Tag: australia

  • ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯವನ್ನು ಟೀಂ ಇಂಡಿಯಾ ಭಾನುವಾರ ಗೆದ್ದರೆ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ. ನಾಳೆಯ ಪಂದ್ಯ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇಲ್ಲಿ ಇದುವರೆಗೆ ಆಡಿದ 4 ಪಂದ್ಯವನ್ನೂ ಭಾರತವೇ ಗೆದ್ದಿದೆ. ಆಸೀಸ್ ವಿರುದ್ಧದ ಪಂದ್ಯವನ್ನೂ ಗೆದ್ದರೆ ಭಾರತ ಈ ಕ್ರೀಡಾಂಗಣದಲ್ಲಿ 5ನೇ ಪಂದ್ಯವನ್ನು ಗೆದ್ದಂತಾಗುತ್ತದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಲಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿದೆ. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗುತ್ತದೆ. ಇದು ಕೂಡಾ ಭಾರತದ ಪಾಲಿಗೆ ದಾಖಲೆ ಎನಿಸಲಿದೆ.

    ರನ್ ಮೆಷಿನ್: ಇಂದೋರ್ ಕ್ರೀಡಾಂಗಣ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಇಲ್ಲಿ ರನ್ ಮಳೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಕೆಲ ದಿನಗಳಿಂದ ಇಲ್ಲಿ ಮಳೆಯಾಗುತ್ತಿದ್ದು ಭಾನುವಾರವೂ ಮಳೆ ಬಂದರೆ ರನ್ ಮಳೆಯಾಗಲ್ಲ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.

    ಟೀಂ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಉತ್ತಮ ಆಟವಾಡುತ್ತಿದೆ. 5 ಏಕದಿನ ಪಂದ್ಯಗಳಲ್ಲಿ ಭಾರತ 2-0 ಮುನ್ನಡೆಯಲ್ಲಿದೆ. ಭಾನುವಾರದ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಪಡಿಸಿಕೊಳ್ಳಲಿದೆ.

  • ಮೈ ಕೈ ಅಲ್ಲಾಡಿಸಿ ಸ್ಮಿತ್‍ಗೆ ತೋರು ಬೆರಳು ತೋರಿಸಿದ ಕೊಹ್ಲಿ!

    ಮೈ ಕೈ ಅಲ್ಲಾಡಿಸಿ ಸ್ಮಿತ್‍ಗೆ ತೋರು ಬೆರಳು ತೋರಿಸಿದ ಕೊಹ್ಲಿ!

    ನವದೆಹಲಿ: ಕ್ರಿಕೆಟ್ ಆಟದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಮೂಡ್‍ನಲ್ಲಿರುವುದು ನಿಮಗೆಲ್ಲ ಗೊತ್ತಿರಬಹುದು. ಈಗ ಮತ್ತೊಮ್ಮೆ ತಮ್ಮ ಈ ಸ್ವಭಾವನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ನಾಯಕ ವಿರಾಟ್ ಕೊಹ್ಲಿ ಆಸಿಸ್ ತಂಡದ ನಾಯಕ ಸ್ಟಿವ್ ಸ್ಮಿತ್‍ಗೆ ತೋರು ಬೆರಳು ತೋರಿಸಿ ಕಿಚಾಯಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಭಾನುವಾರ ಚೆನ್ನೈನಲ್ಲಿ ನಡೆದ ಮೊದಲ ಏಕದಿನದ 45ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಔಟಾಗಿದ್ದಾರೆ ಎಂದು ಆಸೀಸ್ ಆಟಗಾರರು ಎಲ್‍ಬಿಗೆ ಮನವಿ ಸಲ್ಲಿಸಿದ್ದರು. ಆದರೆ ಬೌಲರ್ ಮಾರ್ಕಸ್ ಸ್ಟೊಯಿನಿಸ್ ಮನವಿಯನ್ನು ಅಂಪೈಸ್ ತಿರಸ್ಕರಿಸಿ ನಾಟೌಟ್ ಎಂದರು.

    ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ಡಿಆರ್‍ಎಸ್ ಮೊರೆ ಹೋಯಿತು. ಡಿಆರ್‍ಎಸ್‍ನಲ್ಲಿ ಬಾಲ್ ಬ್ಯಾಟಿಗೆ ತಗಲಿ ಮತ್ತೆ ಪ್ಯಾಡ್ ಗೆ ಬಡಿಯುವುದು ಸ್ಪಷ್ಟವಾಗಿ ಕಾಣಿಸಿತ್ತು. ಅಂಪೈರ್ ಮತ್ತೆ ನಾಟೌಟ್ ಎಂದು ತೀರ್ಪು ನೀಡಿದರು.

    ಡಿಆರ್‍ಎಸ್ ರಿವ್ಯೂ ಫೇಲ್ ಆಗಿದ್ದನ್ನು ನೋಡಿ ಸಂತೋಷಗೊಂಡ ಕೊಹ್ಲಿ ಡ್ರೆಸ್ಸಿಂಗ್ ರೂಂ ನಲ್ಲಿ ಕುಳಿತುಕೊಂಡಿದ್ದ  ಸ್ಥಳದಲ್ಲೇ ಮೈ ಕೈ ಅಲ್ಲಾಡಿಸಿ ತೋರು ಬೆರಳು ತೋರಿಸಿ ಆಸೀಸ್ ಆಟಗಾರರನ್ನು ಕಿಚಾಯಿಸಿದ್ದಾರೆ. ಈಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

    https://twitter.com/rohitpandeyee/status/909380972440727552

  • ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

    ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

    ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 26 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಆಸೀಸ್ ಬ್ಯಾಟಿಂಗ್ ಆರಂಭಕ್ಕೂ ಮುನ್ನಾ ಭಾರೀ ಮಳೆ ಸುರಿದ ಪರಿಣಾಮ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ 21 ಓವರ್ ಗಳಲ್ಲಿ 164 ರನ್ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಆಸೀಸ್ ಪರ ಗ್ಲೇನ್ ಮ್ಯಾಕ್ಸ್ ವೆಲ್ ಸ್ಫೋಟಕ 39 ರನ್(18 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದರೆ ಜೇಮ್ಸ್ ಫಾಲ್ಕನರ್ ಔಟಾಗದೇ 32 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭಾರತದ ಪರವಾಗಿ ಸ್ಪಿನ್ನರ್ ಚಹಲ್ 3 ವಿಕೆಟ್ ಕಬಳಿಸಿದರೆ, ಕಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು. ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿದ್ದರೂ ಟೀಂ ಇಂಡಿಯಾದ ಫೀಲ್ಡಿಂಗ್ ಉತ್ತಮವಿರಲಿಲ್ಲ. ಕೈಗೆ ಸಿಕ್ಕಿದ್ದ ಹಲವು ಸುಲಭದ ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದರು.

    ಭಾರತದ ಭರ್ಜರಿ ಬ್ಯಾಟಿಂಗ್: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿತ್ತು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

    ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

    ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತ್ತು.

    ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

    ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು.

    ಸ್ಫೋಟಕ 83 ರನ್ ಸಿಡಿಸಿ 2 ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     

    https://twitter.com/editorsuresh/status/909275189392715777
     


  • 11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

    11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

    ಚೆನ್ನೈ: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

    ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

    ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್‍ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತು.

    ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

    ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

     


     

  • ಆಸ್ಟ್ರೇಲಿಯಾದ ಕುರಿ ಮಾಂಸ ಜಾಹಿರಾತಿನಲ್ಲಿ ಗಣೇಶ- ಭಾರತದಿಂದ ದೂರು ದಾಖಲು

    ಆಸ್ಟ್ರೇಲಿಯಾದ ಕುರಿ ಮಾಂಸ ಜಾಹಿರಾತಿನಲ್ಲಿ ಗಣೇಶ- ಭಾರತದಿಂದ ದೂರು ದಾಖಲು

    ಸಿಡ್ನಿ: ಆಸ್ಟ್ರೇಲಿಯಾದ ಕುರಿ ಮಾಂಸದ ಜಾಹಿರಾತೊಂದರಲ್ಲಿ ಹಿಂದೂ ದೇವರಾದ ಗಣೇಶನನ್ನು ತೋರಿಸಲಾಗಿದ್ದು ಇದರ ವಿರುದ್ಧ ಭಾರತ ಅಧಿಕೃತ ದೂರು ದಾಖಲಿಸಿದೆ.

    ಇಂಡಸ್ಟ್ರಿ ಗ್ರೂಪ್ ಮೀಟ್ ಆ್ಯಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾದ ಈ ಜಾಹಿರಾತಿನಲ್ಲಿ ವಿವಿಧ ಧರ್ಮದ ದೇವರು ಹಾಗೂ ವ್ಯಕ್ತಿಗಳನ್ನ ತೋರಿಸಲಾಗಿದೆ. ಹಿಂದೂ ದೇವರಾದ ಗಣೇಶ, ಜೀಸಸ್, ಬುದ್ಧ ಹಾಗೂ ವೈಜ್ಞಾನಿಕ ಧರ್ಮ(ಸೈಂಟಾಲಜಿ)ಯ ಸಂಸ್ಥಾಪಕ ಎಲ್. ರಾನ್ ಹುಬ್ಬರ್ಡ್ ಒಂದೇ ಮೇಜಿನ ಮೇಲೆ ಕುಳಿತುಕೊಂಡು ಕುರಿ ಮಾಂಸದ ಊಟ ಮಾಡುತ್ತಿದ್ದು, ಅದನ್ನ ಹೊಗಳುತ್ತಿರುವಂತೆ ತೋರಿಸಲಾಗಿದೆ.

    ಇದಕ್ಕೆ ಆಸ್ಟ್ರೇಲಿಯಾದ ಭಾರತ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಷಯವನ್ನ ಆಸ್ಟ್ರೇಲಿಯಾ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಕ್ಯಾನ್‍ಬೆರಾದ ಭಾರತೀಯ ಹೈ ಕಮಿಷನ್ ತಿಳಿಸಿದೆ.

    ಜಾಹಿರಾತಿನಲ್ಲಿ ಹಿಂದೂ ದೇವರಾದ ಗಣೇಶ ಕುರಿ ಮಾಂಸವನ್ನು ಹೊಗುಳುವಂತೆ ತೋರಿಸಿರುವುದು ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಶನಿವಾರದಂದು ಹೈ ಕಮಿಷನ್ ಹೇಳಿಕೆ ನೀಡಿದೆ. ಸಿಡ್ನಿಯ ಭಾರತೀಯ ಕಾನ್ಸುಲೇಟ್ ಈ ಬಗ್ಗೆ ನೇರವಾಗಿ ಮೀಟ್ ಅಂಡ್ ಲೈವ್‍ಸ್ಟಾಕ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದು, ಜಾಹಿರಾತನ್ನು ಹಿಂಪಡೆಯುವಂತೆ ಕೇಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಮುದಾಯಿಕ ಗುಂಪುಗಳನ್ನ ಭೇಟಿ ಮಾಡುತ್ತಿರುವುದಾಗಿ ಇಂಡಸ್ಟ್ರಿ ಗ್ರೂಪ್ ತಿಳಿಸಿದೆ. ಜಾಹಿರಾತು ನಿರ್ಮಾಣ ಮಾಡುವಾಗ ತೀವ್ರ ಸಂಶೋಧನೆ ಹಾಗೂ ಸಮಾಲೋಚನೆ ನಡೆಸಲಾಗಿದೆ. ಏಕತೆಯನ್ನು ತೋರಿಸುವ ಉದ್ದೇಶದಿಂದ ಈ ಜಾಹಿರಾತು ಮಾಡಲಾಗಿದೆಯೇ ಹೊರತು ಅವಹೇಳನ ಮಾಡುವ ಉದ್ದೇಶವಿಲ್ಲ ಎಂದು ಹೇಳಿದೆ.

    https://www.youtube.com/watch?time_continue=134&v=n9UnNq9srog

  • ಮೈಸೂರು ಅರಮನೆ ನೋಡಿ ಕ್ರಿಕೆಟಿಗ ಬ್ರೇಟ್ ಲೀ ಹೇಳಿದ್ದು ಹೀಗೆ

    ಮೈಸೂರು ಅರಮನೆ ನೋಡಿ ಕ್ರಿಕೆಟಿಗ ಬ್ರೇಟ್ ಲೀ ಹೇಳಿದ್ದು ಹೀಗೆ

    ಮೈಸೂರು: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ತಮ್ಮ ಸ್ನೇಹಿತರ ಜೊತೆ ಮೈಸೂರು ಅರಮನೆ ವೀಕ್ಷಣೆಗೆ ಬಂದು ಹೊಗಳಿದ್ದಾರೆ.

    ಮೈಸೂರಿಗೆ ಭೇಟಿ ನೀಡಿದ ಬ್ರೇಟ್ ಲೀ ಅರಮನೆ ಕಂಡು ಬೆರಗಾಗಿದ್ದಾರೆ. ಅರಮನೆ ನೋಡಿದ ಬಳಿಕ ಆನೆಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಆನೆಗಳಿಂದ ಆರ್ಶಿವಾದ ಪಡೆದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು.

    ಇದು ಒಂದು ಒಳ್ಳೆಯ ಅನುಭವ ಹಾಗೂ ಸುಂದರ ಅರಮನೆ ಎಂದು ಟ್ವಿಟ್ಟರ್ ನಲ್ಲಿ ಪ್ರಶಂಸೆಯನ್ನು ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

  • ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‍ಪ್ರೀತ್ ಬುಮ್ರಾ ಸರ್ವಶ್ರೇಷ್ಠ ಸಾಧನೆ!

    ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‍ಪ್ರೀತ್ ಬುಮ್ರಾ ಸರ್ವಶ್ರೇಷ್ಠ ಸಾಧನೆ!

    ದುಬೈ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜಸ್‍ಪ್ರೀತ್ ಬುಮ್ರಾ ಐಸಿಸಿ ಪ್ರಕಟಿಸಿದ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    23 ವರ್ಷದ ಬುಮ್ರಾ ಜೂನ್ ತಿಂಗಳಿನಲ್ಲಿ 24 ಶ್ರೇಯಾಂಕ ಪಡೆಯುವ ಮೂಲಕ ಜೀವನ ಶ್ರೇಷ್ಠ ಸಾಧನೆ ಮಾಡಿದ್ದರು. ಆದರೆ ಈಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ 687 ರೇಟಿಂಗ್ ಪಡೆಯುವ ಮೂಲಕ 4 ಸ್ಥಾನಕ್ಕೆ ಹಾರಿ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ.

    ಕೊನೆಯದಾಗಿ ಸೆಪ್ಟೆಂಬರ್ 3ಕ್ಕೆ ಅಪ್‍ಡೇಟ್ ಆಗಿರುವ ಶ್ರೇಯಾಂಕ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 645 ರೇಟಿಂಗ್ ಪಡೆಯುವ ಮೂಲಕ 10ನೇ ಸ್ಥಾನವನ್ನು ಪಡೆದರೆ, 613 ರೇಟಿಂಗ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ 14ನೇ ಸ್ಥಾನವನ್ನು ಗಳಿಸಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 23ನೇ ಸ್ಥಾನ, ಅಮಿತ್ ಮಿಶ್ರಾ 25ನೇ ಶ್ರೇಯಾಂಕ ಪಡೆದಿದ್ದಾರೆ.

    ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‍ವುಡ್ 732 ರೇಟಿಂಗ್ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, 718 ರೇಟಿಂಗ್ ಪಡೆದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನ ಪಡೆದಿದ್ದಾರೆ. 701 ರೇಟಿಂಗ್ ಪಡೆದಿರುವ ಆಸ್ಟ್ರೇಲಿಯಾದ ಮೈಕಲ್ ಸ್ಟ್ರಾಕ್ ಮೂರನೇ ಸ್ಥಾನ ಪಡೆದಿದ್ದಾರೆ.

    ಏಕದಿನ ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 887 ರೇಟಿಂಗ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. 764 ರೇಟಿಂಗ್ ಪಡೆಯುವ ಮೂಲಕ ರೋಹಿತ್ ಶರ್ಮಾ 9ನೇ ಸ್ಥಾನ ಪಡೆದುಕೊಂಡಿದ್ದಾರೆ.

    ಆಲ್‍ರೌಂಡರ್ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಲು ಟೀಂ ಇಂಡಿಯಾ ಆಟಗಾರರು ವಿಫಲರಾಗಿದ್ದು, 228 ರೇಟಿಂಗ್ ಪಡೆಯುವ ಮೂಲಕ ರವೀಂದ್ರ ಜಡೇಜಾ 15ನೇ ಸ್ಥಾನಗಳಿಸಿದ್ದಾರೆ.

     

     

  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

    ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

    ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು(ಆಗಸ್ಟ್, 14) ಅಪರೂಪದಲ್ಲಿ ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ. ಈ ದಿನ ಕೇವಲ 4 ರನ್ ಗಳಿಸಿದ್ದರೆ ಡಾನ್ ಬ್ರಾಡ್ಮನ್ ವಿಶಿಷ್ಟವಾದ ದಾಖಲೆ ಬರೆಯುತ್ತಿದ್ದರು.

    69 ವರ್ಷದ ಹಿಂದೆ ಈ ದಿನ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 4 ರನ್ ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿಶೇಷ ದಾಖಲೆಯಿಂದ ಬ್ರಾಡ್ಮನ್ ವಂಚಿತರಾದರು.

    1948 ಆಗಸ್ಟ್ 14, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವದು. ಕ್ರಿಕೆಟ್ ಲೋಕದ ಏಕೈಕ ಡಾನ್, ಸರ್ ಬ್ರಾಡ್ಮನ್ ಕ್ರೀಸ್‍ಗಿಳಿದಿದ್ದರು. ಸರ್ವಶ್ರೇಷ್ಠ ಜೀವಮಾನ ಸಾಧನೆಗೆ ಬ್ರಾಡ್ಮನ್‍ಗೆ ಬೇಕಾಗಿದ್ದಿದ್ದು ಕೇವಲ 4 ರನ್. 4 ರನ್‍ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಆಟಗಾರ ಎಂಬ ಕೀರ್ತಿಗೆ ಬ್ರಾಡ್ಮನ್ ದೊರೆಯಾಗುತ್ತಿದ್ದರು.

    ಈ ಪಂದ್ಯದಲ್ಲಿ ತಾನು ಎದುರಿಸಿದ ಹೋಲಿ ಬೌಲಿಂಗ್‍ನ ಎರಡನೇ ಎಸೆತದಲ್ಲಿ ಬ್ರಾಡ್ಮನ್ ಕ್ಲೀನ್ ಬೌಲ್ಡ್ ಆದರು. ಅದು ಬ್ರಾಡ್ಮನ್ ಕ್ರಿಕೆಟ್ ಇತಿಹಾಸದ ಕೊನೆಯ ಇನ್ನಿಂಗ್ಸ್ ಆಗಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ ಒಂದು ಇನ್ನಿಂಗ್ಸ್ ಮತ್ತು 149 ರನ್‍ಗಳಿಂದ ಗೆದ್ದುಕೊಂಡಿತ್ತು.

    52 ಟೆಸ್ಟ್ ಪಂದ್ಯಗಳ 80 ಇನ್ನಿಂಗ್ಸ್ ಮೂಲಕ ಡಾನ್ ಬ್ರಾಡ್ಮನ್ 99.94 ಸರಾಸರಿಯೊಂದಿಗೆ 6996 ರನ್ ಗಳಿಸಿದ್ದರು. 10 ಬಾರಿ ನಟೌಟ್ ಆಗಿದ್ದ ಇವರು ಗರಿಷ್ಠ 334 ರನ್ ಹೊಡೆದಿದ್ದರು. 29 ಶತಕ, 13 ಅರ್ಧಶತಕ ಹೊಡೆದಿದ್ದ ಇವರು 32 ಕ್ಯಾಚ್ ಹಿಡಿದಿದ್ದರು.

    ಇದನ್ನೂ ಓದಿ: ಕ್ಲೀನ್ ಸ್ವೀಪ್‍ನೊಂದಿಗೆ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕೊಹ್ಲಿ ಪಡೆ

    https://youtu.be/hvrOHYp8nRY

     

  • ನ್ಯೂಸ್ ರೂಮಿನಲ್ಲಿ ಕಾಣಿಸಿಕೊಂಡ ಹಾವು!- ಸಿಬ್ಬಂದಿ ಏನು ಮಾಡಿದ್ರು ನೋಡಿ

    ನ್ಯೂಸ್ ರೂಮಿನಲ್ಲಿ ಕಾಣಿಸಿಕೊಂಡ ಹಾವು!- ಸಿಬ್ಬಂದಿ ಏನು ಮಾಡಿದ್ರು ನೋಡಿ

     

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ವಾಹಿನಿಯೊಂದರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನ ಸಿಬ್ಬಂದಿಯೊಬ್ಬರು ಅತ್ಯಂತ ಸಲುಭವಾಗಿ ಹಿಡಿದಿರೋ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 9 ನ್ಯೂಸ್ ಡಾರ್ವಿನ್ ವಾಹಿನಿ ಫೇಸ್‍ಬುಕ್‍ನಲ್ಲಿ ಇದರ ವಿಡಿಯೋವನ್ನ ಅಪ್‍ಲೋಡ್ ಮಾಡಿದೆ.

    ಸೋಮವಾರದಂದು ಕಚೇರಿಯ ಎಡಿಟಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಟೇಬಲ್ ಮೇಲೆ ಹಾವು ಇದ್ದಿದ್ದನ್ನು ಮೊದಲಿಗೆ ಕ್ಯಾಮೆರಾಮ್ಯಾನ್ ನೋಡಿದ್ದರು. ನಂತರ ಹಾವುಗಳನ್ನ ಹಿಡಿಯೋದ್ರಲ್ಲಿ ಅನುಭವ ಹೊಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂದು ಸುಮಾರು 6 ಅಡಿ(2 ಮೀಟರ್) ಉದ್ದವಿದ್ದ ಹಾವನ್ನ ಹಿಡಿದರು ಎಂದು ಫೇಸ್ ಬುಕ್‍ನಲ್ಲಿ ವಿವರಿಸಲಾಗಿದೆ.

    ಆ ಮಹಿಳೆ ಒಂದಿಷ್ಟೂ ಭಯ ಪಡದೆ ಒಂದು ತಂತಿಯಲ್ಲಿ ಸ್ಪೀಕರ್ ಹಿಂದಿದ್ದ ಹಾವನ್ನ ಎಳೆದು ಬ್ಯಾಗ್‍ನೊಳಗೆ ಹಾಕಿದ್ದಾರೆ. ಈ ವೇಳೆ ಆ ಹಾವು ಒದ್ದಾಡೋದು ನೋಡಿದ್ರೆ ಒಂದು ಕ್ಷಣ ಎಂಥವರಿಗೂ ಮೈ ಜುಮ್ಮೆನದೇ ಇರದು.

    ಈ ವಿಡಿಯೋವನ್ನ ನ್ಯೂಸ್ ಡೈರೆಕ್ಟರ್ ಕೇಟ್ ಲೈಮನ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರಿಗರು ತಮಾಷೆಯಾಗಿ ಇದಕ್ಕೆ ಕಮೆಂಟ್‍ಗಳನ್ನ ಹಾಕಿದ್ದಾರೆ. ಹಾವನ್ನ ಅರಣ್ಯಕ್ಕೆ ಬಿಡಲಾಗಿದೆ ಎಂದು ಲೈಮನ್ ಹೇಳಿದ್ದಾರೆ.

    https://www.youtube.com/watch?v=F91k2fBocg8

  • ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಕ್ವೀನ್ಸ್ ಲ್ಯಾಂಡ್: ವನ್ಯಜೀವಿಗಳ ಜೊತೆ ಸಾಹಸ ಮಾಡೋದು ತುಂಬಾ ಕಷ್ಟ. ಈ ವನ್ಯಜೀವಿಗಳ ಅಧ್ಯಯನಕ್ಕೆ ಕೆಲವರು ತುಂಬಾ ತಲೆ ಕೆಡಿಸಿಕೊಂಡಿರುತ್ತಾರೆ. ಅಂತಹದರಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ವಿಶೇಷ ಸಾಧನೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ದ ನಿವಾಸಿಯಾದ ವನ್ಯಜೀವಿ ಉತ್ಸಾಹಿ ಬ್ಯೂ ಗ್ರೀವ್ಸ್ ಎಂಬಾತನಿಗೆ ಸಮುದ್ರದ ದಂಡೆಯ ಬಳಿ ಒಂದು ಗುಂಡಿ ಕಾಣಿಸಿಕೊಂಡಿದೆ. ಆ ಗುಂಡಿಯಲ್ಲಿ ಏನೋ ಒಂದು ಜೀವಿ ಇರಬೇಕು ಎಂದು ಭಾವಿಸಿಕೊಂಡು ಇಣುಕಿ ನೋಡಿದ್ದಾನೆ. ನೋಡಿದಾಗ ಆ ಗುಂಡಿಯಲ್ಲಿ ದೊಡ್ಡ ಗಾತ್ರದ ಏಡಿವೊಂದು ಕಾಣಿಸಿಕೊಂಡಿದೆ.

    ಆ ಏಡಿಯನ್ನು ಹೇಗಾದ್ರೂ ಮಾಡಿ ಹಿಡಿಯಲೇಬೇಕು ಅಂತ ಯೋಚಿಸುತ್ತಾನೆ. ತನ್ನ ಕೈಯಲ್ಲಿದ್ದ ಒಂದು ಸ್ಟಿಕ್ ಬಳಸಿಕೊಂಡು ತನ್ನ ಜೀವವನ್ನೇ ಪಣಕ್ಕೆ ಇಟ್ಟು ಗುಂಡಿಯ ಒಳಗಡೆ ನುಗ್ಗುತ್ತಾನೆ. ಅರ್ಧ ದೇಹದೊಂದಿಗೆ ಗುಂಡಿಯ ಒಳಗಡೆ ಹೋಗಿ ದೊಡ್ಡ ಏಡಿಯನ್ನು ಹೊರ ತೆಗೆದಿದ್ದಾನೆ.

    ಈ ವಿಡಿಯೋವನ್ನು ಫೇಸ್‍ಬುಕ್ ಗೆ ಜೂನ್ 26 ರಂದು ಅಪ್ಲೋಡ್ ಮಾಡಿದ್ದು, 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ 12 ಸಾವಿರಕ್ಕೂ ಅಧಿಕ ಮಂದಿ ಪೋಸ್ಟನ್ನು ಶೇರ್ ಮಾಡಿದ್ದಾರೆ.