Tag: australia

  • ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಲಂಡನ್: ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ್ದಕ್ಕೆ ಆಸ್ಟ್ರೇಲಿಯಾದ ಅನುಭವಿ ಕೌಂಟಿ ಕ್ರಿಕೆಟ್ ಬೌಲರ್ ಮೀಚ್ ಕ್ಲೇಡನ್ ಅವರನ್ನು ಮಾನತು ಮಾಡಲಾಗಿದೆ.

    ಕೌಂಟಿ ಕ್ರಿಕೆಟ್‍ನಲ್ಲಿ ಮೀಚ್ ಕ್ಲೇಡನ್ ಅವರು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ಆಡುತ್ತಾರೆ. ಕಳೆದ ತಿಂಗಳು ಮಿಡ್ಲ್‍ಸೆಕ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೀಚ್ ಕ್ಲೇಡನ್ ಮೂರು ವಿಕೆಟ್ ಪಡೆದಿದ್ದರು. ಈ ವೇಳೆ ಅವರು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಾಲಿಗೆ ಹಾಕಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಮೀಚ್ ಕ್ಲೇಡನ್ ಅವರು ಕಳೆದ ತಿಂಗಳು ನಡೆದ ಮಿಡ್ಲ್‍ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಬಾಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿ ವಿರೂಪಗೊಳಿಸಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

    ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್ ಆಟದಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಪ್ರೋಟೋಕಾಲ್‍ಗಳನ್ನು ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ಬೌಲರ್ ಬಾಲಿಗೆ ಉಗುಳನ್ನು ಹಚ್ಚುವುದನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ ಬಾಲ್‍ಗೆ ಸ್ಯಾನಿಟೈಸರ್ ಹಾಕಿದ ಮೀಚ್ ಕ್ಲೇಡನ್ ಅವರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸರ್ರೆ ವಿರುದ್ಧದ ಮುಂದಿನ ಬಾಬ್ ವಿಲ್ಲೀಸ್ ಟ್ರೋಫಿ ಪಂದ್ಯದಲ್ಲಿ ಕ್ಲೇಡನ್ ಅವರು ಆಡುವುದಿಲ್ಲ ಎಂದು ತಂಡ ತಿಳಿಸಿದೆ.

  • ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    – ಮೂರು ದೇಶಗಳ ಚೈನ್ ಲಿಂಕ್ ಮೂಲಕ ವ್ಯಾಪಾರ
    – ವರ್ಷಾಂತ್ಯದೊಳಗೆ ಸಪ್ಲೈ ಚೈನ್ ಬಲಪಡಿಸಲು ಕ್ರಮ
    – ಚೀನಾ ವಸ್ತುಗಳಿಗೆ ಬ್ರೇಕ್ ಹಾಕಲು ಕ್ರಮ
    – ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ದೇಶಗಳ ಸಚಿವರ ಸಭೆ

    ನವದೆಹಲಿ: ಬಹುತೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ರೊಚ್ಚಿಗೆದ್ದಿದ್ದು, ಚೀನಾಗೆ ವ್ಯಾಪಾರ, ವಹಿವಾಟಿನ ಮೂಲಕವೇ ಟಕ್ಕರ್ ಕೊಡಲು ಮುಂದಾಗಿವೆ. ಈ ಹಿಂದೆ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್‍ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಅಮೆರಿಕ ಸಹ ತುಳಿದಿದೆ. ಆದರೆ ಇದೀಗ ಚೀನಾ ಸೊಕ್ಕು ಮುರಿಯಲು ಮತ್ತಷ್ಟು ದೇಶಗಳು ಪ್ಲಾನ್ ಮಾಡುತ್ತಿದ್ದು, ಭಾರತದೊಂದಿಗೆ ಕೈ ಜೋಡಿಸುತ್ತಿವೆ.

    ಇದರ ಭಾಗವಾಗಿ ಇದೀಗ ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಇಂಡೋ- ಪೆಸಿಫಿಕ್ ಸಪ್ಲೈ ಚೈನ್(ಪೂರೈಕೆ ಸರಪಳಿ) ಸ್ಥಿತಿಸ್ಥಾಪಕತ್ವ ಸಾಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ವ್ಯಾಪಾರ ವಲಯದಲ್ಲಿ ಚೀನಾ ತಾನೇ ಎಲ್ಲಾ ಎಂದು ಮೆರೆಯುತ್ತಿದೆ. ಈ ಅಹಂ ತೊಲಗಿಸಲು, ವ್ಯಾಪಾರದ ಮೇಲಿನ ಚೀನಾ ಪ್ರಾಬಲ್ಯವನ್ನು ಎದುರಿಸಲು ಮೂರು ದೇಶಗಳು ಒಟ್ಟಾಗುತ್ತಿವೆ. ಅಲ್ಲದೆ ಇನ್ನೂ ಹೆಚ್ಚಿನ ದೇಶಗಳು ಈ ಒಕ್ಕೂಟದಲ್ಲಿ ಸೇರುವ ಇಚ್ಛೆ ವ್ಯಕ್ತಪಡಿಸಿವೆ.

    ಈ ಮೂರು ದೇಶಗಳ ನಾಯಕರ ಜಂಟಿ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ವೇಳೆ ಸಪ್ಲೈ ಚೈನ್ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬೇಕಾದ ವಿವರಗಳನ್ನು ಕಲೆ ಹಾಕುವಂತೆ ಆದೇಶಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್‍ನ ಹಿರೋಷಿ ಕಾಜಿಯಾಮಾ, ಭಾರತದ ಪಿಯೂಷ್ ಗೋಯಲ್, ಆಸ್ಟ್ರೇಲಿಯಾದ ಸೈಮನ್ ಬರ್ಮಿಂಗ್‍ಹ್ಯಾಮ್ ಭಾಗವಹಿಸಿದ್ದು, ಸಪ್ಲೈ ಚೈನ್ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಈ ಇಂಡೋ- ಪೆಸಿಫಿಕ್ ಭಾಗದ ಇತರ ದೇಶಗಳು ಈ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ತಿಳಿಸಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

    ಇಂಡೋ- ಪೆಸಿಫಿಕ್ ಭಾಗದಾದ್ಯಂತ ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಪ್ರಾಬಲ್ಯವನ್ನು ಎದುರಿಸಲು ಈ ಮೂರು ರಾಷ್ಟ್ರಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ. ಬ್ಲೂಮ್ಬರ್ಗ್ ಸಹ ಸಪ್ಲೈ ಚೈನ್ ಬಲಪಡಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಭಾರತ ಹಾಗೂ ಜಪಾನ್ ಜನರನ್ನು ಉಲ್ಲೇಖಿಸಿ ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಾಷ್ಟ್ರೀಯ ಭದ್ರತಾ ಸಮಾಲೋಚನೆಗಾಗಿ ಅಮೆರಿಕ ಜೊತೆಗೆ ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ಗುಂಪು ರಚಿಸಿಕೊಂಡಿದ್ದು, ಈ ಮೂಲಕ ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್‍ನ ಸದಸ್ಯ ರಾಷ್ಟ್ರಗಳಾಗಿವೆ. ಇದೀಗ ವ್ಯಾಪರಕ್ಕೂ ಇದೇ ರೀತಿಯ ಸಮಾಲೋಚನೆ ನಡೆಸಲಾಗುತ್ತಿದೆ.

  • ಪತಿಯ ಪಾಸ್‍ಪೋರ್ಟಿನಿಂದ ಪ್ರಿಯಕರನನ್ನ ಆಸ್ಟ್ರೇಲಿಯಾಗೆ ಕರ್ಕೊಂಡು ಹೋದ ಪತ್ನಿ

    ಪತಿಯ ಪಾಸ್‍ಪೋರ್ಟಿನಿಂದ ಪ್ರಿಯಕರನನ್ನ ಆಸ್ಟ್ರೇಲಿಯಾಗೆ ಕರ್ಕೊಂಡು ಹೋದ ಪತ್ನಿ

    – ಲಾಕ್‍ಡೌನ್‍ನಿಂದಾಗಿ ಸಿಕ್ಕಿಬಿದ್ದ ಹೆಂಡತಿ
    – ಮುಂಬೈನಿಂದ ಮನೆಗೆ ಬಂದ ಪತಿಗೆ ಶಾಕ್

    ಲಕ್ನೋ: 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಪಾಸ್‍ಪೋರ್ಟಿನಿಂದ ಪ್ರಿಯಕರನನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ ಜಿಲ್ಲೆಯ ದಮ್‍ಗರ್ಹಿ ಗ್ರಾಮದ ನಿವಾಸಿಯಾಗಿದ್ದು, ಜನವರಿಯಲ್ಲಿ ತನ್ನ ಪ್ರಿಯಕರನ ಜೊತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದಳು. ಮಾರ್ಚ್‍ನಲ್ಲಿ ಇಬ್ಬರೂ ವಾಪಸ್ ಬರಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ದೇಶಾದ್ಯಂತ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಜೋಡಿ ಆಸ್ಟ್ರೇಲಿಯಾದಲ್ಲಿಯೇ ಲಾಕ್ ಆಗಿದ್ದರು. ಇದೀಗ ಆಗಸ್ಟ್ 24 ರಂದು ತಮ್ಮ ಮನೆಗೆ ಮರಳಲಿದ್ದಾರೆ.

    ಮಹಿಳೆ ಮನೆಗೆ ಮರಳಿದ ನಂತರ 46 ವರ್ಷದ ಪತಿ ಪೊಲೀಸ್ ಠಾಣೆಗೆ ಹೋಗಿ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಪತ್ನಿ ಸ್ಥಳೀಯ ನಿವಾಸಿ ಸಂದೀಪ್ ಸಿಂಗ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ಅಲ್ಲದೇ ನನ್ನ ಹೆಸರಿನಲ್ಲಿ ಪಡೆದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

    ನಾನು 20 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಪೂರ್ವಜರ ಆಸ್ತಿ ಪಿಲಿಭಿತ್‍ನಲ್ಲಿದೆ. ಹೀಗಾಗಿ ಪತ್ನಿ ಇಲ್ಲಿಯೇ ಇದ್ದುಕೊಂಡು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬಂದು ಪತ್ನಿಯನ್ನು ಭೇಟಿ ಮಾಡುತ್ತಿದ್ದೆ. ನಾನು ಮೇ 18 ರಂದು ಮುಂಬೈನಿಂದ ಪಿಲಿಭಿತ್‍ಗೆ ಹಿಂದಿರುಗಿದಾಗ ನನ್ನ ಪತ್ನಿ ಮನೆಯಲ್ಲಿ ಇರಲಿಲ್ಲ. ಸಂದೀಪ್ ಸಿಂಗ್ ಮತ್ತು ಪತ್ನಿ ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ಸಂದೀಪ್ ಕುಟುಂಬದವರೇ ನನಗೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಪತಿ ಆಸ್ಟ್ರೇಲಿಯಾಗೆ ಹೋಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಬರೇಲಿಯ ಪಾಸ್‍ಪೋರ್ಟ್ ಕಚೇರಿಯಲ್ಲಿ ಪಾಸ್‍ಪೋರ್ಟ್ ಗಾಗಿ ಉದ್ದೇಶಪೂರ್ವಕವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಈಗಾಗಲೇ ಅವರ ಹೆಸರಿನಲ್ಲಿ ಪಾಸ್‍ಪೋರ್ಟ್ ಮಾಡಿಸಿದ್ದು, ಅದನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸ್ಥಳೀಯ ಗುಪ್ತಚರ ಘಟಕದ ಇನ್ಸ್‌ಪೆಕ್ಟರ್ (ಎಲ್‍ಐಯು) ಕಾಂಚನ್ ರಾವತ್ ತನಿಖೆ ನಡೆಸಲಿದ್ದಾರೆ. ದೂರುದಾರರ ಹೆಸರಿನಲ್ಲಿ ಪಾಸ್‍ಪೋರ್ಟ್ ಹೇಗೆ ನೀಡಲಾಗಿದೆ ಎಂಬುದನ್ನು ಎಲ್‍ಐಯು ತನಿಖೆ ಮಾಡುತ್ತಿದೆ ಎಂದು ಎಸ್‍ಪಿ ಜೈ ಪ್ರಕಾಶ್ ಯಾದವ್ ಹೇಳಿದ್ದಾರೆ.

  • 4 ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ

    4 ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ

    – ಪತಿ ಮ್ಯಾಟ್‍ಗೆ ಡಿವೋರ್ವ್ ನೀಡಿದ ಕ್ರಿಕೆಟ್ ಆಟಗಾರ್ತಿ

    ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ತಮ್ಮ ಪತಿ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರಿಗೆ ವಿಚ್ಛೇದನ ನೀಡಿದ್ದಾರೆ.

    ಎಲ್ಲಿಸ್ ಪೆರ್ರಿ ಹಾಗೂ ಮ್ಯಾಟ್ ಟೂಮುವಾ ಅವರು 2015ರಲ್ಲಿ ಮದುವೆಯಾಗಿದ್ದರು. ಈ ವರ್ಷದ ಮೊದಲಿನಿಂದಲೂ ಎಲ್ಲಿಸ್ ಪೆರ್ರಿ ಹಾಗೂ ಮ್ಯಾಟ್ ಟೂಮುವಾ ಅವರ ನಡುವೆ ದಾಂಪತ್ಯ ಜೀವ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಪೆರ್ರಿ ಮತ್ತು ಮ್ಯಾಟ್ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    https://www.instagram.com/p/Bkoi_WShooo/?utm_source=ig_embed

    ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೆರ್ರಿ ಹಾಗೂ ಮ್ಯಾಟ್, ನಾವಿಬ್ಬರೂ ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದೇವೆ. ಇನ್ನೂ ಮುಂದೆ ನಮ್ಮ ಜೀವನವನ್ನು ನಾವು ಬೇರೆ ಬೇರೆಯಾಗಿ ಮಾಡಲಿದ್ದೇವೆ. ಎಲ್ಲರಿಗೂ ಅವರ ಅವರ ಜೀವದಲ್ಲಿ ವೈಯಕ್ತಿಕ ಸಮಯ ಎಂದು ಇರುತ್ತದೆ. ಈ ಕಾರಣದಿಂದ ನಾವಿಬ್ಬರು ವಿಚ್ಛೇದನ ಪಡೆಯಲು ತೀರ್ಮಾನ ಮಾಡಿದ್ದೇವೆ. ಪರಸ್ಪರ ಒಪ್ಪಿಗೆ ಮೇರೆ ಈ ವರ್ಷದ ಆರಂಭದಲ್ಲೇ ನಾವು ಬೇರೆ ಇರಲು ನಿರ್ಧರಿಸಿದ್ದವು ಎಂದು ಹೇಳಿದ್ದಾರೆ.

    https://www.instagram.com/p/CAMo_FMhDPs/

    ಇತ್ತೀಚೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಪೆರ್ರಿ ತನ್ನ ಭಾಷಣದಲ್ಲಿ ಟೂಮುವಾ ಅವರನ್ನು ಉಲ್ಲೇಖಿಸದ ಕಾರಣ ಈ ವರ್ಷದ ಆರಂಭದಿಂದಲೂ ಇವರ ದಾಂಪತ್ಯ ಜೀವನದ ಬಗ್ಗೆ ಉಹಾಪೋಹಗಳು ಮೂಡಿದ್ದವು. ಆದರೆ ಈ ವದಂತಿಯನ್ನು ದಂಪತಿ ನಿರಾಕರಿಸಿದ್ದರು. ಆದರೆ ಇಂದು ಅವರೇ ನಾವಿಬ್ಬರು ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಪೆರ್ರಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಡಿದರೆ, ಟೂಮುವಾ ವೃತ್ತಿಪರ ರಗ್ಬಿ ತಂಡದ ಮೆಲ್ಬೋರ್ನ್ ರೆಬೆಲ್ಸ್ ಪರ ಆಡುತ್ತಾರೆ.

    ಪೆರ್ರಿ ಮತ್ತು ಟೂಮುವಾ 2015 ರಲ್ಲಿ ಮದುವೆಯಾಗುವ ಮೊದಲು 2013ರಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಪೆರ್ರಿ ಆಸ್ಟ್ರೇಲಿಯಾದ ಮಹಿಳಾ ತಂಡದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 2020ರ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ನಡೆದ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರ ಮಂಡಿಗೆ ಗಾಯವಾಗಿ ಕ್ರಿಕೆಟ್‍ನಿಂದ ದೂರು ಉಳಿದಿದ್ದರು.

    ಪೆರ್ರಿ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾದ ಪರವಾಗಿ ಇದುವರೆಗೆ 8 ಟೆಸ್ಟ್, 112 ಏಕದಿನ ಮತ್ತು 120 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ 624, ಏಕದಿನದಲ್ಲಿ 3,022 ಮತ್ತು ಟಿ-20ಯಲ್ಲಿ 1,218 ರನ್ ಗಳಿಸಿದ್ದಾರೆ. ಮೂರು ಮಾದರಿಯಲ್ಲಿ ಒಟ್ಟು 297 ವಿಕೆಟ್‍ ಪಡೆದಿದ್ದಾರೆ.

  • ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

    ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

    ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಐಪಿಎಲ್ ಆರಂಭಕ್ಕಾಗಿ ಕ್ರಿಕೆಟ್ ಆಭಿಮಾನಿಗಳು ಕಾತುರರಾಗಿದ್ದಾರೆ.

    ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎಂದು ತಿಳಿದಿದ್ದ ಬಿಸಿಸಿಐ ಐಪಿಎಲ್ ನಡೆಯುವ ವೇದಿಕೆ ಹಾಗೂ ದಿನಾಂಕವನ್ನು ನಿಗದಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿತ್ತು. ಅಲ್ಲದೇ ಫ್ರಾಂಚೈಸಿಗಳಿಗೆ ಸೆ.26 ರಿಂದ ನ.8 ಅವಧಿಯಲ್ಲಿ ಯುಎಇ ನಲ್ಲಿ ಟೂರ್ನಿ ಆಯೋಜಿಸುವ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಆಟಗಾರರ ವೀಸಾ, ಪ್ರಯಾಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಐಪಿಎಲ್ ಆರಂಭವಾಗುವ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.

    2020ರ ಆವೃತ್ತಿಯನ್ನು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಟೂರ್ನಿಯ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸಲು ಟೂರ್ನಿಯ ಪ್ರಸಾರ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಬೇಡಿಕೆ ಇಟ್ಟಿದೆ. ಏಕೆಂದರೆ ನ.15ರ ವರೆಗೂ ಟೂರ್ನಿ ನಡೆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಜಾಹೀರಾತು ಪಡೆಯುವುದು ವಾಹಿನಿಯ ಉದ್ದೇಶವಾಗಿದೆ. ಆದರೆ ವಾಹಿನಿಯ ಬೇಡಿಕೆಗೆ ಬಿಸಿಸಿಐ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸದಿರಲು ಪ್ರಮುಖ ಕಾರಣವಿದ್ದು, ನ.15ರ ವರೆಗೂ ಟೂರ್ನಿ ನಡೆದರೆ ಡಿ.3 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಆಟಗಾರರು ಸಿದ್ಧತೆ ನಡೆಸಲು ಕಡಿಮೆ ಸಮಯದ ಲಭಿಸಲಿದೆ. ಇತ್ತ ಕೇಂದ್ರ ಯುಎಇನಲ್ಲಿ ಟೂರ್ನಿ ನಡೆಸಲು ಕೇಂದ್ರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆಟಗಾರರಿಗೆ ಅಲ್ಲಿ ಕ್ಯಾಂಪ್ ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮುಂದಿನ ವಾರ ಬಿಸಿಸಿಐ ಆಡಳಿತ ಸಮಿತಿ ಸಭೆ ನಡೆಯಲಿದ್ದು, 2020ರ ಐಪಿಎಲ್ ಆವೃತ್ತಿಯ ಶೆಡ್ಯೂಲ್ ಹಾಗೂ ಎಲ್ಲಿ ಟೂರ್ನಿ ನಡೆಯಬೇಕು ಎಂಬ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ.

  • ‘ಒನ್ ಸಿಟಿ, ಒನ್ ಟೂರ್ನಮೆಂಟ್’- 2020ರ ಐಪಿಎಲ್ ಆಯೋಜನೆಗೆ ಬಿಸಿಸಿಐ ಪ್ಲಾನ್!

    ‘ಒನ್ ಸಿಟಿ, ಒನ್ ಟೂರ್ನಮೆಂಟ್’- 2020ರ ಐಪಿಎಲ್ ಆಯೋಜನೆಗೆ ಬಿಸಿಸಿಐ ಪ್ಲಾನ್!

    ಮುಂಬೈ: 2020ರ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಚಿಂತನೆಯನ್ನು ನಡೆಸಿದೆ. ಕೊರೊನಾ ಕಾರಣದಿಂದ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದೂಡಲಾಗಿತ್ತು. ಸದ್ಯ ಅಕ್ಟೋಬರ್-ನವೆಂಬರಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ಪ್ಲಾನ್ ಸಿದ್ಧಪಡಿಸಿದೆ.

    ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿರುವುದರಿಂದ ಐಪಿಎಲ್ ಟೂರ್ನಿಯನ್ನು ಒಂದೇ ನಗರದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿರುವುದಾಗಿ ವರದಿಯಾಗಿದೆ. ಬಿಸಿಸಿಐ ಚಿಂತನೆಯ ಅನ್ವಯ ಒಂದು ನಗರ, ಒಂದು ಕ್ರೀಡಾಕೂಟ ಪ್ಲಾನ್ ಅಡಿ ಮುಂಬೈ ನಗರದಲ್ಲಿ ಟೂರ್ನಿ ಆಯೋಜಿಸಲು ಹಲವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣಗಳು ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹೋಟೆಲ್‍ಗಳು ಲಭ್ಯವಿದೆ. ಪರಿಣಾಮ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅನುಮತಿ ನೀಡದೆ ಬಯೋ ಸೆಕ್ಯೂರ್ ವಾತಾವರಣದಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

    ಭಾರತದಲ್ಲಿ ಬುಧವಾರ ರಾತ್ರಿ ವೇಳೆಗೆ ಕೊರೊನಾ ಪ್ರಕರಣಗಳು 6 ಲಕ್ಷವನ್ನು ದಾಡಿದ್ದು, ಮಹಾರಾಷ್ಟ್ರ ಒಂದರಲ್ಲೇ ಸುಮಾರು 1.80 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಮುಂಬೈ ನಗರ ಒಂದರಲ್ಲೇ 70 ಸಾವಿಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ. ಆದರೆ ಟೂರ್ನಿಗೆ ಮತ್ತಷ್ಟು ಸಮಯದ ಕಾಲಾವಕಾಶ ಇರುವುದರಿಂದ ಬಯೋ ಸೆಕ್ಯೂರ್ ವಾತಾವರಣದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಹೊಸ ಪ್ಲಾನ್ ಸಿದ್ಧಪಡಿಸಿದೆ ಎನ್ನಲಾಗಿದೆ. ಸದ್ಯ ಬಿಸಿಸಿಐ ಟಿ20 ವಿಶ್ವಕಪ್ ಕುರಿತು ಐಸಿಸಿ ತೆಗೆದುಕೊಳ್ಳುವ ನಿರ್ಣಯದ ಕುರಿತು ಎದುರು ನೋಡುತ್ತಿದೆ.

  • ಬಿಸಿಸಿಐಗೆ ತಲೆನೋವಾದ ಐಸಿಸಿ ಅಧ್ಯಕ್ಷ ಮನೋಹರ್ ಕಾರ್ಯ ವೈಖರಿ

    ಬಿಸಿಸಿಐಗೆ ತಲೆನೋವಾದ ಐಸಿಸಿ ಅಧ್ಯಕ್ಷ ಮನೋಹರ್ ಕಾರ್ಯ ವೈಖರಿ

    ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಕಾರ್ಯ ವೈಖರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬಹುದೊಡ್ಡ ತಲೆನೋವಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನ.15ರ ವರೆಗೂ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡುವ ಕುರಿತು ಶಶಾಂಕ್ ಮನೋಹರ್ ಅವರು ಯಾವುದೇ ಅಂತಿಮ ನಿರ್ಧಾರ ಮಾಡದಿರುವುದು ಬಿಸಿಸಿಐಗೆ ಸಮಸ್ಯೆ ತಂದಿಟ್ಟಿದೆ.

    ಕೊರೊನಾ ವೈರಸ್ ಕಾರಣದಿಂದ ಟಿ20 ವಿಶ್ವಕಪ್ 2020ರ ಅತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ (ಸಿಎ) ಹೇಳಿಕೆ ನೀಡಿದೆ. ಆದರೆ ಐಸಿಸಿ ಮಾತ್ರ ಟಿ20 ವಿಶ್ವಕಪ್ ಭವಿಷ್ಯದ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಒಂದೊಮ್ಮೆ ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ.

    ಕಳೆದ 4 ವರ್ಷಗಳ ಹಿಂದೆ ಬಿಸಿಸಿಐ ನೆರವಿನೊಂದಿಗೆ ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ ಆಗಿದ್ದರು. ಆದರೆ ಆ ಬಳಿಕ ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಿದ್ದರು. ಸದ್ಯ ಐಪಿಎಲ್ 2020ರ ಆವೃತ್ತಿ ಮೇಲೆ ಆತಂಕ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂ.10 ರಂದೇ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಸಿಸಿ ಈ ಹಿಂದೆ ಹೇಳಿತ್ತು. ಆದರೆ ಯಾರು ಊಹೆ ಮಾಡದಂತೆ ಜುಲೈನಲ್ಲಿ ಈ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಂದೂಡಲಾಗಿತ್ತು. ಪರಿಣಾಮ ಐಪಿಎಲ್ ಕುರಿತು ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಮಸ್ಯೆಯಾಗಿದೆ.

    ಶಶಾಂಕ್ ಅವರ ಐಸಿಸಿ ಅಧ್ಯಕ್ಷ ಸ್ಥಾನದ ಅವಧಿ ಶೀಘ್ರವೇ ಅಂತ್ಯವಾಗಲಿದೆ. ಆದರೆ ಅಂತಿಮ ಅವಧಿಯಲ್ಲಿ ಏಕೆ ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಟಿ20 ವಿಶ್ವಕಪ್ ನಿರ್ವಹಿಸಲು ಆಸ್ಟ್ರೇಲಿಯಾ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಟೂರ್ನಿಯನ್ನು ಮುಂದೂಡಲು 1 ತಿಂಗಳ ಅವಧಿ ತೆಗೆದುಕೊಳ್ಳುವ ಅಗತ್ಯವೇನಿದೆ? ಉದ್ದೇಶ ಪೂರ್ವಕವಾಗಿಯೇ ಬಿಸಿಸಿಐಗೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. 2020ರ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಸರಿ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಎದುರಾಗಲಿದೆ.

  • ಅಡಲ್ಟ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ: ರೆನೀ ಗ್ರೇಸಿ

    ಅಡಲ್ಟ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ: ರೆನೀ ಗ್ರೇಸಿ

    ಸಿಡ್ನಿ: ಸೂಪರ್ ಕಾರ್ ರೇಸರ್ ಆಗಿದ್ದ ನಾನು ಅಡಲ್ಟ್ ಇಂಡಸ್ಟ್ರಿ ಬಂದಿದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ ಎಂದು ನೀಲಿ ಚಿತ್ರ ತಾರೆ ರೆನೀ ಗ್ರೇಸಿ ಹೇಳಿದ್ದಾಳೆ.

    25 ವರ್ಷದ ರೆನೀ ಗ್ರೇಸಿ ಈಗ ಡ್ರೈವಿಂಗ್ ವೃತ್ತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾಳೆ. ಈ ಹೊಸ ವೃತ್ತಿಗೆ ಕುಟುಂಬದ ಪೂರ್ಣ ಸಹಕಾರವಿದೆ. ಹೀಗಾಗಿ ಅಡಲ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಜೊತೆಗೆ ನನಗೆ ಸೂಪರ್ ಕಾರ್ ರೇಸಿಂಗ್‍ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಜೊತೆಗೆ ಆರ್ಥಿಕ ಸಮಸ್ಯೆಯಿಂದ ತನ್ನ ವೃತ್ತಿಯನ್ನು ಈಗ ಬದಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.

    ಆಸ್ಟ್ರೇಲಿಯಾದ ಮೊದಲ ಮಹಿಳಾ ಫುಲ್ ಟೈಮ್ ಕಾರ್ ರೇಸರ್ ಆಗಿದ್ದ ರೆನೀ, ಅಲ್ಲಿ ಹೆಚ್ಚು ಹಣ ಸಿಗಲ್ಲ ಎಂಬ ಕಾರಣಕ್ಕೆ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಜೊತೆಗೆ ಇನ್ನೂ ಮುಂದಿನ ತನ್ನ ವೃತ್ತಿ ಜೀವನವನ್ನು ನೀಲಿ ಚಿತ್ರತಾರೆಯಾಗಿ ಕಳೆಯಲು ತೀರ್ಮಾನಿದ್ದಾಳೆ. ಜನ ನಾವು ಏನೂ ಮಾಡುತ್ತಿದ್ದೇವೆ ಎಂಬದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವು ಏನೂ ಸಾಧನೆ ಮಾಡಿದ್ದೇವೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ರೆನೀ ಹೇಳಿದ್ದಾಳೆ.

    ಈ ವಿಚಾರದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ರೇನಿ, ನೀವು ನಂಬಿ ಬಿಡಿ ಇದಕ್ಕೆ ನಮ್ಮ ತಂದೆಯೂ ಕೂಡ ಸಪೋರ್ಟ್ ಮಾಡಿದ್ದಾರೆ. ನಮ್ಮ ಆರ್ಥಿಕ ಪರಿಸ್ಥಿತಿಗೆ ನೊಡಿಕೊಂಡರೆ, ನಮ್ಮ ತಂದೆ ನಾನು ಮಾಡುತ್ತೀರುವ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ. ನೀವು ನಾನು ಏನೂ ಮಾಡುತ್ತಿದ್ದೇನೆ ಎಂಬುದಕ್ಕಿಂತ ನಾನು ಏನೂ ಸಾಧಿಸಿದ್ದೇನೆ ಎಂದು ನೋಡಲು ಇಷ್ಟಪಡುತ್ತೀರಾ ಅಲ್ಲವೇ ಎಂದು ತಿಳಿಸಿದ್ದಾಳೆ.

    ಆಸ್ಟ್ರೇಲಿಯಾದಲ್ಲಿ ನಡೆದ ಸೂಪರ್-2 ಕಾರ್ ರೇಸಿಂಗ್‍ನಲ್ಲಿ ಒಟ್ಟು 17 ರೇಸ್‍ನಲ್ಲಿ ಭಾಗವಹಿಸಿದ್ದ ರೆನೀ ಕೇವಲು ಒಂದು ಬಾರಿ ಮಾತ್ರ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಳು. ಈ ವಿಚಾರದ ಬಗ್ಗೆಯೂ ಮಾತನಾಡಿರುವ ರೆನೀ ಗ್ರೇಸಿ, ಕಾರ್ ರೇಸಿಂಗ್‍ನಲ್ಲಿ ನಾವು ನಮ್ಮ ಜೀವವನ್ನೇ ಪಣಕ್ಕೆ ಇಟ್ಟು ಕಾರನ್ನು ಓಡಿಸುತ್ತೇವೆ. ಅಲ್ಲಿ ಒಂದು ಸೆಕೆಂಡ್ ಕೂಡ ಲೆಕ್ಕಕ್ಕೆ ಬರುತ್ತದೆ. ಆದರೆ ಅಲ್ಲಿ ಹಣ ಗಳಿಸುವುದು ಬಹಳ ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾಳೆ.

    2014ರಲ್ಲಿ ನಡೆದ ಆಸ್ಟ್ರೇಲಿಯಾನ್ ಕಾರ್ ರೇಸಿಂಗ್‍ನಲ್ಲಿ ರೆನೀ ಗ್ರೇಸಿ ಮೊದಲು ಕಾರ್ ಓಡಿಸಿದ್ದಳು. ಈಗ ಸಂಪೂರ್ಣವಾಗಿ ನಾನು ಕಾರ್ ರೇಸ್ ಬಿಟ್ಟಿದ್ದೇನೆ. ಸದ್ಯ ನನ್ನ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಮಡುತ್ತಿದ್ದೇನೆ. ನನಗೆ ಇನ್ನೂ ಮುಂದೆ ಜೀವನವಿದೆ. ನಾನೂ ಬೇರೆ ಕೆಲಸ ಮಾಡುತ್ತೇನೆ ಎಂದು ರೆನೀ ತಿಳಿಸಿದ್ದಾಳೆ.

  • ತವರಿಗೆ ಹೋಗಲಾಗದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರಿಟ್ಟ ವಿದೇಶಿ ಪ್ರಜೆ

    ತವರಿಗೆ ಹೋಗಲಾಗದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರಿಟ್ಟ ವಿದೇಶಿ ಪ್ರಜೆ

    -ಮಹಿಳೆಯ ಕಣ್ಣೀರು ನೋಡಿ ಮರುಗಿದ ಜನ
    -ಯೋಗ, ಆಧ್ಯಾತ್ಮ ಅಧ್ಯಯನಕ್ಕಾಗಿ ಭಾರತಕ್ಕೆ ಆಗಮನ

    ಧಾರವಾಡ: ತನ್ನ ತವರಿಗೆ ಹೋಗಲಾಗದೇ ಭಾರತದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆ ಕಣ್ಣೀರು ಹಾಕುತ್ತ ಜಿಲ್ಲಾಧಿಕಾರಿ ಕಚೇರಿ ಎದುರು ನಿಂತ ಘಟನೆ ಧಾರವಾಡದಲ್ಲಿ ನಡೆದಿದೆ.

    ಆಸ್ಟ್ರೇಲಿಯಾ ಮೂಲದ ನೈಶಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರು ಹಾಕುತ್ತಿದ್ದ ಮಹಿಳೆ. ಲಾಕ್‍ಡೌನ್ ಮುಂದೆ ಭಾರತೀಯ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಅಧ್ಯಯನ ಮಾಡಲು ಆಸ್ಟ್ರೇಲಿಯಾದಿಂದ ಬಂದಿದ್ದರು. ಪ್ರವಾಸ ಮಾಡುತ್ತ ಹುಬ್ಬಳ್ಳಿಗೆ ಬಂದಾಗ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ ಹುಬ್ಬಳ್ಳಿ ನಗರದಲ್ಲಿಯೇ ಸಿಲುಕಿದ್ದರು.

    ಸದ್ಯ ವಿಮಾನಯಾನ ಆರಂಭಗೊಳ್ಳುತ್ತಿದ್ದಂತೆ ತಮಗೆ ಸಹಾಯ ಮಾಡುವಂತೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿಯಲ್ಲಿ ಅಲೆದಾಡಿದ್ರೂ ನೈಶಾಗೆ ಯಾರಿಂದಲೂ ಸಹಾಯ ಸಿಗದಿದ್ದಾಗ ಮುಖ್ಯದ್ವಾರದ ಬಳಿ ಕಣ್ಣೀರು ಹಾಕುತ್ತಾ ನಿಂತಿದ್ದರು.

    ಈ ವೇಳೆ ನೈಶಾರನ್ನು ಗಮನಿಸಿದ ಎಸ್.ಪಿ. ವರ್ತಿಕಾ ಕಟಿಯಾರ್, ಮಹಿಳೆಯ ಸಮಸ್ಯೆಯನ್ನು ಆಲಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಮಹಿಳೆಗೆ ದೆಹಲಿಗೆ ತೆರಳಲು ಪಾಸ್ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಮಾನಯಾನ ಆರಂಭಗೊಂಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈ ಸಮಯದಲ್ಲಿ ಸಹಾಯ ಮಾಡೋದು ನಮ್ಮ ಕರ್ತವ್ಯ. ಇಂದು ಸಂಜೆಯೊಳಗಾಗಿ ಮಹಿಳೆಗೆ ದೆಹಲಿ ತಲುಪಲು ಅಗತ್ಯ ಪಾಸ್ ಕೊಡುವಂತೆ ಸೂಚಿಸಿದ್ದಾರೆ. ದೆಹಲಿಯಲ್ಲಿ ಆಸ್ಟ್ರೇಲಿಯಾ ರಾಯಭಾರ ಕಚೇರಿಗೆ ತೆರಳುವಂತೆ ಎಸ್.ಪಿ. ತಿಳಿಸಿದ್ದಾರೆ.

    ಮಹಿಳೆಯ ವೀಸಾ ಅವಧಿ ಸಹ ಮುಗಿದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಸಹಾಯಕಳಾಗಿ ಕಣ್ಣೀರು ಹಾಕುತ್ತಿದ್ದರು ಎಂದು ಎನ್ನಲಾಗಿದೆ. ಲಾಕ್‍ಡೌನ್ ಆದಾಗಿನಿಂದ ನೈಶಾ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇದೀಗ ತವರಿಗೆ ತೆರಳಲು ಮುಂದಾಗಿದ್ದಾರೆ. ಭಾಷೆ ಬಾರದ ನಾಡಿನಲ್ಲಿ ಸಿಲುಕಿ ಮಹಿಳೆ ಕಣ್ಣೀರು ಹಾಕುತ್ತಿರೋದನ್ನು ನೋಡಿ ಧಾರವಾಡದ ಜನ ಮರುಗಿದರು.

  • ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

    ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

    – ವಿಶ್ವ ದಾಖಲೆಯ ಇಂಟರ್ನೆಟ್ ವೇಗ ಸಂಶೋಧನೆ

    ಸಿಡ್ನಿ: ವಿಡಿಯೋಗಳನ್ನು ಡೌನ್‍ಲೋಡ್ ಮಾಡುವುದೇ ಕಷ್ಟ. ಅದರಲ್ಲೂ ಎಚ್‍ಡಿ ಗುಣಮಟ್ಟದ ವಿಡಿಯೋ ಮತ್ತಷ್ಟು ಕಷ್ಟ. ಆದರೆ ಇನ್ನು ಮುಂದೆ ಒಂದು ಸೆಕೆಂಡಿಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಆದರೂ ಅಚ್ಚರಿ ಇಲ್ಲ.

    ಆಸ್ಟ್ರೇಲಿಯಾದ ಸಂಶೋಧಕರು ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್ ಡೇಟಾ ಡೌನ್‍ಲೋಡ್ ಮಾಡುವ ಸಾಮಥ್ರ್ಯ ಇರುವ ವಿಶ್ವ ದಾಖಲೆಯ ಇಂಟರ್ನೆಟ್ ವೇಗವನ್ನು ಸಂಶೋಧಿಸಿದ್ದಾರೆ. ಈ ವೇಗದ ಬ್ರಾಡ್‍ಬ್ಯಾಂಡ್ ಸೌಲಭ್ಯ ಲಭ್ಯವಾದರೆ ಬಳಕೆದಾರರಿಗೆ ಒಂದೇ ಸೆಕೆಂಡಿನಲ್ಲಿ 1 ಸಾವಿರ ಎಚ್‍ಡಿ ಸಿನಿಮಾವನ್ನು ಡೌನ್‍ಲೋಡ್ ಮಾಡಬಹುದು. ಇದನ್ನೂ  ಓದಿ: ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

    ಮೊನಾಶ್, ಸ್ವಿನ್‍ಬರ್ನ್ ಮತ್ತು ಆರೆಂಐಟಿ ವಿಶ್ವವಿದ್ಯಾಲಯಗಳ ತಂಡವು ಮೆಲ್ಬರ್ನ್ ನಲ್ಲಿ ಈ ಸಂಶೋಧನೆ ಮಾಡಿದೆ. ಈ ತಂಡವು ಸಂವಹನ ಮೂಲಸೌಕರ್ಯದಾದ್ಯಂತ ಡೇಟಾವನ್ನು ವರ್ಗಾಯಿಸಲು ನೂರಾರು ಅತಿಗೆಂಪು ಲೇಸರ್ ಗಳನ್ನು ಒಳಗೊಂಡಿರುವ `ಮೈಕ್ರೋ-ಕಾಂಬ್’ ಆಪ್ಟಿಕಲ್ ಚಿಪ್ ಅನ್ನು ಬಳಸಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

    ಪ್ರಸ್ತುತ ಸಿಂಗಾಪುರದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಇದೆ. ಆದರೆ ಅಲ್ಲಿ ಸರಾಸರಿ ಡೌನ್‍ಲೋಡ್ ವೇಗ ಸೆಕೆಂಡಿಗೆ 197.3 ಎಂಬಿಪಿಎಸ್ (ಮೆಗಾ ಬೈಟ್ ಪರ್ ಸೆಕೆಂಡ್) ಇದೆ.

    ಆಸ್ಟ್ರೇಲಿಯಾದಲ್ಲಿ ಸದ್ಯ ಸಂಶೋಧನೆ ಮಾಡಿದ ಇಂಟೆರ್ನೆಟ್ ವೇಗವು ಸರಾಸರಿ ಪ್ರತಿ ಸೆಕೆಂಡ್‍ಗೆ 43.4 ಟಿಬಿ ಆಗಿದೆ. ಆಸ್ಟ್ರೇಲಿಯಾದ ಸಂಶೋಧನೆಗೆ ಹೋಲಿಸಿದರೆ ಸಿಂಗಾಪುರದಲ್ಲಿ ಇಂಟರ್ನೆಟ್ ವೇಗವು 10 ಲಕ್ಷ (1 ಮಿಲಿಯನ್) ಪಟ್ಟು ನಿಧಾನವಾಗಿದೆ.

    “ಈ ತಂತ್ರಜ್ಞಾನವನ್ನು ವಾಣಿಜ್ಯ ಕ್ಷೇತ್ರಕ್ಕೆ ತಲುಪಿಸಲು ಕೆಲ ಸವಾಲುಗಳಿವೆ. ಇದರ ‘ಮೈಕ್ರೊ-ಕಾಂಬ್’ ನಿಜವಾಗಿಯೂ ವ್ಯಾಪಕವಾದ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳಲ್ಲಿ ಉಪಯುಕ್ತವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನಮಗೆ ಸಿಕ್ಕಂತ ಲ್ಯಾಬ್ ವ್ಯವಸ್ಥೆಗೆ ಹುಡುಕಾಟ ನಡೆಸಿದ್ದೇವೆ. ಅದು ಸಾಧ್ಯವಾದರೆ ಮುಂದಿನ ಸುಮಾರು ಐದು ವರ್ಷಗಳಲ್ಲಿ ಇಷ್ಟು ವೇಗದ ಇಂಟರ್ನೆಟ್ ಸೇವೆಯು ವಾಣಿಜ್ಯ ಕ್ಷೇತ್ರಕ್ಕೂ ಲಭ್ಯವಾಗಲಿದೆ” ಎಂದು ಮೊನಾಶ್ ವಿಶ್ವವಿದ್ಯಾಲಯದ ಡಾ.ಬಿಲ್ ಕೊರ್ಕೊರನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಲಾಕ್‍ಡೌನ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ಜನರು ಸಮಯ ಕಳೆಯಲು, ಮನರಂಜನೆಗಾಗಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಪರಿಣಾಮ ಇಂಟರ್ನೆಟ್ ಸರ್ವರ್ ಮೇಲೆ ಒತ್ತಡವನ್ನುಂಟು ಮಾಡಿದೆ.

    ಬಳಕೆ ಹೆಚ್ಚಾದ ಪರಿಣಾಮ ವಿಶ್ವದಲ್ಲಿ ಸರ್ವರ್ ಮೇಲೆ ಒತ್ತಡ ಹೆಚ್ಚಿದ್ದರಿಂದ ವಿಡಿಯೋ ಗುಣಮಟ್ಟವನ್ನು ಕಡಿಮೆ ಮಾಡಲಾಗಿತ್ತು. ವಾಟ್ಸಪ್ ಕೂಡ ಸ್ಟೇಟಸ್ ವಿಡಿಯೋ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು. ಅಷ್ಟೇ ಅಲ್ಲದೆ ನೆಟ್‍ಫ್ಲಿಕ್ಸ್ ಮತ್ತು ಯೂಟ್ಯೂಬ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಮೈಕ್ರೋ-ಕಾಂಬ್ ಸಾಧನವನ್ನು ಕಾರ್ಯಗತಗೊಳಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.