Tag: atm

  • ಬೆಂಗ್ಳೂರಲ್ಲಿ ಬೆಳ್ಳಂಬೆಳ್ಳಗೆ ದರೋಡೆ- ಎಟಿಎಂಗೆ ಹಣ ತುಂಬುವಾಗ 18 ಲಕ್ಷ ರೂ. ಕಸಿದು ಪರಾರಿ

    ಬೆಂಗ್ಳೂರಲ್ಲಿ ಬೆಳ್ಳಂಬೆಳ್ಳಗೆ ದರೋಡೆ- ಎಟಿಎಂಗೆ ಹಣ ತುಂಬುವಾಗ 18 ಲಕ್ಷ ರೂ. ಕಸಿದು ಪರಾರಿ

    ಬೆಂಗಳೂರು: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾಗಿರುವ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

    ಇಂದು ಬೆಳ್ಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ಕರ್ಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದಾರೆ.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿಗಳು. ಎಟಿಎಂ ಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು.  ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

    ಈ ಘಟನೆಯಿಂದ ಮೋಹನ್ ಗೆ ಗಂಭೀರ ಗಾಯವಾಗಿದ್ದು ಗೂರುಗುಂಟೆಪಾಳ್ಯದ ಸ್ವರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

       

  • ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ವಿಡಿಯೋ: ದರೋಡೆಕೋರನನ್ನು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್ ಮೇಲೆ ಸುತ್ತಿಗೆಯಿಂದ ಹಲ್ಲೆ!

    ಪಣಜಿ: ಎಟಿಎಂಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಎಟಿಎಂ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ದರೋಡೆಕೋರ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಮುಖ ಸಿಸಿಟಿಯಲ್ಲಿ ಸರಿಯಾಗಿ ಕಂಡಿಲ್ಲ.

    ಸಿಸಿಟಿವಿಯಲ್ಲಿ ಏನಿದೆ?: ಸುಮಾರು 40 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ದರೋಡೆ ಮಾಡಲೆಂದು ವ್ಯಕ್ತಿಯೊಬ್ಬ ಮುಖ ಕಾಣಿಸದಂತೆ ಮಾಸ್ಕ್ ಹಾಕಿಕೊಂಡು ನುಗ್ಗಿದ್ದನು. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಎಟಿಎಂ ಕೊಠಡಿಯ ಒಳಗೆ ತೆರಳಿ ಯಾವುದೇ ಆಯುಧಗಳಿಲ್ಲದೇ ಆತನ ಮೇಲೆ ದಾಳಿ ಮಾಡಿದ್ದಾರೆ. ತನ್ನ ಕಳ್ಳತನದ ವಿಚಾರ ತಿಳಿದ ಸೆಕ್ಯೂರಿಟಿ ಗಾರ್ಡ್ ಮೇಲೆ ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್ ಘಟನೆಯಿಂದ ಗಾಯಗೊಂಡ್ರೂ ಕೂಡ ದರೋಡೆಕೋರನ ಮುಖದಲ್ಲಿರೋ ಮಾಸ್ಕ್ ತೆಗೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ಆತನ ಕೈಯಲಿದ್ದ ಸುತ್ತಿಗೆಯನ್ನು ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರ ಹಲವು ಬಾರಿ ಸೆಕ್ಯೂರಿಟಿಯ ತೆಲೆಗೆ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಕೆಳಗೆ ಬಿದ್ದಿದ್ದಾರೆ. ಆದ್ರೂ ಬಿಡದೆ ಸೆಕ್ಯೂರಿಟಿ ದರೋಡೆಕೋರನ ಮುಖದ ಮೇಲಿದ್ದ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರೋ ಮಾಸ್ಕ್ ಕಳಚುತ್ತಿದ್ದಂತೆಯೇ ಸೆಕ್ಯುರಿಟಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಸದ್ಯ ಪೊಲೀಸರು ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ದರೋಡಕೋರನಿಗಾಗಿ ಬಲೆಬೀಸಿದ್ದಾರೆ.

  • ಹೊರರಾಜ್ಯದಿಂದ ಬೆಂಗ್ಳೂರಿಗೆ ಬಂದು ಎಟಿಎಂಗೆ ಕನ್ನ ಹಾಕೋ ಖದೀಮರು- 2 ಕೋಟಿ ರೂ. ಅಧಿಕ ಹಣ ಲೂಟಿ

    ಹೊರರಾಜ್ಯದಿಂದ ಬೆಂಗ್ಳೂರಿಗೆ ಬಂದು ಎಟಿಎಂಗೆ ಕನ್ನ ಹಾಕೋ ಖದೀಮರು- 2 ಕೋಟಿ ರೂ. ಅಧಿಕ ಹಣ ಲೂಟಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಟಿಎಂ ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊರ ರಾಜ್ಯಗಳಿಂದ ನಗರಕ್ಕೆ ಬಂದು ಬಿಡುಬಿಟ್ಟಿರುವ ಖತರ್ನಾಕ್ ಕಳ್ಳರ ಗ್ಯಾಂಗ್ ರಾತ್ರಿಯಾಗುತ್ತಿದ್ದಂತೆ ಎಟಿಎಂ ಮಷೀನ್‍ಗಳನ್ನು ದರೋಡೆ ಮಾಡುತ್ತಿದ್ದಾರೆ. ಈ ಕಳ್ಳರ ಕೈಚಳಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.

    ತಡರಾತ್ರಿ ಇಬ್ಬರು ಬಂದು ಕ್ಷಣ ಮಾತ್ರದಲ್ಲಿ ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈಚಳಕ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಗೆ ಒಳಗಾಗಿದ್ದಾರೆ. ಎಟಿಎಂನ ನಕಲಿ ಕೀ ಬಳಸಿ ಕೈಚಳಕ ಆರಂಭಿಸೋ ಕಳ್ಳರು ಎಟಿಎಂ ಆಫ್ ಮಾಡಿದ ನಂತರ ಹಣ ಕದ್ದಿದ್ದಾರೆ.

    ಮಲ್ಲೇಶ್ವರಂನ ಆಕ್ಸಿಸ್ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆ ಮಾಡುತ್ತಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ನಗರದ ಹಲವೆಡೆ ಈಗಾಗಲೇ ತಮ್ಮ ಕೈಚಳಕವನ್ನು ತೋರಿಸಿರುವ ಈ ಕಳ್ಳರು, ನಕಲಿ ಕೀಗಳನ್ನು ಬಳಸಿ ಇದುವರೆಗೂ ಸುಮಾರು 2 ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.

    ಇದುವರೆಗೂ ನಗರದ ನೃಪತುಂಗ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ, ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಮತ್ತು ಮಂತ್ರಿಮಾಲ್ ಬಳಿಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ಕಳ್ಳರು ಕನ್ನ ಹಾಕಿದ್ದಾರೆ.

    ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ದರೋಡೆ ವೇಳೆ ಉತ್ತರಪ್ರದೇಶ ಮೂಲದ ಆಯುಷ್ ಯಾದವ್ ಎಂಬ ಕಳ್ಳ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸೆರೆಸಿಕ್ಕ ಕಳ್ಳ ಪೊಲೀಸ್ ವಿಚಾರಣೆಯಲ್ಲಿ ತನ್ನ ಗ್ಯಾಂಗ್ ಯಶವಂತಪುರ ಲಾಡ್ಜ್ ವೊಂದರಲ್ಲಿ ತಂಗಿರುವ ಮಾಹಿತಿಯನ್ನು ನೀಡಿದ್ದ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವ ವೇಳೆಗೆ ಎಲ್ಲರೂ ಪರಾರಿಯಾಗಿದ್ದಾರೆ.

    ಎಟಿಎಂ ಮಷೀನ್ ಆಫ್ ಮಾಡಿದ ಮೇಲೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು ಎಂದು ತಿಳಿದುಬಂದಿದೆ. ಎಟಿಎಂನಲ್ಲಿ ಹಣ ವ್ಯತ್ಯಾಸವಾದಾಗ ಎಟಿಎಂಗೆ ಹಣ ತುಂಬುವ ಏಜಿನ್ಸಿಗಳು ಠಾಣೆಗಳಿಗೆ ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳ್ಳರ ಚಲನವಲನ, ಚಹರೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಸಹಾಯಕವಾಗಿದೆ.

    ಪ್ರಸ್ತುತ ನಗರದಲ್ಲಿ ನಡೆದಿರುವ ಎಟಿಎಂ ಕಳ್ಳತನಗಳ ಪ್ರಕರಣಗಳು ಬಗ್ಗೆ ರಾಜಾಜಿನಗರ, ಶ್ರೀರಾಂಪುರ, ಮಲೇಶ್ವರಂ, ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂತರ್ ರಾಜ್ಯ ಕಳ್ಳರ ಬೆನ್ನುಬಿದಿದ್ದಾರೆ.

  • ಎಟಿಎಂನಲ್ಲಿ ಹಣದ ಬದಲು ಪೇಪರ್- ತಪ್ಪೊಪ್ಪಿಕೊಂಡ ಎಸ್‍ಬಿಐ ಬ್ಯಾಂಕ್

    ಎಟಿಎಂನಲ್ಲಿ ಹಣದ ಬದಲು ಪೇಪರ್- ತಪ್ಪೊಪ್ಪಿಕೊಂಡ ಎಸ್‍ಬಿಐ ಬ್ಯಾಂಕ್

    ಬಳ್ಳಾರಿ: ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ.

    ಗ್ರಾಹಕ ರಮೇಶ್‍ಗೆ 500 ರೂಪಾಯಿ ಹಣ ವಾಪಸ್ ಮಾಡುವ ಭರವಸೆ ನೀಡಿರೋ ಬ್ಯಾಂಕ್ ಸಿಬ್ಬಂದಿ, ಇನ್ನೆಂದೂ ಈ ರೀತಿ ತಪ್ಪಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭಾನುವಾರದಂದು ರಮೇಶ್ ಅವರು ಬಳ್ಳಾರಿಯ ಎಸ್‍ಬಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ 500 ರೂ. ಬದಲಾಗಿ ಪೇಪರ್ ಬಂದಿತ್ತು.

    ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಬ್ಯಂಕ್ ಸಿಬ್ಬಂದಿ, ಗ್ರಾಹಕ ರಮೇಶ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ಹಣವನ್ನು ಮರಳಿ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೇ ಗ್ರಾಹಕ ರಮೇಶ್ ಮುಂದೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡು ಗ್ರಾಹಕನ ಕ್ಷಮೆ ಕೋರಿದ್ದಾರೆ.

  • ಗ್ರಾಹಕರೇ ಎಚ್ಚರ, ಇದೀಗ ಎಟಿಎಂನಲ್ಲಿ ಬರ್ತಿದೆ ಪೇಪರ್ ಪೀಸ್!

    ಗ್ರಾಹಕರೇ ಎಚ್ಚರ, ಇದೀಗ ಎಟಿಎಂನಲ್ಲಿ ಬರ್ತಿದೆ ಪೇಪರ್ ಪೀಸ್!

    ಬಳ್ಳಾರಿ: ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ನೋಟಿನ ಬದಲು ಪೇಪರ್ ಪೀಸ್ ಬಂದ ಘಟನೆಯು ನಗರದ ಟ್ಯಾಂಕ್ ಬಂಡ್ ರೋಡ್‍ನಲ್ಲಿ ನಡೆದಿದೆ.

    ಇಂದು ಮುಂಜಾನೆ ಎಸ್‍ಬಿಐ ಬ್ಯಾಕ್‍ನ ಎಟಿಎಂ ಒಂದರಲ್ಲಿ ರಮೇಶ್ ಎಂಬವರು ಹಣ ಡ್ರಾ ಮಾಡಲು ಹೋದಾಗ ಹಣದ ಜೊತೆಯಲ್ಲಿ ನೋಟಿನ ಅಳತೆಯ ಪೇಪರ್ ತುಂಡೊಂದು ಬಂದಿದೆ.

    ರಮೇಶ್ 8 ಸಾವಿರ ರೂ. ಡ್ರಾ ಮಾಡಿದ್ದಾರೆ. ಅದರಲ್ಲಿ 7500 ಅಸಲಿ ನೋಟು ಮತ್ತು 500 ರೂಪಾಯಿಯ ಬದಲಾಗಿ ಒಂದು ಪೇಪರ್ ಪೀಸ್ ಬಂದಿದೆ. ಹೀಗಾಗಿ ಹಣ ಡ್ರಾ ಮಾಡಲು ಬಂದ ರಮೇಶ್ ಗೆ ಶಾಕ್ ಆಗಿ ಮಾಧ್ಯಮಗಳಿಗೆ ವಿಷಯ ತಿಳಿಸಿ ಮೋಸವನ್ನು ಖಂಡಿಸಿದ್ದಾರೆ.

    ಎಟಿಎಂ ಗೆ ಆಗಮಿಸಿದ್ದವರು ಮತ್ತು ಸ್ಥಳೀಯರು ಎಟಿಎಂ ಮುಂದೆ ಸೇರಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದ್ರೆ ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಬಾರದಿದ್ದರಿಂದ ಬ್ಯಾಂಕ್ ವಂಚನೆ ವಿರುದ್ಧ ರಮೇಶ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

  • ಎಟಿಎಂ ಕಳ್ಳತನ ಮಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಕಳ್ಳ

    ಎಟಿಎಂ ಕಳ್ಳತನ ಮಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಕಳ್ಳ

    ಚಿತ್ರದುರ್ಗ: ಎಟಿಎಂ ಮಷೀನ್ ಒಡೆದು ಹಣ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಜಾಜೂರು ಗ್ರಾಮದ ಕೆನೆರಾ ಬ್ಯಾಂಕ್ ಪಕ್ಕದಲ್ಲೇ ಇದ್ದ ಕೆನೆರಾ ಎಟಿಎಂನಲ್ಲಿ ಹಣದ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಗ್ರಾಮದ ಹೂವಿನ ವ್ಯಾಪಾರಿ ನಂದೀಶ(26) ಎಂಬ ವ್ಯಕ್ತಿ ಕುಡಿದ ಆಮಲಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಸಿಸಿ ಕ್ಯಾಮೆರಾ ಒಡೆಯುವಾಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

    ಸಾರ್ವಜನಿಕರು ನೀಡಿದ ಮಾಹಿತಿಯ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಂದಿದ್ದ ದೋಷಿಗೆ ಜೀವಾವಧಿ ಶಿಕ್ಷೆ

    ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಂದಿದ್ದ ದೋಷಿಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಕೊಲೆ ಮಾಡಿದ ಪ್ರಕರಣದ ದೋಷಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

    2011ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ನ ಎಟಿಎಂನನಲ್ಲಿ ಹಣ ದೋಚಲು ಸೈಮನ್ ಬಂದಿದ್ದ. ಈ ವೇಳೆ ಸೆಕ್ಯೂರಿಟಿ ಆಗಿದ್ದ ಚಂದ್ರಪ್ಪ ಅವರನ್ನು ಕೊಲೆ ಮಾಡಿದ್ದ. ಬಳಿಕ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದರು.

    7 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದು ಸೆಷನ್ಸ್ ಕೋರ್ಟ್ ಸೋಮವಾರ ದೋಷಿ ಸೈಮನ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.

     ಇದನ್ನೂ ಓದಿ: ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ಇದನ್ನೂ ಓದಿ: ವಿಡಿಯೋ: ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋದ್ರು!

    ಇದನ್ನೂ ಓದಿ: ಎಟಿಎಂ ತೆರೆಯದೇ, ಒಡೆಯದೇ 20 ಲಕ್ಷ ರೂ. ಕದ್ದ ಖದೀಮರು!

  • ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ನವದೆಹಲಿ: ಆರ್‍ಬಿಐ 200 ರೂ. ನೋಟುಗಳನ್ನ ಈಗಾಗಲೇ ಬಿಡುಗಡೆ ಮಾಡಿದೆ. ಆದ್ರೆ ಈ ನೋಟುಗಳು ಎಟಿಎಂಗಳಲ್ಲಿ ಸಿಗಬೇಕಾದ್ರೆ ಇನ್ನೂ 3 ತಿಂಗಳು ಬೇಕು. ಯಾಕಂದ್ರೆ ಹೊಸ ನೋಟುಗಳನ್ನ ವಿತರಿಸಲು ಎಟಿಎಂಗಳ ಮರುಜೋಡಣೆ ಆಗಬೇಕು.

    ಹೊಸ 200 ರೂ. ನೋಟುಗಳ ಪೂರೈಕೆ ಇನ್ನೂ ಸಿಗದಿದ್ದರೂ ಕೆಲವು ಬ್ಯಾಂಕ್‍ಗಳು ಈಗಾಗಲೇ ಯಂತ್ರಗಳ ಮರುಜೋಡಣೆಗೆ ಹೊಸ ನೋಟುಗಳನ್ನ ಪರೀಕ್ಷಿಸಲು ಎಟಿಎಂ ಕಂಪೆನಿಗಳಿಗೆ ಕೇಳಿವೆ. ಕಳೆದ ವರ್ಷವಷ್ಟೇ ನೋಟ್‍ಬ್ಯಾನ್ ಆದಾಗ ಎಟಿಎಂ ಯಂತ್ರಗಳ ಮರುಜೋಡಣೆ ಮಾಡಲಾಗಿತ್ತು.

    ಹೊಸ 200 ರೂ. ನೋಟುಗಳು ಅಗತ್ಯ ಪ್ರಮಾಣದಲ್ಲಿ ಸಿಗುವಂತೆ ಪೂರೈಕೆಯನ್ನ ಹೆಚ್ಚಿಸಲಾಗುತ್ತದೆ ಎಂದು ಆರ್‍ಬಿಐ ಹೇಳಿಕೆ ನೀಡಿದೆ. ಆದ್ರೆ ಎಟಿಎಂ ಯಂತ್ರಗಳ ಮರುಜೋಡಣೆಗೆ ಆರ್‍ಬಿಐನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಆದ್ರೆ 200 ರೂ. ನೋಟುಗಳ ಗಾತ್ರ ಭಿನ್ನವಾಗಿರುವುದರಿಂದ ಅವನ್ನ ಪರೀಕ್ಷಿಸಲು ಅನೌಪಚಾರಿಕವಾಗಿ ಕೆಲವು ಬ್ಯಾಂಕ್‍ಗಳು ಕೇಳಿವೆ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಭಾರತದಾದ್ಯಂತ ಎಲ್ಲಾ 2.25 ಲಕ್ಷ ಎಟಿಎಂಗಳನ್ನೂ ಕೂಡ ಮರುಜೋಡಣೆ ಮಾಡಲಾಗುತ್ತದಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‍ನ ಅಧ್ಯಕ್ಷರಾದ ರವಿ ಬಿ ಗೋಯಲ್, ಆರ್‍ಬಿಐನಿಂದ ಸೂಚನೆ ಬಂದ ಕೂಡಲೇ ನಾವು ಎಟಿಎಂಗಳ ಮರುಜೋಡಣೆ ಶುರುಮಾಡುತ್ತೇವೆ. ಈಗಿರುವ ನೋಟುಗಳಿಗಿಂತ ಹೊಸ ನೋಟಿನ ಗಾತ್ರ ಭಿನ್ನವಾಗಿದೆ. ಹೀಗಾಗಿ ಹೊಸ ನೋಟನ್ನು ಸ್ವೀಕರಿಸಿದ ನಂತರ ಅದರ ಅಳತೆಯನ್ನು ನೋಡಿ ಎಟಿಎಂ ಕ್ಯಾಸೆಟ್‍ಗಳನ್ನ ಮರುವಿನ್ಯಾಸ ಮಾಡಬೇಕು. ನಂತರ ಕ್ಯಾಸೆಟ್‍ಗಳು ಸಂಪೂರ್ಣ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಪ್ರಮಾಣದಲ್ಲಿ ನೋಟಿನ ಪೂರೈಕೆ ಇದೆಯಾ ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ.

    ಎಟಿಎಂಗಳ ಮರುಜೋಡಣೆಯ ಸಂಪೂರ್ಣ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯುತ್ತದೆ. ಇದರಿಂದ ದಿನನಿತ್ಯದ ಎಟಿಎಂ ಕಾರ್ಯನಿರ್ವಹಣೆಗೆ ದೊಡ್ಡ ಮಟ್ಟದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಮರುಜೋಡಣೆಯ ವೇಳೆ ಎಟಿಎಂಗಳು ಸಂಪೂರ್ಣವಾಗಿ ಕಾರ್ಯಗತವಾಗಿದ್ದು, 100, 500 ಹಾಗೂ 2 ಸಾವಿರ ರೂ. ನೋಟುಗಳನ್ನ ಪೂರೈಕೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

    ಎಟಿಎಂ ಮರುಜೋಡಣೆ ಹೇಗೆ ಆಗುತ್ತದೆ?: ಸಾಮಾನ್ಯವಾಗಿ ಎಟಿಎಂಗಳಲ್ಲಿ 4 ಕ್ಯಾಸೆಟ್‍ಗಳಿರುತ್ತವೆ. ಇವುಗಳಲ್ಲಿ ಮೂರನ್ನು 100 ರೂ., 500 ರೂ., ಹಾಗೂ 2 ಸಾವಿರ ರೂ., ನೋಟುಗಳಿಗಾಗಿ ಬಳಸಲು ಮುಂದುವರೆಸಬಹುದು. ನಾಲ್ಕನೇ ಕ್ಯಾಸೆಟನ್ನು ಹೊಸ 200 ರೂ. ನೋಟಿಗಾಗಿ ಬಳಸಬಹುದು. ಸರಾಸರಿಯಲ್ಲಿ ಒಂದು ಕ್ಯಾಸೆಟ್ 2 ಸಾವಿರದಿಂದ 2500 ನೋಟುಗಳನ್ನ ಹಿಡಿದುಕೊಳ್ಳಬಹುದಾಗಿವೆ. ಆದರೂ ಬಹುತೇಕ ಎಟಿಎಂಗಳಲ್ಲಿ ಎರಡು ಅಥವಾ ಮೂರು ಕ್ಯಾಸೆಟ್‍ಗಳು ಮಾತ್ರ ಇರುತ್ತವೆ.

    ಬ್ಯಾಂಕುಗಳ ಆದ್ಯತೆಗೆ ಅನುಗುಣವಾಗಿ ಎಟಿಎಂಗಳಲ್ಲಿನ ಸ್ಲಾಟ್‍ಗಳನ್ನು ಮರುವಿನ್ಯಾಸಗೊಳಿಸಬಹುದು. ಎಟಿಎಂ ಯಂತ್ರವಿರುವ ಪ್ರದೇಶದಲ್ಲಿನ ಗ್ರಾಹಕರಿಗೆ ಅನುಗುಣವಾಗಿ ಹಾಗೂ ಆ ಯಂತ್ರದಲ್ಲಿ ನಡೆಯುವ ವಹಿವಾಟಿನ ಸಂಖ್ಯೆಗೆ ಅನುಗುಣವಾಗಿ ಯಾವ ಮುಖಬೆಲೆಯ ನೋಟಿಗೆ ಎಟಿಎಂ ಮರುವಿನ್ಯಾಸ ಮಾಡಬೇಕು ಎಂಬುದನ್ನ ಬ್ಯಾಂಕ್‍ಗಳು ನಿರ್ಧರಿಸಬೇಕು.

    ಹೊಸ ಮುಖಬೆಲೆಗಾಗಿ ಒಂದು ಎಟಿಎಂ ಮರುಜೋಡಣೆ ಮಾಡಲು 30 ರಿಂದ 45 ನಿಮಿಷ ಬೇಕಾಗುತ್ತದೆ. ಓರ್ವ ಎಂಜಿನಿಯರ್ ಪ್ರತಿ ಎಟಿಎಂಗೆ ಭೇಟಿ ನೀಡಿ ಅಗತ್ಯ ಮುಖಬೆಲೆಯ ನೋಟು ವಿತರಣೆಯಾಗುವದಂತೆ ಮರುವಿನ್ಯಾಸ ಮಾಡಬೇಕಾಗುತ್ತದೆ.

    ಪ್ರಸ್ತುತ 200 ರೂ. ನೋಟುಗಳು ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಲಭ್ಯವಿದೆ.

  • ವಿಡಿಯೋ: ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋದ್ರು!

    ವಿಡಿಯೋ: ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋದ್ರು!

    ವಾಷಿಂಗ್ಟನ್: ಕಳ್ಳರು ಎಟಿಎಂ ಒಡೆದು ಹಣ ಕದ್ದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಖದೀಮರು ಎಟಿಎಂ ಯಂತ್ರವನ್ನೇ ಕದ್ದು ಟ್ರಕ್‍ನಲ್ಲಿ ಎಳೆದುಕೊಂಡು ಹೋಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇಲ್ಲಿನ ಅರ್ಕಾನ್ಸಾಸ್‍ನಲ್ಲಿ ಕಳ್ಳರು ಫೋರ್ಕ್‍ಲಿಫ್ಟ್(ಭಾರೀ ತೂಕದ ವಸ್ತುಗಳನ್ನ ಎತ್ತಲು ಬಳಸುವ ವಾಹನ) ಟ್ರಕ್‍ನಲ್ಲಿ ಬಂದು ಇಡೀ ಎಟಿಎಂ ಯಂತ್ರವನ್ನ ಅದರ ಬುಡದಿಂದ ಎಳೆದಿದ್ದಾರೆ.

    ಆಗಸ್ಟ್ 16ರಂದು ಈ ಘಟನೆ ನಡೆದಿದ್ದು, ಕಾನ್‍ವಾಯ್ ಪೊಲೀಸ್ ಇಲಾಖೆ ಇದರ ಸಿಸಿಟಿವಿ ದೃಶ್ಯಾವಳಿಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದೆ. ಬ್ಯಾಂಕಿನ ಕಪೌಂಡ್‍ನೊಳಗೆ ಫೋರ್ಕ್‍ಲಿಫ್ಟ್ ಟ್ರಕ್ ಬಂದು ನೆಲದಿಂದ ಎಟಿಎಂ ಯಂತ್ರವನ್ನ ಮೇಲೆತ್ತಿದೆ. ನಂತರ ಕಳ್ಳರು ಎಟಿಎಂ ಯಂತ್ರವನ್ನ ಟ್ರಕ್‍ನಲ್ಲಿ ಎಳೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಫೋರ್ಕ್‍ಲಿಫ್ಟ್ ನಿಂದಾಗಿ ಬ್ಯಾಕ್ ಆವರಣದಲ್ಲಿ ಹೆಚ್ಚಿನ ಹಾನಿಯಾಗಿದೆ. ಕೆಲವು ಸೀಲಿಂಗ್ ಟೈಲ್‍ಗಳನ್ನ ಆ ಟ್ರಕ್ ಒಡೆದುಹಾಕೋದನ್ನ ವಿಡಿಯೋದಲ್ಲಿ ಕಾಣಬಹುದು.

    ಘಟನೆ ನಡೆದ ಮರುದಿನ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ದರೋಡೆಯಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಕದ್ದ ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

    ಆರೋಪಿಗಳು ಕಟ್ಟಡ ನಿರ್ಮಾಣ ಕೆಲಸಗಾರರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    https://www.youtube.com/watch?v=WP3VHIWL784

  • ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿದ್ದ 4.5 ಲಕ್ಷಕ್ಕೂ ಹೆಚ್ಚು ಹಣ ಕದ್ದೊಯ್ದರು!

    ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿದ್ದ 4.5 ಲಕ್ಷಕ್ಕೂ ಹೆಚ್ಚು ಹಣ ಕದ್ದೊಯ್ದರು!

    ದಾವಣಗೆರೆ: ಗ್ಯಾಸ್ ಕಟರ್ ಸಹಾಯದಿಂದ ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಜಯದೇವ ವೃತ್ತದಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಸುಮಾರು 4.5 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದಾರೆ. ಆಗಸ್ಟ್ 14 ರಿಂದ ಎಟಿಎಂ ಸೆಕ್ಯೂರಿಟಿ ಕೆಲಸ ಬಿಟ್ಟಿದ್ದನು. ಆಗಸ್ಟ್ 16 ರ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಸೆಕ್ಯೂರಿಟಿ ಇಲ್ಲದ ಸಮಯ ನೋಡಿ ಕಳ್ಳರು ಸ್ಕೇಚ್ ಹಾಕಿದ್ದಾರೆ ಎನ್ನಲಾಗಿದ್ದು, ಎಟಿಎಂನ ಒಳಗಿರುವ ಸಿಸಿ ಕ್ಯಾಮರಾವನ್ನು ಸಹ ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

    ಈ ಸಂಬಂಧ ಕೆಟಿಜೆ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.