Tag: Ayogya

  • ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು

    ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು

    ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯ ಮೇಲೆ ಎಫ್‍ಐಆರ್ ದಾಖಲಾಗಿದೆ.

    ದೃಶ್ಯ `ಅಯೋಗ್ಯ’ ಸಿನಿಮಾದ ಸಹ ನಟಿಯಾಗಿದ್ದು, ಈಕೆ ಬ್ಲಾಕ್‍ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಸ್ನೇಹಿತ ಪ್ರಶಾಂತ್ ಎಂಬವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ದೃಶ್ಯ ಪ್ರಶಾಂತ್ ಜೊತೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದಳು. ಸಲುಗೆ ಬೆಳೆಸಿಕೊಂಡಿದ್ದ ಈಕೆ ಪ್ರಶಾಂತ್ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಚೆಕ್ ಮಾಡುತ್ತಿದ್ದಳು. ಬಳಿಕ ಇನ್ ಸ್ಟಾಗ್ರಾಂ ಬಳಸಿ ಅದರಲ್ಲಿ ಬೇರೆ ಹುಡುಗ-ಹುಡುಗಿಗೆ ದೃಶ್ಯ ಮೆಸೇಜ್ ಮಾಡುತ್ತಿದ್ದಳು. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ತನ್ನ ಖಾಸಗಿ ಫೋಟೋಗಳನ್ನು ಸಂಗ್ರಹಿಸಿದ್ದ ದೃಶ್ಯ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ನೀಡಿದ್ದರು. ಇದಾದ ಬಳಿಕ ಮತ್ತೆ ನನ್ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಬಳಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ.

    ಸದ್ಯಕ್ಕೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದು, ಈಕೆ ಹಿಂದೆ ಇರುವ ಕೆಲ ಮಂದಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸೈಬರ್ ಕ್ರೈಂ ಪೊಲೀಸರು ದೃಶ್ಯ ಮೊಬೈಲ್ ನ ಸೀಜ್ ಮಾಡಿದ್ದು, ಮೊಬೈಲ್‍ನನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

    ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

    ಬಳ್ಳಾರಿ: ಗಣಿನಾಡು ಬಳ್ಳಾರಿಗೆ ಅಯೋಗ್ಯ ಚಿತ್ರತಂಡ ಭೇಟಿ ನೀಡಿದ್ದು, ಅಲ್ಲಿನ ಉಮಾ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡಿದೆ.

    ಅಯೋಗ್ಯ ಚಿತ್ರ ವೀಕ್ಷಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿನಾಸಂ ಸತೀಶ್ ಅವರು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಡೆಯಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಗೆಲವು ನನ್ನ ಗೆಲುವಲ್ಲ, ಅಭಿಮಾನಿಗಳ ಗೆಲುವಾಗಿದೆ. ಈ ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಅತಿ ಹೆಚ್ಚು ಪ್ರೋತ್ಸಾಹ ದೊರಕುತ್ತಿದೆ. ಅದು ನನ್ನ ಸಿನಿಮಾವನ್ನು ಇಷ್ಟು ಬೆಂಬಲಿಸಿರುವುದು ನನ್ನ ಹಾಗೂ ನಮ್ಮ ಚಿತ್ರತಂಡದ ಪುಣ್ಯ ಎಂದು ಹೇಳಬಹುದು ಎಂದು ಹೇಳಿದ್ದಾರೆ.

    ನಾವು ಪ್ರಮುಖವಾಗಿ ಬಯಲು ಮುಕ್ತ ಶೌಚಾಲಯದ ದೃಷ್ಠಿಕೋನದಯಡಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಯಲು ಶೌಚಾಲಯ ಇನ್ನೂ ಸಹ ಇದೆ. ಬಯಲು ಶೌಚಾಲಯಕ್ಕೆ ಹೋದಾಗ ಹಾವು ಕಚ್ಚಿ ಸತ್ತವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ರೇಪ್ ಅಟೆಮ್ಟ್ ಕೂಡ ಹೆಚ್ಚು ನಡೆಯುತ್ತಿವೆ. ಈ ಎಲ್ಲಾ ಅವಾಂತರಗಳಿಂದ ತಪ್ಪಿಸುವ ಉದ್ದೇಶವೇ ನಮ್ಮ ಚಿತ್ರದ ಮೂಲ ಮಂತ್ರವಾಗಿದೆ. ಬಳ್ಳಾರಿ ಜನರಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಮತ್ತೆ ನಾನು ಬಳ್ಳಾರಿಗೆ ಬರುವೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಗಳು ನಿನಾಸಂ ಸತೀಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ಚಿತ್ರದಲ್ಲಿ ನಿನಾಸಂ ಸತೀಶ್ ಅವರಿಗೆ ನಟಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv