ರೋಮ್: ಇಟಲಿಯಲ್ಲಿ ಅತ್ಯಂತ ಕಿರಿಯ ಕೊರೊನಾ ವೈರಸ್ ರೋಗಿ ಎಂದು ಗುರುತಿಸಿದ್ದ ಎರಡು ತಿಂಗಳ ಮಗುವೊಂದು ಸಂಪೂರ್ಣ ಗುಣಮುಖವಾಗಿದ್ದು ಸಾವಿನ ದವಡೆಯಿಂದ ಹೊರ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಈ ಮೊದಲು ತಾಯಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಬಳಿಕ ಮಗುವಿನಲ್ಲೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಾರ್ಚ್ 18ರಂದು ತಾಯಿ-ಮಗುವನ್ನು ದಕ್ಷಿಣ ನಗರದ ಬ್ಯಾರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣ ಇಟಲಿಯಲ್ಲಿ ಸಾಕಷ್ಟು ಆತಂಕವನ್ನು ಸೃಷಿ ಮಾಡಿತ್ತು. ಅತ್ಯಂತ ಕಿರಿಯ ರೋಗಿಯನ್ನು ಉಪಚರಿಸಿರುವ ವೈದ್ಯರು ಕೊರೊನಾದಿಂದ ಸಂಪೂರ್ಣ ಮುಕ್ತ ಮಾಡಿದ್ದಾರೆ.
ಮಗು ಕೊರೊನಾ ಸೋಂಕಿನ ಸಂಪೂರ್ಣ ಗುಣ ಮುಖವಾಗಿದ್ದು, ತಾಪಮಾನ ಅಥವಾ ಜ್ವರದಿಂದ ಬಳಲುತ್ತಿಲ್ಲ. ಹೀಗಾಗಿ ತಾಯಿಯೊಂದಿಗೆ ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ವೈದ್ಯರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾಗೆ ಇಟಲಿಯಲ್ಲಿ ಈವರೆಗೂ 17,669 ಮಂದಿ ಸಾವನ್ನಪ್ಪಿದ್ದು, ಈ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು ಎನ್ನಾಲಾಗಿದೆ. ಕಳೆದ ತಿಂಗಳು 969ರ ಗರಿಷ್ಠ ಮಟ್ಟದಿಂದ ದಿನನಿತ್ಯ ಸಾವಿನ ಸಂಖ್ಯೆ ಇಳಿಕೆ ಆಗಿತ್ತು. ಸದ್ಯ ಪ್ರಮಾಣದಲ್ಲಿ ನಿಧಾನವಾಗಿ ಇಳಿಕೆ ಕಂಡು ಬಂದಿದೆ.
ಗಾಂಧಿನಗರ: ಅಮೆರಿಕದಲ್ಲಿ ಪಟ್ಟ ಕಂದಮ್ಮಗಳಿಗೆ ಕೊರೊನಾ ಬಂದಿದ್ದು, ಇದೀಗ ಭಾರತದಲ್ಲೂ 14 ತಿಂಗಳ ಮಗುವಿಗೆ ಕೊರೊನಾ ಇರುವುದು ಪತ್ತೆಯಾಗಿದೆ.
ಹೌದು. ಗುಜರಾತಿನ ಜಮ್ನಾನಗರ್ ಜಿಲ್ಲೆಯ ಗಂಡು ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಗ್ಯ ಅಧಿಕಾರಿಗಳು ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಾನುವಾರ ಮಗುವಿಗೆ ಕೊರೊನಾ ಪಾಸಿಟಿವ್ ಇರೋದು ಬೆಳಕಿಗೆ ಬಂದಿದ್ದು, ಸದ್ಯ ಮಗು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಹೆತ್ತವರು ಕಾರ್ಮಿಕರಾಗಿದ್ದು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿರೋದರ ಹಿನ್ನೆಲೆಯಲ್ಲಿ ಪುಟ್ಟ ಗ್ರಾಮವೊಂದರಲ್ಲಿ ನೆಲೆಸಿದ್ದಾರೆ.
ಈ ಮೂಲಕ ಜಮ್ನಾನಗರ್ ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆಯಾಗಿದೆ. ಒಟ್ಟಿನಲ್ಲಿ ಮಗುವಿಗೆ ಕೊರೊನಾ ಬಂದಿರುವುದನ್ನು ಪತ್ತೆ ಹಚ್ಚಲು ಆರೋಗ್ಯ ಅಧಿಕಾರಿಗಳಿಗೆ ಒಂದು ದೊಡ್ಡ ಟಾಸ್ಕ್ ಇದಾಗಿದೆ.
ಮಗುವಿನ ಪೋಷಕರು ಕಾರ್ಮಿಕರಾಗಿದ್ದು, ಇತ್ತೀಚೆಗೆ ತೆರಳಿದ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರವಿ ಂಕರ್ ತಿಳಿಸಿದ್ದಾರೆ.
ಮಗುವಿನ ಪೋಷಕರು ಮೂಲತಃ ಉತ್ತರಪ್ರದೇಶದವರಾಗಿದ್ದು, ಡೇರ್ಡ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಆ ಪ್ರದೇಶ ಬಿಟ್ಟು ಎಲ್ಲೂ ಹೋಗದೆ ಹಲವು ದಿನಗಳೇ ಕಳೆದಿತ್ತು. ಆದರೂ ದಂಪತಿಯ 14 ತಿಂಗಳ ಮಗನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿರುವುದು ಅಲ್ಲಿಯ ಜನರಲ್ಲಿ ಅಚ್ಚರಿ ಹುಟ್ಟಿಸಿದೆ ಎಂದು ಡಿಸಿ ವಿವರಿಸಿದ್ದಾರೆ.
ಲಕ್ಷಣಗಳು ಕಂಡು ಬಂದ ಕೂಡಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೋಷಕರು ಶನಿವಾರ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಭಾನುವಾರ ಪರೀಕ್ಷೆ ನಡೆಸಿದಾಗ ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಬಾಲಕನ ಹೆತ್ತವರು ಆರೋಗ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಲಾಗಿದೆ.
– ಅಮೆರಿಕದಲ್ಲಿ 1.24 ಲಕ್ಷ ಸೋಂಕಿತರು
– 24 ಗಂಟೆಯಲ್ಲಿ 450ಕ್ಕೂ ಹೆಚ್ಚು ಸಾವು
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕಿತ ಪುಟ್ಟ ಮಗು ಸಾವನ್ನಪ್ಪಿದೆ ಎಂದು ಇಲಿನಾಯ್ಸ್ ರಾಜ್ಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೊರೊನಾಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಅಪರೂಪದ ಪ್ರಕರಣ ಎಂದು ಗುರುತಿಸಲಾಗಿದೆ.
ಇಲಿನಾಯ್ಸ್ ರಾಜ್ಯದ ಗವರ್ನರ್ ಜೆಬಿ ಪ್ರಿಟ್ಜ್ಕೆರ್ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಸುದ್ದಿ ತಿಳಿಸಲು ಭಾರೀ ಸಂಕಟವಾಗುತ್ತಿದೆ. ವಿಶೇಷವಾಗಿ ನಾನು ಹೇಳಲು ಹೊರಟಿರುವುದು ಚಿಕ್ಕ ಮಗುವಿನ ಬಗ್ಗೆ. ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕೊರೊನಾ ವೈರಸ್ಗೆ ಸಂಬಂಧಿಸಿದ ಸಾವುನೋವುಗಳಲ್ಲಿ ಪುಟ್ಟ ಮಗುವೊಂದು ಸೇರಿದೆ ಎಂದು ತಿಳಿಸಿದ್ದಾರೆ.
ಚಿಕ್ಯಾಗೋದಲ್ಲಿ ನಿಧನವಾದ ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿದೆ. 1,24,000ಕ್ಕಿಂತ ಹೆಚ್ಚು ಪ್ರಕರಣಗಳಿದ್ದು, 2,227 ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಶನಿವಾರ ಮಧ್ಯಾಹ್ನದ ನಂತರದ 24 ಗಂಟೆಗಳ ಅವಧಿಯಲ್ಲಿ 450ಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇಲಿನಾಯ್ಸ್ ನಲ್ಲಿ ಮಗು ಸೇರಿದಂತೆ 13 ಹೊಸ ಸಾವು ದಾಖಲಾಗಿದೆ.
ಯಾದಗಿರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್ ಆಗಿದೆ. ಈ ಮಧ್ಯೆ ಬಡ ದಂಪತಿ ತಮ್ಮ 24 ದಿನದ ಮಗುವನ್ನು ಕಳೆದುಕೊಂಡು ಶವಸಂಸ್ಕಾರ ಮಾಡಲು ಸಾಧ್ಯವಾಗದೆ ಪರದಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ 25 ದಿನದ ಕಂದನನ್ನು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಪರದಾಡುತ್ತಿರುವಾಗ ಪೌರ ಕಾರ್ಮಿಕರು ನೆರವಿಗೆ ನಿಂತಿದ್ದಾರೆ. ಮಗುವಿನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶ ಮೂಲದ ಕಲ್ಯಾಣಸಿಂಗ್ ಎಂಬ ವ್ಯಕ್ತಿಯ ಕೆಲವು ದಿನಗಳಿಂದ ಶಹಾಪೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಕಲ್ಯಾಣ ಸಿಂಗ್ ದಂಪತಿಯ 25 ದಿನದ ಮಗು ತೀರಿಹೊಗಿದ್ದು ಬಡವನಾಗಿದ್ದ ಕಲ್ಯಾಣ ಸಿಂಗ್ ಬಳಿ ಒಂದು ಕಡೆ ಶವ ಸಂಸ್ಕಾರಕ್ಕೆ ಹಣವಿಲ್ಲದೆ, ಮತ್ತೊಂದು ಕಡೆ ತಮ್ಮ ಊರಿಗೆ ಹೋಗಲೂ ಆಗದ ಕಠಿಣ ಪರಿಸ್ಥಿತಿ ಎದುರಾಗಿತ್ತು. ಇದನ್ನು ಕಂಡ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ನಿಂತು ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೌರ ಕಾರ್ಮಿಕರು ಮಾನವೀಯತೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ.
ಮಗುವಿನ ಪೋಷಕರು ಬುಧವಾರ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆದರೆ ತಾಂತ್ರಿಕ ದೋಷವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಮರು ಪರೀಕ್ಷೆಗಾಗಿ ಸ್ವ್ಕಾಬ್ ಮತ್ತು ರಕ್ತದ ಮಾದರಿಯನ್ನು ಕಳುಹಿಸಿ ಕೊಟ್ಟಿದ್ದು, ಪಾಸಿಟಿವ್ ಎಂದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಮಾರ್ಚ್ 26ರ ಸಂಜೆ 5ರಿಂದ ಮಾರ್ಚ್ 27ರ ಬೆಳಗ್ಗೆ 8ರವರೆಗೆ 7 ಹೊಸ ಸೋಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಕರ್ನಾಟಕ ಸರ್ಕಾರವು ಮಾಹಿತಿ ನೀಡಿದೆ. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ
ಪ್ರಕರಣ 56: 10 ತಿಂಗಳ ಗಂಡು ಮಗು, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ, ಯಾವುದೇ ಕೋವಿಡ್-19 ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನಲೆಯಿರುವುದಿಲ್ಲ. ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪೋಷಕರು ಮಗುವಿನೊಂದಿಗೆ ಕೆಲವು ದಿನಗಳ ಹಿಂದೆ ಕೇರಳಕ್ಕೆ ಭೇಟಿ ನೀಡಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಮಾಹಿತಿ ಕಲೆಹಾಕಲಾಗಿದ್ದು, ತಪಾಸಣೆ ಪ್ರಗತಿಯಲ್ಲಿರುತ್ತದೆ. ಜೊತೆಗೆ 6 ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿರುತ್ತದೆ.
ಪ್ರಕರಣ 57: 20 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಕೋಲಂಬೋ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 15ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ. ಇದನ್ನೂ ಓದಿ: ಪ್ರಪಂಚದ ಕ್ಯೂಟೆಸ್ಟ್ ಮಗುವಿಗೆ ಕೊರೊನಾ ವದಂತಿ – ತಾಯಿ ಸ್ಪಷ್ಟನೆ
ಪ್ರಕರಣ 58: 25 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 59: 35 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು ಪ್ರಕರಣ 25ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 60: 60 ವರ್ಷದ ಪುರುಷ ತುಮಕೂರು ಜಿಲ್ಲೆಯ ನಿವಾಸಿಯಾಗಿದ್ದು, ದೆಹಲಿಗೆ ರೈಲು ಮುಖಾಂತರ ಮಾರ್ಚ್ 13ರಂದು ಪ್ರಯಾಣ ಬೆಳೆಸಿರುತ್ತಾರೆ. ಇವರು ಮಾರ್ಚ್ 27ರಂದು ಬೆಳಗ್ಗೆ ತುಮಕೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. 24 ಹೈರಿಸ್ಕ್ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿರುತ್ತದೆ. ಇವರುಗಳಲ್ಲಿ 13 ಪ್ರಕರಣಗಳನ್ನು ನಿಗಧಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ ಮತ್ತು 8 ನೆಗೆಟಿವ್ ಪ್ರಕರಣಗಳು ಹಾಗೂ 3 (ವೈದ್ಯಕೀಯ ಸಿಬ್ಬಂದಿ) ಪ್ರಕರಣಗಳನ್ನು ಮನೆ ಕ್ವಾರಂಟೈನ್ ಮಾಡಲಾಗಿರುತ್ತದೆ.
ಪ್ರಕರಣ 61: 33 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಪ್ರಕರಣ 25ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 62: 22 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 1 ಮತ್ತು ಪ್ರಕರಣ 3 ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ರಾಜ್ಯದಲ್ಲಿ ಈವರೆಗೂ ಮೂವರು ಕೊರೊನಾಗೆ ಬಲಿಯಾಗಿದ್ದಾರೆ.
ಲಕ್ನೋ: ಮಹಾಮಾರಿ ಕೊರೊನಾ ವೈರಸ್ಗೆ ಇಡೀ ದೇಶವೇ ತಲ್ಲಣಗೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಈ ಮಧ್ಯೆ ವೈರಸ್ ಹೆಸರನ್ನು ಉತ್ತರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವೊಂದಕ್ಕೆ ನಾಮಕರಣ ಮಾಡಲಾಗಿದೆ.
ಜನತಾ ಕರ್ಫ್ಯೂ ದಿನಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಅಂದ್ರೆ ಭಾನುವಾರ ಗೋರಖಪುರದ ಸೊಹಗೌರಾ ಗ್ರಾಮದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆ ಬಳಿಕ ಮಗುವಿನ ಚಿಕ್ಕಪ್ಪ ಕೊರೊನಾ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಂಭವಾಗಿದೆ.
ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿರುವ ಚಿಕ್ಕಪ್ಪ ನಿತೇಶ್ ತ್ರಿಪಾಠಿ, ಕೊರೊನಾ ಸೋಂಕು ಭಯಾನಕವಾಗಿದೆ ಎನ್ನುವುದರಲಿ ಯಾವುದೇ ಸಂದೇಹವೇ ಇಲ್ಲ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅನೇಕ ಜನರನ್ನು ಬಲಿ ಪಡೆದುಕೊಂಡಿದೆ. ಆದರೆ ಇದರಿಂದ ಅನುಕೂಲವೂ ಆಗಿದೆ. ಕೊರೊನಾ ವೈರಸ್ನಿಂದಾಗಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ, ಜತ್ತಿನ ಎಲ್ಲಾ ದೇಶಗಳು ಒಂದಾಗಿ ಹೋರಾಡುತ್ತಿವೆ. ಹೀಗಾಗಿ ಈ ಮಗು ದುಷ್ಟರ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಸಂಕೇತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮಗುವಿನ ತಾಯಿ ರಜಿನಿ ತ್ರಿಪಾಠಿ ಹಾಗೂ ಪೋಷಕರ ಒಪ್ಪಿಗೆ ಪಡೆದೇ ಕೊರೊನಾ ಅಂತ ನಾಮಕರಣ ಮಾಡಲಾಗಿದೆ ಎಂದು ನಿತೇಶ್ ತ್ರಿಪಾಠಿ ಹೇಳಿದ್ದಾರೆ.
ಹುಬ್ಬಳ್ಳಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಗೂಸನ್ನು ನಗರದ ಸ್ಪರ್ಶ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ನಲ್ಲಿ ಕೊಂಡೊಯ್ಯಲಾಗಿದೆ.
ಬುಧವಾರ ರಾತ್ರಿ 11.45ರ ವೇಳೆ ಹುಬ್ಬಳ್ಳಿಯಿಂದ ವಾಹನ ಹೊರಟಿದೆ. ಅದರ ಉಸ್ತುವಾರಿಯನ್ನು ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರತನಕುಮಾರ ಜೀರಗ್ಯಾಳ ಹಾಗೂ ಸಿಬ್ಬಂದಿ ವಹಿಸಿಕೊಂಡಿದ್ದಾರೆ.
ಮಗು ಹುಟ್ಟುವಾಗಲೇ ಹೃದಯದಲ್ಲಿ ಚಿಕ್ಕ ರಂಧ್ರವಿತ್ತು. ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ ಕಾರಣ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಸದ್ಯ ಪೊಲೀಸರ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
– ಡೌನ್ ಸಿಂಡ್ರೋಮ್ ಮಗುವನ್ನು ದತ್ತು ಪಡೆದು ಆರೈಕೆ
– ಮಗುವಿನ ಪಾಲನೆಗಾಗಿ ಸಾಫ್ಟ್ವೇರ್ ಕೆಲಸ ತೊರೆದ್ರು
ಮುಂಬೈ: ಮಹಾರಾಷ್ಟ್ರದ ಪುಣೆ ಮೂಲದ ಟೆಕ್ಕಿಯೊಬ್ಬರು ‘ವಿಶ್ವದ ಅತ್ಯುತ್ತಮ ಮಮ್ಮಿ’ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
ಟೆಕ್ಕಿ ಆದಿತ್ಯ ತಿವಾರಿ 2016ರಲ್ಲಿ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿರುವ ಮಗುವನ್ನು ದತ್ತು ಪಡೆದುಕೊಂಡಿದ್ದರು. ಮಗು ದತ್ತು ಪಡೆಯಲು ಆದಿತ್ಯ ದೀರ್ಘ ಕಾಲ ಕಾನೂನಿನ ಹೋರಾಟ ಕೂಡ ಮಾಡಿ ಗೆಲುವು ಸಾಧಿಸಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂದರೆ ಮಾರ್ಚ್ 8ರಂದು ದೇಶಾದ್ಯಂತ ಅನೇಕ ಮಹಿಳೆಯರೊಂದಿಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಆದಿತ್ಯ ಅವರಿಗೆ ವಿಶ್ವದ ಅತ್ಯುತ್ತಮ ಮಮ್ಮಿ ಎಂಬ ಬಿರುದನ್ನು ನೀಡಲಾಗುತ್ತದೆ.
ಅರೆ ತಾಯಿಗೆ ಪ್ರಶಸ್ತಿ ನೀಡುವುದು ಸಹಜ. ಆದರೆ ತಂದೆಗೆ ‘ಬೆಸ್ಟ್ ಮಮ್ಮಿ’ ಪ್ರಶಸ್ತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ತಾಯಿಯ ಕರ್ತವ್ಯವನ್ನು ನಿಭಾಯಿಸುವ ಪ್ರತಿಯೊಬ್ಬ ಪುರುಷನೂ ತಾಯಿಯಂದೇ ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಆದಿತ್ಯ ತಿವಾರಿ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ, ವಿಶ್ವದ ಅತ್ಯುತ್ತಮ ಮಮ್ಮಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ. ವಿಶೇಷ ಮಗುವನ್ನು ನೋಡಿಕೊಂಡ ನನ್ನ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಾನು ಸಿಂಗಲ್ ಪೇರೆಂಟ್ ಆಗಿ ಮಗುವನ್ನು ದತ್ತು ಪಡೆದಿದ್ದೇನೆ. 22 ತಿಂಗಳ ಮಗು ಅವನೀಶ್ನನ್ನು ದತ್ತು ಪಡೆಯಲು ನಾನು ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಕೂಡ ಬಿಟ್ಟೆ. ಇದೀಗ ಭಾರತದಲ್ಲಿ ವಿಶೇಷ ಮಕ್ಕಳ ಪೋಷಕರಿಗೆ ಕೌನ್ಸಲಿಂಗ್ ನೀಡುತ್ತೇನೆ ಹಾಗೂ ಅವರಿಗೆ ಪ್ರೋತ್ಸಾಹ ಮಾಡುತ್ತೇನೆ ಎಂದರು.
ಆದಿತ್ಯ 2016 ಅವನೀಶ್ ದತ್ತು ಪಡೆದುಕೊಂಡಿದ್ದು, ಮಗು ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಆದಿತ್ಯ ಕಾನೂನಿನ ಹೋರಾಟ ನಡೆಸಿ ಗೆದ್ದಿದ್ದಾರೆ. ಆದಿತ್ಯ ಅವರ ಈ ನಿರ್ಧಾರವನ್ನು ಅವರ ಕುಟುಂಬಸ್ಥರು ವಿರೋಧಿಸಿದ್ದರು. ಆದರೆ ಇದು ಯಾವುದನ್ನು ಲೆಕ್ಕಿಸದೇ ಆದಿತ್ಯ ಮಗುವನ್ನು ದತ್ತು ಪಡೆದಿದ್ದರು. ಮಗುವಿನ ತಾಯಿ ಆಶ್ರಮದ ಮುಂದೆ ಬಿಟ್ಟು ಹೋಗಿದ್ದಳು. ಆದರೆ ಆದಿತ್ಯ ಮಗುವನ್ನು ತಾಯಿಯಂತೆ ನೋಡಿಕೊಂಡಿದ್ದಾರೆ.
ನಾನು ಹಾಗೂ ಅವನೀಶ್ 22 ರಾಜ್ಯಗಳಲ್ಲಿ ವಾಸವಿದ್ದು, 400 ಸ್ಥಳಗಳಲ್ಲಿ ಮೀಟಿಂಗ್ಸ್, ವರ್ಕ್ಶಾಪ್, ಟಾಕ್ಸ್ ಹಾಗೂ ಕಾನ್ಫರೆನ್ಸ್ ಮಾಡಿದ್ದೇನೆ. ಭಾರತದಾದ್ಯಂತ 10,000 ಪೋಷಕರ ಜೊತೆ ನಾವು ಸೇರಿದ್ದೇವೆ. ಈ ಸಂದರ್ಭದಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸುವ ಬಗ್ಗೆ ಮಾತನಾಡಬೇಕಾದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶ್ವಸಂಸ್ಥೆಯಿಂದ ನಮ್ಮನ್ನು ಕರೆಯಲಾಯಿತು ಎಂದು ತಿಳಿಸಿದ್ದಾರೆ.
– 10 ತಿಂಗ್ಳ ಮಗ್ಳನ್ನು ಡ್ರಂನಲ್ಲಿ ಮುಳುಗಿಸಿ ಕೊಲೆ
– ಮಗು ಅನಾಥ ಆಗುತ್ತೆ ಎಂಬ ಕಾರಣಕ್ಕೆ ಹತ್ಯೆ
ಚಿತ್ರದುರ್ಗ: ತಾಯಿಯೊಬ್ಬಳು ತನ್ನ ಹತ್ತು ತಿಂಗಳ ಹೆಣ್ಣು ಮಗುವನ್ನು ಡ್ರಂನಲ್ಲಿ ಮುಳುಗಿಸಿ ಕೊಂದು ಆಕೆಯೂ ಸಹ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.
ಆಶಾಬಾಯಿ (24) ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಹೆರಿಗೆ ಬಳಿಕ ಆಶಾಬಾಯಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನೋವು ಹಾಗೂ ತೀವ್ರ ಅನಾರೋಗ್ಯ ತಾಳಲಾರದೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಳು.
ತಾನು ಸತ್ತರೆ ಮಗು ಅನಾಥ ಆಗುತ್ತೆ ಎಂಬ ಕಾರಣಕ್ಕೆ ಆಶಾ ತಮ್ಮ 10 ತಿಂಗಳ ಹೆಣ್ಣು ಮಗುವನ್ನು ಡ್ರಂನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ಸಹ ನೇಣಿಗೆ ಶರಣಾಗುವುದಾಗಿ ಡೆತ್ ನೋಟ್ ನಲ್ಲಿ ನಮೂದಿಸಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಶಾ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಡಿದ್ದಾಳೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಲಂಬಾಣಿಹಟ್ಟಿಯ ಹೇಮಂತ್ ಎಂಬವರ ಜೊತೆ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಆಶಾ ಪ್ರೇಮ ವಿವಾಹ ಆಗಿದ್ದಳು.
ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.
ತುಮಕೂರು: ಕೊಡಗಿನ ವಿರಾಜಪೇಟೆ ತಾಲೂಕಿನ ವಿಜಯಾ ಬ್ಯಾಂಕಿನ ನೌಕರನೊಬ್ಬ ತುಮಕೂರಿನ ಅತ್ತೆ ಮಗಳಿಗೆ ಪತಿಯಿಂದ ಡಿವೋರ್ಸ್ ಕೊಡಿಸಿ ತಾನು ಮದುವೆಯಾಗಿ ಒಂದು ಮಗುವನ್ನು ಕರುಣಿಸಿ ಅರ್ಧ ದಾರಿಯಲ್ಲಿ ಕೈಬಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ನಗರದ ಎನ್ಆರ್ ಕಾಲೋನಿಯವಳಾದ ಜ್ಯೋತಿ ಕೊಡಗಿನ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಮೂಲದ ಸ್ವಂತ ಅತ್ತೆ ಮಗನಾದ ಪ್ರಸಾದ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಇದಕ್ಕೆ ಪ್ರಸಾದ್ ಮನೆಯವರ ವಿರೋಧ ಇದ್ದದ್ರಿಂದ ಬಲವಂತವಾಗಿ ಜ್ಯೋತಿಯನ್ನು ಬೇರೆ ಕಡೆ ಮದುವೆ ಮಾಡಲಾಗಿತ್ತು. ಮದುವೆಯಾದ ಮೇಲೆ ಸುಮ್ಮನಾಗದ ಪ್ರಸಾದ್ ಮತ್ತೆ ಈಕೆಯ ಹಿಂದೆ ಬಿದ್ದಿದ್ದ ನೀ ಇಲ್ಲದೆ ಬದುಕೋಕೆ ಆಗಲ್ಲ. ಸತ್ತು ಹೋಗುತ್ತೇನೆ ಎಂದು ಕತೆ ಕಟ್ಟಿದ್ದನು.
ಮದುವೆಯಾದ ಕೇವಲ ಎರಡೇ ತಿಂಗಳಿಗೆ ಕಿಡ್ನಾಪ್ ಮಾಡಿ ಆಕೆಯ ತಲೆ ಕೆಡಿಸಿ ನಂಬಿಸಿದ್ದನು. ಕೊನೆಗೆ ಆಕೆಯಿಂದಲೇ ಮೊದಲ ಪತಿಗೆ ಡಿವೋರ್ಸ್ ಕೊಡಿಸಿದ್ದನು. ಇದಾದ ಬಳಿಕ ಹುಣಸೂರಿನ ದೇವಾಲಯವೊಂದರಲ್ಲಿ ಪ್ರಸಾದ್, ಜ್ಯೋತಿಗೆ ತಾಳಿ ಕಟ್ಟಿದ್ದನು. ಇವರ ಮದುವೆಗೆ ಮೂರು ತಿಂಗಳ ಗಂಡು ಮಗು ಸಾಕ್ಷಿಯಾಗಿದೆ. ಆದರೂ ಜ್ಯೋತಿಯನ್ನು ಬಿಟ್ಟು ಪ್ರಸಾದ್ ಇನ್ನೊಬ್ಬಳೊಂದಿಗೆ ಮದುವೆಯಾಗಲು ತಯಾರಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಪ್ರಸಾದ್, ಜ್ಯೋತಿಯ ಸ್ವಂತ ಅತ್ತೆಯ ಮಗ. ಹೀಗಾಗಿ ಇಬ್ಬರಿಗೂ ಮೊದಲಿನಿಂದಲೂ ಪ್ರೀತಿ ಇತ್ತು. ಆ ದಿನ ಪೊಲೀಸ್ ಠಾಣೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದ ಪ್ರಸಾದ್ ತನ್ನ ಪತ್ನಿಯನ್ನಯ ಜೊತೆಯಲ್ಲೇ ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಇರಿಸಿಕೊಂಡಿದ್ದನು. ಈಕೆ ತುಂಬು ಗರ್ಭಿಣಿಯಾಗಿದ್ದರಿಂದ ಹೆರಿಗೆಗಾಗಿ ಜ್ಯೋತಿಯ ತವರು ಮನೆ ತುಮಕೂರಿಗೆ ಕಳುಹಿಸಿ ಕೊಟ್ಟಿದ್ದನು. ಅಷ್ಟೆ ಅಂದಿನಿಂದ ಇಂದಿನವರೆಗೆ ಹೇಗಿದ್ದಿಯ ಎಂದು ಒಂದೇ ಒಂದು ಮಾತಾನ್ನು ಸಹ ಕೇಳಿಲ್ಲ. ಆದರೆ ಈಗ ಪ್ರಸಾದ್ ಬೇರೆ ವರಸೆ ಶುರು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ನಿನ್ನ ನನ್ನ ಮಧ್ಯೆ ಪತಿ-ಪತ್ನಿ ಸಂಬಂಧವೇ ಇಲ್ಲ. ನಾನು ನಿನ್ನನ್ನ ಮದುವೆಯೇ ಆಗಿಲ್ಲ. ಆ ಮಗು ನನ್ನದಲ್ಲ ಎಂದು ಪ್ರಸಾದ್ ಹೇಳುತ್ತಿದ್ದಾನೆ. ಅಲ್ಲದೇ ಈಗಾಗಲೇ ಹುಣಸೂರು ಮೂಲಕದ ಯುವತಿ ಜೊತೆ ಇನ್ನೊಂದು ಮದುವೆಯಾಗೋಕೆ ಸಿದ್ಧತೆ ಮಾಡಿಕೊಂಡಿರುವ ಪ್ರಸಾದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ದಿಕ್ಕು ಕಾಣದ ಜ್ಯೋತಿ ನನಗೆ ಗಂಡ ಬೇಕು ಎಂದು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ವಿರಾಜ್ಪೇಟೆಯ ಪಾಲಿಬೆಟ್ಟದ ವಿಜಯಾ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಪ್ರಸಾದ್ಗೆ ಒಳ್ಳೆಯ ಸಂಬಳ ಇದೆ. ಜೀವನಕ್ಕೇನು ಸಮಸ್ಯೆ ಇಲ್ಲ ಜೊತೆಗೆ ಏನೇ ಸಮಸ್ಯೆ ಬಂದರು ದುಡ್ಡು ಕೊಟ್ಟು ಡೀಲ್ ಮಾಡಿಕೊಳ್ಳುತ್ತೀನಿ ಎಂಬ ಅಹಂಕಾರ ಪ್ರಸಾದ್ಗೆ ಇದೆ. ನಿನ್ನ ಮೇಲೆ ಹೀಗೆ ಆರೋಪ ಇದ್ಯಲ್ಲಪ್ಪ ಎಂದು ಕೇಳಿದರೆ, ನಾನು ಆಕೆಯನ್ನು ಮದುವೆಯನ್ನೇ ಆಗಿಲ್ಲ. ಯಾವುದೇ ಸಾಕ್ಷಿಗಳಿಲ್ಲ. ಆ ಮಗು ಕೂಡ ನನ್ನದಲ್ಲ ಬೇಕಾದರೆ ಡಿಎನ್ಎ ಟೆಸ್ಟ್ ಮಾಡಿಸಿ ಎಂದು ಪ್ರಸಾದ್ ಹೇಳುತ್ತಾನೆ.
ಸದ್ಯ ಜ್ಯೋತಿ ತುಮಕೂರು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಸಾದ್ ಇನ್ನೊಂದು ಮದುವೆ ಆಗುವುದನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.