಾಪುರ: ಕಳೆದ ಚುನಾವಣೆ ವೇಳೆ ಎಚ್.ಡಿ ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ಈ ಬಾರಿಯ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಈಗ ಮೃದು ಧೋರಣೆ ತೋರಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ಧ ಕೈವಾರ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಧ್ಯಮಗಳು ಈ ಬಾರಿ ನೀವು ದೇವೇಗೌಡರ ಬಗ್ಗೆ ಮೃದು ಧೋರಣೆ ತಾಳಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಕ್ಕೆ, ದೇವೇಗೌಡರು ಮಾಜಿ ಪ್ರಧಾನಿಗಳು ಹಾಗೂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಅವರು ದೊಡ್ಡವರು, ದೊಡ್ಡವರ ವಿಷಯ ನಮಗ್ಯಾಕೆ? ನಾವು ಅವರ ಮುಂದೆ ತುಂಬಾ ಸಣ್ಣವರು ಎಂದು ಹೇಳಿ ನಸುನಕ್ಕರು.

    ಈ ಬಾರಿ ಮೋದಿ ಅಲೆಯ ಜೊತೆಗೆ, ಕಳೆದ ಬಾರಿ ಸೋತಿರುವ ಅನುಕಂಪ, ಹಾಗೂ ಮೊಯ್ಲಿ ಯವರ ಸುಳ್ಳು ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿನ ಹಾದಿ ಸುಗಮವಾಗಿದೆ ಎಂದು ತಿಳಿಸಿದರು.

    ಈ ವೇಳೆ ಮಂಡ್ಯ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ಯಾ ಎನ್ನುವ ಪ್ರಶ್ನೆಗೆ, ನಾನು ಹೈಕಮಾಂಡಿನ ಜೊತೆ ಹೋಗಿ ಮಾತನಾಡಿಲ್ಲ. ಮಂಡ್ಯ ರಾಜಕೀಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಚಿಕ್ಕಬಳ್ಳಾಪುರದ ಬಗ್ಗೆ ಮಾತ್ರ ನನಗೆ ಗೊತ್ತು ಎಂದು ಹೇಳಿದರು.

    ಕಳೆದ ಬಾರಿ ಏನಾಗಿತ್ತು?
    ಕಳೆದ ಬಾರಿ ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

    ಕಳೆದ ಬಾರಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ದೇವೇಗೌಡ ವಿರುದ್ಧ ತುಟಿ ಬಿಚ್ಚಲಿಲ್ಲ.

    ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೆಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರಿಗೆ 346,339 ಲಕ್ಷ ಮತ ಪಡೆದಿದ್ದರು.