Tag: Audience

  • ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಮ್ಮ ಸಿನಿಮಾವನ್ನು ತಪ್ಪದೇ ನೋಡಿ, ಮರೆಯಬೇಡಿ, ಮರೆತು ನಿರಾಸೆಯಾಗಬೇಡಿ ಎಂದು ಹೇಳುವುದರ ಜೊತೆಗೆ ಥಿಯೇಟರ್ ಗೆ ಜನರನ್ನು ಕರೆತರಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ ಸಿನಿಮಾ ಮಂದಿ. ಅದರಲ್ಲೂ ನಟರು ತಮ್ಮ ಪಾತ್ರ, ಕಥೆ, ಸನ್ನಿವೇಶ ಹೀಗೆ ಸಾಕಷ್ಟು ವಿಷಯಗಳನ್ನು ಪ್ರಚಾರ ಮಾಡಿ, ಜನರಿಗೆ ಸಿನಿಮಾ ನೋಡಿ ಎಂದು ಹೇಳುತ್ತಾರೆ.

    ಆದರೆ, ದಕ್ಷಿಣದ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ‘ಸಿನಿಮಾ ನೋಡುವುದೇ ಜನರ (Audience) ಉದ್ಯೋಗವಲ್ಲ. ಅವರಿಗೆ ಅವರದ್ದೇ ಆದ ಕೆಲಸವಿರುತ್ತದೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫಾಸಿಲ್ ಆಡಿದ ಈ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಫಹಾದ್ ಈ ರೀತಿ ಹೇಳಬಾರದಿತ್ತು ಎಂದು ಇಂಡಸ್ಟ್ರಿಯವರು ಪ್ರತಿಕ್ರಿಯಿಸಿದ್ದಾರೆ.

    ಫಹಾದ್ ಹೀಗೆ ಮಾತನಾಡುವುದಕ್ಕೆ ಕಾರಣವಿದೆ. ಸಿನಿಮಾ ನೋಡಿದ ಮೇಲೆ, ಅದನ್ನು ಮನೆವರೆಗೂ ತಗೆದುಕೊಂಡು ಹೋಗಬಾರದು. ನಿಮಗೆ ನಿಮ್ಮದೇ ಆದ ಖಾಸಗಿ ಬದುಕಿದೆ. ಸಿನಿಮಾ ನೋಡಿದ ತಕ್ಷಣ ಅದರಿಂದ ಆಚೆ ಬಂದು ಬಿಡಬೇಕು. ಅಷ್ಟಕ್ಕೂ ಸಿನಿಮಾ ನೋಡೋದೇ ನಿಮ್ಮ ಉದ್ಯೋಗವಲ್ಲ ಎಂದಿದ್ದಾರೆ. ಈ ಮಾತನ್ನು ಬೇರೆ ರೀತಿಯಲ್ಲಿ ತಿರುಗಿಸಲಾಗುತ್ತಿದೆ.

  • 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

    23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

    ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

    ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

    ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

  • RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ರಾಯಚೂರು: ಜ್ಯೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನೆಮಾವನ್ನ ನೋಡಲು ಅಭಿಮಾನಿಗಳು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಬೆಳಿಗ್ಗೆ 5:30 ಕ್ಕೆ ಮೊದಲ ಶೋ ಆರಂಭವಾಗಿದೆ. ಚಿತ್ರಮಂದಿರದ ಬಾಗಿಲು ,ಕಿಟಕಿ ,ಪೈಪ್‌ಗಳನ್ನು  ಮುರಿದು ಅಭಿಮಾನಿಗಳು ಒಳನುಗ್ಗಿ ಸಿನೆಮಾ ವೀಕ್ಷಣೆ ಮಾಡಿದ್ದಾರೆ. ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ನೂಕುನುಗ್ಗಲು ಉಂಟಾಗಿದೆ. ಟಿಕೆಟ್ ಪಡೆಯದೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ನುಗ್ಗಿದ್ದಾರೆ. ಗೇಟ್ ಏರಿ ಚಿತ್ರಮಂದಿರದೊಳಗೆ ನುಗ್ಗಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ನಿಗದಿತ ಸೀಟ್ ಗಿಂತ 250 ಕ್ಕೂ ಹೆಚ್ಚು ಜನ ಒಳನುಗ್ಗಿ ಸಿನೆಮಾ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ಆಂಧ್ರಪ್ರದೇಶ, ತೆಲಂಗಾಣ ಗಡಿ ಹಿನ್ನೆಲೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಜನರನ್ನ ನಿಯಂತ್ರಿಸಲು ಚಿತ್ರಮಂದಿರ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಚಿತ್ರಮಂದಿರಗಳ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಲವರು ನಕಲಿ ಟಿಕೆಟ್‌ಗಳನ್ನ ಹಿಡಿದು ಒಳನುಗ್ಗಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

     

  • ಕೊಡಗಿನಲ್ಲಿ ಪ್ರೇಕ್ಷಕರಿಲ್ಲದೇ ಥಿಯೇಟರ್‌ಗಳು ಸ್ತಬ್ಧ

    ಕೊಡಗಿನಲ್ಲಿ ಪ್ರೇಕ್ಷಕರಿಲ್ಲದೇ ಥಿಯೇಟರ್‌ಗಳು ಸ್ತಬ್ಧ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ನಗರದ ಬಹುತೇಕ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಇಂದು ಕೊಡಗಿನಲ್ಲಿ ಬರೋಬ್ಬರಿ 99 ಕೋವಿಡ್ ಪ್ರಕರಣಗಳು ದಾಖಲಾಗಿದೆ.

    ಹೀಗಾಗಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರೆ ಸ್ವಯಂ ಪ್ರೇರಿತವಾಗಿ ಸೇಲ್ಫ್ ಲಾಕ್ ಡೌನ್ ಮಾಡಿಕೊಳ್ಳುತ್ತಾ ಇದ್ದಾರೆ. ಹೀಗಾಗಿ ಕೊಡಗಿನಲ್ಲಿ ಬೆರಳೆಣಿಕೆಯಷ್ಟು ಇರುವ ಚಿತ್ರಮಂದಿರಗಳಿಗೆ ಒಂದು ವಾರದಿಂದ ಪ್ರೇಕ್ಷಕರು ಸುಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಚಿತ್ರಮಂದಿರಗಳಿಗೆ ಕೋವಿಡ್ ಎಫೆಕ್ಟ್ ತಟ್ಟಿದೆ.

    ಕೋವಿಡ್‍ಗೆ ಹೆದರಿ ಇದೀಗ ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಖ ಮಾಡುತ್ತಿಲ್ಲ. ಈಗಾಗಲೇ ಮಂಜಿನ ನಗರಿ ಮಡಿಕೇರಿಯಲ್ಲಿದ್ದ ಒಂದೇ ಒಂದು ಕಾವೇರಿ ಮಹಲ್ ಥಿಯೇಟರ್ ಮುಚ್ಚಿ ಹೋಗಿದೆ. ಅದು ಕೂಡ ಕಳೆದ ಕೋವಿಡ್ ಬಂದ ನಂತರ ಮೊದಲ ಲಾಕ್ ಡೌನ್ ಬಳಿಕ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ಕಾವೇರಿ ಮಹಲ್ ಚಿತ್ರಮಂದಿರ ಬಳಿಕ ಅರಂಭವಾಗದೆ ಸಂಪೂರ್ಣವಾಗಿ ಮುಚ್ಚಿಹೋಗಿದೆ.

    ಇದೀಗ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಗಣೇಶ್ ಥಿಯೇಟರ್‌ಗೆ ಪ್ರೇಕ್ಷಕರೇ ಇಲ್ಲದೇ ಕಳೆದ ಒಂದು ವಾರದಿಂದ ಒಬ್ಬರೇ ಒಬ್ಬರು ಪ್ರೇಕ್ಷಕರಿಲ್ಲದೆ, ಥಿಯೇಟರ್ ಸಂಪೂರ್ಣವಾಗಿ ಬಂದ್ ಆಗಿದೆ. ವಾರದ ಹಿಂದಿನವರೆಗೆ ಕೇವಲ 25 ರಿಂದ 30 ಪ್ರೇಕ್ಷಕರಿಗೆ ಚಿತ್ರ ಪ್ರದರ್ಶನ ಕಾಣುತ್ತಿತ್ತು.

    ಅದರೆ ಇದೀಗ ಕೋವಿಡ್ ಹೆಚ್ಚಿದ್ದರಿಂದ ಥಿಯೇಟರ್ ನತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ. ಇನ್ನೂ ಕುಶಾಲನಗರದ ಥಿಯೇಟರ್‍ನಲ್ಲೂ ದಿನಕ್ಕೆ ಒಂದು ಶೋ ಮಾತ್ರ ನಡೆಯುತ್ತಿದೆ. ಥಿಯೇಟರ್ ನಡೆಸುತ್ತಿರುವ ಮಾಲೀಕರಿಗೆ ಹಾಗೂ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ.

  • ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

    ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

    ಮಡಿಕೇರಿ: ಕೊಡಗಿನ ಗಡಿ ಭಾಗ ಕಾರ್ಮಾಡುವಿನಲ್ಲಿ ವನವಾಸಿ ಜನರು ಗಿರಿ ಜನೋತ್ಸವದ ಅದ್ಧೂರಿ ಕಾರ್ಯಕ್ರಮ ನಡೆಸಿದರು.

    ಗಿರಿಜನರನ್ನು ಒಂದು ಕಡೆ ಸೇರಿಸುವ ಉದ್ದೇಶದಿಂದ ಮತ್ತು ಗಿರಿ ಜನರ ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮೈಸೂರಿನ ರಂಗಯಣ ಮತ್ತು ವನವಾಸಿ ಕಲ್ಯಾಣ ಕೇಂದ್ರ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಪೋನ್ನಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ರಾಜ್ಯಮಟ್ಟದ ಗಿರಿಜನೊತ್ಸವ ಕಾರ್ಯಕ್ರಮ ನಡೆಸಿದರು. ವನವಾಸಿಗಳು ಕಾಡಿನಲ್ಲಿ ಪ್ರಕೃತಿಯನ್ನು ಪೂಜಿಸಿತ್ತಾ ಕಾಡಿನಲ್ಲೇ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.

    ಅವರ ಆಚಾರ, ವಿಚಾರ, ಕಲೆ, ಸಂಸ್ಕೃತಿ ಶ್ರೀಮಂತವಾಗಿದ್ದು ಆಧುನಿಕ ಯುಗದಲ್ಲಿ ಕಲೆಯನ್ನು ಉಳಿಸಲು ಯುವ ಪೀಳಿಗೆಯಲ್ಲಿ ಕಲೆಯನ್ನು ಬೆಳೆಸುವ ಉದ್ದೇಶದಿಂದ ಹಲವಾರು ಕಲಾ ತಂಡಗಳನ್ನು ಒಂದು ಕಡೆ ಸೇರಿಸಿ 10ಕ್ಕೂ ಹೆಚ್ಚು ಕಲಾ ತಂಡಗಳು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಿದರು. ರಂಗಾಯಣ ನಡೆ ಗಿರಿಜನರೆಡೆಗೆ ಎಂದು ಘೋಷ ವಾಖ್ಯಾ ಇಟ್ಟುಕೊಂಡು ಗಿರಿ ಜನರ ಕಡೆಗೆ ಹೋಗುತ್ತಿದ್ದೇವೆ ಎಂದು ರಂಗಾಯಣ ನಿರ್ದೇಶಕ ಅಡಂಡ್ಡ ಕಾರ್ಯಪ್ಪ ಎಂದರು.

    ಕೊಡಗು ಜಿಲ್ಲೆಯ ಕಾಡು ಕುರುಬ. ಮಲೆಕುಡಿಯ ಯರವ ಜನಾಂಗದ ಆದಿವಾಸಿಗಳು ಸೇರಿದಂತೆ ಮೈಸೂರು, ಚಾಮರಾಜನಗರ, ದಕ್ಷಿಣಕನ್ನಡ, ಮಂಡ್ಯ, ರಾಮನಗರದ ಗಿರಿಜನ ಕಲಾ ತಂಡಗಳು ಅವರ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು ನೃತ್ಯ ಮಾಡಿದರು. ಪೂಜಕುಣಿತ, ಯರವರಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಯರವ ಕುಣಿತ ಪರೆಕೊಟ್ ಹೀಗೆ ಮುಂತಾದ ನೃತ್ಯಗಳನ್ನು ಕಾಡಿನಲ್ಲಿ ಸಿಕ್ಕುವ ಪರಿಕರಗಳನ್ನು ಬಳಸಿಕೊಂಡು ಹಾಡು ಹಾಡುತ್ತಾ ನೃತ್ಯ ಮಾಡುತ್ತಾ ನೆರೆದಿದ್ದ ಪ್ರೇಕ್ಷಕರಿಗೆ ಕಲಾರುಚಿಯನ್ನು ಉಣಬಡಿಸಿದರೆ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.

    ಒಟ್ಟಿನಲ್ಲಿ ಆಧುನಿಕ ನೃತ್ಯಗಳನ್ನು ನೋಡಿ ಬೇಸತ್ತಿದ್ದ ಜನರು ಹಲವು ಜಿಲ್ಲೆಯ ಕಲಾತಂಡಗಳ ಸಂಸ್ಕøತಿಯನ್ನು ಬಿಂಬಿಸುವ ಜಾನಪದ ನೃತ್ಯಗಳನ್ನು ನೋಡಿ ಸಖತ್ ಎಂಜಾಯ್ ಮಾಡಿದರು. ಇನ್ನೂ ಕಲಾವಿದರಂತೂ ಬೇರೆ ಸಂಸ್ಕೃತಿ ಬಿಂಬಿಸುವ ಕಲೆಗಳನ್ನು ನೋಡಿ ಖುಷಿಪಟ್ಟರು.

  • ಗಾಯಕಿ ಮೇಲೆ ಹಣದ ಸುರಿಮಳೆ – ವಿಡಿಯೋ ನೋಡಿ

    ಗಾಯಕಿ ಮೇಲೆ ಹಣದ ಸುರಿಮಳೆ – ವಿಡಿಯೋ ನೋಡಿ

    – ಬಟ್ಟೆಯಲ್ಲಿ ತುಂಬ್ಕೊಂಡು ಬಂದು ಸುರಿದ್ರು

    ಗಾಂಧಿನಗರ: ಯಾವುದಾದರೂ ಕಾರ್ಯಕ್ರಮದಲ್ಲಿ ಗಾಯಕರು ತುಂಬಾ ಚೆನ್ನಾಗಿ ಹಾಡು ಹೇಳಿದರೆ, ಪ್ರೇಕ್ಷಕರು ತಮ್ಮ ಕೈಲಾದಷ್ಟು ಹಣವನ್ನು ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಗುಜರಾತಿನಲ್ಲಿ ಗಾಯಕಿಯ ಮೇಲೆ ಹಣದ ಸುರಿಮಳೆಯನ್ನೇ ಸುರಿಸಿದ್ದಾರೆ.

    ಹೌದು..ಗುಜರಾತ್‍ನ ನವಸರಿಯಲ್ಲಿ ಜಾನಪದ ಗಾಯಕಿಯ ಮೇಲೆ ಜನರು ಹಣದ ಸುರಿಮಳೆಯನ್ನೇ ಸುರಿಸಿದ್ದಾರೆ. ಖ್ಯಾತ ಗುಜರಾತಿ ಜಾನಪದ ಗಾಯಕಿ ಗೀತಾ ರಬಾರಿ ಅವರ ಮೇಲೆ ಜನರು ಅಪಾರ ಪ್ರಮಾಣದ ಹಣವನ್ನು ಸುರಿದಿದ್ದಾರೆ.

    ಗೀತಾ ರಬಾರಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಜಾನಪದ ಹಾಡನ್ನು ಹಾಡುವ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಪ್ರೇಕ್ಷಕರು ಅವರು ಹಾಡು ಹೇಳುವಾಗಲೇ ವೇದಿಕೆಯ ಮೇಲೆ ಹೋಗಿ ನೋಟುಗಳನ್ನು ಅವರ ಮೇಲೆ ಸುರಿದಿದ್ದಾರೆ.

    ಒಬ್ಬರು ನೋಟಿನ ಕಂತೆಯನ್ನೇ ಅವರಿಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ಒಂದು ಬಟ್ಟೆಯಲ್ಲಿ ಹಣವನ್ನು ತುಂಬಿಕೊಂಡು ಬಂದು ಅದನ್ನು ಗೀತಾ ಅವರ ಮೇಲೆ ಸುರಿದಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • ಚಿತ್ರಕಥಾ ಸೂತ್ರಧಾರಿಣಿ ಸುಧಾರಾಣಿ!

    ಚಿತ್ರಕಥಾ ಸೂತ್ರಧಾರಿಣಿ ಸುಧಾರಾಣಿ!

    ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಕನ್ನಡ ಸಿನಿಮಾ ಪ್ರೇಮಿಗಳ ಸ್ಮೃತಿಪಟಲದಲ್ಲಿ ವೈವಿಧ್ಯಮಯ ಪಾತ್ರಗಳು ಹಾದು ಹೋಗುತ್ತವೆ. ಇಂಥಾ ಪಾತ್ರಗಳ ಮೂಲಕವೇ ಅಭಿಮಾನ ಮಾತ್ರವಲ್ಲದೇ ಕನ್ನಡಿಗರ ಮನೆಮಗಳಂತೂ ತುಂಬು ಪ್ರೀತಿಯನ್ನು ತನ್ನದಾಗಿಸಿಕೊಂಡಿರುವವರು ಸುಧಾರಾಣಿ. ಓರ್ವ ಕಲಾವಿದೆ ಕಾಲ ಸರಿದಂತೆ ಹೊಂದೋ ರೂಪಾಂತರ, ಆ ಮೂಲಕವೇ ಮತ್ತೆ ಪ್ರೇಕ್ಷಕರನ್ನು ಮುಖಾಮುಖೀಯಾಗೋ ಪುಳಕಗಳನ್ನೂ ತಮ್ಮದಾಗಿಸಿಕೊಂಡಿರೋ ಸುಧಾರಾಣಿ ಇದೀಗ ಚಿತ್ರಕಥಾ ಮೂಲಕ ಮತ್ತೆ ಬಂದಿದ್ದಾರೆ.

    ಚಿತ್ರಕಥಾ ಈಗಾಗಲೇ ಕುತೂಹಲದ ಉತ್ತುಂಗದಲ್ಲಿರೋ ಚಿತ್ರ. ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚೊಚ್ಚಲ ಚಿತ್ರ. ಇದರ ಹಿಂದೆ ಪ್ರತಿಭಾವಂತ ಯುವ ಮನಸುಗಳದ್ದೊಂದು ತಂಡವಿದೆ. ಅದರ ಹುಮ್ಮಸ್ಸೇನೆಂಬುದು ಈಗಾಗಲೇ ಪ್ರೇಕ್ಷಕರ ಗಮನಕ್ಕೂ ಬಂದಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರಕಥಾದಲ್ಲಿ ತಾರಾಗಣವೂ ಪ್ರಧಾನ ಆಕರ್ಷಣೆ. ಅದರಲ್ಲಿಯೂ ಸುಧಾರಾಣಿ ಇಲ್ಲಿ ನಿರ್ವಹಿಸಿರೋ ಪಾತ್ರವಂತೂ ಅಪರೂಪದ್ದು.

    ಯಾರೋ ಅನಾಮಿಕ ಕಲಾವಿದ ಬರೆದೊಂದು ಚಿತ್ರದ ಸುತ್ತಲಿನ ನಿಗೂಢದ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ. ಅದರ ಸೂತ್ರಧಾರಿಣಿಯಂಥಾ ಪಾತ್ರ ಸುಧಾ ರಾಣಿಯವರದ್ದು. ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಕಥೆ ಬರೆಯುವಾಗಲೇ ಇದೊಂದು ಪಾತ್ರಕ್ಕೆ ಸುಧಾರಾಣಿಯವರನ್ನು ಗಮನದಲ್ಲಿಟ್ಟುಕೊಂಡಿದ್ದರಂತೆ. ನಂತರ ಸುಧಾರಾಣಿಯವರು ಕೂಡಾ ಈ ಪಾತ್ರವನ್ನು ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. ಸುಧಾರಾಣಿ ತಮ್ಮ ಪಾತ್ರವನ್ನು ಮಾತ್ರವೇ ಗಮನದಲ್ಲಿಟ್ಟುಕೊಳ್ಳದೇ ಇಡೀ ಚಿತ್ರವನ್ನು ತಮ್ಮದೆಂದೇ ಭಾವಿಸಿ ನಡೆದುಕೊಂಡ ರೀತಿಯ ಬಗ್ಗೆ ಈ ಹೊಸಬರ ತಂಡದಲ್ಲೊಂದು ಖುಷಿಯಿದೆ. ಈ ಚಿತ್ರ 12ನೇ ತಾರೀಕು ಅಂದರೆ ಈ ವಾರವೇ ಬಿಡುಗಡೆಯಾಗುತ್ತಿದೆ.

  • ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದ ಹೆಬ್ಬುಲಿ ನಟಿ

    ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದ ಹೆಬ್ಬುಲಿ ನಟಿ

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

    ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

    ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಇಲ್ಲಿಂದ ಶುರುವಾಗುವ ಈ ಟೀಸರ್ ಕೊನೆಯಲ್ಲಿ ಪ್ರತ್ಯೇಕ ಬಹುಮಹಡಿ ಕಟ್ಟಡದಲ್ಲಿ ಅಮಲಾ ಸಂಪೂರ್ಣವಾಗಿ ನಗ್ನಳಾಗಿ ಏಳುವ ದೃಶ್ಯದೊಂದಿಗೆ ಕೊನೆ ಆಗಿದೆ.

    ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರದೀಪ್ ಕುಮಾರ್ ಹಾಗೂ ಬಾಂಡ್ ಓರ್ಕಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದಾಗ ನೋಡುಗರನ್ನು ಬೆಚ್ಚಿ ಬೀಳಿಸಿತ್ತು. ಫಸ್ಟ್ ಲುಕ್‍ನಲ್ಲಿ ಅಮಲಾ, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚುತ್ತಿರುವ ರೂಪದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದರು.

    ಅಲ್ಲದೆ ಅಮಲಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತ ಕಾಣುತ್ತಿತ್ತು. ಟಾಯ್ಲೆಟ್ ನಲ್ಲಿರುವ ಪೇಪರ್ ಬಳಸಿ ಮೈಯನ್ನು ಮುಚ್ಚಿಕೊಂಡಿದ್ದರು. ಸಿನಿಮಾ ಟೈಟಲ್ ಕೆಳಗೆ ಅಹಂಕಾರ, ಕೌಶಲ್ಯ ಮತ್ತು ಧೈರ್ಯಶಾಲಿ ಎಂಬ ಪದಗಳನ್ನು ಬರೆಯಲಾಗಿತ್ತು.

    https://twitter.com/karanjohar/status/1140930156929794048?ref_src=twsrc%5Etfw%7Ctwcamp%5Etweetembed%7Ctwterm%5E1140930156929794048%7Ctwgr%5E393039363b636f6e74726f6c&ref_url=https%3A%2F%2Ftimesofindia.indiatimes.com%2Fentertainment%2Ftamil%2Fmovies%2Fnews%2Faadai-teaser-amala-paul-bares-all-after-daring-first-look%2Farticleshow%2F69841934.cms

  • ಸಭೆಯಲ್ಲಿ ಒಟ್ಟಾಗಿ ಕೆಮ್ಮಿ ಸಿಎಂ ಕೇಜ್ರಿವಾಲ್‍ಗೆ ಅಣಕಿಸಿದ ಸಭಿಕರು – ವಿಡಿಯೋ ನೋಡಿ

    ಸಭೆಯಲ್ಲಿ ಒಟ್ಟಾಗಿ ಕೆಮ್ಮಿ ಸಿಎಂ ಕೇಜ್ರಿವಾಲ್‍ಗೆ ಅಣಕಿಸಿದ ಸಭಿಕರು – ವಿಡಿಯೋ ನೋಡಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಷಣದ ವೇಳೆ ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಿಗೆ ಕೆಮ್ಮುವ ಮೂಲಕ ಅಣಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕ್ಲೀನ್ ಗಂಗಾ ಮಿಷನ್ ಹಾಗೂ ದೆಹಲಿಯ ಜಲ ಬೋರ್ಡ್ ಸಹಯೋಗದಲ್ಲಿ ಯಮುನಾ ನದಿ ಸ್ವಚ್ಛಗೊಳಿಸುವ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್, ಸಚಿವ ನಿತಿನ್ ಗಡ್ಕರಿ, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಕೇಜ್ರಿವಾಲ್ ಮಾತನಾಡಲು ಆರಂಭಿಸುತ್ತಿದ್ದಂತೆ, ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಕೆಮ್ಮುವ ಮೂಲಕ ಅಣಕಿಸಲು ಆರಂಭಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗದ ಸಿಎಂ ಸುಮ್ಮನಿರಿ ಅಂತ ಮನವಿ ಮಾಡಿಕೊಂಡರೂ ಸಭಿಕರು ಮಾತ್ರ ಒಬ್ಬರ ನಂತರ ಒಬ್ಬರು ಕೆಮ್ಮುತ್ತಲೇ ಇದ್ದರು. ಹೀಗಾಗಿ ವೇದಿಕೆಯ ಮೇಲಿದ್ದ ಗಣ್ಯರತ್ತ ಕೇಜ್ರಿವಾಲ್ ಅವರು ದೃಷ್ಟಿ ಹರಿಸಿದರು.

    ಈ ಬೆಳವಣಿಗೆಯಿಂದ ಮಧ್ಯ ಪ್ರವೇಶಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಮುಖ್ಯಮಂತ್ರಿಗಳ ಭಾಷಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್, ನಿತಿನ್ ಗಡ್ಕರಿ ಅವರು ನಮ್ಮನ್ನು ಪ್ರತಿ ಸ್ಪರ್ಧಿ ಪಕ್ಷ ಅಂತ ಭಾವಿಸಲಿಲ್ಲ. ಆದರೆ ಉಳಿದವರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಈ ವರ್ತನೆ ನಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ. ಬಿಜೆಪಿಯವರು ನನ್ನ ಮೇಲೆ ಇಷ್ಟು ಕಾಳಜಿ ಇಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆನಡಾದಲ್ಲೂ ಕೆಜಿಎಫ್ ಹವಾ – ರಾಕಿಂಗ್ ಸ್ಟಾರ್ ಅಭಿನಯಕ್ಕೆ ಫುಲ್ ಫಿದಾ!

    ಕೆನಡಾದಲ್ಲೂ ಕೆಜಿಎಫ್ ಹವಾ – ರಾಕಿಂಗ್ ಸ್ಟಾರ್ ಅಭಿನಯಕ್ಕೆ ಫುಲ್ ಫಿದಾ!

    ಟೊರೆಂಟೋ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದು, ಕೆನಡಾದ ಟೊರೆಂಟೋ ದಲ್ಲಿ ಚಿತ್ರ ವೀಕ್ಷಿಸಲು ಕನ್ನಡಿಗರ ದಂಡೇ ಹರಿದು ಬರುತ್ತಿದೆ.

    ಕೆಜಿಎಫ್ ಚಿತ್ರ ಇಡೀ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿ, ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆನಡಾದ ಟೊರೆಂಟೋದಲ್ಲಿ ಕೆಜಿಎಫ್ ಚಿತ್ರ ನೋಡಲು ಮಾರಿಷಸ್ ಸೇರಿದಂತೆ ಸುತ್ತ ಮುತ್ತಲ ದೇಶಗಳಿಂದ ಕನ್ನಡಿಗರು ಮುಗಿಬಿದ್ದಿದ್ದಾರೆ.

    ಟೊರೆಂಟೋದ ಅಲ್ಬಿಯನ್ ಸಿನಿಮಾಸ್‍ನಲ್ಲಿ ಕ್ಯೂ ನಿಂತಿರುವ ವಿಡಿಯೋವನ್ನು ಯಶ್ ಅಭಿಮಾನಿ ಕಿರಣ್ ಎಂಬವರು ಪಬ್ಲಿಕ್ ಟಿವಿಗೆ ಕಳುಹಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದು, ಚಿತ್ರದ ಬಗ್ಗೆ ಭರಪೂರ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಜಿಎಫ್ ಚಿತ್ರ ದಿನಕ್ಕೆ ಎರಡು ಶೋ ಪ್ರದರ್ಶನವಾಗ್ತಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.

    ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2,000 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv