Tag: australia

  • ಆಸ್ಟ್ರೇಲಿಯಾಗೆ ಹೊರಟ ಟೀಂ ಇಂಡಿಯಾ ಮಾಡುತ್ತಾ ಕಮಾಲ್?

    ಆಸ್ಟ್ರೇಲಿಯಾಗೆ ಹೊರಟ ಟೀಂ ಇಂಡಿಯಾ ಮಾಡುತ್ತಾ ಕಮಾಲ್?

    ಮುಂಬೈ: ಮುಂಬರುವ ಆಸೀಸ್ ಪ್ರವಾಸದ ಸಿದ್ಧತೆಯಲ್ಲಿದ್ದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರು ಇಂದು ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಿದರು. ಪ್ರಯಾಣದ ಆರಂಭಕ್ಕೂ ಮುನ್ನ ಹಲವು ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

    ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ತಲಾ ಮೂರು ಟಿ20, ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ವಿಶ್ವಕಪ್ ಟೂರ್ನಿಗೆ ಕೇವಲ 13 ಪಂದ್ಯಗಳು ಮಾತ್ರ ಉಳಿದಿದೆ. ಆದ್ದರಿಂದ ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಆಸೀಸ್ ನೆಲದಲ್ಲಿ ಇದುವರೆಗೂ ಒಮ್ಮೆಯೂ ಟೆಸ್ಟ್ ಸರಣಿಯಲ್ಲಿ ಗೆಲುವು ಪಡೆಯದ ಟೀಂ ಇಂಡಿಯಾ ಈ ಬಾರಿ ಆತ್ಮವಿಶ್ವಾಸದಿಂದಿದೆ. ಆಸೀಸ್ ಸರಣಿಗೂ ಮುನ್ನ ಟೀಂ ಇಂಡಿಯಾ ತವರು ನೆಲದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಅಲ್ಲದೇ ಟೆಸ್ಟ್ ಸರಣಿಯನ್ನು 2-0, ಏಕದಿನ ಸರಣಿಯನ್ನು 3-1 ಹಾಗೂ ಟಿ20 ಸರಣಿಯನ್ನು 3-0 ಅಂತದಲ್ಲಿ ಗೆದ್ದು ಸಂಭ್ರಮಿಸಿತ್ತು. ಆದರೆ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಕ್ರಮವಾಗಿ 2-1, 4-1 ಅಂತರದಲ್ಲಿ ಸೋಲುಂಡಿತ್ತು.

    ಆಸೀಸ್ ಸರಣಿಯಲ್ಲಿ ಮೊದಲು ಟಿ20 ಪಂದ್ಯಗಳು ಆರಂಭವಾಗಲಿದ್ದು, ನ.21ರಂದು ಮೊದಲ ಪಂದ್ಯ ನಡೆಯಲಿದೆ. ಬಳಿಕ ಟೆಸ್ಟ್ ಹಾಗೂ ಏಕದಿನ ಪಂದ್ಯಗಳು ನಿಗದಿಯಾಗಿದೆ. ಆಸೀಸ್ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಗೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಗಳಿಸುವ ಉತ್ತಮ ಅವಕಾಶ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಹಾಗೂ ಹಿರಿಯ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಬಡ್ಡಿ ಮೈದಾನಕ್ಕಿಳಿದ ಎಂಎಸ್ ಧೋನಿ!

    ಕಬಡ್ಡಿ ಮೈದಾನಕ್ಕಿಳಿದ ಎಂಎಸ್ ಧೋನಿ!

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಬಡ್ಡಿ ಆಡುವ ಮೂಲಕ ಭಾರತೀಯ ಕ್ರೀಡೆಗೆ ತಮ್ಮ ಬೆಂಬಲ ನೀಡಿದ್ದು, ಈ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಆಸೀಸ್ ಟೂರ್ನಿಯಿಂದ ಹೊರಗುಳಿದಿರುವ ಧೋನಿ ತಮ್ಮ ಬಿಡುವಿನ ಸಮಯವನ್ನು ಕಬಡ್ಡಿ ಮ್ಯಾಟ್ ಮೇಲೆ ಕಳೆದಿದ್ದು, ಮುಂಬೈನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಧೋನಿ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಈ ವೇಳೆ ಧೋನಿಯೂ ಕಬಡ್ಡಿ ಆಡಿದ್ದು, ಧೋನಿ ರೈಡ್ ಮಾಡಿರುವ ಫೋಟೋವನ್ನು ಕ್ರೀಡಾಸಂಸ್ಥೆಯೊಂದು ತನ್ನ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.

    ಪ್ರೋ ಕಬಡ್ಡಿ ಲೀಗ್ ಪ್ರಯುಕ್ತ ನಡೆದ ಶೂಟ್‍ಗಾಗಿ ಧೋನಿ ಕಬಡ್ಡಿ ಆಡುತ್ತಿರುವ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಫೇಸ್‍ಬುಕ್ ಪೋಸ್ಟ್ ನಲ್ಲಿ ಧೋನಿ ಕಬಡ್ಡಿ ಶೂಟ್ ನಲ್ಲಿ ಭಾಗವಹಿಸಿದ ವಿವಿಧ ದೃಶ್ಯಗಳನ್ನು ಕಾಣಬಹುದಾಗಿದೆ.

    ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿ ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಟಿ20ಗೆ ವಿಶ್ರಾಂತಿ ನೀಡಲಾಗಿತ್ತು. ಧೋನಿ ಅವರ ಸ್ಥಾನಲ್ಲಿ ಸೂಕ್ತ ವಿಕೆಟ್ ಕೀಪರ್ ಹುಡುಕಾಟ ನಡೆಸಲು ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಧೋನಿ ಅವರ ಸ್ಥಾನಕ್ಕೆ ಯುವ ಆಟಗಾರ ರಿಷಭ್ ಪಂತ್, ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದರು.

    ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಇಬ್ಬರ ಅನುಪಸ್ಥಿತಿಯಲ್ಲಿ ವಿಂಡೀಸ್ ಸರಣಿ ಎದುರಿಸಿದ್ದ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಟಿ 20 ಸರಣಿಯನ್ನು ವೈಟ್‍ವಾಶ್ ಮಾಡಿ 3-0 ಸಂತದಲ್ಲಿ ಜಯಗಳಿಸಿತ್ತು. ಆಸೀಸ್ ವಿರುದ್ಧದ ಟಿ20 ಟೂರ್ನಿಗೆ ಕೊಹ್ಲಿ ನಾಯಕತ್ವ ವಹಿಸಲಿದ್ದು, ಟೂರ್ನಿ ನವೆಂಬರ್ 21 ರಂದು ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಮುಂಬೈ: ಚೊಚ್ಚಲ ಐಪಿಎಲ್ ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾಗ ನಾನು ಮೊಹಮ್ಮದ್ ಕೈಫ್ ಅವರ ಅಹಂಕಾರವನ್ನು ಇಳಿಸಿದ್ದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಶೇನ್ ವಾರ್ನ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ `ನೋ ಸ್ಪಿನ್’ ಹೆಸರಿನಲ್ಲಿ ಆತ್ಮ ಚರಿತ್ರೆ ಬರೆದಿದ್ದು ಇದರಲ್ಲಿ ಐಪಿಎಲ್ ಪಂದ್ಯಗಳ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ವಾರ್ನ್ ಪುಸ್ತಕದಲ್ಲಿ ಏನಿದೆ?
    ನನ್ನ ತಂಡದಲ್ಲಿ ಕೈಫ್ ಆಡುತ್ತಿದ್ದರು. ಒಂದು ದಿನ ರಾಜಸ್ಥಾನ ತಂಡ ಹೋಟೆಲ್‍ಗೆ ಹೋದ ಸಂದರ್ಭದಲ್ಲಿ ಆಟಗಾರರೆಲ್ಲರೂ ತಮ್ಮ ರೂಮ್ ಕೀ ತೆಗೆದುಕೊಂಡು ಅವರ ಕೊಠಡಿಗೆ ತೆರಳಿದರು. ಈ ಸಮಯದಲ್ಲಿ ಕೈಫ್ ರಿಸೆಪ್ಷನಿಸ್ಟ್ ಬಳಿ ತೆರಳಿ “ನಾನು ಕೈಫ್” ಎಂದು ಹೇಳಿದರು.

    ಈ ಸಮಯದಲ್ಲಿ ಹೋಟೆಲ್ ಸಿಬ್ಬಂದಿ,”ನಮ್ಮಿಂದ ಏನು ಸಹಾಯ ಬೇಕು” ಎಂದು ಕೇಳಿದ್ದರು. ಇದಕ್ಕೆ ಕೈಫ್,”ನಾನು ಕೈಫ್” ಎಂದು ಮತ್ತೊಮ್ಮೆ ಹೇಳಿದರು. ಕೈಫ್ ಸಿಬ್ಬಂದಿ ಜೊತೆ ಮಾತನಾಡುವುದನ್ನು ಕಂಡು ನಾನು ಅಲ್ಲಿಗೆ ತೆರಳಿ,”ಏನಾದ್ರೂ ಸಮಸ್ಯೆ ಇದ್ಯಾ?” ಎಂದು ಪ್ರಶ್ನಿಸಿದೆ. ಈ ಸಮಯದಲ್ಲೂ ಕೈಫ್,”ನಾನು ಕೈಫ್” ಎಂದು ಉತ್ತರಿಸಿದರು.

    “ನಾನು ಟೀಂ ಇಂಡಿಯಾದ ಹಿರಿಯ ಆಟಗಾರ, ಹೀಗಾಗಿ ನನಗೆ ದೊಡ್ಡ ಕೊಠಡಿ ನೀಡಬೇಕು” ಎನ್ನುವ ಅರ್ಥದಲ್ಲಿ ಕೈಫ್ ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು. ಇದಕ್ಕೆ ನಾನು,”ನನ್ನನ್ನು ಬಿಟ್ಟು ಉಳಿದ ಎಲ್ಲರಿಗೂ ಸಣ್ಣ ರೂಮ್ ನೀಡಲಾಗಿದೆ. ನನ್ನ ಕೊಠಡಿಯಲ್ಲಿ ಆಗಾಗ ಸಭೆ ನಡೆಯಲಿರುವ ಕಾರಣ ದೊಡ್ಡ ರೂಮ್ ನೀಡಲಾಗಿದೆ” ಎಂದಾಗ ಕೈಫ್ ಅಲ್ಲಿಂದ ತೆರಳಿದರು ಎಂದು ವಾರ್ನ್ ಬರೆದುಕೊಂಡಿದ್ದಾರೆ.

    ತಮ್ಮ ಪುಸ್ತಕದಲ್ಲಿ ವಾರ್ನ್,”ಕೆಲ ಭಾರತೀಯ ಹಿರಿಯ ಆಟಗಾರರು ಕಿರಿಯ ಆಟಗಾರಲ್ಲಿ ಬ್ಯಾಗ್ ತರಲು ಹೇಳುತ್ತಾರೆ. ನನಗೆ ಇದು ಸರಿ ಕಾಣುವುದಿಲ್ಲ. ಮೈದಾನದಲ್ಲಿ ಎಲ್ಲರೂ ಸಮಾನರು. ಹಿರಿಯರು, ಕಿರಿಯರು ಎಂಬುದಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು” ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕ್ರಿಕೆಟ್ ಅಭಿಮಾನಿಗೆ ದೇಶ ಬಿಟ್ಟು ತೊಲಗು ಎಂದ ಕೊಹ್ಲಿ

    ಕ್ರಿಕೆಟ್ ಅಭಿಮಾನಿಗೆ ದೇಶ ಬಿಟ್ಟು ತೊಲಗು ಎಂದ ಕೊಹ್ಲಿ

    ಮುಂಬೈ: ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ತೊಲಗಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

    ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೊಹ್ಲಿ ಅಭಿಮಾನಿಗಳಿಗಾಗಿ ತಮ್ಮ ಆ್ಯಪ್ ಬಿಡುಗಡೆ ಮಾಡಿದ್ದರು. ಈ ಆ್ಯಪ್‍ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ಗರಂ ಆಗಿ ಉತ್ತರಿಸಿದ್ದಾರೆ. ಆ್ಯಪ್‍ನಲ್ಲಿ ಕೊಹ್ಲಿಗೆ ಪ್ರಶ್ನೆ ಮಾಡಿದ್ದ ಅಭಿಮಾನಿ, ನಾನು ಭಾರತದ ಬ್ಯಾಟ್ಸ್ ಮನ್‍ಗಳ ಆಟಕ್ಕಿಂತಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರ ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತೇನೆ. ಟೀಂ ಇಂಡಿಯಾ ಬ್ಯಾಟ್ಸ್ ಮನ್‍ಗಳಿಗೆ ಅಂತಹ ವಿಶೇಷ ಸಾಮರ್ಥ್ಯ ಏನು ಇಲ್ಲ ಎಂದು ಹೇಳಿದ್ದರು.

    ಅಭಿಮಾನಿಯ ಈ ಮಾತುಗಳಿಗೆ ಗರಂ ಆಗಿ ಉತ್ತರ ನೀಡಿದ ಕೊಹ್ಲಿ, ನೀವು ಭಾರತದಲ್ಲಿ ಇರಲು ಯೋಗ್ಯರಲ್ಲ ಎಂದು ನನಗೆ ಅನ್ನಿಸುತ್ತಿದೆ. ಅದ್ದರಿಂದ ನೀವು ಬೇರೆಡೆ ತೆರಳಿ. ನಮ್ಮ ದೇಶವನ್ನು ಪ್ರೀತಿ ಮಾಡದ ನೀವು ಮತ್ತೆ ಏಕೆ ದೇಶದಲ್ಲಿ ವಾಸಿಸುತ್ತಿದ್ದೀರಿ? ನೀವು ನನ್ನನ್ನು ಇಷ್ಟ ಪಟ್ಟಿಲ್ಲ ಎಂದು ಬೇಸರವಿಲ್ಲ. ಆದರೆ ನಿಮ್ಮ ಆದ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.

    https://twitter.com/Kens103/status/1059862124225269760?

    ವಿರಾಟ್ ಕೊಹ್ಲಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕೊಹ್ಲಿಗೆ ಬೆಂಬಲ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ. ಮತ್ತು ಕೆಲವರು ಕೊಹ್ಲಿ ಮಾತನ್ನು ಟೀಕೆ ಮಾಡಿದ್ದಾರೆ. ದೇಶವನ್ನು ಇಷ್ಟು ಪ್ರೀತಿ ಮಾಡುವ ಕೊಹ್ಲಿ ವಿದೇಶದಲ್ಲಿ ಏಕೆ ಮದುವೆಯಾದರು? ಕ್ರಿಕೆಟ್ ಬಿಟ್ಟು ಬೇರೆ ದೇಶಗಳ ಕ್ರೀಡೆಗೆ ಮಾತ್ರ ಏಕೆ ಬೆಂಬಲ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

    ಕೊಹ್ಲಿ ನ.21 ರಿಂದ ಆರಂಭವಾಗಲಿರುವ ಆಸೀಸ್ ಕ್ರಿಕೆಟ್ ಟೂರ್ನಿಗೆ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆಸೀಸ್ ವಿರುದ್ಧ 3 ಪಂದ್ಯಗಳ ಟಿ20, 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/imtheguy007/status/1059887977403314176?

  • ಚಾಲಕನಿಲ್ಲದೇ 92 ಕಿ.ಮೀ ಚಲಿಸಿದ ರೈಲು!

    ಚಾಲಕನಿಲ್ಲದೇ 92 ಕಿ.ಮೀ ಚಲಿಸಿದ ರೈಲು!

    ಪರ್ಥ್: ಕಬ್ಬಿಣದ ಅದಿರನ್ನು ಲೋಡ್ ಮಾಡಲಾದ ರೈಲೊಂದು ಚಾಲಕನಿಲ್ಲದೇ 92 ಕಿ.ಮೀ ಚಲಿಸಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಈ ಘಟನೆಯಿಂದಾಗಿ ರೈಲನ್ನು ನಿಲ್ಲಿಸಲು ಉದ್ದೇಶಪೂರ್ವಕವಾಗಿ ಹಳಿತಪ್ಪಿಸಲಾಗಿದೆ. ದಕ್ಷಿಣ ಆಸ್ಟ್ರೇಲಿಯಾ ಪಿಲಾಬರ ಗಣಿ ಕಂಪನಿಗೆ ಸೇರಿದ ಕಬ್ಬಿಣ ಅದಿರನ್ನು ತುಂಬಿದ್ದ ರೈಲು ಚಾಲಕನಿಲ್ಲದೇ ಸುಮಾರು 92 ಕಿ.ಮೀ. ಚಲಿಸಿದೆ. ಈ ಘಟನೆಯ ನಂತರ ಬಿಎಚ್‍ಪಿ ಸಂಸ್ಥೆಯು ರೈಲು ನಿರ್ವಹಣೆ ಮಾಡುತ್ತಿದ್ದವರನ್ನು ಅಮಾನತುಗೊಳಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದೆ.

    ಚಲಿಸುತ್ತಿದ್ದ ರೈಲನ್ನು ತಡೆಯುವುದಕ್ಕಾಗಿ ಹಳಿತಪ್ಪಿಸಿದ್ದರಿಂದ ರೈಲಿಗೆ ಹಾನಿ ಉಂಟಾಗಿದ್ದು, ಈ ಅವಘಡದಿಂದಾಗಿ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ಚಾಲಕ ರೈಲಿನಲ್ಲಿದ್ದ ಸಮಸ್ಯೆಯನ್ನು ನೋಡುತ್ತಿದ್ದಾಗ ರೈಲು ಇದ್ದಕ್ಕಿದ್ದಂತೆ ಚಲಿಸಿದೆ.

    ಬಿಎಚ್‍ಪಿ ಸಂಸ್ಥೆ ವಿಶ್ವದ ಅತಿದೊಡ್ಡ ಗಣಿಗಾರಿಕಾ ಕಂಪನಿಯಾಗಿದ್ದು, ಗಣಿಯಿಂದ ಬಂದರಿಗೆ ಕಬ್ಬಿಣದ ಅದಿರನ್ನು ಸಾಗಿಸಲು 1 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿ ಜಾಲವನ್ನು ಹೊಂದಿದೆ. ಈ ಕಂಪನಿ ಜಪಾನ್ ಮತ್ತು ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅದಿರನ್ನು ರಫ್ತು ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಂಡೀಸ್, ಆಸೀಸ್ ಟಿ20 ಟೂರ್ನಿಗೆ ಎಂಎಸ್‍ಡಿ ಡ್ರಾಪ್-ಧೋನಿ ವೃತ್ತಿ ಜೀವನದ ಅಂತ್ಯವೇ?

    ವಿಂಡೀಸ್, ಆಸೀಸ್ ಟಿ20 ಟೂರ್ನಿಗೆ ಎಂಎಸ್‍ಡಿ ಡ್ರಾಪ್-ಧೋನಿ ವೃತ್ತಿ ಜೀವನದ ಅಂತ್ಯವೇ?

    ಮುಂಬೈ: ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ವೆಸ್ಟ್ ಇಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡದಿಂದ ಧೋನಿ ಅವರನ್ನು ಡ್ರಾಪ್ ಮಾಡಿರುವುದು ಅವರ ಟಿ20 ವೃತ್ತಿ ಜೀವನದ ಅಂತ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಟೀಂ ಇಂಡಿಯಾ ಆಡಲಿರುವ ಮುಂದಿನ 6 ತಿಂಗಳ ಟಿ20 ಟೂರ್ನಿಗಳ ವೇಳಾಪಟ್ಟಿ ಗಮನಿಸಿದರೆ ಈ ಅನುಮಾನ ವ್ಯಕ್ತವಾಗುತ್ತದೆ.

    ಹಲವು ಟಿ20 ಸರಣಿಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಧೋನಿ ಅವರಿಗೆ ಮುಂದಿನ ಟೂರ್ನಿಗೆ ವಿಶ್ರಾಂತಿ ನೀಡಲಾಗಿದ್ದು, ತಂಡಕ್ಕೆ 2ನೇ ವಿಕೆಟ್ ಕೀಪರ್ ಹುಡುಕಾಟ ನಡೆದಿದೆ ಎಂದು ಎಂಎಸ್‍ಕೆ ಪ್ರಸಾದ್ ತಿಳಿಸಿದ್ದು, ಇದೇ ವೇಳೆ ಧೋನಿ ಟಿ20 ವೃತ್ತಿ ಜೀವನದ ಅಂತ್ಯದ ಕುರಿತ ಪ್ರಶ್ನೆಗೆ ಉತ್ತರಿಸಿ, ಸದ್ಯಕ್ಕೆ ಅಂತಹ ಯಾವುದೇ ಚಿಂತನೆ ಇಲ್ಲ. ಮುಂದಿನ ಟೂರ್ನಿಯಲ್ಲಿ ತಂಡಕ್ಕೆ 2ನೇ ವಿಕೆಟ್ ಕೀಪರ್ ಅಗತ್ಯವಿರುವುದರಿಂದ ಉತ್ತಮ ಆಟಗಾರರ ಆಯ್ಕೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಿಸಿಸಿಐ ಶುಕ್ರವಾರ ಪ್ರಕಟಿಸಿರುವ ಆಟಗಾರರ ಪಟ್ಟಿಯಲ್ಲಿ ಟಿ20 ಟೂರ್ನಿಗೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸೀಸ್ ವಿರುದ್ಧ ಟಿ20 ಕ್ರಿಕೆಟ್ ಟೂರ್ನಿ ನವೆಂಬರ್ 21 ರಂದು ಆರಂಭವಾಗಲಿದೆ.

    ಧೋನಿ ಇದುವರೆಗೂ ಪ್ರಸಕ್ತ ವರ್ಷದಲ್ಲಿ 7 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಲ್ಲದೇ ವಿಂಡೀಸ್ ಟೂರ್ನಿಯ ಬಳಿಕ ಟೀಂ ಇಂಡಿಯಾ ಆಸೀಸ್ ಪ್ರವಾಸದಲ್ಲಿ ಜನವರಿಯಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಇದರ ನಡುವೆ ಧೋನಿ ದೇಶಿಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಭಾಗವಹಿಸುತ್ತಿಲ್ಲ. ಉಳಿದಂತೆ ದೇವಧರ್ ಟ್ರೋಫಿ ಈಗಾಗಲೇ ಅಂತ್ಯವಾಗಿದೆ. 37 ವರ್ಷದ ಧೋನಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಟ್ ಹಿಂದೆ ತಂಡಕ್ಕೆ ನೆರವಾದರೂ, ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಧೋನಿ ಇದುವರೆಗೂ 93 ಟಿ20 ಪಂದ್ಯಗಳನ್ನು ಆಡಿದ್ದು, 127.09 ಸ್ಟ್ರೈಕ್ ರೇಟ್‍ನಲ್ಲಿ 1,487 ರನ್ ಸಿಡಿಸಿದ್ದಾರೆ.

    ಆಯ್ಕೆ ಸಮಿತಿಯ ಈ ನಿರ್ಣಯ ಧೋನಿ ಅವರನ್ನು ಒಂದು ಮಾದರಿಯ ಕ್ರಿಕೆಟ್ ಮಾತ್ರ ಸೀಮಿತ ಮಾಡುವ ಮುನ್ಸೂಚನೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಉಳಿದಂತೆ ನಿಗದಿತ ವೇಳಾಪಟ್ಟಿಯಂತೆ ಮುಂದಿನ 6 ತಿಂಗಳಲ್ಲಿ ಒಂದು ಟಿ20 ಟೂರ್ನಿಯಲ್ಲಿ ಮಾತ್ರ ಆಡಲು ಧೋನಿ ಅವರಿಗೆ ಅವಕಾಶವಿದ್ದು, ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿಯಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಕ್ `ಬಿಸ್ಕತ್ ಟ್ರೋಫಿ’ ಕಂಡು ಟ್ರೋಲ್ ಮಾಡಿದ ಐಸಿಸಿ!

    ಪಾಕ್ `ಬಿಸ್ಕತ್ ಟ್ರೋಫಿ’ ಕಂಡು ಟ್ರೋಲ್ ಮಾಡಿದ ಐಸಿಸಿ!

    ದುಬೈ: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟಿ20 ಟೂರ್ನಿಗೆ ಪಿಸಿಬಿ ಟ್ರೋಫಿಯನ್ನು ಅನಾವರಣ ಮಾಡಿದ್ದು, ಟ್ರೋಫಿಯನ್ನು ಕಂಡ ಐಸಿಸಿ ತನ್ನ ಟ್ವಿಟ್ಟರ್‍ನಲ್ಲಿ ಪಾಕ್ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಿದೆ.

    ಆಸೀಸ್ ಹಾಗೂ ಪಾಕ್ ನಡುವಿನ ಟಿಯುಸಿ ಕ್ರಿಕೆಟ್ ಕಪ್ ಟೂರ್ನಿ ಟ್ರೋಫಿಯನ್ನು ಇತ್ತಂಡಗಳ ನಾಯಕರು ಅನಾವರಣ ಮಾಡಿದ್ದು, ಇದರ ಬೆನ್ನಲ್ಲೇ ಟ್ರೋಫಿಯ ಫೋಟೋವನ್ನು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿರುವ ಐಸಿಸಿ, ಬಿಸ್ಕತ್ ತೆಗೆದುಕೊಳ್ಳುವುದು, ಪಡೆಯುವುದು ಇದರ ಹೊಸ ಆರ್ಥ ಎಂದು ಬರೆದುಕೊಂಡಿದೆ.

    ಅಂದಹಾಗೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪ್ರಯೋಜನೆ ಮಾಡುತ್ತಿರುವ ಬಿಸ್ಕತ್ ಸಂಸ್ಥೆಯ ಪ್ರಚಾರಕ್ಕಾಗಿ ಟೂರ್ನಿ ಟ್ರೋಫಿಯನ್ನ ಅದೇ ಮಾದರಿಯಲ್ಲಿ ಸಿದ್ಧಪಡಿಸಿದೆ. ಸ್ಟಂಪ್ಸ್, ಬಾಲ್ ಒಳಗೊಂಡಿರುವ ಟ್ರೋಫಿಯ ಮೇಲ್ಭಾಗದಲ್ಲಿ ಬಿಸ್ಕತ್ ಮಾದರಿ ನಿರ್ಮಿಸಲಾಗಿದೆ.

    ಟಿಯುಸಿ ಟ್ರೋಫಿ ಅನಾವರಣಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟಿಗರು ಪಿಸಿಬಿಯನ್ನು ಟ್ರೋಲ್ ಮಾಡಿದ್ದು, ಐಸಿಸಿ ಕೂಡ ಚಾಂಪಿಯನ್ಸ್ ಟ್ರೋಫಿ ಫೋಟೋ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. ಐಸಿಸಿ ಟ್ವೀಟ್ ಮಾಡುತ್ತಿದಂತೆ ಹಲವು ಮಂದಿ ಮರು ಟ್ವೀಟ್ ಮಾಡಿ ತಮ್ಮದೇ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ, ಅವರು ಮುಂದಿನ ರೋಟಿ ಕಪ್ ಗೆಲ್ಲುತ್ತಾರೆ ಎಂದು ಪ್ರತಿಭಾ ಎಂಬವರು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಟಿ20 ಸರಣಿಗೂ ಮುನ್ನ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಜಯಗಳಿಸಿದ್ದು, ಆಸೀಸ್ ಟಿ20 ಸರಣಿಯಲ್ಲಿ ಕಮ್‍ಬ್ಯಾಕ್ ಮಾಡುವ ಮೂಲಕ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಮೊದಲ ಟಿ20 ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಆಸೀಸ್ ಟೂರ್ನಿ- ಟೀಂ ಇಂಡಿಯಾ ಬೆನ್ನಿಗೆ ನಿಂತ ಎಬಿಡಿ

    ಆಸೀಸ್ ಟೂರ್ನಿ- ಟೀಂ ಇಂಡಿಯಾ ಬೆನ್ನಿಗೆ ನಿಂತ ಎಬಿಡಿ

    ಮುಂಬೈ: ಆಸೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ತಂಡ ಉತ್ತಮವಾಗಿದ್ದು, ಆಸ್ಟ್ರೇಲಿಯಾಗೆ ತನ್ನದೇ ನೆಲದಲ್ಲಿ ಸೋಲುಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅಭಿಪ್ರಾಯ ಪಟ್ಟಿದ್ದಾರೆ.

    ಈ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ಸದ್ಯ ತಂಡ ಮತ್ತೊಂದು ಉತ್ತಮ ಅವಕಾಶ ಹೊಂದಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡರೂ ದಿಟ್ಟ ಪ್ರದರ್ಶನವನ್ನೇ ಟೀಂ ಇಂಡಿಯಾ ನೀಡಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಸೋಲುಂಡಿತ್ತು. ಒಂದೊಮ್ಮೆ ಆ ಪಂದ್ಯವನ್ನು ಗೆದ್ದಿದ್ದರೆ, ಟೂರ್ನಿಯ ಫಲಿತಾಂಶವೇ ಬೇರೆಯಾಗುತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಬುಮ್ರಾ ಹಾಗೂ ಭುನೇಶ್ವರ್ ಕುಮಾರ್ ಇಂಗ್ಲೆಂಡ್ ಟೂರ್ನಿಗೆ ಸಿದ್ಧರಾಗಿರಲಿಲ್ಲ. ಆದರೆ ಅವರು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದು, ವಿಶ್ವ ಕ್ರಿಕೆಟ್ ಬೆಸ್ಟ್ ಬೌಲಿಂಗ್ ಪಡೆಯನ್ನು ತಂಡ ಹೊಂದಿದೆ. ಅಲ್ಲದೇ ಬ್ಯಾಟಿಂಗ್ ಕ್ರಮಾಂಕವೂ ಉತ್ತಮವಾಗುತ್ತಿದ್ದು, ಆಸೀಸ್ ವಿರುದ್ಧದ ಗೆಲ್ಲುವ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

    ನಮ್ಮಿಬ್ಬರ ಯೋಚನಾ ಶೈಲಿ ಒಂದೇ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಮಧ್ಯೆ ಉತ್ತಮ ಸ್ನೇಹ ಹೊಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ತಮ್ಮ ಸಂದರ್ಶನದಲ್ಲಿ ಕೊಹ್ಲಿ ಕುರಿತು ಮಾತನಾಡಿರುವ ಎಬಿಡಿ, ಇಬ್ಬರು ಒಂದೇ ರೀತಿಯ ಯೋಚನಾ ದಾಟಿಯನ್ನು ಹೊಂದಿದ್ದು, ಮೈದಾನದಲ್ಲೂ ಹಾಗೆಯೇ ಆಟವನ್ನು ಎಂಜಯ್ ಮಾಡುತ್ತೇವೆ. ಅಭಿಮಾನಿಗಳು ನಮ್ಮನ್ನು ಫುಟ್ಬಾಲ್ ದಿಗ್ಗಜರಾದ ಮೆಸ್ಸಿ, ರೋನಾಲ್ಡೋ ಅವರಿಗೆ ಹೋಲಿಕೆ ಮಾಡುತ್ತಾರೆ. ಅದನ್ನು ಕೇಳಲು ಇಷ್ಟವಾಗುತ್ತದೆ ಎಂದು ಪ್ರತಿಕ್ರಿಯಿಸಿದರು

    ಇದೇ ವೇಳೆ ಕೊಹ್ಲಿಯನ್ನು ಹಾಡಿ ಹೊಗಳಿದ ಎಬಿಡಿ, ಕೊಹ್ಲಿ ತಂಡದ ನಾಯಕರಾಗಿ ತಮ್ಮ ತಪ್ಪುಗಳಿಂದಲೇ ಎಲ್ಲವನ್ನು ಕಲಿಯುತ್ತಾರೆ. ಕೊಹ್ಲಿ ಒಬ್ಬ ಅತ್ಯುತ್ತಮ ನಾಯಕ ಹಾಗೂ ಬ್ಯಾಟ್ಸ್‍ಮನ್ ಆಗಿರುವುದು ಎದುರಾಳಿಗಳಿಗೆ ಭಯ ಹುಟ್ಟಿಸುವ ಅಂಶವಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಹಾಗೂ ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್ ಅಝರ್ ಅಲಿ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಟೆಸ್ಟ್ 3ನೇ ದಿನದಾಟದ 53ನೇ ಓವರ್ ಬೌಲ್ ಮಾಡುತ್ತಿದ್ದ ಪೀಟರ್ ಸಿಡ್ಲ್ ಎಸೆತವನ್ನ ಅಲಿ ಬೌಂಡರಿಯತ್ತ ಬಾರಿಸಿದ್ದರು. ವೇಗವಾಗಿ ಸಾಗುತ್ತಿದ್ದ ಚೆಂಡನ್ನು ಕಂಡ ಅಲಿ ಬೌಂಡರಿ ತಲುಪುತ್ತದೆ ಎಂಬ ಅತಿ ಆತ್ಮವಿಶ್ವಾದಿಂದ ರನ್ ಗಳಿಸದೇ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಸಾದ್ ಶಫಿಕ್ ರೊಂದಿಗೆ ಮಾತುಕತೆಗಿಳಿದಿದ್ದರು.

    https://twitter.com/floz_11/status/1052815846907596801

    ಈ ವೇಳೆ ಬೌಂಡರಿಯಲ್ಲಿದ್ದ ಮಿಚಲ್ ಸ್ಟರ್ಕ್ ಬಾಲ್ ಪಡೆದು ಕೀಪರ್ ನತ್ತ ಎಸೆದರು. ಬಾಲ್ ಪಡೆದ ಕೀಪರ್ ಟಿಮ್ ಪೈನೆ ರನೌಟ್ ಮಾಡಿ ಸಂಭ್ರಮಿಸಲು ಆರಂಭಿಸಿದರು. ಯಾವುದರ ಅರಿವು ಇಲ್ಲದ 64 ರನ್ ಗಳಿಸಿದ್ದ ಅಲಿ ಅಂಪೈರ್ ಔಟ್ ನೀಡುತ್ತಿದಂತೆ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರೊಂದಿಗೆ ಪಾಕ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು.

    ಪಂದ್ಯದ ಮೇಲೆ ಎರಡು ತಂಡಗಳು ಬಿಗಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಪಾಕ್ 538 ರನ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಗೆ ಅಲೌಟ್ ಆಗಿದ್ದ ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/floz_11/status/1052812986325204992

  • ಲಾರಾ, ರಿಚರ್ಡ್ ಸಾಲಿಗೆ ಕೊಹ್ಲಿ ಸೇರಲಿದ್ದಾರೆ-ಸ್ಟೀವ್ ವಾ ಭವಿಷ್ಯ

    ಲಾರಾ, ರಿಚರ್ಡ್ ಸಾಲಿಗೆ ಕೊಹ್ಲಿ ಸೇರಲಿದ್ದಾರೆ-ಸ್ಟೀವ್ ವಾ ಭವಿಷ್ಯ

    ನವದೆಹಲಿ: ವಿಶ್ವಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಹೊಂದಿರುವ ಆಟಗಾರರಾಗಿದ್ದು, ವಿಶ್ವ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಲಿದ್ದಾರೆ ಎಂದು ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ವಾ ಭವಿಷ್ಯ ನುಡಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಎಬಿ ಡಿವಿಲಿಯರ್ಸ್ ಇಂತಹದ್ದೇ ಉತ್ತಮ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಿದ್ದರು, ಆದರೆ ಸದ್ಯ ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅದ್ದರಿಂದ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‍ನ ಉತ್ತಮ ಆಟಗಾರರ ಸಾಲಿನಲ್ಲಿ ಮುನ್ನಡೆಯಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

    ವಿಶ್ವ ಕ್ರಿಕೆಟ್ ದಿಗ್ಗಜರಾದ ಕೆರಿಬಿಯನ್ ಆಟಗಾರ ಬ್ರಿಯನ್ ಲಾರಾ, ವಿವ್ ರಿಚರ್ಡ್ ರಂತಹ ದಿಗ್ಗಜರ ಸಾಲಿಗೆ ಕೊಹ್ಲಿ ಬಂದು ನಿಲ್ಲುತ್ತಾರೆ ಎಂದ ಅವರು, ಇಂತಹ ಗುಣಲಕ್ಷಣಗಳನ್ನು ಕೊಹ್ಲಿ ಈಗಾಗಲೇ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ

    ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ನಂ.1 ಪಟ್ಟ ಪಡೆದ ಹೆಗ್ಗಳಿಕೆ ಪಡೆದಿದ್ದರು. 2011 ಜೂನ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡರು. ಅಲ್ಲದೇ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ 200 ರನ್ ಸಿಡಿಸಿ ಮಿಂಚಿದ್ದರು. ಆದರೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಸರಣಿಯಲ್ಲಿ 0-1 ಅಂತರ ಹಿನ್ನೆಡೆ ಅನುಭವಿಸಿತು.

    ಆಗಸ್ಟ್ 9 ರಂದು ಆರಂಭವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ 2ನೇ ಪಂದ್ಯದ ಮೊದಲ ದಿನದಾಟ ಟಾಸ್ ಕೂಡ ನಡೆಯದೇ ರದ್ದಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇದನ್ನೂ ಓದಿ:  ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews