Tag: australia

  • ಆಸೀಸ್ ಆಟಗಾರ್ತಿಯನ್ನ ವರಿಸಿದ ಕಿವೀಸ್ ಆಟಗಾರ್ತಿ

    ಆಸೀಸ್ ಆಟಗಾರ್ತಿಯನ್ನ ವರಿಸಿದ ಕಿವೀಸ್ ಆಟಗಾರ್ತಿ

    ಸಿಡ್ನಿ: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್, ಆಸೀಸ್ ತಂಡದ ನಿಕೋಲಾ ಹ್ಯಾಂಕಾಕ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.

    ಜೆನ್ಸನ್ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟಾರ್ ತಂಡದ ಪರ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇತ್ತ ಇದೇ ತಂಡದಲ್ಲಿ ಆಡುತ್ತಿದ್ದ ನಿಕೋಲಾ ನಡುವೆ ಪ್ರೇಮಾಂಕುರವಾಗಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಆದರು ನಿಕೋಲಾ ಅವರು ಮೆಲ್ಬರ್ನ್ ತಂಡದ ಪರವೇ ಕ್ರಿಕೆಟ್ ಮುಂದುವರಿಸಲಿದ್ದು, ಆಸೀಸ್ ಪರ ಪಾರ್ದಾಪಣೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

    ಇತ್ತ ಜೆನ್ಸನ್ ನ್ಯೂಜಿಲೆಂಡ್ ತಂಡದ ಪರ 2014 ರಲ್ಲಿ ಪಾದಾರ್ಪಣೆ ಮಾಡಿದ್ದರು. ಸದ್ಯ ಇಬ್ಬರ ಮದುವೆ ಕುರಿತಂತೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಬ್ಬರ ಮದುವೆ ಸಮಾರಂಭದ ಫೋಟೋ ಟ್ವೀಟ್ ಮಾಡಿ ಶುಭಕೋರಿದೆ.

    ಅಂದಹಾಗೇ 2013 ಆಗಸ್ಟ್ 19 ರಿಂದ ನ್ಯೂಜಿಲೆಂಡ್‍ನಲ್ಲಿ ಸಲಿಂಗಿ ಮದುವೆಗೆ ಅವಕಾಶ ಕಾನೂನಿನ ಅಡಿ ಮಾನ್ಯತೆ ನೀಡಲಾಗಿದೆ. ನ್ಯೂಜಿಲೆಂಡ್ ಸಂಸತ್ ನಲ್ಲಿ ಸಲಿಂಗಿ ಮದುವೆಗೆ ಮಾನ್ಯತೆ ನೀಡುವ ಮದುವೆಯ ಬಿಲ್ ಪ್ರವೇಶಪಡಿಸಿದ ಸಂದರ್ಭದಲ್ಲಿ ಅಂದರೆ 2013 ಏಪ್ರಿಲ್ ರಂದು 77 ಮತಗಳಲ್ಲಿ 44 ಮತಗಳು ಪರವಾಗಿ ಲಭಿಸಿತ್ತು. ಪರಿಣಾಮ ಏಪ್ರಿಲ್ 19ಕ್ಕೆ ಕಾಯ್ದೆ ಜಾರಿಗೆ ಬಂತು.

    2018 ರಲ್ಲಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯಾ ಆಟಗಾರ್ತಿರಾದ ಡೇನ್ ವ್ಯಾನ್ ನಿಕೆರ್ಕ್, ಮರಿಝೂನ್ ಕಾಪ್ ಸಲಿಂಗಿ ಮದುವೆಯಾಗಿದ್ದರು. ಅಲ್ಲದೇ ನ್ಯೂಜಿಲೆಂಡ್ ತಂಡದ ಮಹಿಳಾ ತಂಡದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಆಸೀಸ್ ವಿಶ್ವಕಪ್ ತಂಡ ಪ್ರಕಟ – ವಾರ್ನರ್, ಸ್ಮಿತ್ ಕಮ್ ಬ್ಯಾಕ್

    ಆಸೀಸ್ ವಿಶ್ವಕಪ್ ತಂಡ ಪ್ರಕಟ – ವಾರ್ನರ್, ಸ್ಮಿತ್ ಕಮ್ ಬ್ಯಾಕ್

    ಸಿಡ್ನಿ: 2015 ಚಾಂಪಿಯನ್ ತಂಡ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಹಣಾಹಣಿಗೆ 15 ಆಟಗಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚೆಂಡು ವಿರೂಪಗೊಳಿಸಿ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದು ಕಮ್ ಬ್ಯಾಕ್ ಮಾಡಿದ್ದಾರೆ.

    ಸ್ಮಿತ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದರು ಕೂಡ ಫಿಂಚ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದು, ಅಲೆಕ್ಸ್ ಕೆರ್ರಿ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ನಿಷೇಧ ಪೂರ್ಣಗೊಂಡ ಬಳಿಕ ಮಾಜಿ ನಾಯಕ ಸ್ಮಿತ್‍ಗೆ ಇದು ಮೊದಲ ಅವಕಾಶವಾಗಿದೆ. ಕಳೆದ ತಿಂಗಳಷ್ಟೇ ಸ್ಮಿತ್ ಮೇಲಿನ ನಿಷೇಧ 1 ವರ್ಷ ಅವಧಿ ಪೂರ್ಣಗೊಂಡಿತ್ತು. ಪಾಕಿಸ್ತಾನ ವಿರುದ್ಧ ನಡೆದ ಸಿಮೀತ ಓವರ್ ಗಳ ಸರಣಿಯ ಅಂತಿಮ 2 ಪಂದ್ಯಗಳಿಗೆ ಇಬ್ಬರು ಆಟಗಾರರು ಅರ್ಹರಾಗಿದ್ದರೂ ಕೂಡ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ.

    ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸೀಸ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿ ಒಂದಾಗಿದೆ. ಮೇ 30 ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆರಂಭವಾಲಿದ್ದು, ಆಸೀಸ್ ಜೂನ್ 01 ರಂದು ಆಫ್ಘಾನಿಸ್ತಾನ ವಿರುದ್ಧ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

    ತಂಡ: ಆ್ಯರೋನ್ ಫಿಂಚ್ (ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಶೇನ್ ಮಾರ್ಶ್, ಗ್ಲೇನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕೆರ್ರಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಚನ್, ನಾಥನ್ ಕೌಲ್ಡರ್ ನೀಲ್, ಜೇಸನ್ ಬೆಹ್ರನ್ ಡ್ರಾಪ್, ನೇಥನ್ ಲಯನ್, ಆ್ಯಡಂ ಜಂಪಾ.

  • ಮೋದಿಗೆ ಮತ ಹಾಕಲು ಆಸ್ಟ್ರೇಲಿಯಾದಲ್ಲಿ ನೌಕರಿ ಬಿಟ್ಟ ಮಂಗ್ಳೂರಿಗ!

    ಮೋದಿಗೆ ಮತ ಹಾಕಲು ಆಸ್ಟ್ರೇಲಿಯಾದಲ್ಲಿ ನೌಕರಿ ಬಿಟ್ಟ ಮಂಗ್ಳೂರಿಗ!

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಿ ಮಾತನಾಡಿದ್ದರು. ಈ ವೇಳೆ ಮೋದಿ ಅವರನ್ನು 2ನೇ ಬಾರಿಗೆ ಪ್ರಧಾನಿಯನ್ನಾಗಿ ನೋಡಲು ಇಚ್ಛಿಸಿದ್ದ ಯುವಕ ತನ್ನ ಕೆಲಸ ತೊರೆದು ಸಮಾವೇಶಕ್ಕೆ ಆಗಮಿಸಿದ್ದರು.

    ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ನಡುವೆ ಇದ್ದ ಅವರ ಹೆಸರು ಸುಧೀಂದ್ರ ಹೆಬ್ಬಾರ್ (41). ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಧೀಂದ್ರ, ಚುನಾವಣೆಯಲ್ಲಿ ಮತ ಚಲಾಯಿಸಲು ರಜೆಗೆ ಮನವಿ ಸಲ್ಲಿಸಿದ್ದರು. ಆದರೆ ಏ.5 ರಿಂದ ಏ.12 ವರೆಗೂ ರಜೆ ನೀಡಿ ಆ ಬಳಿಕ ಈಸ್ಟರ್ ಹಾಗೂ ರಂಜಾನ್ ಹಬ್ಬ ಕಾರಣ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ರಜೆಯನ್ನು ವಿಸ್ತರಣೆ ಮಾಡಲು ಆಗುವುದಿಲ್ಲ ಎಂದು ಸಂಸ್ಥೆ ತಿಳಿಸಿತ್ತು. ಪರಿಣಾಮ ಸರತ್ಕಲ್ ಮೂಲದ ಸುಧೀಂದ್ರ ಅಂತಿಮವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿನತ್ತ ಆಗಮಿಸಿದ್ದಾರೆ.

    ಎಂಬಿಎ ಪದವಿ ಪಡೆದಿರುವ ಸುಧೀಂದ್ರ ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಸಿಡ್ನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಪಂಚದ ಹಲವು ಜನರ ಮಧ್ಯೆ ಇದ್ದೆ. ಇದರಲ್ಲಿ ಯುರೋಪಿಯನ್ಸ್, ಪಾಕಿಸ್ತಾನಿಗಳು ಕೂಡ ಇದ್ದರು. ಅವರು ತಮ್ಮೊಂದಿಗೆ ಮಾತನಾಡುತ್ತಾ ಭಾರತಕ್ಕೆ ಉತ್ತಮ ಭವಿಷ್ಯ ಇದೆ ಎಂದು ತಿಳಿಸಿದಾಗ ನನಗೆ ಹೆಮ್ಮೆ ಆಗುತ್ತಿತ್ತು. ಬದಲಾಗುತ್ತಿರುವ ಭಾರತದ ಬಗ್ಗೆ ಪ್ರಧಾನಿ ಮೋದಿ ಅವರ ಕೊಡುಗೆ ಹೆಚ್ಚಿದೆ. ಆದ್ದರಿಂದ ನಾನು ದೇಶದ ಗಡಿ ಕಾಯುವ ಸೈನಿಕನಾಗದಿದ್ದರು ಕೂಡ ಜವಾಬ್ದಾರಿಯುತ ಪ್ರಜೆಯಾಗಿ ಮತ ಚಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

    ಕೆಲಸ ತೊರೆದ ಬಗ್ಗೆ ನನಗೆ ಯಾವುದೇ ರೀತಿಯ ಯೋಚನೆ ಇಲ್ಲ. ಏಕೆಂದರೆ ನಾನು ಮತ್ತೊಂದು ಕೆಲಸವನ್ನು ಪಡೆಯಬಲ್ಲೆ. ಆಸ್ಟ್ರೇಲಿಯಾದಲ್ಲಿ ನಾನು ಶಾಶ್ವತ ನಿವಾಸದ ಕಾರ್ಡ್ ಹೊಂದಿದ್ದು, ಏರ್ ಪೋರ್ಟ್ ನಲ್ಲಿ ಕಾರ್ಯನಿರ್ವಹಿಸುವ ಮೊದಲು ನಾನು ಬೇರೆಡೆ ಕಾರ್ಯನಿರ್ವಹಿಸುತ್ತಿದ್ದೆ ಎಂದು ಹೇಳಿದ್ದಾರೆ. ಸುಧೀಂದ್ರ ಅವರು ಆಸ್ಟ್ರೇಲಿಯಾ ಪ್ರಜೆ ಫಿಜಿ ಎಂಬವರನ್ನು ವಿವಾಹವಾಗಿದ್ದು, ಪರಿಣಾಮ ಅವರಿಗೆ ಶಾಶ್ವತ ನಿವಾಸದ ಕಾರ್ಡ್ ಲಭ್ಯವಾಗಿದೆ.

    ಮುಖ್ಯವಾಗಿ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಹೊಸಬೆಟ್ಟು ಮತ ಕ್ಷೇತ್ರದಲ್ಲಿ ಸುಧೀಂದ್ರ ಮೊದಲ ಮತದಾನ ಮಾಡಿದ ವ್ಯಕ್ತಿಯಾಗಿದ್ದಾರೆ. 2014 ರ ಏಪ್ರಿಲ್ 17 ರಂದು ನಡೆದ ಮತದಾನದಲ್ಲಿ ಭಾವಹಿಸಲು ಹೆಬ್ಬಾರ್ 6 ಗಂಟೆ ಪ್ರಯಾಣಿಸಿ ಬೆಂಗಳೂರಿಗೆ ಆಗಮಿಸಿದ್ದರು. ಆ ಬಳಿಕ ಮತಗಟ್ಟೆಗೆ ತೆರಳಿ ಮೊದಲಿಗರಾಗಿ ಮತ ಚಲಾಯಿಸಿದ್ದರು.

    ಉಳಿದಂತೆ ಸುಧೀಂದ್ರ ಮೇ 23ರ ಚುನಾವಣಾ ಫಲಿತಾಂಶದವರೆಗೂ ಮಂಗಳೂರಿನಲ್ಲೇ ಇರಲಿದ್ದಾರೆ. ಬಳಿಕ ಆಸ್ಟ್ರೇಲಿಯಾಗೆ ತೆರಳಿ ಹೊಸ ಕೆಲಸ ಹುಡುಕಾಟ ನಡೆಸುವ ಚಿಂತನೆಯನ್ನ ಮಾಡಿದ್ದಾರೆ.

  • ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ಮುಂಬೈ: ಆಸೀಸ್ ಸರಣಿಯಲ್ಲಿ ವೇಳೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.

    ಸರಣಿಯಲ್ಲಿ ಗಾಯಗೊಂಡಿದ್ದ ಪೃಥ್ವಿಶಾರನ್ನು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸರಣಿಯಿಂದ ಕೈ ಬಿಡಲಾಗಿತ್ತು ಎಂದು ಕೆಲ ವರದಿಗಳು ಪ್ರಕಟಗೊಂಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಗಾಯದ ಸಮಸ್ಯೆಯಿಂದ ಹೊರಗುಳಿಯ ಬೇಕಾಯಿತು. ಆದರೆ ಅಶಿಸ್ತಿನ ವರ್ತನೆ ವರದಿಗಳು ಎಲ್ಲವೂ ಕಪೋಲಕಲ್ಪಿತ ಎಂದು ಅಲ್ಲಗೆಳೆದಿದ್ದಾರೆ.

    19 ವರ್ಷದ ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದೆ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಸರಣಿಯ ನಡುವೆ ಭಾರತಕ್ಕೆ ಹಿಂದಿರುಗಿದ್ದರು. ಸದ್ಯ ಚೇತರಿಸಿಕೊಂಡಿರುವ ಪೃಥ್ವಿ ಶಾ ಐಪಿಎಲ್ ಆಡಲು ಅಭ್ಯಾಸದಲ್ಲಿ ತೊಡಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಆಡಲಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೃಥ್ವಿ ಶಾ, ನಾನು ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಗೆ ಹೋಗುಚ ವೇಳೆ ನನ್ನೊಂದಿಗೆ 10 ವರ್ಷ ಅನುಭವವುಳ್ಳ ಹಿರಿಯ ಆಟಗಾರರು ಇದ್ದರು. ಆದರೆ ನಾಯಕ ಹಾಗೂ ಕೋಚ್ ಇಲ್ಲಿ ಹಿರಿಯ, ಕಿರಿಯ ಎಂಬುವುದಿಲ್ಲ. ನೀನು ಯಾವುದೇ ಸಮಯದಲ್ಲಿ ಆಟಗಾರರೊಂದಿಗೆ ಮಾತನಾಡಬಹುದು, ನಿನ್ನ ಪ್ರಶ್ನೆಗಳ ಮೂಲಕ ಅವರಿಗೆ ಕಿರಿಕಿರಿ ಕೂಡ ಮಾಡಬಹುದು ಎಂದು ತಿಳಿದಿದ್ದಾಗಿ ಹೇಳಿದರು.

    ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ನನಗೆ ಬಹುತೇಕ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕೋಚ್ ಹಾಗೂ ತಜ್ಞರು ಉತ್ತಮ ಸಹಕಾರ ನೀಡಿದ್ದಾರೆ. ಹಲವು ಅನುಭವಿ ಆಟಗಾರರ ಆಡುವುದನ್ನು ನಾನು ಗಮನಿಸಿದ್ದೇನೆ. ಸದ್ಯ ತಂಡದಲ್ಲಿ ನನಗೆ ನಂ.5 ಕ್ರಮಾಂಕ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕೊಹ್ಲಿ ಪಡೆಗೆ ಮುಖಭಂಗ – ಸರಣಿ ಗೆದ್ದು ಬೀಗಿದ ಕಾಂಗರೂ ಪಡೆ

    ಕೊಹ್ಲಿ ಪಡೆಗೆ ಮುಖಭಂಗ – ಸರಣಿ ಗೆದ್ದು ಬೀಗಿದ ಕಾಂಗರೂ ಪಡೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 50 ಓವರ್ ಗಳಲ್ಲಿ 237 ರನ್ ಗಳಿಗೆ ಅಲೌಟ್ ಅಯ್ತು. 35 ರನ್ ಗೆಲುವು ಪಡೆದ ಆಸೀಸ್ ಪಡೆ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದು ಬೀಗಿತು.

    ಆಸೀಸ್ ನೀಡಿದ್ದ 273 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ದು ಹೊರತು ಪಡಿಸಿದರೆ, ಕೊಹ್ಲಿ 20 ರನ್, ಧವನ್ 12 ರನ್, ಪಂತ್ ಹಾಗೂ ವಿಜಯ್ ಶಂಕರ್ ತಲಾ 16 ರನ್ ಗಳಿಸಿದರೆ ಜಡೇಜಾ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಟೀಂ ಇಂಡಿಯಾ 28.5 ಓವರ್ ಗಳಲ್ಲಿ 132 ರನ್ ಗಳಿಗೆ 6 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ತಂಡ ಗೆಲುವಿಗೆ 21 ಓವರ್ ಗಳಲ್ಲಿ 141 ರನ್ ಅಗತ್ಯವಿದ್ದ ವೇಳೆ ಒಂದಾದ ಕೇದಾರ್ ಜಾಧವ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ತಂಡವನ್ನು ಗೆಲುವಿನ ಸನಿಹ ತರಲು ಪ್ರಯತ್ನಿಸಿದರು. ಈ ಜೋಡಿ 95 ಎಸೆತಗಳಲ್ಲಿ 91 ರನ್ ಜೊತೆಯಾಟ ನೀಡಿತು. ಈ ವೇಳೆ ಗೆಲುವಿನ ಆಸೆ ಮೂಡಿಸಿದ್ದ ಜೋಡಿಯನ್ನು ಕಮ್ಮಿನ್ಸ್ ಬೇರ್ಪಡಿಸಲು ಯಶಸ್ವಿಯಾದ್ರು. 54 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೊಂದಿಗೆ 46 ರನ್ ಗಳಿಸಿದ್ದ ಭುವನೇಶ್ವರ್ ಕುಮಾರ್ ಫಿಂಚ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 57 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಗಳಿಂದ 44 ರನ್ ಗಳಿಸಿದ್ದ ಜಾಧವ್ ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಆಸೆ ಬಹುತೇಕ ಅಂತ್ಯವಾಯ್ತು. ಅಂತಿಮವಾಗಿ ತಂಡ 237 ರನ್ ಗಳಿಗೆ ಅಲೌಟ್ ಆಯ್ತು. ಆಸೀಸ್ ಪರ ಜಂಪಾ 3 ವಿಕೆಟ್ ಪಡೆದರೆ, ಕಮ್ಮಿನ್ಸ್ ಮತ್ತು ರಿಚಡ್ರ್ಸನ್ ತಲಾ 2 ವಿಕೆಟ್ ಹಾಗೂ ಸ್ಟೋಯಿನ್ಸ್, ಲಯನ್ ತಲಾ ವಿಕೆಟ್ ಪಡೆದರು.

    8 ಸಾವಿರ ರನ್: ಪಂದ್ಯದಲ್ಲಿ ರೋಹಿತ್ ಶರ್ಮಾ 46 ರನ್ ಗಳಿಸಿದ್ದ ವೇಳೆ ಏಕದಿನ ಕ್ರಿಕೆಟಿನಲ್ಲಿ 8 ಸಾವಿರ ರನ್ ಪೂರೈಸಿದರು. ಆ ಮೂಲಕ ಭಾರತ ಪರ ವೇಗವಾಗಿ 8 ಸಾವಿರ ರನ್ ಪೂರೈಸಿದ 3ನೇ ಆಟಗಾರ ಎನಿಸಿಕೊಂಡರು. ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರು ವೇಗವಾಗಿ 8 ಸಾವಿರ ರನ್ ಪೂರೈಸಿದ ಮೊದಲ ಎರಡು ಸ್ಥಾನ ಪಡೆದಿದ್ದಾರೆ. 31 ವರ್ಷದ ರೋಹಿತ್ ಶರ್ಮಾ 200 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಖವಾಜಾ ಶತಕ ಸಿಡಿಸಿದರೆ, ಹ್ಯಾಡ್ಸ್ ಕಂಬ್ 52 ರನ್ ಸಿಡಿಸಿ ಆಸೀಸ್ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸರಣಿಯಲ್ಲಿ 366 ರನ್ ಗಳಿಸಿದ ಖವಾಜಾ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ವಿಲಿಯಮ್ಸನ್ 361 ಹಾಗೂ 2015 ರಲ್ಲಿ ಎಬಿ ಡಿವಿಲಿಯರ್ಸ್ 358 ರನ್ ಹೊಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವೃತ್ತಿ ಜೀವನದ ದುಬಾರಿ ಓವರ್ ಬೌಲ್ ಮಾಡಿದ ಬುಮ್ರಾ!

    ವೃತ್ತಿ ಜೀವನದ ದುಬಾರಿ ಓವರ್ ಬೌಲ್ ಮಾಡಿದ ಬುಮ್ರಾ!

    ನವದೆಹಲಿ: ಟೀಂ ಇಂಡಿಯಾದ ದಿ ಬೆಸ್ಟ್ ಡೆಪ್ತ್ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದ ಜಸ್ಪ್ರೀತ್ ಬುಮ್ರಾ, ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಓವರ್ ಒಂದರಲ್ಲಿ 19 ರನ್ ನೀಡಿದ್ದಾರೆ.

    ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು.

    ಪಂದ್ಯದ 48 ನೇ ಓವರ್ ಬೌಲ್ ಮಾಡಿ ಬುಮ್ರಾ ಬೌಲಿಂಗ್ ನಲ್ಲಿ ರಿಚರ್ಡ್‍ಸನ್ ಹಾಗೂ ಕಮ್ಮಿನ್ಸ್ 4 ಬೌಂಡರಿ ಸಮೇತ 19 ರನ್ ಸಿಡಿಸಿದರು. ಈ ಮೂಲಕ ಈ ಓವರ್ ಬುಮ್ರಾ ಏಕದಿನ ವೃತ್ತಿ ಜೀವನದ ದುಬಾರಿ ಎನಿಸಿಕೊಂಡಿತು.

    10 ಓವರ್ ಬೌಲ್ ಮಾಡಿ ಬುಮ್ರಾ ಕೇವಲ ಯಾವುದೇ ವಿಕೆಟ್ ಪಡೆಯದೆ 39 ರನ್ ನೀಡಿದ್ದಾರೆ. ಬುಮ್ರಾ ಬೌಲ್ ಮಾಡಿದ 60 ಎಸೆತಗಳಲ್ಲಿ 40 ಎಸೆತಗಳು ಡಾಟ್ ಆಗಿರುವುದು ವಿಶೇಷವಾಗಿದೆ. ಉಳಿದಂತೆ ಭುವನೇಶ್ವರ್ ಕುಮಾರ್ 3, ಶಮಿ ಮತ್ತು ಜಡೇಜಾ ತಲಾ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು. ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಇರುವ ಟೀಂ ಇಂಡಿಯಾಗೆ ಗೆಲ್ಲಲು 273 ರನ್ ಗಳ ಅಗತ್ಯವಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಖವಾಜಾ ಶತಕ ಸಿಡಿಸಿದರೆ, ಹ್ಯಾಡ್ಸ್ ಕಂಬ್ 52 ರನ್ ಸಿಡಿಸಿ ಆಸೀಸ್ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸರಣಿಯಲ್ಲಿ 366 ರನ್ ಗಳಿಸಿದ ಖವಾಜಾ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ವಿಲಿಯಮ್ಸನ್ 361 ಹಾಗೂ 2015 ರಲ್ಲಿ ಎಬಿ ಡಿವಿಲಿಯರ್ಸ್ 358 ರನ್ ಹೊಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಚೆನ್ನೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡದಲ್ಲಿ ಅನುಭವಿ ಆಟಗಾರ ಎಂಎಸ್ ಧೋನಿ ಇರಲೇ ಬೇಕು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತಂಡ ಕಠಿಣ, ಒತ್ತಡದ ಸನ್ನಿವೇಶಗಳನ್ನು ಎದುರಿಸಲು ಅನುಭವಿ ಆಟಗಾರ ಧೋನಿ ಅವರ ಅಗತ್ಯವಿದೆ. ನನ್ನ ಪ್ರಕಾರ ಧೋನಿ ಅದ್ಭುತ ಆಟಗಾರ. ಧೋನಿ ತಂಡದಲ್ಲಿ ಇರುವುದು ಅಷ್ಟೇ ಉತ್ತಮ ಎಂದು ವಾರ್ನ್ ಹೇಳಿದ್ದಾರೆ.

    ಇದೇ ವೇಳೆ ಧೋನಿ ಅವರನ್ನು ಟೀಕೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶೇನ್ ವಾರ್ನ್, ಧೋನಿ ಅವರನ್ನು ಟೀಕೆ ಮಾಡುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುವುದೇ ತಿಳಿದಿರುವುದಿಲ್ಲ. ವಿಶ್ವಕಪ್ ಎದುರಿಸಲಿರುವ ಟೀಂ ಇಂಡಿಯಾ ತಂಡಕ್ಕೆ ಧೋನಿ ಅವರ ಅನುಭವ, ನಾಯಕತ್ವದ ತಂತ್ರಗಾರಿಕೆ ಅಗತ್ಯವಿದೆ ಎಂದರು.

    ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ನಿರೀಕ್ಷೆಯ ತಂಡಗಳಾಗಿವೆ. ಏಕೆಂದರೆ ಇತ್ತಂಡಗಳು ಕಳೆದ ಒಂದು ವರ್ಷದಲ್ಲಿ ಅಂತಹ ಉತ್ತಮ ಪ್ರದರ್ಶನಗಳನ್ನು ನೀಡಿದೆ. ಆದರೆ ಆಸೀಸ್ ತಂಡವೂ ಕೂಡ ವಿಶ್ವಕಪ್ ವಿನ್ನಿಂಗ್ ರೆಸ್‍ನಲ್ಲಿದೆ ಎಂದು ತಿಳಿಸಿದರು.

    ಬಹು ನಿರೀಕ್ಷೆಯ ವಿಶ್ವಕಪ್ ಟೂರ್ನಿ ಮೇ 30 ರಿಂದ ಜುಲೈ 14ರ ವರೆಗೂ ನಡೆಯಲಿದೆ. ಟೀಂ ಇಂಡಿಯಾ ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಮುಂಬೈ: ಮೊಹಾಲಿ ಏಕದಿನ ಕ್ರಿಕೆಟ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಆರ್‍ಎಸ್‍ನಲ್ಲಿ ಸ್ಥಿರತೆ ಇಲ್ಲ ಎಂದು ತಿಳಿಸಿದ್ದಾರೆ.

    4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ಟರ್ನರ್ ಅವರ ಔಟ್ ಮನವಿಯನ್ನು ಅಂಪೈರ್ ನಿರಾಕರಿಸಿದ ಘಟನೆಯ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಂದ್ಯದ 44 ಓವರಿನಲ್ಲಿ ಟರ್ನರ್ 41 ರನ್ ಗಳಿಸಿದ್ದರು. ಬೌಲಿಂಗ್ ಎಸೆದ ಚಹಲ್ ಎಸೆತದಲ್ಲಿ ಭಾರೀ ಶಾಟ್‍ಗೆ ಸಿಡಿಸಲು ಮುಂದಾದ ಟರ್ನರ್ ವಿಫಲರಾಗಿದ್ದರು. ಇತ್ತ ವಿಕೆಟ್ ಹಿಂದಿದ್ದ ಪಂತ್ ಬಾಲ್ ಕ್ಯಾಚ್ ಪಡೆದು, ಕೂಡಲೇ ಸ್ಟಂಪ್ ಕೂಡ ಮಾಡಿದ್ದರು. ಆಟಗಾರರ ಮನವಿಯನ್ನು ಅಂಪೈರ್ ನಿರಾಕರಿಸಿ ನಾಟೌಟ್ ಎಂದು ತಿಳಿಸಿದ್ದರು. ಕೂಡಲೇ ಕೊಹ್ಲಿ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು.

    ಟರ್ನರ್ ಸ್ಟಂಪ್ ಸೇರಿದಂತೆ ಕ್ಯಾಚ್ ಪರಿಶೀಲನೆ ನಡೆಸಿದ 3ನೇ ಅಂಪೈರ್ ಕೂಡ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಡಿಆರ್‍ಎಸ್ ನಲ್ಲಿ ಚೆಂಡು ಟರ್ನರ್ ಬ್ಯಾಟಿಗೆ ತಾಗಿ ಹೋಗಿದ್ದು ಸ್ಪಷ್ಟವಾಗಿತ್ತು. ಈ ವೇಳೆ ಕೊಹ್ಲಿ ಮೈದಾನದಲ್ಲೇ ಗರಂ ಆಗಿದ್ದರು.

    ನಿರ್ಣಯಕ ಹಂತದ ವಿಕೆಟ್ ಪಡೆದರೂ ಕೂಡ ಅಂಪೈರ್ ಕೆಟ್ಟ ತೀರ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ ಸೋಲುಂಡಿತ್ತು. ಪರಿಣಾಮ ಸರಣಿಯಲ್ಲಿ ಆಸೀಸ್ ಸಮಬಲ ಸಾಧಿಸಿತ್ತು.

    ಆಸೀಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಅವರು ಗೆಲುವಿಗೆ ಅರ್ಹರಿದ್ದಾರೆ. ಆದರೆ ಡಿಆರ್‍ಎಸ್ ನಿರ್ಧಾರ ನನ್ನನ್ನು ಕ್ಷಣ ಕಾಲ ಅಚ್ಚರಿಗೊಳ್ಳುವಂತೆ ಮಾಡಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 13ರಂದು ದೆಹಲಿಯಲ್ಲಿ ನಡೆಯಲಿದ್ದು, ಸಮಬಲ ಸಾಧಿಸಿರುವ ಇತ್ತಂಡಗಳು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು 2 ಏಕದಿನ ಪಂದ್ಯಗಳಿಗೆ ಧೋನಿ ಅವರಿಗೆ ವಿಶ್ರಾಂತಿ ನೀಡಿದ್ದರೂ ಕೂಡ, ಮೊಹಾಲಿ ಪಂದ್ಯದಲ್ಲಿ ಧೋನಿ ಧೋನಿ ಎಂದು ಕೂಗುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳು ನೆನಪಿಸಿದ್ದಾರೆ.

    ಪಂತ್ ವಿಕೆಟ್ ಮಾಡುವ ವೇಳೆ ಧೋನಿ ಎಂದು ಇಡೀ ಮೈದಾನದಲ್ಲಿ ಅಭಿಮಾನಿಗಳು ಕೂಗಿ ಅಭಿಮಾನ ಮೆರೆದಿದ್ದರು. ಪಂದ್ಯದಲ್ಲಿ ಆಸೀಸ್ ತಂಡ ಗೆಲ್ಲಲು ಪ್ರಮುಖರಾಗಿದ್ದ ಟರ್ನರ್ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ ಈ ಹಂತದಲ್ಲಿ ವಿಕೆಟ್ ಹಿಂದೆ ಎರಡೆರಡು ಬಾರಿ ಎಡವಿದ್ದ ಪಂತ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದರು.

    44ನೇ ಓವರ್ ಬೌಲ್ ಮಾಡಿದ್ದ ಚಹಲ್ ಲೇಗ್ ಸೈಡ್ ಬಾಲ್ ಎಸೆದು ವೈಡ್ ಮಾಡಿದ್ದರು. ಈ ವೇಳೆ ಸ್ಟಂಪ್ ಮಾಡುವ ಅವಕಾಶವನ್ನು 21 ವರ್ಷದ ಪಂತ್ ಮಿಸ್ ಮಾಡಿದ್ದರು. ಅಲ್ಲದೇ ಮತ್ತೊಂದು ಹಂತದಲ್ಲಿ 3ನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆಯೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ರಿಷಬ್ ಪಂತ್ ಇತ್ತೀಚೆಗಷ್ಟೇ ಬಿಸಿಸಿಐ ನೀಡಿದ್ದ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ 3 ಶ್ರೇಣಿ ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್ ಹಾಗೂ ಆಸೀಸ್ ಟೂರ್ನಿಗಳಲ್ಲಿ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಬ್ಯಾಟಿಂಗ್ ಅಲ್ಲದೇ ವಿಕೆಟ್ ಹಿಂದೆಯೂ ಉತ್ತಮ ಪ್ರದರ್ಶನ ನೀಡಿದ್ದ ರಿಷಬ್, ಅನುಭವಿ ಆಟಗಾರರ ದಿನೇಶ್ ಕಾರ್ತಿಕ್ ಇದ್ದ ಹೊರತಾಗಿಯೂ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದರು.

    https://twitter.com/Vidshots1/status/1104775666812243968

    ಅಂದಹಾಗೇ 2005 ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ಧೋನಿ ಆಡುವ 11ರ ಬಳಗದಲ್ಲಿ ಇಲ್ಲದೇ ಕಣಕ್ಕೆ ಇಳಿದಿದ್ದರು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ 54 ಏಕದಿನ ಪಂದ್ಯಗಳಲ್ಲಿಯೂ ಧೋನಿ ಆಡಿದ್ದರು. 2004 ರಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮ್ಯಾಚ್ ಟರ್ನ್ ಮಾಡಿದ ಟರ್ನರ್ – ಗೆದ್ದು ಸರಣಿ ಸಮಬಲ ಸಾಧಿಸಿದ ಆಸೀಸ್

    ಮ್ಯಾಚ್ ಟರ್ನ್ ಮಾಡಿದ ಟರ್ನರ್ – ಗೆದ್ದು ಸರಣಿ ಸಮಬಲ ಸಾಧಿಸಿದ ಆಸೀಸ್

    ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಸೀಸ್ ನಡುವೆ ನಡೆದ 4ನೇ ಏಕದಿನ ಪಂದ್ಯದಲ್ಲಿ ರನ್ ಹೊಳೆಯೇ ಹಾರಿದಿದ್ದು, ಆಸ್ಟ್ರೇಲಿಯಾ 4 ವಿಕೆಟ್ ಗಳಿಂದ ಗೆದ್ದು ಬಿಗಿದೆ.

    ಟೀಂ ಇಂಡಿಯಾ ನೀಡಿದ 359 ರನ್ ಗುರಿಯನ್ನು ಬೆನ್ನತ್ತಿದ ಆಸೀಸ್ ಪಡೆ 13 ಎಸೆತ ಬಾಕಿ ಇರುವಂತೆಯೇ ರನ್ ಸಿಡಿಸಿ ಗೆಲುವಿನ ಸವಿ ಪಡೆಯಿತು. ಪರಿಣಾಮ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಪಂದ್ಯ ಇತ್ತಂಡಗಳಿಗೂ ಮಾಡು ಇಲ್ಲವೇ ಮಾಡಿ ಎಂಬಂತಾಗಿದೆ.

    ಆರಂಭದಲ್ಲಿ ಫಿಂಚ್ ಶೂನ್ಯಕ್ಕೆ ಔಟ್ ಮಾಡಿ ಭುವನೇಶ್ವರ್ ಮೊದಲ ಅಘಾತ ನೀಡಿದರೆ, 6 ರನ್ ಗಳಿಸಿದ್ದ ವೇಳೆ ಮಾರ್ಶ್ ವಿಕೆಟನ್ನು ಪಡೆಯುವ ಮೂಲಕ ಬುಮ್ರಾ 2ನೇ ಅಘಾತ ನೀಡದರು. ಆದರೆ ಈ ಹಂತದಲ್ಲಿ ಒಂದಾದ ಖವಾಜಾ, ಹ್ಯಾಡ್ಸ್‍ಕಾಂಬ್ ಭರ್ಜರಿ ಆಟ ಪ್ರದರ್ಶಿಸಿ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿದರು.

    ಖವಾಜಾ 99 ಎಸೆತಗಳಲ್ಲಿ 91 ರನ್, ಹ್ಯಾಡ್ಸ್ ಕಂಬ್ 105 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಗಳ ನೆರವಿನಿಂದ 117 ರನ್ ಗಳಿಸಿದರು. ಅಲ್ಲದೇ ನಿರ್ಣಾಯಕ ಹಂತದಲ್ಲಿ ಸ್ಫೋಟಕ ಆಟವಾಡಿದ ಟರ್ನರ್ 40 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಗಳ ನೆರವಿನಿಂದ 80 ರನ್ ಸಿಡಿಸಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾದರು.

    359 ರನ್ ಗಳ ಗುರಿಯನ್ನು ತಲುಪುವ ಮೂಲಕ ಆಸ್ಟ್ರೇಲಿಯಾ ಚೇಸಿಂಗ್ ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿತು. ಈ ಹಿಂದೆ 2011 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಗಳನ್ನು ಬೆನ್ನತ್ತಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪರ ದುಬಾರಿಯಾದ ಬೌಲರ್ ಗಳು ಆಸೀಸ್ ಆಟಗಾರರನ್ನು ಕಟ್ಟಿ ಹಾಕಲು ವಿಫಲರಾದರು. ಬುಮ್ರಾ 8/59 ರನ್ ನೀಡಿ 2 ವಿಕೆಟ್ ಪಡೆದರೆ, ಚಹಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಧವನ್ 143 ರನ್ (115 ಎಸೆತ, 18 ಬೌಂಡರಿ, 3 ಸಿಕ್ಸರ್) ಹಾಗೂ ರೋಹಿತ್ ಶರ್ಮಾ 95 ರನ್ (92 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಸಿ ಮಿಂಚಿದ್ದರು. ಅಲ್ಲದೇ ಅಂತಿಮ ಹಂತದಲ್ಲಿ ಪಂತ್ 36, ಶಂಕರ್ 26 ರನ್ ಗಳಿಸಿದ ಪರಿಣಾಮ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 358 ರನ್ ಗಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv