Tag: Authority

  • ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಬೆಂಗಳೂರು: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಪಡೆದಿದೆ. ಇದರಿಂದ ಕರ್ನಾಟಕದ ಕಾರ್ಯಕರ್ತರಲ್ಲೂ ಸಹ ಉತ್ಸಾಹ ಹೆಚ್ಚಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಕೂಡಾ ಬಿಜೆಪಿ ಅಧಿಕಾರ ಪಡೆಯುವುದು ಖಚಿತ ಎಂದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ಶೋಷಿತರು, ಬಡವರು, ಹಿಂದುಳಿದ ವರ್ಗದವರು ಮತ್ತು ರೈತರ ಕಡೆ ನಮ್ಮ ಪ್ರಧಾನಿ ವಿಶೇಷ ಗಮನ ಹರಿಸುತ್ತಾರೆ. ಉತ್ತರ ಪ್ರದೇಶ ಸೇರಿ ಈ ನಾಲ್ಕು ರಾಜ್ಯಗಳಲ್ಲೂ ಮುಖ್ಯಮಂತ್ರಿಗಳು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ಈ ಗೆಲುವು ನಮ್ಮದಾಗಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದೆ ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಜನಪರ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವೂ ಇದೆ. ಆದ್ದರಿಂದ ಇಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. 150 ಸ್ಥಾನ ನಮಗೆ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಪಕ್ಷದ ಮುಖಂಡತ್ವದಲ್ಲೂ ಬದಲಾವಣೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಲಾಗುವುದು. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸಚಿವ ಸಂಪುಟ ವಿಸ್ತರಣೆ ಮತ್ತು ಸೇರ್ಪಡೆ ಆಗುವವರ ಕುರಿತು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದರು. ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಮತ್ತು ಪ್ರಚಾರ ಸಾಧ್ಯತೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ನಂತರವೂ ರಾಹುಲ್ ಅವರಿಗೆ ಇಲ್ಲಿ ಪ್ರಚಾರ ಮಾಡುವ ತಾಕತ್ತಿದೆಯೇ ಎಂದು ಅವರು ನಗುತ್ತಲೇ ಪ್ರಶ್ನಿಸಿದರು.

  • ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆಕೆಯ ಗಂಡ ದರ್ಪ ತೋರಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಸಾಥ್ ನೀಡಿದ ಘಟನೆ ಜಿಲ್ಲೆಯ ಜಗಳೂರು ತಾಲಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಕುಮಾರಿ ಹಾಗೂ ಶಾಸಕ ಎಸ್.ವಿ ರಾಮಚಂದ್ರಪ್ಪ ಹಾಗೂ ಬೆಂಬಲಿಗರು ಬಂದಿದ್ದರು. ಆದರೆ ಈ ಸಮಯದಲ್ಲಿ ಶಾಂತಕುಮಾರಿ ಪತಿ ಶಶಿಧರ್, ಡಾಕ್ಟರ್ ಗೆ ಮಾಹಿತಿ ಹಾಗೂ ದ್ವೇಷದಿಂದ ಆಡಳಿತ ನಡೆಸುತ್ತಿದ್ದೀರಿ ಎಂದು ಹೆಂಡತಿಯ ಅಧಿಕಾರವನ್ನು ಬಳಸಿಕೊಂಡು ಅವಾಜ್ ಹಾಕಿದ್ದಾರೆ. ಆಗ ವೈದ್ಯಾಧಿಕಾರಿ ಮುರುಳೀಧರ್ ಅವರು ಶಶಿಧರ್ ಗೆ ಬೆರಳು ತೋರಿಸಿ ಮಾತಾಡಿದ್ದಾರೆ.

    ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯೆ, ನನ್ನ ಪತಿಗೆ ಬೆರಳು ತೋರಿಸಿ ಮಾತಾಡುತ್ತೀಯಾ ಹುಷಾರ್ ಅಂತ ಆವಾಜ್ ಹಾಕಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡ ಶಾಂತಕುಮಾರಿಗೆ ಸಾಥ್ ಕೊಟ್ಟು ಆವಾಜ್ ಹಾಕಿದ್ದಾರೆ. ಪತ್ನಿ ಅಧಿಕಾರವನ್ನ ಪತಿ ಶಶಿಧರ್ ಚಲಾಯಿಸಿ ಅಧಿಕಾರಿಗಳಿಗೆ ಕಿರುಕುಳ, ಅವಾಜ್ ಹಾಕಿದ್ರೂ ಶಾಸಕರು ಮಾತ್ರ ಮೌನವಹಿಸಿದ್ದಾರೆ.

    ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯನ ಗಂಡ ಶಶಿಧರ್ ಕಾಟ ಕೊಡುತ್ತಲೇ ಬರುತ್ತಿದ್ದರೂ ಅಧಿಕಾರಿಗಳ ಬೆಂಬಲಕ್ಕೆ ಬಾರದ ಶಾಸಕರು, ಈಗ ಸದಸ್ಯೆಯ ಪತಿಯ ಬೆಂಬಲಕ್ಕೆ ಬಂದು ಅವಾಜ್ ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ಆಸ್ಪತ್ರೆಯಲ್ಲಿ ಏನೇ ಲೋಪದೋಷ ಅಕ್ರಮ ಇದ್ದರೂ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಳಬೇಕಿತ್ತು. ಕಳೆದ ಒಂದು ವರ್ಷದ ಕೆಳಗೆ ಮಾಜಿ ಕಾಂಗ್ರೆಸ್ ಶಾಸಕನ ಆಪ್ತರೊಬ್ಬರು ಇದೇ ರೀತಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದರು. ಈಗ ಜಿಲ್ಲಾಪಂಚಾಯಿತಿ ಸದಸ್ಯೆಯ ಪತ್ನಿ ಅವಾಜ್ ಹಾಕಿದ್ದಾರೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಷ್ಟ, ಅಂತದರಲ್ಲಿ ಬಂದಂತಹ ವೈದ್ಯರಿಗೆ ಜನಪ್ರತಿನಿಧಿಗಳೇ ಅವಾಜ್ ಹಾಕಿದರೇ ಅವರಿಗೆ ರಕ್ಷಣೆ ಕೊಡೋರು ಯಾರು ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ.

  • ದೇವಾಲಯದ ಎಂಟ್ರಿ ನಿರಾಕರಿಸಿದ್ದಕ್ಕೆ ಸಿಬ್ಬಂದಿ ಮೇಲೆ ಮಹಿಳಾ ಪೊಲೀಸ್ ಅಧಿಕಾರಿ ಹಲ್ಲೆ

    ದೇವಾಲಯದ ಎಂಟ್ರಿ ನಿರಾಕರಿಸಿದ್ದಕ್ಕೆ ಸಿಬ್ಬಂದಿ ಮೇಲೆ ಮಹಿಳಾ ಪೊಲೀಸ್ ಅಧಿಕಾರಿ ಹಲ್ಲೆ

    ಮುಂಬೈ: ಮಹಿಳೆ ಒಬ್ಬರು ಸರಿಯಾದ ಉಡುಪು ಧರಿಸಿಲ್ಲ ಎಂದು ದೇವಸ್ಥಾನದ ಒಳಗೆ ಹೋಗಲು ತಡೆದಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸಬ್ ಇನ್ಸ್ ಪೆಕ್ಟರ್ ಆದ ಪ್ರತೀಕ್ಷಾ ಲಾಕಡೆ ತನ್ನ ತಾಯಿ ಹಾಗೂ ತನ್ನ ಮಗನ ಜೊತೆ ಮುಂಬೈನ ಕಲ್ಯಾಣ್ ನಲ್ಲಿರುವ ಜರಿಮರಿ ದೇವಸ್ಥಾನಕ್ಕೆ ಹೋಗಿದ್ದರು. ಆಗ ದೇವಸ್ಥಾನದ ಸಿಬ್ಬಂದಿ ಒಬ್ಬರು ಪ್ರತೀಕ್ಷಾ ಉಡುಪುನ್ನು ನೋಡಿ ಪ್ರವೇಶ ನಿರಾಕರಿಸಿದ್ದಾರೆ.

    ಸಿಐಡಿ ಡಿವಿಷನ್ ನ ಅಧಿಕಾರಿ ಪ್ರತೀಕ್ಷಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಸಂಜೆ ಸುಮಾರು 7 ಘಂಟೆಗೆ ಪೂಜೆ ನಡೆಯುವ ಸಮಯದಲ್ಲಿ ನನ್ನ ಮಗ ಆಟವಾಡಲು ಹೊರಗೆ ಓಡಿ ಹೋದನು. ನಾನು ಹೊರಗೆ ಹೋಗಿ ಅವನನ್ನು ಕರೆದುಕೊಂಡು ಒಳಗೆ ಬರುವಾಗ ಅಲ್ಲಿದ ಸಿಬ್ಬಂದಿ ಒಬ್ಬರು ನನ್ನನ್ನು ತಡೆದು, ನನ್ನ ಉಡುಪು ಸರಿಯಿಲ್ಲ ಎಂದು ಹೇಳಿ ದೇವಸ್ಥಾನದ ಹೊರಗೆ ಹೋಗಲು ಹೇಳಿದ್ದರು. ಗೌನ್ ಧರಿಸಿ ಬರುವವರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ ಎಂದು ದೇವಸ್ಥಾನದ ಆವರಣದಲ್ಲಿ ಬೋರ್ಡ್ ಹಾಕಲಾಗಿದೆ ಆದರೂ ಪ್ರವೇಶ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ನಾನು ರಾತ್ರಿ ವೇಳೆ ಧರಿಸುವ ಉಡುಪು ಹಾಕಿದ್ದೇನೆ ಎಂದು ಹೇಳಿ ನಿಂದಿಸಲು ಶುರು ಮಾಡಿದ್ದರು. ದೇವಸ್ಥಾನದ ಒಳಗೆ ಹೋಗಲು ಬಿಡದೆ ನನ್ನನ್ನು ತಡೆದರು ಎಂದು ಹೇಳಿದರು.

    ಪ್ರತೀಕ್ಷಾ ಧರಿಸಿದ್ದ ಉಡುಪು ಹೇಗಿತ್ತು?
    ನಾನು ಉದ್ದವಾದ ಸ್ಕರ್ಟ್ ಮತ್ತು ಟೀ- ಶರ್ಟ್ ಹಾಕಿದ್ದೇನೆ ಎಂದು ಹೇಳಿದ್ದರೂ ದೇವಸ್ಥಾನದ ಸಿಬ್ಬಂದಿ ಆದ ಆಶಾ ಗಾಯಕ್‍ ವಾಡ್ ನನ್ನ ಮಾತು ಕೇಳಲಿಲ್ಲ. ನನ್ನ ಮಾತು ಕೇಳದೆ ನನ್ನನ್ನು ನಿಂದಿಸಲು ಶುರು ಮಾಡಿ ನಂತರ ಅಸಭ್ಯವಾಗಿ ಮಾತನಾಡಿದ್ದರು. ನನ್ನ ಮಗನ ಮುಂದೆಯೇ ಆಶಾ ಆ ರೀತಿ ಮಾತನಾಡಲು ಶುರು ಮಾಡಿದ್ದಾಗ ನಾನು ನನ್ನ ತಾಳ್ಮೆಯನ್ನು ಕಳೆದುಕೊಂಡೆ ಎಂದು ಪ್ರತೀಕ್ಷಾ ವಿವರಿಸಿದ್ದಾರೆ.

    ಜಗಳ ಶುರುವಾಗಿದ್ದು ಹೇಗೆ?:
    ದೇವಾಲಯ ಪ್ರವೇಶಿಸಲು ನಿಗದಿಯಾಗಿದ್ದ ನಿಯಮದ ಪ್ರಕಾರ ಧರಿಸಬೇಕಾದ ಉಡುಪು ಧರಿಸಿಲ್ಲ ಎಂದು ಹೇಳಿ ಪತ್ರೀಕ್ಷಾರ ಉಡುಪನ್ನು ಗಾಯಕ್‍ ವಾಡ್ ಹಿಡಿದು ಎಳೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಪ್ರತೀಕ್ಷಾ ಗಾಯಕ್‍ ವಾಡ್ ಗೆ ಹೊಡೆದಿದ್ದಾರೆ. ಜಗಳದ ಬಗ್ಗೆ ಪ್ರತೀಕ್ಷಾ ಪ್ರತಿಕ್ರಿಯಿಸಿ, ನಾನು ನನ್ನ ರಕ್ಷಣೆಗಾಗಿ ಆಕೆಯ ಮೇಲೆ ಕೈ ಮಾಡಿದೆ. ನನ್ನ ಮಗ ನಮ್ಮಿಬ್ಬರ ಜಗಳವನ್ನು ತಡೆಯಲು ಬಂದಿದ್ದನು. ಆದರೆ ಅವನಿಗೆ ಪೆಟ್ಟು ಬೀಳಬಾರದೆಂದು ಆತನನ್ನು ದೂರದಲ್ಲಿ ಕೂರಿಸಿದೆ. ಆದರೆ ಆ ಮಹಿಳೆ ಮತ್ತೆ ಅಸಭ್ಯವಾಗಿ ನಿಂದಿಸಲು ಶುರು ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಹೊಡೆದಿದ್ದೇನೆ ಎಂದು ತಿಳಿಸಿದ್ದಾರೆ.

    ಪ್ರತೀಕ್ಷಾ ಹಾಗೂ ಗಾಯಕ್‍ ವಾಡ್ ನಡುವೆ ವಾಗ್ವಾದ ನಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಲಾಕಡೆ ಅವರು ಗಾಯ್ಕ್‍ ವಾಡ್ ಮೇಲೆ ಹಲ್ಲೆ ನಡೆಸಿರೋದು ಕಂಡು ಬಂದಿದೆ.

    ಘಟನೆ ನಡೆದ ನಂತರ ಗಾಯಕ್‍ ವಾಡ್ ಮತ್ತು ಪ್ರತೀಕ್ಷಾ ದೂರು ನೀಡಿದ್ದು ನಾನ್- ಕಾಗ್ನಿಸೆಬಲ್ ಕೇಸ್ ದಾಖಲಾಗಿದೆ. ಈ ಬಗ್ಗೆ ಕೋಶಲೆವಾಡಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿ, ಈ ಜಗಳ ಮೊದಲು ಯಾರೂ ಶುರು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.