Tag: Baby

  • ಕೊಪ್ಪಳದಲ್ಲಿ ಮತ್ತೊಂದು ವಿಚಿತ್ರ ಮಗು ಜನನ

    ಕೊಪ್ಪಳದಲ್ಲಿ ಮತ್ತೊಂದು ವಿಚಿತ್ರ ಮಗು ಜನನ

    ಕೊಪ್ಪಳ: ಇತ್ತೀಚೆಗಷ್ಟೇ ವಿಚಿತ್ರ ಮಗುವೊಂದು ಜನಿಸಿದ್ದ ಕಾರಣ ಸುದ್ದಿಯಾದ ಕೊಪ್ಪಳ ಇದೀಗ ಮತ್ತೆ ಇದೇ ವಿಚಾರದಲ್ಲಿ ಸುದ್ದಿಯಾಗಿದೆ.

    ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ವಿಲಕ್ಷಣ ಶಿಶು ಜನನವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮನ್ನೇರಾಳ ಗ್ರಾಮದ ಗಂಗವ್ವ ಗೌಡರ ಅನ್ನೋ ಮಹಿಳೆ ಶುಕ್ರವಾರದಂದು ಈ ಶಿಶುವಿಗೆ ಜನ್ಮ ನೀಡಿದ್ದು, ಮಗುವಿನ ತಲೆಯಲ್ಲಿ ಮಾಂಸ ಬೆಳೆಯುತ್ತಿದೆ.

    ಇತ್ತೀಚೆಗಷ್ಟೇ ಕುಷ್ಟಗಿ ತಾಲೂಕಿನ ಜುಮುಲಾಪೂರ ಗ್ರಾಮದ ಅನಸೂಯಮ್ಮ ಎಂಬವರು ವಿಚಿತ್ರ ಶಿಶುವಿಗೆ ಜನ್ಮ ನೀಡಿದ್ದರು. ಎರಡು ಕೆಜಿ ತೂಕದ ಹೆಣ್ಣು ಮಗುವಿನ ಕಿವಿ, ಮೂಗು, ಬಾಯಿ, ಕಣ್ಣು ಬೇರೆ ಬೇರೆ ಜಾಗದಲ್ಲಿ ಅಸಹಜವಾಗಿ ಇದ್ದು, ಜನರ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಶಿಶುವಿನ ತಲೆಯಲ್ಲಿ ನೀರು ತುಂಬಿ ದೊಡ್ಡ ಗಾತ್ರದಲ್ಲಿತ್ತು. ಹೆರಿಗೆ ಬಳಿಕ ಮಗುವಿನ ತಲೆ ಒಡೆದು ನೀರು ಹೊರಕ್ಕೆ ಬಂದು ಶಿಶು ಮೃತಪಟ್ಟಿತ್ತು.

    ಇದೀಗ ಗಂಗವ್ವ ಕೂಡ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಇಂತಹ ವಿಚಿತ್ರ ಶಿಶುಗಳ ಜಜನಕ್ಕೆ ಕಾರಣವೇನೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.

    ಇದನ್ನೂ ಓದಿ: ರಾಯಚೂರಿನಲ್ಲಿ ಕಣ್ರೆಪ್ಪೆಯೇ ಇಲ್ಲದ ಮಗು ಜನನ

    ಇದನ್ನೂ ಓದಿ: ಬೀದರ್: ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

  • ಪೋಷಕರ ನಿರ್ಲಕ್ಷ್ಯದಿಂದ ಬರೋಬ್ಬರಿ 4 ಗಂಟೆ ಕಾರೊಳಗಿದ್ದ 7 ತಿಂಗಳ ಮಗು ದುರ್ಮರಣ

    ಪೋಷಕರ ನಿರ್ಲಕ್ಷ್ಯದಿಂದ ಬರೋಬ್ಬರಿ 4 ಗಂಟೆ ಕಾರೊಳಗಿದ್ದ 7 ತಿಂಗಳ ಮಗು ದುರ್ಮರಣ

    ಡುಂಡ್ರುಮ್: ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುವುದು ಹೆತ್ತವರ ಆದ್ಯ ಕರ್ತವ್ಯ. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ಮಕ್ಕಳ ಪ್ರಾಣಕ್ಕೆ ಕುತ್ತು ಬರಬಹುದು ಅನ್ನೋದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ.

    ಹೌದು. ಹೆತ್ತವರ ಬೇಜಾಬ್ದಾರಿತನದಿಂದ 7 ತಿಂಗಳ ಪುಟ್ಟ ಹೆಣ್ಣುಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ವಿದೇಶದಲ್ಲಿ ನಡೆದಿದೆ.

    ನಡೆದಿದ್ದೇನು?: ಕೌಂಟಿಟಿಪ್ಪರಿಯಲ್ಲಿರುವ ಡುಂಡ್ರುಮ್‍ನ ಐರಿಶ್ ಗ್ರಾಮದ ದಂಪತಿ ಪಾಲ್ ಹಾಗೂ ಲೂಯಿಸ್ ಫೋಗಾರ್ಟಿ ನಿರ್ಲಕ್ಷ್ಯತನದಿಂದ ಇಂದು ತಮ್ಮ 7 ತಿಂಗಳ ಮಗುವನ್ನು ಕಳೆದುಕೊಂಡಿದ್ದಾರೆ.

    ಕೆಲಸದ ನಿಮಿತ್ತ ಮಗುವಿನೊಂದಿಗೆ ಹೊರಗೆ ಹೋಗಿದ್ದ ದಂಪತಿ ಮತ್ತೆ ಮನೆಗೆ ವಾಪಾಸ್ಸಾಗಿದ್ದಾರೆ. ಆದ್ರೆ ಮಗು ಕಾರಿನ ಹಿಂದಿನ ಸೀಟಿನಲ್ಲಿ ನಿದ್ರಿಸಿರುವುದರಿಂದ ಪೋಷಕರು ಮರೆತು ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಾರೆ. ಕಡು ಬಿಸಿಲಿನಲ್ಲಿ ಬರೋಬ್ಬರಿ 4 ಗಂಟೆಗಳ ಕಾಲ ಕಾರೊಳಗಿದ್ದ ಮಗು ಬಿಸಿಲಿನ ತಾಪ ಹಾಗೂ ಕಾರಿನ ಗ್ಲಾಸ್ ಕ್ಲೋಸ್ ಆಗಿದ್ದುದರಿಂದ ಉಸಿರಾಡಲು ಕಷ್ಟವಾಗಿ ಮೃತಪಟ್ಟಿದೆ.

    ಇತ್ತ ಸ್ವಲ್ಪ ಸಮಯದ ಬಳಿಕ ತಂದೆಗೆ ಮಗುವಿನ ನೆನಪಾಗಿದ್ದು, ಕೂಡಲೇ ಕಾರಿನ ಹತ್ತಿರ ಬಂದು ಮಗುವನ್ನು ಗಮನಿಸಿದ್ದಾರೆ. ಈ ವೇಳೆ ಮಗುವಿನ ಚಲವಲನದಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವುದರಿಂದ ಆತಂಕಗೊಂಡ ಹೆತ್ತವರು ಕೂಡಲೇ ಸ್ಥಳೀಯರನ್ನು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅಂತೆಯೇ ಸ್ಥಳೀಯರು ಅಂಬುಲೆನ್ಸ್‍ಗೆ ಕರೆ ಮಾಡಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ಮಗು ಮೃತಪಟ್ಟಿದೆ ಅಂತಾ ವೈದ್ಯರು ಘೋಷಿಸಿದ್ದರು.

    ದಂಪತಿಗೆ ಏಕೈಕ ಪುತ್ರಿಯಾಗಿದ್ದು, ಈಕೆ ಮೃತಪಟ್ಟಿರುವುದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಅವರದ್ದು ಉತ್ತಮ ಕುಟುಂಬವಾಗಿದ್ದು, ಅವರ ಬಗ್ಗೆ ಸ್ಥಳೀಯರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರ ಕುಟುಂಬದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಅಂದ್ರೆ ನಂಬಲು ಸಾಧ್ಯವಾಗುತ್ತಿಲ್ಲ ಅಂತಾ ಸ್ಥಳೀಯರೊಬ್ಬರು ಪತ್ರಿಕೆಯೊಂದಿಗೆ ತಿಳಿಸಿದ್ದಾರೆ. ಅಲ್ಲದೇ ಈ ದುರಂತದಿಂದ ನನಗೆ ತುಂಬಾ ನೋವಾಗಿದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ ಅಂತಾ ಅಂಬುಲೆನ್ಸ್ ವಕ್ತಾರರು ಕೂಡ ಕಂಬನಿ ಮಿಡಿದಿದ್ದಾರೆ.

  • ರೈಲ್ವೆ ಹಳಿಯ ಬಳಿ ಮನಕಲಕುವ ಘಟನೆ: ಮೃತಪಟ್ಟ ಅಮ್ಮನ ಎದೆಹಾಲು ಕುಡಿಯಲು ಯತ್ನಿಸಿತು ಕಂದಮ್ಮ

    ರೈಲ್ವೆ ಹಳಿಯ ಬಳಿ ಮನಕಲಕುವ ಘಟನೆ: ಮೃತಪಟ್ಟ ಅಮ್ಮನ ಎದೆಹಾಲು ಕುಡಿಯಲು ಯತ್ನಿಸಿತು ಕಂದಮ್ಮ

    ಭೋಪಾಲ್: ತನ್ನ ಅಮ್ಮ ಮೃತಪಟ್ಟಿದ್ದಾಳೆ ಅಂತಾ ತಿಳಿಯದ ಪುಟ್ಟ ಮಗುವೊಂದು ತಾಯಿಯ ಎದೆ ಹಾಲು ಕುಡಿಯಲು ಯತ್ನಿಸುತ್ತಿದ್ದ ಮನಕುಲಕುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಘಟನೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಫೋಟೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.

    ಏನಿದು ಘಟನೆ?: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿಂದ ಸುಮಾರು 250 ಕಿ.ಮೀ ದೂರದ ದಮೋಹ್ ಎಂಬಲ್ಲಿ ರೈಲ್ವೇ ಹಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಒಂದು ವರ್ಷದ ಪಟ್ಟ ಮಗುವೊಂದು ಕುಳಿತು ತನ್ನ ಅಮ್ಮನ ಎದೆ ಹಾಲು ಕುಡಿಯಲು ಪ್ರಯತ್ನಿಸುತ್ತಿತ್ತು. ತನ್ನ ತಾಯಿ ಕೊಟ್ಟಿರಬಹುದಾದ ಬಿಸ್ಕೆಟ್‍ವೊಂದನ್ನ ಕೂಡ ಮಗು ತಿನ್ನುತ್ತಿತ್ತು. ಇದನ್ನ ನೋಡಿದ ಕೆಲ ಪ್ರತ್ಯಕ್ಷದರ್ಶಿಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ರೈಲಿನಿಂದ ಕೆಳಗೆ ಬಿದ್ದು ಅಥವಾ ರೈಲು ಡಿಕ್ಕಿಯಾಗಿ ಮಹಿಳೆ ಸಾವನಪ್ಪಿರಬಹುದು ಅಂತಾ ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ತಾಯಿ ಮಗುವನ್ನು ಹಿಡಿದುಕೊಂಡಿದ್ದರಿಂದ ಮಗು ಬಚಾವಾಗಿರಬಹುದು ಎಂದು ಊಹಿಸಲಾಗಿದೆ. ಅಧಿಕಾರಿಗಳು ಹೇಳೋ ಪ್ರಕಾರ ರೈಲು ಡಿಕ್ಕಿಯಾದ ನಂತರ ತಾಯಿಗೆ ಕೆಲ ಕಾಲ ಪ್ರಜ್ಞೆ ಇದ್ದು, ತನ್ನ ಮಗುವಿಗೆ ಹಾಲುಣಿಸುವ ಪ್ರಯತ್ನ ಮಾಡಿರಬೇಕು ಎನ್ನಲಾಗಿದೆ.

    ಪೊಲೀಸರು ಹಾಗೂ ಅಧಿಕಾರಿಗಳು ತಾಯಿಯ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋದಾಗ ಮಗುವಿನ ಅಳು ಕಂಡು ಮಮ್ಮಲ ಮರುಗಿದ್ದಾರೆ.

    ಮತ್ತೊಂದು ದುರಂತ ಅಂದ್ರೆ ಮಗು ಮತ್ತು ಮೃತ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಅಲ್ಲಿ ಮಗುವನ್ನು ಸೇರಿಸಿಕೊಳ್ಳಲು ಕೇವಲ 10 ರೂ. ಕೊಟ್ಟು ಅಡ್ಮಿಶನ್ ಮಾಡಿಕೊಳ್ಳಲು ಯಾರೊಬ್ಬರೂ ಮುಂದೆ ಬಂದಿಲ್ಲ. ನಂತರ ವಾರ್ಡ್ ಬಾಯ್ ಹಣ ಕೊಟ್ಟಿದ್ದರಿಂದ ಮಗುವನ್ನ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಸದ್ಯ ಮಗು ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು, ಮಗುವಿನ ಕುಟುಂಬಸ್ಥರು ಅಥವಾ ಸಂಬಂಧಿಕರಾದ ಯಾರಾದ್ರೂ ಬರಬಹುದು ಎಂದು ಅಧಿಕಾರಿಗಳು ಎದುರುನೋಡುತ್ತಿದ್ದಾರೆ.

    ಮಹಿಳೆಯನ್ನ ಗುರುತಿಸಲು ನಡೆಸಿದ ಪ್ರಯತ್ನದಲ್ಲಿ ಪೊಲೀಸರಿಗೆ ಮಹಿಳೆಯ ಪಕ್ಕದಲ್ಲಿ ಬಿದ್ದಿದ್ದ ಪರ್ಸ್‍ವೊಂದು ಸಿಕ್ಕಿದೆ.

  • ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ

    ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ

    ಕೊಪ್ಪಳ: ವಿಲಕ್ಷಣ ಹೆಣ್ಣು ಮಗು ಜನನವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ ಘಟನೆ ಕೊಪ್ಪಳದ ಮುದೇನೂರಿನಲ್ಲಿ ನಡೆದಿದೆ.

    ಮುದೇನೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಜನಿಸಿದ ವಿಚಿತ್ರ ಮಗು ಕೆಲಕಾಲ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ರು. ಕುಷ್ಟಗಿ ತಾಲೂಕಿನ ಜುಮುಲಾಪುರ ಗ್ರಾಮದ ಬೀರಲಿಂಗಪ್ಪ ಬಳೂಟಗಿಯ ಪತ್ನಿ ಅನಸೂಯಮ್ಮ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಇದು ಇವರಿಗೆ ಮೊದಲ ಹೆರಿಗೆಯಾಗಿದ್ದು ವಿಲಕ್ಷಣ ಮಗು ಹುಟ್ಟಿದೆ.

    ಎರಡು ಕೆಜಿ ತೂಕದ ಹೆಣ್ಣು ಮಗುವಿನ ಕಿವಿ, ಮೂಗು, ಬಾಯಿ, ಕಣ್ಣು ಬೇರೆ ಬೇರೆ ಜಾಗದಲ್ಲಿ ಅಸಹಜವಾಗಿ ಇದ್ದು, ಜನರ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಶಿಶುವಿನ ತಲೆಯಲ್ಲಿ ನೀರು ತುಂಬಿ ದೊಡ್ಡ ಗಾತ್ರದಲ್ಲಿತ್ತು. ಹೆರಿಗೆ ಬಳಿಕ ಮಗುವಿನ ತಲೆ ಒಡೆದು ನೀರು ಹೊರಕ್ಕೆ ಬಂದು ಶಿಶು ಮೃತಪಟ್ಟಿದೆ. ತಾಯಿ ಆರೋಗ್ಯವಾಗಿದ್ದು ಯಾವುದೇ ತೊಂದರೆ ಇಲ್ಲ ಅಂತ ಆಸ್ಪತ್ರೆ ವೈದ್ಯರಾದ ಡಾ. ನೀಲಪ್ಪ ತಿಳಿಸಿದ್ದಾರೆ.

  • ಡೇಕೇರ್ ಸೆಂಟರ್‍ಗೆ ಮಕ್ಕಳನ್ನು ಸೇರಿಸೋ ಮೊದಲು ಈ ಸುದ್ದಿ ಓದಿ

    ಡೇಕೇರ್ ಸೆಂಟರ್‍ಗೆ ಮಕ್ಕಳನ್ನು ಸೇರಿಸೋ ಮೊದಲು ಈ ಸುದ್ದಿ ಓದಿ

    ಚಂಡೀಗಢ: ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ತಮ್ಮ ಪುಟ್ಟ ಮಕ್ಕಳನ್ನು ಡೇ ಕೇರ್ ಸೆಂಟರ್ ಗೆ ಸೇರಿಸೋದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಮಕ್ಕಳನ್ನು ಶಿಶುವಿಹಾರಕ್ಕೆ ಸೇರಿಸಿದ ತಂದೆ-ತಾಯಂದಿರುವ ಕೆಲವೊಂದು ಅನಾಹುತಗಳನ್ನು ಎದುರಿಸಿರೋ ಘಟನೆಗಳನ್ನು ಕೇಳಿದ್ದೇವೆ. ಅಂತೆಯೇ ಹರಿಯಾಣದ ಗುರುಗಾಂವ್ ನಲ್ಲಿರೋ ಡೇಕೇರ್ ಸೆಂಟರ್ ನಲ್ಲಿ ಭಾರೀ ಅನಾಹುತವೊಂದು ನಡೆದುಹೋಗಿದೆ.

    ಹೌದು. ಗುರುಗಾಂವ್ ನ 44ನೇ ಸೆಕ್ಟರ್ ನಲ್ಲಿರೋ ಫೋರ್ಟಿಸ್ ಮೆಮೋರಿಯಲ್ ಇನ್ಸಿಸ್ಟಿಟ್ಯೂಟ್ ಎಂಬ ಶಿಶು ವಿಹಾರ ಕೇಂದ್ರದಲ್ಲಿ ನೋಡಿಕೊಳ್ಳುವವರ ಅಜಾಗರೂಕತೆಯಿಂದಾಗಿ 9 ತಿಂಗಳ ಮುಗ್ಧ ಮಗು ತನ್ನ ಕೈಯ ಹೆಬ್ಬೆರಳನ್ನೇ ಕಳೆದುಕೊಂಡ ಘಟನೆ ನಡೆದಿದೆ. ಈ ದುರಂತ ಮೇ 19ರಂದು ನಡೆದಿದ್ದು, ಈ ಬಗ್ಗೆ ಮಗುವಿನ ತಾಯಿ ಭಾವ್ನಾ ರಸ್ತೋಗಿ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅನನ್ಯ ಕೈ ಬರಳು ಕಳೆದುಕೊಂಡ ಪುಟಾಣಿ. ಮಕ್ಕಳನ್ನು ನೋಡಿಕೊಳ್ಳುವಾಕೆ ಡೈಪರ್ ಬದಲಾಯಿಸುವ ವೇಳೆ ಅನನ್ಯ ಕೈ ಬಾತ್ ರೋಮ್ ಡೋರ್‍ಗೆ ಸಿಲುಕಿದೆ. ಪರಿಣಾಮ ಆಕೆಯ ಎಡಗೈ ಹೆಬ್ಬೆರಳು ಇಬ್ಭಾಗವಾಗಿದೆ. ಮಗಳ ಕೈಗೆ ಗಾಯವಾಗಿದ್ದರಿಂದ ಮನನನೊಂದ ಅನನ್ಯ ತಾಯಿ ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಶಿಶುವಿಹಾರ ಕೇಂದ್ರದಲ್ಲಿ ಮಕ್ಕಳನ್ನು ಸೇರಿಸೋ ಮುನ್ನ ಎರಡು ಬಾರಿ ಆಲೋಚನೆ ಮಾಡುವಂತೆ ತಿಳಿಸಿದ್ದಾರೆ.

    `ಮಗುವಿನ ಕೈ ಬೆರಳಿನ ಸರ್ಜರಿ ಒಂದು ಈಗಾಗಲೇ ಮುಗಿದಿದ್ದು, ಇನ್ನೊಂದು ಸರ್ಜರಿ ಗುರುವಾರ ನಡೆಯಲಿದೆ. ಹೀಗೆ ವಾರಕ್ಕೆ ಎರಡು ಸಲದಂತೆ ಆರು ವಾರಗಳವರೆಗೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ 16,000 ಕೊಟ್ಟು ಮಗುವನ್ನು ಡೇ ಕೇರ್ ಸೆಂಟರ್ ಗೆ ಸೇರಿಸಿದ್ದೇನೆ. ಈ ವೇಳೆ ಅಲ್ಲಿ ಒಳ್ಳೆಯ ಸಿಬ್ಬಂದಿ, ಸಿಸಿಟಿವಿ ಹಾಗೂ ಕೇಂದ್ರದ ಒಳಗಡೆ ಕ್ಲೀನ್ ಇದೆ. ಒಟ್ಟಿನಲ್ಲಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಭರವಸೆ ನಿಡಿದ್ದರು.

    ಆದ್ರೆ ಘಟನೆಯ ಬಗ್ಗೆ ಸಿಸಿಟಿ ದೇಶ್ಯಾವಳಿ ತೋರಿಸಿ ಅಂತಾ ಕೇಂದ್ರದ ಮಾಲೀಕರನ್ನು ಕೇಳಿದ್ರೆ ಅವರು ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ ಘಟನೆ ನಡೆದ ವೇಳೆ ಸಿಸಿಟಿವಿ ಅಚಾನಕ್ ಆಗಿ ಆಫ್ ಆಗಿತ್ತು. ಹೀಗಾಗಿ ಆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಅಂತಾ ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ನಿಜವಾಗಿ ಅಲ್ಲಿ ನಡೆದಿರುವ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಅಂತಾ ಮಗುವಿನ ತಾಯಿ ಆರೋಪಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತನ್ನ ಪೋಸ್ಟ್ ಮೂಲಕ ಪೊಲೀಸರನ್ನು ಆಗ್ರಹಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಹರಿಯಾಣದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮನವಿ ಮಾಡಿದ್ದಾರೆ. ಇನ್ನು ಪತ್ರಕರ್ತರಿಗೂ ಶಿಶು ಕೇಂದ್ರದ ಈ ದುರದೃಷ್ಟಕರ ಕಥೆಯನ್ನು ವರದಿ ಮಾಡುವಂತೆ ಕೇಳಿಕೊಂಡಿದ್ದಾರೆ.

    ಭಾನುವಾರ ಇವರು ಪೋಸ್ಟ್ ಪ್ರಕಟಿಸಿದ್ದು, ಈ ಪೋಸ್ಟನ್ನು 2 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

  • ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ.

    ನಂಜುಂಡ ಮತ್ತು ಸಿತಾರ ದಂಪತಿಯ ಪುತ್ರ ಸೂರ್ಯ ಎಂಬ ಬಾಲಕನೇ ಮೃತ ದುರ್ದೈವಿ. ಮಂಗಳವಾರ ರಾತ್ರಿ ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಹಾವು ಕಚ್ಚಿದೆ. ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಬಾಲಕ ಸೂರ್ಯ ಮೃತಪಟ್ಟಿದ್ದಾನೆ.

    ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

  • 3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್ ಪತ್ರಿಕೆ ವರದಿ ಮಾಡಿದೆ.

    ರಸ್ತೆಯಲ್ಲಿ ಇತರೆ ಬಾಲಕಿಯರೊಂದಿಗೆ ಚೆನ್ ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲರೂ ಕಟ್ಟಡವೊಂದರ ಬಳಿ ನಿಂತು ಮೇಲೆ ನೋಡುತ್ತಿರ್ತಾರೆ. ಕೆಲವು ಸೆಕೆಂಡ್‍ಗಳ ಕಾಲ ಚೆನ್ ಕೂಡ ಅಲ್ಲೇ ನಿಂತು ನೋಡಿದ್ದಾಳೆ. ನಂತರ ತನ್ನ ಎರಡೂ ಕೈ ಚಾಚಿ ಕಟ್ಟಡದ ಬಳಿ ಓಡುತ್ತಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಗು ಕೆಳಗೆ ಬೀಳುತ್ತದೆ. ನಂತರ ಚೆನ್ ಓಡಿಹೋಗಿ ಮಗುವನ್ನ ಎತ್ತಿಕೊಂಡು ಗಾಯವೇನಾದ್ರೂ ಆಯಿತಾ ಅಂತ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

    ಕೆಳಗೆ ಬೈಕ್‍ಗಳು ನಿಂತಿದ್ದರಿಂದ ಅದರ ಮೇಲೆ ಮೊದಲು ಬಿದ್ದು ನಂತರ ಮಗು ನೆಲಕ್ಕೆ ಬಿದ್ದಿದ್ದರಿಂದ ದೊಡ್ಡ ಅನಾಹುತವಾಗೋದು ತಪ್ಪಿದೆ. ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು ತನ್ನ ತಾಯಿಗಾಗಿ ಹುಡುಕಾಡುತ್ತಾ ಕಿಟಿಕಿಯ ಮೇಲೆ ಹತ್ತಿದ್ದು, ಈ ವೇಳೆ ಕೆಳಗೆ ಬಿದ್ದಿದೆ. ಘಟನೆ ನಡೆದ ನಂತರ ಮಗುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಅಂತ ವೈದ್ಯರು ಹೇಳಿರೋದಾಗಿ ವರದಿಯಾಗಿದೆ.

    https://www.youtube.com/watch?v=oiWpN-4fKus

  • ಬಾಗಲಕೋಟೆ: ಮರದ ಕೆಳಗೆ ಮಲಗಿದ್ದಾಗ ಜೆಸಿಬಿ ಹರಿದು ಮಗು ಸಾವು

    ಬಾಗಲಕೋಟೆ: ಮರದ ಕೆಳಗೆ ಮಲಗಿದ್ದಾಗ ಜೆಸಿಬಿ ಹರಿದು ಮಗು ಸಾವು

    ಬಾಗಲಕೋಟೆ: ಜೆಸಿಬಿ ಹರಿದು 1 ವರ್ಷ 4 ತಿಂಗಳ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ.

    ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ ಕೀರ್ತಿ ಮೃತ ದುರ್ದೈವಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ.

    ಸ್ಥಳಕ್ಕೆ ಮುಧೋಳ ಪಿಎಸ್‍ಐ ಸಂತೋಷ ಹಳ್ಳೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 ಗಂಟೆ ಶಸ್ತ್ರಚಿಕಿತ್ಸೆ,  6 ಬಾರಿ ಹೃದಯಾಘಾತದ ಬಳಿಕ ಬದುಕುಳಿದ 45 ದಿನದ ಮಗು!

    12 ಗಂಟೆ ಶಸ್ತ್ರಚಿಕಿತ್ಸೆ, 6 ಬಾರಿ ಹೃದಯಾಘಾತದ ಬಳಿಕ ಬದುಕುಳಿದ 45 ದಿನದ ಮಗು!

    ಮುಂಬೈ: ಸಾಮಾನ್ಯವಾಗಿ ಹೃದಯಾಘಾತವಾಗಿ ಬದುಕುಳಿದ ಮಂದಿ ತುಂಬಾ ವಿರಳ. ಅಂತದ್ದರಲ್ಲಿ 6 ಬಾರಿ ಹೃದಯಾಘಾತವಾಗಿ 45 ದಿನದ ಪುಟ್ಟ ಮಗುವೊಂದು ಬದುಕುಳಿದ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಮುಂಬೈನ ಕಲ್ಯಾಣ್ ನಿವಾಸಿಗಳಾದ ವಿಶಾಖ ಹಾಗೂ ವಿನೋದ್ ದಂಪತಿಯ ಪುತ್ರಿ ವಿಧಿಶಾ ಸತತ 12 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಬದುಕುಳಿದ ಪುಟಾಣಿ.

    45 ದಿನದ ಈ ಪುಟ್ಟ ಕಂದಮ್ಮನಿಗೆ ಮೊದಲು ತಾಯಿಯ ಹಾಲು ಕುಡಿದ ತಕ್ಷಣವೇ ವಾಂತಿಯಾಗುತ್ತಿತ್ತು. ಅಲ್ಲದೇ ಕೂಡಲೇ ಪ್ರಜ್ಞೆ ತಪ್ಪುತ್ತಿತ್ತು. ಎಚ್ಚರಿಸಿದ್ರೂ ಮತ್ತೆ ಮತ್ತೆ ಹಾಗೇ ಆಗುತ್ತಿತ್ತು. ಈ ಘಟನೆ ನಮ್ಮನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಸ್ಥಳೀಯ ನರ್ಸಿಂಗ್ ಹೋಂ ಗೆ ಮಗುವನ್ನು ಕರೆತೆರಲಾಯಿತು. ಆದ್ರೆ ಅಲ್ಲಿನ ವೈದ್ಯರು ಆಕೆಯನ್ನು ಮುಂಬೈನ ಬಿಜೆ ವಾಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ರು. ಅಂತೆಯೇ ಆಕೆಯನ್ನು ಪರೀಕ್ಷಿಸಿದ ಅಲ್ಲಿನ ತಜ್ಞ ವೈದ್ಯ ಡಾ.ಬಿಸ್ವಾ ಪಂಡಾ ಹೃದಯದ ತೊಂದರೆ ಇರುವುದಾಗಿ ಪತ್ತೆ ಮಾಡಿದ್ದಾರೆ. ಬಳಿಕ ಮಾರ್ಚ್ 14ರಂದು 12 ಗಂಟೆಗಳ ಕಾಲ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಸರ್ಜರಿ ಬಳಿಕ 51 ದಿನಗಳ ಕಾಲ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ 6 ಬಾರಿ ಮಗುವಿಗೆ ಹೃದಯಾಘಾತವಾಗುವ ಹಂತಕ್ಕೆ ತಲುಪಿದ್ಳು. ಒಂದು ಬಾರಿ ಆಕೆಗೆ ಹೃದಯಘಾತವಾಗಿ ಚೇತರಿಕೆ ಕಾಣಲು ಆಕೆಗೆ 15 ನಿಮಿಷಗಳೇ ಬೇಕಾಗಿತ್ತು ಅಂತಾ ವೈದ್ಯರು ಹೇಳಿದ್ದಾರೆ.

    ಮಗುವಿನ ಚಿಕಿತ್ಸೆಗೆ 5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು ಆಸ್ಪತ್ರೆಯ ಶುಲ್ಕ ಕಟ್ಟಲು ನೆರವಾಗಿದ್ದಾರೆ. ಹಾಗೂ ಮಗುವಿನ ಹತ್ತವರಾದ ವಿಶಾಖಾ ಮತ್ತು ವಿನೋದ್ ಈಗಾಗಲೇ 25,000 ರೂ. ಅನ್ನು ಆಸ್ಪತ್ರೆಗೆ ನೀಡಿದ್ದಾರೆ.

    ವಿಧಿಶಾಗೆ ಈಗ ನಾಲ್ಕು ತಿಂಗಳಾಗಿದ್ದು, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾಳೆ. ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಲಿದ್ದಾಳೆ ಅಂತಾ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

  • ಭಾರೀ ಮಳೆಯಿಂದ ಮನೆಗೆ ನೀರು ನುಗ್ಗಿ 4 ತಿಂಗಳ ಮಗು ಸಾವು!

    ಭಾರೀ ಮಳೆಯಿಂದ ಮನೆಗೆ ನೀರು ನುಗ್ಗಿ 4 ತಿಂಗಳ ಮಗು ಸಾವು!

    ಮೈಸೂರು: ಮೈಸೂರಿನ ಟಿ. ನರಸೀಪುರದ ಕೊಳಚೆ ಪ್ರದೇಶವಾದ ದಾವಣಗೆರೆ ಕಾಲೋನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ 4 ತಿಂಗಳ ಹಸುಗೂಸು ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.

    ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ ಗಂಡು ಮಗು ಮೃತ ದುರ್ದೈವಿ. ರಾತ್ರಿ ಏಕಾಏಕಿ ಜೋರಾಗಿ ಮಳೆ ಸುರಿದಿದ್ದು, ಜೋಪಡಿಯಂಥ ಮನೆಗೆ ನೀರು ನುಗ್ಗಿ ಹಸುಗೂಸು ಮೃತಪಟ್ಟಿದೆ. ಇದೇ ರೀತಿ ಆ ಏರಿಯಾದಲ್ಲಿನ ಎಲ್ಲಾ ಮನೆಗಳಿಗೂ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಈ ಪ್ರದೇಶದಲ್ಲಿ 36 ಕುಟುಂಬವಿದ್ದು, 150 ಜನರು ವಾಸಿಸುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಇದೇ ಪ್ರದೇಶದಲ್ಲಿ ಇವರೆಲ್ಲಾ ವಾಸವಿದ್ದು ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸುವಲ್ಲೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಳೆದ ವರ್ಷ ಇದೇ ರೀತಿಯ ಮಳೆ ಸಂದರ್ಭದಲ್ಲಿ ಹೆಗ್ಗಣಗಳು ಮನೆಗೆ ನುಗ್ಗಿ ಮಕ್ಕಳ ಕೈ ಬೆರಳು, ಕಾಲಿನ ಬೆರಳನ್ನು ತುಂಡರಿಸಿದ್ದವು.