Tag: Baby

  • ಸರಿಯಾದ ಸಮಯಕ್ಕೆ ಸಿಗದ ಅಂಬುಲೆನ್ಸ್ – ನವಜಾತ ಶಿಶು ಜೊತೆ ನಟಿ ಸಾವು

    ಸರಿಯಾದ ಸಮಯಕ್ಕೆ ಸಿಗದ ಅಂಬುಲೆನ್ಸ್ – ನವಜಾತ ಶಿಶು ಜೊತೆ ನಟಿ ಸಾವು

    ಮುಂಬೈ: ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದ್ದಕ್ಕೆ ನವಜಾತ ಶಿಶು ಜೊತೆ ಮರಾಠಿ ನಟಿ ಮೃತಪಟ್ಟ ಘಟನೆ ಭಾನುವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ.

    ಪೂಜಾ ಜುಂಜರ್(25) ಮೃತಪಟ್ಟ ನಟಿ. ಪೂಜಾ ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡಿದೆ. ಹೀಗಾಗಿ ವೈದ್ಯರು ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಸಿಗದ್ದಕ್ಕೆ ಪೂಜಾ ಮೃತಪಟ್ಟಿದ್ದಾಳೆ.

    ಅಕ್ಟೋಬರ್ 20 ಬೆಳಗ್ಗೆ 6.30ಕ್ಕೆ ಮುಂಬೈಯಿಂದ 590ಕಿ.ಮೀ ದೂರದಲ್ಲಿರುವ ಮರಾಠ್‍ವಾಡಾದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಮೊದಲು ಪೂಜಾಳನ್ನು ಗೋರೆಗಾಂವ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಭಾನುವಾರ ನಸುಕಿನ ಜಾವ ಸುಮಾರು 2 ಗಂಟೆಗೆ ಪೂಜಾ ಮಗುವಿಗೆ ಜನ್ಮ ನೀಡಿದ್ದರು ಎಂದಿದ್ದಾರೆ.

    ಪೂಜಾ ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಶಿಶು ಮೃತಪಟ್ಟಿದೆ. ವೈದ್ಯರು ಪೂಜಾಳನ್ನು ಗೋರೆಗಾಂವ್‍ನಿಂದ 40 ಕಿ.ಮೀ ದೂರದಲ್ಲಿ ಇರುವ ಹಿಂಗೋಲಿ ಸಿವಿಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಆಕೆಯ ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.

    ವೈದ್ಯರ ಮಾತನ್ನು ಕೇಳಿ ಕುಟುಂಬಸ್ಥರು ಅಂಬುಲೆನ್ಸ್ ಗಾಗಿ ಸಾಕಷ್ಟು ಹುಡುಕಾಡಿದ್ದಾರೆ. ಬಳಿಕ ಪೂಜಾಳನ್ನು ಸಿವಿಲ್ ಆಸ್ಪತ್ರೆಗೆ ತಲುಪಿಸಲು ಕುಟುಂಬಸ್ಥರು ಖಾಸಗಿ ಅಂಬುಲೆನ್ಸ್ ತರುವಲ್ಲಿ ಸಫಲರಾದರು. ಆದರೆ ಅಷ್ಟರಲ್ಲಿ ಪೂಜಾ ಮೃತಪಟ್ಟಿದಾಳೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪೂಜಾ ಸಂಬಂಧಿಕರ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ಪೂಜಾ ಎರಡು ಮರಾಠಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾಳೆ.

  • ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಬೆಂಗಳೂರು: ಮಂಗಳ ಮುಖಿಯರು ಎಂದರೆ ಸಾಕು ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ಟ್ರೈನಿನಲ್ಲಿ ಹಣಕ್ಕಾಗಿ ಕಾಡಿಸೋರು ಎಂದು ಹೆಚ್ಚು ಜನರು ಮೂಗು ಮುರಿಯುತ್ತಾರೆ. ಅದೆಷ್ಟೋ ಜನ ತೃತೀಯ ಲಿಂಗಿಗಳಾಗಿ ಹುಟ್ಟಿದ್ದೇ ಶಾಪ ಎಂದುಕೊಳ್ಳುತ್ತಾರೆ. ಇಂಥವರ ನಡುವೆ ಮಂಗಳಮುಖಿಯೊಬ್ಬರು ತಾಯಿಯಾಗಿದ್ದಾರೆ.

    ಮುದ್ದು ಪುಟಾಣಿ ಮಂಗಳಮುಖಿಯಾದ ಡಾ. ಅಕ್ಕೈ ಪದ್ಮಶಾಲಿ ಹಾಗೂ ವಾಸು ದಂಪತಿ ಬಾಳಲ್ಲಿ ಹೊಸ ಬೆಳಕು ತಂದಿದೆ. ಈ ಅಕ್ಕೈ ತೃತೀಯ ಲಿಂಗಿಯಾಗಿದ್ದು, ಕಾನೂನಿನ ಪ್ರಕಾರ ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ತಾಯ್ತನದ ಸಿಹಿ ಅಪ್ಪುಗೆಯನ್ನು ಅನುಭವಿಸುತ್ತಿದ್ದಾರೆ.

    ಮೊದಲು ಗಂಡಾಗಿ ಹುಟ್ಟಿ, ನಂತರ ಅಕ್ಕೈ ಅವಳಾಗಿ ಬದಲಾದರು. ತದನಂತ್ರ ವಾಸು ಎಂಬವರನ್ನು ಮದುವೆಯಾದರು. ಆದರೆ ಈ ದಂಪತಿ ಮಗುವನ್ನು ಹೊಂದಬೇಕು, ತಮ್ಮ ವಂಶೋದ್ಧಾರಕನನ್ನು ಹೊಂದಬೇಕೆಂಬ ಮಹಾದಾಸೆಯಿತ್ತು. ಹೀಗಾಗಿ ಅಕ್ಕೈ ಅನಾಥಾಶ್ರಮಗಳಲ್ಲಿ ಮಗು ದತ್ತು ತೆಗೆದುಕೊಳ್ಳಲು ಹೋದಾಗ, ಕೊಂಕು ಮಾತುಗಳನ್ನು ಎದುರಿಸಿದ್ದರು.

    ಕೊಂಕು ಮಾತುಗಳಿಗೆ ಹಾಗೂ ಯಾವುದಕ್ಕೂ ಎದೆಗುಂದದೆ ಕುಟುಂಬದ ಪರಿಚಿತರೊಬ್ಬರಿಂದ ಮಗು ದತ್ತು ಪಡೆದು, ಸಮಾಜಮುಖಿ ದಾರಿಯತ್ತ ಹೆಜ್ಜೆ ಹಾಕಿದ್ದಾರೆ. ಸಮಾಜಕ್ಕೆ ಈ ಮಗುವನ್ನು ಸತ್ಪ್ರಜೆಯಾಗಿ ರೂಪಿಸುತ್ತೇವೆ ಎಂದು ಹೇಳಿದ್ದಾರೆ.

  • ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿ ಆಗಿದ್ದೇನೆ ಎಂದು ಹೇಳಿದ್ದಾರೆ.

    ರಾಧಿಕಾ ಪಂಡಿತ್ ಭಾನುವಾರ ತಮ್ಮ ಸ್ನೇಹಿತರ ಜೊತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ಮಂಗಳವಾರ ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಇಂದು ಕಾರ್ಯಕ್ರಮದ ಹಲವು ಫೋಟೋಗಳನ್ನು ಶೇರ್ ಮಾಡಿ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ರಾಧಿಕಾ, ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದೇನೆ. ಈಗಾಗಲೇ ನಾವು ಟೇಬಲ್‍ಗಳನ್ನು ಬದಲಾಯಿಸುತ್ತಿದ್ದೇವೆ ಹಾಗೂ ಸಾಕಷ್ಟು ಬಟ್ಟೆಗಳನ್ನು ಕೂಡ ತೆಗೆದುಕೊಳ್ಳುತ್ತಿದ್ದೇವೆ. ಐರಾ ಹುಟ್ಟಿದ ಸಮಯದಲ್ಲಿ ನಾವು ಈಗಾಗಲೇ ಎಲ್ಲವನ್ನು ನೋಡಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್ ನಿಂದ ತುಂಬಿರುತ್ತೆ. ಅಲ್ಲದೆ ನಾನು ಈಗ ಹೆಚ್ಚು ಸಮಯ ಎಚ್ಚರವಾಗಿರುವುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ನನ್ನ ಸೇಹಿತರು ಸೀಮಂತ ಕಾರ್ಯಕ್ರಮವನ್ನು ‘ಬೀ'(ಜೋನುನೊಣ) ಥೀಮ್‍ನಲ್ಲಿ ಆಯೋಜಿಸಿದ್ದರು. ಈ ಬಾರಿ ಸುತ್ತಮುತ್ತ ಆಗುತ್ತಿರುವುದು ನನಗೆ ಹೆಚ್ಚು ಪರಿಚಿತ ಭಾವನೆ ತರಿಸುತ್ತಿದೆ. ಏಕೆಂದರೆ ನಾನು ಈಗಾಗಲೇ ಈ ಅನುಭವವನ್ನು ಪಡೆದಿದ್ದೇನೆ. ನಾನು ಏನನ್ನು ನಿರೀಕ್ಷಿಸಬೇಕೆಂದು ತಿಳಿದಿದ್ದರಿಂದ ನಾನು ಅದನ್ನು ಸುಲಭವಾಗಿ ಕಂಡುಕೊಂಡೆ ಮತ್ತು ನನ್ನ ಗಮನವನ್ನು ಬೇರೆಡೆಗೆ ಇರಿಸಲು ನನ್ನ ಮಗಳು ಐರಾ ಇದ್ದಳು ಎಂದು ಹೇಳಿದ್ದಾರೆ.

    ಭಾನುವಾರದ ಸೀಮಂತ ಕಾರ್ಯಕ್ರಮ ನನಗೆ ಸರ್ಪ್ರೈಸ್ ಆಗಿತ್ತು. ಮೊದಲ ಬಾರಿ ಗರ್ಭಿಣಿಯಾದಾಗ ಮಾತ್ರ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತಾರೆ. ಎರಡನೇ ಬಾರಿಗೆ ಗರ್ಭಿಣಿ ಆಗಿದ್ದಾಗ ನಾನು ಇದನ್ನು ಮಿಸ್ ಮಾಡಿಕೊಳ್ಳಬಾರದೆಂದು ನನ್ನ ಸ್ನೇಹಿತರೇ ಈ ಸರ್ಪ್ರೈಸ್ ಪ್ಲಾನ್ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ‘ಮಮ್ಮಿ ಟು ಬೀ’ ಎಂದು ಹೆಸರಿಡಲಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣವನ್ನು ಥೀಮ್ ಮಾಡಲಾಗಿತ್ತು ಎಂದು ರಾಧಿಕಾ ತಿಳಿಸಿದ್ದಾರೆ.

    ನನ್ನ ಸ್ನೇಹಿತರೇ ನನಗೆ ನಿಗದಿಪಡಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ಹೊಸ ಗೌನ್ ನೀಡಿದ್ದರು. ಅವರೇ ನನಗೆ ಹೇರ್ ಸ್ಟೈಲ್ ಮಾಡಿ ಮೇಕಪ್ ಮಾಡಿದ್ದರು. ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಹಲವು ವಿಭಿನ್ನ ಆಟಗಳನ್ನು ಆಯೋಜಿಸಲಾಗಿತ್ತು. ಮೊದಲು ಪಿಂಗ್‍ಪಾಂಗ್ ಚೆಂಡನ್ನು ನೇತು ಹಾಕಿದ್ದ ಡೈಪರೊಳಗೆ ಹಾಕಬೇಕಿತ್ತು. ಅಲ್ಲದೆ ಕಣ್ಣಿಗೆ ಬಟ್ಟೆ ಕಟ್ಟಿ ಗೊಂಬೆಗೆ ಡೈಪರ್ ಹಾಕಬೇಕಿತ್ತು. ಈ ಕಾರ್ಯಕ್ರಮದಲ್ಲಿ ನನ್ನ ಎಲ್ಲ ಸ್ನೇಹಿತೆಯರು ಇದ್ದರು. ಅಲ್ಲದೆ ಎಲ್ಲರಗಿಂತ ಕಿರಿಯ ವ್ಯಕ್ತಿ ನನ್ನ ಮಗಳು ಐರಾ ಕೂಡ ಇದ್ದಳು ಎಂದರು.

  • ಒಂದು ರೂಪಾಯಿಯಲ್ಲಿ ರೈಲ್ವೇ ಆಸ್ಪತ್ರೆಯಲ್ಲಿ ಹೆರಿಗೆ

    ಒಂದು ರೂಪಾಯಿಯಲ್ಲಿ ರೈಲ್ವೇ ಆಸ್ಪತ್ರೆಯಲ್ಲಿ ಹೆರಿಗೆ

    ಮುಂಬೈ: ಮಹಾರಾಷ್ಟ್ರದ ಥಾಣೆ ರೈಲ್ವೇ ನಿಲ್ದಾಣದ ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿಯಲ್ಲಿ ಹೆರಿಗೆ ಮಾಡಿಸಲಾಗಿದೆ.

    ರಾಯಗಢ ಜಿಲ್ಲೆಯ ಸಮೀಪದ ಕರ್ಜತ್‍ನಿಂದ 29 ವರ್ಷದ ತುಂಬು ಗರ್ಭಿಣಿ ಸುಭಂತಿ ಪಾತ್ರಾ ಮುಂಬೈಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಸುಮಾರು 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಸುಭಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ರೈಲ್ವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

    ಮಾರ್ಗ ಮಧ್ಯೆ ಥಾಣೆ ರೈಲ್ವೇ ನಿಲ್ದಾಣಕ್ಕೆ ರೈಲು ಬಂದು ನಿಲ್ಲುತ್ತಿದ್ದಂತೆ ಸುಭಂತಿ ಪಾತ್ರಾರನ್ನು 1 ರೂ. ಕ್ಲಿನಿಕ್‍ಗೆ ದಾಖಲಿಸಿದರು. ಕ್ಲಿನಿಕ್‍ಗೆ ಸೇರಿಸಿ 15 ನಿಮಿಷದೊಳಗೆ ಸುಭಂತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ಹೆರಿಗೆಯಾದ ಬಳಿಕ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

    ಥಾಣೆ ರೈಲ್ವೇ ನಿಲ್ದಾಣದಲ್ಲಿರುವ 1 ರೂ. ಕ್ಲಿನಿಕ್ ಅನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಈ ಕ್ಲಿನಿಕ್‍ನಲ್ಲಿ ಇದುವರೆಗೂ 10 ಮಂದಿಗೆ ಹೆರಿಗೆ ಮಾಡಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿರುವ ಒಂದು ರೂಪಾಯಿ ಆಸ್ಪತ್ರೆಗೆ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

  • ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಶ್ರುತಿ ತಮ್ಮ ಮಗಳ ನಾಮಕರಣವನ್ನು ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಜೊತೆ ಮಾಡಿದ್ದಾರೆ. ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ.

    ಸೋಮವಾರ ನಾಮಕರಣ ಕಾರ್ಯಕ್ರಮ ನಡೆದಿದ್ದು, ಶ್ರುತಿ ಹಾಗೂ ರಾಮ್ ತಮ್ಮ ಮಗಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ. ಶ್ರುತಿ ಈವರೆಗೂ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಈಗ ರಾಮ್ ಪೋಸ್ಟ್ ಮಾಡಿದ ಫೋಟೋದಲ್ಲೂ ಮಗುವಿನ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಮಗಳ ಫೋಟೋ ರಿವೀಲ್ ಮಾಡಿ ಎಂದು ಶ್ರುತಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ತಮ್ಮ ಮಗಳ ವಿಡಿಯೋ ಶೇರ್ ಮಾಡಿ, “ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯಬಹುದು. ಒಂದು ದಿನ ನಾನು ಬಿಗಿ ಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಆದರೆ ಇಂದು ಈ ಕಾಲುಗಳು ಸಂತೋಷವಾಗಿದೆ. ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಕಳೆದಿದ್ದೇನೆ. ಈ ರೀತಿಯ ಪ್ರೀತಿಯನ್ನು ಎಂದಿಗೂ ಕಂಡಿರಲಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ಶ್ರುತಿ ಹರಿಹರನ್ ಸದ್ಯ ಕೇರಳದಲ್ಲಿದ್ದು, ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

  • ವೃದ್ಧನಿಂದ ಯುವತಿ ಮೇಲೆ ರೇಪ್- ನವಜಾತ ಶಿಶುವನ್ನು ಬೀದಿಗೆ ಬಿಸಾಕಿದ ಪಾಪಿ

    ವೃದ್ಧನಿಂದ ಯುವತಿ ಮೇಲೆ ರೇಪ್- ನವಜಾತ ಶಿಶುವನ್ನು ಬೀದಿಗೆ ಬಿಸಾಕಿದ ಪಾಪಿ

    – ಈ ಹಿಂದೆಯೂ ಮಗುವೊಂದನ್ನ ಬೀದಿಗೆ ಬಿಟ್ಟಿದ್ದ ನೀಚ!
    – ಮಗಳ ಹೆರಿಗೆ ವಿಷಯ ಮುಚ್ಚಿಟ್ಟಿದ್ದ ತಾಯಿಯೂ ಅರೆಸ್ಟ್

    ಧಾರವಾಡ: 60 ವರ್ಷದ ವೃದ್ಧ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ ಆಕೆಗೆ ಹುಟ್ಟಿದ್ದ ಮಗುವನ್ನ ಬೀದಿಗೆ ಬಿಸಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹಿರೇಮಲ್ಲಿಗವಾಡ ಗ್ರಾಮದ ಪೀರಪ್ಪ ಕುಂಬಾರಕೊಪ್ಪ ಅಮಾನವೀಯ ಕೃತ್ಯ ಎಸಗಿದ ಪಾಪಿ. ಅದೇ ಗ್ರಾಮದ ಯುವತಿಯ ಮೇಲೆ ಪೀರಪ್ಪ ನಿರಂತರ ಅತ್ಯಾಚಾರ ಎಸಗಿದ್ದಾನೆ. ಯುವತಿಗೆ ಹುಟ್ಟಿದ ನವಜಾತ ಶಿಶುವನ್ನು ಬೀದಿಗೆ ಬಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪೀರಪ್ಪ ಯುವತಿಯ ಮೇಲೆ ಸುಮಾರು ವರ್ಷಗಳಿಂದ ಅತ್ಯಾಚಾರ ಎಸಗುತ್ತಾ ಬಂದಿದ್ದ. ಪರಿಣಾಮ ಯುವತಿ 2018ರಲ್ಲಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಗೆ ಹೋದರೆ ತನ್ನ ಕೃತ್ಯ ಬಯಲಾಗುತ್ತದೆ ಎಂದು ಅರಿತಿದ್ದ ಪೀರಪ್ಪ ಯುವತಿಯನ್ನು ಎಲ್ಲಿಗೂ ಹೋಗದಂತೆ ಬೆದರಿಸಿದ್ದ. ಯುವತಿ ಕೆಲ ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹೆರಿಗೆಯನ್ನು ಸಂತ್ರಸ್ತೆಯ ತಾಯಿ ಬಸವ್ವ ಗೌಡರ ಮನೆಯಲ್ಲಿ ಮಾಡಿಸಿದ್ದಳು.

    ಕ್ರೂರಿ ಪೀರಪ್ಪ ಯುವತಿಯಿಂದ ನವಜಾತ ಶಿಶುವನ್ನು ಕಿತ್ತುಕೊಂಡು ಧಾರವಾಡ ಬೈಪಾಸ್ ರಸ್ತೆ ಪಕ್ಕದಲ್ಲಿ ಇಟ್ಟು ಬಂದಿದ್ದ. ಈ ವಿಚಾರವನ್ನು ಯಾರ ಮುಂದೆಯೂ ಹೇಳದಂತೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಬಸವ್ವಳಿಗೆ ಕೊಲೆ ಬೆದರಿಕೆ ಹಾಕಿದ್ದ. ಮಗು ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಹೋಗಿ ನೋಡಿದ್ದ ಕೆಲವರು ಶಿಶುವನ್ನು ಎತ್ತಿಕೊಂಡು ಬಂದು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿಂದೆಯೂ ಅದೇ ಜಾಗದಲ್ಲಿ ಮಗು ಸಿಕ್ಕಿದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು.

    ಈ ಸಂಬಂಧ ಧಾರವಾಡ ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು. ಸುತ್ತಮುತ್ತಲಿನ ಗ್ರಾಮದ ಆಶಾ ಕಾರ್ಯಕರ್ತೆಯರಿಂದ ಗರ್ಭಿಣಿ ಹಾಗೂ ಬಾಣಂತಿಯರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅಷ್ಟೇ ಅಲ್ಲದೆ ಗ್ರಾಮಗಳಿಗೆ ಮಫ್ತಿ ಪೊಲೀಸರನ್ನು ಕಳುಹಿಸಲಾಗಿತ್ತು. ಆಗ ಪೀರಪ್ಪನ ಕೃತ್ಯ ಬಯಲಿಗೆ ಬಂದಿತ್ತು. ತಕ್ಷಣವೇ ಪ್ಲಾನ್ ರೂಪಿಸಿದ ಅಧಿಕಾರಿಗಳು, ಓರ್ವ ಪೊಲೀಸ್ ಪೇದೆ ಹಾಗೂ ಮಹಿಳಾ ಪೇದೆ ಮನೆ ಕೆಲಸ ಮಾಡುವವರಂತೆ ಹಿರೇಮಲ್ಲಿಗವಾಡ ಗ್ರಾಮಕ್ಕೆ ಕಳುಹಿಸಿದ್ದರು. ಅವರ ಮೂಲಕ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

    ಸಂತ್ರಸ್ತ ಯುವತಿಗೆ ಮೂರು ವರ್ಷಗಳ ಹಿಂದೆಯೂ ಒಂದು ಮಗು ಹುಟ್ಟಿತ್ತು. ಅದನ್ನು ಕೂಡ ಪೀರಪ್ಪ ರಸ್ತೆ ಪಕ್ಕಕ್ಕೆ ಇಟ್ಟು ಬಂದಿದ್ದ. ಆ ಮಗು ಈಗ ಬಾಲ ಮಂದಿರದಲ್ಲಿದೆ. ಹೀಗಾಗಿ ಎರಡೂ ಮಕ್ಕಳ ರಕ್ತವನ್ನು ಡಿಎನ್‍ಎಗೆ ಕಳಿಸಲಾಗಿದೆ.

    ಆರೋಪಿ ಪೀರಪ್ಪನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷೆಸ್‍ಗಳ ಅಡಿ ಪ್ರಕರಣ ದಾಖಲಾಗಿದೆ. ಜೊತೆಗೆ ಹೆರಿಗೆ ಮಾಡಿಸಿದ ವಿಷಯ ಮುಚ್ಚಿಟ್ಟಿದ್ದಕ್ಕೆ ಯುವತಿಯ ತಾಯಿ ಬಸವ್ವ ಗೌಡರಳನ್ನು ಕೂಡ ಪೊಲೀಸರು ಬಂಧಿಸಿದ್ದು, ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯು ಮನೆಗೆ ವಾಪಸ್ ಆಗಿದ್ದಾಳೆ.

  • ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ನವದೆಹಲಿ: ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಟ್ವಿಟ್ಟರ್ ಮೂಲಕ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ವಿಡಿಯೋವೊಂದನ್ನು ಶೇರ್ ಮಾಡಿ ನನಗೆ ಅಳು ತಡೆಯಲಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಹೌದು. ರಷ್ಯಾ ದೇಶದ ಪುಟ್ಟ ಬಾಲಕಿ ಹುಟ್ಟುವಾಗಲೇ ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಹೀಗಾಗಿ ಕಾಲುಗಳ ಮೂಲಕವೇ ಆಹಾರ ಸೇವಿಸುತ್ತಿರುವ ವಿಡಿಯೋವನ್ನು ಆನಂದ್ ಅವರು ಶೇರ್ ಮಾಡಿಕೊಂಡಿದ್ದಾರೆ. 2 ವರ್ಷದ ಬಾಲಕಿಯ ಈ ವಿಡಿಯೋ ಮನಕಲಕುವಂತಿದೆ.

    ವಿಡಿಯೋದಲ್ಲೇನಿದೆ?
    ಪುಟ್ಟ ಬಾಲಕಿಯೊಬ್ಬಳು ಫೋರ್ಕ್ ಮೂಲಕ ಆಹಾರ ಸೇವಿಸುತ್ತಾಳೆ. ಫೋರ್ಕನ್ನು ತನ್ನ ಕಾಲಿನ ಬೆರಳುಗಳ ಮಧ್ಯೆ ಇಟ್ಟುಕೊಂಡು ಕಾಲನ್ನು ಮೇಲಕ್ಕೆತ್ತಿ ತಿನ್ನಲು ಪ್ರಯತ್ನಿಸುತ್ತಿದ್ದಾಳೆ. ಇದು ಸಾಧ್ಯವಾಗದಿದ್ದಾಗ ಮತ್ತೆ ಪೋರ್ಕನ್ನು ಇನ್ನೊಂದು ಕಾಲಿನಲ್ಲಿ ಸರಿಪಡಿಸಿಕೊಂಡು ನಂತರ ತಾನೇ ಬಗ್ಗಿ ಆಹಾರ ಸೇವಿಸಿದ್ದಾಳೆ. 17 ನಿಮಿಷಗಳ ಈ ವಿಡಿಯೋವನ್ನು ನೋಡಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

    ಟ್ವೀಟ್‍ನಲ್ಲೇನಿದೆ..?
    ಇತ್ತೀಚೆಗಷ್ಟೇ ನಾನು ನನ್ನ ಮೊಮ್ಮಗನನ್ನು ನೋಡಿದ್ದೇನೆ. ಈ ಮಧ್ಯೆ ವಾಟ್ಸಾಪ್ ನಲ್ಲಿ ಬಂದಂತಹ ಈ ವಿಡಿಯೋವನ್ನು ನೋಡಿ ನನಗೆ ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡು ಬಾಲಕಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ಬೇಸರಗೊಂಡಿರುವ ಆನಂದ್ ಅವರು, ನ್ಯೂನ್ಯತೆ, ಸವಾಲುಗಳು ಕೆಲವರ ಜೀವನಕ್ಕೆ ಸಿಕ್ಕ ಗಿಫ್ಟ್ ಆಗಿವೆ. ಆದರೆ ಇವುಗಳನ್ನೆಲ್ಲ ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದು ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡ ಈ ವಿಡಿಯೋಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 10 ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಹಲವರು ಮಗುವಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಕೆಲವರು ವಿಶೇಷಚೇತನ ಮಕ್ಕಳ ವಿಡಿಯೋಗಳನ್ನು ಹಾಕಿದ್ದಾರೆ. ಅದರಲ್ಲೊಬ್ಬರು ಇಂಥವರು ನಮ್ಮ ಭಾರತದಲ್ಲಿಯೂ ಇದ್ದಾರೆ ಎಂದು ಬರೆದುಕೊಂಡು ಕರ್ನಾಟಕದ ಶಾಲಾ ವಿದ್ಯಾರ್ಥಿಯೊಬ್ಬ ಊಟ ತೆಗೆದುಕೊಂಡು ಹೋಗಿ ಬಳಿಕ ಎಲ್ಲರೊಂದಿಗೆ ಕುಳಿತು ಊಟ ಮಾಡುತ್ತಿರುವ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    https://twitter.com/Gkyadav11590/status/1175272793266503686

  • ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್ ಸಹೋದರಿ

    ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್ ಸಹೋದರಿ

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

    ಬುಧವಾರ ಮುಂಬೈನಲ್ಲಿ ನಡೆದ ಐಫಾ ಅವಾರ್ಡ್ ಕಾರ್ಯಕ್ರಮಕ್ಕೆ ಅರ್ಪಿತಾ ಅವರ ಪತಿ ಆಯೂಷ್ ಶರ್ಮಾ ಆಗಮಿಸಿದ್ದರು. ರೆಡ್ ಕಾರ್ಪೆಟ್ ವೇಳೆ ಮಾಧ್ಯಮದವರು ಆಯೂಷ್ ಅವರನ್ನು ಮಾತನಾಡಿಸಿದ್ದಾರೆ. ಆಗ ಆಯೂಷ್ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆಯೂಷ್ ಶರ್ಮಾ ಅವರು, “ಹೊಸ ಆಗಮನ ಯಾವಾಗಲೂ ರೋಮಾಂಚನಕಾರಿ ಎಂದು ನಾನು ಭಾವಿಸುತ್ತೇನೆ. ನಾನು ಹಾಗೂ ಅರ್ಪಿತಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಜೀವನ ಅದ್ಭುತ ಪಯಣವಾಗಿದೆ. ಆದ್ದರಿಂದ ಇದು ಮತ್ತೆ ಪ್ರಾರಂಭವಾಗುತ್ತಿದೆ. ಮಗುವಿನ ಆಗಮನಕ್ಕೆ ನಮಗೆ ಕಾಯಲು ಆಗುತ್ತಿಲ್ಲ” ಎಂದು ಹೇಳಿದ್ದಾರೆ.

    ಆಯೂಷ್ ಹಾಗೂ ಅರ್ಪಿತಾ 2014 ನವೆಂಬರ್ 18ರಂದು ಹೈದರಾಬಾದ್‍ನ ತಾಜ್ ಫಾಲಕ್‍ನೂಮಾ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016 ಮಾರ್ಚ್ 30ರಂದು ಅರ್ಪಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆ ಮಗುವಿಗೆ ಅಹಿಲ್ ಎಂದು ನಾಮಕರಣ ಮಾಡಿದ್ದರು. ಅರ್ಪಿತಾ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಸ್ವತಃ ಆಯೂಷ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    2018ರಲ್ಲಿ ‘ಲವ್ ಯಾತ್ರಿ’ ಚಿತ್ರದ ಮೂಲಕ ಆಯೂಷ್ ಶರ್ಮಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

  • 4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    4 ವರ್ಷದ ಹೆಣ್ಣು ಮಗುವಿನ ಕಿಡ್ನಾಪ್‍ಗೆ ಯತ್ನ- ಸಿಸಿಟಿಯಲ್ಲಿ ದೃಶ್ಯ ಸೆರೆ

    ಚಂಢೀಗಡ: ತಂದೆ-ತಾಯಿ ಜೊತೆ ಮಲಗಿದ್ದ ಪುಟ್ಟ ಕಂದಮ್ಮನನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಘಟನೆ ಪಂಜಾಬಿನ ಲೂಧಿಯಾನದಲ್ಲಿ ನಡೆದಿದೆ.

    ವ್ಯಕ್ತಿ 4 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೋದಲ್ಲೇನಿದೆ..?
    ಕಳೆದ ರಾತ್ರಿ ಸೈಕಲ್ ಏರಿ ಬಂದ ವ್ಯಾಪಾರಿಯೊಬ್ಬ ಮನೆಯ ಹೊರಗಡೆ ತಂದೆ-ತಾಯಿ ಜೊತೆ ಮಂಚದಲ್ಲಿ ಮಲಗಿದ್ದ ಪುಟ್ಟ ಕಂದಮ್ಮನನ್ನು ಮೆಲ್ಲನೆ ಎತ್ತಿಕೊಂಡು ಸೈಕಲ್ ನಲ್ಲಿ ಮಲಗಿಸುತ್ತಾನೆ. ಈ ವೇಳೆ ಮಗುವಿನ ತಾಯಿ ಎಚ್ಚರಗೊಂಡು ಮಗುವನ್ನು ಆತನಿಂದ ಎಳೆದುಕೊಳ್ಳುತ್ತಾರೆ. ಇಷಾಗುವಾಗ ಮಗುವಿನ ತಂದೆಯೂ ಎಚ್ಚರಗೊಳ್ಳುತ್ತಾರೆ. ತಂದೆ ಎಚ್ಚರಗೊಂಡಂತೆಯೇ ವ್ಯಾಪಾರಿ ಸ್ಥಳದಿಂದ ಸೈಕಲ್ ಮೂಲಕ ಪರಾರಿಯಾಗಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ತಂದೆ ಕಳ್ಳನನ್ನು ಬೆನ್ನಟ್ಟುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗು ಕಳ್ಳತನ ಮಾಡಲು ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸೇರಿ ಆರೋಪಿ ವ್ಯಾಪಾರಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

    ಸುಮಾರು 40 ವರ್ಷ ವಯಸ್ಸಿನ ಆರೋಪಿ ಮೊದಲು ಕುಟುಂಬ ಮಲಗಿದೆಯೋ ಇಲ್ಲವೋ ಎಂದು ಬಂದು ಪರಿಶೀಲಿಸಿ ಹೋಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ತನ್ನ ಸೈಕಲ್ ಸಮೇತ ಬಂದು ಮಗುವನ್ನು ಅಪಹರಿಸುವ ಪ್ಲಾನ್ ಮಾಡಿದ್ದಾನೆ. ಆರೋಪಿ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಅದರ ತಾಯಿ ಎಚ್ಚರಗೊಂಡು ಕಿರುಚಾಡಿದ ಪರಿಣಾಮ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ ಎಂದು ಹಿರಿಯ ಪೊಲೀಸ್ ಆದಿಕಾರಿ ರಮನ್ ದೀಪ್ ಸಿಂಗ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆರೋಪಿ ಮಗುವನ್ನು ಯಾಕೆ ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಸಿಸಿಟಿವಿ ದೃಶ್ಯವನ್ನಾಧರಿಸಿ ಮಗು ಕಳ್ಳತನ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

  • ಮುಂದಿನ ವರ್ಷ ನಾನು ತಾಯಿ ಆಗುತ್ತೇನೆ: ರಾಖಿ ಸಾವಂತ್

    ಮುಂದಿನ ವರ್ಷ ನಾನು ತಾಯಿ ಆಗುತ್ತೇನೆ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಾವು ಮುಂದಿನ ವರ್ಷ ತಾಯಿ ಆಗುತ್ತೇನೆ ಎಂದು ಹೇಳಿದ್ದಾರೆ.

    ರಾಖಿ ಅವರು ರಿತೇಶ್ ಎಂಬವರನ್ನು ಗೌಪ್ಯವಾಗಿ ಮದುವೆಯಾಗಿದ್ದರು. ಆದರೆ ರಾಖಿ ಇದುವರೆಗೂ ತಮ್ಮ ಪತಿಯನ್ನು ಯಾರಿಗೂ ಪರಿಚಯಿಸಿಲ್ಲ. ಸದ್ಯ ಈಗ ಅವರು ಒಂದು ಕಾರ್ಯಕ್ರಮಕ್ಕೆ ತೆರಳಿದ್ದು, ಈ ವೇಳೆ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ರಾಖಿ ಸಾವಂತ್ ಅವರು, “ನಾನು 2020ರವರೆಗೂ ಮಗುವಿನ ಪ್ಲಾನಿಂಗ್ ಮಾಡುತ್ತೇನೆ. ನನ್ನ ಪತಿ ರಿತೇಶ್ ಮಗುವಿನೊಂದಿಗೆ ಎಲ್ಲರ ಮುಂದೆ ಬರುತ್ತಾರೆ” ಎಂದು ಉತ್ತರಿಸಿದ್ದಾರೆ.

    ಬಳಿಕ ರಿತೇಶ್ ಅವರ ಮನೆಯವರ ಬಗ್ಗೆ ಮಾತನಾಡಿದ ರಾಖಿ, “ನನ್ನ ಅತ್ತೆ-ಮಾವ ತುಂಬಾನೇ ಸಿಂಪಲ್, ಸ್ವೀಟ್ ಹಾಗೂ ಕ್ಯಾರಿಂಗ್. ಅವರು ಯಾವ ವಿಚಾರದ ಬಗ್ಗೆಯೂ ಹೆಚ್ಚು ಯೋಚನೆ ಮಾಡುವುದಿಲ್ಲ. ರಿತೇಶ್ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ. ನಾನು ನನ್ನ ಪತಿ ಜೊತೆ ಬಿಗ್ ಬಾಸ್ 13 ಸೀಸನ್‍ನಲ್ಲಿ ಭಾಗವಹಿಸುತ್ತಿದ್ದೇವೆ. ಅಲ್ಲಿಯೇ ಎಲ್ಲರಿಗೂ ನನ್ನ ಪತಿಯನ್ನು ಪರಿಚಯ ಮಾಡಿಸುತ್ತೇನೆ” ಎಂದು ಹೇಳಿದ್ದಾರೆ.

    ನಾನು ನನ್ನ ಪತಿಯನ್ನು ತುಂಬಾ ಪ್ರೀತಿಸುತ್ತೇನೆ. ರಿತೇಶ್ ತುಂಬಾ ಸ್ಮಾರ್ಟ್ ಹಾಗೂ ಹ್ಯಾಂಡ್‍ಸಮ್ ಆಗಿದ್ದಾರೆ. ಅವರು ನನ್ನ ಹೃದಯದ ಒಂದು ಭಾಗ. ರಿತೇಶ್ ಅವರಿಗೆ ಬೇರೆಯವರ ದೃಷ್ಟಿ ಬೀಳುತ್ತೆ ಎಂಬ ಭಯ ನನಗಿದೆ. ಹೀಗಾಗಿ ನಾನು ನನ್ನ ಪತಿಯನ್ನು ಯಾರಿಗೂ ಪರಿಚಯಿಸಿಲ್ಲ. ರಿತೇಶ್ ಉದ್ಯಮಿಯಾಗಿದ್ದು, ಜಗತ್ತಿನ ಮುಂದೆ ಅವರ ಫೋಟೋ ಬರುವುದು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.